Ad Widget

ಮಂಡೆಕೋಲು : ಬ್ರಹ್ಮಕಲಶೋತ್ಸವಕ್ಕೆ ಚಾಲನೆ – ತಂತ್ರಿಗಳಿಗೆ ಪೂರ್ಣಕುಂಭದೊಂದಿಗೆ ಸ್ವಾಗತ

ಸುಳ್ಯ: ಇತಿಹಾಸ ಪ್ರಸಿದ್ಧ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮುಹೂರ್ತ ಕೂಡಿ ಬಂದಿದ್ದು ಶುಕ್ರವಾರ ಬ್ರಹ್ಮಕಲಶೋತ್ಸವದ ಆರಂಭದ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ ಮುಂದಿನ ಸರ್ವ ಕಾರ್ಯಗಳಿಗೆ ಯಾವುದೇ ವಿಘ್ನಗಳು ಬಾಧಿಸದಂತೆ ಕಾರ್ಯಕ್ರಮದ ಯಶಸ್ಸಿಗಾಗಿ ದೇವತಾ ಪ್ರಾರ್ಥನೆ...

ಐವರ್ನಾಡು : ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ

ಐವರ್ನಾಡು ಗ್ರಾಮ ಬಾಂಜಿಕೋಡಿ ವಾರ್ಡ್ ಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅರ್ ಪೂಜಾರಿ ಭೇಟಿ ನೀಡಿ ಕಾರ್ಯಕರ್ತರ ಜತೆ ಮಾತುಕತೆ ನಡೆಸಿದರು.
Ad Widget

ಸುಳ್ಯ : ತಾಲೂಕಿನಾದ್ಯಂತ ಶಾಂತಿಯುತ ಮತದಾನ – ಚಲಾವಣೆಯಾದ ಮತವೆಷ್ಟು ?

ಸುಳ್ಯ ತಾಲೂಕಿನಾದ್ಯಂತ ಇಂದು ನಡೆದ ಲೋಕಸಭಾ ಸಭಾ ಚುನಾವಣೆ ಶಾಂತಿಯುತವಾಗಿ ನಡೆಯಿತು. ಸುಳ್ಯದಲ್ಲಿ ಶೇ. 83 ಮತದಾನವಾಗಿದೆ. ಮಹಿಳೆಯರು 87565 ಹಾಗೂ 85789 ಪುರುಷರು ಮತ ಚಲಾವಣೆ ಮಾಡಿದ್ದಾರೆ.  ತಾಲೂಕಿನಲ್ಲಿ ಒಟ್ಟು 208853 ಮತದಾರರಿದ್ದು, 173354 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ 83 ಫಲಿತಾಂಶ ಪ್ರಕಟವಾಗಿದೆ. ಮಹಿಳಾ ಮತದಾರರೇ ಹೆಚ್ಚು ಮತದಾನ ಮಾಡಿದ್ದಾರೆ.

ಸುಳ್ಯ : ತಹಶೀಲ್ದಾರ್ ಗೆ ದೂರವಾಣಿ ಕರೆ ಮಾಡಿ ನಿಂದನೆ – ದೂರು ದಾಖಲು – ಕ್ಷಮೆಯಾಚನೆ ಬಳಿಕ ಪ್ರಕರಣ ಇತ್ಯರ್ಥ

ಸುಳ್ಯ ತಾಲೂಕು ದಂಡಾಧಿಕಾರಿಗಳಾದ ಜಿ ಮಂಜುನಾಥ್ ರವರಿಗೆ ಸಂಪಾಜೆ ಮೂಲದ ವ್ಯಕ್ತಿಯೋರ್ವರು ದೂರವಾಣಿ ಮೂಲಕ ಅವಾಚ್ಯಾ ಶಬ್ದಗಳಿಂದ ನಿಂದನೆ ಮಾಡಿ ಪೋಲಿಸ್ ಇಲಾಖೆಗೆ ದೂರು ನೀಡಿದ ಪ್ರಕರಣ ಠಾಣೆಯಲ್ಲೆ ಇತ್ಯರ್ಥವಾದ ಘಟನೆ ವರದಿಯಾಗಿದೆ. ಸಂಪಾಜೆ ಮೂಲದ ಧೀರಜ್ ಎಂಬುವ ವ್ಯಕ್ತಿಯವರು ತಮ್ಮ ಜಮೀನಿನ ಕುರಿತಾದ ವಿಚಾರದಲ್ಲಿ ದೂರವಾಣಿ ಕರೆ ಮಾಡಿದ್ದು, ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳು...

ಮಂಡೆಕೋಲು : ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಇಂದಿನಿಂದ ಚಾಲನೆ

ಸುಳ್ಯ: ಇತಿಹಾಸ ಪ್ರಸಿದ್ಧ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮುಹೂರ್ತ ಕೂಡಿ ಬಂದಿದ್ದು ಇಂದಿನಿಂದ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ವಿಧಿ ವಿಧಾನಗಳು ಆರಂಭಗೊಳ್ಳಲಿವೆ. ಕಳೆದ ಎರಡೂವರೆ ತಿಂಗಳುಗಳಿಂದ ಊರ ಜನತೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕಾಗಿ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು ಕೊನೆಗೂ ಆ ಧಾರ್ಮಿಕ ಕಾರ್ಯಕ್ರಮದ ಆರಂಭಿಕ ವಿಧಾನಗಳು ಇಂದಿನಿಂದ ಪ್ರಾರಂಭಗೊಳ್ಳಲಿದೆ‌. ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ...

ಎಸ್‌ಎಸ್‌ಪಿಯುನ ದುರ್ಗಾಲಕ್ಷ್ಮಿಗೆ ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ 10 ಅಂಕ –  593 ಅಂಕ ಪಡೆದು ರಾಜ್ಯಕ್ಕೆ 5ನೇ ಸ್ಥಾನ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್ ಎಸ್‌ಪಿಯು ಕಾಲೇಜಿನ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ದುರ್ಗಾಲಕ್ಷ್ಜಿ‌ ಜಿ.ಸಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 600ಕ್ಕೆ 593 ಅಂಕ ಪಡೆದು ರಾಜ್ಯಕ್ಕೆ 5 ಸ್ಥಾನ ಪಡೆದಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶ ಬಂದಾಗ ಈಕೆಗೆ 583 ಅಂಕ ಬಂದಿತ್ತು.ಕಡಿಮೆ ಅಂಕ ಕಂಡು ಹೌಹಾರಿದ ಪ್ರತಿಭಾವಂತ ವಿದ್ಯಾರ್ಥಿನಿಯು ಮರು...

’ಬಸವನಮೂಲ’’ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಅತಿರುದ್ರ ಮಹಾಯಾಗ – ಸಾಕ್ಷಾತ್ ಮಹಾದೇವನೇ ನಂದಿ ರೂಪದಲ್ಲಿ ಒಲಿದ ಸ್ಥಳದಲ್ಲಿ ಅಪರೂಪದ ಸಂಕಲ್ಪಕ್ಕೆ ಸಿದ್ಧತೆ

ಅದು ಜಗತ್ತಿನ ಬೇರೆಲ್ಲೂ ಇಲ್ಲದ ಅತ್ಯಂತ ಅಪರೂಪದ ಮಹಾಶಿವನ ಆಲಯ. ಹಣೆಯ ಮೇಲೆ ಶಿವಲಿಂಗವನ್ನು ಹೊತ್ತ ನಂದಿಯ ರೂಪದ ವಿಗ್ರಹಕ್ಕೆ ಆರಾಧನೆ ನಡೆಯುವ ಏಕೈಕ ದೇವಸ್ಥಾನ. ಅರ್ಥಾತ್ ಬಸವನ ರೂಪದ ಮಹಾದೇವನೇ ಅಲ್ಲಿನ ಆರಾಧ್ಯ ಮೂರ್ತಿ. ಸುಮಾರು 800 ವರ್ಷಗಳ ಪ್ರಾಚೀನ ಇತಿಹಾಸವುಳ್ಳ, ಪಶ್ಚಿಮ ಘಟ್ಟದ ತಪ್ಪಲಿನ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಬಳಿಯ...

ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಚಂಡಿಕಾ ಹೋಮ, ಗಣಪತಿ ಹವನ

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಶುಭವಸರದಲ್ಲಿದ್ದು ಶನಿವಾರ ದೇಗುಲದ ಪ್ರಾಂಗಣದಲ್ಲಿ ಚಂಡಿಕಾ ಹೋಮ ನಡೆಯಿತು. ಆರಂಭದಲ್ಲಿ ಗಣಪತಿ ಹವನ ಹಾಗೂ ಸಾಯುಜ್ಯ ಕರ್ಮಾಧಿಗಳು ನಡೆದ ಬಳಿಕ ಚಂಡಿಕಾ ಹೋಮ ನಡೆಯಿತು. ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ನೇತ್ರತ್ವದಲ್ಲಿ ವೈದಿಕ ಹಾಗೂ ತಾಂತ್ರಿಕ ಕಾರ್ಯಕ್ರಮಗಳು ನಡೆದವು....

ಹುಬ್ಬಳ್ಳಿ ಯುವತಿಯ ಹತ್ಯೆ ಖಂಡನಾರ್ಹ – ಓಲೈಕೆಗೋಸ್ಕರ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಹೇಳಿಕೆ ಸರಿಯಲ್ಲ – ರಾಕೇಶ್ ರೈ

ಕೇಂದ್ರದಲ್ಲಿ ನರೇಂದ್ರ ಮೋದಿಯವರ ಆಡಳಿತವನ್ನು ಕಂಡು ಮೋದಿ ಅಲೆ ಎಲ್ಲೆಡೆ ಇದ್ದು ಈ ಬಾರಿಯು ಕೇಂದ್ರದಲ್ಲಿ 400 ಸ್ಥಾನಗಳನ್ನು ಪಡೆದು ಸರಕಾರ ರಚಿಸಲಿದೆ. ಅಲ್ಲದೇ ಸುಳ್ಯದಲ್ಲಿ ಅತೀ ಹೆಚ್ಚು ಲೀಡ್ ಬಿಜೆಪಿಗೆ ಸಿಗಲಿದೆ ಎಂದು ಚುನಾವಣಾ ಪ್ರಚಾರ ಕಾರ್ಯನಿರ್ವಹಣ ಸಮಿತಿ ಸಂಚಾಲಕರಾದ ಹರೀಶ್ ಕಂಜಿಪಿಲಿ ಹೇಳಿದರು.‌ ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ...

ಸುಣ್ಣಮೂಲೆ ಮರ ಬಿದ್ದು ರಾಷ್ಟ್ರೀಯ ಹೆದ್ದಾರಿ ಬಂದ್ – ಸುಳ್ಯ 33 ಕೆವಿ ವಿದ್ಯುತ್ ಲೈನ್ ಗೆ ಹಾನಿ – ಇಂದು ರಾತ್ರಿ ಸುಳ್ಯ ಕತ್ತಲೆಯಲ್ಲಿ

ಇಂದು ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಣ್ಣಮೂಲೆ ಬಳಿ ಬೃಹತ್ ಮರವೊಂದು ಧರೆಗುರುಳಿ ರಸ್ತೆ ಬಂದ್ ಆಗಿದ್ದು , ವಿದ್ಯುತ್ ಕಂಬ ಕೂಡ ತುಂಡಾಗಿರುವುದರಿಂದ ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.  ಹೆದ್ದಾರಿಗೆ ಮರ ಬಿದ್ದುದರಿಂದ ರಸ್ತೆ ಬಂದ್ ಆಗಿದೆ ಹಾಗೂ ಸುಳ್ಯ 33 ಕೆವಿ ವಿದ್ಯುತ್ ಲೈನ್ ಗೆ...

ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಅಣ್ಣಾಮಲೈ ಎ. 22 ಕ್ಕೆ ಸುಳ್ಯಕ್ಕೆ

ತಮಿಳುನಾಡು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾದ ಅಣ್ಣಾಮಲೈ ಎ. 22 ಕ್ಕೆ ಸುಳ್ಯಕ್ಕೆ ಆಗಮಿಸಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬೃಜೇಶ್ ಚೌಟ ಪರ ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುಳ್ಯದ ಕುಡಿಯುವ ನೀರಿನ ಸಮಸ್ಯೆ ನೀಗಿಸಿದ ವೆಂಟೆಡ್ ಡ್ಯಾಂ – ಫಲ ನೀಡಿದ ಮಾಜಿ ಸಚಿವ ಎಸ್ ಅಂಗಾರರ ದೂರದೃಷ್ಟಿಯ ಯೋಜನೆ

https://youtu.be/RmG2psfk5WM?si=VFDY_gLp_zjrnNDz ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಪಯಸ್ವಿನಿ ನದಿ ಬತ್ತಿಹೋಗಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತಿತ್ತು. ಸುಳ್ಯ ನಗರದ ಜನತೆ ಕುಡಿಯುವ ನೀರಿನ ಕೊರತೆಯಿಂದ ಅನುಭವಿಸುತ್ತಿದ್ದ ಸಂಕಷ್ಟ ಈ ಬಾರಿ ವೆಂಟೆಡ್ ಡ್ಯಾಂ ನಿರ್ಮಾಣದಿಂದ ನಿಟ್ಟುಸಿರು ಬಿಡುವಂತಾಗಿದೆ. ಮಾಜಿ ಸಚಿವ ಎಸ್.ಅಂಗಾರರ ಮುತುವರ್ಜಿಯಿಂದ ಪಶ್ಚಿಮ ವಾಹಿನಿ ಯೋಜನೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 17 ಕೋಟಿ ರೂ...

ಮಾಜಿ ಸೈನಿಕ ಆಡ್ಡಂತಡ್ಕ ದೇರಣ್ಣ ಗೌಡರ ಮನೆಗೆ ಭೇಟಿ ನೀಡಿದ ಬ್ರಿಜೇಶ್ ಚೌಟ

ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಇಂದು ಸುಳ್ಯ ವಿಧಾನಸಭಾ ಕ್ಷೇತ್ರದಾತ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಿಗ್ಗೆ ಕನಕಮಜಲಿಗೆ ಆಗಮಿಸಿ ಕಾರ್ಯಕರ್ತರು ಹಾಗೂ ಮುಖಂಡರ ಸಹಕಾರ ಯಾಚಿಸಿದರು.‌ ಬಳಿಕ ಮಾಜಿ ಸೈನಿಕ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಆಡ್ಡಂತಡ್ಕ ದೇರಣ್ಣ ಗೌಡರ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ...

ಜೆಡಿಎಸ್ ಯುವ ಮುಖಂಡ ಪ್ರವೀಣ್ ಮುಂಡೋಡಿ ಕಾಂಗ್ರೆಸ್ ಸೇರ್ಪಡೆ

ಲೋಕಸಭಾ ಚುನಾವಣೆಗೆ ಬಿಜೆಪಿಯೊಂದಿಗೆ ಜೆ.ಡಿ .ಎಸ್ ಮೈತ್ರಿ ಬೆನ್ನಲ್ಲೇ ಜೆಡಿಎಸ್ ನ ತಳಮಟ್ಟದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಭಿನ್ನಮತ ಭುಗಿಲೆದ್ದಿದ್ದು ಹಲವಾರು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಕೈ ಹಿಡಿಯುತ್ತಿದ್ದಾರೆ. ಸುಳ್ಯದ ಜೆಡಿಎಸ್ ಯುವ ಮುಖಂಡ ಪ್ರವೀಣ್ ಮುಂಡೋಡಿ ಇಂದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಕಳೆದ ಲೋಕ ಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಮಿಥುನ್...

ಈದುಲ್ ಫಿತರ್ ಹಬ್ಬದ ಪ್ರಯುಕ್ತ ಇಂದು (ಎ.10) ದ.ಕ.ಜಿಲ್ಲೆಯಲ್ಲಿ ರಜೆ ಘೋಷಣೆ

ಎ. 09 ರಂದು ಚಂದ್ರ ದರ್ಶನವಾಗಿರುವುದರಿಂದ ಈದುಲ್ ಫಿತರ್ ಹಬ್ಬದ ಆಚರಣೆಗಾಗಿ ಎ. 10 ಬುಧವಾರರಂದು ರಜೆ ಘೋಷಿಸಲು ಸಮುದಾಯದಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಎ.11ರಂದು ಗುರುವಾರ ನಿಗದಿಯಾಗಿದ್ದ ರಜೆ ರದ್ದುಗೊಳಿಸಿ ಎ.10 ಬುಧವಾರ ರಂದು ಸಾರ್ವತ್ರಿಕ ರಜೆಯನ್ನು ಘೋಷಿಸಿ ದ.ಕ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಪೂರ್ವ ನಿಯೋಜಿತಗೊಂಡಿರುವ ಶಾಲಾ ಕಾಲೇಜುಗಳ ಪರೀಕ್ಷೆಗಳಿಗೆ ರಜೆ ಅನ್ವಯಿಸುವುದಿಲ್ಲ.

ಜೋಡುಪಾಲ : ಖಾಸಗಿ ಬಸ್ಸು ಪಲ್ಟಿ

ಬೆಂಗಳೂರಿನಿಂದ ಸುಳ್ಯಕ್ಕೆ ಬರುತ್ತಿದ್ದ ಗೌರಿಶಂಕರ್ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಘಟನೆ ಇಂದು ಬೆಳಿಗ್ಗೆ ಜೋಡುಪಾಲ ಬಳಿ ನಡೆದಿದೆ. ಹಲವು ಸಣ್ಣ ಪುಟ್ಟ ಜನರಿಗೆ ಗಾಯಗಳಾಗಿವೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯ 146.01 ಕೋಟಿ ರೂ – ಆದಾಯದಲ್ಲಿ ರಾಜ್ಯಕ್ಕೆ ನಂಬರ್ ವನ್

ಸುಬ್ರಹ್ಮಣ್ಯ: ಪ್ರಸಿದ್ಧ ನಾಗಾರಾಧನೆಯ ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯದ ಪವಿತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ 146.01 ಕೋಟಿ ರೂ ಆದಾಯ ಗಳಿಸಿದೆ. 2023 ಎಪ್ರೀಲ್‌ನಿಂದ 2024 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಲಭಿಸಿದೆ. ಈ ಮೂಲಕ ಸತತ 13ನೇ ವರ್ಷ ಆದಾಯದಲ್ಲಿ ರಾಜ್ಯದ ನಂಬರ್ ದೇವಳವಾಗಿ...

ಸುಳ್ಯ : ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆ ಕಮ್ಯುನಿಸ್ಟ್ , ಆಮ್ ಆದ್ಮಿ ಬೆಂಬಲ – ಇಂಡಿಯಾ ಒಕ್ಕೂಟ

ವಿಪಕ್ಷಗಳ ಸದ್ದಡಗಿಸುವ ಕೆಲಸ ಕಾರ್ಯಗಳನ್ನು ಮೋದಿ ಸರಕಾರ ಮಾಡುತ್ತಿದೆ- ಪಿಸಿ ಜಯರಾಮ್ //  ಬಿಟ್ಟಿ ಭಾಗ್ಯವೆಂದವರು ನಿಮ್ಮ ಬಳಿ ಬಂದಾಗ ಗೃಹಲಕ್ಷ್ಮಿ , ಗೃಹ ಜ್ಯೋತಿ ,ಶಕ್ತಿ ಸೇರಿದಂತೆ ಎಲ್ಲಾ ಯೋಜನೆಗಳನ್ನು ನೀವು ಪಡೆದುಕೊಳ್ಳುತ್ತಿಲ್ಲವೇ ಎಂದು ಪ್ರಶ್ನಿಸಿ - ಭರತ್ ಮುಂಡೋಡಿ ಸುಳ್ಯ : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪದ್ಮರಾಜ್ ರಾಮಯ್ಯ ಆಯ್ಕೆಯದ...

ರಾಜಕೀಯ ಪಕ್ಷಗಳಿಂದ ಅಭಿವೃದ್ಧಿ ಹೇಳಿಕೆ ಹೊರತು ಅಭಿವೃದ್ಧಿಗೊಂಡಿಲ್ಲ, ರಾಜಕೀಯ ಪಕ್ಷಗಳು ನೀಡಿದ ಭರವಸೆ ಈಡೇರಿಸಿಲ್ಲ – ಗೋಪಾಲ್ ಪೆರಾಜೆ; ಹಳದಿರೋಗಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು – ಕೇಶವ ಮೊರಂಗಲ್ಲು

ರಾಜಕೀಯ ಪಕ್ಷಗಳ ಅಶ್ವಾಸನೆಗಳಿಂದ ಜನತೆ ನೊಂದು ಪಕ್ಷಗಳ ರಾಜಕೀಯ ನಿಲುವುಗಳನ್ನು ಬೆಂಬಲಿಸುವುದಿಲ್ಲ. ಆಯಾ ಕಾಲ ಸಂದರ್ಭದಲ್ಲಿ ಜನಸಾಮಾನ್ಯರ ಬದುಕಿನ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ವಿಶ್ಲೇಷಣೆ ಮಾಡಿ ಜನಾಭಿಪ್ರಾಯವನ್ನು ಮುಂದಿಡುವುದು ನಮ್ಮ ಕರ್ತವ್ಯ ಎಂದುಅಮರ ಸುಳ್ಯದ ನಾಗರಿಕ ವೇದಿಕೆ ಸಂಚಾಲಕ ಗೋಪಾಲ್ ಪೆರಾಜೆ ಹೇಳಿದರು. ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು...

ಬಜರಂಗದಳ ಜಿಲ್ಲಾ ಸಂಚಾಲಕರಿಗೆ  ಗಡಿಪಾರು ನೋಟೀಸ್ –  ಖಂಡನೆ ವ್ಯಕ್ತಪಡಿಸಿದ ವಿ ಹೆಚ್ ಪಿ ಸುಳ್ಯ ಪ್ರಖಂಡ

ರಾಜ್ಯದಲ್ಲಿ ಹಿಂದೂ ವಿರೋಧಿ ಕೆಲಸ ಮಾಡುತ್ತಾಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಪ್ರತಿ ಚುನಾವಣೆ ಸಂದರ್ಭದಲ್ಲಿ ಗೂಂಡಾ ಕಾಯಿದೆ ಗ ಕೇಸನ್ನು ಹಾಕಿ ಕಾರ್ಯಕರ್ತರ ಆತ್ಮ ಸ್ಟೈರ್ಯ ಕುಗ್ಗಿಸಲು ಗಡಿಪಾರು ಆದೇಶ ಮಾಡುವ ರಾಜ್ಯ ಸರಕಾರದ ಈ ಕ್ರಮಕ್ಕೆ ಸರಿಯಾದ ಉತ್ತರ ಹಿಂದೂ ಸಮಾಜ ಕೊಟ್ಟೆ ಕೊಡುತ್ತದೆ.ಪುತ್ತೂರು ಜಿಲ್ಲಾ ಭಜರಂಗದಳ ಸಂಚಾಲಕರಾದ ಭರತ್ ಕುಮ್ದೇಲ್ ಇವರನ್ನುಮೈಸೂರು ಜಿಲ್ಲೆಗೆ...

ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆ‌ರ್. ಪೂಜಾರಿ ನಾಮಪತ್ರ ಸಲ್ಲಿಕೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆ‌ರ್. ಪೂಜಾರಿ ಯವರು ಏ.3ರಂದು ನಾಮಪತ್ರ ಸಲ್ಲಿಸಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಗೊಂಬೆ, ಚೆಂಡೆವಾದನ ದೊಂದಿಗೆ ತೆರೆದ ವಾಹನದೊಂದಿಗೆ ಮೆರವಣಿಗೆಯಲ್ಲಿ ಕಾರ್ಯಕರ್ತರ ಜೊತೆ ಸಾಗಿ ನಾಮಪತ್ರ ಸಲ್ಲಿಸಿದರು. ಮೆರವಣಿಗೆಗೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಚಾಲನೆ ನೀಡಿದರು. ಈ...

ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ಮಂಡೆಕೋಲು ಮಹಾವಿಷ್ಣು ಮೂರ್ತಿ ದೇವಸ್ಥಾನ – ವೇಗ ಪಡೆದುಕೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳು

✒️ಗಣೇಶ್ ಮಾವಂಜಿ ✒️ ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗುತ್ತಿದೆ. ಈ ಸಂಬಂಧ ಧಾರ್ಮಿಕ ವಿಧಿ ವಿಧಾನನಗಳು ಮುಂಬರುವ ಎಪ್ರಿಲ್ 13 ರಿಂದ ಮೊದಲ್ಗೊಂಡು ಮೇ 4 ರವರೆಗೆ ನಡೆಯಲಿದೆ‌. ಸುಮಾರು ಆರು ವರ್ಷಗಳ ಹಿಂದೆಯೇ ಬ್ರಹ್ಮಕಲಶೋತ್ಸವಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ...

ಸಂಪಾಜೆ : ಅರಣ್ಯ ಇಲಾಖೆಯ ನಾಲ್ವರಿಗೆ ಭಡ್ತಿ

(ವಿನಯಕೃಷ್ಣ, ನಾಗರಾಜ್. ಎಸ್, ವಿಜೇಂದ್ರಕುಮಾರ್, ಶ್ರೀರಕ್ಷಾ, ಶೋಭಾ, ಸಂದೀಪ್. ಗೌಡ, ಕಾರ್ತಿಕ್. ಡಿ) ಸಂಪಾಜೆ ವಲಯಾರಣ್ಯಾಧಿಕಾರಿಗಳ ಕಛೇರಿಯ ನಾಲ್ಕು ಮಂದಿ ಸಿಬ್ಬಂದಿಗಳಿಗೆ ಮುಂಭಡ್ತಿಯಾಗಿದ್ದು, ಹಾಗೂ ಮೂರು ಮಂದಿ ಸಿಬ್ಬಂದಿಗಳು ಹೊಸದಾಗಿ ಆಗಮಿಸಿದ್ದಾರೆ. ವಿನಯಕೃಷ್ಣ ಎಂ.ಸಿ. ಅವರು ಸಂಪಾಜೆ ವಲಯ ರಕ್ಷಣಾ ಕಾರ್ಯ ಎರಡರಿಂದ ಕಾರ್ಯ ಒಂದಕ್ಕೆ ಭಡ್ತಿಗೊಂಡಿದ್ದು, ವಿಜಯೇಂದ್ರ ಕುಮಾರ್ ಎಂ. ಅವರು ಸಂಪಾಜೆ ವಲಯದ...

ಸುಬ್ರಹ್ಮಣ್ಯ :: ಅತ್ಯಾಧುನಿಕ ಸೌಲಭ್ಯಗಳೊಂದಿಗೆ ದ ರಾಯಲ್ ಮೊಂಟನಾ ಹೋಟೆಲ್ & ರೆಸಾರ್ಟ್ ಶುಭಾರಂಭ

ಕುಕ್ಕೆ ಸುಬ್ರಹ್ಮಣ್ಯದ ಸಮೀಪ ಏನೆಕಲ್ಲು ಗ್ರಾಮದ ಬೂದಿಪಳ್ಳದಲ್ಲಿ ಅತ್ಯಾಧುನಿಕ ಸೌಲಭ್ಯ್ಲಗಳೊಂದಿಗೆ ನಿರ್ಮಾಣಗೊಂಡ ದ ರಾಯಲ್ ಮೊಂಟಾನಾ ಹೋಟೆಲ್ ಮತ್ತು ರೆಸಾರ್ಟ್ ಇಂದು ಶುಭಾರಂಭಗೊಂಡಿತು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸತನ ತಂದು ಸಾಧನೆ ಮಾಡಿದ ಬೆಂಗಳೂರಿನ ರಾಯಲ್ ಎಂಟರ್ ಪ್ರೈಸಸ್ ರಾಜ್ಯದ ವಿವಿಧೆಡೆ ಪ್ರವಾಸಿಗರಿಗೆ ಉತ್ತಮ ಸೇವೆ ನೀಡುತ್ತಿದೆ. ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿದಿ ಉದ್ಘಾಟಿಸಿ ಶುಭ...

ಸುಳ್ಯ ನಗರ ಕಾಂಗ್ರೆಸ್‌ ಅಧ್ಯಕ್ಷರಾಗಿ ಶಶಿಧರ ಎಂ. ಜೆ. ನೇಮಕ

ಸುಳ್ಯ ನಗರ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಶಶಿಧರ ಎಂ. ಜೆ. ಅವರನ್ನು ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿಸಿ ಜಯರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಲೆಮಜಲು : ಕಾರು ಮತ್ತು ಬೈಕ್ ಮುಖಾಮುಖಿ – ಅಪಾಯದಿಂದ ಪಾರು

ಹಾಲೆಮಜಲು ಸಮೀಪ ಕಾರು ಮತ್ತು ಬೈಕ್ ಮುಖಾಮುಖಿ ಢಿಕ್ಕಿಯಾದ ಘಟನೆ ಇಂದು ಸಂಭವಿಸಿದೆ. ಗುತ್ತಿಗಾರು ಕಡೆಯಿಂದ ಸುಬ್ರಮಣ್ಯ ಕಡೆಗೆ ಹೋಗುವ ಆಲ್ಟೊ ಕಾರು ಹಾಗೂ ಸುಬ್ರಹ್ಮಣ್ಯ ಕಡೆಯಿಂದ ಗುತ್ತಿಗಾರು ಕಡೆಗೆ ಬರುವ ಬೈಕ್ ಹಾಲೆಮಜಲು ತಿರುವಿನಲ್ಲಿ ಪರಸ್ಪರ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಮುಂಭಾಗ ಚಕ್ರ ತುಂಡಾಗಿ ಬಿದ್ದಿದೆ. ಕಾರು ಪಕ್ಕದ ತೋಟದ ಬದಿಗೆ...

ಕಡಬ : ಗೋವು ಸಾಗಾಟ ಮಾಡುತ್ತಿದ್ದ ಕಾರು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು – ರಾತ್ರೋರಾತ್ರಿ ಬಿಜೆಪಿ ಪ್ರತಿಭಟನೆ – ಧರಣಿ ಕುಳಿತ ಭಾಗೀರಥಿ ಮುರುಳ್ಯ ಹಾಗೂ ಹರೀಶ್ ಪೂಂಜ

ಅಕ್ರಮ ಗೋವು ಸಾಗಟದ ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ. ವಿಷಯ ತಿಳಿದ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಘಟನೆಯ ವಿರುದ್ದ ರೊಚ್ಚಿಗೆದ್ದ ಹಿಂದೂ ಸಂಘಟನೆಗಳು ಕಡಬ ಆಸ್ಪತ್ರೆಯ ಬಳಿ ಮೊದಲು ಬೃಹತ್ ಪ್ರತಿಭಟನೆ ಆರಂಭವಾಗಿತ್ತು. ನಂತರ ಕಡಬ ಪೇಟೆಯ ಮುಖ್ಯ ಜಂಕ್ಷನ್ ಬಳಿ...

ಸುಳ್ಯ : ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರ ಚುನಾವಣಾ ಕಛೇರಿ ಉದ್ಘಾಟನೆ

ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿ ರವರ ಚುಣಾವಣಾ ಕಛೇರಿಯನ್ನು ಸುಳ್ಯದಲ್ಲಿಂದು ಮಾಜಿ ಸಚಿವ ರಮಾನಾಥ ರೈ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆ , ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ , ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿ , ಐವನ್ ಡಿಸೋಜ ,...

ಸುಳ್ಯ : ಕಾರ್ಯಕರ್ತರ ಸಮಾವೇಶದಲ್ಲಿ ಘಟಾನುಘಟಿ ನಾಯಕರು ಭಾಗಿ : ಸುಳ್ಯ ಜಿಲ್ಲೆಗೆ ಪ್ರೇರಣಾದಾಯಿ ಕ್ಷೇತ್ರ – ಕಟೀಲ್

ಸುಳ್ಯ ಜಿಲ್ಲೆಗೆ ಪ್ರೇರಣಾದಾಯಿ ಕ್ಷೇತ್ರ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಸುಳ್ಯದಲ್ಲಿಂದು ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.‌ ಸಾಮಾನ್ಯ ಕಾರ್ಯಕರ್ತನಿಗೆ ರಾಜ್ಯಾಧ್ಯಕ್ಷ ಮತ್ತು ಲೋಕಸಭಾ ಸದಸ್ಯ ಸ್ಥಾನದ ಅಭ್ಯರ್ಥಿಯನ್ನಾಗಿಸಿ ಬೆಳೆಸಿದ ಪಕ್ಷವಿದ್ದರೆ ಅದು ಭಾರತೀಯ ಜನತಾ ಪಕ್ಷ ಎಂದು ಹೇಳಿದರು. ತಮ್ಮ ಜಿಲ್ಲೆಗೆ ಮೋದಿಯವರ ಅವಧಿಯಲ್ಲಿ 1 ಲಕ್ಷದ...

ಏ.06: ಸ್ನೇಹ ಶಾಲೆಯಲ್ಲಿ ಸಾಹಿತಿ ಎಲ್.ಎಸ್.ಎಸ್. ಜನ್ಮ ಶತಮಾನೋತ್ಸವ ಹಾಗೂ ಅಗ್ನಿಹೋತ್ರದ ಮಹತ್ವದ ಬಗ್ಗೆ ಉಪನ್ಯಾಸ

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಎಪ್ರಿಲ್ 6 ರಂದು ಕನ್ನಡದ ಖ್ಯಾತ ಸಾಹಿತಿ ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಅವರ ಜನ್ಮಶತಮಾನೋತ್ಸವದ ಆಚರಣೆ ಹಾಗೂ ವಿದ್ಯಾನಿಧಿಯ ಸ್ಥಾಪನೆ ಹಾಗೂ ಅಗ್ನಿಹೋತ್ರ ದ ಮಹತ್ವದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಸ್ನೇಹ ಶಾಲೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ...

ಕೇರಳದ ಸಹ-ಚುನಾವಣಾ ಉಸ್ತುವಾರಿಯಾಗಿ ನಳಿನ್ ಕುಮಾರ್ ಕಟೀಲ್ ನೇಮಕ

ದ.ಕ.ಲೋಕಸಭಾ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ಮುಂಬರುವ ಲೋಕಸಭೆ ಚುನಾವಣೆ 2024 ಕ್ಕೆ ಕೇರಳದ ಸಹ-ಚುನಾವಣಾ ಉಸ್ತುವಾರಿಯಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ನೇಮಿಸಿದ್ದಾರೆ. ಎರಡು ಬಾರಿ ಸಂಸದರಾಗಿರುವ ಕಟೀಲ್ ರವರು ರಾಜ್ಯಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

ಸುಬ್ರಹ್ಮಣ್ಯದಲ್ಲಿ ದ ರಾಯಲ್ ಮೊಂಟಾನಾ ಹೋಟೆಲ್ & ರೆಸಾರ್ಟ್ ಉದ್ಘಾಟನೆಗೆ ಸಜ್ಜು – ಏ.03 ರಂದು ಲೋಕಾರ್ಪಣೆಗೊಳ್ಳಲಿರುವ ರೆಸಾರ್ಟ್  ಬಗ್ಗೆ ವಿವರ ನೀಡಿದ ಸಂಸ್ಥೆಯ ಮುಖ್ಯಸ್ಥ ಹರ್ಷ ಪುಟ್ಟಪ್ಪ

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಏನೇಕಲ್ ನಲ್ಲಿ ನೂತನವಾಗಿ ದಿ ರಾಯಲ್ ಮೊಂಟಾನಾ ಹೋಟಲ್ ಮತ್ತು ರೆಸಾರ್ಟ್ ಉದ್ಘಾಟನೆಗೆ ಸಜ್ಜುಗೊಂಡಿದ್ದು ಏ.03 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ದ ರಾಯಲ್ ಎಂಟರ್ ಪ್ರೈಸಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಹೇಳಿದರು. 🔺ಏನೆಕಲ್ಲು : ದಿ ರೋಯಲ್ ಮೊಂಟಾನಾ ಹೋಟೆಲ್ ರೆಸಾರ್ಟ್ ಉದ್ಘಾಟನೆಗೆ ಸಿದ್ಧತೆ De Royal Montana Resort https://youtu.be/Rgsbhpm1MgA?si=u7r4K0ffebryOIX3...

ವೈದ್ಯರ ಗ್ರಾಮೀಣ ವೈದ್ಯಕೀಯ ಸೇವೆ ಶ್ರೇಷ್ಠವಾದದ್ದು –  ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

  ಸಮಾಜ ಸೇವೆಯೇ ಜನರ ಸೇವೆ ಎಂಬ ಉದಾತ ಮನೋಭಾವದಿಂದ ನಿಟ್ಟೆ ಜಸ್ಟಿಸ್ ಕೆ ಎಸ್ ಸದಾನಂದ ಹೆಗಡೆಯವರು ಬಹಳ ಹಿಂದೆ ಇಲ್ಲಿ ಗ್ರಾಮೀಣ ಬಡ ಜನರಿಗೆ ದೂರಕ್ಕೆ ಹೋಗೋ ಬದಲು ಹತ್ತಿರದಲ್ಲಿ ಎಲ್ಲಾ ವೈದ್ಯಕೀಯ ಸೇವೆಗಳು ಸಿಗುವಂತಾಗಬೇಕು ಎನ್ನುವ ಉದ್ದೇಶದಿಂದ ಇಲ್ಲಿ ಸದಾನಂದ ಆಸ್ಪತ್ರೆಯನ್ನು ಆರಂಭಿಸಿರುತ್ತಾರೆ. ಅಂದಿನ ಕಾಲದಲ್ಲಿ ವೈದ್ಯಕೀಯ ಖರ್ಚುವೆಚ್ಚಗಳು ರೋಗಿಗಳಿಗೆ ದುಬಾರಿಯಾಗುವುದನ್ನು...

ಐನೆಕಿದು ನಕ್ಸಲರು ಪ್ರತ್ಯಕ್ಷ – ಮನೆಯವರ ಜತೆ ನಕ್ಸಲರು ಏನು ಮಾತನಾಡಿದ್ದಾರೆ – ಅವರ ಉದ್ದೇಶವೇನು? – ಇಲ್ಲಿದೆ ಮಾತುಕತೆ ವಿವರ

ಐನೆಕಿದು ಗ್ರಾಮದ ಕೋಟೆ ತೋಟದಮಜಲು ಅಶೋಕ್ ಮನೆ ಬಳಿ ಮಾ.23 ರಂದು ನಕ್ಸಲರು ಪ್ರತ್ಯಕ್ಷವಾಗಿದ್ದರು. ಮನೆಯವರ ಬಳಿ ಏನು ಬಳಿ ನಕ್ಸಲರು ಏನೆಲ್ಲಾ ಮಾತನಾಡಿದ್ದಾರೆ, ಅವರ ಉದ್ದೇಶವೇನು ಎಂದು ಅಮರ ಸುದ್ದಿಗೆ ಅಶೋಕ್ ವಿವರಿಸಿದ್ದಾರೆ. ಮನೆ ಬಳಿ ಬಂದ ನಕ್ಸಲರು ನಾವು ಯಾರು ಗೊತ್ತಾಯಿತಾ, ನಮಗೆ ಅರ್ಜೆಂಟ್ ಅಕ್ಕಿ, ದಿನಸಿ ಬೇಕು ಕೊಡಿ ಎಂದು ಕೇಳಿದ್ದಾರೆ....

ಐನೆಕಿದು : ಮನೆಯೊಂದಕ್ಕೆ ನಕ್ಸಲರ ಭೇಟಿ – ಊಟ ಹಾಗೂ ಅಕ್ಕಿ ಕೇಳಿ ಕೊಂಡೊಯ್ದ ನಕ್ಸಲರು

ಐನೆಕಿದು ಗ್ರಾಮದ ಕೋಟೆ ತೋಟದಮಜಲು ಅಶೋಕ ಎಂಬವರ ಮನೆಗೆ ಮಾ.23ರಂದು ಸಂಜೆ ನಾಲ್ವರು ನಕ್ಸಲರು ಬಂದು ಊಟ ಹಾಗೂ ಅಕ್ಕಿ ಕೇಳಿ ಪಡೆದುಕೊಂಡು ಹೋದರೆಂದು ತಿಳಿದುಬಂದಿದೆ. ಇದೀಗ ಅರಣ್ಯದ ಸಮೀಪದ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಅಶೋಕ ಎಂಬವರ ಮನೆಗೆ ಬಂದ ಅವರು ನಾವು ಯಾರು ಗೊತ್ತಾಯಿತ ಎಂದು ಕೇಳಿ, ಮನೆಯಲ್ಲಿ ಸುಮಾರು ಒಂದು ಗಂಟೆಗಳ...

ಐನೆಕಿದು : ಮನೆಗೆ ಬಂದ ಅಪರಿಚಿತರು ನಕ್ಸಲರೇ ? – ಕೂಂಬಿಂಗ್ ಆರಂಭ

ಐನೆಕಿದು ಗ್ರಾಮದ ಕೋಟೆ ತೋಟದ ಮಜಲು ಎಂಬಲ್ಲಿಗೆ ಮಾ.23ರಂದು ಸಂಜೆ ಮೂರು ಮಂದಿ ಅಪರಿಚಿತರು ಬಂದು ಹೋಗಿದ್ದಾರೆನ್ನಲಾಗಿದ್ದು, ನಕ್ಸಲರಿರಬಹುದೇ ಎಂಬ ಅನುಮಾನ ಕಾಡಿದೆ. ಅರಣ್ಯದ ಸಮೀಪದ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಅಶೋಕ್ ಎಂಬವರ ಮನೆಗೆ ಬಂದಿರುವ ಅವರು ಸುಮಾರು ಒಂದು ಗಂಟೆಗಳ ಕಾಲ ಅಲ್ಲಿ ಇದ್ದು ಹಲವು ವಿಚಾರಗಳನ್ನು ವಿಚಾರಿಸಿರುವುದಾಗಿ ತಿಳಿದು ಬಂದಿದೆ. ಮೊಬೈಲ್...

ನಿದ್ರೆಗೆ ಜಾರಿದ ಚಾಲಕ – ಮೋರಿಗೆ ಗುದ್ದಿದ ಕಾರು

ಚಾಲಕನಿಗೆ ನಿದ್ರೆ ಜಾರಿದ್ದರಿಂದ ಇನ್ನೋವ ಕಾರು ನಿಯಂತ್ರಣ ತಪ್ಪಿ ಗೂನಡ್ಕದಲ್ಲಿ ಮೋರಿಗೆ ಢಿಕ್ಕಿಯಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.  ಕಾರು ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದು,  ಗೂನಡ್ಕದ ಶಿರಾಡಿ ದೈವಸ್ಥಾನದ ದ್ವಾರದ ಬಳಿ ಮೋರಿಗೆ ಢಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿರುವುದಾಗಿ ತಿಳಿದುಬಂದಿದೆ.

ಐವರ್ನಾಡು ಅಡಿಕೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು – ಮಂಡೆಕೋಲಿನ ಯುವಕನ ಬಂಧನ

ಐವರ್ನಾಡು ಗ್ರಾಮದ ಕುಳ್ಳಂಪ್ಪಾಡಿ ಹಿರಿಯಣ್ಣ ಎಂಬವರ, ಕೊಟ್ಟಿಗೆಯಲ್ಲಿ ಸುಲಿದು ದಾಸ್ತಾನು ಇರಿಸಿದ್ದ 5 ಗೋಣಿ ಚೀಲ ಅಡಿಕೆಯ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 30-2024 ಕಲಂ 380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಆರೋಪಿ ಮಂಡೆಕೋಲು ಗ್ರಾಮ, ಸುಳ್ಯ ನಿವಾಸಿ ಸುಪೀತ್‌ ಕೆ (20) ಎಂಬಾತನನ್ನು ವಶಕ್ಕೆ ಪಡೆದು,...

ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರಿಂದ ಸುಳ್ಯ ಕ್ಷೇತ್ರದ ಕ್ಲಿಕ್ ರೌಂಡಪ್ – ಮಠ,ಮಂದಿರ, ದೈವಸ್ಥಾನ ಹಾಗೂ ಹಿರಿಯ ಮುಖಂಡರ ಭೇಟಿ ಮಾಡಿದ ಕ್ಯಾಪ್ಟನ್

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಸುಳ್ಯ ವಿಧಾನಸಭಾ ಕ್ಷೇತ್ರದಾದ್ಯಂತ ಬಿರುಸಿನ  ಪ್ರವಾಸ ಕೈಗೊಂಡು ಮಠ ಮಂದಿರ, ಪ್ರತಿಮೆಗೆ ಮಾಲಾರ್ಪಣೆ, ಹಿರಿಯರ ಭೇಟಿ ಸೇರಿದಂತೆ ಸುಳ್ಯ ಕ್ಷೇತ್ರದಾದ್ಯಂತ ಸಂಚಲನ ಸೃಷ್ಠಿಸಿದರು.  ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪ್ರವಾಸಕ್ಕೆ ಚಾಲನೆ ನೀಡಿದರು. ಸುಳ್ಯ...

ದಿ.ಪ್ರವೀಣ್ ನೆಟ್ಟಾರು ಮನೆಗೆ ಕ್ಯಾ.ಬ್ರಿಜೇಶ್ ಚೌಟ ಭೇಟಿ – ಪುತ್ಥಳಿಗೆ ಮಾಲಾರ್ಪಣೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ದಿ.ಪ್ರವೀಣ್ ನೆಟ್ಟಾರು ಅವರ ನಿವಾಸಕ್ಕೆ ಭೇಟಿ ನೀಡಿ ನೆಟ್ಟಾರು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಅವರ ಕುಟುಂಬದ ಕುಶಲೋಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಂಡಲ ಸಮಿತಿ ಅಧ್ಯಕ್ಷ ವೆಂಕಟ್...

ರೈತರಿಗೆ ಸಿಹಿ ನೀಡಿದ ಕೊಕ್ಕೊ ಕೃಷಿ – ದಾಖಲೆ ಮಟ್ಟಕ್ಕೇರಿದ ಬೆಲೆ

ಕೊಕ್ಕೊ ಕೃಷಿ ರೈತರಿಗೆ ಈ ಬಾರಿ ಬಂಪರ್ ಆಫರ್ ನೀಡಿದೆ. ಬೆಳೆ ಕಡಿಮೆಯಾಗಿದ್ದರೂ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಈ ಹಿಂದೆ ಕೊಕ್ಕೊ ದರ ಗರಿಷ್ಠ ರೂ 75 ರವರೆಗೆ ಏರಿಕೆಯಾಗಿತ್ತು. ಅಡಿಕೆ ಕೃಷಿಕರಿಗೆ ಉಪಬೆಳೆಯಾಗಿ ಪ್ರತಿ ವಾರದ ಆದಾಯ ಮೂಲವಾಗಿದ್ದು ಇದೀಗ ರೂ 170 ರ ಗಡಿ ದಾಟಿದ್ದು ರೈರ ಮೊಗದಲ್ಲಿ ಮಂದಹಾಸ ಮೂಡಿದೆ....

ಸುಳ್ಯ : ಸಹಾಯಕ ಚುನಾವಣಾ ಅಧಿಕಾರಿ ಡಾ.ಜಗದೀಶ್ ಕೆ. ಅವರಿಂದ ಚುನಾವಣಾ ಪೂರ್ವ ತಯಾರಿ ಕುರಿತು ಮಾಹಿತಿ

ದೇಶಾದ್ಯಂತ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮತದಾರರು ಮತ್ತು ಅಧಿಕಾರಿಗಳ ಕರ್ತವ್ಯಗಳ ಕುರಿತಾಗಿ ಸಹಾಯಕ ಚುನಾವಣಾಧಿಕಾರಿಗಳಾದ ಡಾ.ಜಗದೀಶ್ ಕೆ ನಾಯ್ಕ ಸುಳ್ಯ ತಾಲೂಕು ಚುನಾವಣಾ ಕಛೇರಿಯಲ್ಲಿ ಮಾಹಿತಿ ನೀಡಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕಳೆದ ಬಾರಿ ಜಿಲ್ಲೆಯಲ್ಲಿ 78% ಮತದಾನವಾಗಿದ್ದು ಈ ಭಾರಿ ಮತದಾನದ ಶೇಕಾಡವಾರು ಹೆಚ್ಚಿಸುವಂತೆ ಮತ್ತು ಚುನಾವಣೆ ಪಾರದರ್ಶಕವಾಗಿ ನಡೆಯುವಂತೆ ಎಲ್ಲಾ ರೀತಿಯ ಕ್ರಮಗಳನ್ನು...

ಎ.13 ರಿಂದ 20 : ರಂಗಮನೆಯಲ್ಲಿ ರಾಜ್ಯ ಮಟ್ಟದ ಮಕ್ಕಳ ಅಭಿನಯ ಶಿಬಿರ ‘ಚಿಣ್ಣರಮೇಳ 2024’

ಸುಳ್ಯದ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಈ ವರ್ಷ ಎ.13 ರಿಂದ 20ರ ವರೆಗೆ ರಾಜ್ಯಮಟ್ಟದ ಮಕ್ಕಳ ಅಭಿನಯ ಶಿಬಿರ 'ಚಿಣ್ಣರಮೇಳ 2024 ' ನ್ನು ಏರ್ಪಡಿಸಲಾಗಿದೆ.ರಂಗಮಾಂತ್ರಿಕ ಡಾ| ಜೀವನ್ ರಾಂ ಸುಳ್ಯರ ಸಾರಥ್ಯದಲ್ಲಿ 33 ನೇ ವರ್ಷದ ಶಿಬಿರ ಇದಾಗಿದ್ದು ನೀನಾಸಂ,ರಂಗಾಯಣ ಮುಂತಾದ ಕಡೆಗಳಲ್ಲಿ ರಂಗಪದವಿಯನ್ನು ಪಡೆದ ಅನುಭವೀ ರಂಗಕರ್ಮಿಗಳಿಂದ ಮಕ್ಕಳಿಗೆ...

ಮಾರ್ಚ್ 18-19 : ಮಾವಿನಕಟ್ಟೆಯಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ – ಪ್ರದರ್ಶನಗೊಳ್ಳಲಿದೆ ತುಳು ಪೌರಾಣಿಕ ನಾಟಕ ಬೊಳ್ಳಿಮಲೆತ ಶಿವಶಕ್ತಿಲು

ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೈವದ ಒತ್ತೆಕೋಲ ಮಹೋತ್ಸವ ಮಾ.18 ಮತ್ತು 19 ರಂದು ನಡೆಯಲಿದೆ. ಮಾ.18 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹವನ, ಶುದ್ಧಿಕಲಶ, ಬೆಳಿಗ್ಗೆ 7 ಗಂಟೆಗೆ ಮೇಲೆರಿ ಕಾರ್ಯಕ್ರಮ, 8.30 ಕ್ಕೆ ಅಶ್ವತ್ಥ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 6.30 ಕ್ಕೆ ಭಂಡಾರ ತೆಗೆಯುವುದು,...

ಕ್ಯಾಪ್ಟನ್ ಬ್ರಿಜೇಶ್ ಚೌಟರಿಗೆ ಒಲಿದ ಮಂಗಳೂರು ಕ್ಷೇತ್ರದ ಟಿಕೆಟ್ – ಎಲೆಮರೆಯ ಕಾಯಿಯಂತಿದ್ದ ಚೌಟರ ಹಿನ್ನೆಲೆಯೇನು?

ನಿವೃತ್ತ ಸೇನಾಧಿಕಾರಿ, ಮಂಗಳೂರಿನ ಯುವ ನಾಯಕ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬೃಜೇಶ್ ಚೌಟ ಅವರನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಸ್ವಯಂ ನಿವೃತ್ತಿ ಪಡೆದು ಸಮಾಜ ಸೇವೆಗೆ ಇಳಿದ ಯುವ ನಾಯಕನನ್ನು ಬಿಜೆಪಿ ಸಂಸತ್ ಸ್ಪರ್ಧೆಯ ಟಿಕೆಟ್ ನೀಡಿದೆ. ಮಂಗಳೂರಿನ ರಥಬೀದಿಯಲ್ಲಿ...

ಅಜ್ಜಾವರ ಗ್ರಾಮ ಪಂಚಾಯತ್ ಗ್ರಾಮ ಸಭೆ , ಗ್ರಾಮಸ್ಥರ ಪ್ರಶ್ನೆಗಳಿಗೆ ಮೌನವಾದ ಜನಪ್ರತಿನಿಧಿಗಳು ,ಅಭಿವೃದ್ಧಿ ಅಧಿಕಾರಿಗಳಿಂದ ಉತ್ತರ ನೀಡಲು ಪ್ರಯತ್ನ !

ಅಜ್ಜಾವರ ಸ್ಮಶಾನ ಜಾಗ ಉಳಿಸಲು ಗ್ರಾಮ ಸಭೆಯಲ್ಲೇ ಪ್ರತಿಭಟನೆ , ಮೊದಲ ಭಾರಿಗೆ ಲಿಖಿತ ಹೇಳಿಕೆ ಪಡೆದುಕೊಂಡ ಗ್ರಾಮಸ್ಥರು. ಕುಡಿಯುವ ನೀರು ಹಾಗೂ ಇತರೆ ವಿಚಾರಗಳ ಬಗ್ಗೆ ಪ್ರಶ್ನೆ ಅಸಮರ್ಪಕ ಉತ್ತರ , ಅಧಿಕಾರಿಗಳ ಗೈರಿಗೆ ನೋಟಿಸ್ ನೀಡಲು ತೀರ್ಮಾನ. ಅಜ್ಜಾವರ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ‌ಬೇಬಿ‌ ಕಲ್ತಡ್ಕರ ಅಧ್ಯಕ್ಷತೆಯಲ್ಲಿ, ಮೇನಾಲ ಅಂಬೇಡ್ಕರ್ ಭವನದಲ್ಲಿ...

ಮಂಡೆಕೋಲು : ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿ ಅವರು ಸೋಮವಾರ ಬಿಡುಗಡೆಗೊಳಿಸಿದರು. ದೇವರ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ವಿಧಿ ವಿಧಾನಗಳು ಎಪ್ರಿಲ್ 26 ರಿಂದ ಮೊದಲ್ಗೊಂಡು ಮೇ 4 ರವರೆಗೆ ನಡೆಯಲಿದ್ದು, ಈ ಕುರಿತ ಸರ್ವ ಕಾರ್ಯಗಳಿಗೆ...

ಕಡಮಕಲ್ಲಿಗೆ ಭೇಟಿ ನೀಡಿದ ಮಡಿಕೇರಿ ಶಾಸಕ ಮಂತರ್ ಗೌಡ

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗಿನ ಗಡಿಭಾಗವಾದ ಕಡಮಕಲ್ಲು ಭಾಗಕ್ಕೆ ಮಡಿಕೇರಿ ಶಾಸಕ ಮಂತರ್ ಗೌಡ ದಿಢೀರ್ ಭೇಟಿ ನೀಡಿದರು. ಈ ಸಂದರ್ಭ ಸ್ಥಳೀಯ ನಿವಾಸಿಗಳು ಮುಖ್ಯವಾಗಿ ಗಾಳಿಬೀಡು ಕಡಮಕಲ್ಲು ರಸ್ತೆ ಸಂಪರ್ಕ, ವಿದ್ಯುತ್ ಸಮಸ್ಯೆ ಮೊಬೈಲ್ ಟವರ್ ನ ಸಮಸ್ಯೆ ಕುಡಿಯುವ ನೀರಿನ ಸಮಸ್ಯೆ ಮತ್ತು ಜಮೀನಿನ ಮೂಲ ದಾಖಲೆಗಳನ್ನು ಸರಿಪಡಿಸುವ ಬಗ್ಗೆ ಚರ್ಚಿಸಿದರು....

ಪೆರುವಾಜೆ : ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಲೆಕ್ಕಪತ್ರ ಮಂಡನೆ- ರಥೋತ್ಸವ ಹತ್ತೂರಿನಲ್ಲಿ ಪ್ರಸಿದ್ಧಿ ಪಡೆದಿದೆ : ಪದ್ಮನಾಭ ಶೆಟ್ಟಿ

91.30 ಲಕ್ಷ ರೂ.ಜಮೆ : 17.98 ಲಕ್ಷ ರೂ.ಮೊತ್ತದ‌ ಆಭರಣ ಸಮರ್ಪಣೆ ರಥ ನಿರ್ಮಾಣಕ್ಕೆ ದಾನ ರೂಪದಲ್ಲಿ 50 ಲಕ್ಷ ರೂ. ಅಧಿಕ ಮೌಲ್ಯದ ಮರ ಭಕ್ತರಿಂದ ಸಮರ್ಪಣೆ ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಶ್ರೀ ಜಲದುರ್ಗಾದೇವಿ ದೇವಾಲಯದ 2024 ನೇ ಸಾಲಿನ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಲೆಕ್ಕಪತ್ರ ಮಂಡನೆಯು ಮಾ.10...

ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಊರವರಿಂದ ಬೃಹತ್ ಶ್ರಮದಾನ – ಮಾ. 11 ರಂದು ಆಮಂತ್ರಣ ಬಿಡುಗಡೆ

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿದ್ದು ಈ ಪ್ರಯುಕ್ತ ಭಾನುವಾರ ಊರವರಿಂದ ಬೃಹತ್ ಶ್ರಮದಾನ ಕಾರ್ಯಕ್ರಮ ನಡೆಯಿತು. ಗ್ರಾಮದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾದಿಗಳನ್ನು ವಿವಿಧ ತಂಡಗಳಾಗಿ ಮಾಡಿ ಅವರ ಮೂಲಕ ಚಪ್ಪರಕ್ಕಾಗಿ ಸಾಮಾನುಗಳ ಜೋಡಣೆ, ಸ್ವಚ್ಛತೆ, ಉರುವಲು ಸಂಗ್ರಹ ಮೊದಲಾದ ಕೆಲಸ ಕಾರ್ಯಗಳನ್ನು ಮಾಡಲಾಯಿತು....

ಸುಳ್ಯ :  ಪಂಚ ಗ್ಯಾರಂಟಿ ಸಮಾವೇಶ – ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾದ ಫಲಾನುಭವಿಗಳು

ಸುಳ್ಯ ದಕ್ಷಿಣ ಕನ್ನಡ ಜಿಲ್ಲಾಡಳಿತ ಸುಳ್ಯ ತಾಲೂಕು ಆಡಳಿತದ ವತಿಯಿಂದ ಪಂಚ ಗ್ಯಾರಂಟಿಗಳ ಫಲಾನುಭವಿಗಳ ಸಮಾವೇಶವು  ಅಮರಜ್ಯೋತಿ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ವಹಿಸಿದ್ದರು . ಕಾರ್ಯಕ್ರಮದ ಉದ್ಘಾಟನೆಯನ್ನು ದಿನೇಶ್ ಗುಂಡುರಾವ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು . ಈ ಸಂದರ್ಭದಲ್ಲಿ...

ಅಡ್ಪಂಗಾಯ ಶಾಲಾ ನೂತನ ಕೊಠಡಿ ಉದ್ಘಾಟನೆ – ಶಾಸಕರು, ಸಚಿವರು ಭಾಗಿ

ಅಜ್ಜಾವರ ಗ್ರಾಮದ ಅಡ್ಪಂಗಾಯದಲ್ಲಿ ದ.ಕ ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ರಾಜ್ಯ ವಲಯ ಯೋಜನೆಯಡಿ 27 ಲಕ್ಷದ 80 ಸಾವಿರದಲ್ಲಿ ನಿರ್ಮಾಣವಾದ ನೂತನ ಕೊಠಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ರವರು ನಡೆಸಿದರು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ವಹಿಸಿ ಮಾತನಾಡುತ್ತಾ ಸುಳ್ಯದ ಕಂದಾಯ ಮತ್ತು ಇತರೆ...

ಸುಳ್ಯ : ಗ್ಯಾರಂಟಿ ಸಮಾವೇಶ – ಕಾರ್ಯಕ್ರಮಕ್ಕೆ ಆಹ್ವಾನಿಸದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ತರಾಟೆಗೆತ್ತಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ

https://youtu.be/ZjD0GOR3u7E?si=kVh51iJP2QEQmIM3 ಕರ್ನಾಟಕ ಸರಕಾರದ ಪಂಚ ಗ್ಯಾರಂಟಿಗಳ ಸಮಾವೇಶ ನಡೆಯುತ್ತಿದ್ದು, ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ವೇದಿಕೆಗೆ ಏರಿ ಬಂದ ಜಿ‌.ಕೃಷ್ಣಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಮತ್ತು ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿರವವರ ಬಳಿ ತೆರಳಿ ಏರು ಧ್ವನಿಯಲ್ಲಿ ತನ್ನನ್ನು ಆಹ್ವಾನಿಸದ ಕುರಿತು ಅಸಮಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು. ಬಳಿಕ ಕಾಂಗ್ರೆಸ್ ಮುಖಂಡರು ವೇದಿಕೆಗೆ ಆಗಮಿಸಿ...

ಸುಳ್ಯ : ಗ್ಯಾರಂಟಿ ಸಮಾವೇಶ – ಕಾರ್ಯಕ್ರಮಕ್ಕೆ ಆಹ್ವಾನಿಸದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ತರಾಟೆಗೆತ್ತಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ

https://youtu.be/ZjD0GOR3u7E?si=kVh51iJP2QEQmIM3 ಕರ್ನಾಟಕ ಸರಕಾರದ ಪಂಚ ಗ್ಯಾರಂಟಿಗಳ ಸಮಾವೇಶ ನಡೆಯುತ್ತಿದ್ದು ಈ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ವೇದಿಕೆಗೆ ಏರಿ ಬಂದ ಜಿ.ಕೃಷ್ಣಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಮತ್ತು ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿರವವರ ಬಳಿ ತೆರಳಿ ಏರು ಧ್ವನಿಯಲ್ಲಿ ಅವರನ್ನು ಆಹ್ವಾನಿಸದ ಕುರಿತು ಅಸಮಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು . ಬಳಿಕ ಕಾಂಗ್ರೆಸ್ ಮುಖಂಡರು...

ಐವರ್ನಾಡು : ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 31 ವರ್ಷ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ  ಅರ್ಚಕ ಪದ್ಮನಾಭ ಭಟ್ ರವರಿಗೆ ಸಾರ್ವಜನಿಕ ಸನ್ಮಾನ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸುದೀರ್ಘ 31 ವರ್ಷಗಳ ಕಾಲ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ ಮಾ.12 ರಂದು ಸೇವಾ ನಿವೃತ್ತಿ ಹೊಂದಲಿರುವ ಪ್ರಧಾನ ಅರ್ಚಕಪದ್ಮನಾಭ ಭಟ್ ರವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭವು ಮಾ.08 ರಂದು ದೇವಸ್ಥಾನದಲ್ಲಿ ನಡೆಯಿತು.ಪದ್ಮನಾಭ ಭಟ್ ಮತ್ತು ಶ್ರೀಮತಿ ಚಂದ್ರಾವತಿ ಪಿ. ದಂಪತಿಗಳನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.ಸನ್ಮಾನ...

ಹದಗೆಟ್ಟ ಅರಂತೋಡು ರೆಂಜಾಳ ರಸ್ತೆ  ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಅರಂತೋಡು ಅಡ್ಕಬಳೆ ಬಾಜಿನಡ್ಕ ರೆಂಜಾಳ ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಇದರಿಂದ ಬೇಸತ್ತ ಈ ಭಾಗದ ಜನತೆ ಮತದಾನ ಬಹಿಷ್ಕಾರಕ್ಕೆ ತೀರ್ಮಾನಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ.

ಕಡಬ : ವಿದ್ಯಾರ್ಥಿನಿಯರಿಗೆ ಆಸಿಡ್ ಎರಚಿರುವ ಪ್ರಕರಣ – ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ವೆಂಕಟ್ ವಳಲಂಬೆ ಒತ್ತಾಯ

ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಮೂವರು ವಿದ್ಯಾರ್ಥಿನಿಯರಿಗೆ ಆಸಿಡ್ ಎರಚಿರುವ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡು ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕಡಬದಂತ ಸರ್ಕಾರಿ ಕಾಲೇಜ್ ಪ್ರದೇಶದಲ್ಲಿ ಮೂವರು ವಿದ್ಯಾರ್ಥಿ ನಿಗಳ ಮೇಲೆ ಅಸಿಡ್ ಎರಚಿ ಕಾನೂನು ಕೈಗೆತ್ತಿಕೊಂಡಿರುವ ಆರೋಪಿಗೆ ತಕ್ಕ...

ಸುಬ್ರಹ್ಮಣ್ಯ : ರಿಕ್ಷಾ ಪಲ್ಟಿ – ಚಾಲಕ ವಿವೇಕಾನಂದ ದೇವರಗದ್ದೆ ಮೃತ್ಯು

ಸುಬ್ರಹ್ಮಣ್ಯದ ಇಂಜಾಡಿ ಬಳಿ ರಿಕ್ಷಾ ಪಲ್ಟಿಯಾಗಿ ಗಂಭೀರ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಇಂದು ರಾತ್ರಿ ನಡೆದಿದೆ.ಸುಬ್ರಮಣ್ಯದ ಕುಕ್ಕೆ ಶ್ರೀ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ವಿವೇಕಾನಂದ ದೇವರಗದ್ದೆ ಮೃತ ದುರ್ದೈವಿ.

ಎಲಿಮಲೆ : ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ

ಸೇವಾಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಸುಳ್ಯ, ಅಮರ ಸಂಘಟನಾ ಸಮಿತಿ ಸುಳ್ಯ , ಮಿತ್ರ ಬಳಗ ಎಲಿಮಲೆ, ಎಜೆ ಆಸ್ಪತ್ರೆ ಮಂಗಳೂರು ಜಂಟಿ ಆಶ್ರಯದಲ್ಲಿ ಎಲಿಮಲೆಯಲ್ಲಿ ಉಚಿತ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಶಿಬಿರ ನಡೆಯಿತು ಸೇವಾ ಭಾರತೀ ಹೆಲ್ಪ್ ಲೈನ್ ಟ್ರಸ್ಟ್ ಸುಳ್ಯ ಮತ್ತು ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ಆಶ್ರಯದಲ್ಲಿ ಮಿತ್ರ...

ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಎಸ್.ಎನ್. ಮನ್ಮಥ ಅವಿರೋಧ ಆಯ್ಕೆ !

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಆಡಳಿತ ಮಂಡಳಿಗೆ ನಿರ್ದೇಶಕ ಸ್ಥಾನಕ್ಕೆ ಬಿಜೆಪಿಯಿಂದ ಎಸ್.ಎನ್.ನಾಮಪತ್ರ ಸಲ್ಲಿಸಿದ್ದರು. ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಕಾಂಗ್ರೆಸ್ ಬೆಂಬಲಿತರಾಗಿ ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಎಸ್.ಎನ್.ಮನ್ಮಥ ರವರು ಅವಿರೋಧವಾಗಿ ಆಯ್ಕೆಯಾದಂತಾಗಿದೆ. ಅಧಿಕೃತ ಘೋಷಣೆ ಬಾಕಿಯುಳಿದಿದೆ. ಎಸ್ ಎನ್. ಮನ್ಮಥರವರು ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷರಾಗಿದ್ದಾರೆ. ಜಿ.ಪಂ. ಮಾಜಿ...

ಸುಳ್ಯದಿಂದ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರಕ್ಕೆ ಟ್ಯಾಬ್ಲೋ ಸಹಿತ ಭವ್ಯವಾದ ಹಸಿರುವಾಣಿ ಮೆರವಣಿಗೆ

ಪ್ರಸಿದ್ಧ ಕ್ಷೇತ್ರವಾಗಿರುವ ಕಾಸರಗೋಡು ಕುಂಬಳೆ ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಮಾ1 ರಿಂದ ಕಳಿಯಾಟ ಮಹೋತ್ಸವ ಆರಂಭಗೊಂಡಿದ್ದು ಮಾ.7 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಸುಳ್ಯದಿಂದ ಇಂದು ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣೆ ನಡೆಯಲಿದ್ದು ಮೆರವಣಿಗೆ ಮುಖಾಂತರ ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ , ಕಿರಣ್ ಬಿಳಿಯಾರು , ಬಾಲಚಂದ್ರ ಅಡ್ಕಾರ್ ,...

ಪಾಲಡ್ಕ : ಬಸ್ ಬೈಕ್ ಅಪಘಾತ – ಗಂಭೀರ ಗಾಯಗೊಂಡಿದ್ದ ಶಿಕ್ಷಕ ಮೃತ್ಯು

ಸುಳ್ಯ : ಪೆರಾಜೆ ಬಳಿಯ ಪಾಲಡ್ಕ ಎಂಬಲ್ಲಿ ಗೂನಡ್ಕ ಮಾರುತಿ ಶಾಲಾ ಶಿಕ್ಷಕರಾದ ಪದ್ಮನಾಭ ಕಿರ್ಲಾಯ ಎಂಬುವವರು ಖಾಸಗಿ ಬಸ್ ನ ಹಿಂಬದಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು.‌ ಆದರೆ ಇದೀಗ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅರಂತೋಡು ಗ್ರಾಮದ ಕಿರ್ಲಾಯದವರಾಗಿದ್ದು ಪ್ರಸ್ತುತ ಮೇನಾಲದಲ್ಲಿ ಜಾಗ ಖರೀದಿಸಿ ನೆಲೆಸಿದ್ದರು....

ಕೊಲ್ಲಮೊಗ್ರು : ಅನಾರೋಗ್ಯದಿಂದ ಯುವಕ ಮೃತ್ಯು

ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಕೊಲ್ಲಮೊಗ್ರು ಗ್ರಾಮದ ಚರಣ್ ಕುಞೇಟಿ ಎಂಬುವವರು ಫೆ.28 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರು ಕೆಲವು ತಿಂಗಳುಗಳಿಂದ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ.ಮೃತರಿಗೆ 29 ವರ್ಷ ವಯಸ್ಸಾಗಿದ್ದು, ಮೃತರು ತಂದೆ ಕೊಲ್ಲಮೊಗ್ರದ ಪೋಸ್ಟ್ ಮಾಸ್ಟರ್ ಚಂದ್ರಶೇಖರ, ತಾಯಿ ಕಲಾವತಿ, ಸಹೋದರ ವಚನ್ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿಯಾಗಿ ಶ್ರೀಕಾಂತ್ ಮಾವಿನಕಟ್ಟೆ ಆಯ್ಕೆ

ಭಾರತೀಯ ಜನತಾ ಪಕ್ಷದ ಜಿಲ್ಲಾ ಯುವ ಮೊರ್ಚಾ  ಕಾರ್ಯದರ್ಶಿಯಾಗಿ ಯುವ ನಾಯಕ  ಶ್ರೀಕಾಂತ್ ಮಾವಿನಕಟ್ಟೆ ಆಯ್ಕೆಯಾಗಿದ್ದಾರೆ.

ರಾಷ್ಟ್ರಪತಿ ಭೇಟಿ ಮಾಡುವ ಭಾಗ್ಯ ಪಡೆದ ಕೊಲ್ಲಮೊಗ್ರದ ಮೀನಾಕ್ಷಿ ಹಾಗೂ ವನಿತಾ

ಕೊಲ್ಲಮೊಗ್ರದ ಇಬ್ಬರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಆದಿವಾಸಿ ಮಹಿಳೆಯರಿಗೆ ರಾಷ್ಟ್ರಪತಿ ಭೇಟಿ ಮಾಡುವ ಭಾಗ್ಯ ಒದಗಿಬಂದಿದ್ದು ವಿಮಾನವೇರುವ ಸಂಭ್ರಮದಲ್ಲಿದ್ದಾರೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ "ಸಂಜೀವಿನೀ"ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳ್ಳಲಿದೆ. ಮಾ.1 ರಂದು ರಾಷ್ಟ್ರಪತಿಗಳ ಭೇಟಿ ಹಾಗೂ ಅಮೃತ್ ಉದ್ಯಾನವನಕ್ಕೆ ಭೇಟಿ ನೀಡಲು ಇವರಿಗೆ...

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು . ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಮಾ.04 ರಿಂದ ಏ.03 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಕೆಳಗಿನ ಲಿಂಕನ್ನು ಬಳಸಿ ಅರ್ಜಿ ಸಲ್ಲಿಸಬೇಕು http://kea.kar.nic.in

ಗುತ್ತಿಗಾರು : ಅಪಘಾತದಲ್ಲಿ ಶಿವರಾಮ ಗೌಡ ಮೃತ್ಯು ಪ್ರಕರಣ – ತಾನು ಮೃತಪಟ್ಟಾಗ ಪುತ್ತೂರಿನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸುವಂತೆ ಬರೆದಿಟ್ಟಿದ್ದ ಡೈರಿ ಪತ್ತೆ

ಗುತ್ತಿಗಾರಿನ ಬಾಕಿಲ ಬಳಿ ಕೆಎಸ್‌ ಆರ್ ಟಿಸಿ ಬಸ್ ಹಾಗೂ ಸ್ಕೂಟಿ ನಡುವೆ ಫೆ.11ರಂದು ಅಪಘಾತ ನಡೆದಿತ್ತುಮ. ಸ್ಕೂಡಿ ಚಲಾಯಿಸುತ್ತಿದ್ದ ಶಿವರಾಮ ಗೌಡ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಸಹಸವಾರೆಯಾಗಿದ್ದ ಅವರ ಪುತ್ರಿ ತೀವ್ರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವರಾಮ ಗೌಡರು ಮೃತಪಟ್ಟಿದ್ದರಿಂದ ಅವರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾಗ ಖಾಸಗಿ ಡೈರಿ ಪತ್ತೆಯಾಗಿತ್ತು. ಅದನ್ನು ತೆರೆದು...

ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ

ಸಮಿತಿಯ ಗೌರವಾಧ್ಯಕ್ಷರಾಗಿ ಡಿ.ವಿ. ಸದಾನಂದ ಗೌಡ, ಕುಂಟಾರು ರವೀಶ್ ತಂತ್ರಿಅಧ್ಯಕ್ಷರಾಗಿ ಶಿವಪ್ರಸಾದ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕಣೆಮರಡ್ಕ ಆಯ್ಕೆ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಇದೀಗ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದ್ದು ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಭಾನುವಾರ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಿತು.ಸಮಿತಿಯ ಗೌರವಾಧ್ಯಕ್ಷರಾಗಿ ಮಾಜಿ ಮುಖ್ಯ ಮಂತ್ರಿ, ಸಂಸದ ಡಿ.ವಿ...

ಬಾಕಿಲ : ಸ್ಕೂಟಿ, ಬಸ್ ಅಪಘಾತ – ತಂದೆ ಮೃತ್ಯು – ಮಗಳ ಕಾಲು ಜಖಂ

ಗುತ್ತಿಗಾರು ಬಾಕಿಲ ಎಂಬಲ್ಲಿ ಸುಳ್ಯದಿಂದ ಗುತ್ತಿಗಾರು ಕಡೆ ಬರುತ್ತಿದ್ದ ಸ್ಕೂಟಿಗೆ ಎದುರಿನಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಗುದ್ದಿದ ಪರಿಣಾಮ ಸ್ಕೂಟಿ ಸವಾರ ಮೃತಪಟ್ಟ ಘಟನೆ ಇಂದು ನಡೆದಿದೆ. ನಡುಗಲ್ಲು ನಿವಾಸಿ ಶಿವರಾಮ ಗೌಡ (70) ಮೃತಪಟ್ಟ ದುರ್ದೈವಿ. ಹಿಂಬದಿ ಕುಳಿತಿದ್ದ ಮಗಳು ನವ್ಯಶ್ರೀ ಯ ಕಾಲಿಗೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು...

‘ಸಾಂಸ್ಕೃತಿಕ ಸಂಗತಿಗಳು ಲೋಕಾನುಭವ ಹೆಚ್ಚಿಸುತ್ತವೆ’ರಂಗಮನೆ ರಂಗಸಂಭ್ರಮ ಸಮಾರೋಪದಲ್ಲಿ ಡಾ.ಬಿ.ಎ.ಕುಮಾರ ಹೆಗ್ಡೆ

    ಸೋಶಿಯಲ್ ಮೀಡಿಯಾದ ಅತಿ ಬಳಕೆ ಮಕ್ಕಳ ಶೈಕ್ಷಣಿಕ ಬದುಕಿಗೆ ಮಾರಕವಾಗಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಂಸ್ಕೃತಿಕ ಚಟುವಟಿಕೆಗಳು ಅತ್ಯಗತ್ಯ. ಅಲ್ಲದೆ ನಾಟಕ, ಯಕ್ಷಗಾನ, ಸಂಗೀತ, ನೃತ್ಯ ಜಾನಪದ ಮುಂತಾದುವು ನಮ್ಮ ಲೋಕಾನುಭವನ್ನು ಹೆಚ್ಚಿಸಲು ಸಹಕಾರಿ" ಎಂದು ಎಸ್.ಡಿ.ಎಂ.ಸ್ವಾಯತ್ತ ಕಾಲೇಜು ಉಜಿರೆ ಇಲ್ಲಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ ಹೇಳಿದರು.     ಅವರು ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾ...

ಸುಳ್ಯ : ಮುಖ್ಯರಸ್ತೆಯಲ್ಲಿ ಲಾರಿಯಡಿಗೆ ಬಿದ್ದು ಮಹಿಳೆ ಸಾವು

ಸುಳ್ಯ ಮುಖ್ಯರಸ್ತೆಯ ಬಸ್ಸು ನಿಲ್ದಾಣದ ಬಳಿಯಲ್ಲಿ ಪಾದಚಾರಿ ಮಹಿಳೆಯೋರ್ವರು ಲಾರಿ ಅಡಿಗೆ ಬಿದ್ದು ಮೃತಪಟ್ಟ ಘಟನೆ ಇದೀಗ ವರದಿಯಾಗಿದೆ. ಮೃತ ಪಟ್ಟ ಮಹಿಳೆಯ ಗುರುತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ದೇವ ದುರ್ಲಭ ಕಾರ್ಯಕರ್ತರ ಹೈ ವೋಲ್ಟೇಜ್ ಮೀಟಿಂಗ್ – ಕಾರ್ಯಕರ್ತರು, ನಾಯಕರ ತೀರ್ಮಾನಕ್ಕೆ ಜಿಲ್ಲಾ ನಾಯಕರು ಶಾಕ್ – ನಿಯೋಜಿತ ಅಧ್ಯಕ್ಷರ ಬಗ್ಗೆ ಕಾರ್ಯಕರ್ತರ ಅಸಮಾಧಾನವೇನು ?

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಸತೀಶ್ ಕುಂಪುಲ ಆಯ್ಕೆಯಾಗಿ ಪದಗ್ರಹಣ ಸಮಾರಂಭ ನಡೆದ ಕೆಲ ದಿನಗಳ ನಂತರ ಮಂಡಲ ಸಮಿತಿಗಳಿಗೆ ನೂತನ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿತ್ತು. ಮಂಡಲ ಸಮಿತಿಗೆ ಅಧ್ಯಕ್ಷರ ನೇಮಕವಾಗುತ್ತಿದ್ದಂತೆ ಸುಳ್ಯದಲ್ಲಿ ಕಾರ್ಯಕರ್ತರಿಂದ ಭಾರಿ ಆಕ್ರೋಶವೇ ವ್ಯಕ್ತವಾಗಿದೆ. ಸುಳ್ಯದ ದೇವದುರ್ಲಭ ಕಾರ್ಯಕರ್ತರು ಇಂದು ಪಕ್ಷದ ಕಛೇರಿಯಲ್ಲಿ ತುರ್ತು ಸಭೆ ನಡೆಸಿ...

ಬಿಜೆಪಿ ಕಛೇರಿಗೆ ಬೀಗ ಜಡಿದ ಕಾರ್ಯಕರ್ತರು – ಶಾಸಕಿ ಭಾಗೀರಥಿ ಮುರುಳ್ಯ ಪ್ರತಿಕ್ರಿಯೆ

ಸುಳ್ಯ ಬಿಜೆಪಿಗೆ ನೂತನ ಅಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಕಾರ್ಯಕರ್ತರು ಗರಂ ಆಗಿದ್ದು ಪ್ರಮುಖರ ಸಭೆ ಬಳಿಕ ಕಛೇರಿಗೆ ಬೀಗ ಜಡಿದು ಘೋಷಣೆ ಕೂಗಿದ್ದು ಮತ್ತೊಮ್ಮೆ ಪ್ರಸ್ತುತ ಕಾರ್ಯನಿವಹಿಸುತ್ತಿರುವ ನಾಯಕರೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಆಗ್ರಹಿಸುತ್ತಿದ್ದರು. ಈ ಕುರಿತಂತೆ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯರನ್ನು ಸಂಪರ್ಕಿಸಿ ವಿಚಾರಿಸಿದಾಗ ಪಕ್ಷ ಸಂಘಟನೆ ನೆಲೆಯಲ್ಲಿ ಓರ್ವರನ್ನು ನೇಮಕ ಮಾಡಲಾಗಿದೆ. ಅಲ್ಲದೇ ಇದೀಗ...

ಬಿಜೆಪಿ ನೂತನ ಅಧ್ಯಕ್ಷರ ನೇಮಕ – ಪಕ್ಷದೊಳಗೆ ಭಿನ್ನಮತ ಸ್ಪೋಟ – ಅಸಹಕಾರ ಚಳುವಳಿಗೆ ನಿರ್ಧರಿಸಿದ ಕಾರ್ಯಕರ್ತರಿಂದ ಕಛೇರಿಗೆ ಬೀಗ ಮುದ್ರೆ!

ಸುಳ್ಯ: ಸುಳ್ಯ ಬಿಜೆಪಿ ಮಂಡಲ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ವೆಂಕಟ್ ವಳಲಂಬೆ ಅವರನ್ನು ನೇಮಕ‌ ಮಾಡಿರುವ ಹಿನ್ನಲೆಯಲ್ಲಿ ಹಾಲಿ ಇರುವ ಮಂಡಲ ಸಮಿತಿ ಹಾಗೂ ಕೋರ್ ಕಮಿಟಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಪ್ರಮುಖರ ಸಭೆಯ ಬಳಿಕ ಕಾರ್ಯಕರ್ತರು ಅಸಹಕಾರ ಚಳುವಳಿ ನಡೆಸುವುದಾಗಿ ತೀರ್ಮಾನಿಸಿದಲ್ಲದೇ ಇದೀಗ ಕಛೇರಿಗೆ ಬೀಗ ಮುದ್ರೆಯನ್ನು ಜಡಿದಿದ್ದಾರೆ.

ಮಂಡೆಕೋಲು : ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆಯಲಿರುವ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಮೃತ ಸಹಕಾರ ಸದನದಲ್ಲಿ ಜ.29ರಂದು ನಡೆಯಿತು.ಶಿಬಿರದ ಉದ್ಘಾಟನೆಯನ್ನು ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ನ ಅಧ್ಯಕ್ಷರಾದ...

ಕಂದ್ರಪ್ಪಾಡಿ ಶಾಲಾ ಶತಮಾನೋತ್ಸವದ ಅಂಗವಾಗಿ ಕ್ರೀಡೋತ್ಸವ

ಕಂದ್ರಪ್ಪಾಡಿ ಶಾಲಾ ಶತಮಾನೋತ್ಸವದ ಪ್ರಯುಕ್ತ ಕ್ರೀಡೋತ್ಸವ ಕಾರ್ಯಕ್ರಮ ಜ.28 ರಂದು ಕಂದ್ರಪ್ಪಾಡಿ ಶಾಲಾ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ಕೆನಡಾದಲ್ಲಿ ಉದ್ಯಮಿಯಾಗಿರುವ ಉಮೇಶ್ ಮುಂಡೋಡಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ ಕಂದ್ರಪ್ಪಾಡಿ ವಹಿಸಿದ್ದರು. ವೇದಿಕೆಯಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸಮಿತಿಯ ಗೌರವಾಧ್ಯಕ್ಷ ಕುಶಾಲಪ್ಪ ಮಾಸ್ಟರ್ ರುದ್ರಚಾಮುಂಡಿ, ಕ್ರೀಡಾ ಸಮಿತಿ...

ಬಂಗ್ಲೆಗುಡ್ಡೆ ಶಾಲೆಯಲ್ಲಿ ಫೆ.10ರಂದು ಪತ್ರಕರ್ತರ ಗ್ರಾಮ ವಾಸ್ತವ್ಯ – ಶಾಸಕರ ನೇತೃತ್ವದಲ್ಲಿ ಪೂರ್ವಭಾವಿ ಸಭೆ 

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್, ಜಿಲ್ಲಾಡಳಿತ, ತಾಲೂಕು ಆಡಳಿತ, ಹರಿಹರ, ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಊರವರ ಸಹಕಾರದಲ್ಲಿ ಫೆ.10ರಂದು ಕೊಲ್ಲಮೊಗ್ರದಲ್ಲಿ ನಡೆಯುವ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಪೂರ್ವಭಾವಿ ಸಭೆ ಜ.29 ರಂದು ಕೊಲ್ಲಮೊಗ್ರದ ಮಯೂರ ಕಲಾಮಂದಿರದಲ್ಲಿ ನಡೆಯಿತು. ಗ್ರಾಮ...

ವಿಜಯಪುರ : ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಸ್ವೀಕರಿಸಿದ ಶೈಲೇಶ್ ಅಂಬೆಕಲ್ಲು

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ವಿಜಯಪುರ ಜಿಲ್ಲಾ ಹಾಗೂ ತಾಲೂಕು ಘಟಕ ಮುದ್ದೇಬಿಹಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ, ಸಾಧನಾ ಮಹಿಳಾ ಒಕ್ಕೂಟ ಮುದ್ದೇಬಿಹಾಳ, ಧರ್ಮಯುದ್ಧ ದಿನ ಪತ್ರಿಕಾ ಬಳಗ ಮುದ್ದೇಬಿಹಾಳ ಇವರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತ್ಯೋತ್ಸವದ ಪ್ರಯುಕ್ತ ನೀಡುವ ಸ್ವಾಮಿ ವಿವೇಕಾನಂದ ರಾಷ್ಟ್ರ, ರಾಜ್ಯ ಸದ್ಭಾವನಾ ಪ್ರಶಸ್ತಿಗೆ...

ಪುರ್ಸ ಕಟ್ಟುನ ಸಾಕ್ಷ್ಯಚಿತ್ರ ಪ್ರತಿಷ್ಠಿತ ಜೈಪುರ ಚಲನಚಿತ್ರೋತ್ಸವಕ್ಕೆ ಆಯ್ಕೆ

ಡಾ.ಸುಂದರ ಕೇನಾಜೆ ಚಿತ್ರಕತೆ-ನಿರ್ದೇಶನ, ಭರತೇಶ ಅಲಸಂಡೆಮಜಲು ಹಾಗೂ ಡಾ.ವಿಶ್ವನಾಥ ಬದಿಕಾನ ಇವರು ನಿರ್ಮಾಪಕರಾಗಿರುವ "ಪುರ್ಸ ಕಟ್ಟುನ, ಇನಿ- ಕೋಡೆ- ಎಲ್ಲೆ" ಸಾಕ್ಷ್ಯಚಿತ್ರ ಮತ್ತೆ ಇನ್ನೊಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಈ ಬಾರಿ ಇದು ಜಗತ್ತಿನ ಅತ್ಯಂತ ದೊಡ್ಡ ಹಾಗೂ ಪ್ರತಿಷ್ಠಿತ ಜೈಪುರ ಚಲನಚಿತ್ರೋತ್ಸವಕ್ಕೆ ಅರ್ಹತೆ ಪಡೆದಿದೆ. ಭಾಗವಹಿಸಿದ 82 ದೇಶಗಳ 2971 ಸಿನಿಮಾ ಮತ್ತು ಸಾಕ್ಷ್ಯಚಿತ್ರಗಳಲ್ಲಿ...

ಕಂದ್ರಪ್ಪಾಡಿ : ಶಾಲಾ ಶತಮಾನೋತ್ಸವದ ಆಮಂತ್ರಣ ಬಿಡುಗಡೆ

ಕಂದ್ರಪ್ಪಾಡಿ ಸ.ಹಿ.ಪ್ರಾ.ಶಾಲೆ ಶತಮಾನೋತ್ಸವದ ಸಂಭ್ರಮಲ್ಲಿದ್ದು ಇಂದು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗೌರವಾಧ್ಯಕ್ಷ ಕುಶಾಲಪ್ಪ ಮಾಸ್ತರ್ ರುದ್ರಚಾಮುಂಡಿ, ಪ್ರ.ಕಾರ್ಯದರ್ಶಿ ಲಿಂಗಪ್ಪ ಗೌಡ ಚಿತ್ತಡ್ಕ, ಮುಖ್ಯ ಶಿಕ್ಷಕಿ ಶ್ರೀಮತಿ ವಾಣಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ರಾಜ್ ಹಿರಿಯಡ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ಕಂದ್ರಪ್ಪಾಡಿ,...

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಅಂಗವಾಗಿ ವಳಲಂಬೆಯಲ್ಲಿ ಧಾರ್ಮಿಕ ಸಭೆ ಹಾಗೂ ಕರಸೇವಕರಿಗೆ ಸನ್ಮಾನ

ಜ.22 ರಂದು ಅಯೋಧ್ಯೆಯಲ್ಲಿ ನಡೆದ ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಅಂಗವಾಗಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭೆ ಹಾಗೂ ಕರಸೇವಕರಿಗೆ ಸನ್ಮಾನ ನೆರವೇರಿತು. ಕಾರ್ಯಕ್ರಮದಲ್ಲಿ ಅಯೋಧ್ಯೆಯಲ್ಲಿ ಈ ಹಿಂದೆ ನಡೆದ ಹೋರಾಟಗಳ ಬಗ್ಗೆ ನೆನಪಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ...

ಹೂವುಗಳ ರಾಶಿಯಲ್ಲಿ ಕಂಗೊಳಿಸಿದ ಜಲದುರ್ಗಾದೇವಿ – ಪ್ರತಿ ವರ್ಷ ಹೂವಿನ ಅಲಂಕಾರ ಮಾಡುತ್ತಿರುವ ಪೆರುವಾಜೆಯ ಭಕ್ತ ಉಮೇಶ್‌ ಕೊಟ್ಟೆಕಾೖ

ಪೆರುವಾಜೆ : ವಾರ್ಷಿಕ ಜಾತ್ರೆ ಮತ್ತು ಬ್ರಹ್ಮರಥೋತ್ಸವದ ಸಂಭ್ರಮದ ವೇಳೆ ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯ ಹೂವಿನ ರಾಶಿ ಹೊದ್ದು ಭಕ್ತ ಸಮೂಹದ ಗಮನ ಸೆಳೆಯಿತು..! ಗರ್ಭಗುಡಿ, ಗಣಪತಿ ಗುಡಿ, ಒಳಾಂಗಣ, ಹೊರಾಂಗಣ ಗೋಡೆಗಳು, ಛಾವಣಿ ಹೀಗೆ ದೇವಾಲಯದ ಎಲ್ಲ ಭಾಗಗಳೂ ಬಣ್ಣ- ಬಣ್ಣದ, ಬಗೆ-ಬಗೆ ಹೂವುಗಳು ನಳನಳಿಸಿ ಅಬ್ಬಾ..ಅಬ್ಬಾ....

ಪೆರುವಾಜೆ : ಉಳ್ಳಾಕುಲು-ಮೈಷಂತಾಯ, ವ್ಯಾಘ್ರಚಾಮುಂಡಿ ದೈವದ ನೇಮಸ್ವರ್ಣದ ಸತ್ತಿಗೆ, ಬೆಳ್ಳಿಯ ತಲೆಪಟ್ಟ, ಸ್ವರ್ಣದ ಹೂ, ಬೆಳ್ಳಿಯ ಕೋರೆ ದಾಡೆ ಸಮರ್ಪಣೆ

ಪೆರುವಾಜೆ : ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಅಂಗವಾಗಿ ರವಿವಾರ ದೈವಗಳ ನೇಮ ನಡೆಯಿತು. ಜ.21 ರಂದು ಬೆಳಗ್ಗೆ ಮಹಾಗಣಪತಿ ಹೋಮ, ಕಲಶ ಪೂಜೆ, ಶ್ರೀ ಉಳ್ಳಾಕುಲು ಮತ್ತು ಮೈಷಂತಾಯ ದೈವಗಳ ನೇಮ, ಪ್ರಸಾದ ವಿತರಣೆ ನಡೆಯಿತು. ಮದ್ಯಾಹ್ನ ಶ್ರೀ ದೇವರಿಗೆ ಸಂಪ್ರೋಕ್ಷಣೆ, ಕಲಶಾಭಿಷೇಕ,...

ಜ.22 : ಸುಳ್ಯ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಆದೇಶ

ಅಯೋಧ್ಯೆಯಲ್ಲಿ ಜ.22 ರಂದು ಶ್ರೀ ರಾಮ ಮಂದಿರ ಉದ್ಘಾಟನೆ ಸಮಾರಂಭ ನಡೆಯಲಿರುವ ಕಾರಣ ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಲ್ಲಾ ಮುನ್ನಚ್ಚರಿಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರದ ಸುತ್ತೋಲೆ ಹೊರಡಿಸಿದೆ. ಇದರ ಅನ್ವಯ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳು ಕೋಮು ಸೂಕ್ಷ್ಮ ಪ್ರದೇಶಗಳಾಗಿರುವುದರಿಂದ...

ಪೆರುವಾಜೆ : ಜಾತ್ರೋತ್ಸವ – ಜಲದುರ್ಗಾದೇವಿಯ ದರ್ಶನ ಬಲಿ ಹಾಗೂ ಬ್ರಹ್ಮರಥೋತ್ಸವದ ನೇರ ಪ್ರಸಾರ

ಪೆರುವಾಜೆ ಜಲದುರ್ಗಾದೇವಿಯ ಜಾತ್ರೋತ್ಸವದ ಅಂಗವಾಗಿ ದರ್ಶನ ಬಲಿ ಇದೀಗ ಆರಂಭಗೊಂಡಿದ್ದು ಒಳಾಂಗಣ ಮತ್ತು ಡ್ರೋನ್ ನಲ್ಲಿ ಸೆರೆಹಿಡಿದ ಹೊರಾಂಗಣಗಳ ಚಿತ್ರಣಗಳು ನೇರ ವೀಕ್ಷಿಸಲು ನಿಮ್ಮ ಅಮರ ಸುಳ್ಯ ಸುದ್ದಿ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://www.youtube.com/live/1CKkjQ-zaLk?feature=shared

ಪೆರುವಾಜೆ : ದರ್ಶನ ಬಲಿ – ಬಟ್ಟಲು ಕಾಣಿಕೆ : ಹರಿದು ಬಂದ ಭಕ್ತ ಸಾಗರ

*ಪೆರುವಾಜೆ*: ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಗುರುವಾರ ಶ್ರೀ ದೇವರ ಪೇಟೆ ಸವಾರಿ ನಡೆಯಿತು. ದೇವಸ್ಥಾನದ ತಂತ್ರಿ ಕೆಮ್ಮಿಂಜೆ ನಾಗೇಶ್ ತಂತ್ರಿ ಮಾರ್ಗದರ್ಶನದಲ್ಲಿ ಕೆಮ್ಮಿಂಜೆ ಕಾರ್ತಿಕ್ ತಂತ್ರಿ ನೇತೃತ್ವದಲ್ಲಿ ಬೆಳಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು. ದೇವರು ಬಲಿ ಹೊರಟು...

ಪೆರುವಾಜೆ : ಜಲದುರ್ಗಾದೇವಿಯ ಬಲಿಬಿಂಬಕ್ಕೆ ಚಿನ್ನದ ಕವಚ ಸಮರ್ಪಣೆ

ಪೆರುವಾಜೆ : ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಗುರುವಾರ ಬೆಳಗ್ಗೆ ಶ್ರೀ ದೇವಿಯ ಬಲಿಬಿಂಬಕ್ಕೆ ಚಿನ್ನದ ಕವಚ, ಉಳ್ಳಾಕುಲು ದೈವಕ್ಕೆ ಬೆಳ್ಳಿಯ ಆಭರಣ ಸಮರ್ಪಣೆ ನಡೆಯಿತು. ಶತಮಾನದ ಬಳಿಕ ದೇವಳಕ್ಕೆ ಬ್ರಹ್ಮರಥ ಸಮರ್ಪಣೆಯಾಗಿದ್ದು ಜ.19ರಂದು ಬ್ರಹ್ಮ ರಥೋತ್ಸವ ನಡೆಯಲಿದೆ‌. ಈ ಪ್ರಯುಕ್ತ ಸುಮಾರು...

ಪೆರುವಾಜೆ : ಹಸಿರು ಹೊರೆಕಾಣಿಕೆ ಮೆರವಣಿಗೆ

ಮನ ಸೆಳೆದ‌ ಕಲಾ ವೈಭವ : ಮೂರುವರೆ ಕಿ.ಮೀ.ದೂರ ಸಾಗಿದ ಮೆರವಣಿಗೆ ಪೆರುವಾಜೆ: ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಮಂಗಳವಾರ ಬೆಳ್ಳಾರೆಯಿಂದ ಪೆರುವಾಜೆ ಶ್ರೀ ಕ್ಷೇತ್ರಕ್ಕೆ ತನಕ‌ ವೈಭವದ ಹಸುರು ಹೊರೆಕಾಣಿಕೆ ನಡೆಯಿತು. ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಮುಂಭಾಗದಿಂದ ಹೊರೆಕಾಣಿಕೆ...

ಹೃದಯಾಫಾತ ಹೇಗೆ ಸಂಭವಿಸುತ್ತದೆ ? – ಹೃದಯಾಘಾತ ಸೂಚಕ ಕಿಣ್ವಗಳು ಅಂದರೇನು ?

ಹೃದಯ ಎನ್ನುವುದು ನಮ್ಮ ದೇಹದ ಅತೀ ಪ್ರಾಮುಖ್ಯವಾದ ಅಂಗವಾಗಿದ್ದು, ದಿನದ 24 ಗಂಟೆಯೂ ನಿರಂತರವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಇಂತಹಾ ಹೃದಯಕ್ಕೆ ಆಫಾತವಾಗಿ ಹೃದಯದ ಸ್ನಾಯುಗಳಿಗೆ ರಕ್ತದ ಪೂರೈಕೆ ನಿಂತು ಹಾನಿಯಾದಾಗ, ರಕ್ತದಲ್ಲಿ ಕೆಲವೊಂದು ಕಿಣ್ವಗಳು ಏರಿಕೆಯಾಗುತ್ತದೆ. ಹೃದಯದ ಘಾಸಿಗೊಂಡ ಸ್ನಾಯುಗಳಿಂದ ಬಿಡುಗಡೆಯಿಂದ ಈ ಕಿಣ್ವಗಳನ್ನು ಕಾರ್ಡಿಯಾಕ್ ಮಾರ್ಕರ್ ಅಥವಾ ಹೃದಯಾಘಾತ ಸೂಚಕ ಕಿಣ್ವಗಳು ಎಂದೂ...

ಪೆರುವಾಜೆ : ಶಿಲ್ಪಿಗಳಿಂದ ದೇವಾಲಯಕ್ಕೆ ನೂತನ ರಥ ಹಸ್ತಾಂತರ

https://youtu.be/mZnI-f0keyc?si=ywpFwxC-aFxy-lHd ಪೆರುವಾಜೆ : ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವಕ್ಕೆ ಜ.15 ರಂದು ಚಾಲನೆ ದೊರೆಯಿತು. ಬೆಳಗ್ಗೆ ನೂತನ ಬ್ರಹ್ಮರಥವನ್ನು ರಥ ಶಿಲ್ಪಿಗಳು ಶ್ರೀ ಕ್ಷೇತ್ರಕ್ಕೆ ಹಸ್ತಾಂತರಿಸಿದರು.ರಥ ಶಿಲ್ಪಿಗಳ ಪರವಾಗಿ ಶಿವಕುಮಾರ್ ಶರ್ಮ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ರಥ ಶಿಲ್ಪಿ ಹರೀಶ್ ಆಚಾರ್ಯ...

ಸುಳ್ಯದ ಕಾಂಗ್ರೆಸ್ಸಿಗರದು ನೈಜ ರಾಮ ಭಕ್ತಿಯ ಅನಾವರಣವೋ ಅಲ್ಲ ಹಿಂದುತ್ವದ ಅನಿವಾರ್ಯತೆಯೋ : ಸುಳ್ಯ ಮಂಡಲ ಬಿಜೆಪಿ ಪ್ರಶ್ನೆ

ಕಾಂಗ್ರೆಸ್ಸಿನ ಹೈಕಮಾಂಡ್ ರಾಮಮಂದಿರದ ಉದ್ಘಾಟನೆಗೆ ಹೋಗುವುದಿಲ್ಲವೆಂದು ಈಗಾಗಲೇ ಘೋಷಿಸಿದ್ದರೂ ಸುಳ್ಯದ ಕಾಂಗ್ರೆಸ್ ನಾಯಕರು ರಾಮಮಂದಿರದ ಉದ್ಘಾಟನೆಯ ದಿವಸ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ದೇವಸ್ಥಾನಗಳಲ್ಲಿ ಸೇರಿ ಪೂಜೆ ಹಾಗೂ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬೇಕೆಂದು ಸುಳ್ಯದ ಕಾಂಗ್ರೆಸಿಗರು ಕರೆ ನೀಡಿರುವುದು ಅಭಿನಂದನೀಯ ಎಂದು ಸುಳ್ಯ ಬಿಜೆಪಿ ಪ್ರತಿಕ್ರಿಯೆಸಿದೆಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರು ಹಿಂದಿನಿಂದಲೂ ರಾಮನ ಅಸ್ತಿತ್ವವನ್ನು ಪ್ರಶ್ನೆ ಮಾಡುತ್ತ ರಾಮನ ವಿರುದ್ಧವಾಗಿ,...

ನೀವು ಉದ್ಯೋಗ ಹುಡುಕುತ್ತಿದ್ದೀರಾ – ಇಲ್ಲಿದೆ ಸುವರ್ಣಾವಕಾಶ

ನೀವು ಉದ್ಯೋಗ ಹುಡುಕುತ್ತಿದ್ದೀರಾ, ಪಾರ್ಟ್ ಟೈಮ್ ಹಾಗೂ ಫುಲ್ ಟೈಮ್ ಜಾಬ್ ಮಾಡಲು ನಾವು ನಿಮಗೆ ಸುವರ್ಣಾವಕಾಶ ಒದಗಿಸುತ್ತಿದ್ದೇವೆ.ಅಮರ ಸುಳ್ಯ ಸುದ್ದಿ ವಾರಪತ್ರಿಕೆ, ಅಮರ ಸುದ್ದಿ ವೆಬ್ಸೈಟ್ ಹಾಗೂ ಯೂಟ್ಯೂಬ್ ಲೈವ್ ವಾಹಿನಿಯಲ್ಲಿ ಫೀಲ್ಡ್ ವರ್ಕ್ ಮಾಡಲು ಆಸಕ್ತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ನಿಮ್ಮೂರಿನಲ್ಲಿಯೇ ಇದ್ದು ಕಾರ್ಯನಿರ್ವಹಿಸಬಹುದು. ಆಸಕ್ತರು ನಿಮ್ಮ ಬಯೋಡೇಟಾ ಕಳುಹಿಸಿ...

ಸುಳ್ಯ ಜಾತ್ರೆ ಸಂಪನ್ನ – ಚೆನ್ನಕೇಶವ ದೇವರ ರಥೋತ್ಸವ – ಪ್ರಪ್ರಥಮ ಬಾರಿಗೆ ಅಮರ ಸುದ್ದಿಯಲ್ಲಿ ನೇರಪ್ರಸಾರ

ಸುಳ್ಯ ಜಾತ್ರೋತ್ಸವ ವಿಜೃಂಭಣೆಯಿಂದ ಸಾಂಗವಾಗಿ ನೆರವೇರಿದ್ದು, ರಾತ್ರಿ 2ಗಂಟೆ ವೇಳೆಗೆ ಶ್ರೀ ಚೆನ್ನಕೇಶವ ದೇವರ ರಥೋತ್ಸವದೊಂದಿಗೆ ಸುಳ್ಯ ಜಾತ್ರೆ ಸಂಪನ್ನಗೊಂಡಿತು. ಸಾವಿರಾರು ಭಕ್ತಾಧಿಗಳು ವೈಭವ ಶ್ರೀ ದೇವರ ಜಾತ್ರೋತ್ಸವಕ್ಕೆ ಸಾಕ್ಷಿಯಾದರು. ನೇರ ಪ್ರಸಾರ : ಪ್ರಪ್ರಥಮ ಬಾರಿಗೆ ಅಮರ ಸುದ್ದಿ ಯೂಟ್ಯೂಬ್ ವಾಹಿನಿಯಲ್ಲಿ ಜಾತ್ರೋತ್ಸವದ ನೇರಪ್ರಸಾರ ಮಾಡಿದ್ದು ನಿರೀಕ್ಷೆಗೂ ಮೀರಿ ಜನ ಪ್ರೋತ್ಸಾಹಿಸಿದ್ದಾರೆ. ಲೈವ್ ವೀಕ್ಷಿಸಲು...

ಕಲ್ಲುಗುಂಡಿ : ಅಕ್ಕಿ ಗೋಣಿಯಲ್ಲಿ ಭಸ್ಮದ ಕಟ್ಟು ಪತ್ತೆ

ಕಲ್ಲುಗುಂಡಿಯಿಂದ ಗ್ರಾಹಕರೊಬ್ಬರು ಖರೀದಿಸಿದ ಸಚಿನ್ ಟ್ರೇಡಿಂಗ್ (ಜಯ) ಕಂಪೆನಿಯ ಕುಚ್ಚುಲು ಅಕ್ಕಿಯಲ್ಲಿ ಭಸ್ಮದ ಕಟ್ಟು ಕಂಡುಬಂದಿರುವ ಘಟನೆ ಜ.10 ರಂದು ನಡೆದಿದೆ. ಕಲ್ಲುಗುಂಡಿಯ ಅಂಗಡಿಯೊಂದರಿಂದ ಚೆಂಬು ಗ್ರಾಮದ ಶಿವಪ್ರಕಾಶ್ ಎಂಬವರು ಖರೀದಿಸಿದ 25 ಕೆ.ಜಿ. ಅಕ್ಕಿಗೋಣಿಯಲ್ಲಿ ಬಿಳಿ ಬಣ್ಣದ ಭಸ್ಮ ಹಾಗೂ ಅಕ್ಕಿ ಕಂಡುಬಂದಿದೆ. ಊಟ ಮಾಡುವ ಅಕ್ಕಿಯಲ್ಲಿಯೇ ಹೀಗಾದರೇ ಬೇರೆ ಆಹಾರಗಳ ಸುರಕ್ಷತೆಗೆ ಹೇಗೆ....

ಸುಳ್ಯ : ಗುಡುಗು ಸಹಿತ ಭಾರಿ ಮಳೆ – ಜಾತ್ರೆಗೆ ಆಗಮಿಸಿದ ವ್ಯಾಪಾರಸ್ಥರಿಗೆ ಸಂಕಷ್ಟ

ಸುಳ್ಯದಲ್ಲಿಂದ ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಈ ಅಕಾಲಿಕ ಮಳೆ ಸುಳ್ಯ ಜಾತ್ರೆಗೆ ಆಗಮಿಸಿದ್ದ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕಿನಾದ್ಯಂತ ಮಳೆ ಸುರಿದಿದ್ದು ಅಡಿಕೆ ಕೃಷಿಕರ ಪಾಡು ಹೇಳತೀರದಾಗಿದೆ. ಕಡಿಮೆ ಫಸಲಿನಿಂದಾಗಿ ಕಂಗೆಟ್ಟಿದ್ದ ರೈತ ಇದ್ದ ಅಡಿಕೆಯನ್ನು ಒಣಗಿಸಲು ಹರಸಾಹಸ ಪಡುವಂತಾಗಿದೆ ಇದೀಗ ಅಲ್ಲದೆ ಸುಳ್ಯದಲ್ಲಿ ಭಾರಿ ಪ್ರಸಿದ್ದಿ ಪಡೆದ ಸುಳ್ಯ ಚೆನ್ನಕೇಶವ ದೇವರ...

ಜ.16 : ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಪ್ರಯುಕ್ತ ವಿಶೇಷ ಹಸಿರು ಹೊರೆಕಾಣಿಕೆ ಮೆರವಣಿಗೆ

ಪೆರುವಾಜೆ: ಪಂಜ ಸೀಮೆಯ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಪ್ರಯುಕ್ತ ಜ.16 ರಂದು ಹಸುರು ಹೊರೆಕಾಣಿಕೆ ಮೆರವಣಿಗೆ ವಿಶಿಷ್ಟ ರೀತಿಯಲ್ಲಿ ನೆರವೇರಲಿದೆ. ಜ.16 ರಂದು ಸಂಜೆ 3 ಗಂಟೆಗೆ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಬಳಿಯಿಂದ ಮೆರವಣಿಗೆಗೆ ಚಾಲನೆ ಸಿಗಲಿದೆ. ಸುಮಂಗಲಿಯರಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ...

ಪೆರುವಾಜೆ : ಬ್ರಹ್ಮರಥೋತ್ಸವ, ಜಾತ್ರೆ – ಭದ್ರತಾ ವ್ಯವಸ್ಥೆ ಕುರಿತಂತೆ ಸಭೆ : ಸ್ವಯಂಸೇವಕರ ಪಾತ್ರ ಹಿರಿದು ಶಾಸಕಿ ಭಾಗೀರಥಿ

ಪೆರುವಾಜೆ : ನೂರು ವರ್ಷಗಳ ಬಳಿಕ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಬ್ರಹ್ಮರಥೋತ್ಸವದ ಸಂಭ್ರಮ ಮನೆ ಮಾಡಿದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇದ್ದು ಭಕ್ತವೃಂದಕ್ಕೆ ಯಾವುದೇ ವ್ಯವಸ್ಥೆಗಳಲ್ಲಿ ಕುಂದು ಕೊರತೆ ಉಂಟಾಗದಂತೆ ಪ್ರತಿಯೊಬ್ಬರು ಸಮರ್ಪಣ ಭಾವದಿಂದ ಕೆಲಸ ನಿರ್ವಹಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ...

ಬ್ಯಾನರ್ ಹರಿದ ಪ್ರಕರಣಕ್ಕೆ ರೋಚಕ ತಿರುವು

ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ, ಸುಳ್ಯ ಆಟೋ ರಿಕ್ಷಾ ಸಂಘದ ವತಿಯಿಂದ ಅಳವಡಿಸಿದ್ದ ಬ್ಯಾನರ್‌‌ನ ಮದ್ಯಬಾಗವನ್ನು, ಯಾರೋ ಹರಿದು ತೆಗೆದುಕೊಂಡು ಹೋಗಿರುವ ಬಗ್ಗೆ ಜ.06ರಂದು ಆಟೊ ರಿಕ್ಷಾ ಸಂಘದ ಅದ್ಯಕ್ಷರು ಸುಳ್ಯ ಪೊಲೀಸ್‌‌ ಠಾಣೆಯಲ್ಲಿನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕೃತ್ಯವೆಸಗಿದವರ ಪತ್ತೆಗಾಗಿ ಪೋಲೀಸರು ಸುಳ್ಯದಲ್ಲಿರುವ ಸುಮಾರು 40 ಸಿಸಿ ಕ್ಯಾಮಾರಗಳ ಪೂಟೇಜ್‌‌ಗಳನ್ನು ಪರಿಶೀಲನೆ...

ಸುಳ್ಯ ಬ್ಯಾನರ್ ಹರಿದ ಪ್ರಕರಣ : ರಾಮ ಭಕ್ತರು ಹಾಗೂ ಹಿಂದು ಪರ ಸಂಘಟನೆಗಳಿಂದ ಪ್ರತಿಭಟನೆ ಆರಂಭ

ಸುಳ್ಯ ಖಾಸಗಿ ಬಸ್ಸ್ ನಿಲ್ದಾಣದ ಬಳಿಯಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚಲು ಸಂಘಟನೆಗಳು 24 ಗಂಟೆಗಳ ಗಡುವು ನೀಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ತಡವಾದ ಹಿನ್ನಲೆಯಲ್ಲಿ ಇದೀಗ ಪ್ರತಿಭಟನೆ ಪ್ರಾರಂಭವಾಗಿದೆ .

ರಾಮ ಮಂದಿರದ ಬ್ಯಾನರ್ ಹರಿದ ಪ್ರಕರಣ: ವಿವೇಕಾನಂದ ವೃತ್ತದ ಬಳಿಯಲ್ಲಿ ಹರಿದ ಬ್ಯಾನರ್ ತುಂಡು ಪತ್ತೆ – ಪೋಲೀಸರಿಂದ ತೀವ್ರ ವಿಚಾರಣೆ

ಸುಳ್ಯದ ಹಳೆ ಬಸ್ಸು ನಿಲ್ದಾಣದ ಬಳಿಯಲ್ಲಿ ಇಂದು ಮುಂಜಾನೆ ಕೆಲ ದಿನಗಳ ಹಿಂದೆ ಅಳವಡಿಸಲಾಗಿದ್ದ ಬ್ಯಾನರ್ ಹರಿದ ಪ್ರಕರಣ ಬೆಳಕಿಗೆ ಬಂದಿದ್ದು ಈ ಕುರಿತಂತೆ ಹಿಂದು ಸಂಘಟನೆಯ ನಾಯಕರು, ಕಾರ್ಯಕರ್ತರು ಹಾಗೂ ಹಿಂದೂ ಸಮಾಜದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕಿಡಿಗೇಡಿಗಳು ಹರಿದ ಬ್ಯಾನರ್ ತುಂಡು ವಿವೇಕಾನಂದ ವೃತ್ತದ ಬಳಿಯಲ್ಲಿ ಸಂಜೆ ವೇಳೆಗೆ ಪತ್ತೆಯಾದ ಘಟನೆ ವರದಿಯಾಗಿದೆ....

ಪೆರುವಾಜೆ : ನೂತನ ಬ್ರಹ್ಮರಥದ ಭೂಮಿ‌ ಸ್ಪರ್ಶ ಕಾರ್ಯಕ್ರಮರಥ ಬೀದಿಯಲ್ಲಿ ಪ್ರಾಯೋಗಿಕ ಸಂಚಾರ : ಭಕ್ತ ವೃಂದ ಪುಳಕ

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಸುಮಾರು 100 ವರ್ಷಗಳ ಬಳಿಕ ಬ್ರಹ್ಮರಥ ನಿರ್ಮಾಣಗೊಂಡಿದ್ದು ಜ.19 ರಂದು ಐತಿಹಾಸಿಕ ಬ್ರಹ್ಮರಥೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ನೂತನ ಬ್ರಹ್ಮರಥದ ಭೂಮಿ ಸ್ಪರ್ಶ ಕಾರ್ಯಕ್ರಮವು ಜ.5 ರಂದು ನೆರವೇರಿತು. ಬೆಳಗ್ಗೆ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಅವರ ನೇತೃತ್ವದಲ್ಲಿ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ...

ಬಳ್ಪ : ವಿದ್ಯುತ್ ಶಾಕ್ ಪವರ್ ಮ್ಯಾನ್ ಮೃತ್ಯು

ಮೆಸ್ಕಾಂ ನ ಪಂಜ ಶಾಖೆಯ ಪವರ್ ಮ್ಯಾನ್ ಗೆ ಬಳ್ಪ ಗ್ರಾಮದ ಪಾದೆ ಸಮೀಪ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಮೃತಪಟ್ಟ ಪವರ್ ಮ್ಯಾನ್ ನನ್ನು ಹಾಸನ ಹೊಳೆನರಸಿಪುರ ಮೂಲದ ರಘು (33) ಎಂದು ಗುರುತಿಸಲಾಗಿದೆ. ವಿವಾಹಿತರಾಗಿರುವ ಅವರ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸ್ಥಳಕ್ಕೆ ಮೆಸ್ಕಾಂ, ಹಾಗೂ ಪೋಲೀಸ್ ಇಲಾಖೆಯ...

ನೂತನ ಆಕ್ರಮ ಸಕ್ರಮ ಸಮಿತಿ ರಚನೆ : ಅಧ್ಯಕ್ಷರಾಗಿ ಭಾಗೀರಥಿ ಮುರುಳ್ಯ, ಸದಸ್ಯರಾಗಿ ಗೀತಾ ಕೋಲ್ಚಾರು ಸುಳ್ಯ , ಹೆಚ್ ಆದಂ ಕಡಬ, ಪಿ.ಪಿ.ವರ್ಗೀಸ್ ಕಡಬ ಆಯ್ಕೆ

ಸುಳ್ಯ ವಿಧಾನಸಭಾ ಕ್ಷೇತ್ರದ ಆಕ್ರಮ ಸಕ್ರಮ ಸಮಿತಿ ರಚಿಸಿ, ಜಾರಿಗೊಳಿಸಿ ಸರಕಾರ ಆದೇಶಿಸಿದೆ. ಈ ನೂತನ ಸಮಿತಿಯ ಅಧ್ಯಕ್ಷರಾಗಿ ಶಾಸಕಿ ಭಾಗೀರಥಿ ಮುರುಳ್ಯ, ಸದಸ್ಯರಾಗಿ ಸುಳ್ಯದ ಗೀತಾ ಕೋಲ್ಚಾರು , ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕಾಜಿರಕುಕ್ಕ ಮನೆ ಹೆಚ್ ಆದಂ, ಇನ್ನೋರ್ವ ಸದಸ್ಯ ಕಡಬ ತಾಲೂಕಿನ ನೂಜಿ ಬಾಳ್ತಿಲ ಗ್ರಾಮದ ದರ್ಜಿ ಮಜಲು ಮನೆ...

ಸುಳ್ಯ : ಬಸ್ ಚಾಲಕರ ಪ್ರತಿಭಟನೆ – ಬಿಕೋ ಎನ್ನುತ್ತಿರುವ ಸುಳ್ಯ ಬಸ್ ನಿಲ್ದಾಣ

ಗುತ್ತಿಗೆ ಆಧಾರದಲ್ಲಿ ಕೆ.ಎಸ್.ಆರ್.ಟಿ.ಸಿ. ಗೆ ನೇಮಕಗೊಂಡ ಚಾಲಕರಿಗೆ ಜನವರಿ 1 ರಿಂದ ಕೆಲಸ ನಿಲ್ಲಿಸುವಂತೆ ಮೆಸೇಜ್ ಬಂದಿರುವುದರಿಂದ ಚಾಲಕರು ಕರ್ತವ್ಯಕ್ಕೆ ಹಾಜರಾಗದೇ ಸುಳ್ಯ ಡಿಪೋದ ಎದುರು ಪ್ರತಿಭಟನೆ ನಡೆಸಿದ ಘಟನೆ ಹಾಗೂ ಬಸ್ ಇಲ್ಲದೇ ಪ್ರಯಾಣಿಕರ ಪರದಾಡಿದ ಘಟನೆ ಇಂದು ನಡೆದಿದೆ. ಸುಳ್ಯದಲ್ಲಿ ಕೆಲವೇ ಬಸ್ ಗಳಲ್ಲಿ ಸರಕಾರಿ ನೌಕರರಿದ್ದು ಅವರು ಚಾಲಕರಾಗಿರುವ ಲೈನ್ ಗಳಲ್ಲಿ...

ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಚಾಲಕರಿಗೆ ವಂಚಿಸಿದ ಗುತ್ತಿಗೆದಾರ – ಚಾಲಕರಿಂದ ಪ್ರತಿಭಟನೆ- ನಾಳೆ ಗ್ರಾಮೀಣ ಸರಕಾರಿ ಬಸ್ ಸೇವೆ ಡೌಟ್

ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ  ಚಾಲಕರನ್ನು ಗುತ್ತಿಗೆದಾರರು ಕೈಬಿಟ್ಟಿರುವುದನ್ನು ಖಂಡಿಸಿ ನಾಳೆ ಚಾಲಕರು ಬೀದಿಗಿಳಿದು ಪ್ರತಿಭಟನೆ ಸಲ್ಲಿಸಲಿದ್ದಾರೆ. ಇದರಿಂದ ನಾಳೆ ಸುಳ್ಯದಲ್ಲಿ  ಸ್ಥಳೀಯ ಸರಕಾರಿ ಬಸ್‌ ಗಳ ಸಂಚಾರಕ್ಕೆ ಅಡ್ಡಿಯಾಗಲಿದ್ದು, ತಾಲೂಕಿನ ವಿವಿಧ ಕಡೆ ಸಂಚರಿಸುವ ಜನಸಾಮಾನ್ಯರು ಪರದಾಡುವಂತಾಗಲಿದೆ. ಗುತ್ತಿಗೆ ಆಧಾರದಲ್ಲಿ ಗ್ರಾಮೀಣ ಭಾಗದಲ್ಲಿ ಓಡಾಡುವ ಬಸ್‌ ಗಳಿಗೆ ಕೆಎಸ್‌ಆರ್ ಟಿಸಿ ಹಲವಾರು ಚಾಲಕರನ್ನು ನೇಮಿಸಿತ್ತು. ಇದರ...

ಡಿ.31 : ಗುತ್ತಿಗಾರಿನ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಸಾಮೂಹಿಕ ಶನೈಶ್ವರ ಪೂಜೆ ಹಾಗೂ ಗುಳಿಗ ಶಿವಗುಳಿಗ ಯಕ್ಷಗಾನ ಬಯಲಾಟ

ಗುತ್ತಿಗಾರು : ಶ್ರೀ ಅಯ್ಯಪ್ಪ ಸೇವಾ ಸಮಿತಿ ಕೃಷ್ಣನಗರ ಇದರ ವತಿಯಿಂದ ಸಾಮೂಹಿಕ ಶನೈಶ್ವರ ಪೂಜೆ ಹಾಗೂ ಗುಳಿಗ ಶಿವಗುಳಿಗ ಯಕ್ಷಗಾನ ಬಯಲಾಟ ಡಿ.31 ರಂದು ನಡೆಯಲಿದೆ. ಗುತ್ತಿಗಾರಿನ ಶ್ರೀ ಕೃಷ್ಣ ಭಜನಾ ಮಂದಿರದ ವಠಾರದಲ್ಲಿ ಡಿ.31 ರಂದು ಪೂರ್ವಾಹ್ನ ಗಂಟೆ 8.00ರಿಂದ ಶ್ರೀ ಗಣಪತಿ ಹೋಮ, ಪೂ. 10 ರಿಂದ ಶನೈಶ್ವರ ಪೂಜೆ ಪ್ರಾರಂಭ,...

ಕುಕ್ಕೆಗೆ ಹರಿದು ಬಂದ ಭಕ್ತ ಸಾಗರ : ರಜೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರಿಂದ ದೇವರ ದರ್ಶನ

ಸುಬ್ರಹ್ಮಣ್ಯ: ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆದಿತ್ಯವಾರ ಭಕ್ತ ಸಾಗರವೇ ಹರಿದು ಬಂದಿತ್ತು.ಲಕ್ಷಕ್ಕೂ ಅಧಿಕ ಮಂದಿ ಶ್ರೀ ದೇವರ ದರುಶನ ಮಾಡಿ ಪ್ರಸಾದ ಸ್ವೀಕರಿಸಿದರು.ಜಾತ್ರಾ ಸಮಯಕ್ಕಿಂತಲೂ ಅಧಿಕ ಮಂದಿ ಆದಿತ್ಯವಾರ ಕ್ಷೇತ್ರಕ್ಕೆ ಆಗಮಿಸಿರಬಹುದೆಂದು ಅಂದಾಜಿಸಲಾಗಿದೆ. ಎರಡನೇ ಶನಿವಾರ, ವಾರದ ರಜಾದಿನ, ಕ್ರಿಸ್‌ಮಸ್ ರಜೆಯ ಕಾರಣ ಸೇರಿದಂತೆ ಕ್ಷೇತ್ರದ ಜಾತ್ರೋತ್ಸವ ಸಮಾಪನದ ಪುಣ್ಯ ದಿನವಾದುದರಿಂದ ಕ್ಷೇತ್ರಕ್ಕೆ ಭಕ್ತ ಸಂದೋಹವೇ...

ಅರಂತೋಡು : ಮನೆ ಬೆಂಕಿಗೆ ಆಹುತಿ – ಹೊತ್ತಿ ಉರಿದ ನಿವೃತ್ತ ರೇಂಜರ್ ಹಿರಣ್ಯರವರ ಮನೆ

https://youtu.be/vnEdf69a1zk?si=s5vzKR-4mXlfs3fv ಅರಂತೋಡು ಗ್ರಾಮದ ಎಳ್ಪುಕಜೆ ಉಳುವಾರು ನಿವಾಸಿ ನಿವೃತ್ತ ರೇಂಜರ್ ಹಿರಣ್ಯ ರವರ ಮನೆ ಹಾಗೂ ಕೊಟ್ಟಿಗೆ ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದೇ ಇದ್ದುದರಿಂದ ಜೀವಹಾನಿಯಗಿಲ್ಲ. ಯಾರೋ ಬೆಂಕಿ ಹಾಕಿರುವ ಸಾಧ್ಯತೆಗಳ ಬಗ್ಗೆ ಊರವರು ಮಾತನಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಡಿ.16 : ಸೌಜನ್ಯ ಹೋರಾಟ ಸಮಿತಿ ವತಿಯಿಂದ ಗುತ್ತಿಗಾರಿನಲ್ಲಿ ಬೃಹತ್ ಪ್ರತಿಭಟನಾ ಸಭೆ

ಗುತ್ತಿಗಾರು ಸೌಜನ್ಯ ಹೋರಾಟ ಸಮಿತಿ ವತಿಯಿಂದ ಡಿ.16ರಂದು ಗುತ್ತಿಗಾರಿನಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಚಂದ್ರಶೇಖರ ಬಾಳುಗೋಡು ಹೇಳಿದರು. ಅವರು ಸುಳ್ಯ ಪ್ರೆಸ್‌ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ "ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು.ಪ್ರವೀಣ್ ಮುಂಡೋಡಿ ಮಾತನಾಡುತ್ತಾ ಪ್ರತಿಭಟನಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್‌,...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿ ಜಾತ್ರೋತ್ಸವಕ್ಕೆ ಭರದ ಸಿದ್ಧತೆ : ಡಿ.12 ರಂದು ಲಕ್ಷದೀಪೋತ್ಸವ ಲಕ್ಷ ಹಣತೆಗಳ ಸಾಲು – ಡಿ.18 ರಂದು ಚಂಪಾಷಷ್ಠಿ ಮಹಾರಥೋತ್ಸವ

ಸುಬ್ರಹ್ಮಣ್ಯ, ಡಿ.5: ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಚಂಪಾ ಷಷ್ಟಿ ಮಹೋತ್ಸವ ದಿನಾಂಕ 9/12/2023 ರಂದು ಶನಿವಾರ ಮೂಲಮೃತಿಕ ಪ್ರಸಾದ ತೆಗೆದು ವಿತರಣೆ ಆಗುವುದರೊಂದಿಗೆ ಆರಂಭವಾಗಿ ದಿನಾಂಕ. 24/12/2023 ರಂದು ಕೊಪ್ಪರಿಗೆ ತಿಳಿಯುವ ಮೂಲಕ ರಾತ್ರಿ ನೀರು ಬಂಡಿ ಉತ್ಸವ ಹಾಗೂ ದೈವಗಳ ನಡಾವಳಿ ನಡೆದು ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ...

ಕುಕ್ಕೆ ಸುಬ್ರಹ್ಮಣ್ಯ : ಡಿ.10 ರಿಂದ 24 ರವರೆಗೆ ಚಂಪಾಷಷ್ಠಿ ಮಹೋತ್ಸವ
ಡಿ.12 ರಂದು ಲಕ್ಷದೀಪೋತ್ಸವ
ಡಿ.18 ರಂದು ಚಂಪಾಷಷ್ಠಿ ಮಹಾರಥೋತ್ಸವ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.10 ರಿಂದ ಡಿ.24 ರವರೆಗೆ ಚಂಪಾಷಷ್ಠಿ ಮಹೋತ್ಸವ ನಡೆಯಲಿದ್ದು, ಡಿ.10 ರಂದು ಕೊಪ್ಪರಿಗೆ ಏರುವುದು ಹಾಗೂ ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ ನಡೆಯಲಿದೆ. ಡಿ.11 ರಂದು ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ ನಡೆಯಲಿದ್ದು, ಡಿ.12 ರಂದು ಲಕ್ಷದೀಪೋತ್ಸವ ನಡೆಯಲಿದೆ. ಡಿ.13 ರಂದು ಶೇಷವಾಹನೋತ್ಸವ, ಡಿ.14...

ಸುಳ್ಯ ನಗರದ ಮಹಾಯೋಜನೆಗೆ ಸರ್ಕಾರದ ತಾತ್ಕಾಲಿಕ ಅನುಮೋದನೆ – ಆಕ್ಷೇಪ ಸಲ್ಲಿಸಲು 60 ದಿನಗಳ ಕಾಲಾವಕಾಶ

ಸುಳ್ಯ ಪಟ್ಟಣ ಪಂಚಾಯಿತಿ ಯೋಜನಾ ಪ್ರಾಧಿಕಾರವು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರನ್ವಯ ಸುಳ್ಯ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆಯನ್ನು ತಯಾರಿಸಿ, ನಕ್ಷೆ ಮತ್ತು ವರದಿಯೊಂದಿಗೆ ಸರ್ಕಾರದ ತಾತ್ಕಾಲಿಕ ಅನುಮೋದನೆಗೆ ಸಲ್ಲಿಸಲಾದ ಹಿನ್ನಲೆ ಯಲ್ಲಿ ಸರ್ಕಾರ ಮಹಾಯೋಜನೆಗೆ ತಾತ್ಕಾಲಿಕವಾಗಿ ಅನುಮೋದನೆಯನ್ನು ನೀಡಿದೆ. ತಾತ್ಕಾಲಿಕ ಅನುಮೋದಿತ ಮಹಾಯೋಜನೆ ನಕ್ಷೆ ಮತ್ತು ವರದಿಯನ್ನು ಸುಳ್ಯ ಪಟ್ಟಣ...

ಮೇನಾಲ : ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮಹೋತ್ಸವ ನಡೆಸುವ ಬಗ್ಗೆ ಪ್ರಶ್ನೆ ಚಿಂತನೆ

ಅಜ್ಜಾವರ ಗ್ರಾಮದ ಮೇನಾಲ ಕುಟುಂಬಸ್ಥರು ಆರಾಧನೆ ನಡೆಸಿಕೊಂಡು ಬರುತ್ತಿರುವ ಶ್ರೀ ವಯನಾಟ್ ಕುಲವನ್ ದೇವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವ ಹಿನ್ನಲೆಯಲ್ಲಿ ದೇವರಿಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪಶ್ನಾ ಚಿಂತನೆಗೆ ಚಾಲನೆ ನೀಡಲಾಯಿತು. ಮೇನಾಲದಲ್ಲಿ 2024ರ ಮಾರ್ಚ್ ತಿಂಗಳ ದಿನಾಂಕ 5, 6, 7ರಲ್ಲಿ ದೈವಕಟ್ಟು ಮಹೋತ್ಸವ ನಡೆಸುವ ಬಗ್ಗೆ ಮತ್ತು ಉತ್ಸವಕ್ಕೆ ಬೇಕಾದ ಸಮಿತಿಗಳ ರಚಿಸುವ ಬಗ್ಗೆ ಪ್ರಶ್ನೆ...

ಕಂಠಪೂರ್ತಿ ಕುಡಿದು ಸರಕಾರಿ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿದ ಅಧಿಕಾರಿ – ಅಡ್ಡಗಟ್ಟಿದ ಸಾರ್ವಜನಿಕರು

ಸರಕಾರಿ ಅಧಿಕಾರಿಯೋರ್ವರು ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಅಡ್ಡಾದಿಡ್ಡಿ ಸರಕಾರಿ ವಾಹನವನ್ನು ಚಲಾಯಿಸಿದ್ದನ್ನು ಕಂಡ ಇತರ ವಾಹನ ಸವಾರರು ಅಡ್ಡಗಟ್ಟಿದ ಘಟನೆ ನ.28 ರಂದು ರಾತ್ರಿ ಸುಳ್ಯದ ಅರಂಬೂರಿನಲ್ಲಿ ನಡೆದಿದೆ. https://youtu.be/RaumwdMEx4k?si=tD7W_7lrI4X76jgH ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯಾಗಿರುವ ನವೀನ್ ಕುಮಾ‌ರ್ ಎಂಬವರು ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿದ ಸರಕಾರಿ ಅಧಿಕಾರಿ. ಸಾರ್ವಜನಿಕರು ಹಾಗೂ ವಾಹನ...

ಕೆವಿಜಿ ಸಂಸ್ಮರಣೆ ಅಂಗವಾಗಿ ಮಡಪ್ಪಾಡಿಯಲ್ಲಿ ಉಚಿತ ಬೃಹತ್ ಆರೋಗ್ಯ ಶಿಬಿರ

ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ (ರಿ.) ಸುಳ್ಯ-2023 ಇದರ ಆಶ್ರಯದಲ್ಲಿ ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಮಡಪ್ಪಾಡಿ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಧುನಿಕ ಸುಳ್ಯದ ನಿರ್ಮಾತೃ ಡಾII ಕುರುಂಜಿ ವೆಂಕಟ್ರಮಣ ಗೌಡರ 95ನೇ ಜಯಂತೋತ್ಸವದ ಸವಿನೆನಪಿಗಾಗಿ ನ.26 ರಂದು...

ಮಾಣಿ ಮೈಸೂರು ಚತುಷ್ಪತ ಕಾಮಗಾರಿ ಬಗ್ಗೆ ಸಂಸದರು ಹಾಗೂ ಅಧಿಕಾರಿಗಳು ಹೇಳಿದ್ದೇನು?

ಮಾಣಿ ಮೈಸೂರು ಚತುಷ್ಪತ ಕಾಮಗಾರಿ ಶೀಘ್ರ ಆರಂಭವಾಗಲಿದೆ ಹಾಗೂ ಸುಳ್ಯ ಬೈಪಾಸ್ ರಸ್ತೆಯೇ ನಿರ್ಮಾಣವಾಗಲಿದೆ ಎಂದು ವಾರದ ಹಿಂದೆ ಸುಳ್ಯದಲ್ಲಿ ಪತ್ರಕರ್ತರ ಜತೆ ಸಂಸದರಾದ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು. ಈ ಬಗ್ಗೆ ಆರ್ ಟಿ ಐ ಕಾರ್ಯಕರ್ತ ಡಿ.ಎಂ. ಶಾರೀಖ್ ಭೂ ಸ್ವಾಧೀನ ಅಧಿಕಾರಿಕಾರಿಗಳ ಜತೆ ದೂರವಾಣಿಯಲ್ಲಿ ವಿಚಾರಿಸಿದಾಗ ಈ ಬಗ್ಗೆ ನಮಗೆ...

ಕಾಂಚೋಡು ಮಂಜುನಾಥ ದೇವರು ಮತ್ತು ಅಣ್ಣಪ್ಪ ಸ್ವಾಮಿಯಲ್ಲಿ ಸೌಜನ್ಯ ಸಾವಿಗೆ ನ್ಯಾಯ ಒದಗಿಸಲು ಪ್ರಾರ್ಥನೆ

ಐತಿಹಾಸಿಕ ಹಿನ್ನೆಲೆಯುಳ್ಳ ಕಾಂಚೋಡು ಮಂಜುನಾಥ ದೇವರಲ್ಲಿ ಸೌಜನ್ಯ ಸಾವಿಗೆ ನ್ಯಾಯ ಒದಗಿಸುವ ಸಲುವಾಗಿ ಸೌಜನ್ಯ ಕುಟುಂಬ , ಮಹೇಶ್ ತಿಮರೋಡಿ , ದೇವಾಲಯದ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಪ್ರಾರ್ಥನೆ ಮಾಡಲಾಗಿದೆ. ಕಾಂಚೋಡು ಮಂಜುನಾಥ ದೇವಾಲಯಕ್ಕೆ ಪುರಾತನ ಹಿನ್ನೆಲೆಯಿದ್ದು , ಇಲ್ಲಿಯೂ ಧರ್ಮಸ್ಥಳ ದೇವಾಲಯದ ರೀತಿಯಲ್ಲೆ ದೇವರನ್ನು ದೈವಗಳ‌ ಆರಾಧನೆ ನಡೆಯುತ್ತಿದ್ದು, ಇಲ್ಲಿ ಕೂಡ ಅಣ್ಣಪ್ಪ ಸ್ವಾಮಿಯ ಬೆಟ್ಟ...

ಸುಳ್ಯ :  ರಾಷ್ಟ್ರೀಯ ಕಬಡ್ಡಿ ಪಂದ್ಯಾಟ – ಮಹಿಳಾ ವಿಭಾಗದಲ್ಲಿ ಗೆಲುವಿನ ನಗೆ ಬೀರಿದ ಟಿಎಂಸಿ ಥಾಣೆ

https://youtu.be/IXgu1IqDOdU?feature=shared ಸುಳ್ಯ ಶಾಮಿಯಾನ ಹಾಗೂ ಧ್ವನಿ ಬೆಳಕು ಸಂಘದ ಆಶ್ರಯದಲ್ಲಿ ಜರುಗುತ್ತಿರುವ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಮಹಿಳಾ ವಿಭಾಗದಲ್ಲಿ ಟಿಎಂಸಿ ಥಾಣೆ ಮತ್ತು  ನ್ಯಾಷನಲ್ ಬೆಂಗಳೂರು ಮಧ್ಯೆ ನಡೆದ  ಹಣಾಹಣಿಯಲ್ಲಿ 37, 35ರ ಅಂಕಗಳ ಹಂಚಿಕೆಯೊಂದಿಗೆ ಟಿಎಂಸಿ ಥಾಣೆ ಗೆಲುವು  ಪ್ರಶಸ್ತಿಯನ್ನು ಪಡೆದುಕೊಂಡಿತು. ದ್ವಿತೀಯ ಬಹುಮಾನವನ್ನು ನ್ಯಾಷನಲ್ ಬೆಂಗಳೂರು ಪಡೆದುಕೊಂಡಿತು.  ಹಾಗೂ ತೃತೀಯ ಬಹುಮಾನವನ್ನು ಕನ್ಯಾಕುಮಾರಿ...

ಎಲಿಮಲೆ : ಸಹಕಾರ ಸಪ್ತಾಹ – ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ

ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ 2023 ಕಾರ್ಯಕ್ರಮ ನ.19 ರಂದು ಎಲಿಮಲೆಯ ನೆಲ್ಲೂರು ಕೆಟ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು. ಜಿಲ್ಲಾ ಸಹಕಾರ ಯೂನಿಯನ್ ಮಂಗಳೂರು ಇದರ ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಸಪ್ತಾಹದ...

ಉಬರಡ್ಕದಲ್ಲಿ ನಾಳೆ (ನ.20)ಸೌಜನ್ಯ ಪರ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನಾ ಸಭೆ – ಭರದ ಸಿದ್ಧತೆ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು 11 ವರ್ಷ ಕಳೆದರೂ ಆರೋಪಿಗಳಿಗೆ ಶಿಕ್ಷೆಯಾಗದಿರುವುದು ದುರಂತವೇ ಸರಿ. ಇದೀಗ ಪ್ರಕರಣದ ಕೇಸು ಹಳ್ಳ ಹಿಡಿಯುತ್ತಿರುವ ಹಿನ್ನೆಲೆ ಜನಾಕ್ರೋಶ ಭುಗಿಲೇಳುವಂತೆ ಮಾಡಿದೆ. ರಾಜ್ಯಾದ್ಯಂತ ಸೌಜನ್ಯ ಅಭಿಮಾನಿಗಳು ಮರುತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ. ನ.20 ರಂದು ಸೌಜನ್ಯ ಪರ ನ್ಯಾಯಕ್ಕಾಗಿ ಉಬರಡ್ಕದಲ್ಲಿ ಬೃಹತ್ ಪ್ರತಿಭಟನಾ ಸಭೆಗೆ ವೇದಿಕೆ ತಯಾರಾಗಿದ್ದು ಸುಮಾರು...

ದೇವಚಳ್ಳ: ಪಂಚಧ್ವನಿ ಕಾರ್ಯಕ್ರಮ – ವಿವಿಧ ಕ್ಷೇತ್ರದ ಸಾಧಕರಿಗೆ ಪಡುಮಲೆ ಯಶಸ್ವಿ ಸಾಧನಾಶ್ರೀ ಪ್ರಶಸ್ತಿ ಪ್ರಧಾನ

https://youtu.be/q3e77TPG3uw?si=ukre_PjG_btGQy2p ಗ್ರಾಮ ಪಂಚಾಯತ್ ದೇವಚಳ್ಳ, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮತ್ತು ಮಂಗಳ ಕಲಾ ಸಾಹಿತ್ಯ ವೇದಿಕೆ ಪಟ್ಟೆ ಬಡಗನ್ನೂರು ಘಟಕ ಪುತ್ತೂರು, ಯಶಸ್ವಿ ನಾಗರಿಕ ಸೇವಾ ಸಂಘ ವಾಸುದೇವ ನಗರ, ಕಾರ್ಕಳ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ "ಪಂಚಧ್ವನಿ" ಕಾರ್ಯಕ್ರಮ 2023 ಕಾರ್ಯಕ್ರಮ ನ.18ರಂದು ನಡೆಯಿತು. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ...

ಹೈ ಸೆಕ್ಯುರಿಟಿ ನಂಬರ್‌ಪ್ಲೇಟ್ (HSRP)ಅಳವಡಿಕೆಗೆ ಕಾಲಾವಕಾಶ ನೀಡಿದ ಸಾರಿಗೆ ಇಲಾಖೆ – 3 ತಿಂಗಳು ವಿಸ್ತರಣೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೂಚನೆ ಮೇರೆಗೆ 2019ರ ಏಪ್ರಿಲ್‌ಗಿಂತ ಮುಂಚೆ ನೋಂದಣಿಯಾದ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟರ್ ಪ್ಲೇಟ್ (ಎಚ್ ಎಸ್‌ಆರ್‌ಪಿ) ಅಳವಡಿಕೆ ಗಡುವನ್ನು 2024ರ ಫೆ. 17ರವರೆಗೆ ವಿಸ್ತರಿಸಿ ಸಾರಿಗೆ ಇಲಾಖೆ ಆದೇಶಿಸಿದೆ. ವಾಹನಗಳ ಸುರಕ್ಷತೆ ದೃಷ್ಟಿಯಿಂದಾಗಿ 2019ರ ಏಪ್ರಿಲ್‌ಗಿಂತ ಮುಂಚೆ ನೋಂದಣಿ ಯಾಗಿರುವ ಎಲ್ಲ ವಾಹನಗಳು ಎಚ್‌ಎಸ್ ಆರ್‌ಪಿ...

ದೇವಚಳ್ಳ: ನ.18 ರಂದು ಪಂಚಧ್ವನಿ ಕಾರ್ಯಕ್ರಮ – ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ – ಪಡುಮಲೆ ಯಶಸ್ವಿ ಸಾಧನಾಶ್ರೀ ಪ್ರಶಸ್ತಿ ಪ್ರಧಾನ

ಗ್ರಾಮ ಪಂಚಾಯತ್ ದೇವಚಳ್ಳ, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮತ್ತು ಮಂಗಳ ಕಲಾ ಸಾಹಿತ್ಯ ವೇದಿಕೆ ಪಟ್ಟೆ ಬಡಗನ್ನೂರು ಘಟಕ ಪುತ್ತೂರು, ಯಶಸ್ವಿ ನಾಗರಿಕ ಸೇವಾ ಸಂಘ ವಾಸುದೇವ ನಗರ, ಕಾರ್ಕಳ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ "ಪಂಚಧ್ವನಿ" ಕಾರ್ಯಕ್ರಮ 2023 ಕಾರ್ಯಕ್ರಮ ನ.18ರಂದು ನಡೆಯಲಿದೆ. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಗ್ರಂಥಾಲಯ...

ಮಡಪ್ಪಾಡಿ ಯುವಕ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ

ಯುವಕ ಮಂಡಲ (ರಿ.) ಮಡಪ್ಪಾಡಿ ಇದರ ವಾರ್ಷಿಕ ಮಹಾಸಭೆ ಹಾಗೂ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ದಿನಾಂಕ 12/11/23 ರಂದು ಯುವಕ ಮಂಡಲ ಸಭಾಭವನ ಮಡಪ್ಪಾಡಿ ಯಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಧನ್ಯಕುಮಾರ್ ದೇರುಮಜಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಲಿ ಸುಳ್ಯ ಇದರ...

ನ.16 : ಮಂಗಳೂರಿನಲ್ಲಿ ತೆಂಗು ರೈತ ಉತ್ಪಾದಕರ ಸಂಸ್ಥೆಯ ಪ್ರಾದೇಶಿಕ ಕಛೇರಿ ಉದ್ಘಾಟನೆ ಹಾಗೂ ತೆಂಗು ಉತ್ಪನ್ನಗಳ ಬಿಡುಗಡೆ

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಪ್ರಾದೇಶಿಕ ಕಛೇರಿ ಉದ್ಘಾಟನೆ ಮತ್ತು ತೆಂಗು ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮ ನ.16 ರಂದು ಮಂಗಳೂರಿನ ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಬಳಿ ನಡೆಯಲಿದೆ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಡಾ ಧರ್ಮಪಾಲನಾಥ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸುವರು. ಸ್ಪೀಕರ್ ಯು. ಟಿ. ಖಾದರ್ ಕಚೇರಿಯ ಉದ್ಘಾಟನೆಯನ್ನು ನೆರವೇರಿಸುವರು....

ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೀಪಾವಳಿ ಆಚರಣೆ

ಸುಬ್ರಹ್ಮಣ್ಯ ಪೋಲಿಸ್ ಠಾಣೆಯಲ್ಲಿ ದೀಪಾವಳಿ ಆಚರಿಸಲಾಯಿತು.

ಕುಕ್ಕೆ: ದೇವಳದಲ್ಲಿ ಬಲೀಂದ್ರ ಮರ ಹಾಕುವ ಕಾರ್ಯಕ್ರಮ

ಸುಬ್ರಹ್ಮಣ್ಯ: ನಾಗಾರಾಧನೆಯ ಪ್ರಸಿದ್ಧ ಪುಣ್ಯ ತಾಣ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ದೀಪಾವಳಿ ಅಮವಾಸ್ಯೆಯ ಶುಭದಿನವಾದ ಆದಿತ್ಯವಾರ ಬಲೀಂದ್ರ(ದೀಪಾಲೆ) ಮರವನ್ನು ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಏರಿಸಲಾಯಿತು.ಆರಂಭದಲ್ಲಿ ದೀಪಾಲೆ ಮರವನ್ನು ತಂದು ಶ್ರೀ ದೇವಳದ ಮುಂಭಾಗದಲ್ಲಿ ಇರಿಸಲಾಯಿತು. ಬಳಿಕ ಅದಕ್ಕೆ ಪುಣ್ಯ ತೀರ್ಥ ಸಿಂಪಡಿಸಿ ಪ್ರಸಾದ ಹಚ್ಚಲಾಯಿತು. ನಂತರ ಮರವನ್ನು ಶ್ರೀ ದೇವಳದ ಗರ್ಭಗುಡಿಯ ಮುಂಭಾಗಲ್ಲಿ ಏರಿಸಲಾಯಿತು....

ಮಲೆನಾಡಿನ ಜನರ ಹಿತರಕ್ಷಣೆಗಾಗಿ ಮಲೆನಾಡು ಜಂಟಿ ಕ್ರಿಯಾ ಸಮಿತಿ ವತಿಯಿಂದ ರಾಜಕೀಯ ಪಕ್ಷ ಸ್ಥಾಪನೆ

ಕಸ್ತೂರಿರಂಗನ್ ವರದಿ ಹೆಸರಿನಲ್ಲಿ ಅರಣ್ಯ ಖಾಯಿದೆಗಳು ಮೂಲನಿವಾಸಿಗಳಿಗೆ ಮಾರಕವಾಗುತ್ತಿದ್ದು ಉದ್ಯಮಿಗಳಿಗೆ, ಎಸ್ಟೆಟ್, ಲೀಸ್ ಗೆ ಅರಣ್ಯ ಜಾಗ ಪಡೆದವರಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಈ ಬಗ್ಗೆ ಮಲೆನಾಡಿನ ಸಮಸ್ಯೆಯ ಪರಿಹಾರಕ್ಕೆ 2011 ರಿಂದ ಹೋರಾಟ ಮಾಡಿದರೂ ಪ್ರಯೋಜನ ಬರುತ್ತಿಲ್ಲ. ಇದರ ಬಗ್ಗೆ ಯಾವುದೇ ಜನಪ್ರತಿನಿಧಿಗಳಿಗೆ ಕಿಂಚಿತ್ತೂ ಮಾಹಿತಿಯೂ ಇಲ್ಲ. ಅದರ ಬಗ್ಗೆ ಆಸಕ್ತಿಯೂ ಇಲ್ಲ. ಕ್ಷೇತ್ರಗಳ...

ಆಲೆಟ್ಟಿ ಗ್ರಾಮ ಪಂಚಾಯತ್ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ಧಿಡೀರ್ ದಾಳಿ – ಪರಿಶೀಲನೆ ?

ಆಲೆಟ್ಟಿ ಗ್ರಾಮ ಪಂಚಾಯತ್ ಗೆ ಇಂದು ಲೋಕಾಯುಕ್ತ ಅಧಿಕಾರಿಗಳು ಧಿಢೀರ್ ದಾಳಿ ನಡೆಸಿದ್ದು ಈ ಹಿಂದೆ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತಾಗಿ ದೂರುಗಳು ಸಲ್ಲಿಕೆಯಾಗಿದ್ದು ಇದರ ಬಗ್ಗೆ ಇದೀಗ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆನ್ನಲಾಗಿದೆ. ಈ ಹಿಂದೆ ಮಾಣಿಮರ್ಧು ಸೇತುವೆ ಕಾಮಗಾರಿಯಲ್ಲಿ ಅವ್ಯವಹಾರ ಮಾಡಿದ್ದಾರೆ ಎಂಬ ಸ್ಥಳೀಯರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ದಾಳಿ ನಡೆಸಿದ್ದಾರೆ ಎಂದು...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಮಹೋತ್ಸವ ಪೂರ್ವಭಾವಿ ಸಭೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಮಹೋತ್ಸವ ಪೂರ್ವಭಾವಿ ಸಭೆ ನ.8 ರಂದು ದೇವಸ್ಥಾನದ ಆಡಳಿತ ಕಛೇರಿಯ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ , ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್,ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ರಾಜ್ಯ ಧಾರ್ಮಿಕ...

ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟ ರಚನೆ – ಅಧ್ಯಕ್ಷರಾಗಿ ಶೈಲೇಶ್ ಅಂಬೆಕಲ್ಲು, ಪ್ರ.ಕಾರ್ಯದರ್ಶಿಯಾಗಿ ಕೇಶವ ಅಡ್ತಲೆ, ಸಂಚಾಲಕರಾಗಿ ಮಹೇಶ್ ಭಟ್ ಕರಿಕ್ಕಳ

ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್‌ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಸಭೆಯ ನ.3 ರಂದು ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾ ಜಯರಾಮ್ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಭೆಯ ವೇದಿಕೆಯಲ್ಲಿ ಆರಂತೋಡು ಗ್ರಾಪಂ ಅಧ್ಯಕ್ಷರಾದ ಕೇಶವ ಅಡ್ತಲೆ, ಆಲೆಟ್ಟಿ ಗ್ರಾ.ಪಂ.ಅಧ್ಯಕ್ಷೆ ವೀಣಾ ವಸಂತ್ ಮತ್ತು ಮುರುಳ್ಯ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಜಾನಕಿ ಮುರುಳ್ಯ ಉಪಸ್ಥಿತರಿದ್ದರು....

ಸುಳ್ಯ : ಉಡುಪಿ ಗಾರ್ಡನ್ ಬಳಿ ಭೂಕುಸಿತ

ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಪರಿವಾರಕಾನದ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗ ಇದ್ದಕ್ಕಿದ್ದಂತೆಯೇ ಭೂಮಿ ಕುಸಿತಗೊಂಡ ಘಟನೆ ನಡೆದಿದೆ. ಸಮತಟ್ಟುಗೊಳಿಸಿ ಇಂಟರ್ ಲಾಕ್ ಹಾಕಿದ ಜಾಗ ಸುಮಾರು ಹತ್ತು ಅಡಿಯಷ್ಟು ಆಳಕ್ಕೆ ಗುಂಡಿ ನಿರ್ಮಾಣವಾಗಿದ್ದು, ಪಕ್ಕದಲ್ಲಿರುವ ವಿದ್ಯುತ್ ಕಂಬಗಳು ಕೂಡ ಬೀಳುವ ಸ್ಥಿತಿಯಲ್ಲಿದೆ ಎಂದು ತಿಳಿದು ಬಂದಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.ವಿ ಸದಾನಂದ ಗೌಡರಿಂದ ಸರ್ಪ ಸಂಸ್ಕಾರ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರು ಕುಟುಂಬ ಸಮೇತ ಬಂದು ಸರ್ಪ ಸಂಸ್ಕಾರ ಸೇವೆ ಮಾಡಿಸಿದ್ದಾರೆ ನ.1 ರಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಅವರು, ಸರ್ಪ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ. ಆಶ್ಲೇಷ ಬಲಿ ಪೂಜೆ, ಮಹಾಭಿಷೇಕ, ನಾಗ ಪ್ರತಿಷ್ಠೆ ಸೇವೆ ಮಾಡಿಸಿದ್ದಾರೆ. ಡಿ.ವಿ ಯವರ ಪತ್ನಿ ದಾಟಿ, ಮಗ...

ದೇವಚಳ್ಳ ಗ್ರಾ.ಪಂ.ಅಧ್ಯಕ್ಷರಾಗಿ ಆಯ್ಕೆಯಾದ ಶೈಲೇಶ್ ಅಂಬೆಕಲ್ಲು ಅವರಿಗೆ ಯುವಜನ ಸಂಯುಕ್ತ ಮಂಡಳಿ ವತಿಯಿಂದ ಸನ್ಮಾನ ಕಾರ್ಯಕ್ರಮ

ಸುಳ್ಯ : ಯುವಜನ ಸಂಯುಕ್ತ ಮಂಡಳಿ ವತಿಯಿಂದ ಪೂರ್ವಾಧ್ಯಕ್ಷ ಶೈಲೇಶ್ ಅಂಬೆಕಲ್ಲು ಅವರಿಗೆ ಸನ್ಮಾನ ಕಾರ್ಯಕ್ರಮ ನ.4 ರಂದು ಮಂಡಳಿಯ ಸಭಾಭವನದಲ್ಲಿ ನಡೆಯಲಿದೆ. ದ.ಕ. ಜಿಲ್ಲೆಯ ಯುವಜನ ಒಕ್ಕೂಟದ ಸ್ಥಾಪಕಾಧ್ಯಕ್ಷರಾಗಿದ್ದು, 25 ವರ್ಷಗಳಿಂದ ಯುವಜನ ಕ್ಷೇತ್ರದಲ್ಲಿ ಪಾರದರ್ಶಕವಾಗಿ ಸೇವೆ ಸಲ್ಲಿಸಿರುವ ಶೈಲೇಶ್ ಅಂಬೆಕಲ್ಲುರವರು ಇದೀಗದೇವಚಳ್ಳ ಗ್ರಾಮ ಪಂಚಾಯತ್‌ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅಭಿನಂದನಾ...

ಸಾವಿನ ನೋವಿನಲ್ಲೂ ಸಾರ್ಥಕತೆ ಮೆರೆದ ಐಶ್ವರ್ಯ ಪೋಷಕರು

ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಶ್ರೀಮತಿ ಐಶ್ವರ್ಯ ಳ ಮನೆಯವರು ಆಕೆಯ ನೇತ್ರದಾನ ಮಾಡುವ ಮೂಲಕ ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಸುಬ್ರಹ್ಮಣ್ಯ ಗೌಡ ಹಾಗೂ ಉಷಾ ದಂಪತಿಯ ಪುತ್ರಿಯಾದ ಐಶ್ವರ್ಯ ಅವರನ್ನು ರಾಜೇಶ್ ಅವರಿಗೆ ಸುಮಾರು 4 ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಬಳಿಕ ಐಶ್ವರ್ಯ ರವರು ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ...

ಕುಕ್ಕುಜಡ್ಕ : ಅಮರ ಸಂಘಟನಾ ಸಮಿತಿ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಅಮರಮುಡ್ನೂರು ಅಕ್ಟೋಬರ್ 28ರಂದು ಚೊಕ್ಕಾಡಿ ಪ್ರೌಡ ಶಾಲೆ ,ಕುಕ್ಕುಜಡ್ಕದಲ್ಲಿ ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ಆಶ್ರಯದಲ್ಲಿ ದಿ|ಮುರಾರಿ ಕಡಪಳ ಮತ್ತು ದಿ| ನವೀನ್ ಸಂಕೇಶ ಸ್ಮರಣಾರ್ಥ  ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಮತ್ತು ಪೈಲಾರು ಪ್ರಿಮೀಯರ್ ಸಂಘಟನಾ ಸಮಿತಿ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರ್ಷಿತ್ ಜಿ...

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಸಮರ್ಪಣೆ – ಹರಕೆಯ ಸೇವೆ ಪೂರೈಸಿದ ಬಿಹಾರದ ಡಾ.ರಾಹುಲ್ ಕುಮಾರ್ ಪಾಟ್ನಾ

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಬಿಹಾರ ಮೂಲದ ಡಾ. ರಾಹುಲ್ ಕುಮಾರ್ ಪಾಟ್ನಾ ಚಿನ್ನದ ಪ್ರಭಾವಳಿ ಸಮರ್ಪಿಸಿದ್ದು, ಇಂದು ಪೂಜೆ ಸಲ್ಲಿಸಿ  ಸಮರ್ಪಿಸಲಾಯಿತು. ಮದುವೆ ಬಳಿಕ ಸಂತಾನಕ್ಕಾಗಿ ಹೇಳಲಾದ ಹರಕೆ ಸೇವೆ ಇದಾಗಿದ್ದು ಪುತ್ರ ಸಂತಾನ ಆಗಿದ್ದು ಅದರಂತೆ ಹರಕೆ ತೀರಿಸಿರುವುದಾಗಿ ತಿಳಿದು ಬಂದಿದೆ.  ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪುತ್ರನ ಇರುವಿಕೆಯೊಂದಿಗೆ ಅರ್ಚಕ ಸತ್ಯನಾರಾಯಣ ನೂರಿತ್ತಾಯ...

ದೇವಚಳ್ಳ :  ಅಗ್ನಿಪಥ್ ಗೆ ಆಯ್ಕೆಯಾದ ಅಭಿಷೇಕ್ ತಳೂರು ಹಾಗೂ ಕಾರ್ತಿಕ್ ಚಿದ್ಗಲ್ ಅವರಿಗೆ ಸನ್ಮಾನ

  ದೇವಚಳ್ಳ ಗ್ರಾಮದಿಂದ ಭಾರತೀಯ ಭೂ ಸೇನೆಯ ಅಗ್ನಿಪಥ್ ಗೆ ಆಯ್ಕೆಯಾದ ಅಭಿಷೇಕ್ ಮೆತ್ತಡ್ಕ ಹಾಗೂ ಕಾರ್ತಿಕ್ ಚಿದ್ಗಲ್ ರಿಗೆ ದೇವಚಳ್ಳ ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನ ಕಾರ್ಯಕ್ರಮ ಇಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು  ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ನಿವೃತ್ತ ಹವಾಲ್ದಾರ್ ಚಂದ್ರಶೇಖರ ಅಚ್ರಪ್ಪಾಡಿ,...

ಸುಳ್ಯ :  ಪಲ್ಸರ್ ಎನ್ 150 (Pulsar N150) ನೂತನ ದ್ವಿಚಕ್ರ ವಾಹನ ಬಿಡುಗಡೆ

ಬಜಾಜ್ ಕಂಪೆನಿಯ ಪಲ್ಸರ್ ಎನ್ 150 ವಿನೂತನ ಶೈಲಿ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ತಯಾರಿಸಿದ್ದು, ಸುಳ್ಯದಲ್ಲಿ ಇಂದು ಬಿಡುಗಡೆಗೊಂಡಿತು.  ನೂತನ ಬೈಕನ್ನು ಸುಳ್ಯ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ  ರಾಜಣ್ಣ ಬಿಡುಗಡೆಗೊಳಿಸಿದರು.  ಈ ಸಂದರ್ಭದಲ್ಲಿ ಮಂಗಳೂರಿನ ಸುಪ್ರೀಮ್ ಬಜಾಜ್ ನ  ಸೀನಿಯರ್ ಸೇಲ್ಸ್ ಮ್ಯಾನೇಜರ್ ಯೋಗೀಶ್, ಸೇಲ್ಸ್ ಮ್ಯಾನೇಜರ್ ವಾಸುದೇವ, ಸುಳ್ಯದ ಬಜಾಜ್ ಶೋರೂಂ ವೆಹಿಕಲ್ ಇಂಡಿಯಾದ...

ನೋವಿನ ಸಂದರ್ಭದಲ್ಲಿ ನಮ್ಮ ಸಂಸ್ಥೆಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಸರಿಯಲ್ಲ : ಡಾ. ಜ್ಯೋತಿ ಆರ್. ಪ್ರಸಾದ್ ಹೇಳಿಕೆ

ಸುಳ್ಯದ ಪ್ರತಿಷ್ಠಿತ ಕೆವಿಜಿ ಶಿಕ್ಷಣ ಸಂಸ್ಥೆಗಳಲ್ಲಿ ಓರ್ವರಾದ ಕೆ ವಿ ರೇಣುಕಾ ಪ್ರಸಾದ್ ರವರಿಗೆ ನಿನ್ನೆ ಕರ್ನಾಟಕ ಹೈ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದ ಬೆನ್ನಲ್ಲೆ ಆಂತರಿಕ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಇಂದು ಡಾ.ರೇಣುಕಾ ಪ್ರಸಾದ್ ರವರ ಪತ್ನಿ ಡಾ. ಜ್ಯೋತಿ ಆರ್. ಪ್ರಸಾದ್ ರವರು ಪತ್ರಿಕಾಗೋಷ್ಠಿ ಕರೆದು ನೋವು ಹಂಚಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ...

ಸುಳ್ಯದ ಅಮರ ಸಂಘಟನಾ ಸಮಿತಿ ಸಾರಥ್ಯದಲ್ಲಿ ಬೃಹತ್ ಸ್ವಚ್ಚತಾ ಕಾರ್ಯಕ್ರಮ – ವಿವಿಧ ಇಲಾಖೆಗಳು ಸಂಘ ಸಂಸ್ಥೆಗಳ ಸಾಥ್ – ಎ.ಓ.ಎಲ್.ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಚಾಲನೆ

ಸುಳ್ಯ ಅಮರ ಸಂಘಟನಾ ಸಮಿತಿ ರಿ. ,ನಗರ ಪಂಚಾಯತ್ ಸುಳ್ಯ , ತಾಲೂಕು ಕಛೇರಿ ಸುಳ್ಯ , ತಾಲೂಕು ಪಂಚಾಯತ್ ಸುಳ್ಯ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಳ್ಯ , ಆರಕ್ಷಕ ಠಾಣೆ ಸುಳ್ಯ , ವಕೀಲರ ಸಂಘ ಸುಳ್ಯ , ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ , ರೋಟರಿ ಸಂಯುಕ್ತ...

ಹಿರಿಯ ವೈದ್ಯರಾದ ಡಾ| ಚಂದ್ರಶೇಖರ ಕಿರಿಭಾಗ ಅವರಿಗೆ ಗಾಂಧಿ ಸ್ಮೃತಿ ಪ್ರಶಸ್ತಿ – ಅ.07 ರಂದು ಪ್ರಶಸ್ತಿ ಪ್ರದಾನ

ವರದಿ : ಉಲ್ಲಾಸ್ ಕಜ್ಜೋಡಿ “ವೈದ್ಯೋ ನಾರಾಯಣೋ ಹರಿಃ” ಎಂಬ ಮಾತಿಗೆ ಅನುಗುಣವಾಗಿ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆಯನ್ನು ಕಳೆದ 50 ವರ್ಷಗಳಿಂದ ಸಮಾಜಿಕ ಕಳಕಳಿಯಿಂದ ನಡೆಸಿಕೊಂಡು ಬರುತ್ತಿರುವವರು, ವಾಹನ ಸಂಚಾರವಿಲ್ಲದ ಕಾಲಘಟ್ಟದಲ್ಲಿ ತನ್ನ ಬೈಕಿನಲ್ಲಿ ರೋಗಿಗಳ ಮನೆಗೆ ತೆರಳಿ ಶುಶ್ರೂಷೆ ನೀಡುತ್ತಾ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆ ಇದ್ದ ಸಮಯದಲ್ಲಿ ಜನರಿಗೆ ಅರಿವು-ನೆರವು-ಚಿಕಿತ್ಸೆಯನ್ನು...

ಗಾಣಿಗ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ

ಸಮುದಾಯದ ಬೇಡಿಕೆಗಳಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ : ಗಾಣಿಗ ಸಮ್ಮಿಲನದಲ್ಲಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ಗಾಣದ ಪ್ರತಿಷ್ಟಾ ಕಾರ್ಯಕ್ರಮದಲ್ಲಿ ಈ ಹಿಂದೆ ಭಾಗವಹಿಸಿದ್ದೆ, ಇದೀಗ ನಡೆಯುತ್ತಿರುವ ಗಾಣಿಗ ಸಮ್ಮಿಲನ ಕಾರ್ಯಕ್ರಮವನ್ನು ನೋಡಿದಾಗ ನನಗೆ ಭಹಳ ಸಂತೋಷವಾಗುತ್ತಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಇಂದು ಸುಳ್ಯದಲ್ಲಿ ನಡೆದ ಗಾಣಿಗ ಸಮ್ಮೀಲನ ಕಾರ್ಯಕ್ರಮದ ಉದ್ಘಾಟನೆಯ...

ಅ.03: ಸುಳ್ಯದಲ್ಲಿ ಗಾಂಧಿ ಸ್ಮೃತಿ, ಬೃಹತ್ ಜನಜಾಗೃತಿ ಜಾಥಾ ಮತ್ತು ಜಿಲ್ಲಾ ಮಟ್ಟದ ಸಮಾವೇಶ – ಡಾ. ಡಿ. ವೀರೇಂದ್ರ ಹೆಗ್ಗಡೆ ಭಾಗಿ

ಅಕ್ಟೋಬರ್ ೦3 ರಂದು ನಡೆಯಲಿರುವ ಗಾಂಧಿ ಸ್ಮೃತಿ ಬೃಹತ್ ಜನಜಾಗೃತಿ ಜಾಥ ಮತ್ತು ಜಿಲ್ಲಾ ಮಟ್ಟದ ಸಮಾವೇಶ ಸುಳ್ಯದ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಮುದಾಯ ಭವನದಲ್ಲಿ ಜರುಗಲಿದೆ ಎಂದು ಜಿಲ್ಲಾಧ್ಯಕ್ಷರಾದ ಪದ್ಮನಾಭ ಶೆಟ್ಟಿ ತಿಳಿಸಿದರು. ಸೆ 30 ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಕ್ಟೋಬರ್ 2  ಮಹಾತ್ಮ...

ಡಾ. ಅನುರಾಧಾ ಕುರುಂಜಿಯವರಿಗೆ “ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ” ಪ್ರದಾನ

ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರಿಗೆನಾಡಿನ ಸಮಾಚಾರ ಸೇವಾ ಸಂಘ (ರಿ), ಗೋಕಾಕ, ಬೆಳಗಾವಿ ಇವರು ಶಿಕ್ಷಕರ ದಿನಾಚರಣೆ ನಿಮಿತ್ಯ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಶಿಕ್ಷಕರಿಗೆ ಪ್ರತೀ ವರ್ಷ ಕೊಡ ಮಾಡುವ ಪ್ರತಿಷ್ಠಿತ "ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟೀಯ ಪ್ರಶಸ್ತಿ-2023" ನ್ನು ಪ್ರದಾನ ಮಾಡಲಾಯಿತು.ಶಿಕ್ಷಣ, ಸಾಹಿತ್ಯ, ಸಮಾಜ ಸೇವೆ,...

ಸುಬ್ರಹ್ಮಣ್ಯ :  ಅದ್ದೂರಿಯಾಗಿ ಸಂಪನ್ನಗೊಂಡ ಗಣೇಶೋತ್ಸವ : ಕುಣಿತ ಭಜನೆ, ಚೆಂಡವಾದನ ಹಾಗೂ ಡಿಜೆ ಸದ್ದಿನೊಂದಿಗೆ ಸಾಗಿದ ಶೋಭಾಯಾತ್ರೆ

ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ವತಿಯಿಂದ 52ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.19ರಿಂದ ಸೆ.23ವರೆಗೆ ಕುಕ್ಕೆಸುಬ್ರಹ್ಮಣ್ಯದಲ್ಲಿ ವಿವಿಧ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದು ಅದ್ದೂರಿ ಶೋಭಯಾತ್ರೆಯೊಂದಿಗೆ ಗಣಪತಿ ವಿಸರ್ಜನೆ ನಡೆಯಿತು. 108 ತೆಂಗಿನಕಾಯಿ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.   ಸಾಂಸ್ಕೃತಿಕ ಮನೋರಂಜನೆ,ಕುಣಿತ ಭಜನೆ, ಚೆಂಡೆವಾದನ, ಡಿಜೆ ಅಬ್ಬರ ಜತೆಗೆ ಸ್ತಬ್ಧಚಿತ್ರ ಸ್ಪರ್ಧೆ ಗಣೇಶೋತ್ಸವದ...

ಕೇರ್ಪಳದ ಎಸ್.ವಿ. ಪ್ರಸಾದ್ ಅವರಿಗೆ ಗೌರವ ಡಾಕ್ಟರೇಟ್ ಪದವಿ

ಮೂಡುಬಿದಿರೆಯ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್. ವಿ. ಪ್ರಸಾದ್ ಅವರು ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ."ಡಿಸೈನ್ ಆಂಡ್ ಅನಾಲಿಸಿಸ್ ಆಫ್ ವೇದಿಕ್ ಮಲ್ಟಿಪ್ಲಯರ್ ಫ಼ಾರ್ ಡಿಎಸ್ಪಿ ಪ್ರೊಸೆಸರ್ " ಎನ್ನುವ ವಿಷಯದ ಬಗ್ಗೆ ಅವರು ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿದ್ದರು. ರೇವಾ ವಿಶ್ವವಿದ್ಯಾನಿಲಯದ ಇಲೆಕ್ಟಾನಿಕ್ಸ್...


ನಾಲ್ಕೂರು : “ಸ್ವಚ್ಚತೆಯೇ ಸೇವೆ” ಆಂದೋಲನಕ್ಕೆ ವ್ಯಾಪಕ ಬೆಂಬಲ : ಮಾದರಿ ಕಾರ್ಯಕ್ಕೆ ಕೈ ಜೋಡಿಸಿದ ಜನತೆ

ಗುತ್ತಿಗಾರು ಗ್ರಾ.ಪಂ.ವ್ಯಾಪ್ತಿಯ ನಾಲ್ಕೂರು ಗ್ರಾಮದ ಹಾಲೆಮಜಲು ಶಾಲಾ ಬಳಿಯಿಂದ ಮರಕತ ದೇವಸ್ಥಾನದ ವರಗೆ ರಸ್ತೆಯ ಎರಡು ಬದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ನೂರಾರು ಗ್ರಾಮಸ್ಥರು ಸೇರಿ ರಸ್ತೆ ಬದಿಯ ಕಾಡು ಕಡಿದು, ವಾಹನ ಸವಾರರು ಎಸೆದ ಕಸಕಡ್ಡಿಗಳನ್ನು ಹೆಕ್ಕಿ ಸ್ವಚ್ಚತಾ ಸೇವೆಯಲ್ಲಿ ಭಾಗಿಯಾದರು. ಈ ಮಾದರಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ಅಮರ ಸುದ್ದಿ ವರದಿಗಾರ ಉಲ್ಲಾಸ್ ಕಜ್ಜೋಡಿ ಅವರಿಗೆ ಸನ್ಮಾನ

ವಿಕಲಚೇತನರಾಗಿದ್ದರೂ ತನ್ನ ಬರಹಗಳ ಮೂಲಕ ಯುವ ಪತ್ರಕರ್ತನಾಗಿ ಹೊರಹೊಮ್ಮುತ್ತಿರುವ ಯುವ ಪ್ರತಿಭೆ ಅಮರ ಸುದ್ದಿ ವರದಿಗಾರ, ಹವ್ಯಾಸಿ ಬರಹಗಾರ ಉಲ್ಲಾಸ್ ಕಜ್ಜೋಡಿ ಅವರನ್ನು ಸೆ.22 ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಿ, ಸಹಾಯಧನ ಹಸ್ತಾಂತರಿಸಲಾಯಿತು.ಹರಿಹರ ಪಲ್ಲತ್ತಡ್ಕ ಗ್ರಾಮದ ಉಲ್ಲಾಸ್ ಕಜ್ಜೋಡಿ ಅವರ ಮನೆಗೆ ತೆರಳಿದ ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ನ ಸದಸ್ಯರು ಅವರನ್ನು...

ಸುಬ್ರಹ್ಮಣ್ಯ : ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಬಾಕಿಯಾಗಿದ್ದ ವೇತನ – ಕಲ್ಮಡ್ಕ ಗ್ರಾ.ಪಂ.ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಮನವಿಗೆ ಸ್ಪಂದಿಸಿದ ಸರಕಾರ

ಸುಬ್ರಹ್ಮಣ್ಯ : ಕೆ.ಎಸ್.ಎಸ್.ಕಾಲೇಜು ಮತ್ತು ಎಸ್.ಎಸ್.ಪಿ.ಯು. ಕಾಲೇಜಿನ  ಉಪನ್ಯಾಸಕರು ಮತ್ತು ಪ್ರೌಢಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ  ಕಳೆದ ಕೆಲ ತಿಂಗಳುಗಳಿಂದ ವೇತನ ಬಾಕಿಯಾಗಿದ್ದು ಸಂಕಷ್ಟ ಅನುಭವಿಸುವಂತಾಗಿತ್ತು. ಈ ಬಗ್ಗೆ ಹಲವು ಬಾರಿ ಆಡಳಿತ ಮಂಡಳಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಬಾಕಿ ವೇತನ ಪಾವತಿಗೆ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ...

ನಡುಕ ಹುಟ್ಟಿಸುತ್ತಿರುವ ನಿಫಾ ವೈರಸ್ : ಸಾಮಾನ್ಯ ಜ್ವರ ಎಂದು ಕಡೆಗಣಿಸಿದ್ದಲ್ಲಿ ಜೀವಕ್ಕೇ ಕುತ್ತು

ನಿಫಾ ವೈರಸ್, ಆರ್.ಯನ್.ಎ(RNA) ಗುಂಪಿಗೆ ಸೇರಿದ ಪಾರಾಮಿಕ್ಸೊ ವೈರಾಣು ಪ್ರಭೇಧಕ್ಕೆ ಸೇರಿದ ವೈರಾಣು ಆಗಿರುತ್ತದೆ. ೧೯೯೯ರಲ್ಲಿ ಮಲೇಷಿಯಾದ ಒಂದು ಸಣ್ಣ ಹಳ್ಳಿಯಾದ ಸಂಗೈ ನಿಫಾ ಎಂಬ ಜಾಗದಲ್ಲಿ ಮೊದಲು ಕಾಣಿಸಿಕೊಂಡ ಕಾರಣದಿಂದ “ನಿಫಾ ವೈರಸ್” ಎಂದು ಕರೆಯಲ್ಪಡುತ್ತದೆ. ಈ ಹಳ್ಳಿಯ ಹಂದಿ ಸಾಕುವ ರೈತರಲ್ಲಿ ಮೊದಲು ಈ ಜ್ವರ ಕಾಣಿಸಿಕೊಂಡು ಮೆದುಳಿನ ಊರಿಯೂತ ಮತ್ತು ಉಸಿರಾಟದ...

ಪಿಡಿಓಗಳಾದ ಆಕಾಶ್ , ರವಿಚಂದ್ರ ಹಾಗೂ ಪ್ರವೀಣ್ ರಿಗೆ ವರ್ಗಾವಣೆ

ಸರಕಾರ 108 ಪಿಡಿಒಗಳನ್ನು ವರ್ಗಾವಣೆಗೊಳಿಸಿ ಆದೇಶ ಮಾಡಿದ್ದು ತಾಲೂಕಿನ ಮೂವರು ಪಿಡಿಒ ಗಳಿಗೆ ವರ್ಗಾವಣೆ ಆದೇಶವಾಗಿದೆ. ಅಮರ ಮುಡ್ನೂರು ಗ್ರಾಮ ಪಂಚಾಯತ್ ನಲ್ಲಿದ್ದ ಆಕಾಶ್ ಅವರಿಗೆ ಕೊಳ್ಳೆಗಾಲ ತಾಲೂಕಿನ ದೊಡ್ಡಿಂದ್ ವಾಡಿ ಪಂಚಾಯತ್ ಗೆ, ಕೊಲ್ಲಮೊಗ್ರದಲ್ಲಿದ್ದ ರವಿಚಂದ್ರ ಅಕ್ಕಪ್ಪಾಡಿ ಅವರಿಗೆ ಉಬರಡ್ಕ ಮಿತ್ತೂರು ಗ್ರಾಮ  ಪಂಚಾಯತ್ ಗೆ ಹಾಗೂ ಕಲ್ಮಡ್ಕದಲ್ಲಿದ್ದ ಪ್ರವೀಣ್ ಚಿಲ್ಪಾರ್ ಅವರಿಗೆ ಕೊಡಿಯಾಲ...

ಪಂಚ ಗ್ಯಾರಂಟಿ ಯೋಜನೆಯಿಂದ ಕಂಗಾಲಾದ ಬಿಜೆಪಿ – ಸುಳ್ಯದಲ್ಲಿ ಆಗಿರುವ ಕಾಮಗಾರಿ ಹರೀಶ್ ಕಂಜಿಪಿಲಿಯವರು ಮನೆಯ ಅಡಿಕೆ ಮಾರಿ ಮಾಡಿದ್ದಾರೆಯೇ ? –  ಪತ್ರಿಕಾ ಹೇಳಿಕೆ ನೀಡಿದ ಕಾಂಗ್ರೆಸ್ 

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಡಬಲ್ ಇಂಜಿನ್ ಸರಕಾರದ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆ ನಿಟ್ಟುಸಿರು ಬಿಟ್ಟು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಇದನ್ನು ಬಿಜೆಪಿಗರಿಗೆ ಸಹಿಸಲು ಆಗುತ್ತಿಲ್ಲ. ಈ ಕಾರಣಕ್ಕೆ ರೈತರ ಹೆಸರಿನಲ್ಲಿ ಬಿಜೆಪಿಯವರು ಪ್ರತಿಭಟನೆಯ ನಾಟಕ ಮಾಡುತ್ತಿದ್ದಾರೆ ಹೊರತು ರೈತರ ಮೇಲಿನ ಕಾಳಜಿಯಿಂದಲ್ಲ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಹೇಳಿದೆ. ಮುಂದಿನ...

ಕುಕ್ಕೆ ದೇವಳಕ್ಕೆ ಬೃಹತ್ ಗಾತ್ರದ ಫ್ಯಾನುಗಳ ಕೊಡುಗೆ

ಕುಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಂಗಳೂರಿನ ಜಯನಗರದ ಉದ್ಯಮಿ ವಿಕ್ರಮ ಏ.ವಿ.ಅವರು ಸೇವಾ ರೂಪದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಎಸಿಪಿ ಕಂಪನಿಯ ಎರಡು ಬೃಹದಾಕಾರದ ಸೀಲಿಂಗ್ ಫ್ಯಾನ್(HVLS) ಗಳನ್ನು ಕೊಡುಗೆಯಾಗಿ ಶ್ರೀ ದೇವಳಕ್ಕೆ ಗುರುವಾರ ನೀಡಿರುತ್ತಾರೆ. ಕ್ಷೇತ್ರ ಪುರೋಹಿತರಾದ ಮಧುಸೂಧನ ಕಲ್ಲೂರಾಯ ರವರು ಫ್ಯಾನುಗಳಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು .ಕೊಡುಗೆಯಾಗಿ ನೀಡಿದ ಎಸಿಪಿ ಕಂಪನಿಯ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಹಾಗೂ ಕಾಲಭೈರವೇಶ್ವರ ಗುಡಿ ನಿರ್ಮಾಣದ ಕೊಡುಗೆ ನೀಡುವುದಾಗಿ ಆಂಧ್ರಪ್ರದೇಶದ ಎ.ಎಂ.ಆರ್. ಗ್ರೂಪ್ ನ ಎ. ಮಹೇಶ್ ರೆಡ್ಡಿ ಘೋಷಣೆ

           ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು  ಆಶ್ಲೇಷ ನಕ್ಷತ್ರದ ಶುಭದಿನದಂದು ಶ್ರೀ ದೇವಳಕ್ಕೆ ಆಗಮಿಸಿದ ಹೈದರಾಬಾದ್ ಎ.ಎಂ.ಆರ್. ಇಂಡಿಯಾ ಲಿಮಿಟೆಡ್ನ ಎ. ಮಹೇಶ್ ರೆಡ್ಡಿ ಅವರು ಮುಂದಿನ ದಿನಗಳಲ್ಲಿ ದೇವಳದ ಸುತ್ತುಪೌಳಿ ನಿರ್ಮಾಣದ ಸಂದರ್ಭದಲ್ಲಿ ತಾನು ಕಾಲಭೈರವೇಶ್ವರ ಗುಡಿಯನ್ನು ನಿರ್ಮಿಸಿ ಕೊಡುವುದಾಗಿ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿಯನ್ನು ನೀಡುವುದಾಗಿ ಇಂದು...

ಕೆ.ಪಿ.ಜಾನಿಯವರಿಗೆ ದ.ಕ. ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಸನ್ಮಾನ

ಕರ್ನಾಟಕ ಸರ್ಕಾರದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ರಾಜ್ಯ ಸದಸ್ಯರಾಗಿ ನೇಮಕಗೊಂಡ ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷರು ಹಾಗೂ ಕಾರ್ಮಿಕ ನಾಯಕರಾದ ಕೆ.ಪಿ.ಜಾನಿ ಅವರನ್ನು ದ.ಕ. ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಕಲ್ಲುಗುಂಡಿಯ ಸಮನ್ವಯ ಸಹಕಾರಿ ಸಭಾಭವನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆಯವರ ಅಧ್ಯಕ್ಷತೆಯಲ್ಲಿ...

ರೈತ ವಿರೋಧಿ ಸರಕಾರದ ವಿರುದ್ದ ಬೀದಿಗಿಳಿದು ಹೋರಾಟ ಅನಿವಾರ್ಯ : ಭಾಗೀರಥಿ ಮುರುಳ್ಯ

ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ದ ಸುಳ್ಯದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿದರು. ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿಯು ಹೋರಾಟದ ಹಿನ್ನೆಲೆಯಿಂದಲೇ ಬಂದಿದ್ದು, ನಮ್ಮ ಸರಕಾರ ಇದ್ದ ಸಂದರ್ಭದಲ್ಲಿ ರೈತರ ಕಣ್ಣೀರು ಒರೆಸುವ ಹಾಗು ಬಡವರ ಬಂಧುವಾಗಿ ಕೆಲಸ ನಿರ್ವಹಿಸುತ್ತಿದ್ದೆವು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಬಿಟ್ಟಿ ಭಾಗ್ಯಗಳನ್ನು ಕೊಟ್ಟು ರೈತ ವಿರೋಧಿಗಳಾಗಿದ್ದಾರೆ ಎಂದು...

ಗ್ಯಾರಂಟಿ ಜಾರಿ ಬೆನ್ನಲ್ಲೆ ರಾಜ್ಯದಲ್ಲಿ ಅಭಿವೃದ್ಧಿಗೆ ಬರ – ಪ್ರತಾಪಸಿಂಹ ನಾಯಕ್

ಬಿಜೆಪಿ ಸರಕಾರ ರಾಜ್ಯದ ರೈತರಿಗೆ, ವಿದ್ಯಾರ್ಥಿಗಳಿಗೆ, ಜನರಿಗಾಗಿ ಸುಮಾರು ೧೮ ಕಾರ್ಯಕ್ರಮವನ್ನು ಜಾರಿಗೊಳಿಸಿತ್ತು. ಆದರೆ ಈಗ ರಾಜ್ಯದ ಕಾಂಗ್ರೆಸ್ ಸರಕಾರ ಅದನ್ನು ಹಿಂಪಡೆದು ಜನರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಸರಕಾರದ ವಿರುದ್ಧ ಸೆ.೧೧ ರಂದು ಸುಳ್ಯ ತಾಲೂಕು ಕಚೇರಿ ಎದುರು ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ...

“ಅಮರ ಸುಳ್ಯ ಸುದ್ದಿ” ದೀಪಾವಳಿ ವಿಶೇಷಾಂಕಕ್ಕೆ ಮಕ್ಕಳ ಫೋಟೋ ಸ್ಪರ್ಧೆ ಹಾಗೂ ಲೇಖನಗಳಿಗೆ ಆಹ್ವಾನ

ಸುಳ್ಯದ ಅಮರ ಸುಳ್ಯ ಸುದ್ದಿ ವಾರಪತ್ರಿಕೆ 6 ನೇ ಬಾರಿಗೆ ದೀಪಾವಳಿ ವಿಶೇಷಾಂಕ ಹೊರ ತರಲು ತಯಾರಿ ಆರಂಭಗೊಂಡಿದೆ. ಮುದ್ದು ಮಕ್ಕಳ ಫೋಟೋ ಸ್ಪರ್ಧೆ , ವಿವಿಧ ಅಂಕಣಗಳು, ಕಥೆ,ಕವನ ಗಳಿಗೆ ಆಹ್ವಾನ ನೀಡಲಾಗಿದೆ. ಆಸಕ್ತ ಬರಹಗಾರರು ಕಥೆ, ಕವನ ಲೇಖನಗಳನ್ನು ಅಕ್ಟೋಬರ್ 15 ರ ಒಳಗೆ ಕಳಿಸಬಹುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 9449387044ಕಳುಹಿಸಬೇಕಾದ ವಿಳಾಸ...

ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಬಿಜೆಪಿ ಶಾಸಕರಿಂದ ಸಿ.ಎಂ ಗೆ ಮನವಿ – ಶಾಸಕಿ ಭಾಗೀರಥಿ ಮುರುಳ್ಯ ಸಾಥ್

ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸುವಂತೆ ದ.ಕ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರ ನಿಯೋಗವು ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.          ಬಿಜೆಪಿ ಶಾಸಕರ ಮನವಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಉತ್ತರಿಸುತ್ತಾ, ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಲು ರಾಜ್ಯ ಸರಕಾರಕ್ಕೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಈ ವಿಷಯವನ್ನು ಸೌಜನ್ಯ ಪೋಷಕರಿಗೆ ನಾನು ತಿಳಿಸಿದ್ದೇನೆ. ಈಗಾಗಲೇ...

ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ‌ಪದಾಧಿಕಾರಿಗಳ ಆಯ್ಕೆ :
ಅಧ್ಯಕ್ಷರಾಗಿ ಸೋಮಶೇಖರ ಪೈಕ, ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಕೇಪಳಕಜೆ, ಖಜಾಂಜಿಯಾಗಿ ಮಧು ಕಿರಣ್

ಸುಳ್ಯ : ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವಾರ್ಷಿಕ ಮಹಾಸಭೆ ಹಾಗೂ 2023- 2026 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸೆ.2 ರಂದು ಸುಳ್ಯದ ಸಂಘದ ಕಛೇರಿಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಮಾಯಿಲಪ್ಪ ಸಂಕೇಶ, ನಿಕಟ ಪೂರ್ವ ಅಧ್ಯಕ್ಷ ಶ್ರೀಧರ ಕೆ.ಎಸ್ ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾಗಿ ಸೋಮಶೇಖರ್ ಪೈಕ...

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ – ತಾಲೂಕಿನ ಶಿಕ್ಷಕರಾದ ಹನುಮಂತಪ್ಪ, ಉದಯಕುಮಾರ್ ಹಾಗೂ ರಾಧಾಮ್ಮ ಆಯ್ಕೆ

ಸೆ.೫ ರ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಕೊಡಮಾಡುವ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿಗೆ ತಾಲೂಕಿನ ಮೂವರು ಶಿಕ್ಷಕರು ಆಯ್ಕೆಯಾಗಿದ್ದಾರೆ. ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಬೊಳುಬೈಲು ಕಿರಿಯ ಪ್ರಾಥಮಿಕ ಶಾಲೆಯ ಶ್ರೀಮತಿ ರಾಧಾಮ್ಮ, ಪ್ರಾಥಮಿಕ ಶಾಲಾ ವಿಭಾಗದಿಂದ ಗೂನಡ್ಕ ಶ್ರೀ ಶಾರದಾ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹನುಮಂತಪ್ಪ...

ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಆಗ್ರಹಿಸಿ  ಸುಬ್ರಹ್ಮಣ್ಯದಲ್ಲಿ ಪ್ರತಿಭಟನೆ

ಸೌಜನ್ಯ ಹತ್ಯೆ ಪ್ರಕರಣದ ನ್ಯಾಯಕ್ಕಾಗಿ ಹಾಗೂ ತನಿಖೆಗೆ ಒತ್ತಾಯಿಸಿ ಆ.31 ಸುಬ್ರಹ್ಮಣ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಹೋರಾಟಗಾರ ಮಹೇಶ್ ಶೆಟ್ಟಿ ತಿಮ್ಮರೋಡಿಮಾತನಾಡಿ ಕುಕ್ಕೆ ಸುಬ್ರಹ್ಮಣ್ಯ ನಾಗನ ಕ್ಷೇತ್ರದಲ್ಲಿ  ನಾವೆಲ್ಲಾ ಇದ್ದು ಪ್ರಾರ್ಥನೆ ಮಾಡಿದ್ದೇವೆ.  ಈ ಭಾರಿ ನ್ಯಾಯ ಸಿಗಲಿದೆ. ಆ ದಿನ ದೂರ ಇಲ್ಲ. ಎಂದರು. ಸೌಜನ್ಯಳಿಂದಾಗಿ ಲೋಕದಲ್ಲಿ ಧರ್ಮ ಸ್ಥಾಪನೆಯಾಗಬೇಕಾದ ಕಾಲ ಬಂದಿದೆ.  ಸಮಾಜದಲ್ಲಿ...

ರಂಗಾಯಣ ರಘು ನಟಿಸಿರುವ “ಶಾಖಾಹಾರಿ ” ಚಿತ್ರಕ್ಕೆ ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನ

ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಶಾಖಾಹಾರಿ ಎಂಬ ಚಿತ್ರ ಮೂಡಿಬರುತ್ತಿದ್ದು, ಇದಕ್ಕೆ ಸುಳ್ಯದ ಯುವ ಪ್ರತಿಭೆ ಮಯೂರ ಅಂಬೆಕಲ್ಲು ಸಂಗೀತ ನಿರ್ದೇಶನ ನೀಡಿದ್ದಾರೆ. ಶಾಖಾಹಾರಿ ಚಿತ್ರದ ಮೂಲಕ ಸುಳ್ಯದ ತೆರೆಮರೆಯ ಪ್ರತಿಭೆಯೊಂದು ಅನಾವರಗೊಂಡಿದೆ. ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಅಂಬೆಕಲ್ಲು ಮನೆತನದವರಾದ ಮಯೂರ್, ಗ್ರಾ.ಪಂ.ಸದಸ್ಯ ಶೈಲೇಶ್ ಅಂಬೆಕಲ್ಲು ಹಾಗೂ ಅಶ್ವಿನಿ ಶೈಲೇಶ್ ದಂಪತಿಗಳ ಪುತ್ರ....

ಸುಳ್ಯ : ಉರುಳಿಗೆ ಬಿದ್ದು ಚಿರತೆ ಮೃತಪಟ್ಟ ಪ್ರಕರಣ – ಇಬ್ಬರ ಮೇಲೆ ಪ್ರಕರಣ ದಾಖಲು,ಬಂಧನ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಪಡ್ಡಂಬೈಲು ಎಂಬಲ್ಲಿ ಆ.29ರಂದು ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಸುಮಾರು ಒಂದುವರೆ ವರ್ಷದ ಚಿರತೆ ಮರಿ ಉರುಳಿಗೆ ಸಿಲುಕಿ ಮೃತಪಟ್ಟ ಘಟನೆ ವರದಿಯಾಗಿತ್ತು. ಇದೀಗ ಇಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದ್ದು ಆರೋಪಿತರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಬಂಧಿತರನ್ನು ಜಯರಾಮ ಪಡ್ಡಂಬೈಲು ಹಾಗೂ ಪೃಥ್ವಿ ಪಡ್ಡಂಬೈಲು ಎಂದು ಸುಳ್ಯ ರೇಂಜರ್...

ಸುಳ್ಯದ ರಂಗಮನೆಯಲ್ಲಿ ಯಕ್ಷ ಸಂಭ್ರಮ : ವಿಶ್ವವಿನೋದ ಬನಾರಿ ಮತ್ತು ಕುಮಾರ ಸುಬ್ರಹ್ಮಣ್ಯ ಇವರಿಗೆ ವನಜ ರಂಗಮನೆ ಪ್ರಶಸ್ತಿ ಪ್ರದಾನ

ಸುಳ್ಯದ ಪ್ರಸಿದ್ಧ ರಂಗಮನೆ ಸಾಂಸ್ಕ್ರತಿಕ ಕಲಾ ಕೇಂದ್ರದ ವತಿಯಿಂದ ವನಜ ರಂಗಮನೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯಕ್ಷ ಸಂಭ್ರಮ ಆ.27ರಂದು ಸಂಜೆ ಸುಳ್ಯದ ಹಳೇಗೇಟಿನ ರಂಗಮನೆಯಲ್ಲಿ ನಡೆಯಿತು. ಸುಜಾನ ಯಕ್ಷ ಶಿಕ್ಷಣ ಕೇಂದ್ರದ ಹಿಮ್ಮೇಳ ಕಲಾವಿದರಿಂದ ಚೆಂಡೆ ಮದ್ದಳೆ ಝೇಂಕಾರ‌ ನಡೆಯಿತು.‌ ನಂತರ ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯ ನಿಟ್ಟೆ‌ ಕಾರ್ಕಳ ತಾಲೂಕು ಇವರಿಂದ ಪ್ರಶಸ್ತಿ...

ಸೋಲಾರ್ ಹ್ಯಾಂಗಿಂಗ್ ಪೆನ್ಸ್ ಕಾಮಗಾರಿ ಪೂರ್ಣ – ಆನೆ ದಾಳಿಯಿಂದ ಕಂಗಾಲಾದ ಕೃಷಿಕರು ನಿರಾಳ

ಸುಳ್ಯ : ತಾಲೂಕಿನ ನಾನಾ ಕಡೆಗಳಲ್ಲಿ ಹಲವಾರು ವರ್ಷಗಳಿಂದ ಆನೆ ಹಾವಳಿ ಹೆಚ್ಚಾಗಿ ಕೃಷಿಕರು ಕಂಗಾಲಾಗಿದ್ದರು. ಇದನ್ನು ತಡೆಯುವುದು ಅರಣ್ಯ ಇಲಾಖೆಗೆ ಸವಾಲಿನ ಕೆಲಸವಾಗಿತ್ತು . ಇದನ್ನು ಗಂಭೀರವಾಗಿ ಪರಿಗಣಿಸಿ ಸುಳ್ಯ ಅರಣ್ಯ ಇಲಾಖೆಯು ಮೊದಲು ಆನೆ ಕಂದಕ ನಿರ್ಮಾಣ ಮಾಡಿತ್ತು. ಅದು ಕೆಲವು ಕಡೆಗಳಲ್ಲಿ ಭಾರಿ ಮಳೆಯಿಂದಾಗಿ ಮಣ್ಣು ಬಿದ್ದ ಕಾರಣ ಅಲ್ಲಿ ಆನೆಗಳು...

ಮೈಸೂರು : ಮೊಬೈಲ್ ಜರ್ನಲಿಸಂ ನಲ್ಲಿ ಕ್ಷಮಾ ಅಂಬೆಕಲ್ಲು ಪ್ರಥಮ ಸ್ಥಾನ

ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ನಡೆದ ಮಾಧ್ಯಮ ಹಬ್ಬದಲ್ಲಿ ಮೊಬೈಲ್ ಜರ್ನಲಿಸಂ ನಲ್ಲಿ ಕ್ಷಮಾ ಅಂಬೆಕಲ್ಲು ಪ್ರಥಮ ಸ್ಥಾನ ಗಳಿಸಿದ್ದಾರೆ. ಮೈಸೂರಿನ ಮಾತಾ ವಿಶ್ವ ವಿದ್ಯಾಪೀಠ   ಶಿಕ್ಷಣ ಸಂಸ್ಥೆಯಲ್ಲಿ   ವಿಶುವಲ್ ಕಮ್ಯುನಿಕೇಶನ್ (Int. Msc) 3 ನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಕೆ ದೇವಚಳ್ಳ ಗ್ರಾ.ಪಂ.ಸದಸ್ಯ ಶೈಲೇಶ್ ಅಂಬೆಕಲ್ಲು ಹಾಗೂ ಅಶ್ವಿನಿ ಶೈಲೇಶ್ ದಂಪತಿಗಳ ಪುತ್ರಿ.ಮೈಸೂರು...

ಕೊಡಿಯಾಲಬೈಲು ಶಾಲೆಯನ್ನು ದತ್ತು ಸ್ವೀಕಾರಕ್ಕೆ ನಿರ್ಧರಿಸಿದ ಲಯನ್ಸ್ ಕ್ಲಬ್ – ಆ.28 ರಂದು ಶಾಲಾ ಜಾಗದಲ್ಲಿ ತೆಂಗು ಅಡಿಕೆ ಹಾಗೂ ಹಣ್ಣಿನ ತೋಟ ನಿರ್ಮಾಣಕ್ಕೆ ಚಾಲನೆ

ಸುಳ್ಯ ಲಯನ್ಸ್ ಕ್ಲಬ್ ಅನೇಕ ಜನಪರ ಸಮಾಜ ಸೇವಾ ಚಟುವಟಿಕೆಗಳೊಂದಿಗೆ ಸುಳ್ಯದ ಜನಮಾನಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದು ಸಂಸ್ಥೆ 51ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೊಸ ಯೋಜನೆ ರೂಪಿಸುವ ದೃಷ್ಟಿಯಿಂದ ಸರಕಾರಿ ಶಾಲೆಯೊಂದನ್ನು ದತ್ತು ಪಡೆದು ಅದರ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಅಧ್ಯಕ್ಷರಾದ ಲಯನ್ ವೀರಪ್ಪ ಗೌಡ ಕಣ್ಕಲ್ ತಿಳಿಸಿದರು. ಸುಳ್ಯ ಪ್ರೆಸ್...

ಇಸ್ರೋ ಚಂದ್ರಯಾನ-3 ಮಿಷನ್ ನಲ್ಲಿ ಸುಳ್ಯದ ವಿಜ್ಞಾನಿ ಹಾಗೂ ಸುಳ್ಯದ ಯುವತಿ ಭಾಗಿ

ಭಾರತದ ಕೋಟ್ಯಾಂತರ ಜನರ ಹಾರೈಕೆಯೊಂದಿಗೆ ಇಂದು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಲ್ಯಾಡರ್ ತನ್ನ ಹೆಜ್ಜೆಗಳನ್ನು ಇರಿಸಿದ್ದು ಈ ಕಾರ್ಯದಲ್ಲಿ ಸುಳ್ಯದ ಕೊಡಪಾಲ ಮೂಲದ  ಶಾಂಬಯ್ಯ ಇಸ್ರೋ ವಿಜ್ಞಾನಿ ಮತ್ತು ಇನ್ನೊರ್ವೆ ಮಂಡೆಕೋಲು ಗ್ರಾಮದ ಮಾನಸ ಎಂಬ ಯುವತಿ ಚಂದ್ರಯಾನ-3 ತಂಡದಲ್ಲಿ ಭಾಗಿಯಾಗಿದ್ದು ದಕ್ಷಿಣ ಕನ್ನಡ ಹಾಗೂ ಸುಳ್ಯಕ್ಕೆ ಹೆಮ್ಮೆಯಾಗಿದ್ದು ಇದೀಗ ಈ ಇಬ್ಬರಿಗು ಸಾಮಾಜಿಕ ಜಾಲತಾಣಗಳಲ್ಲಿ...

ತೆಲಂಗಾಣ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ತೆರಳಿದ ಶಾಸಕಿ ಭಾಗೀರಥಿ ಮುರುಳ್ಯ

ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಬೆಳ್ಳಂಪಲ್ಲಿ ತಾಲೂಕಿನ ವಿಧಾನಸಭಾ ಕ್ಷೇತ್ರದ ಕನ್ನೆಪಲ್ಲಿ ಮಂಡಲದ ಪಕ್ಷ ಸಂಘಟನೆ ಹಾಗೂ ಚುನಾವಣಾ ಸಿದ್ಧತೆಯ ತಯಾರಿಗಳ ಕುರಿತು ಪ್ರಮುಖರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಪಕ್ಷದ ಕಚೇರಿಯಲ್ಲಿ ಬಿಜೆಪಿ ಧ್ವಜವನ್ನು ಹಾರಿಸಿದರು. ನಂತರ ಎಲ್ಲರಂ ಗ್ರಾಮ ದಲ್ಲಿ ಸ್ಥಳೀಯ ಮಹಿಳಾ ಕೃಷಿಕರೊಂದಿಗೆ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಮೂಲಕ ಸುಳ್ಯ...

ಗುತ್ತಿಗಾರು ಸೊಸೈಟಿಗೆ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆ ಆ.19 ರಂದು ಮಂಗಳೂರಿನಲ್ಲಿ ನಡೆದಿದ್ದು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಮಗ್ರ ವ್ಯವಹಾರ ಪರಿಗಣಿಸಿ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ನೀಡಿ ಗೌರವಿಸಿದೆ. ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಿದರು. ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಹಾಗೂ ಮುಖ್ಯ...

ಮೊಸರು ಕುಡಿಕೆ ಉತ್ಸವ ಸಮಿತಿ ರಚನೆ : ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ – ಪ್ರ. ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ – ಖಜಾಂಜಿ ನವೀನ್ ಎಲಿಮಲೆ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಇದರ ವತಿಯಿಂದ ಸುಳ್ಯದಲ್ಲಿ ನಡೆಯಲಿರುವ 10 ನೇ ವರ್ಷದ ವಿಶ್ವ ಹಿಂದು ಪರಿಷತ್ತಿನ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸೆ. 16 ರಂದು ನಡೆಯಲಿರುವ ಮೊಸರು ಕುಡಿಕೆ ಉತ್ಸವದ  ಸಭೆಯು ವಿ.ಹೆಚ್.ಪಿ.ಅಧ್ಯಕ್ಷ ಸೋಮಶೇಖರ ಪೈಕ ರವರ ಅಧ್ಯಕ್ಷತೆಯಲ್ಲಿ ಆ.15 ರಂದು ಸುಳ್ಳ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.ವೇದಿಕೆಯಲ್ಲಿ ಬಜರಂಗದಳ...

ಮಕ್ಕಳಲ್ಲಿ ದೇಶಪ್ರೇಮವನ್ನು ಪ್ರೇರೆಪಿಸುವ ಅಮೂಲ್ಯವಾದ ಪ್ರಯತ್ನವಾಗಬೇಕು

✍️ ಭಾಸ್ಕರ ಜೋಗಿಬೆಟ್ಟು ನಮಗೆ ಈ ವರ್ಷ 76 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ದೇಶಾದ್ಯಂತ ಈ ಸಂದರ್ಭದಲ್ಲಿ ಪ್ರತಿಯೊಂದು ಮನೆ , ಕಛೇರಿಗಳಲ್ಲಿ ಬಾವುಟವನ್ನು ಹಾರಿಸುವುದರ ಮೂಲಕ ಗೌರವವನ್ನು ಸೂಚಿಸಲಾಗುತ್ತದೆ. ಮಕ್ಕಳಿಗೆ ಬೇರೆ ಚಟುವಟಿಕೆಗಳ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ತಿಳಿಸಲಾಗುತ್ತದೆ. ಮಕ್ಕಳಿಗೆ ದೇಶಪ್ರೇಮದ ಬಗ್ಗೆ ತಿಳುವಳಿಕೆ ನೀಡಬೇಕು ಇಂದಿನ ಮಕ್ಕಳೆ ಮುಂದಿನ ಜನಾಂಗ....

ಸುಳ್ಯ : ನೈತಿಕ ಪೋಲೀಸ್ ಗಿರಿ ಪ್ರಕರಣ – ಮಾಹಿತಿದಾರನ ಬಂಧನ

ಆ.12 ರಂದು ಸಂಜೆ ನಡೆದ ನೈತಿಕ ಪೋಲೀಸ್ ಗಿರಿ ಪ್ರಕರಣದಲ್ಲಿ ಹಿಂದು ಸಂಘಟನೆಗಳಿಗೆ ಮಾಹಿತಿ ನೀಡಿದಾತನ ಬಂಧಿಸಿರುವ ಬಗ್ಗೆ ತಿಳಿದುಬಂದಿದೆ. ಸುಳ್ಯದ ಖಾಸಗಿ ಹೋಟೆಲ್ ಬಂದ ಜೋಡಿಯ ಬಗ್ಗೆ ಸಿಬ್ಬಂದಿ ವಿಡಿಯೋ ದೃಶ್ಯಾವಳಿಗಳನ್ನು ಸಂಘಟನೆಯ ಕಾರ್ಯಕರ್ತರಿಗೆ ಹಂಚಿದ್ದು ಇದರಿಂದಾಗಿ ನಿನ್ನೆಯ ಎಲ್ಲಾ ಘಟನೆಗಳಿಗೆ ಮುಖ್ಯ ಕಾರಣವೆಂದು ಮನಗಂಡ ಸುಳ್ಯ ಪೋಲೀಸರು ಆತನನ್ನು ಬಂಧಿಸಿದ ಘಟನೆ ಇದೀಗ...

ಸುಳ್ಯ : ನೈತಿಕ ಪೋಲೀಸ್ ಗಿರಿ ಹಿನ್ನೆಲೆ : ಓರ್ವನ ಬಂಧನ – ಬಿಡುಗಡೆ, ನೈಜ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಪೋಲೀಸರು

ತೊಡಿಕಾನ ಗ್ರಾಮದ ಅಡ್ಯಡ್ಕದಲ್ಲಿ ನಡೆದ ನೈತಿಕ ಪೋಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಓರ್ವನನ್ನು ಬಂಧಿಸಿ, ಬಿಜೆಪಿ ಹಾಗೂ ಹಿಂದೂ ಮುಖಂಡರ ಆಗಮನದ ಬಳಿಕ ಹೈಡ್ರಾಮ ನಡೆದು ಬಿಡುಗಡೆಗೊಳಿಸಿದ ಘಟನೆ ಆ.12 ರಂದು ನಡೆದಿದೆ. ನೈತಿಕ ಪೋಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಂತೋಡಿನ ಅರ್ಜುನ್ ಎಂಬ ಯುವಕನನ್ನು ಸುಳ್ಯ ಪೋಲೀಸರು ಬಂಧಿಸಿ,ಠಾಣೆಯಲ್ಲಿ ಕೂರಿಸಿದ್ದಾರೆಂಬ ವಿಷಯ ತಿಳಿದ...

ಮಸೂದ್ ಹತ್ಯೆ ಪ್ರಕರಣದ ನಾಲ್ಕನೇ ಆರೋಪಿಗೆ ಜಾಮೀನು – ಬಿಡುಗಡೆ

ಕಳಂಜದಲ್ಲಿ ಕಳೆದ ವರ್ಷ ನಡೆದ ಮಸೂದ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾಗಿದ್ದವರ ಪೈಕಿ ಈಗ ನಾಲ್ಕನೇ ಆರೋಪಿಯಾಗಿರುವ ಶಿವಪ್ರಸಾದ್ ಕಳಂಜ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ. ಹೈಕೋರ್ಟ್ ಆದೇಶದ ಮೇಲೆ ಬಿಡುಗಡೆ ಮಾಡಲಾಗಿದ್ದು, ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ನೇತೃತ್ವದ ಪೀಠವು ಆದೇಶವನ್ನು ಹೊರಡಿಸಿದೆ. ಇತ್ತೀಚೆಗೆ ಪ್ರಕರಣದ 7ನೇ ಆರೋಪಿಯಾಗಿರುವ ಜಿಮ್‌ ರಂಜಿತ್ ಜಾಮೀನು ಕೋರಿ ವಕೀಲರ ಮೂಲಕ...

ಸೌಜನ್ಯಳ ಪರ ನ್ಯಾಯಕ್ಕಾಗಿ ಧರ್ಮಯುದ್ಧ – ರಾಜಕೀಯ ರಹಿತ ಹೋರಾಟಕ್ಕೆ ಸಾಕ್ಷಿಯಾಗಲಿದೆ ಸುಳ್ಯ – ಇಂದು ನಿಂತಿಕಲ್ಲಿನಿಂದ ಸುಳ್ಯಕ್ಕೆ ಜಾಥಾ – ಬೃಹತ್ ಪ್ರತಿಭಟನೆ

ಸುಮಾರು 11 ವರ್ಷಗಳ ಹಿಂದೆ ಧರ್ಮಸ್ಥಳ ಸಮೀಪ ಸೌಜನ್ಯಳನ್ನು  ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ನೈಜ ಆರೋಪಗಳನ್ನು ಶಿಕ್ಷೆಕೆ ಒಳಪಡಿಸಬೇಕು,ಸೌಜನ್ಯಳ ಸಾವಿಗೆ ನ್ಯಾಯ ಒದಗಿಸಬೇಕು ಎಂಬ ಕೂಗು ರಾಜ್ಯದಾದ್ಯಂತ ಕೇಳಿ ಬರುತ್ತಿದೆ. ಈ ಹೋರಾಟದ ಭಾಗವಾಗಿ ಸುಳ್ಯದಲ್ಲಿ ಆ. 8ರಂದು ಸುಳ್ಯದ ನಿಂತಿಕಲ್ಲಿನಿಂದ ಸುಳ್ಯ ನಗರದವರೆಗೆ ವಾಹನ ಜಾಥಾ, ಪೈಚಾರಿನಿಂದ ಕಾಲ್ನಡಿಗೆ ಜಾಥಾ  ...

ಹಸಿಕಸ ಒಣಕಸ ವಿಂಗಡಿಸದೇ ನೇರವಾಗಿ ತ್ಯಾಜ್ಯ ವಿಲೇವಾರಿ ಘಟಕ್ಕೆ ಸಾಗಣೆ – ಕಲ್ಚರ್ಪೆ ನಿವಾಸಿಗಳಿಂದ ಲಾರಿ ತಡೆದು ಪ್ರತಿಭಟನೆ – ಸ್ಥಳಕ್ಕೆ ಶಾಸಕಿ ಕು. ಭಾಗೀರಥಿ ಮುರುಳ್ಯ ಭೇಟಿ – ಭರವಸೆ

ನಗರ ಪಂಚಾಯತ್ ಅಧ್ಯಕ್ಷರ ಅವಧಿ ಮುಗಿದ ದಿನದಿಂದ ಸುಳ್ಯದ ಕಲ್ಚರ್ಪೆಯಲ್ಲಿ ಕಸದ ಸಮಸ್ಯೆ ಪುನಾರವರ್ತನೆಯಾಗಿದ್ದು ಜನ ಲಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಆ.7 ರಂದು ವರದಿಯಾಗಿದೆ. ಸ್ಥಳಕ್ಕೆ ಶಾಸಕಿ ಕು.ಭಾಗೀರಥಿ ಮುರುಳ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಕೆಲ ದಿನಗಳಿಂದ ಕಸದ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಕಸದ ರಾಶಿ...

ಜಲಪ್ರಳಯ ಆಗಿ ವರ್ಷ ಕಳೆದರೂ ಪೂರ್ಣಗೊಳ್ಳದ ಪರಿಹಾರ ಕಾರ್ಯ – ಸರಕಾರದಿಂದ ವಿಶೇಷ ಅನುದಾನದ ಅಗತ್ಯ

✍️ಉಲ್ಲಾಸ್ ಕಜ್ಜೋಡಿ ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಹಾನಿಗಳು ಸಂಭವಿಸಿದಾಗ, ಮೂರ್ನಾಲ್ಕು ಗ್ರಾಮಗಳು ಆ ಜಲಪ್ರಳಯಕ್ಕೆ ಸಿಲುಕಿ ಅಪಾರ ಹಾನಿ ಸಂಭವಿಸಿದರೆ ಎಷ್ಟೇ ವರ್ಷಗಳು ಕಳೆದರೂ ಆ ಕರಾಳ ನೆನಪುಗಳು ಜನರ ಮನಸ್ಸಿನಿಂದ ಎಂದಿಗೂ ಮರೆಯಾಗುವುದಿಲ್ಲ.ಕಳೆದ ಒಂದು ವರ್ಷದ ಹಿಂದೆ ಅಂದರೆ 2022ರ ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆಗೆ ಹರಿಹರ ಪಲ್ಲತ್ತಡ್ಕ ಹಾಗೂ ಕೊಲ್ಲಮೊಗ್ರು ಗ್ರಾಮ...

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಯ್ದೆರೆದು ಕುಳಿತಿದೆ ಯಮಕಿಂಕರ ಗುಂಡಿ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರೆಯಲ್ಲಿ ಸುಳ್ಯ ನಗರವು ಸೇರಿದಂತೆ ನಾನಾ ಕಡೆಗಳಲ್ಲಿ ಇದೀಗ ಯಮ ಕಿಂಕರ ಗುಂಡಿಗಳು ಬಿದ್ದಿದ್ದು ವಾಹನ ಸವಾರರಿಗೆ ಪ್ರಯಾಣ ಬಹಳ ಪ್ರಯಾಸದಾಯಕವಾಗಿದೆ. ಸುಳ್ಯದ ಗಾಂಧಿನಗರ , ಉಬರಡ್ಕ ಕ್ರಾಸ್ , ಅರಂಬೂರು , ಪೆರಾಜೆ , ಅರಂತೋಡು ಹೀಗೆ ನಾನಾ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾ ಮಳೆಗೆ ರಸ್ತೆಯ ಮಧ್ಯದಲ್ಲಿ ಗುಂಡಿಗಳು...

ಹಣ ದ್ವಿಗುಣ ವಂಚನಾ ಜಾಲಕ್ಕೆ 34 ಸಾವಿರ ರೂಪಾಯಿ ಕಳಕೊಂಡ ಕೊಲ್ಲಮೊಗ್ರದ ಯುವಕ

ಹಣ ದ್ವಿಗುಣ ಗೊಳಿಸುವ ವಂಚನಾ ಜಾಲಕ್ಕೆ ಸಿಲುಕಿದ ಯುವಕನೋರ್ವ 34 ಸಾವಿರ ಕಳೆದುಕೊಂಡ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಪೂಜಾರಿ ಮನೆ ಲಿಖಿನ್ ಪಿ.ಟಿ. ಎಂಬ ಯುವಕ ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಜು. 17ರಂದು ಲಿಖಿನ್ ಅವರ ವಾಟ್ಸ್‌ ಪ್‌ ಗೆ ಹಣ ದ್ವಿಗುಣಗೊಳಿಸಿ ಕೊಡುತ್ತೇನೆಂದು...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಅಮಿತ್ ಶಾ ಪುತ್ರ ಬಿ.ಸಿ.ಸಿ.ಐ ಕಾರ್ಯದರ್ಶಿ ಜಯ್ ಶಾ ಭೇಟಿ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆದಿತ್ಯವಾರ ಬಿಸಿಸಿಐ ಕಾರ್ಯದರ್ಶಿ ಮತ್ತು ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಪುತ್ರ ಜಯ್‌ಷಾ ಭೇಟಿ ನೀಡಿದರು. ಶ್ರೀ ದೇವಳಕ್ಕೆ ಭೇಟಿ ನೀಡಿದ ಅವರು ದೇವರಿಗೆ ಆಶ್ಲೇಷಬಲಿ ಸೇವೆ ಸಮರ್ಪಿಸಿದರು.ಇವರೊಂದಿಗೆ ಇವರ ಪತ್ನಿ ರಿಷಿತಾ ಷಾ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ...

ಅಜ್ಜಾವರ : ಕಂಡದ ಗೌಜಿ ಕೆಸರ್ ದ ಪರ್ಬ ಕಾರ್ಯಕ್ರಮಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ

ಪ್ರತಾಪ ಯುವಕಮಂಡಲ ಹಾಗೂ ಚೈತ್ರ ಯುವತಿ ಮಂಡಲ ಅಜ್ಜಾವರ ದ್ವಿತೀಯ ವರ್ಷದ ಕಂಡದ ಗೌಜಿ ಕೇಸರ್ದ ಪರ್ಬ ಕಾರ್ಯಕ್ರಮ ಅಜ್ಜಾವರ ವಿಷ್ಣುಮೂರ್ತಿ ಒತ್ತೆಕೋಲ ಗದ್ದೆಯಲ್ಲಿ ಇಂದು ಜರುಗಿತು. ಶಾಸಕಿ ಕು. ಭಾಗೀರಥಿ ಮುರುಳ್ಯ ಕಾರ್ಯಕ್ರಮ ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿ ನನಗೂ ಆಸೆಯಿದೆ ಗದ್ದೆಯಲ್ಲಿ ಇಂದು ಇರಲು, ಆದರೆ ನಮಗೆ ಬೇರೆ ಕಾರ್ಯಕ್ರಮ ಇರುವ ಹಿನ್ನಲೆಯಲ್ಲಿ...

ಬೆಳ್ತಂಗಡಿ ಸೌಜನ್ಯ ಹತ್ಯೆ ಪ್ರಕರಣ, ಮರು ತನಿಖೆಗೆ ಸುಳ್ಯ ಗೌಡ ಯುವ ಸೇವಾ ಸಂಘ ಆಗ್ರಹ – ವಾಹನ ಜಾಥಾ ಮನವಿ ಸಲ್ಲಿಕೆಗೆ ನಿರ್ಧಾರ

ಬೆಳ್ತಂಗಡಿಯ ಸೌಜನ್ಯ ಹತ್ಯೆ ಪ್ರಕರಣವನ್ನು ಸರಕಾರ ಮರು ತನಿಖೆಗೆ ಒಳಪಡಿಸಿ ನೈಜ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಸುಳ್ಯ ಗೌಡ ಯುವ ಸೇವಾ ಸಂಘ ಒತ್ತಾಯಿಸಿದೆ. ಆ.1ರಂದು ಸುಳ್ಯ ಪ್ರಮುಖ ರಸ್ತೆಯ ಮ‌ೂಲಕ ವಾಹನ ಜಾಥಾ ನಡೆಸಿ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರರ ಮೂಲಕ ಸರಕಾರವನ್ನು ಒತ್ತಾಯಿಸಲು ನಿರ್ಧರಿಸಿದೆ ಎಂದು ಗೌಡ...

ಸಾಮಾಜಿಕ ನ್ಯಾಯ, ಸಮಪಾಲು ಸಮಬಾಳು ಸರಕಾರದ ಗುರಿ : ಪೆರಾಜೆಯಲ್ಲಿ ಸಾರ್ವಜನಿಕ ಅಭಿನಂದನೆ ಸ್ವೀಕರಿಸಿ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅಭಿಮತ

ಭರವಸೆಯ ಐದು ಗ್ಯಾರೆಂಟಿಗಳನ್ನು ಪೂರೈಸಿ ನುಡಿದಂತೆ ನಡೆದ ಸರಕಾರವಿದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರಕಾರ. 4 ಕೋಟಿ ಮನೆಗೆ ಗೃಹ ಲಕ್ಷ್ಮಿ ಯೋಜನೆಯಲ್ಲಿ ತಿಂಗಳಿಗೆ 2 ಸಾವಿರದಂತೆ ನೀಡಿದ ಸರಕಾರ ಪ್ರಪಂಚದಲ್ಲಿ ಇಲ್ಲ. ಸಮಪಾಲು- ಸಮಬಾಳು ಎಂಬಂತೆ ಸಾಮಾಜಿಕ ನ್ಯಾಯದಡಿಯಲ್ಲಿ ಜನರಿಂದ ತೆರಿಗೆರೂಪದಲ್ಲಿ ಸಂಗ್ರಹ ವಾದ ಹಣವನ್ನು ಜನರಿಗೆ ನಾನಾರೂಪದ ಯೋಜನೆ ಗಳ ಮೂಲಕ ಜನರಿಗೆ...

ಸುಳ್ಯದ ಸಮಸ್ಯೆಗಳಿಗೆ ಧ್ವನಿ ಎತ್ತದೇ ಶಾಸಕರ ಬಗ್ಗೆ ಜನ ಭ್ರಮ ನಿರಸನರಾಗಿದ್ದಾರೆ – ಅರ್ಹರಿಗೆ ಗೃಹಲಕ್ಷ್ಮಿ ಯೋಜನೆ ತಲುಪುವಂತಾಗಲು ಕಾಂಗ್ರೆಸ್ ಪ್ರಯತ್ನ : ಎಂ. ವೆಂಕಪ್ಪ ಗೌಡ

ಕಾಂಗ್ರೆಸ್ ಸರಕಾರ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯನ್ನು ನಗರ ವ್ಯಾಪ್ತಿಯಲ್ಲಿ ಅರ್ಹ ಪ್ರತಿ ಮನೆಗಳಿಗೆ ತಲುಪಿಸುತ್ತೇವೆ. ಹಾಗೂ ಸುಳ್ಯದ ಜನತೆಯ ಬೇಡಿಕೆ ಹಾಗೂ ಸಮಸ್ಯೆಗಳ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತದೇ ಇರುವುದರಿಂದ ನಿರೀಕ್ಷೆ ಇಟ್ಟಿದ್ದ ಜನ ಭ್ರಮನಿರಶನಗೊಂಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಎಂ.ವೆಂಕಪ್ಪ ಗೌಡ ಹೇಳಿದರು. ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗೃಹಲಕ್ಷ್ಮೀ ಯೋಜನೆಯ...

ಸುಳ್ಯದಲ್ಲಿ ಕಾರ್ಗಿಲ್ ವಿಜಯ್ ದಿವಸ – ತ್ಯಾಗ ಬಲಿದಾನ ಮಾಡಿದ ವೀರ ಯೋಧರಿಗೆ ನಮನ

ಸುಳ್ಯದ ರಾಷ್ಟ್ರಾಭಿಮಾನಿಗಳ ಬಳಗದ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಯೋಧ ನಮನ ಕಾರ್ಯಕ್ರಮ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ಜು.26 ರಂದು ನಡೆಯಿತು. ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ದೇಶಕ್ಕಾಗಿ ಹೋರಾಡಿದ ವೀರ ಸೈನಿಕರ ತ್ಯಾಗ ಬಲಿದಾನ ಸ್ಮರಿಸಿ ವೀರ ಯೋಧರಿಗೆ ನಮನ ಸಲ್ಲಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜಗದೀಶ್...

ಬಿಜೆಪಿ ವತಿಯಿಂದ ಪ್ರವೀಣ್ ನೆಟ್ಟಾರು ಸ್ಮೃತಿ ದಿನಾಚರಣೆ: ಪುತ್ಥಳಿಗೆ ಮಾಲಾರ್ಪಣೆ- ರಕ್ತದಾನ ಶಿಬಿರ

ಬಿಜೆಪಿ ಸುಳ್ಯ ಮಂಡಲ ಸಮಿತಿಯ ವತಿಯಿಂದ ಕಳೆದ ವರ್ಷ ಜುಲೈ 26ರಂದು ಹತ್ಯೆಗೀಡಾದ ಬಿಜೆಪಿಯ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಸ್ಮೃತಿದಿನವನ್ನು ಆಚರಿಸಲಾಗುತಿದೆ. ಇದರ ಅಂಗವಾಗಿ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಬಿಜೆಪಿ ಮುಖಂಡರು ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಬಿಜೆಪಿ...

ಜು.27: ಮುಖ್ಯಮಂತ್ರಿ ಕಾನೂನು ಸಲಹೆಗಾರ ಪೊನ್ನಣ್ಣ ಪೆರಾಜೆಗೆ –  ಅಭಿನಂದನಾ ಸಮಾರಂಭ

ವಿರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರಿಗೆ ಪೆರಾಜೆಯಲ್ಲಿ ಕಾಂಗ್ರೆಸ್ ಸಮಿತಿ  ಮತ್ತು ಸಾರ್ವಜನಿಕ ರಿಂದ ಅಭಿನಂದನಾ ಸಮಾರಂಭ, ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಜು.27 ರಂದು  ಸಂಜೆ 4.30 ಕ್ಕೆ ನಡೆಯಲಿದೆ.  ಪೆರಾಜೆ ಗ್ರಾ.ಪಂ.ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕ ಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಬೇಕೆಂದು ಪೆರಾಜೆ ಗ್ರಾ.ಪಂ. ಸದಸ್ಯ ಹಾಗೂ...

ಸುಳ್ಯ : ಸಮಸ್ಯೆಗಳ ಸುಳಿಯಲ್ಲಿ ಶತಮಾನ ಕಂಡ ಸರಕಾರಿ ಶಾಲೆ – ಶಾಸಕರು, ಅಧಿಕಾರಿಗಳ ಭೇಟಿ

ಸುಳ್ಯದ ಜ್ಯೋತಿ ವೃತ್ತದ ಬಳಿಯ ಸರಕಾರಿ ಪ್ರಾಥಮಿಕ ಶಾಲೆಯ ಬಳಿ ಬರೆ ಜರಿದು ವಿದ್ಯಾರ್ಥಿನಿಯರ ಶೌಚಾಲಯ ಬಾಗಿಲು ಸಂಪೂರ್ಣವಾಗಿ ಮುಚ್ಚಲಾಗಿದೆ. ರಜೆ ಮುಗಿದ ಮೇಲೆ ವಿದ್ಯಾರ್ಥಿನಿಯರ ಪಾಡೇನು ಎಂಬ ಪ್ರಶ್ನೆ ಉದ್ಬವಿಸಿದೆ. ತಾಲೂಕು ಆಡಳಿತದ ಸಮೀಪದಲ್ಲೇ ಇರುವ ಶಾಲೆಗೆ ಇಂತಹ ದುಸ್ಥಿತಿಯಾದರೇ ಬೇರೆ ಶಾಲೆಗಳ ಗತಿಯೇನು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವಂತಾಗಿದೆ. ಮಾಹಿತಿ ಪಡೆದ ಶಾಸಕಿ...

ಕೊಲ್ಲಮೊಗ್ರ : ಮಳೆ ಹಾನಿ ಪ್ರದೇಶಗಳಿಗೆ ಎ.ಸಿ. ಭೇಟಿ – ನೆಟ್ವರ್ಕ್ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರ ಒತ್ತಾಯ

ಮಳೆಯಿಂದ ಹಾನಿಗೊಂಡ ಕೊಲ್ಲಮೊಗ್ರ ಹಾಗೂ ಹರಿಹರ ಪ್ರದೇಶಗಳಿಗೆ ಪುತ್ತೂರು ಸಹಾಯಕ ಆಯುಕ್ತರು ಗಿರೀಶ್ ನಂದನ್ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು. ಪ್ರವಾಹ ಪರಿಸ್ಥಿತಿಯ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ‌ ಪಡೆದುಕೊಂಡರು. ಸಾಮಾಜಿಕ ಕಾರ್ಯಕರ್ತ ಉದಯ ಶಿವಾಲ ಸಮಸ್ಯೆಗಳ ಬಗ್ಗೆ ವಿವರ ನೀಡಿದರು. ಈ ಭಾಗದ ಜನರಿಗೆ ಕಳೆದ ಮೂರು ದಿನಗಳಿಂದ ನೆಟ್ವರ್ಕ್ ಇಲ್ಲದೆ ಪರದಾಡುತ್ತಿರುವ...

ಕುಂ..ಕುಂ.. ಫ್ಯಾಷನ್ ನಲ್ಲಿ ಮಾನ್ಸೂನ್ ಆಫರ್ ಇನ್ನೂ ಕೆಲವೇ ದಿನ

ಸುಳ್ಯದ ಪ್ರಸಿದ್ಧ ವಸ್ತ್ರ ‌ಮಳಿಗೆ ಸುಳ್ಯದ ಕುಂ…ಕುಂ… ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ ಮಾನ್ಸೂನ್ ವಿಶೇಷ ಆಫರ್ ಜುಲೈನಿಂದ ಆರಂಭವಾಗಿದ್ದು, ಈತಿಂಗಳ ಕೊನೆಯವರೆಗೆ ನಡೆಯಲಿದೆ.ಇದಕ್ಕಾಗಿ ವಸ್ತ್ರಗಳ ಅಮೋಘ ಸಂಗ್ರಹ ಹಾಕಲಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು. ಮದುವೆ ಹಾಗೂ ಪೂಜಾ‌ ಕಾರ್ಯಕ್ರಮ ಗಳ ವಸ್ತ್ರ ಗಳ‌ ಬೃಹತ್ ಸಂಗ್ರಹವೂ ಇದೆ. ಸಾರಿ ರೂ 75ರಿಂದ ಆರಂಭ, ನೈಟಿ...

ಸಂಪರ್ಕ ಕಡಿತಗೊಂಡ ಬೆಂಡೋಡಿ ಸೇತುವೆ ವೀಕ್ಷಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಭಾರಿ ಮಳೆಗೆ ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಸಂಪರ್ಕಿಸುವ ಸೇತುವೆಯ ಒಂದು ಭಾಗ ಕೊಚ್ಚಿ ಹೋದ ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿ ಸ್ಥಳೀಯರೊಂದಿಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ಮಾಧವ ಚಂತಾಳ, ಜಯಶ್ರೀ ಚಾಂತಾಳ, ರವಿಚಂದ್ರ, ಮಧು, ಶಿವಕುಮಾರ ಚಂತಾಳ, ಜಯಂತ...

ಸುಳ್ಯ : ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸುಳ್ಯ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಕಳೆದ 21 ತಾಸುಗಳಲ್ಲಿ ಅತೀ ಹೆಚ್ಚಿನ ಮಳೆ ದಾಖಲಾಗಿರುತ್ತದೆ. ಇದೇ ಹವಾಮಾನ ಪರಿಸ್ಥಿತಿಯೂ ಮುಂದುವರಿಯುವ ಸೂಚನೆಯಿದ್ದು, ಅರೆಂಚ್ ಅಲರ್ಟ್ ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಸುಳ್ಯ ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರವು ಸುಳ್ಯ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ, ಸರ್ಕಾರಿ ಅನುದಾನಿತ...

ಸುಬ್ರಹ್ಮಣ್ಯ : ಗದ್ದೆಯಲ್ಲಿ ನೇಜಿ ನಾಟಿ ಮಾಡಿ ಸಂಭ್ರಮಿಸಿದ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳು

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳು ಭತ್ತದ ಗಿಡ ನಾಟಿ ಮಾಡುವ ಗದ್ದೆಯಲ್ಲಿ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿದರು. ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿಯ ರಾಮಣ್ಣ ಅವರ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯ ನಡೆಯಿತು. ಗದ್ದೆಗಳಲ್ಲಿ ಸಸಿ ನೆಟ್ಟು, ಕೆಸರಲ್ಲಿ ಮಿಂದೆದ್ದು ವಿದ್ಯಾರ್ಥಿಗಳು ನೇಗಿಲ ಯೋಗಿಗಳಾದರು.  ಹಿರಿಯರು...

ಇನ್ನೂ ದೇವಸ್ಥಾನಗಳ ಒಳಗಡೆ ಮೊಬೈಲ್ ಫೋನ್ ಬಳಕೆ ಮಾಡುವಂತಿಲ್ಲ

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದೆ. ತಮಿಳುನಾಡಿನ ಬಳಿಕ ಕರ್ನಾಟಕದ ದೇವಸ್ಥಾನಗಳ ಒಳಗಡೆ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದೆ. ಮೊಬೈಲ್ ಫೋನ್ ಬಳಕೆ ನಿಷೇಧದ ಬಗ್ಗೆ ಮೊದಲಿನಿಂದಲೂ ಚರ್ಚೆ ನಡೆಯುತ್ತಿತ್ತು.ಈಗ ಅಧಿಕೃತವಾಗಿ ಮೊಬೈಲ್‌ ಫೋನ್‌ ಬಳಕೆಗೆ ಧಾರ್ಮಿಕ ಮತ್ತು ದತ್ತಿ ಇಲಾಖೆ ನಿಷೇಧ ಹೇರಿ...

ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಮತ್ತು ಗಂಟು ಗಂಟುಗಳನ್ನು ಕಾಡುವ ಖಾಯಿಲೆ ಚಿಕುನ್‍ಗುನ್ಯಾ ಜ್ವರ : ರೋಗ ಲಕ್ಷಣ, ಚಿಕಿತ್ಸೆ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ

ಬರಹ : ಮುರಲೀ ಮೋಹನ್ ಚೂಂತಾರು ಉಷ್ಣವಲಯದ ದೇಶಗಳಲ್ಲಿ, ಮಳೆಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಮತ್ತು ಗಂಟು ಗಂಟುಗಳನ್ನು ಕಾಡುವ ಇನ್ನೊಂದು ಖಾಯಿಲೆ ಎಂದರೆ ಚಿಕುನ್‍ಗುನ್ಯಾ ಜ್ವರ. ಡೆಂಘೀ ಜ್ವರವನ್ನು ಹರಡುವ ಏಡಿಸ್ ಎಜೆಪ್ಟಿ ಮತ್ತು ಏಡಿಸ್ ಆಲ್ಬೋಪಿಕ್ಟಸ್ ಎಂಬ ಸೊಳ್ಳೆಗಳೇ ಚಿಕುನ್ ಗುನ್ಯಾರೋಗವನ್ನೂ ಹರಡುತ್ತವೆ. ‘ಚಿಕುನ್ ಗುನ್ಯಾ’ ಎಂಬ ವೈರಸ್‍ನ ಸೋಂಕಿನಿಂದ ಬರುವ ಈ ಜ್ವರ,...

ಚೆಂಬು : ಜಾಗದ ವಿವಾದ – ಅಣ್ಣನನ್ನು ಕೊಂದ ತಮ್ಮ

ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ತಮ್ಮನಿಂದ ಅಣ್ಣ ಕೊಲೆಯಾದ ಘಟನೆ ಇಂದು ವರದಿಯಾಗಿದೆ. ಸತ್ತಾರ್, ರಫೀಕ್, ಇಸುಬು,ಅಬ್ಬಾಸ್, ಉಸ್ಮಾನ್ ಮೊದಲಾದ ಅಣ್ಣತಮ್ಮಂದಿರ ಕೃಷಿ ಭೂಮಿ ಸುಮಾರು 50 ಎಕ್ರೆ ಜಾಗ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವೆದ್ದಿದ್ದು, ಸಹೋದರರು ಸೇರಿ ಉಸ್ಮಾನ್ ಎಂಬವರನ್ನು ಇಂದು ಚೂರಿಯಿಂದ ಇರಿದು ಕೊಂದಿರುವುದಾಗಿ ಮಾಹಿತಿ ಲಭಿಸಿದೆ. ಉಸ್ಮಾನ್ ಕುದ್ರೆಪಾಯದಲ್ಲಿ ಭೂಮಿ ಹೊಂದಿದ್ದರು. ಅರಂತೋಡಿನಲ್ಲೂ...

ಸುಳ್ಯ ಶಾಖೆಯಲ್ಲಿ ಕ್ಯಾಂಪ್ಕೋ ಸ್ಥಾಪನಾ ದಿನಾಚರಣೆ

ಸುಳ್ಯ : ಕ್ಯಾಂಪ್ಕೋ ಸಂಸ್ಥೆ ಸುಳ್ಯ ಶಾಖೆಯಲ್ಲಿ ಇಂದು ಕ್ಯಾಂಪ್ಕೋ ಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪನಾ ದಿನಾಚರಣೆ ಅಂಗವಾಗಿ ನಿರ್ದೇಶಕರು, ಸದಸ್ಯ ಬೆಳೆಗಾರರು, ಸಿಬ್ಬಂದಿ ವರ್ಗದವರು ಕ್ಯಾಂಪ್ಕೋ ಸ್ಥಾಪಕಾಧ್ಯಕ್ಷರಾದ ದಿವಂಗತ ವಾರಣಾಸಿ ಸುಬ್ರಾಯ ಭಟ್ಟರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಕ್ಯಾಂಪ್ಕೋ...

ಬಡವರ ಹಸಿವು ತಣಿಸುವ ಇಂದಿರಾ ಕ್ಯಾಂಟೀನ್ ನ ಮೆನು ಹೇಗಿದೆ ಗೊತ್ತಾ? ಇಲ್ಲಿದೆ ಡೀಟೇಲ್ಸ್

ವರದಿ : ಮಿಥುನ್ ಕರ್ಲಪ್ಪಾಡಿ ಕಳೆದ ಐದು ವರ್ಷಗಳಿಂದ ಮುಚ್ಚಿದ್ದ ಇಂದಿರಾ ಕ್ಯಾಂಟೀನ್ ಮತ್ತೆ ತೆರೆದುಕೊಂಡಿದೆ. ಹಸಿವು ಮುಕ್ತ ಮಾಡಬೇಕು ಎನ್ನುವ ಪರಿಕಲ್ಪನೆಯೊಂದಿಗೆ ರಾಜ್ಯ ಸರಕಾರ ಕೈಗೊಂಡಿರುವ ಈ ಯೋಜನೆ ಅತೀ ಕಡಿಮೆ ದರದಲ್ಲಿ ಹೊಟ್ಟೆ ತುಂಬಾ ಊಟ ಹಾಕುತ್ತಿದೆ ಇಂದಿರಾ ಕ್ಯಾಂಟಿನ್. ಇದೀಗ ಸುಳ್ಯದ ಜನತೆ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇಂದಿರಾ ಕ್ಯಾಂಟಿನ್ ಎಲ್ಲಿದೆ?...

ಬೆಳ್ತಂಗಡಿಯ ಸೋಮಂತಡ್ಕದಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 22ನೇ ನೂತನ ಶಾಖೆ ಉದ್ಘಾಟನೆ

ಸಹಕಾರಿ ಸಂಘಗಳು ಆರ್ಥಿಕವಾಗಿ ಪ್ರಬಲವಾಗಲು ಬೆಳ್ತಂಗಡಿ ತಾಲೂಕು ಸಮರ್ಥವಾಗಿದೆ. ಇದೇ ಕಾರಣದಿಂದ ವೆಂಕಟರಮಣ ಸೊಸೈಟಿ ತಾಲೂಕಿನಲ್ಲಿ ಐದು ಶಾಖೆಗಳನ್ನು ಪ್ರಾರಂಭಿಸಿದೆ. ದ.ಕ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಬೆಳವಣಿಗೆ ಕಾಣುತ್ತಿದೆ. ಸಹಕಾರಿ ಕ್ಷೇತ್ರ ಜನರಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ವೆಂಕಟರಮಣ ಸೊಸೈಟಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ಆರ್ಥಿಕವಾಗಿ ಪ್ರಬಲ ಶಕ್ತಿಯಾಗಿ ಬೆಳೆದಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ...

ಸುಳ್ಯ : ಟೈಲರ್ಸ್ ಎಸೋಸಿಯೇಶನ್ ವಾರ್ಷಿಕ ಮಹಾಸಭೆ

ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್  ಸುಳ್ಯ ಇದರ ವಾರ್ಷಿಕ ಮಹಾಸಭೆ ಶಿವಕೃಪಾ ಕಲಾ ಮಂದಿರದಲ್ಲಿ ಇಂದು ನಡೆಯಿತು.‌ ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಟೈಲರ್ ಅಸೋಸಿಯೇಶನ್ ಅಧ್ಯಕ್ಷ ದಿವಾಕರ ಟಿ, ಪ್ರಜ್ವಲ್ ಕುಮಾರ್, ನಾರಾಯಣ ಬಿ ಎ, ಸುರೇಶ್ ಸಾಲ್ಯಾನ್, ಜಯಂತ ಉರ್ಲಾಂಡಿ, ಕೆ ಲಿಗೋದರ...

ಕೂರ್ನಡ್ಕ: ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಇಂದು ಪತ್ತೆ

ಜು.6 ರಂದು ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ನಾರಾಯಣನ್ ಎಂಬ ವ್ಯಕ್ತಿ ಪಾಲದಿಂದ ಬಿದ್ದು ನಾಪತ್ತೆಯಾಗಿದ್ದರು. ಸುಳ್ಯ ಪ್ರಕೃತಿ ವಿಕೋಪ ತಂಡದಿಂದ ನಿರಂತರ 3 ದಿನಗಳಿಂದ ಕಾರ್ಯಚರಣೆ ನಡೆಸುತ್ತಿದ್ದರು. ಇಂದು ಮಧ್ಯಾಹ್ನ ವೇಳೆಗೆ ಆಲೆಟ್ಟಿ ಗ್ರಾಮದ ನೆಡ್ಚಿಲ್ ಎಂಬಲ್ಲಿ ನಾರಾಯಣ ಅವರ ಮೃತದೇಹ ಸಿಕ್ಕಿದೆ ಎಂದು ತಿಳಿದುಬಂದಿದೆ. ಎಸ್ ಡಿ ಆರ್ ಫ್ , ಪೈಚಾರ್...

ರಾಜ್ಯ ಬಜೆಟ್ ನಾಡಿನ ಸರ್ವರನ್ನೂ ತಲುಪಿದೆ ಹಾಗೂ ಕೃಷಿಕರ ಬಗ್ಗೆ ಕಾಳಜಿ ಹೊಂದಿದ ಬಜೆಟ್ – ಪಿ ಸಿ ಜಯರಾಮ

ವರದಿ : ಮಿಥುನ್ ಕರ್ಲಪ್ಪಾಡಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರು ತಮ್ಮ 14 ನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ಮೆರೆದಿದ್ದು ಈ ಬಾರಿಯ ಬಜೆಟ್ ಸರ್ವರನ್ನು ತಲುಪುವ ಹಾಗೂ ಕೃಷಿಕರ ಬಗ್ಗೆ ಅತೀ ಹೆಚ್ಚು ಕಾಳಜಿ ಹೊಂದಿರುವ ಬಜೆಟ್ ಆಗಿದೆ. ಚುನಾವಣಾ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಯನ್ನು ಪೂರೈಸಲು ಕಾಂಗ್ರೆಸ್ ಈ ಬಾರಿ ಬಜೆಟ್ ನಲ್ಲಿ...

ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ವರ್ಗಾವಣೆ

ಪುತ್ತೂರು ಸಹಾಯಕ ಆಯುಕ್ತರಾಗಿದ್ದ ಗಿರೀಶ್ ನಂದನ್ ರವರು ಎತ್ತಿನಹೊಳೆ ವಿಶೇಷ ಭೂಸ್ವಾಧಿನಾಧಿಕಾರಿಯಾಗಿ ನೇಮಕಗೊಂಡ ಹಿನ್ನಲೆಯಲ್ಲಿ ವರ್ಗಾವಣೆಗೊಂಡಿದ್ದಾರೆ. ತೆರವಾಗಲಿರುವ ಪುತ್ತೂರು ಸಹಾಯಕ ಆಯುಕ್ತ ಹುದ್ದೆಗೆ ಮಂಗಳೂರು ಕೆ.ಐ.ಎ.ಡಿ.ಬಿ. ವಿಶೇಷ ಭೂಸ್ವಾಧೀನಾಧಿಕಾರಿ ಮಹೇಶ್ ಚಂದ್ರ ನೇಮಕಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಜು.09: ಸೋಮಂತಡ್ಕದಲ್ಲಿ ವೆಂಕಟರಮಣ ಸೊಸೈಟಿಯ 22ನೇ ಶಾಖೆ ಲೋಕಾರ್ಪಣೆ

ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 22 ನೇ ಶಾಖೆಯ ಉದ್ಘಾಟನೆ ಜು.9 ರಂದು ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದ ಡಿ’ಸೋಜಾ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದರು. ಅವರು ಜು.5 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಂಘವು 1997ರಲ್ಲಿ ಗೌಡರ ಯುವ ಸೇವಾ ಸಂಘ...

ಜು.13: “ಕ್ರಿಯೇಟ್ ಹೋಪ್ ಇನ್ ದಿ ವರ್ಲ್ಡ್” ಧ್ಯೆಯವಾಕ್ಯದೊಂದಿಗೆ ಸಿಟಿ ರೋಟರಿ ಕ್ಲಬ್ ಪದಗ್ರಹಣ

ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯಾದ ರೋಟರಿ ಕ್ಲಬ್ ಸುಳ್ಯ ಸಿಟಿ 2016ರಲ್ಲಿ ಆರಂಭಗೊಂಡು ಕಳೆದ ಏಳು ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡು ರೋಟರಿ ಜಿಲ್ಲೆ 3181 ನಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಯುವಕರಿಂದಲೇ ಕೂಡಿದ ಸಂಸ್ಥೆ ಯಾಗಿದ್ದು2023-24ನೇ ಸಾಲಿನ ಕ್ಲಬ್‌ನ ಎಂಟನೇ ವರ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು 13ರಂದು ರೋಟರಿ ಕಮ್ಯುನಿಟಿ ಹಾಲ್ ಕಾರ್ ಸ್ಟ್ರೀಟ್ ಸುಳ್ಯ...

⛔BREAKING NEWS ⛔ 🛑ಮುಂದುವರಿದ ಮಳೆ – ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ 🛑

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು ರೆಡ್ ಅಲರ್ಟ್ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಜು.7 ರಂದು ಕೂಡ ರಜೆ ವಿಸ್ತರಿಸಿ ಘೋಷಣೆ ಮಾಡಲಾಗಿದೆ. ನೀರು ಇರುವ ತಗ್ಗು ಪ್ರದೇಶ ಕೆರೆ, ನದಿ, ಸಮುದ್ರ...

ಪೆರಾಜೆ ಸೊಸೈಟಿ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ ಪುನರಾಯ್ಕೆ, ಉಪಾಧ್ಯಕ್ಷರಾಗಿ ಅಶೋಕ್ ಪೆರುಮುಂಡ

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ, ಉಪಾಧ್ಯಕ್ಷರಾಗಿ ಅಶೋಕ್ ಪೆರುಮುಂಡ ಆಯ್ಕೆಯಾಗಿದ್ದಾರೆ.ನಾಗೇಶ್ ಕುಂದಲ್ಪಾಡಿ ಹೆಸರನ್ನು ಕಿರಣ್ ಬಂಗಾರಕೋಡಿ ಸೂಚಿಸಿ, ಜಯರಾಮ ನಿಡ್ಯಮಲೆ ಅನುಮೋದಿಸಿದರು.ಅಶೋಕ ಪೆರುಮುಂಡರವರ ಹೆಸರನ್ನು ಶೇಷಪ್ಪ ಎನ್.ವಿ. ಸೂಚಿಸಿ, ಹೊನ್ನಪ್ಪ ಅಮೆಚೂರು ಅನುಮೋದಿಸಿದರು.ಜೂ.25 ರಂದು ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ 13 ಸ್ಥಾನಗಳನ್ನು ಗೆದ್ದುಕೊಂಡಿದ್ದರು.

ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಪದಗ್ರಹಣ ಸಮಾರಂಭ ಹಾಗೂ ಮಾದಕ ವಸ್ತು ವಿರೋಧಿ ದಿನಾಚರಣೆ

ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ನೂತನಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭ ಹಾಗೂ ಮಾದಕ ವಸ್ತು ವಿರೋಧಿ ದಿನಾಚರಣೆಯು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾ ಕಚೇರಿ ಸುಳ್ಯದಲ್ಲಿ ಜರುಗಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮವು ಪಕ್ಷ ಭೇದವಿಲ್ಲದೆ ಕುಟುಂಬದ ಸದಸ್ಯರ ಕಾರ್ಯಕ್ರಮದಂತೆ ನಡೆಯುತ್ತಿದ್ದು ಪೂಜ್ಯ ಕಾವಂದರಾದ ಡಾ.ವಿರೇಂದ್ರ ಹೆಗ್ಗಡೆ ಯವರ ಚಿಂತನೆಯಿಂದ ಸಾಮಾನ್ಯ ಜನರ ಸಬಲೀಕರಣವಾಗಿದೆ. ಫಲಾಪೇಕ್ಷೆಯಿಲ್ಲದೆ ಸೇವೆ...

ಐವರ್ನಾಡು : ಶಾಸಕಿ ಭಾಗೀರಥಿ ಮುರುಳ್ಯ ಅವರಿಂದ ಡಿಜಿಟಲ್ ಗ್ರಂಥಾಲಯ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ – ವನ ಮಹೋತ್ಸವ

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಐವರ್ನಾಡು ಪ್ರಾ.ಕೃ.ಪ.ಸ.ಸಂಘ,ಅರಣ್ಯ ಇಲಾಖೆ, ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಐವರ್ನಾಡು ಗ್ರಾಮ ಪಂಚಾಯತ್ ಡಿಜಿಟಲ್ ಗ್ರಂಥಾಲಯ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ, ವನ ಮಹೋತ್ಸವ ಕಾರ್ಯಕ್ರಮ ಜೂ.30 ರಂದು ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು. ತಾಲೂಕು ಪಂಚಾಯತ್...

ಹವಾಮಾನ ಆಧಾರಿತ ಬೆಳೆ ವಿಮೆ ಸಮಸ್ಯೆ ಶೀಘ್ರ ಸರಿಪಡಿಸಲು ಸಹಕಾರಿ ಯೂನಿಯನ್ ಆಗ್ರಹ

ವರದಿ: ಮಿಥುನ್ ಕರ್ಲಪ್ಪಾಡಿ ಸುಳ್ಯ: ಈ ಬಾರಿ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಇನ್ನೂ ಕೂಡಾ ಸಹಕಾರಿ ಸಂಘಗಳಿಗೆ ರೈತರ ವಿಮೆ ಪ್ರೀಮಿಯಂ ಪಾವತಿಯ ಬಗ್ಗೆ ಯಾವುದೇ ಆದೇಶಗಳು ಬಂದಿರುವುದಿಲ್ಲ ಇದರಿಂದಾಗಿ ಕೃಷಿಕರಿಗೆ ಸಮಸ್ಯೆಗಳು ಎದುರಾಗುತ್ತಿದ್ದು ಆದಷ್ಟು ಬೇಗ ಕೃಷಿಕರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ವಿಮೆ ಕುರಿತು ಸರಕಾರ ಕ್ರಮವಹಿಸಬೇಕು ಎಂದು ಸುಳ್ಯ ಸಹಕಾರಿ ಯೂನಿಯನ್...

ಪೆರಾಜೆ ಸೊಸೈಟಿ ಚುನಾವಣೆ : ಎಲ್ಲಾ ಸ್ಥಾನಗಳನ್ನು ಗೆದ್ದು ಬೀಗಿದ ಬಿಜೆಪಿ

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ರಚನೆಗೆ ಜೂ.25ರಂದು ಚುನಾವಣೆ ನಡೆದಿದ್ದು, ಒಟ್ಟು 13 ಸ್ಥಾನಗಳಿಗೆ 33 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅಂತಿಮವಾಗಿ 26 ಮಂದಿ ಸ್ಪರ್ಧಾ ಕಣದಲ್ಲಿದ್ದರು. ಸಾಲಗಾರರ ಕ್ಷೇತ್ರದಲ್ಲಿ ಒಟ್ಟು 791 ಮತಗಳಿದ್ದು ಅದರಲ್ಲಿ 751 ಮತಗಳುಚಲಾವಣೆಯಾಗಿದ್ದವು. ಸಾಲಗಾರರಲ್ಲದ ಕ್ಷೇತ್ರದಲ್ಲಿ ಒಟ್ಟು376 ಮತಗಳಿದ್ದು, 313 ಮತಗಳು ಚಲಾವಣೆಯಾಗಿತ್ತು. ಸಾಮಾನ್ಯ...

ಸುಳ್ಯ : ಸರಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಭೇಟಿ ನೀಡಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು  ನಡೆಸಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವಿವಿಧ ಮೂಲಭೂತ ಸೌಲಭ್ಯಗಳ ಪೂರೈಕೆಗಾಗಿ ಸುಮಾರು 4 ಕೋಟಿ ರೂಪಾಯಿ ಅನುದಾನ ಬಂದಿದ್ದು ಈ ಅನುದಾನ ಬಳಸಿ ನಡೆಯುತ್ತಿರುವ ಡಯಾಲಿಸಿಸ್ ಸೆಂಟರ್ ಆಧುನಿಕರಣ,...

ಸುಳ್ಯ : ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಬೆಳ್ಳಿ ಹಬ್ಬ ಸಂಭ್ರಮ – ಇಂದು ಆಮಂತ್ರಣ ಬಿಡುಗಡೆ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆರಂಭವಾಗಿ 25 ವರ್ಷ ಪೂರ್ಣಗೊಳಿಸಿದ ನೆನಪಿಗಾಗಿ  ಜು.19 ರಂದು ಬೆಳ್ಳಿ ಹಬ್ಬ ಸಮಾರಂಭ ‌ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ‌ಸಮಾರಂಭ ಜೂ.21 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ‌ ನಡೆಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭಹಾರೈಸಿದರು....

ಸುಳ್ಯ : ಸೇವಾ ಭಾರತಿ ವತಿಯಿಂದ ನೂತನ ಆಂಬುಲೆನ್ಸ್ ಲೋಕಾರ್ಪಣೆ :  ಸಮಾಜ ಸೇವೆಯೇ ಸೇವಾ ಭಾರತಿಯ ಧ್ಯೇಯ – ಮಾಜಿ ಸಚಿವ ಅಂಗಾರ ಅಭಿಮತ

ಸಮಾಜ ಸೇವೆಯೇ ಸೇವಾ ಭಾರತಿಯ ಧ್ಯೇಯ. ಕೊರೋನಾ ಕಾಲದಲ್ಲಿ ಸೇರಿದಂತೆ ಹಲವು ಸಂದರ್ಭಗಳಲ್ಲಿ ಸೇವಾ ಭಾರತಿ ತನ್ನ ಸೇವೆ ಏನು ಎಂಬುದನ್ನು ಸಮಾಜಕ್ಕೆ ತೋರಿಸಿ ಕೊಟ್ಟಿದೆ. ಇದೀಗ ಜಿವರಕ್ಷಕ ಆಂಬುಲೆನ್ಸ್‌ನ್ನು ನೀಡುವ ಮೂಲಕ ಸಮಾಜಕ್ಕೆ ಮಾದರಿಯಾದ ಕೊಡುಗೆ ನೀಡಿದೆ ಎಂದು ಮಾಜಿ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯ ಕೇರ್ಪಳದ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ...

ಕಂದ್ರಪ್ಪಾಡಿ : ವಿಶ್ವ ತಂಬಾಕು ವಿರೋಧಿ ದಿನಾಚರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು, ಜನಜಾಗೃತಿ ವೇದಿಕೆ ಗುತ್ತಿಗಾರು ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಂದ್ರಪ್ಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಜನಜಾಗೃತಿ ವಲಯಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿರವರು ದೀಪ ಬೆಳಗಿಸಿ ಉದ್ಘಾಟನೆಯನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ...

ಪೆರುವಾಜೆ : ಬಿಜೆಪಿಯ ಹಿರಿಯ ಕಾರ್ಯಕರ್ತರ ಜೊತೆ ಸಂವಾದ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 9 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸುಳ್ಯ ಮಂಡಲ ಮಟ್ಟದ ಹಿರಿಯ ಕಾರ್ಯಕರ್ತರೊಡನೆ ಸಂವಾದ ಕಾರ್ಯಕ್ರಮ ಇಂದು ಪೆರುವಾಜೆ ಜೆ ಡಿ ಆಡಿಟೋರಿಯಂ ನಲ್ಲಿ ನಡೆಯಿತು. ಈ ಸಂವಾದ ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ವಕ್ತಾರ,ವಿಧಾನ ಪರಿಷತ್ ನ ಮಾಜಿ ಸದಸ್ಯರಾದ ಸನ್ಮಾನ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ನೆರವೇರಿಸಿದರು. ಈ...

ಸುಳ್ಯ : ಪೊಲೀಸ್ ಉಪ ನಿರೀಕ್ಷಕರಾಗಿ ಈರಯ್ಯ ದೂಂತೂರು

ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕರಾಗಿ ಈರಯ್ಯ ದೂಂತೂರು ಅವರನ್ನು ನೇಮಕ‌ ಮಾಡಿ ಸರಕಾರ ಆದೇಶ ಮಾಡಿದೆ. ಸುಳ್ಯ ಎಸ್ಐ ಆಗಿರುವ ದಿಲೀಪ್ ಜಿ.ಆರ್. ಅವರಿಗೆ ವರ್ಗಾವಣೆಯಾಗಿದ್ದು, ಕಳೆದ ಎರಡು ವರ್ಷಗಳಿಂದ ದಿಲೀಪ್ ಸುಳ್ಯ ಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈರಯ್ಯ ದೂಂತೂರು ಅವರು ಬಂಟ್ವಾಳ ಹಾಗೂ ವಿಟ್ಲದಲ್ಲಿ ಪ್ರೊಬೇಷನರಿ ಎಸ್‌ಐ ಆಗಿ ಬಳಿಕ ಬೆಳ್ಳಾರೆ...

ಸೋಣಂಗೇರಿ ; ಅವೈಜ್ಞಾನಿಕ ಕಾಮಗಾರಿಯಿಂದ ಕಾದಿದೆ ಅಪಾಯ – ಸರ್ಕಲ್ ನಿರ್ಮಿಸಲು ನಾಗರಿಕರ ಒತ್ತಾಯ

ಸೋಣಂಗೇರಿ ಬಳಿ ರಸ್ತೆಯೆನೋ ಉತ್ತಮವಾಗಿದೆ ಆದರೇ ಸವಾರರು ಎಚ್ಚರ ತಪ್ಪಿದರೇ ಅಪಾಯ ಕಟ್ಟಿಟ್ಟ ಬುತ್ತಿ. ಈಗಾಗಲೇ ಹಲವು ವಾಹನ ಸವಾರರು ಡಿವೈಡರ್ ಗೆ ಗುದ್ದಿ ಅಪಾಯದಿಂದ ಪಾರಾದ ಘಟನೆ ನಡೆದಿದೆ.ಪೈಚಾರು, ಸೋಣಂಗೇರಿ ಜಾಲ್ಸೂರು ಕಡೆಯಿಂದ ಬರುವ ವಾಹನಗಳು ಜಂಕ್ಷನ್ ತಲುಪಿದಾಗ ತಬ್ಬಿಬ್ಬಾಗುವ ಪರಿಸ್ಥಿತಿ ಅಲ್ಲಿದೆ. ಅವೈಜ್ಞಾನಿಕ ಡಿವೈಡರ್ ನಿರ್ಮಾಣದಿಂದ ಎಲ್ಲೆಂದರಲ್ಲಿ ವಾಹನಗಳು ನುಗ್ಗಿ ಬರುತ್ತಿವೆ. ಅಪಘಾತಗಳು...

ಅಪಾಯದ ಸ್ಥಿತಿಯಲ್ಲಿರುವ ಅರಮನೆಗಯ ತೂಗುಸೇತುವೆ ವೀಕ್ಷಿಸಿದ ಶಾಸಕಿ ಭಾಗೀರಥಿ ಮುರುಳ್ಯ – ಸೇತುವೆ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡುವ ಭರವಸೆ

ಬಹುವರ್ಷಗಳ ಬೇಡಿಕೆಯಾಗಿರುವ ಮರ್ಕಂಜ ಹಾಗೂ ಅರಂತೋಡು ಗ್ರಾಮಗಳನ್ನು ಸಂಪರ್ಕಿಸುವ ಅರಮನೆಗಯ ಎಂಬಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂಬ ಕೂಗು ಬಹುದಿನಗಳಿಂದ ಕೇಳಿ ಬಂದಿತ್ತು. ಅರಮನೆಗಯ ನಿವಾಸಿಗಳು ಹಲವಾರು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ನೀಡುತ್ತಾ ಬಂದಿದ್ದರೂ ಸೇತುವೆಯ ಕನಸು ನನಸಾಗಿಯೇ ಉಳಿದಿದೆ. ಇರುವ ಒಂದು ತೂಗುಸೇತುವೆ ಕೂಡ ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಇದನ್ನೇ ಇಲ್ಲಿನ ಜನ...

ವಳಲಂಬೆ : ಕಾಂಗ್ರೆಸ್ ಕಾರ್ಯಕರ್ತರು ಹಾಕಿದ್ದ ಬ್ಯಾನರ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ನೂತನ ಮುಖ್ಯಮಂತ್ರಿಯಾಗಿ ವಹಿಸಿಕೊಂಡ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದಿಸಿ ಹಾಕಲಾಗಿದ್ದ ಬ್ಯಾನರ್ ಗೆ ಬೆಂಕಿ ಹಾಕಿದ ಘಟನೆ ವಳಲಂಬೆಯಲ್ಲಿ ನಡೆದಿದೆ.ಮೇ.20 ರಂದು ವಳಲಂಬೆ ಹಾಗೂ ಪೈಕ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಹಾಕಿದ್ದ ಬ್ಯಾನರ್ ಗೆ ಅಂದೇ ರಾತ್ರಿ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ.‌ ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾಧಿಕಾರಿ ಹಾಗೂ ಪೊಲೀಸರು ಭೇಟಿ ನೀಡಿ...

ಸುಳ್ಯ: ಯಶಸ್ವಿಯಾಗಿ ನಡೆದ ಮತದಾನ ಪ್ರಕ್ರಿಯೆ – ಕಳೆದ ಬಾರಿಗಿಂತ ಕಡಿಮೆ ಮತದಾನ – ನಿರಾಸಕ್ತಿ ತೋರಿದ ಮತದಾರ

ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ.78.94 ಮತದಾನವಾಗಿದೆ. 101856 ಪುರುಷ ಮತದಾರರು ಹಾಗೂ 104173 ಮಹಿಳಾ ಮತದಾರರು ಸೇರಿ ಒಟ್ಟು 206029 ಮತದಾರರಿದ್ದಾರೆ. ಇಂದು ನಡೆದ ಮತದಾನದಲ್ಲಿ 78.94 ಮಂದಿ ಮತದಾನ ದಾಖಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಬಾರಿ ಸುಳ್ಯ ಕ್ಷೇತ್ರದಲ್ಲಿ 83 ಶೇ. ಮತದಾನವಾಗಿತ್ತು. ಈ ಭಾರಿ ಮತದಾರರು,ಪಕ್ಷದ ಕಾರ್ಯಕರ್ತರು...

ಬೆಳ್ಳಾರೆ : ಯೋಧನ ಕಾಲಿಗೆ ನಮಸ್ಕರಿಸಿದ ಬಾಲಕ

ಬೆಳ್ಳಾರೆಯ ಕೆಪಿಎಸ್ ಸ್ಕೂಲ್ ನಲ್ಲಿರುವ ಮತದಾನ ಕೇಂದ್ರಕ್ಕೆ ಪೋಷಕರ ಜೊತೆ ಮತದಾನ ಕೇಂದ್ರಕ್ಕೆ ಬಂದ ಪುಟ್ಪ ಬಾಲಕ ಹೊರಗೆ ಮತದಾನ ಕರ್ತವ್ಯ ದಲ್ಲಿದ್ದ ಯೋಧರ ಕಾಲಿಗೆ ಬಿದ್ದು ನಮಸ್ಕರಿಸಿದ ಘಟನೆ ನಡೆದಿದೆ. ಈ ಪುಟ್ಟ ಬಾಲಕನ ದೇಶಪ್ರೇಮಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಮತ ಚಲಾವಣೆ

ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪರವರು ರಾಮಕುಂಜ ಮತಕೇಂದ್ರದಲ್ಲಿ ಮತಚಲಾಯಿಸಿದರು.

ಸಚಿವ ಅಂಗಾರರಿಂದ ಮತ ಚಲಾವಣೆ

ಸಚಿವ ಅಂಗಾರರವರು ದೊಡ್ಡತೋಟ ಮತ ಕೇಂದ್ರದಲ್ಲಿ ಮತ ಚಲಾಯಿಸಿದರು. ತನಗೆ ತಾನೇ ಮತ ನೀಡುವ ಮೂಲಕ  ಆರು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅಂಗಾರರು ಈ ಸಲ ಬೇರೆಯವರಿಗೆ ಮತ ಚಲಾಯಿಸುತ್ತಿರುವುದು ಈ  ಚುನಾವಣೆಯ ವಿಶೇಷ.

ಕೇನ್ಯ: ಕಣ್ಕಲ್ ಬಳಿ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಮೃತ್ಯು – ಬೆಂಗಳೂರಿನಿಂದ ರಜೆಯಲ್ಲಿ ಬಂದಿದ್ದ ವೇಳೆ ದುರ್ಘಟನೆ – ಇಬ್ಬರ ಮೃತದೇಹ ಹೊರತೆಗೆದ ಅಗ್ನಿಶಾಮಕ ದಳ

ಕೇನ್ಯ ಗ್ರಾಮದ ಕಣ್ಕಲ್ ಬಳಿಯ ಪಳ್ಳ ಎಂಬಲ್ಲಿ ಕುಮಾರಧಾರ ಹೊಳೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಮೇ.8 ರಂದು ಸಂಜೆ 4 ಗಂಟೆಗೆ ನಡೆದಿದೆ. ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಸ್ಥಳಿಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ರಾತ್ರಿ ಗಂಟೆ ವೇಳೆಗೆ ಹೊರ ತೆಗೆಯಲಾಗಿದೆ ಎಂದು ತಿಳಿದುಬಂದಿದೆ.ಬೆಂಗಳೂರಿನಲ್ಲಿ ನೆಲೆಸಿರುವ...

ಉತ್ತಮ ಸಾಧನೆ ತೋರಿದ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ – 623 ಅಂಕ ಪಡೆದು ರಾಜ್ಯಕ್ಕೆ ತೃತೀಯ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಹತಿ

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯಕ್ಕೆ ಶೇ. 100 ಫಲಿತಾಂಶ ಬಂದಿದ್ದು, ಮಹತಿ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದು, ದ.ಕ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದ್ದಾರೆ. ಇವರು ಬಳ್ಪ ಗ್ರಾಮದ ಎಡೋಣಿ ವಿಶ್ವೇಶ್ವರ ಬಿ ಹಾಗೂ ಪುಷ್ಪವತಿ ಯು ದಂಪತಿಗಳ ಪುತ್ರಿ. ಸಮಾಜ ವಿಜ್ಞಾನ, ಇಂಗ್ಲೀಷ್, ಗಣಿತ, ಸಂಸ್ಕ್ರತ ವಿಷಯದಲ್ಲಿ 100 ಅಂಕ,...

ಕುಂದಾಪುರದ ಹೊಳೆಯಲ್ಲಿ ಮುಳುಗಿ ನಾಪತ್ತೆಯಾದ ಐವರ್ನಾಡಿನ ಯುವಕ – ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ಐವರ್ನಾಡಿನ ಯುವಕ ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಸಮೀಪದ ಸೌಡ ಎಂಬಲ್ಲಿ ಹೊಳೆಯಲ್ಲಿ ಮುಳುಗಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಮಡ್ತಿಲ ಮೀರನಾಥ್ ಗೌಡ ಎಂಬುವರ ಮಗ ಸುಹಾಸ್ಂ.ಎಂ. (21) ಎಂಬಾತ ನಾಪತ್ತೆಯಾಗಿರುವ ಯುವಕ. ಈತ ಮೂಡಬಿದ್ರೆಯ ಆಯುರ್ವೇದ ಔಷಧಿ ಕಂಪೆನಿಯೊಂದರ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದ.ಇಂದು ಬೆಳಿಗ್ಗೆ ತನ್ನ ಮನೆಯಿಂದ...

ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಪ್ರಣಾಳಿಕೆಯ ಎಲ್ಲಾ ಯೋಜನೆಗಳ ಜಾರಿ ನಿಶ್ಚಿತ- ಭರತ್ ಮುಂಡೊಡಿ

ಈ ಬಾರಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದರೆ ಕೃಷಿಕರಿಗೆ, ಯುವಕರಿಗೆ, ಅಸಂಘಟಿತ ಕಾರ್ಮಿಕರಿಗೆ ಹಾಗೂ ಎಲ್ಲಾ ವರ್ಗಗಗಳ ಜನತೆಯ ಅಭಿವೃದ್ಧಿಗಾಗಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಕೆಪಿಸಿಸಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ತಿಳಿಸಿದರು.ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಕಾಂಗ್ರೆಸ್ ಪ್ರಣಾಳಿಕೆಯ ವಿವರಣೆಯನ್ನು ನೀಡಿದರು.ಭ್ರಷ್ಟಾಚಾರ ಕಾಯ್ದೆಗೆ ಕಠಿಣ ನಿಯಮ ಹಾಗೂ ಲೋಕಾಯುಕ್ತ ಬಲವರ್ಧನೆಗೆ...

ಸುಳ್ಯದಲ್ಲಿ ಭರ್ಜರಿ ಪ್ರಚಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ – ಕೇಂದ್ರದ ಯೋಜನೆ ಸಮರ್ಪಕವಾಗಿ ರಾಜ್ಯದ ಜನತೆಗೆ ತಲುಪಲು ಡಬಲ್ ಇಂಜಿನ್ ಸರಕಾರಕ್ಕೆ ಮಾತ್ರ ಸಾಧ್ಯ – ಸುಳ್ಯ ಹಾಗೂ ರಾಜ್ಯದ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಗೆಲ್ಲಿಸಲು ಕರೆ

ಸುಳ್ಯದ ಹಾಗೂ ರಾಜ್ಯದ ಭವಿಷ್ಯದ ದೃಷ್ಟಿಯಿಂದ ಬಿಜೆಪಿಗೆ ಮತ ನೀಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕರೆ ನೀಡಿದರು. ಅವರು ಸುಳ್ಯದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಪರ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೇಂದ್ರ ಸರಕಾರದ ಯೋಜನೆಗಳು ರಾಜ್ಯದ ಜನರಿಗೆ ತಲುಪಬೇಕಾದರೇ ಇಲ್ಲಿಯೂ ಡಬಲ್ ಎಂಜಿನ್ ಸರಕಾರ ಮತ್ತೊಮ್ಮೆ ಅಧಿಕಾರ...

ದಿ. ಪ್ರವೀಣ್ ನೆಟ್ಟಾರು ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ದುಷ್ಕರ್ಮಿಗಳಿಂದ ಹತ್ಯೆಗೀಡಾದ ದಿ. ಪ್ರವೀಣ್ ನೆಟ್ಟಾರು ಅವರ ಮನೆಗೆ ಎ.30ರಂದು ಸಂಜೆ ಭೇಟಿ ನೀಡಿದರು.ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಪರವಾಗಿ ಚುನಾವಣಾ ಪ್ರಚಾರ ಸಭೆಗೆ ಆಗಮಿಸಿದ ಅವರು ಕೊಡಿಯಾಲಬೈಲಿನ ಹೆಲಿಪ್ಯಾಡ್ ನಿಂದ ರಸ್ತೆ ಮಾರ್ಗವಾಗಿ ನೆಟ್ಟಾರಿಗೆ ಆಗಮಿಸಿ , ದಿ. ಪ್ರವೀಣ್ ನೆಟ್ಟಾರು...

ಇಂದು ಸಂಜೆ 4 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸುಳ್ಯಕ್ಕೆ – ಭಾಗೀರಥಿ ಮುರುಳ್ಯ ಪರ ಭರ್ಜರಿ ಪ್ರಚಾರ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರು ಎ.30 ರಂದು ಸುಳ್ಯಕ್ಕೆ ಆಗಮಿಸಲಿದ್ದು, ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್‌ ಕಂಜಿಪಿಲಿ ಹೇಳಿದ್ದಾರೆ.ಎ. 30 ರ ಸಂಜೆ 4 ಗಂಟೆಗೆ ಹೆಲಿಕಾಪ್ಟರ್ ಮೂಲಕ ಸುಳ್ಯದ ಕೊಡಿಯಾಲಬೈಲು ಎಂಜಿಎಂ ಶಾಲಾ ಮೈದಾನಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ...

ಸುಳ್ಯ : ತಾಲೂಕಿನಾದ್ಯಂತ ಸುರಿದ ಭಾರಿ ಗಾಳಿ ಹಾಗೂ ಮಳೆ – ಹಲವೆಡೆ ಮರ ಬಿದ್ದು ಹಾನಿ – ಕೈ ಕೊಟ್ಟ ಕರೆಂಟ್

ಬೇಸಿಗೆಯ ಬಿಸಿಲಿನ ತಾಪಕ್ಕೆ ಬಾರಿ ಕುಡಿಯುವ ನೀರಿಗೂ ಬರಗಾಲ ಉಂಟಾಗಿತ್ತು.‌ ಇಂದು ತಾಲೂಕಿನಾದ್ಯಂತ ಸುರಿದ ಭಾರಿ ಗಾಳಿ ಮಳೆ ಜನತೆಯನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ. ಭಾರಿ ಗಾಳಿಗೆ ಹಲವೆಡೆ ಮರ ಬಿದ್ದು ಹಾನಿಯಾದ ಘಟನೆ ವರದಿಯಾಗಿದೆ. ಸುಳ್ಯಕ್ಕೆ ಬರುವ 33ಕೆವಿ ವಿದ್ಯುತ್ ಕಡಿತಗೊಂಡಿದೆ. ಪರಿವಾರಕಾನ ಬಳಿ ಚಿಕನ್ ಸೆಂಟರ್ ಮೇಲೆ ಮರ ಬಿದ್ದು ಹಾನಿಗೊಂಡಿದೆ. ಹಲವಾರು...

ಬೆಳ್ಳಾರೆ : ಬಿಜೆಪಿ ಭರ್ಜರಿ ರೋಡ್ ಶೋ

ಸುಳ್ಯ ಬಿಜೆಪಿ ಮಂಡಲ ಸಮಿತಿಯ ವತಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಪರವಾಗಿ ಬೆಳ್ಳಾರೆಯಲ್ಲಿ ರೋಡ್ ಶೋ ಹಾಗೂ ಸಾರ್ವಜನಿಕ ಸಭೆ ನಡೆಯಿತು. ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿಯಿಂದ ಆರಂಭಗೊಂಡು ಬೆಳ್ಳಾರೆಯ ಮುಖ್ಯ ಪೇಟೆಯಲ್ಲಿ ರೋಡ್ ಶೋ ನಡೆಯುತು. ಬಳಿಕ ಬಸ್ ನಿಲ್ದಾಣದ ಬಳಿಯಲ್ಲಿ ಸಾರ್ವಜನಿಕ ಚುನಾವಣಾ ಪ್ರಚಾರ...

ಸುಳ್ಯದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ – 40% ಕಮಿಷನ್ ಸರ್ಕಾರ ತೊಲಗಿಸಲು ಮಲ್ಲಿಕಾರ್ಜುನ ಖರ್ಗೆ ಕರೆ

ರಾಜ್ಯದಲ್ಲಿ ಈಗಿರುವ 40% ಕಮಿಷನ್ ಸರ್ಕಾರವನ್ನು ತೆಗೆದು ಜನಪರವಾದ ಕಾಂಗ್ರೆಸ್ ಸರಕಾರವನ್ನು ಆಡಳಿತಕ್ಕೆ ತರಬೇಕಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಅವರು ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆದ ಕಾಂಗ್ರೆಸ್ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಕೃಷ್ಣಪ್ಪ ಜಿ ಯವರ ಪರವಾಗಿ ಪ್ರಚಾರ ಕಾರ್ಯಕ್ಕೆ ಆಗಮಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ಸುಳ್ಯದಲ್ಲಿ ಬಡವರ ಕಲಿಕೆಗಾಗಿ...

ಸುಧೀರ್ ಬೆಳ್ಳಾರ್ಕರ್ ಕೆ.ಆರ್.ಎಸ್. ಪಕ್ಷದ ತೆಕ್ಕೆಗೆ – ಸಂಘಟನಾ ಕಾರ್ಯದರ್ಶಿಯಾಗಿ ನೇಮಕ

ಸುಧೀರ್ ಬೆಳ್ಳಾರ್ಕರ್ ಮಾಜಿ ಶಾಸಕರಾದ ಕೆ ಕುಶಲ ರವರ ಮಗ ಸುಧೀರ್ ಬೆಳ್ಳಾಳ್ಕರ್ ರವರು ಕೆ.ಎಸ್.ಆರ್. ಪಕ್ಷದ ಸಿದ್ದಂತವನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರನ್ನು ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.‌ ಈ ಸಂದರ್ಭದಲ್ಲಿ ಕೆ. ಆರ್. ಸ್ ಪಕ್ಷದ ಅಧ್ಯಕ್ಷರು ಅವಿನಾಶ್ ಕಾರಿಂಜಾ. ಪ್ರದಾನ ಕಾರ್ಯದರ್ಶಿ ಜೀವನ್ ನಾರ್ಕೋಡು ಮತ್ತು ಸುಚೇತ್ ಮತ್ತು ಅಖಿಲ್...

ಏ.25 : ಮಲ್ಲಿಕಾರ್ಜುನ ಖರ್ಗೆ ಸುಳ್ಯಕ್ಕೆ – ಜಿ.ಕೃಷ್ಣಪ್ಪ ಪರ ಭರ್ಜರಿ ಪ್ರಚಾರ

ಏ. 25 ರಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳ್ಯ ಕಾಂಗ್ರೇಸ್ ಅಭ್ಯರ್ಥಿ ಕೃಷ್ಣಪ್ಪ ಪರ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಿ ಸಿ ಜಯರಾಮ್ ತಿಳಿಸಿದ್ದಾರೆ ಅವರು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. ಅಂದು 11 ಗಂಟೆಗೆ ಸುಳ್ಯಕ್ಕೆ ಆಗಮಿಸಲಿರುವ ಮಲ್ಲಿಕಾರ್ಜುನ ಖರ್ಗೆ ಸುಳ್ಯ...

ಕರ್ನಾಟಕ ವಿಧಾನಸಭಾ ಚುನಾವಣೆ – ಸುಳ್ಯ ಕ್ಷೇತ್ರದಿಂದ 9 ಅಭ್ಯರ್ಥಿಗಳು

ಕರ್ನಾಟಕದ ವಿಧಾನಸಭೆಗೆ ಮೇ.10 ರಂದು ಚುನಾವಣೆ ನಡೆಯಲಿದ್ದು ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಇದುವರೆಗೆ ಒಟ್ಟು 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ಈ ಬಾರಿ ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಪಕ್ಷೇತರರು ಕಣದಲ್ಲಿದ್ದಾರೆ. ನಾಮಪತ್ರಗಳ ಪರಿಶೀಲನೆ ಏ.21 ರಂದು ನಡೆಯಲಿದ್ದು ಏ. 24 ರಂದು ನಾಮಪತ್ರ ಹಿಂಪಡೆಯಲು ಅವಕಾಶವಿದೆ.ಇದೀಗ ಬಿಜೆಪಿ ಯಿಂದ ಭಾಗೀರಥಿ ಮುರುಳ್ಯ, ಕಾಂಗ್ರೆಸ್ ನಿಂದ...

ಅರಂತೋಡು : ಬಿರುಸಿನ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ

ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ.ಕೃಷ್ಣಪ್ಪ ರವರು ನಾಮಪತ್ರ ಸಲ್ಲಿಸಿದ ಬಳಿಕ ತಾಲೂಕಿನ ವಿವಿಧೆಡೆ ಬಿರುಸಿನ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಅರಂತೋಡು, ತೊಡಿಕಾನ ಭಾಗದಲ್ಲಿ ಏ.19 ರಂದು ಆ ಭಾಗದ ಕಾರ್ಯಕರ್ತರು ಹಾಗೂ ನಾಯಕರನ್ನು ಭೇಟಿ ಮಾಡಿ ಮತಯಾಚಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ ಜಯರಾಮ, ಕೆಪಿಸಿಸಿ ವಕ್ತಾರರುಗಳಾದ ಟಿ ಎಂ ಶಹೀದ್, ಸುಳ್ಯ ವಿಧಾನಸಭಾ...

ಮೂಲಸೌಕರ್ಯ ಅಭಿವೃದ್ಧಿ, ಅಡಿಕೆ ಎಲೆ ಹಳದಿ ರೋಗಕ್ಕೂ ಪರಿಹಾರ – ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಭರವಸೆ

ಸುಳ್ಯದ ಬಹುಕಾಲದ ಸಮಸ್ಯೆಗಳಲ್ಲೊಂದಾದ ವಿದ್ಯುತ್ 110ಕೆ.ವಿ. ಸಬ್‌ಸ್ಟೇಶನ್ ನಿರ್ಮಾಣ, ಕೈಗಾರಿಕಾ ಕ್ಷೇತ್ರದ ಆದ್ಯತೆ ಹಾಗೂ ಇಲ್ಲಿನ ಮೂಲಭೂತ ಸೌಕರ್ಯದ ಜತೆಗೆ ಅಡಿಕೆ ಎಲೆ ಹಳದಿ ರೋಗಕ್ಕೂ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಹೇಳಿದರು.ಅವರು ನಾಮಪತ್ರ ಸಲ್ಲಿಕೆಯ ಬಳಿಕ ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ಹೇಳಿದರು.ಇಲ್ಲಿ ಅಡಿಕೆ...

ನೆಟ್ಟಣದಲ್ಲಿ ಕಾರು ಹಾಗೂ ತೂಫಾನ್ ಅಪಘಾತ – ಭೀಕರ ಅಪಘಾತಕ್ಕೆ ಸ್ಥಳದಲ್ಲೇ ನಾಲ್ವರು ದುರ್ಮರಣ

ತೂಫಾನ್ ವಾಹನ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ನೆಟ್ಟಣ ಎಂಬಲ್ಲಿ ಏ.18 ರಂದು ಮಧ್ಯಾಹ್ನ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿವೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಜಿ.ಕೃಷ್ಣಪ್ಪ – ಕಾರ್ಯಕರ್ತರಿಗೆ ಧೈರ್ಯ ತುಂಬಿದ ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ

ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಕೃಷ್ಣಪ್ಪರವರು ಇಂದು ನಾಮಪತ್ರ ಸಲ್ಲಿಸಿದರು. ಸುಳ್ಯ ಕಾಂಗ್ರೆಸ್ ಚುನಾವಣಾ ಕಚೇರಿಯಿಂದ ಎಲ್ಲಾ ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಸಾಗಿ ತಾ.ಪಂ ಕಚೇರಿಯಲ್ಲಿ ಚುನಾವಣಾಧಿಕಾರಿ ಅರುಣ್ ಕುಮಾರ್ ಸಂಗಾವಿಯವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುರಭವನದ ಬಳಿ ಸಭಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹ ಕಾರ್ಯಕರ್ತರನ್ನು ಉದ್ದೇಶಿಸಿ...

ಬಿಜೆಪಿ ಅಭ್ಯರ್ಥಿಯಾಗಿ ಭಾಗೀರಥಿ ಮುರುಳ್ಯ ನಾಮಪತ್ರ ಸಲ್ಲಿಕೆ – ನಾಯಕರು ಹಾಗೂ ಕಾರ್ಯಕರ್ತರ ಜತೆ ಭರ್ಜರಿ ರೋಡ್ ಶೋ

https://youtu.be/KoSm_Ri2EcA ಸುಳ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಭಾಗೀರಥಿ ಮುರುಳ್ಯ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದು, ಇಂದು ನಾಮ ಪತ್ರ ಸಲ್ಲಿಸಿದರು. ಬೆಳಗ್ಗೆ ಭರ್ಜರಿ ರೋಡ್ ಶೋ ನಡೆಸಿ 11:35 ರ ವೇಳೆಗೆ ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಆಗಮಿಸಿ ಭಾಗೀರಥಿ ಮುರುಳ್ಯ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಸಚಿವರಾದ ಎಸ್ ಅಂಗಾರ , ಕರ್ನಾಟಕ...

ಎಲಿಮಲೆ : ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಸಾಹಸಮಯ ಶಿಬಿರ

ಸರಕಾರಿ ಪ್ರೌಢಶಾಲೆ ಎಲಿಮಲೆ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇದರ ಜಂಟಿ ಆಶ್ರಯದಲ್ಲಿ ಏ.17 ಮತ್ತು 18 ರಂದು ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಸಾಹಸಮಯ ಶಿಬಿರ ನಡೆಯಿತು. ಏ.17 ರಂದು ಇದರ ಉದ್ಘಾಟನಾ ಸಮಾರಂಭ ನಡೆಯಿತು.ಎಸ್.ಡಿ.ಎಂ.ಸಿ ಸರಕಾರಿ ಪ್ರೌಢಶಾಲೆ ಎಲಿಮಲೆ ಕಾರ್ಯಾಧ್ಯಕ್ಷರಾದ ಜಯಂತ ಹರ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್...

ಕಾಂಗ್ರೆಸ್ ಅಭ್ಯರ್ಥಿಗೆ ‘ಬಿ’ ಫಾರಂ ನೀಡಲು ಬ್ರೇಕ್ ಹಾಕಿದ ಡಿಕೆಸಿ – ಕಾರ್ಯಕರ್ತರ ಒತ್ತಡಕ್ಕೆ ಮಣಿದ ಹೈಕಮಾಂಡ್ – ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿಸಲು ರಮಾನಾಥ ರೈ ಸುಳ್ಯಕ್ಕೆ

ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯ ಬಳಿಕ ಭುಗಿಲೆದ್ದ ಭಿನ್ನಮತ ನಿವಾರಣೆಗೆ ನಂದಕುಮಾರ್ ಹಾಗೂ ಕೃಷ್ಣಪ್ಪರ ನಡುವೆ ಸಂಧಾನ ನಡೆಸಲಾಗಿದ್ದು, ಪ್ರಸ್ತುತ ವಿದ್ಯಮಾನದ ಕುರಿತು ಚರ್ಚಿಸಿ ಕಾರ್ಯಕರ್ತರ ಅಭಿಪ್ರಾಯ ಪಡೆದು ವರದಿ ನೀಡುವಂತೆ ರಮಾನಾಥ ರೈ ಯವರಿಗೆ ಸೂಚನೆ ನೀಡಲಾಗಿದೆ.ಕೆಪಿಸಿಸಿ ಕಛೇರಿಯಲ್ಲಿ ನಡೆದ ನಂದಕುಮಾರ್ ಅಭಿಮಾನಿ ಬಳಗ ಮತ್ತು ಸುಳ್ಯ ಹಾಗೂ ಕಡಬ...

ಸಂಪಾಜೆ : ಕಾರು ಮತ್ತು ಬಸ್ ಡಿಕ್ಕಿ – ಭೀಕರ ಅಪಘಾತಕ್ಕೆ 6 ಜೀವ ಬಲಿ

ಸಂಪಾಜೆ ಪೆಟ್ರೋಲ್ ಪಂಪ್ ಬಳಿ ಶಿಪ್ಟ್ ಕಾರು ಮತ್ತು ಸರಕಾರಿ ಬಸ್ ಡಿಕ್ಕಿಯಾಗಿ ಆರು ಜನ ಮೃತಪಟ್ಟ ಭೀಕರ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದವರ ಪೈಕಿ ಮೂವರು ಸ್ಥಳದಲ್ಲೇ ಹಾಗೂ ಮೂವರು ಆಸ್ಪತ್ರೆಯಲ್ಲಿ ಮೃತಪಟ್ಟ ಹೃದಯವಿದ್ರಾಹಕ ಘಟನೆ ನಡೆದಿದೆ. ಮಂಡ್ಯ ಮೂಲದವರೆನ್ನಲಾಗಿದ್ದು ಹೆಚ್ಚಿನ ವಿವರಗಳಿಗೆ ನಿರೀಕ್ಷಿಸಲಾಗಿದೆ.

ಸುಳ್ಯದ ಕುಂ..ಕುಂ.. ವಸ್ತ್ರ ಮಳಿಗೆ ನವೀಕರಣಗೊಂಡು ಶುಭಾರಂಭ

ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂ..ಕುಂ… ಫ್ಯಾಶನ್ 10 ವರ್ಷಗಳನ್ನು ಪೂರೈಸಿದ್ದು, ಇದೀಗ ಸಂಸ್ಥೆಯು ನವೀಕರಣಗೊಂಡಿದ್ದು, ಇದರ ಶುಭಾರಂಭ ಕಾರ್ಯಕ್ರಮ ಇಂದು ಬೆಳಗ್ಗೆ ನೆರವೇರಿತು.ಕುಂಕುಂ ಫ್ಯಾಷನ್ ವಸ್ತ್ರ ಮಳಿಗೆಯು ದಶಕಗಳಿಂದ ಗ್ರಾಹಕರ ಅಚ್ಚುಮೆಚ್ಚಿನ ವಸ್ತ್ರ ಮಳಿಗೆಯಾಗಿ ಹೆಸರು ಪಡೆದುಕೊಂಡಿದೆ.ಬದಲಾವಣೆಗೆ ತಕ್ಕಂತೆ ಒಗ್ಗಿಕೊಂಡು ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ವಿನ್ಯಾಸದ ವಸ್ತ್ರಗಳನ್ನು ಸಂಸ್ಥೆಯು ತನ್ನ ಗ್ರಾಹಕರಿಗೆ...

ಬೆಂಗಳೂರಿನಲ್ಲಿ ನೆಲೆಸಿರುವ ಸುಳ್ಯ ವಿಧಾನ ಸಭಾ ಕ್ಷೇತ್ರದ ಜನತೆಯ ಸ್ನೇಹ ಸಮ್ಮಿಲನ – ಸಚಿವ ಎಸ್. ಅಂಗಾರರಿಗೆ ಸನ್ಮಾನ

ಬೆಂಗಳೂರಿನಲ್ಲಿ ಶಿಕ್ಷಣ, ಉದ್ಯೋಗ ವ್ಯಾಪಾರ ಹಾಗೂ ಇನ್ನಿತರ ಉದ್ದೆಶದಿಂದ ನೆಲೆಸಿರುವ ಸುಳ್ಯದವರಿಗಾಗಿ ಸ್ನೇಹ ಸಮ್ಮಿಲನ ಕಾರ್ಯವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯದ ಶಾಸಕರು ಹಾಗೂ ಬಂದರು ಹಾಗೂ ಮೀನು ಗಾರಿಕೆ ಸಚಿವರಾದ ಅಂಗಾರ ಅವರು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಸ್ನೇಹ ಸಮ್ಮಿಲನ ತಂಡದಿಂದ ಸಚಿವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಜೀ...

ಸುಳ್ಯ : ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ.ಕೃಷ್ಣಪ್ಪ ಆಯ್ಕೆ

ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 124 ಮಂದಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಆಪ್ತ ಪುತ್ತೂರಿನ ಜಿ.ಕೃಷ್ಣಪ್ಪ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಸುಳ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಹೊಸ ಅಭ್ಯರ್ಥಿ ಘೋಷಿಸಲಾಗಿದೆ.ಕಳೆದ ನಾಲ್ಕು ಬಾರಿ ಸುಳ್ಯದಿಂದ ಸ್ಪರ್ಧಿಸಿದ್ದ...

ಇಂದು ಮತ್ಸ್ಯವಾಹಿನಿ ತ್ರಿಚಕ್ರ ವಾಹನಗಳ ಲೋಕಾರ್ಪಣೆ -ಮತ್ಸ್ಯ ಸಂಪದ ಯೋಜನೆಯಡಿ ಸ್ವ ಉದ್ಯೋಗಕ್ಕೆ ಅವಕಾಶ

ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 'ಸ್ವಾವಲಂಬಿ ಬದುಕಿಗಾಗಿ ಸ್ವ ಉದ್ಯೋಗ' ಎಂಬ ಕಲ್ಪನೆಯೊಂದಿಗೆ ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಮತ್ಸ್ಯವಾಹಿನಿ ತ್ರಿಚಕ್ರ ವಾಹನಗಳ ಲೋಕಾರ್ಪಣೆ ಮಾ. 26 ರಂದು ಸಂಜೆ 5 ಗಂಟೆಗೆ ಸುಳ್ಯದ ಯುವಜನ ಸಂಯುಕ್ತ ಮಂಡಳಿಯಮೈದಾನದಲ್ಲಿ ನಡೆಯಲಿದೆ. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ...

ಅರಂತೋಡು ; ಅಮೃತ ಉದ್ಯಾನವನ, ಮುಕ್ತಿ ಧಾಮ ಹಾಗೂ ಸಭಾಂಗಣ ಉದ್ಘಾಟನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾಲೂಕು ಪಂಚಾಯತ್ ಸುಳ್ಯಅರಂತೋಡು ಗ್ರಾಮ ಪಂಚಾಯತ್ (ಅಮೃತ ಗ್ರಾಮ ಪಂಚಾಯತ್ ಹಾಗೂ ಗಾಂಧಿ ಗ್ರಾಮ ಪುರಸ್ಕೃತ) ಸಹಯೋಗದಲ್ಲಿ ಅರಂತೋಡು ಗ್ರಾ.ಪಂ. ವತಿಯಿಂದ ನಿರ್ಮಿಸಲಾದ ಅಮೃತ ಉದ್ಯಾನವನ, ಅಮೃತ ಮುಕ್ತಿ ಧಾಮ ಹಾಗೂ ಅಮೃತ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು...

ಕೊಡಿಯಾಲ : ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ, ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ

ಸುಳ್ಯ ತಾಲೂಕಿನ ಕೊಡಿಯಾಲ ಗ್ರಾ.ಪಂ. ನ ಸ್ವಚ್ಚತಾ ಅಭಿಯಾನ ಸಂಭ್ರಮ - 2, ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ, ಶ್ರೀ ದತ್ತಾಂಜನೇಯ ಕ್ಷೇತ್ರ ದಕ್ಷಿಣ...

ಪಂಜ : ಜಿಲ್ಲಾ ಮಟ್ಟದ ಬಿಜೆಪಿ ಮಹಿಳಾ ಸಮಾವೇಶ – ಕೇಂದ್ರ ಸಚಿವ ಶ್ರೀಪಾದ ನಾಯಕ್ ಭಾಗಿ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಮೈದಾನದ ಸುಷ್ಮಾ ಸ್ವರಾಜ್ ವೇದಿಕೆಯಲ್ಲಿ ಜಿಲ್ಲಾ ಮಟ್ಟದ ಬಿಜೆಪಿ ಮಹಿಳಾ ಸಮಾವೇಶ “ಮಾತೃ ಸಂಗಮ” ಕಾರ್ಯಕ್ರಮ ಇಂದು ನಡೆಯಿತು .ಕಾರ್ಯಕ್ರಮವನ್ನು ಕೇಂದ್ರ ಪ್ರವಾಸೋದ್ಯಮ, ಹಡಗು ಮತ್ತು ಜಲ ಮಾರ್ಗಗಳ ರಾಜ್ಯ ಸಚಿವ ಶ್ರೀಪಾದ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಭಾರತೀಯ ಜನತಾ ಪಾರ್ಟಿಯ ಬೆಳವಣಿಗೆಯಲ್ಲಿ ಮಹಿಳೆಯರು ಬಹುಹೊಡ್ಡ...

ಸುಬ್ರಹ್ಮಣ್ಯ : ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲರ ಭೇಟಿ –
ಅಮರ ಸುದ್ದಿ ಪತ್ರಿಕೆಯ ವರದಿಗಾರ ಉಲ್ಲಾಸ್ ಕಜ್ಜೋಡಿಗೆ ಸನ್ಮಾನ

ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಗೆ ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲರಾದ ಲ| ಸಂಜೀತ್ ಕುಮಾರ್ ಶೆಟ್ಟಿ ಅವರ ಅಧಿಕೃತ ಭೇಟಿ ಕಾರ್ಯಕ್ರಮವು ಮಾ.17 ರಂದು ಸುಬ್ರಹ್ಮಣ್ಯದ ಮಹಾಮಾಯ ರೆಸಿಡೆನ್ಸಿ ಯಲ್ಲಿ ನಡೆಯಿತು.ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ಅಧ್ಯಕ್ಷರಾದ ಲ| ಪ್ರೋ. ರಂಗಯ್ಯ ಶೆಟ್ಟಿಗಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್...

ಚಂದ್ರಶೇಖರ ಎರ್ದಡ್ಕ ನಿಧನ

ನಾಲ್ಕೂರು ಗ್ರಾಮದ ಎರ್ದಡ್ಕ ಮೋನಪ್ಪ ಗೌಡರ ಪುತ್ರ ಚಂದ್ರಶೇಖರ ಎಂಬುವವರು ಫೆ.10 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಮೃತರಿಗೆ 45 ವರ್ಷ ವಯಸ್ಸಾಗಿತ್ತು, ಮೃತರು ತಂದೆ, ತಾಯಿ, ಪತ್ನಿ, ಮಕ್ಕಳು, ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

ಸುಳ್ಯ : ಪಯಸ್ವಿನಿ ಹೊಳೆಯಲ್ಲಿ ಮುಳುಗಿ ಯುವಕರಿಬ್ಬರು ನೀರು ಪಾಲು

ಪಯಸ್ವಿನಿ ಹೊಳೆಯಲ್ಲಿ ಮುಳುಗಿ ಈಶ್ವರಮಂಗಲದ ಯುವಕರಿಬ್ಬರು ಮೃತಪಟ್ಟ ಘಟನೆ ಇಂದು ಸಂಜೆ ದೊಡ್ಡೇರಿಯಲ್ಲಿ ನಡೆದಿದೆ. ದೊಡ್ಡೇರಿಯಲ್ಲಿ ಇರುವ ಗೆಳೆಯರೊಬ್ಬರ ಮನೆಗೆ ಬಂದಿದ್ದ ಯುವಕರು ಪಕ್ಕದ ಪಯಸ್ವಿನಿ ಹೊಳೆಗೆ ಈಜಾಡಲು ತೆರಳಿದ್ದು ಈ ವೇಳೆ ಇಬ್ಬರು ಯುವಕರು ನೀರುಪಾಲಾದರೆಂದು ತಿಳಿದು ಬಂದಿದೆ. ಒರ್ವನನ್ನು ರಕ್ಷಿಸಲು ಹೋಗಿ ಮತ್ತೋರ್ವ ನೀರು ಪಾಲಾದರೆಂದೂ ತಿಳಿದುಬಂದಿದೆ. ಮೃತಪಟ್ಟ ಯುವಕರು ಜಿತೇಶ್ ಹಾಗೂ...

ವಳಲಂಬೆ : ದೇವರ ಉತ್ಸವ ಬಲಿ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರೋತ್ಸವದ ಅಂಗವಾಗಿಫೆ 01 ರಂದು ಬೆಳಿಗ್ಗೆ ಗಣಪತಿ ಹೋಮ, ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ನವ ಕಲಾಶಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು. ಸಂಜೆ 6 ರಿಂದ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು. ಬಳಿಕ ಚೆಂಡೆವಾದನ, ರಾತ್ರಿ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು. ರಾತ್ರಿ ಗಂಟೆ 8 ರಿಂದ...

ಪಾಲಡ್ಕ : ಬಸ್ ಹಾಗೂ ಅಂಬ್ಯುಲೆನ್ಸ್ ಅಪಘಾತ

ಸುಳ್ಯ ಕಡೆಗೆ ಬರುತ್ತಿದ್ದ ರಾಜಹಂಸ ಬಸ್ ಹಾಗೂ ಸುಳ್ಯದಿಂದ ಹೋಗುತ್ತಿದ್ದ ಅಂಬ್ಯುಲೆನ್ಸ್ ಮಧ್ಯೆ ಇಂದು ಸಂಜೆ ಅಪಘಾತ ಸಂಭವಿಸಿದ ಘಟನೆ ಪಾಲಡ್ಕದಿಂದ ವರದಿಯಾಗಿದೆ. ರೋಗಿಯೊಬ್ಬರನ್ನು ಸುಳ್ಯದಿಂದ ಬೆಳ್ಳಾರೆಗೆ ಕೊಂಡೊಯ್ಯಲಾಗುತ್ತಿದ್ದು, ಅಂಬ್ಯುಲೆನ್ಸ್ ನಲ್ಲಿ ಕುಳಿತಿದ್ದ ಸ್ವಸ್ತಿಕ್ ಎಂಬ ಯುವಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೋಗಿಯನ್ನು ಬೇರೆ ಅಂಬ್ಯುಲೆನ್ಸ್ ನಲ್ಲಿ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಉಡುಪಿ : ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆ – ಸಚಿವ ಎಸ್ ಅಂಗಾರ ಭಾಗಿ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಉಮಿಕಲ್ ಬೆಟ್ಟದ ಮೇಲೆ ನಿರ್ಮಾಣವಾಗಿರುವ ತುಳುನಾಡಿನ ಸೃಷ್ಟಿಕರ್ತ ಪರಶುರಾಮನ ಮೂರ್ತಿಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಬಂದರು, ಮೀನುಗಾರಿಕೆ, ಒಳನಾಡು ಜಲಸಾರಿಗೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ, ಇಂಧನ ಸಚಿವ ಹಾಗೂ ದ.ಕ.ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ದೇವಚಳ್ಳ : ಜಲ ಜೀವನ್ ಮಿಷನ್ ವತಿಯಿಂದ ಜಾಗೃತಿ ಕಾರ್ಯಕ್ರಮ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ತಾಲೂಕು ಪಂಚಾಯತ್ ಸುಳ್ಯ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ದೇವಚಳ್ಳ ಹಾಗೂ ದ.ಕ. ಜಿಲ್ಲಾ ಅನುಷ್ಠಾನ ಬೆಂಬಲ ಸಂಸ್ಥೆಗಳಾದ ಸಮುದಾಯ ಮಂಗಳೂರು ಮತ್ತು ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜಲ ಜೀವನ್ ಮಿಷನ್ ವಿಶೇಷ ಗ್ರಾಮ...

ಜ.20 : ಶ್ರೀರಾಮ್ ಫೈನಾನ್ಸ್ ವತಿಯಿಂದ ವಿದ್ಯಾರ್ಥಿ ನಿಧಿ ವಿತರಣಾ ಸಮಾರಂಭ

ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಸುಳ್ಯ ಶಾಖೆ ಇದರ ಆಶ್ರಯದಲ್ಲಿ ವಿದ್ಯಾರ್ಥಿ ನಿಧಿ ವಿತರಣಾ ಸಮಾರಂಭ ಜ.20 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ 10:00 ಗಂಟೆಗೆ ನಡೆಯಲಿದೆ. SFL Zonal Business Head ಶರತ್ ಚಂದ್ರ ಭಟ್ ಕಾಕುಂಜೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮೀನುಗಾರಿಕೆ ಹಾಗೂ ಬಂದರು ಒಳನಾಡು ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ...

ಬೆಳ್ಳಾರೆ : ಕರ್ನಾಟಕ ಪಬ್ಲಿಕ್ ಸ್ಕೂಲ್ ನ ನೂತನ ಕೊಠಡಿ ಉದ್ಘಾಟಿಸಿದ ಸಚಿವರಾದ ಬಿ.ಸಿ. ನಾಗೇಶ್ – 2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕೊಠಡಿ

ಸುಮಾರು ರೂ.2.00 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ನೂತನ ಕೊಠಡಿಗಳನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಜ.18 ರಂದು ಉದ್ಘಾಟಿಸಿದರು. ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ.ತೀರ್ಥರಾಮ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚನಿಲ...

ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಭರತ್ ಮುಂಡೋಡಿ ನೇಮಕ

ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಭರತ್ ಮುಂಡೋಡಿಯವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ನೇಮಕಗೊಳಿಸಿದ್ದಾರೆ. ಸಂಘಟನಾ ಚತುರ, ಉತ್ತಮ ವಾಗ್ಮಿಯಾಗಿರುವ ಇವರು ಮಾಜಿ.ಜಿಂ‌.ಪಂ.ಸದಸ್ಯರಾಗಿ ಹಾಗೂ ಪಕ್ಷ ಸಂಘಟನೆಗಾಗಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದು ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಿದೆ.

ರಂಗಮನೆಯಲ್ಲಿ ನಾಟಕೋತ್ಸವ ಆರಂಭ – ಸಚಿವರಾದ ಎಸ್.ಅಂಗಾರ ಚಾಲನೆ

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯ ಇದರ ಆಶ್ರಯದಲ್ಲಿ 3 ದಿನಗಳ ನಾಟಕೋತ್ಸವಕ್ಕೆ ಬಂದರು, ಮಿನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯ ಬುದ್ಧ ನಾಯ್ಕ, ಜೀವನ್ ರಾಮ್ ಸುಳ್ಯ, ಕೆ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಜ.13 ರಂದು ಯಕ್ಷ ರಂಗಾಯಣ ಕಾರ್ಕಳ ಇಲ್ಲಿನ ಸಂಚಾರಿ ರಂಗ...

ಸಾಲಮನ್ನಾ ಯೋಜನೆಯಿಂದ ವಂಚಿತರಾದ ರೈತರು ಹೋರಾಟಕ್ಕೆ ನಿರ್ಧಾರ – ಜ.17 ರಂದು ಪೂರ್ವಭಾವಿ ಸಭೆ

ಈ ಹಿಂದಿನ ಸರಕಾರಗಳು ಘೋಷಣೆ ಮಾಡಿದ ರೈತರ ಸಾಲಗಳನ್ನು ಮನ್ನಾ ಯೋಜನೆ ಕೆಲವರಿಗೆ ಸಿಕ್ಕಿದ್ದರೇ ಇನ್ನೂ ಕೆಲವರಿಗೆ ಸಿಕ್ಕಿರಲಿಲ್ಲ. ತಾಂತ್ರಿಕ ಕಾರಣಕ್ಕೆ ರಾಜ್ಯದಲ್ಲಿ ಹಲವು ರೈತರು ಈ ಸಾಲಮನ್ನಾ ಯೋಜನೆಯಿಂದ ವಂಚಿತರಾಗಿದ್ದರು. ಮತ್ತು ಕಳೆದ ನಾಲ್ಕು ವರಷಗಳಿಂದ ಸಾಲ ಮನ್ನಾ ಹಣ ಖಾತೆಗೆ ಜಮಾವಣೆಯಾಗುವ ನಿರೀಕ್ಷೆಯಲ್ಲಿದ್ದರು. ಇನ್ನೂ ಬಾರದ ಹಿನ್ನಲೆಯಲ್ಲಿ ಇದೀಗ ರೈತರು ರೋಸಿ ಹೋಗಿದ್ದಾರೆ.2018...

ಅಡ್ತಲೆ ರಸ್ತೆ ಗುದ್ದಲಿ ಪೂಜೆ ದಿನವೇ ಕಾಮಗಾರಿ ಆರಂಭಿಸಿ – ನಾಗರಿಕ ಹಿತರಕ್ಷಣಾ ವೇದಿಕೆ ಆಗ್ರಹ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸುಳ್ಯ ತಾಲೂಕಿನ ಅರಂತೋಡು- ಅಡ್ತಲೆ- ಎಲಿಮಲೆ ರಸ್ತೆ ದುರಸ್ತಿಗೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಕಳೆದ ಕೆಲ ತಿಂಗಳಿನಿಂದ ಮತದಾನ ಬಹಿಷ್ಕಾರ ನಿರ್ಧಾರ ಮಾಡಿ ಅಹವಾಲು ಸಲ್ಲಿಸುತ್ತಿದ್ದು, ಈ ಬೆನ್ನಲ್ಲೇ ಶಾಸಕ ಹಾಗೂ ಸಚಿವ ಎಸ್ .ಅಂಗಾರ ಕಾಮಗಾರಿ ಗುದ್ದಲಿ ಪೂಜೆಗೆ ದಿನ ನಿಗದಿ ಮಾಡಿದ್ದಾರೆ.ಆದರೆ ಇದಕ್ಕೆ ಸೆಡ್ಡು‌ ಹೊಡೆದಿರುವ...

ಸುಬ್ರಹ್ಮಣ್ಯ : ಲವ್ ಜಿಹಾದ್ ಗೆ ಯತ್ನ ಆರೋಪ – ಮುಸ್ಲಿಂ ಯುವಕನಿಗೆ ಹಲ್ಲೆ – ದೂರು ; ಯುವತಿ ಮನೆಯಿಂದ ಪ್ರತಿ ದೂರು – ಫೋಕ್ಸೋ ಪ್ರಕರಣ ದಾಖಲು

ಜಾಲತಾಣವಾದ ಪರಿಚಯವಾದ ಹಿಂದೂ ಯುವತಿಯನ್ನು ಭೇಟಿಯಾಗಲು ಸುಬ್ರಹ್ಮಣ್ಯಕ್ಕೆ ಬಂದ ಮುಸ್ಲಿಂ ಯುವಕನಿಗೆ ಹಲ್ಲೆಗೈದ ಪ್ರಕರಣ ಬಗ್ಗೆ ಇತ್ತಂಡಗಳಿಂದ ದೂರು ದಾಖಲಾದ ಘಟನೆ ವರದಿಯಾಗಿದೆ. ಯುವಕ ಹಾಗೂ ಯುವತಿಯ ಪೋಷಕರು ಪ್ರತ್ಯೇಕ ದೂರು ನೀಡಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನ ವಿರುದ್ಧ ಯುವತಿಯ ಪೋಷಕರು ನೀಡಿದ ದೂರಿನನ್ವಯ ಪೋಕ್ಸೋ ಪ್ರಕರಣ ದಾಖಲಾಗಿದೆ.ಹಲ್ಲೆಗೊಳಗಾದ...

ಕೆ.ವಿ.ಜಿ.ಡೆಂಟಲ್ ಕಾಲೇಜಿನಲ್ಲಿ ರ‌್ಯಾಗಿಂಗ್ ನಡೆದಿಲ್ಲ – ಪ್ರಾಂಶುಪಾಲರ ಸ್ಪಷ್ಟನೆ

ಕೆ.ವಿ.ಜಿ. ದಂತಮಹಾವಿದ್ಯಾಲಯದ ವಿದ್ಯಾರ್ಥಿಗಳ ಮಧ್ಯೆ ಡಿ.29 ರಂದು ನಡೆದ ಕಲಹದ ಕುರಿತು ಪ್ರಾಂಶುಪಾಲರು ಸ್ಪಷ್ಟಿಕರಣ ನೀಡಿದ್ದಾರೆ. ರ‌್ಯಾಗಿಂಗ್ ನಡೆದಿದೆ ಎಂದು ಪ್ರಚಾರ ಪಡೆದಿರುವ ವಿಚಾರಗಳು ಸತ್ಯಕ್ಕೆ ದೂರವಾಗಿದೆ. ಡಾ| ಪಲ್ಲವಿ ಎನ್.ಪಿ. ನಮ್ಮ ಸಂಸ್ಥೆಯ 3ನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದು, ಮೂಲತ: ಬೆಂಗಳೂರಿನ ವೈಟ್ ಫೀಲ್ಡ್ ನವರಾಗಿರುತ್ತಾರೆ. ಡಾ. ಪಲ್ಲವಿಯವರು ನಮ್ಮದೇ, ಕೆ.ವಿ.ಜಿ. ದಂತ ಮಹಾವಿದ್ಯಾಲಯದ...

ಧನಪಾಲ್ ಗೂನಡ್ಕ ಹೆಸರಿನಲ್ಲಿ ಬೇನಾಮಿ ದೂರು ; ಮರಳುಗಾರಿಕೆ ತಡೆಗಟ್ಟಲು ಯಾವ ಅಧಿಕಾರಿಗಳಿಗೂ ದೂರು ನೀಡಿಲ್ಲ – ಧನಪಾಲ್ ಸ್ಪಷ್ಟನೆ

ಅರಂತೋಡು, ಸಂಪಾಜೆ ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಇದನ್ನು ತಡೆಗಟ್ಟಬೇಕೆಂದು ಧನಪಾಲ್ ಗೂನಡ್ಕ ಅವರ ಹೆಸರಿನಲ್ಲಿ ಜಿಲ್ಲಾಧಿಕಾರಿಗೆ ಬೇನಾಮಿ ದೂರು ನೀಡಿದ ಘಟನೆ ನಡೆದಿದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ಕೂಡ ವರದಿಯಾಗಿತ್ತು. ಈ ಬಗ್ಗೆ ಅಮರ ಸುದ್ದಿಗೆ ಧನಪಾಲ್ ಗೂನಡ್ಕ ಪ್ರತಿಕ್ರಿಯೆ ನೀಡಿ ಅಕ್ರಮ ಮರಳುಗಾರಿಕೆ ತಡೆಗಟ್ಟಲು ನಾನು ಯಾವ ಅಧಿಕಾರಿಗಳಿಗೂ ದೂರು ನೀಡಿಲ್ಲ. ಮರಳು...

ಸುಳ್ಯ : ತಾಲೂಕು ಪಂಚಾಯತ್ ನಲ್ಲಿ ಆಧಾರ್ ಸೇವಾ ಕೇಂದ್ರ ಆರಂಭ

ಸುಳ್ಯ ನಗರದಲ್ಲಿ ಈ ಹಿಂದೆ ಕಾರ್ಯಾಚರಿಸುತ್ತಿದ್ದ ಸೇವಾ ಕೇಂದ್ರಗಳಲ್ಲಿ ಆಧಾರ್ ಸೇವೆಗಳು ಕಾರಣಾಂತರಗಳಿಂದ ತಾತ್ಕಾಲಿಕ ನಿಲುಗಡೆಯಾಗಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಪರಿಗಣಿಸಿ ತಾಲೂಕು ಪಂಚಾಯತ್ ಸುಳ್ಯದಲ್ಲಿ ಆಧಾರ್ ಸೇವಾ ಕೇಂದ್ರ ಆರಂಭಗೊಂಡಿದ್ದು, ವಿಳಾಸ ತಿದ್ದುಪಡಿ, ಹೆಸರು ತಿದ್ದುಪಡಿ, ಮೊಬೈಲ್ ನಂಬರ್ ಸೇರ್ಪಡೆ, ಹೊಸ ಆಧಾರ್ ಕಾರ್ಡ್ ಹಾಗೂ ಬಯೋಮೆಟ್ರಿಕ್ ಅಪ್ಲೇಟ್ ಸೇವೆಗಳು ಲಭ್ಯವಿರುತ್ತದೆ. ತಿದ್ದುಪಡಿಗಾಗಿ ಸಂಬಂಧಪಟ್ಟ...

ಕಡೆಪಾಲ : ದ್ವಿಚಕ್ರ ವಾಹನ ಡಿಕ್ಕಿ – ಪಾದಾಚಾರಿ ಮೃತ್ಯು

ಕಲ್ಲುಗುಂಡಿ ಕಡೆಪಾಲ ಬಳಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಸ್ಕೂಟರ್ ಡಿಕ್ಕಿ ಹೊಡೆದು ವ್ಯಕ್ತಿ ಸಾವನಪ್ಪಿದ ಘಟನೆ ಇಂದು ನಡೆದಿದೆ. ಕಳೆದ ಕೆಲ ದಿನಗಳಿಂದ ಈ ಅಪರಿಚಿತ ವ್ಯಕ್ತಿ ರಸ್ತೆಯುದ್ದಕ್ಕೂ ತಿರುಗಾಡುತ್ತಿದ್ದ ಎಂದು ತಿಳಿದುಬಂದಿದೆ. ಸ್ಕೂಟರ್ ಸವಾರ ಕೊಯನಾಡು ಚಡಾವು ನಿವಾಸಿ ಅಲ್ಪಸ್ವಲ್ಪ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಲ್ಲುಗುಂಡಿ ಪೋಲಿಸರು ಸ್ಥಳಕ್ಕೆ...

ಸುಳ್ಯ : ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿನಿ ಆತ್ಮಹತ್ಯೆ

ಸುಳ್ಯ ಕುರುಂಜಿಭಾಗ್ ಸಮೀಪ ಇರುವ ಬಿ ಸಿ ಎಂ ಹಾಸ್ಟೆಲ್ ನಲ್ಲಿ ಬಾಲಕಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಸುಳ್ಯದ ಶಾರದಾ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜಿನ‌ ಪ್ರಥಮ ಪಿಯುಸಿಯ ವಿದ್ಯಾರ್ಥಿನಿ ಸೋನಿಯಾ (18) ಬೆಂಗಳೂರು ರಾಮನಾಥ ಪುರದ, ಕಾರಮಂಗಲ ತಾಲೊಕಿನ ಮಾರ್ಲಮಂಗಲ ಗ್ರಾಮದ ಪುರುಷೋತ್ತಮ ಎಂಬವರ ಪುತ್ರಿ. ಸೋನಿಯಾ ಇಂದು ಕಾಲೇಜಿಗೆ ಹೋಗದೇ...

ಬೆಳ್ಳಾರೆ : ಅಪಹರಣ ಪ್ರಕರಣ – ಅತ್ತೆಯ ವಿರುದ್ಧ ಕಳ್ಳತನದ ಆರೋಪ ಮಾಡಿ, ದೂರು ನೀಡಿದ ಸೊಸೆ

ಬೆಳ್ಳಾರೆಯ ಯುವ ಉದ್ಯಮಿ ನವೀನ್ ಕಾಮಧೇನು ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಡ್ರಾಮ ಮುಂದುವರಿದಿದ್ದು, ನವೀನ್ ತಾಯಿ ಮೇಲೆ ಚಿನ್ನಾಭರಣ ಕಳ್ಳತನದ ಆರೋಪ ಹೊರಿಸಿ ದೂರು ದಾಖಲಾದ ಘಟನೆ ಡಿ.23 ರಂದು ನಡೆದಿದೆ.ಉದ್ಯಮಿ ನವೀನ್ ಪತ್ನಿ ಸ್ಪಂದನ ಅವರು ಬೆಳ್ಳಾರೆ ಕಾವಿನ ಮೂಲೆಯಲ್ಲಿ ಮನೆಯಿಂದ ಚಿನ್ನಾಭರಣ ಕಳವು ಆಗಿರುವುದಾಗಿ ಪೊಲೀಸ್ ದೂರು ನೀಡಿದ್ದಾರೆ. ದೂರಿನಲ್ಲಿ ನವೀನ್ ಪತ್ನಿ...

ಬೆಳ್ಳಾರೆ ಪ್ರಕರಣ ; ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ ತಾಯಿ – ತಾಯಿ ಜತೆ ಕಳುಹಿಸಲು ಸಮ್ಮಿತಿಸಿದ ನ್ಯಾಯಾಲಯ

ಬೆಳ್ಳಾರೆಯ ಯುವ ಉದ್ಯಮಿ ಕಾಮಧೇನು ಜುವೆಲ್ಲರ್ಸ್ ಮಾಲಕ ನವೀನ್ ಅವರನ್ನು ಆಂಬ್ಯುಲೆನ್ಸ್ ನಲ್ಲಿ ಬಲಾತ್ಕಾರವಾಗಿ ಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ನೀಡಿದ ದೂರಿನಂತೆ ನವೀನ್ ತಂದೆ ಕಾಮಧೇನು ಮಾಧವ ಗೌಡ, ಅತ್ತೆ ದಿವ್ಯಪ್ರಭ ಚಿಲ್ತಡ್ಕ, ಪತ್ನಿ ಸ್ಪಂದನ ಸೇರಿದಂತೆ 6 ಮಂದಿಯ ಮೇಲೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ನವೀನ್ ಅವರ ತಾಯಿ ನೀರಜಾಕ್ಷಿಯವರು ಹೈಕೋರ್ಟಿಗೆ...

ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವರ ದರ್ಶನ ಬಲಿ – ಕಣ್ತುಂಬಿಕೊಂಡ ಭಕ್ತರು

https://youtu.be/S-pvR_hKW6U ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದಲ್ಲಿ ಕಾಲವಧಿ ಉತ್ಸವವು ಡಿ.15 ರಂದು ತಂತ್ರಿವರ್ಯರ ಆಗಮನದೊಂದಿಗೆ ಆರಂಭಗೊಂಡು, ರಾತ್ರಿ ಶುದ್ಧಿ ಕಲಶ. ಡಿ. 16 ರಂದು ಶ್ರೀ ಗಣಪತಿ ಹವನ, ಉಗ್ರಾಣ ತುಂಬಿಸುವುದು, ಬಿಂಬ ಶುದ್ಧಿ, ಕಲಶ ಪೂಜೆ, ಕಲಶಾಭಿಷೇಕ ನಾಗ ದೇವರಿಗೆ ಮತ್ತು ರಕ್ತೇಶ್ವರಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು,...

ನ.30 ರಂದು ಸುಳ್ಯ ಪ್ರೆಸ್ ಕ್ಲಬ್ ನೂತನ ಕಟ್ಟಡ ಉದ್ಘಾಟನೆ

ಪ್ರೆಸ್ ಕ್ಲಬ್ ಸುಳ್ಯದ ವತಿಯಿಂದ ಸುಳ್ಯದ ಅಂಬಟಡ್ಕದಲ್ಲಿ ನಿರ್ಮಾಣಗೊಂಡ 'ಪತ್ರಕರ್ತರ ಸಮುದಾಯ ಭವನ'ದ ನೆಲ ಅಂತಸ್ತಿನ ಉದ್ಘಾಟನೆ ನ.30 ರಂದು ನಡೆಯಲಿದೆ ಎಂದು ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಹೇಳಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ಪ್ರೆಸ್ ಕ್ಲಬ್‌ಗೆ ತಾಲೂಕು ಪಂಚಾಯತ್ ನೀಡಿದ ನಿವೇಶನದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದೆ....

ಕಲ್ಲುಗುಂಡಿ ಬಳಿ ಬಸ್ ಹಾಗೂ ಲಾರಿ ಅಪಘಾತ – ಹಲವರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಸುಳ್ಯದ ಕಲ್ಲುಗುಂಡಿ ಸಮೀಪ ಕಡಪಾಲ ಸೇತುವೆ ಬಳಿ ಲಾರಿ ಹಾಗೂ ಬಸ್ ನಡುವೆ ನಡೆದ ಅಪಘಾತದ ಪರಿಣಾಮ ಹಲವರು ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ.ಮೈಸೂರಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ಸರಕಾರಿ ಬಸ್‌ಗೆ ಲಾರಿ ಡಿಕ್ಕಿ ಹೊಡೆದಿರುವುದಾಗಿ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.ಗಾಯಾಳುಗಳನ್ನು ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದೆ. ಇನ್ನೋರ್ವ ಗಾಯಾಳು ಬಸ್ಸಿನ ಒಳಗೆ ಸಿಲುಕಿದ್ದು,...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ – ಮತ್ತೆ ಎನ್.ಐ.ಎ ದಾಳಿ- ಇಕ್ಬಾಲ್ ಬೆಳ್ಳಾರೆ, ಶಾಪಿ ಬೆಳ್ಳಾರೆ, ಇಬ್ರಾಹಿಂ ವಶಕ್ಕೆ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ರಾಜ್ಯದ ಹಲವಡೆ ಬೆಳ್ಳಂಬೆಳಗ್ಗೆ ಎನ್ ಐಎ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದು ಮೂವರನ್ನು ಬಂಧಿಸಿದ್ದಾರೆ. ಎಸ್.ಡಿ.ಪಿ.ಐ ನ ಇಕ್ಬಾಲ್ ಬೆಳ್ಳಾರೆ, ಶಾಫಿ ಬೆಳ್ಳಾರೆ, ಇಬ್ರಾಹಿಂ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.ಎನ್ ಐಎ ಅಧಿಕಾರಿಗಳು ರಾಜ್ಯದ ಹಲವಡೆ ಮತ್ತೆ ದಾಳಿ ನಡೆಸಿದ್ದು, ದಕ್ಷಿಣ ಕನ್ನಡ, ಮೈಸೂರು, ಹುಬ್ಬಳ್ಳಿ...

ಪ್ರೆಂಡ್ಸ್ ಬೆಳ್ಳಾರೆ ವತಿಯಿಂದ ನೆರವಿನ ಹಸ್ತ – ಮೂರು ಕುಟುಂಬಗಳ ನೋವಿಗೆ ಸ್ಪಂದನೆ

ಹಲವು ಸಾಂಸ್ಕ್ರತಿಕ,ಧಾರ್ಮಿಕ ಹಾಗೂ ಸಮಾಜ ಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಫ್ರೆಂಡ್ಸ್ ಬೆಳ್ಳಾರೆ ತಂಡ ಇದೀಗ ಕಮರಿದ ಕನಸಿಗೆ ಮಿಡಿಯುವ ಮನಸ್ಸು ಎಂಬ ಧ್ಯೇಯ ದೊಂದಿಗೆ ಕಷ್ಟದ ಕುಟುಂಬಕ್ಕೆ ಆರ್ಥಿಕವಾಗಿ ನೆರವು ನೀಡುವ ಯೋಜನೆ ಹಾಕಿಕೊಂಡು ನವರಾತ್ರಿಯ ಒಂದು ದಿನ ವಿವಿಧ ವೇಷಭೂಷಣಗಳೊಂದಿಗೆ ಬೆಳ್ಳಾರೆ ಆಸುಪಾಸಿನಲ್ಲಿ ತೆರಳಿ ಮತ್ತು ಗೂಗಲ್ ಪೇ ಮೂಲಕ ಹಣ...

ಸಂಪಾಜೆ : ಕಡವೆ ಬೇಟೆ – ಇಬ್ಬರ ಬಂಧನ

ಸಂಪಾಜೆ : ದಬ್ಬಡ್ಕ ವಲಯದ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿ ಮಾಂಸವನ್ನಾಗಿ ಪರಿವರ್ತಿಸುವ ಸಂದರ್ಭದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಾಧಿಕಾರಿಗಳಾದ ಎ.ಟಿ.ಪೂವಯ್ಯ ಹಾಗೂ ಸಂಪಾಜೆ ವಲಯ ಅರಣ್ಯ ಅಧಿಕಾರಿ ಮಧುಸೂದನ್ ಎಂ.ಕೆ ರವರ ನೇತೃತ್ವದಲ್ಲಿ ಶಾಖೆಯ ಉಪ ಅರಣ್ಯ ಅಧಿಕಾರಿಗಳಾದ ನಿಸಾರ್ ಅಹಮದ್, ಅರಣ್ಯ ರಕ್ಷಕರಾದ ಕಾರ್ತಿಕ್, ಅರಣ್ಯ ವೀಕ್ಷಕರಾದ...

ಉಬರಡ್ಕ ; ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ದ್ವಾರ, ಉಬ್ಬುಶಿಲ್ಪಗಳ ಲೋಕಾರ್ಪಣೆ

ಜ್ಞಾನಧಾಮ ಚಾರಿಟೇಬಲ್ ಟ್ರಸ್ಟ್(ರಿ), ಮದುವೆಗದ್ದೆ, ಉಬರಡ್ಕ ಮಿತ್ತೂರು ಹಾಗೂ ಊರವರ ಮತ್ತು ದಾನಿಗಳ ಸಹಕಾರದೊಂದಿಗೆ ಉಬರಡ್ಕ ಮಿತ್ತೂರು ಗ್ರಾಮದ ಅಮೈ ಮಡಿಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ದ್ವಾರ ಮತ್ತು ಭಾರತದ ಸ್ವಾತಂತ್ರ್ಯ ಸಂಗ್ರಾಮ 1837ರ ಅಮರ ಸೈನ್ಯದ ಚಾರಿತ್ರಿಕ ಉಬ್ಬುಶಿಲ್ಪಗಳ ಲೋಕಾರ್ಪಣೆ ಸಮಾರಂಭದಲ್ಲಿ ಮೀನುಗಾರಿಕೆ,...

ಸೆ.26: ನಿಂತಿಕಲ್ಲಿನಲ್ಲಿ ಸೋಲಾರ್ ಪಾಯಿಂಟ್ ಪೈಂಟ್ಸ್ ಶುಭಾರಂಭ

ನಿಂತಿಕಲ್ಲಿನ ಕೆನರಾ ಬ್ಯಾಂಕ್ ಹತ್ತಿರದ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸೋಲಾರ್ ಪಾಯಿಂಟ್ ಸಂಸ್ಥೆಯು ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುತ್ತಿದ್ದು, ಇದೀಗ ಇದರ ಅಂಗಸಂಸ್ಥೆಯಾಗಿ ಸೋಲಾರ್ ಪಾಯಿಂಟ್ ಪೈಂಟ್ಸ್ ಸಂಸ್ಥೆಯು ಕೆನರಾ ಬ್ಯಾಂಕ್ ಹತ್ತಿರದ ಸನ ಕಾಂಪ್ಲೆಕ್ಸ್ ನಲ್ಲಿ ಸೆ.26 ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ತರಹದ ಪೈಂಟ್ಸ್ ಮತ್ತು ಪೈಂಟ್ ಸಾಮಗ್ರಿಗಳು ಮಿತದರದಲ್ಲಿ ದೊರೆಯುತ್ತದೆ....

ಕಾಂಗ್ರೆಸ್‌ ನವರು ಜನರಿಗೆ ವಂಚಿಸುವ ಕೆಲಸ ಮಾಡುತ್ತಿದ್ದಾರೆ – ಹರೀಶ್ ಕಂಜಿಪಿಲಿ ಟೀಕೆ

ಇತ್ತೀಚೆಗೆ ಭೀಕರ ಪ್ರವಾಹದಿಂದಾಗಿ ಸುಳ್ಯ ಕ್ಷೇತ್ರದ ಕೆಲವೊಂದು ಭಾಗಗಳಲ್ಲಿ ವಿಪರೀತ ಸಮಸ್ಯೆಗಳಾಗಿದ್ದು, ಕೊಲ್ಲಮೊಗ್ರು ಗ್ರಾಮದ ಕಡಂಬಳ ಸೇತುವೆ ಕೂಡಾ ಕೊಚ್ಚಿ ಹೋಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಮಳೆಗಾಲದಲ್ಲಿ ತಕ್ಷಣ ಸೇತುವೆ ನಿರ್ಮಾಣ ಕಾರ್ಯ ಅಸಾಧ್ಯವಾದುದರಿಂದ ಅಲ್ಲಿ ಸ್ವಲ್ಪ ವಿಳಂಬವಾಗಿ ಮೋರಿ ಪೈಪು ಅಳವಡಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ...

ಕಾಂತಮಂಗಲ : ಶಾರದಾಬಾಯಿ ನಾವಡರ ಸ್ಮರಣಾರ್ಥ ಕೊಡುಗೆಯಾಗಿ ನೀಡಿದ ಕೊಠಡಿ ಉದ್ಘಾಟನೆ

ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿದ್ದ ದಿ.ಬಿ.ಕೆ.ಶಾರದಾಬಾಯಿ ನಾವಡರವರ ಸ್ಮರಣಾರ್ಥ ಅವರ ಪತಿ ಕೃಷ್ಣ ನಾವಡರು ಹಾಗೂ ಮಕ್ಕಳು ಕೊಡುಗೆಯಾಗಿ ನೀಡಿದ ನಲಿಕಲಿ ಕೊಠಡಿಯ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು.ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿಯವರು ಕಾರ್ಯಕ್ರಮ ಆಶೀರ್ವಚನ ನುಡಿಗಳಲ್ಲಿ ದೇಶ ಭಕ್ತಿಯು ಎಳೆಯವಯಸ್ಸಿನಲ್ಲಿ ಕಲಿಸಬೇಕು ಇದೀಗ ಕಲಿತವರೇ ದೇಶದ್ರೋಹದ ಕೆಲಸಗಳನ್ನು...

ಮರ್ಕಂಜ ಸೊಸೈಟಿಯ ನೂತನ ಅಧ್ಯಕ್ಷರಾಗಿ ರಮೇಶ್ ದೇಲಂಪಾಡಿ

ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮಹಾಬಲ ಕಟ್ಟಕೋಡಿಯವರು ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಸೆ.19 ರಂದು ನಡೆದ ಸಂಘದ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು. ರಮೇಶ್ ದೇಲಂಪಾಡಿ ಅವರನ್ನು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಮಹಾಬಲ ಕಟ್ಟಕೋಡಿ, ನಿರ್ದೇಶಕರು, ಮುಖ್ಯ...

110 ಕೆ.ವಿ. ಸಬ್ ಸ್ಟೇಷನ್ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಆರಂಭ

ಸುಳ್ಯದ ಬಹುದಿನಗಳ ಬೇಡಿಕೆಯಾಗಿದ್ದ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ. ಸಚಿವ ಅಂಗಾರ ಹಾಗೂ ಇಂಧನ ಸಚಿವರಾದ ಸುನಿಲ್ ಕುಮಾರ್ ಅವರು 110 ಕೆ.ವಿ.ಸಬ್ ಸ್ಟೇಷನ್ ನಿರ್ಮಾಣದ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದರು. ಅರಣ್ಯ ಇಲಾಖೆಯ ಅಡೆ ತಡೆ ನಿವಾರಿಸಲು ಸತತ ಪ್ರಯತ್ನ ನಡೆಸಿದ್ದರು. ಇದೀಗ ಕೆಪಿಟಿಸಿಎಲ್ 110 ಕೆ.ವಿ....

ಬೆಂಗಳೂರಿನ ಆರ್.ಎನ್.ಎಸ್. ಮತ್ತು ಜ್ಞಾನಮಂದಾರ ಶಿಕ್ಷಣ ಸಂಸ್ಥೆಗಳ ವತಿಯಿಂದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ

ಬೆಂಗಳೂರಿನ ಆರ್.ಎನ್.ಎಸ್. ಪದವಿಪೂರ್ವ ಕಾಲೇಜು ಮತ್ತು ಜ್ಞಾನಮಂದಾರ ಶಿಕ್ಷಕಿಯರ ತರಬೇತಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೆ.22 ರಂದು ಆರ್.ಎನ್.ಎಸ್.ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿ.ವಿ‌. ಉಪಕುಲಪತಿಗಳಾದ ಡಾ. ಪಿ.ಎಸ್.ಎಡಪಡಿತ್ತಾಯ, ಗೌರವಾನ್ವಿತ ಅತಿಥಿಗಳಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಮಾಜಿ ಅಧ್ಯಕ್ಷ ಡಾ. ಧರ್ಮದರ್ಶಿ...

ಡಾ. ಅನುರಾಧಾ ಕುರುಂಜಿ ಯವರಿಗೆ “ಕನ್ನಡ ಪಯಸ್ವಿನಿ” ಪ್ರಶಸ್ತಿ ಪ್ರದಾನ

ಕನ್ನಡ ಭಾಷೆ, ಸಾಹಿತ್ಯ, ಸಂವರ್ಧನೆಗೆ ನಿರಂತರ ಪ್ರಯತ್ನಿಸುತ್ತಾ ಬಂದಿರುವ ಕಾಸರಗೋಡಿನ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ 2022 ನೇ ಸಾಲಿನ ಪ್ರತಿಷ್ಠಿತ ಕನ್ನಡ ಪಯಸ್ವಿನಿ ಪ್ರಶಸ್ತಿ- 2022 ನ್ನು ಪ್ರಾಧ್ಯಾಪಕಿ, ಸಾಹಿತಿ, ಸಂಘಟಕಿ, ಸಂಪನ್ಮೂಲ ವ್ಯಕ್ತಿ, ಸುಳ್ಯದ ಡಾ. ಅನುರಾಧಾ ಕುರುಂಜಿ ಅವರಿಗೆ ಸೆಪ್ಟೆಂಬರ್ 11 ಕಾಸರಗೋಡಿನಲ್ಲಿ ಪ್ರದಾನ ಮಾಡಲಾಯಿತು....

ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾಗಿ ತೇಜಸ್ವಿ ಕಡಪಳ- ಪ್ರ.ಕಾರ್ಯದರ್ಶಿ ಸಂಜಯ್ ನೆಟ್ಟಾರು

ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಮಹಾಸಭೆ ಸೆ.10 ರಂದು ನಡೆಯಿತು. ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿ. ನೂತನ ಅಧ್ಯಕ್ಷರಾಗಿ ತೇಜಸ್ವಿ ಕಡಪಳ, ಗೌರವಾಧ್ಯಕ್ಷರಾಗಿ ದಯಾನಂದ ಕೇರ್ಪಳ, ಪ್ರಧಾನ ಕಾರ್ಯದರ್ಶಿಯಾಗಿ ಸಂಜಯ್ ನೆಟ್ಟಾರು, ಕೋಶಾಧಿಕಾರಿಯಾಗಿ ಮುರಳಿ ನಳಿಯಾರು, ಉಪಾಧ್ಯಕ್ಷರುಗಳಾಗಿ ಪ್ರವೀಣ್ ಕುಮಾರ್ ಜಯನಗರ, ವಿಜಯಕುಮಾರ್ ಉಬರಡ್ಕ, ಜೊತೆ ಕಾರ್ಯದರ್ಶಿಯಾಗಿ ನಮಿತಾ ಹರ್ಲಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ...

ಬೆಳ್ಳಾರೆ : ಹಿಂದೂ ಕಾರ್ಯಕರ್ತನಿಗೆ ಕೊಲೆ ಬೆದರಿಕೆ – ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಠಾಣೆ ಮುಂದೆ ಜಮಾಯಿಸಿದ ಕಾರ್ಯಕರ್ತರು

ಹಿಂದೂ ಸಂಘಟನೆಯ ಕಾರ್ಯಕರ್ತ ಹಾಗೂ ಬೆಳ್ಳಾರೆಯ ಅಮ್ಮುರೈ ಕಾಂಪ್ಲೆಕ್ಸ್‌ನ ಮ್ಯಾನೇಜರ್ ಪ್ರಶಾಂತ್ ರೈವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ಕೊಲೆ ಆರೋಪಿ ಶಫೀಕ್ ನ ತಮ್ಮ ಸಫ್ರಿದ್ ಜೀವ ಬೆದರಿಕೆ ಒಡ್ಡಿರುವುದಾಗಿ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ. ಈತ ಪ್ರವೀಣ್ ನೆಟ್ಟಾರ್ ಅವರ ಕೋಳಿ ಫಾರ್ಮ್ ನಲ್ಲಿ ಕ್ಲಿನಿಂಗ್ ಕೆಲಸ ಮಾಡುತ್ತಿದ್ದ ಇಬ್ರಾಹಿಂ ಎಂಬವರ ಪುತ್ರ....

ಮೊಸರು ಕುಡಿಕೆ ಸ್ಪರ್ಧೆಯಲ್ಲಿ ಉಬರಡ್ಕದ ಹಿಂಜಾವೇ ಪ್ರಥಮ – ಬಹುಮಾನದ ಮೊತ್ತವನ್ನು ಕ್ಯಾನ್ಸರ್ ಪೀಡಿತ ಬಾಲಕಿಯ ಚಿಕಿತ್ಸೆಗೆ ನೀಡಿದ ತಂಡ

ಸುಳ್ಯದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿಯ ವತಿಯಿಂದ ನಡೆದ 9ನೇ ವರ್ಷದ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಹಿಂದು ಜಾಗರಣ ವೇದಿಕೆ, ಉಬರಡ್ಕ ತಂಡವು ಪ್ರಥಮ ಸ್ಥಾನ ಪಡೆದಿದ್ದು ಬಹುಮಾನದ ಮೊತ್ತವನ್ನು ನೆರವು ನೀಡುವ ಮೂಲಕ ಸಮಾಜಮುಖಿ ಕಾರ್ಯ ಮಾಡಿದ್ದು ಜನರ ಮೆಚ್ಚಗೆಗೆ ಪಾತ್ರವಾಗಿದೆ. ಗುತ್ತಿಗಾರಿನ ವಿಶ್ವನಾಥ್ ಹೇಮಾವತಿ ದಂಪತಿಗಳ...

ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಚೆಕ್ ವಿತರಿಸಿದ ಸಚಿವ ಅಂಗಾರ

ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಸಂಪೂರ್ಣವಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಪ್ರಾಕೃತಿಕ ವಿಕೋಪ ಯೋಜನೆಯಡಿ ಹೊಸ ಮನೆ ನಿರ್ಮಾಣ ಮಾಡಲು ಸರಕಾರದಿಂದ ಒದಗಿಸಲಾಗುವ ರೂ.5 ಲಕ್ಷ ಮೊತ್ತದ ಪರಿಹಾರ ಧನದ ಮೊದಲ ಹಂತದ ರೂ.95,100 ಮೊತ್ತದ ಚೆಕ್ ನ್ನು 7 ಜನ ಫಲಾನುಭವಿಗಳಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು...

“ಮರದ ಕಾಲುಸಂಕ ಮುಕ್ತ ಅಭಿಯಾನ‌” ಆರಂಭಿಸಿದ ಯುವ ತೇಜಸ್ಸು ಬಳಗ – ಬೇಕಿದೆ ಸಾರ್ವಜನಿಕರ ಸಹಕಾರ

ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎಂಬುದು ನಾಣ್ಣುಡಿ. ಸಮಾಜದಲ್ಲಿನ ಸತ್ತು‌ಹೋದ ಕೆಲ ಮನಸ್ಸುಗಳ ನಡುವೆ ಜೀವಂತ ಶವಗಳಾಗುವ ಬದಲು ನಮ್ಮಿಂದ ಸಮಾಜಕ್ಕೇನಾದರೂ ಸಹಾಯ ಮಾಡಬಹುದು ಎಂಬ ಸಮಾನ ಮನಸ್ಕರ ಗುಂಪೊಂದು ಯೋಚಿಸಿದ ಫಲವಾಗಿ ಹುಟ್ಟಿಕೊಂಡ ಸಂಸ್ಥೆಯೇ ಯುವ ತೇಜಸ್ಸು ಟ್ರಸ್ಟ್. ಸಾಮಾಜಿಕ ಜಾಲತಾಣದ‌ ಬಳಕೆಯಿಂದ ಯುವ ಸಮೂಹ ಕೆಡುಕಿನತ್ತ ಸಾಗುತ್ತಿದೆ ಎಂಬ ಕಾಲಘಟ್ಟದಲ್ಲಿ ಸಮಾಜದಲ್ಲಿನ ಅಶಕ್ತರ ಪಾಲಿಗೆ...

ದ.ಕ.ಸಂಪಾಜೆ ಸಹಕಾರಿ ಸಂಘದ ಮಹಾಸಭೆ : ಶೇ.13 ಡಿವಿಡೆಂಡ್ ಘೋಷಣೆ

ಸುಳ್ಯ ತಾಲೂಕಿನ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಅಗೋಸ್ಟ್ 22ರಂದು ಸಂಘದ ಸಮನ್ವಯ ಸಭಾಂಗಣದಲ್ಲಿ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಅವರ ಅಧ್ಯಕ್ಷತೆಯಲ್ಲಿ ಜರಗಿತು.ಸಂಘವು ವರದಿ ವರ್ಷದಲ್ಲಿ 93.66 ಕೋಟಿ ವ್ಯವಹಾರ ಮಾಡಿ ರೂ.4001879.43 ದಾಖಲೆಯ ನಿವ್ವಳ ಲಾಭಗಳಿಸಿರುತ್ತದೆ. 97.38% ರಷ್ಟು ಸಾಲ ವಸೂಲಾತಿ ಮಾಡಿದ್ದು, ಆಡಿಟ್ ವರ್ಗದಲ್ಲಿ...

ಭೂಕುಸಿತ ಆತಂಕ – ಮಡಿಕೇರಿ ಸಂಪಾಜೆ ರಸ್ತೆಯಲ್ಲಿ ರಾತ್ರಿ ಸಂಚಾರ ಸ್ಥಗಿತ

ಮಡಿಕೇರಿ ಸಂಪಾಜೆ ಹೆದ್ದಾರಿಯ ಮದೆನಾಡು ಬಳಿ ಗುಡ್ಡ ಬಿರುಕು ಬಿಟ್ಟಿದ್ದು ಭೂಕುಸಿತದ ಭೀತಿ ಉಂಟಾಗಿದೆ.‌ ಯಾವುದೇ ಕ್ಷಣದಲ್ಲಿ ಮಣ್ಣು ಜರಿದು ಹೆದ್ದಾರಿಗೆ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಪಾಜೆ - ಮಡಿಕೇರಿ ನಡುವೆ ಆ.10 ಮತ್ತು 11 ರಂದು ರಾತ್ರಿ 8.30 ರಿಂದ ಬೆಳಗ್ಗೆ 6.30 ಗಂಟೆಯವರೆಗೆ:ಎಲ್ಲಾ ರೀತಿಯ ವಾಹನ ಸಂಚಾರ ಬಂದ್ ಮಾಡಲಾಗುವುದು ಕೊಡಗು ಜಿಲ್ಲಾಧಿಕಾರಿ...

ಪ್ರವೀಣ್ ಹತ್ಯೆ ಪ್ರಕರಣ – ಮತ್ತಿಬ್ಬರ ಬಂಧನ

ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಬಂಧಿತರ ಸಂಖ್ಯೆ ಆರಕ್ಕೇರಿದೆ.ಸುಳ್ಯದ ನಾವೂರು ಬಳಿಯ ನಿವಾಸಿ ಆಬಿದ್ (22) ಹಾಗೂ ಬೆಳ್ಳಾರೆ ಗೌರಿ ಹೊಳೆ ನಿವಾಸಿ ನೌಫಲ್ (28) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ‌

ಉಬರಡ್ಕ ಸೊಸೈಟಿಗೆ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಉತ್ತಮ ಸಹಕಾರಿ ಸಂಘ ಪ್ರಶಸ್ತಿ

ಉಬರಡ್ಕಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಡಿಸಿಸಿ ಬ್ಯಾಂಕ್ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ ಲಭಿಸಿದ್ದು, ಆಗಸ್ಟ್ 5 ರಂದು ಮಂಗಳೂರಿನಲ್ಲಿ ನಡೆದ ಡಿಸಿಸಿ ಬ್ಯಾಂಕ್ ಮಹಾಸಭೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾಕ್ಟರ್ ಎಂ ಎನ್ ರಾಜೇಂದ್ರ ಕುಮಾರ್ ಪ್ರಶಸ್ತಿ ಪ್ರಧಾನ ಗೈದರು. ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ...

ಕೊಲ್ಲಮೊಗ್ರ : ಮತ್ತೆ ಉಕ್ಕಿ ಹರಿಯುತ್ತಿರುವ ನೀರು- ಸೇತುವೆ ಮುಳುಗಡೆ

ಕಲ್ಮಕಾರು ಕೊಲ್ಲಮೊಗ್ರ ಭಾಗದಲ್ಲಿ ಮಧ್ಯಾಹ್ನ ದಿಂದಲೇ ವ್ಯಾಪಕ ಮಳೆಯಾಗುತ್ತಿದ್ದು ಮತ್ತೆ ಪ್ರವಾಹ ಪರಿಸ್ಥಿತಿ ಬಂದಿದೆ. ಕೊಲ್ಲಮೊಗ್ರ ಸೇತುವೆ ಮೇಲೆ ನೀರು ಹರಿಯುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕಲ್ಲುಗುಂಡಿ : ರಾತ್ರಿ ಮತ್ತೆ ಉಕ್ಕಿ ಹರಿದ ಪಯಸ್ವಿನಿ – ರಾಜ್ಯ ಹೆದ್ದಾರಿ ಮತ್ತೆ ಮುಳುಗಡೆ ಮನೆ ಅಂಗಡಿಗಳಿಗೆ ಹಾನಿ

ರಾತ್ರಿಯಿಡಿ ಸುರಿದ ಮಳೆ ಆರ್ಭಟಕ್ಕೆ ಕೊಯನಾಡು,ಕಲ್ಲುಗುಂಡಿ, ಗೂನಡ್ಕನ ಜನತೆ ಮತ್ತೊಮ್ಮೆ ಸಂಕಟ ಪಡುವಂತಾಗಿದೆ. ಪಯಸ್ವಿನಿ ನದಿ ಮತ್ತೆ ಉಕ್ಕಿ ಹರಿಯತೊಡಗಿದ್ದು ನಿನ್ನೆಯಷ್ಟೆ ಜಲಪ್ರಳಯಕ್ಕೆ ಒಳಗಾಗಿದ್ದ ಸಂಪಾಜೆ ಕಲ್ಲುಗುಂಡಿ ಪ್ರದೇಶದಲ್ಲಿ ಇಂದು ಪುನಹ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿರುವವರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಕಲ್ಲುಗುಂಡಿಯಲ್ಲಿ, ಗೂನಡ್ಕದಲ್ಲಿ ಮನೆಗಳು ಜಲಾವೃತವಾಗಿದ್ದು ರಾಜ್ಯ ಹೆದ್ದಾರಿ ಬಂದ್ ಆಗಿದೆ. ಅರಂಬೂರು...

ನಾವು ಬರೀ ಹೇಳುವುದಿಲ್ಲ!! ಸೂಕ್ತ ವ್ಯವಸ್ಥೆ ಖಂಡಿತಾ ಆಗುತ್ತದೆ – ಸಿಎಂ ಬೊಮ್ಮಾಯಿ

ಬೆಳ್ಳಾರೆ: ಪ್ರವೀಣ್ ನೆಟ್ಟಾರು ಅವರ ಹತ್ಯೆಯ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಂಡಿದೆ. ಈಗಾಗಲೇ ಪ್ರಾಥಮಿಕ ತನಿಖೆ ಮುಗಿದಿದ್ದು ಕೃತ್ಯಕ್ಕೆ ಸಹಕರಿಸಿದವರನ್ನು ಬಂಧಿಸಲಾಗಿದೆ. ಈ ಜಾಲ ದೇಶಾದ್ಯಂತವೂ ಹಬ್ಬಿದ್ದು ನಮ್ಮ ಸರಕಾರ ಬರೀ ಹೇಳುವುದಲ್ಲ.ಅವರನ್ನು ಮಟ್ಟ ಹಾಕಿಯೇ ತೀರುತ್ತೇವೆ ಎಂದು ಸಿ.ಎಂ ಬಸವರಾಜ ಬೊಮ್ಮಾಯಿ ಹೇಳಿದರು.ನೆಟ್ಟಾರಿನ ಪ್ರವೀಣ್ ಅವರ ಮನೆಗೆ ಸಿಎಂ ಭೇಟಿ ನೀಡಿ ಮನೆಯವರಿಗೆ...

ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಮಾಡಿದ  ಆರೋಪಿಗಳ ಪೈಕಿ ಇಬ್ಬರ ಬಂಧನ

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಸ್ಥಳೀಯ ನಿವಾಸಿಗಳು ಎಂದು ತಿಳಿದು ಬಂದಿದೆ. ಆರೋಪಿಗಳ   ಪೈಕಿ ಸವಣೂರು ನಿವಾಸಿ ಝಾಕೀರ್ ಹಾಗೂ ಬೆಳ್ಳಾರೆ ನಿವಾಸಿ ಶಫೀಕ್ ಬಂಧಿತರು ಎಂದು ತಿಳಿದು ಬಂದಿದೆ.

ಪ್ರವೀಣ್ ಹತ್ಯೆ ಪ್ರಕರಣ; ಶಂಕಿತರು ಪೊಲೀಸ್ ವಶಕ್ಕೆ

ಬೆಳ್ಳಾರೆ: ಬಿಜೆಪಿ ಯುವ ಮುಖಂಡ‌ ಪ್ರವೀಣ್ ನೆಟ್ಟಾರು ‌ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳ್ಳಾರೆಯಲ್ಲಿ ಏಳು ಜನರನ್ನು ವಶ ಪಡಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಎಲಿಮಲೆ : ಸಚಿವ ಅಂಗಾರರಿಂದ ನೆಲ್ಲೂರು ಕೆಮ್ರಾಜೆ ಸೊಸೈಟಿಯ ನೂತನ ಸಭಾಭವನ ಲೋಕಾರ್ಪಣೆ- ಸಹಕಾರ ಸಂಘಗಳ ಮುಖಾಂತರ ಸ್ವ-ಉದ್ಯೋಗಕ್ಕೆ ಸಾಲ ನೀಡಲು ಸರಕಾರ ಚಿಂತನೆ – ಸಚಿವ ಅಂಗಾರ

ಸ್ವ ಉದ್ಯೋಗ ಮಾಡಲು ಸರಕಾರ ಸ್ವ ಸಹಾಯ ಸಂಘಗಳ ಮುಖಾಂತರ ಉತ್ತಮ ಅವಕಾಶ ನೀಡುತ್ತಿದೆ. ಮೀನುಗಾರಿಕೆ ಮುಖಾಂತರ ಉತ್ತಮ ಅವಕಾಶಗಳಿದೆ ಎಂದರು. ಸಹಕಾರ ಸಂಘಗಳಲ್ಲೂ ಸ್ವ ಉದ್ಯೋಗಕ್ಕೆ ಸಾಲ ನೀಡುವಂತಾಗಲೂ ಸರಕಾರ ಕಾನೂನು ರೂಪಿಸುತ್ತಿದೆ ಎಂದರು.ಅವರು ಜು.24 ರಂದು ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸಹಕಾರಿ ಸಂಘವು ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿದ...

ದುಗ್ಗಲಡ್ಕ ಕೊಡಿಯಾಬೈಲ್ ರಸ್ತೆ ಅಭಿವೃದ್ಧಿಗೆ ರೂ.50 ಲಕ್ಷ ಮಂಜೂರು – ಸಚಿವ ಅಂಗಾರ

ವಿಪರೀತ ಮಳೆಯಿಂದಾಗಿ ತೀರಾ ಹಾನಿಗೊಳಗಾದ ದುಗ್ಗಲಡ್ಕ ನೀರಬಿದಿರೆ ಕೊಡಿಯಾಲಬೈಲು ಜಟ್ಟಿಪಳ್ಳ ರಸ್ತೆಗೆ ಸಚಿವ ಎಸ್ ಅಂಗಾರ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನ ಪಂ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಳೆಯಿಂದಾಗಿ ಹದಗೆಟ್ಟಿರುವ ರಸ್ತೆ ಪರಿಸ್ಥಿತಿ ವಿವರಿಸಿದರು. ಈಗಾಗಲೇ ಈ ರಸ್ತೆಗೆ 50ಲಕ್ಷ ಮಂಜೂರಾಗಿದ್ದು ಆಯ್ದ ಸ್ಥಳಗಳಲ್ಲಿ ಕಾಂಕ್ರೀಟಿಕರಣ ನಡೆಸುವಂತೆ ಹಾಗೂ ಈ ರಸ್ತೆಗೆ...

ಭಾರತದ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮ ಆಯ್ಕೆ – ನಡೆದು ಬಂದ ಹಾದಿ ಇಲ್ಲಿದೆ

ರಾಷ್ಟ್ರಪತಿ ಚುನಾವಣೆ ಘೋಷಣೆಯಾಗಿ ಅಭ್ಯರ್ಥಿ ಆಯ್ಕೆಯಾಗುವವರೆಗೆ ಈಕೆಯನ್ನು ಹೆಚ್ವಿನವರಿಗೆ ಗೊತ್ತಿರಲಿಲ್ಲ. ಪ್ರಚಾರದಲ್ಲಿರದ ವ್ಯಕ್ತಿಯನ್ನು ಎನ್.ಡಿ.ಎ. ಆಯ್ಕೆ ಮಾಡಿದಾಗ ಎಲ್ಲರ ಮನದಲ್ಲಿ ಯಾರು ಈ ದ್ರೌಪದಿ ಮುರ್ಮು ಎಂದು ಹುಬ್ಬೇರಿಸುವಂತೆ ಮಾಡಿತ್ತು. ಈಗ ರಾಷ್ಟ್ರಪತಿ ಚುನಾವಣೆಯಲ್ಲಿ ಶೇ. 64 ಮತ ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಇವರು ಬಡತನದಿಂದ ಮೇಲೆದ್ದು ಬಂದವರು, ಬುಡಕಟ್ಟು ಜನಾಂಗದ ಸಾಮಾನ್ಯ ಕುಟುಂಬದ...

ಬೆಳ್ಳಾರೆ : ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವು – 8 ಮಂದಿ ಬಂಧನ

ಕ್ಷುಲ್ಲಕ ಕಾರಣಗಳಿಂದ ತಾಲೂಕಿನ ಕಳಂಜ ಗ್ರಾಮದಲ್ಲಿ ಹಲ್ಲೆಗೊಳಗಾಗಿದ್ದ ಮುಹಮ್ಮದ್ ಮಸೂದ್ ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಪರಿಚಯದ ಇಬ್ಬರು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದ ಬಳಿಕ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವುದಾಗಿ ಕರೆಸಿಕೊಂಡ ತಂಡ, ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ....

ಬೆಳ್ಳಾರೆ : ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವು – 8 ಮಂದಿ ಬಂಧನ

ಕ್ಷುಲ್ಲಕ ಕಾರಣಗಳಿಂದ ತಾಲೂಕಿನ ಕಳಂಜ ಗ್ರಾಮದಲ್ಲಿ ಹಲ್ಲೆಗೊಳಗಾಗಿದ್ದ ಮುಹಮ್ಮದ್ ಮಸೂದ್ ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಪರಿಚಯದ ಇಬ್ಬರು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದ ಬಳಿಕ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವುದಾಗಿ ಕರೆಸಿಕೊಂಡ ತಂಡ, ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ....

ರಂಗನಿರ್ದೇಶಕ ಜೀವನ್ ರಾಂ ಅವರಿಗೆ ಜಂಗಮಶೆಟ್ಟಿ ರಂಗಪ್ರಶಸ್ತಿ ಪ್ರದಾನ

ರಂಗ ಸಂಗಮ ಕಲಾವೇದಿಕೆ, ಕಲಬುರಗಿ ಸಂಸ್ಥೆಯು ಕೊಡಮಾಡುವ 9 ನೇ ವರ್ಷದ ರಾಜ್ಯಮಟ್ಟದ ಎಸ್.ಬಿ.ಜಂಗಮ ಶೆಟ್ಟಿ ರಂಗಪ್ರಶಸ್ತಿಯನ್ನು ಹಿರಿಯ ರಂಗಕರ್ಮಿ ಜೀವನ್ ರಾಂ ಸುಳ್ಯರಿಗೆಕಲಬುರಗಿಯ ವಿಶ್ವೇಶ್ವರ ಸಭಾಭವನದಲ್ಲಿ ಪ್ರದಾನ ಮಾಡಲಾಯಿತು.ಇದೇ ಮೊದಲಬಾರಿಗೆ ಕೊಡುವ  ಶ್ರೀಮತಿ ಸುಭದ್ರಾದೇವಿ ಜಂಗಮಶೆಟ್ಟಿ ರಂಗಪ್ರಶಸ್ತಿಯನ್ನು ಹಿರಿಯ ರಂಗಕಾಲವಿದೆ ಶ್ರೀಮತಿ ಶೈಲಜಾ ದುಧನೀರರಿಗೆ ನೀಡಲಾಯಿತು.ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತರಾದ ತುಮಕೂರಿನ ಡಾ.ಲಕ್ಮಣದಾಸ...

ಬಾಲಕನ ಚಿಕಿತ್ಸೆಗೆ ನೆರವಾಗುವಿರಾ

ಸುಳ್ಯ ಕಾಂತಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಗಣೇಶ ಮತ್ತು ಜ್ಯೋತಿ ದಂಪತಿಗಳ ಎರಡನೇ ಪುತ್ರನಾಗಿರುವ ತಶ್ವಿತ್ ಎಂಬ ೧೧ ವರ್ಷದ ಬಾಲಕ ಎಲ್ಲಾ ಮಕ್ಕಳಂತೆ ಒಡಾಡಿಕೊಂಡು ಆರೋಗ್ಯವಾಗಿದ್ದ ಹುಡುಗ. ಸುಳ್ಯದ ರೋಟರಿ ಪ್ರಾಥಮಿಕ ಶಾಲೆಯಲ್ಲಿ 6 ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಹುಷಾರಾಗಿದ್ದ ಬಾಲಕ ಕಳೆದ 2 ತಿಂಗಳ ಹಿಂದೆ ಹಠಾತ್ ಆಗಿ ಆರೋಗ್ಯ ಕಳೆದು...

ಮರ್ಕಂಜ : ಕೃಷಿ ಸಂಬಂಧಿತ ಸಾಲ ಮರುಪಾವತಿಗೆ ವಿನಾಯಿತಿ ನೀಡಲು ಪಂಚಾಯತ್ ನಿರ್ಣಯ – ಜಿಲ್ಲಾಧಿಕಾರಿಗಳಿಗೆ ಮನವಿ

ಮರ್ಕಂಜ ಗ್ರಾಮ ಪಂಚಾಯತ್ ನಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕೃಷಿ ಸಂಬಂಧಿಸಿದ ಸಾಲಗಳ ಕಂತು ಮರುಪಾವತಿಗೆ ಈ ಆರ್ಥಿಕ ವರ್ಷ ವಿನಾಯಿತಿ ನೀಡಬೇಕೆಂದು ನಿರ್ಣಯಿಸಲಾಗಿದೆ. ಈ ಬಗ್ಗೆ ಆದೇಶ ಮಾಡಲು ಜಿಲ್ಲಾಧಿಕಾರಿಗಳಿಗೆ ಕಳುಹಿಸುವುದೆಂದೂ ತೀರ್ಮಾನಿಸಲಾಯಿತು. ‌ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಪವಿತ್ರ ಬಿ. ವಹಿಸಿದ್ದರು.ಸಾಮಾನ್ಯ ಸಭೆಯಲ್ಲಿ ಗ್ರಾ.ಪಂ. ಸದಸ್ಯ ಚಿತ್ತರಂಜನ್ ಕೋಡಿ ವಿಷಯ ಪ್ರಸ್ತಾಪಿಸಿದರು. ನಿರಂತರವಾಗಿ...

ಅರಮನೆಗಯ ನಿವಾಸಿಗಳ ಮತದಾನ ಬಹಿಷ್ಕಾರದ ಕೂಗು – ಇನ್ನಾದರೂ ತೂಗು ಉಯ್ಯಾಲೆಯ ಸರ್ಕಸ್ ಗೆ ಮುಕ್ತಿ ಸಿಗಬಹುದೇ?

ಆರಂತೋಡು ಹಾಗೂ ಮರ್ಕಂಜ ಗ್ರಾಮದ ಗಡಿಭಾಗದಲ್ಲಿರುವ ಅರಮನೆಗಯ ಎಂಬಲ್ಲಿರುವ ತೂಗು ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದ್ದು ಈ ಭಾಗಕ್ಕೆ ನಿರ್ಮಿಸಬೇಕೆಂಬ ಬೇಡಿಕೆಗೆ ಮೂವತ್ತು ವರ್ಷ ಕಳೆದಿದೆ. ಅರಂತೋಡು -ಪಿಂಡಿಮನೆ – ಮಿತ್ತಡ್ಕ -ಮರ್ಕಂಜ ರಸ್ತೆಯಲ್ಲಿ ಬಲ್ನಾಡು ಹೊಳೆಗೆ ಸೇತುವೆ ಅಥವಾ ಶಾಶ್ವತ ತೂಗು ಸೇತುವೆ ತುರ್ತಾಗಿ ನಿರ್ಮಿಸಬೇಕೆಂದು ಒತ್ತಾಯಿಸಿ ಬೇಡಿಕೆ ಈಡೇರುವವರೆಗೆ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿ...

ಮಡಿಕೇರಿ –ಮಂಗಳೂರು ರಸ್ತೆ ಸಂಚಾರಕ್ಕೆ ತಡೆ – ಸಂಪಾಜೆ ಗೇಟ್ ನಲ್ಲಿ ಟ್ರಾಫಿಕ್ ಜಾಮ್

ಮಡಿಕೇರಿ-ಮಂಗಳೂರು ಮುಖ್ಯ ರಸ್ತೆ ಮಡಿಕೇರಿ ಡಿಸಿ ಕಛೇರಿ ಬಳಿ ತಡೆಗೋಡೆ ಕುಸಿತದ ಭೀತಿಯಿಂದ ಪರ್ಯಾಯವಾಗಿ ತಾಳತ್ತನಮನೆ ರಸ್ತೆ ಬಳಸಲು ಸೂಚನೆ ನೀಡಲಾಗಿತ್ತು. ಇದೀಗ ಆ ರಸ್ತೆಯಲ್ಲಿ ಕೂಡ ಭೂಕುಸಿದ ಸಾಧ್ಯತೆ ಹಿನ್ನೆಲೆಯಲ್ಲಿ ಮಡಿಕೇರಿ ಪೊಲೀಸರು ತಾಳತ್ತಮನೆ ಸಮೀಪ ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಿದ್ದಾರೆ. ಎರಡನೇ ಮೊಣ್ಣಂಗೇರಿ ರಾಮಕೊಲ್ಲಿ ಬಳಿ ಜಲಸ್ಪೋಟ ಉಂಟಾಗಿದ್ದು ಮಣ್ಣು ಮಿಶ್ರಿತ...

ಸಿ.ಆರ್.ಪಿ. ಸಂತೋಷ್ ಅವರಿಗೆ “ಶಿಕ್ಷಣ ಸಾರಥಿ” ರಾಜ್ಯ ಪ್ರಶಸ್ತಿ

ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ರಿ.ಮೈಸೂರು ಇವರಿಂದ ಕೊಡಲ್ಪಡುವ ರಾಜ್ಯಮಟ್ಟದ ಉತ್ತಮ ಸಿ ಆರ್ ಪಿ ಗಳಿಗೆ ನೀಡುವ "ಶಿಕ್ಷಣ ಸಾರಥಿ" ಪ್ರಶಸ್ತಿಗೆ ದೇವಚಳ್ಳ‌ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ್ ಆಯ್ಕೆಯಾಗಿದ್ದಾರೆ. ಇವರು 2007 ರಲ್ಲಿ ಸ.ಕಿ.ಪ್ರಾ.ಶಾಲೆ ಅಚ್ರಪ್ಪಾಡಿಯಲ್ಲಿ ವೃತ್ತಿ ಜೀವನ ಆರಂಭಿಸಿ , ಬಳಿಕ ಸ.ಹಿ.ಪ್ರಾ.ಶಾಲೆ.ದೇವಚಳ್ಳ ಇಲ್ಲಿ ಐದು ವರ್ಷಗಳ...

ಮತದಾನ ಬಹಿಷ್ಕಾರದ ಬ್ಯಾನರ್‌ ಹರಿದವರಿಗೆ ಶಿಕ್ಷೆ ನೀಡುವಂತೆ ದೈವದ ಮುಂದೆ ಪ್ರಾರ್ಥನೆ

ಸುಳ್ಯ ತಾಲೂಕಿನ ಅರಂತೋಡು ಎಲಿಮಲೆ ರಸ್ತೆ ದುರಸ್ತಿಗೆ ಆಗ್ರಹಿಸಿ ಚುನಾವಣಾ ಬಹಿಷ್ಕಾರ ಬ್ಯಾನರ್ ಗಳನ್ನು 26 ಕಡೆ ಹಾಕಿದ್ದರು. ಸುಳ್ಯಕ್ಜೆ ಮುಖ್ಯಮಂತ್ರಿಗಳ ಆಗಮನದ ಹಿಂದಿನ ರಾತ್ರಿ ಕಿಡಿಗೇಡಿಗಳು 6 ಕಡೆಯ ಬ್ಯಾನರ್ ಅನ್ನು ಹೊಳೆಗೆ ಎಸೆದಿದ್ದರು. ಇದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಜು.15 ರ ಒಳಗೆ ಬ್ಯಾನರ್ ತೆಗೆದಿರುವವರು ಪುನಃ ಅಳವಡಿಸದಿದ್ದರೇ ಜನರೆಲ್ಲಾ ಒಂದಾಗಿ ಊರಿನ ದೈವದ...

ಜು.24ರಂದು ಸುಳ್ಯದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಆಚರಣೆ ಹಾಗೂ ತಾಲೂಕು ಮಟ್ಟದ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದ ಕುರಿತು ಜು.16ರಂದು ಪತ್ರಿಕಾ ಗೋಷ್ಠಿ ನಡೆಯಿತು.ಗೋಷ್ಠಿಯಲ್ಲಿ ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾದ ಚಂದ್ರಾ ಕೋಲ್ಚಾರ್ ಮಾತನಾಡಿ ರಾಜ್ಯ ಒಕ್ಕಲಿಗರ ಸಂಘದ ಸಹಯೋಗದೊಂದಿಗೆ, ಸುಳ್ಯದ ಗೌಡರ ಯುವಸೇವಾ ಸಂಘ, ಶ್ರೀ ವೆಂಕಟರಮಣ ಕ್ರೆಡಿಟ್...

ವ್ಯಾಪಕ ಮಳೆಗೆ ನಲುಗಿದೆ ಸುಳ್ಯದ ರಸ್ತೆಗಳು – ಸವಾರರು ಜೀವ ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಲು ಆಗ್ರಹ

ಸುಳ್ಯ ನಗರ ಸೇರಿದಂತೆ ನ.ಪಂ ವ್ಯಾಪ್ತಿಯ ಹಲವು ರಸ್ತೆಗಳು ಸಮರ್ಪಕ ಚರಂಡಿ ವ್ಯವಸ್ಥೆಗಳಿಲ್ಲದೇ ಗುಂಡಿಗಳು ಬಿದ್ದಿದ್ದು ವಾಹನ ಸವಾರರು ಹಾಗೂ ಜನಸಾಮಾನ್ಯರ ಪ್ರಾಣ ಬಲಿಗಾಗಿ ಕಾಯುವಂತಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರ ಗಮನ ಹರಿಸಿಬೇಕಿದೆ. ಚರಂಡಿ ವ್ಯವಸ್ಥೆ ಸರಿ ಇಲ್ಲದೇ ನೀರು ರಸ್ತೆಯಲ್ಲಿ ಹರಿಯುವಂತಾಗಿದೆ. ಇದರಿಂದಾಗಿಯೇ ರಸ್ತೆಗಳೆಲ್ಲಾ ಗುಂಡಿಬೀಳುವಂತಾಗಿದೆ. ನಗರ ಪಂಚಾಯತ್ ಅಲ್ಲಲ್ಲಿ ಗುಂಡಿ...

ಅಭಿವೃದ್ಧಿ ಮಾಡಲಾಗದೇ ಭ್ರಷ್ಟಾಚಾರದಲ್ಲಿ ಮುಳುಗಿರುವುದನ್ನು ಮರೆಮಾಚಲು ಪಲಾಯನ ವಾದ ಮಾಡುತ್ತಿದ್ದಾರೆ – ವೆಂಕಪ್ಪ ಗೌಡ

ಆಡಳಿತ ಪಕ್ಷದವರಿಂದ ಅಭಿವೃದ್ಧಿಯಲ್ಲಿ ಕುಂಠಿತ ಮತ್ತು ಭ್ರಷ್ಟಚಾರದಿಂದ ಹೊರಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಮ್ಮು ಮೇಲಿನ ಆರೋಪವನ್ನು ಮರೆಮಾಚಲು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ ಎಂದು ನಗರ ಪಂಚಾಯತ್ ವಿಪಕ್ಷ ನಾಯಕ ಎಂ.ವೆಂಕಪ್ಪ ಗೌಡ ಹೇಳಿದರು. ಅವರು ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅವರ ಮಾಡಿದ ಆರೋಪ ಖಂಡಿಸಿ ಮಾತನಾಡಿದರು. ನಗರ ಪಂಚಾಯಿತ್ ನ ಇತಿಹಾಸದಲ್ಲಿ...

ಉಪ್ಪುಕಳದಲ್ಲಿ ಹಾನಿಗೊಂಡ ಸೇತುವೆ ವೀಕ್ಷಿಸಿದ ಸಚಿವ ಅಂಗಾರ – ಬಹಿಷ್ಕಾರದಿಂದ ಅಭಿವೃದ್ಧಿ ಅಸಾಧ್ಯ – ಮುಂದಿನ ಮಾರ್ಚ್ ವೇಳೆಗೆ ಸೇತುವೆ ನಿರ್ಮಾಣದ ಭರವಸೆ

ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಹಾನಿಗೊಂಡ ಕಾಲು ಸೇತುವೆ, ಪದಕದ ಮುಳುಗು ಸೇತುವೆ ಹಾಗೂ ಹರಿಹರದಲ್ಲಿ ಬರೆ ಕುಸಿತದಿಂದ ಹಾನಿಗೊಂಡ ತೇಜಕುಮಾರ್ ಕಜ್ಜೋಡಿಯವರ ಮನೆ ವೀಕ್ಷಣೆ ಮಾಡಿ ಮಾತನಾಡಿದರು. ಬಹಿಷ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗುವುದಿಲ್ಲ. ಯಾರೂ ಕೂಡ ಗೊಂದಲಕ್ಕೆ ಒಳಗಾಗಬಾರದು. ಹಂತಹಂತವಾಗಿ ನಾವು ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ. ಈಗಾಗಲೇ ಇಲ್ಲಿಗೆ 3 ಸೇತುವೆ ನಿರ್ಮಾಣ ಮಾಡಲಾಗಿದೆ....

ಗ್ರಾಮಸ್ಥರು ಅಳವಡಿಸಿದ 9 ಬ್ಯಾನರ್ ನದಿಗೆ ಕಿತ್ತೆಸೆದ ಕಿಡಿಗೇಡಿಗಳು – ದೈವದ ಮೊರೆ ಹೋಗಲು ನಿರ್ಧಾರ

ಎಲಿಮಲೆ ಅರಂತೋಡು ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಹಲವು ಬಾರಿ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದರೂ ಆಡಳಿತ ಗಮನಹರಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆಯ 26 ಕಡೆಗಳಲ್ಲಿ ಹಾಕಿದ್ದ ಬ್ಯಾನರ್ ಹಾಕಿದ್ದರು. ಮುಖ್ಯಮಂತ್ರಿಗಳು ಬರುವ ಹಿಂದಿನ ರಾತ್ರಿ 9 ಕಡೆ ಹಾಕಿದ್ದ ಬ್ಯಾನರ್ ಕಳವು ಗೈಯಲ್ಪಟ್ಟಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಬ್ಯಾನರ್ ಕಳುವುಗೈದ ಕಿಡಿಗೇಡಿಗಳ ವಿರುದ್ಧ ದೈವದ ಮೊರೆ ಹೋಗುತ್ತೇವೆ...

ಗುತ್ತಿಗಾರು :- ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗೆ ಕೆ.ಪಿ.ಸಿ.ಸಿ ಸದಸ್ಯ ನಂದಕುಮಾರ್ ಅವರಿಂದ ದೇಣಿಗೆ ಹಸ್ತಾಂತರ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗೆ ಜು.12 ರಂದು ಮಡಿಕೇರಿ ನಗರ ಸಭಾ ಮಾಜಿ ಅಧ್ಯಕ್ಷರು ಹಾಗೂ ಕೆ.ಪಿ.ಸಿ.ಸಿ ಸದಸ್ಯರಾದ ನಂದಕುಮಾರ್ ಅವರು ದೇಣಿಗೆಯನ್ನು ಹಸ್ತಾಂತರ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಅಂಬುಲೆನ್ಸ್ ಸೇವೆ ಮತ್ತು ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಇತರೆ ಕಾರ್ಯಕ್ರಮಗಳು ಹಾಗೂ ಮುಂದೆ ನಡೆಯಲಿರುವ ಕಾರ್ಯಕ್ರಮಗಳ ಬಗ್ಗೆ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿ ಶುಭ...

ಸಂಪಾಜೆ : ಕಾಳಜಿ ಕೇಂದ್ರಕ್ಕೆ ಸಿ.ಎಂ. ಬೊಮ್ಮಾಯಿ ಭೇಟಿ – ಪರಿಹಾರದ ಚೆಕ್ ವಿತರಣೆ

ಕೊಡಗು, ದ.ಕ., ಉಡುಪಿ ಜಿಲ್ಲೆಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಮಡಿಕೇರಿಯಿಂದ ರಸ್ತೆ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿರುವ ವೇಳೆ ಕೊಯನಾಡು ಗಣಪತಿ ದೇವಸ್ಥಾನದ ಸಭಾಭವನದಲ್ಲಿರುವ ಕಾಳಜಿ ಕೇಂದ್ರಕ್ಕೆ ಭೇಟಿ ಮಾಡಿ ಸಂತ್ರಸ್ತರ ಅಹವಾಲು ಸ್ವೀಕರಿಸಿದರು. ನಂತರ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸಹಾಯಧನದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ವಿರಾಜಪೇಟೆ ಶಾಸಕ ಕೆ.ಜಿ. ಭೋಪಯ್ಯ, ಜಿಲ್ಲಾಧಿಕಾರಿ ಡಾ....

ಸುಳ್ಯಕ್ಕೆ ಆಗಮಿಸಿದ ಸಿಎಂ ಬಸವರಾಜ್ ಬೊಮ್ಮಾಯಿ

ಮಳೆಯಿಂದ ತತ್ತರಿಸಿರುವ ಕೊಡಗು ಹಾಗೂ ದ.ಕ. ಜಿಲ್ಲಾ ಪ್ರವಾಸ ಹಿನ್ನೆಲೆಯಲ್ಲಿ ಸುಳ್ಯಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಅಹವಾಲು ಸ್ವೀಕರಿಸಿ ತೆರಳಿದರು. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರುಗಳಾದ ಆರ್.ಅಶೋಕ್, ಎಸ್.ಅಂಗಾರ, ಸುನಿಲ್‌ಕುಮಾ‌ರ್, ಪ್ರಮುಖ ನಾಯಕರು, ಅಧಿಕಾರಿಗಳು, ಬಿಜೆಪಿಯ ಮುಖಂಡರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ನಗರ ಪಂಚಾಯತ್ ಸಭೆಯಲ್ಲಿ ಟ್ಯೂಬ್ ಲೈಟ್ ಒಡೆದದ್ದು ವೆಂಕಪ್ಪ ಗೌಡರ ಕೀಳು ಮಟ್ಟದ ಮನಸ್ಥಿತಿ – ನ.ಪಂ. ಅಧ್ಯಕ್ಷ ವಿನಯ್ ಕಂದಡ್ಕ

https://youtu.be/kbDmp8g7xvs ನಗರ ಪಂಚಾಯತ್ ಸದಸ್ಯ ವೆಂಕಪ್ಪ ಗೌಡರು ಆರೋಗ್ಯಕರ ಚರ್ಚೆಗೆ ಸಿದ್ಧರಿಲ್ಲ. ಅಭಿವೃದ್ಧಿ ಸಹಿಸುವುದಿಲ್ಲ. ಹಂದಿಗೆ ಹಾಸಿಗೆ ಹಾಕಿ ಕೊಟ್ಟರೂ ಅದು ಹಾಸಿಗೆಯಲ್ಲಿ ಮಲಗುವುದಿಲ್ಲ. ಸ್ಥಳವನ್ನು ಸ್ವಚ್ಛ ಮಾಡಿ ಕೊಟ್ಟಷ್ಟು ಹಂದಿ ಕೊಳಚೆಯಲ್ಲೇ ಹೋಗಿ ಬೀಳುತ್ತದೆ. ಅಂತ ಮನಸ್ಥಿತಿಯಿಂದ ಇವರು ಹೊರ ಬರಬೇಕು. ಈಗ ಆಡಳಿತ ಪಕ್ಷದಿಂದ ಪ್ರಮುಖ ಯೋಜನೆಗಳೆಲ್ಲಾ ತ್ವರಿತಗತಿಯಿಂದ ನಡೆಯುತ್ತಿದ್ದು ವಿರೋಧ ಪಕ್ಷದವರಿಗೆ...

ಬಾಳುಗೋಡು : ಕಾಲು ಸೇತುವೆ ಕೊಚ್ಚಿ ಹೋದ ಸ್ಥಳಕ್ಕೆ ತಹಶೀಲ್ದಾರ್ ಭೇಟಿ – ತೂಗು ಸೇತುವೆ ನಿರ್ಮಿಸುವ ಭರವಸೆ

https://youtu.be/wHGFvOoZRTo ಬಾಳುಗೋಡು ಗ್ರಾಮದ ಉಪ್ಪುಕಳ ನಿವಾಸಿಗಳ ಸಂಪರ್ಕ ಕೊಂಡಿಯಾಗಿದ್ದ ಮಾನವ ನಿರ್ಮಿತ ಎರಡು ಕಾಲು ಸೇತುವೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿ ದ್ವೀಪದಂತಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರಗೊಂಡಿತ್ತು. ಇದನ್ನು ಗಮನಿಸಿದ ತಹಶೀಲ್ದಾರ್ ಕು.ಅನಿತಾಲಕ್ಷ್ಮೀ ಭೇಟಿ ಮಾಡಿ ಜನರ ಅಹವಾಲು ಸ್ವೀಕರಿಸಿದರು. ತುರ್ತು ಕಾಲು ಸೇತುವೆ ದುರಸ್ತಿ ಹಾಗೂ ಮಳೆ ಕಡಿಮೆ ಆದ ಕೂಡಲೇ ತೂಗು...

ಕಾರು ಹೊಳೆಗೆ ಬಿದ್ದ ಪ್ರಕರಣ – ಎರಡೂ ಮೃತದೇಹ ಪತ್ತೆ

ಕಾಣಿಯೂರು ಸಮೀಪದ ಬೈತಡ್ಕ ಸೇತುವೆ ಬಳಿಯ ಹೊಳೆಯಲ್ಲಿ ಎರಡೂ ಮೃತದೇಹ ಜು.12ರಂದು ಪತ್ತೆಯಾಗಿದೆ. ಇಂದು ಬೆಳಿಗ್ಗೆ 10 ಗಂಟೆ ಬೈತಡ್ಕ ಸೇತುವೆಯಿಂದ 400 ಮೀಟರ್ ದೂರದಲ್ಲಿ ಹೊಳೆಯ ಬದಿ ಎರಡೂ ಮೃತದೇಹ ಪತ್ತೆಯಾಗಿದೆ. ಜು. 10 ರಂದು ಬೈತಡ್ಕ ಸೇತುವೆಯಿಂದ ಕಾರು ಪಲ್ಟಿಯಾಗಿ, ಇಬ್ಬರು ವಿಟ್ಲ ಮೂಲದ ಯುವಕರು ನೀರು ಪಾಲಾಗಿದ್ದರು. ಕಾರು ಜು.10ರಂದೇ ಮಧ್ಯಾಹ್ನ...

ಜು.12 : ಜಿಲ್ಲಾ ಪ್ರವಾಸದ ಅಂಗವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಇಂದು ಸುಳ್ಯಕ್ಕೆ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎರಡು ದಿನ 4 ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ. ಜು 12 ಹಾಗೂ ಜು 13 ರಂದು ಪ್ರವಾಸ ಮಾಡಲಿದ್ದಾರೆ. ಅತಿವೃಷ್ಠಿಯಿಂದಾದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಜು 12 ರಂದು ಕೊಡಗು ಜಿಲ್ಲೆ ಭೇಟಿ ನೀಡಿದ ನಂತರ ಅಪರಾಹ್ನ 3 ಗಂಟೆಗೆ ಸುಳ್ಯ ತಾಲೂಕಿಗೆ ಆಗಮಿಸಲಿದ್ದಾರೆ. ನಂತರ ಉಪ್ಪಿನಂಗಡಿ,...

ಇಂದಿನಿಂದ ಶಾಲಾ ಕಾಲೇಜು ಮತ್ತೆ ಆರಂಭ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಾರದ ರಜೆಯ ಬಳಿಕ ಇಂದು (ಜು.12) ಶಾಲೆಗಳು ಆರಂಭವಾಗಲಿದೆ. ಸೋಮವಾರ ಗಣನೀಯ ಪ್ರಮಾಣದಲ್ಲಿ ಮಳೆ ಇಳಿಮುಖವಾಗಿದ್ದು, ರೆಡ್ ಅಲರ್ಟ್ ಬದಲಾಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಇತರ ಶಿಕ್ಷಣ ಸಂಸ್ಥೆಗಳು ಮುಂಜಾಗ್ರತಾ ಕ್ರಮ ವಹಿಸಿ...

ಬರೆ ಕುಸಿದು ನಿರ್ಮಾಣ ಹಂತದಲ್ಲಿದ್ದ ಮನೆಗೆ ಸಂಪೂರ್ಣ ಹಾನಿ – ಅಪಾರ ನಷ್ಟ, ಅಧಿಕಾರಿಗಳ ಭೇಟಿ

ಹರಿಹರ ಪಲ್ಲತ್ತಡ್ಕ(ಜು.10) : ತಡ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹರಿಹರ ಪಲ್ಲತ್ತಡ್ಕ ಗ್ರಾಮದ ತೇಜಕುಮಾರ್ ಕಜ್ಜೋಡಿ ಎಂಬುವವರ ನೂತನವಾಗಿ ನಿರ್ಮಿಸಿದ ಮನೆಯ ಮೇಲೆ ಗುಡ್ಡ ಕುಸಿತವಾಗಿ ಮನೆಗೆ ಸಂಪೂರ್ಣ ಹಾನಿಯಾಗಿದ್ದು, ಅಪಾರ ನಷ್ಟ ಉಂಟಾಗಿದೆ. https://youtu.be/cJ0fJQR-WPI ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭದಲ್ಲಿ ಪಂಜ ಕಂದಾಯ ನಿರೀಕ್ಷಕರಾದ ಶಂಕರ್.ಎಮ್.ಎಲ್, ಹರಿಹರ...

ಜು.11 ರಂದು ಪ್ರಾಥಮಿಕ ಮತ್ತು ಪ್ರೌಢಶಾಲೆ ರಜೆ ಘೋಷಣೆ

ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಶಾಲಾ ಮಕ್ಕಳಿಗೆ ತೊಂದರೆಯಾಗದಂತೆದಿನಾಂಕ 11/07/2022 ರಂದು ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ (ಎಲ್ಲಾ ಖಾಸಗಿ, ಅನುದಾನಿತ ಮತ್ತು ಸರ್ಕಾರಿ) ರಜೆ ಘೋಷಿಸಲಾಗಿದೆ. ಪಿಯು ಕಾಲೇಜುಗಳು ಮತ್ತು ಪದವಿ ಕಾಲೇಜುಗಳು ಮತ್ತು ಇತರ ವೃತ್ತಿಪರ ಕಾಲೇಜುಗಳು ನಾಳೆಯಿಂದ ತೆರೆಯಲ್ಪಡುತ್ತವೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ...

ಪರಪ್ಪೆಯಲ್ಲಿ ಹೆದ್ದಾರಿಗೆ ವ್ಯಾಪಿಸಿದ ಪಯಸ್ವಿನಿ ನದಿ ನೀರು

ಕಾಸರಗೋಡು ಸುಳ್ಯ ರಾಜ್ಯ ಹೆದ್ದಾರಿಯಲ್ಲಿ ಪರಪ್ಪೆ ಬಳಿ ಉಕ್ಕಿ ಜಲ ಹರಿಯುತ್ತಿರುವ ಪಯಸ್ವಿನಿ ನದಿ ನೀರು ಹೆದ್ದಾರಿವರೆಗೆ ವ್ಯಾಪಿಸಿದೆ. ವಿಪರೀತ ಮಳೆ ಸುರಿತ್ತಿದ್ದು ನದಿಗಳಲ್ಲಿ ಮಟ್ಟ ಹೆಚ್ಚಾಗಿ ಅಪಾಯ ಮೀರಿ ಹರಿಯುತ್ತಿದೆ. ವರದಿಅನನ್ಯ ಹೆಚ್ ಸುಬ್ರಹ್ಮಣ್ಯ

ಏನೆಕಲ್ಲು : ದೇವಸ್ಥಾನದ ಆವರಣಕ್ಕೆ ನುಗ್ಗಿದ ನೀರು

ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಏನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ನೀರಿನಿಂದ ಆವೃತವಾಗಿದೆ. ದೇವಸ್ಥಾನದ ಸುತ್ತಮುತ್ತ ನೀರಿನಿಂದ ಆವರಿಸಿಕೊಂಡು ಭಕ್ತಾದಿಗಳಿಗೆ ದೇವರ ದರ್ಶನ ಪಡೆಯಲು ತೊಂದರೆಯಾಗುತ್ತಿದೆ. ಅರ್ಚಕರ ವಸತಿಗೃಹದ ಒಳಗೂ ನೀರು ತುಂಬಿಕೊಂಡಿದೆ. ಮಳೆ ಪ್ರಮಾಣಹೆಚ್ಚಿರುವುದರಿಂದ ಹಲವು ಕಡೆಗಳಲ್ಲಿ ನೀರಿನ ಪ್ರವಾಹವನ್ನು ಹೆಚ್ಚುತ್ತಿದ್ದೆ. ನದಿ ಪಾತ್ರದಲ್ಲಿರುವ ನಿವಾಸಿಗಳು ಆತಂಕದಿಂದ ಬದುಕುವಂತಾಗಿದೆ. ವರದಿ :ಅನನ್ಯ ಹೆಚ್ ಸುಬ್ರಹ್ಮಣ್ಯ

ಬಾಳುಗೋಡು : ಉಕ್ಕಿ ಹರಿದ ನೀರಿಗೆ ಕೊಚ್ಚಿಹೋದ ಏಕೈಕ ಮರದ ಪಾಲ – ಅತಂತ್ರ ಸ್ಥಿತಿಯಲ್ಲಿ ಉಪ್ಪುಕಳ‌ ನಿವಾಸಿಗಳು

https://youtu.be/FxbBJwsGv0c ಕಳೆದ ತಡರಾತ್ರಿ(ಜು.9) ಸುರಿದ ಭಾರೀ ಮಳೆಯಿಂದಾಗಿ ಉಪ್ಪುಕಳ ಸಂಪರ್ಕಕ್ಕಾಗಿ ಇದ್ದ ಏಕೈಕ ಮರದ ಪಾಲ ನೀರುಪಾಲಾಗಿದ್ದು ಇಲ್ಲಿನ ನಿವಾಸಿಗಳು ದ್ವೀಪ ವಾಸಿಗಳಾಗಿದ್ದಾರೆ. ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಸುಮಾರು 11 ಕುಟುಂಬಗಳು ವಾಸಿಸುತ್ತಿದ್ದು, ಈ ಪರಿಸರವನ್ನು ಸಂಪರ್ಕಿಸಲು ಮರದ ಪಾಲವೇ ಗತಿಯಾಗಿತ್ತು. ಈ ಗ್ರಾಮವನ್ನು ಸಂಪರ್ಕಿಸುವ ಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದು, ಗ್ರಾಮಸ್ಥರೇ...

ಕಂಪಿಸಿದ ಭೂಮಿ – ಅರಂತೋಡು ಕಂಪನದ ಕೇಂದ್ರ

ಸುಳ್ಯ ತಾಲೂಕು ಹಾಗುಇ ಕೊಡಗು ಗಡಿ ಭಾಗಗಳಲ್ಲಿ ಇಂದು ಬೆಳಿಗ್ಗೆ 6.22 ಕ್ಕೆ ಸಂಭವಿಸಿದ ಲಘು ಭೂಕಂಪದ ಕೇಂದ್ರ ಅರಂತೋಡು ಎಂದು ತಿಳಿದುಬಂದಿದೆ. ಬೆಳಿಗ್ಗೆ 6.22 ಕ್ಕೆ ಕಂಪನವಾಗಿದೆ. ಅರಂತೋಡು ಗ್ರಾಮದ 1.1 ಕಿ.ಮೀ. ಪರಿಸರದಲ್ಲಿ 10 ಕಿ.ಮೀ. ಆಳದಲ್ಲಿ ಕಂಪನ ಉಂಟಾಗಿದೆ. 1.8 ತೀವ್ರತೆ ಇತ್ತು ಎಂದು ರಿಕ್ಟರ್ ಮಾಪಕದ ಅಂಕಿ ಅಂಶಗಳ ಪ್ರಕಾರ...

ಚೆಂಬು : ಮತ್ತೊಮ್ಮೆ ಭಾರಿ ಶಬ್ಧ

ಚೆಂಬು ಗ್ರಾಮ ಕಳೆದ ರಾತ್ರಿ ಮತ್ತೊಮ್ಮೆ ಭೂಮಿಯೊಳಗಿಂದ ಶಬ್ದ ಕೇಳಿಬಂದ ಬಗ್ಗೆ ಜನ ಅಮರ ಸುದ್ದಿಗೆ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 4.39 ಕ್ಕೆ ಭಾರಿ ಶಬ್ಧವೊಂದು ಕೇಳಿ ಬಂದಿದೆ. ಚೆಂಬು ಗ್ರಾಮದ ಶಿವಪ್ರಕಾಶ್ ಎಂಬವರು ಈ ಬಗ್ಗೆ ಮಾತನಾಡಿ ರಾತ್ರಿ ಶಬ್ದ ಕೇಳಿ ಬಂದಿದೆ. ಭೂಮಿ ಕಂಪಿಸಿಲ್ಲ. ನಮಗೆ ಇದು ಮಾಮೂಲಿಯಾಗಿದೆ. ನಾವು ಈಗ ಭಯಪಡುತ್ತಿಲ್ಲ....

ಜು.13ರವರೆಗೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ನಿರೀಕ್ಷೆ

ಬೆಂಗಳೂರು ಜು.8: ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಜು.13ರವರೆಗೆ ಗುಡುಗು, ಗಾಳಿ ಸಹಿತ ಅತೀ ಭಾರಿ ಹಾಗೂ ಭಾರಿ ಮಳೆ ನಿರೀಕ್ಷೆ ಇದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಮೂರು ದಿನ 'ರೆಡ್ ಅಲರ್ಟ್' ಕೊಡಲಾಗಿದೆ. ಹವಾಮಾನದಲ್ಲಿ ಉಂಟಾಗಿರುವ ಬದಲಾವಣೆ, ವೈಪರಿತ್ಯಗಳ ಪ್ರಭಾವದಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಪ್ರದೇಶಗಳು ಅಕ್ಷರಶಃ ತತ್ತರಿಸಿವೆ. ಕಳೆದೊಂದು ವಾರದಿಂದ...

ಬಾಳುಗೋಡು : ಮರದ ಕಾಲು ಸೇತುವೆ ಕೊಚ್ಚಿ ಹೋಗಿ 11 ಮನೆಗಳ ಸಂಪರ್ಕ ಕಡಿತ – ನಿರ್ಲಕ್ಷ್ಯಕ್ಕೆ ಒಳಗಾದ ಉಪ್ಪುಕಳ

ಬಾಳುಗೋಡು ಗ್ರಾಮದ ಉಪ್ಪುಕಳ ಎಂಬಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಮರದ ಪಾಲ ನಿರ್ಮಿಸಿ ಮಳೆಗಾಲ ದೈನಂದಿನ ಚಟುವಟಿಕೆಗಳಿಗೆ ತೆರಳುತ್ತಿದ್ದರು. ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ಪಾಲ ದಾಟುವ ಸ್ಥಿತಿ ಇಂದಿನವರೆಗೂ ಮುಂದುವರಿದಿದೆ. ಸ್ವಾತಂತ್ರ್ಯ ಬಂದ ಮೇಲಾದರೂ ಸೇತುವೆ ಆಗಬಹುದೆನ್ನುವ ಹಿರಿಯರು ಕನಸು ನನಸಾಗಿಯೇ ಉಳಿದಿದೆ. ಪ್ರತಿ ವರ್ಷ ಮಳೆಗೆ ಮೊದಲು ಈ ಭಾಗದ ನಿವಾಸಿಗಳೇ ಸೇರಿ...

ರಾಜ್ಯಸಭೆ ಸದಸ್ಯರಾಗಿ ಡಾ.ವೀರೇಂದ್ರ ಹೆಗ್ಗಡೆ ನಾಮನಿರ್ದೇಶನ

ಧರ್ಮಸ್ಥಳದ ಧರ್ಮಾಧಿಕಾರಿ, ಗ್ರಾಮಾಭಿವೃದ್ಧಿ ಯೋಜನೆಯ ಹರಿಕಾರ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳಲಿದ್ದಾರೆ. ಗ್ರಾಮಾಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದು ರಾಜ್ಯದ ಹೆಮ್ಮೆಯಾಗಿದೆ. ಗ್ರಾಮೀಣಾಭಿವೃದ್ಧಿಯೆ ಸಾಧನೆಗೆ ಸಂದ ಗೌರವವಾಗಿದೆ. ಈ ಬಗ್ಗೆ ಸ್ಮರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮಸ್ಥಳ ಭೇಟಿ ಹಾಗೂ ಅವರ...

ಜು.7 ರಂದು ರೆಡ್ ಅಲರ್ಟ್ ಘೋಷಣೆ – ಶಾಲಾ ಕಾಲೇಜುಗಳಿಗೆ ನಾಳೆಯೂ ರಜೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಕಳೆದ 24 ತಾಸುಗಳಲ್ಲಿ ಅತೀ ಹೆಚ್ಚಿನ ಮಳೆ ದಾಖಲಾಗಿರುತ್ತದೆ. ಇದೇ ಹವಾಮಾನ ಪರಿಸ್ಥಿತಿಯ ಮುಂದುವರಿಯುವ ಸೂಚನೆಯಿದ್ದು ಜಿಲ್ಲೆಯಾದ್ಯಂತ ದಿನಾಂಕ: 7.07.2022 ರಂದು ರೆಡ್ ಅಲರ್ಟ್ ಘೋಷಣೆಯಾಗಿರುವುದರಿಂದ, ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ & ಪ್ರೌಢ ಶಾಲೆ, ಪದವಿ ಪೂರ್ವ, ಪದವಿ,...

ಅರಣ್ಯ ಇಲಾಖೆಯಿಂದ 110ಕೆ.ವಿ. ವಿದ್ಯುತ್ ಲೈನ್ ಎಳೆಯಲು ಅನುಮತಿ – ಶೀಘ್ರ ಕಾಮಗಾರಿ ಆರಂಭ : ಸಚಿವ ಅಂಗಾರ

ಸುಳ್ಯಕ್ಕೆ 110 ಕೆವಿವಿದ್ಯುತ್ ಲೈನ್ ಹಾದು ಹೋಗಲು ಅರಣ್ಯ ಇಲಾಖೆಯ ತೊಡಕು ನಿವಾರಣೆಯಾಗಿದ್ದು ಕೇಂದ್ರ ಪರಿಸರ‌ ಇಲಾಖೆ ಅನುಮತಿ ನೀಡಿದೆ. 110 ಕೆ.ವಿ. ಲೈನ್ ಹಾಗೂ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗೆ ಶೀಘ್ರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯದಲ್ಲಿ...

ಕಲ್ಮಕಾರು :- ಗುಳಿಕ್ಕಾನಕ್ಕೆ ಭೂ ವಿಜ್ಞಾನಿಗಳು ಮತ್ತು ಗಣಿ ಇಲಾಖೆಯ ಅಧಿಕಾರಿಗಳ ಭೇಟಿ : ಸ್ಥಳ ಪರಿಶೀಲನೆ, ಮಾಹಿತಿ ಸಂಗ್ರಹ

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಕಾರಿನ ಗುಳಿಕ್ಕಾನದ ಗುಡ್ಡದಲ್ಲಿ 2018 ರಲ್ಲಿ ಭೂಮಿ ಆಳವಾಗಿ ಬಿರುಕು ಬಿಟ್ಟಿತು. ಆ ಸಂದರ್ಭದಲ್ಲಿ ಗುಳಿಕ್ಕಾನದ ಗುಡ್ಡದ ಭಾಗದಲ್ಲಿ 10 ಕುಟುಂಬಗಳು ವಾಸಿಸುತ್ತಿದ್ದವು. ಅಲ್ಲಿರುವ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿ 4 ವರ್ಷಗಳಾದರೂ ಈವರೆಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಗುಳಿಕ್ಕಾನ ಪ್ರದೇಶ ಜನರ ವಾಸಕ್ಕೆ ಯೋಗ್ಯವಾಗಿದೆಯೇ ಎಂದು ತಿಳಿಯಲು...

ಅಡ್ಡನಪಾರೆ : ಮನೆ ಮೇಲೆ ಮರ ಬಿದ್ದು ಸಂಪೂರ್ಣ ಹಾನಿ : ಮಹಿಳೆಯ ತಲೆಗೆ ಗಾಯ

ನಿರಂತರ ಮಳೆಯಿಂದ ಮನೆ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡ ಹಾಗೂ ಮನೆಯೊಳಗಿದ್ದ ಮಹಿಳೆಯ ತಲೆಗೆ ಗಂಭೀರ ಗಾಯಗಳಾದ ಘಟನೆ ಇಂದು ನಡೆದಿದೆ. ದೇವಚಳ್ಳ ಗ್ರಾಮದ ಅಡ್ಡನಪಾರೆ ನಿವಾಸಿ ದೈವ ನರ್ತಕ ಚಿದಾನಂದ ಅವರ ಮನೆಗೆ ಮನೆಗೆ ಮರ ಬಿದ್ದು ಮನೆ ಸಂಪೂರ್ಣ ಕುಸಿದಿದೆ. ಮನೆಯೊಳಗಿದ್ದ ಚಿದಾನಂದ ರವರ ಪತ್ನಿ ಶೀಲಾವತಿಯ ತಲೆಗೆ ಗಂಭೀರ...

ಐವರ್ನಾಡು : ಪ್ರಿಡ್ಜ್ ನಿಂದ ಶಾಕ್ ಹೊಡೆದು 4 ವರ್ಷದ ಬಾಲಕ ಮೃತ್ಯು

ಐವರ್ನಾಡಿನಲ್ಲಿ ಸಂಭವಿಸಿದ ವಿದ್ಯುತ್ ದುರಂತವೊಂದರಲ್ಲಿ ನಾಲ್ಕು ವರ್ಷದ ಬಾಲಕ ದುರ್ಮರಣಕ್ಕೀಡಾದ ಘಟನೆ ಇಂದು ನಡೆದಿದೆ. ಐವರ್ನಾಡಿನ ಆದಂ ಎಂಬವರ ಪುತ್ರಿ, ರಿಕ್ಷಾ ಡ್ರೈವರ್ ಅಜರ್ ಅವರ ಸಹೋದರಿ ಅಪ್ಸರವರ ಮಗ ಹೈದರ್ ಅಲಿ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಪ್ರಿಡ್ಜ್ ನ ಮುಟ್ಟಿದಾಗ ಶಾಕ್ ಹೊಡೆದಿದೆ ಎನ್ನಲಾಗಿದೆ.

5 ನೇ ಬಾರಿಗೆ ಸದ್ದಿನೊಂದಿಗೆ ಕಂಪಿಸಿದ ಭೂಮಿ

ಕೊಡಗು ಹಾಗೂ ದಕ್ಷಿಣ ಕನ್ನಡ ಗಡಿ ಭಾಗಗಳಲ್ಲಿ ೫ನೇ ಬಾರಿ ಕಂಪನದ ಅನುಭವ ಉಂಟಾಗಿದೆ. ಚೆಂಬು, ಗೂನಡ್ಕ ಹಾಗೂ ಉಬರಡ್ಕದಲ್ಲಿ 10.45 ಕ್ಕೆ ಕಂಪಿಸಿದೆ ಎಂದು ತಿಳಿದು ಬಂದಿದೆ. ಜನರು ಕಂಪನಕ್ಕೆ ಹೆದರಿ ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ.

ಸುಳ್ಯ ತಾಲೂಕಿನಲ್ಲಿ 4 ನೇ ಬಾರಿಗೆ ಕಂಪಿಸಿದ ಭೂಮಿ – 1.8 ತೀವ್ರತೆ ದಾಖಲು

ಸುಳ್ಯ : ನಾಲ್ಕನೇ ಬಾರಿಗೆ ಸುಳ್ಯದ ವಿವಿಧೆಡೆ ಭೂಕಂಪದ ಅನುಭವವಾಗಿದೆ. ರಾತ್ರಿ ಗಂಟೆ ಸರಿಸುಮಾರು 1-15 ಕ್ಕೆ ಕಂಪಿಸಿದ ಅನುಭವವಾಗಿದೆ. ಸಂಪಾಜೆ, ಗೂನಡ್ಕ, ಪೆರಾಜೆ, ಅರಂಬೂರು, ಶಾಂತಿನಗರ, ಹಳೆಗೇಟು ಭಾಗದಲ್ಲಿ ಭೂಮಿ ಕಂಪಿಸಿದ್ದು ಇನ್ನು ಹಲವರಿಗೆ ದೊಡ್ಡ ಶಬ್ದದ ಅನುಭವವಾಗಿದೆ‌ ಎಂದು ತಿಳಿದುಬಂದಿದೆ. ರಿಕ್ಟರ್ ಮಾಪಕದಲ್ಲಿ 1.8 ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ. ಈ ಬಾರಿ...

ಮುಂಗಾರು ಆರ್ಭಟ: ದ.ಕ. ಜಿಲ್ಲೆಯಲ್ಲಿ ನಾಳೆ ಶಾಲೆ-ಕಾಲೇಜಿಗೆ ರಜೆ

ಮಂಗಳೂರು: ಮುಂಗಾರು ಆರ್ಭಟ ಮುಂದುವರಿದ ಹಿನ್ನಲೆಯಲ್ಲಿ ನಾಳೆ (ಜು.1) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ-ಕಾಲೇಜಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರದಿಂದ ಆರೆಂಜ್ ಅಲರ್ಟ್ ಆಗಿದ್ದು, ಈ ಮಧ್ಯೆಯೂ ಮಳೆ ಬಿರುಸಾಗಿದೆ. ಮಂಗಳೂರು ನಗರ ಸೇರಿದಂತೆ ನಾನಾ ಕಡೆ ಮಹಾಮಳೆಗೆ ಜಲಾವೃತವಾಗಿದೆ. ಈ ಹಿನ್ನಲೆಯಲ್ಲಿ...

ಕುಕ್ಕೆ ಸುಬ್ರಹ್ಮಣ್ಯಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ

ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗುರುವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ, ಶ್ರೀ ದೇವರ ದರ್ಶನ ಪಡೆದು ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಸೇವೆ ನೆರವೇರಿಸಿದರು. ಮಧ್ಯಾಹ್ನ ಕ್ಷೇತ್ರಕ್ಕೆ ಆಗಮಿಸಿದ ಅವರನ್ನು ದೇವಸ್ಥಾನದ ಹಾಗೂ ಜಿಲ್ಲಾಡಳಿತ ವತಿಯಿಂದ ಸ್ವಾಗತಿಸಲಾಯಿತು. ಬಳಿಕ ಅವರು ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಮೀನುಗಾರಿಕೆ, ಬಂದರು ಮತ್ತು...

ತಳೂರು : ಮಗುವಿನೊಂದಿಗೆ ಕೆರೆಗೆ ಹಾರಿದ ತಾಯಿ – ತಾಯಿ ಮೃತ್ಯು- ಬದುಕುಳಿದ ಮೂರು ವರ್ಷದ ಮಗು

ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ಮಗುವಿನ ಜತೆಗೆ ಕಟ್ಟಿಕೊಂಡು ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ‌. ಮೂರು ವರ್ಷದ ಹೆಣ್ಣು ಮಗು ಪೂರ್ವಿಕಾ ಅದೃಷ್ಟವಶಾತ್ ಬದುಕುಳಿದ ಘಟನೆ ವರದಿಯಾಗಿದೆ. ತಳೂರು ದಯಾನಂದ ಎಂಬವರ ಪತ್ನಿ ಗೀತಾ ಮೃತಪಟ್ಟ ಮಹಿಳೆ. ಇವರು ಎನ್.ಎಮ್.ಸಿ. ನಲ್ಲಿ ಕಛೇರಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮಗು ಕೆರೆಯೊಳಗೆ ಕಲ್ಲಿನ‍...

ಚೆಂಬು : ದಿನದಲ್ಲಿ ಎರಡನೇ ಬಾರಿಗೆ ಕಂಪಿಸಿದ ಭೂಮಿ

ಚೆಂಬು ತೊಡಿಕಾನ ಕಲ್ಲುಗುಂಡಿ ಭಾಗದಲ್ಲಿ ಭೂಮಿ ದಿನದಲ್ಲಿ ಎರಡನೇ ಬಾರಿಗೆ ಕಂಪಿಸಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಸಂಜೆ 4.53 ಕ್ಕೆ ಭೂಮಿ ಕಂಪಿಸಿದೆ ಎಂದು ತಿಳಿದುಬಂದಿದೆ.

ಹೆಚ್ಚಿದ ಭೂಕಂಪದ ತೀವ್ರತೆ -ರಿಕ್ಟರ್ ಮಾಪಕದಲ್ಲಿ 3.0 ದಾಖಲು: ಚೆಂಬು ಕಂಪನದ ಕೇಂದ್ರ

ಸುಳ್ಯ ಹಾಗೂ ಕೊಡಗು ಭಾಗದಲ್ಲಿ ಸಂಭವಿಸಿದ ಲಘು ಭೂಕಂಪನದ ಕುರಿತಂತೆ ಕರ್ನಾಟಕ ರಾಜ್ಯ ನ್ಯಾಚುರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ ಅಧಿಕೃತ ಬುಲೆಟಿನ್ ಬಿಡುಗಡೆಗೊಳಿಸಿದ್ದು, ಇದರ ಪ್ರಕಾರ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಸಮೀಪ ಭೂ ಕಂಪನ ಉಂಟಾಗಿದ್ದು ರಿಕ್ಟರ್ ಸ್ಕೇಲ್‌ನಲ್ಲಿ 3.0 ದಾಖಲಾಗಿದೆ.ಇದರ ಪ್ರಭಾವದಿಂದ ಸುಳ್ಯ ತಾಲೂಕಿನ ಹಲವೆಡೆ ಭೂಮಿಕಂಪಿಸಿರುವುದಾಗಿ ಹೇಳಲಾಗಿದೆ. ಜೂ.28...

ಸುಳ್ಯ : ಮತ್ತೆ ಕಂಪಿಸಿದ ಭೂಮಿ

ಕಳೆದಎರಡು ದಿನಗಳ ಹಿಂದಷ್ಟೇ ಭೂಕಂಪನವಾಗಿದ್ದ ದ.ಕ ಜಿಲ್ಲೆಯ ಸುಳ್ಯ ತಾಲೂಕು ಹಾಗೂ ಕೊಡಗಿನ ಗಡಿಭಾಗದಲ್ಲಿ ಮತ್ತೆ ಭೂಮಿ ಕಂಪಿಸಿದೆ. ಮುಂಜಾನೆ 7.46 ರ ಸುಮಾರಿಗೆ ಕಂಪನವಾಗಿದ್ದು ಜನ ಭಯಬೀತರಾಗಿ ಮನೆಗಳಿಂದ ಹೊರಗೋಡಿದ್ದಾರೆ. ಪೆರಾಜೆ, ಸುಳ್ಯ , ಉಬರಡ್ಕ, ಮಡಪ್ಪಾಡಿ, ಕೊಲ್ಲಮೊಗ್ರು, ಕಲ್ಮಕಾರು, ದೇವಚಳ್ಳ, ಜಾಲ್ಸೂರು, ಆಲೆಟ್ಟಿ, ಐವರ್ನಾಡು, ಅಮರಮುಡ್ನೂರು, ಸಂಪಾಜೆ ಸೇರಿದಂತೆ ಬಹುತೇಕ ಕಡೆ ಭೂಮಿ...

ಶೌಚಾಲಯ ಕಟ್ಟಡ ಸ್ಥಳ ಬದಲಾಯಿಸಿ ನಿರ್ಮಿಸಿದ್ದಾರೆಂದು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ – ಮೇಲಾಧಿಕಾರಿಗಳ ಉತ್ತರ ಬರುವವರೆಗೆ ಕಾಯಲು ನಿರ್ಧರಿಸಿ ಪ್ರತಿಭಟನೆ ಹಿಂತೆಗೆತ

ಸುಳ್ಯ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಸುಳ್ಯ ಕೊಡಿಯಾಲ ಬೈಲು ದಲಿತರ ಕಾಲೋನಿಗೆ ಬಂದ ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡವನ್ನು ಕೊಡಿಯಾಲಬೈಲು ಹಿಂದೂ ರುದ್ರಭೂಮಿ ಒಳಗಡೆ ಮಾಡಿದ್ದಾರೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಆರೋಪ ಕೇಳಿಬಂದಿದೆ. ಇದರ ಬಗ್ಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುಂದರ ಪಾಟಾಜೆ, ಹಾಗೂ...

ವಳಲಂಬೆಯಲ್ಲಿ ಸಂಭ್ರಮದಿಂದ ನಡೆದ ಭಜನಾ ಮಹೋತ್ಸವ ;
ಭಜನೆಯಿಂದ ಧರ್ಮದ ಉಳಿವು- ಪ್ರವೀಣ್ ಕುಮಾರ್

ಭಜನೆಯಿಂದ ಸಂಸ್ಕಾರ ಬೆಳೆಯುವುದರ ಜೊತೆಗೆ ಧರ್ಮ ಉಳಿಯುತ್ತದೆ, ಭಜಕರ ಒಗ್ಗೂಡುವಿಕೆಯಿಂದ ಮನೆ,ಮನದಲ್ಲಿ ಧರ್ಮದ ಜಾಗೃತಿ ಮೂಡುತ್ತದೆ ಎಂದು ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ದ.ಕ ಜಿಲ್ಲೆ-2ರ ಪ್ರವೀಣ್ ಕುಮಾರ್ ಹೇಳಿದರು. ಅವರು ಸುಳ್ಯ ತಾಲೂಕು ಭಜನಾ ಪರಿಷತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಭಜನೋತ್ಸವ ಸಮಿತಿ ವಳಲಂಬೆ ಹಾಗೂ ತಾಲೂಕಿನ ಭಜನಾ ಮಂಡಳಿಗಳ...

ಸುಳ್ಯ : ಕಂಪಿಸಿದ ಭೂಮಿ – ಜನರಲ್ಲಿ ಆತಂಕ

ಪೆರಾಜೆ ಹಾಗೂ ಅಡ್ತಲೆ ಭಾಗದಲ್ಲಿ ಭೂಮಿ ಕಂಪಿಸಿದ ಘಟನೆ ಇಂದು ಬೆಳಿಗ್ಗೆ 9.10 ವೇಳೆ ನಡೆದಿದೆ. ಪೆರಾಜೆ,ಅಡ್ತಲೆ ಹಲವು ಕಡೆ 45 ಸೆಕೆಂಡು ಭೂಮಿ ಕಂಪಿಸಿದ ಅನುಭವವಾಗಿರುವ ಬಗ್ಗೆ ಜನ ಮಾತಾನಾಡುತ್ತಿದ್ದಾರೆ. ಕಂಪನ ತೀವ್ರತೆ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಮಾಜಿ ಕೇಂದ್ರ ಸಚಿವ ಡಿ.ವಿ‌.ಸದಾನಂದ ಗೌಡರ ಸಂಸದರ ನಿಧಿಯಿಂದ ಮಂಡೆಕೋಲಿಗೆ 19.50 ಲಕ್ಷ ಅನುದಾನ ಬಿಡುಗಡೆ

ಸಂದದ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ‌.ಸದಾನಂದ ಗೌಡ ಇವರ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಮಂಡೆಕೋಲು ಗ್ರಾಮಕ್ಕೆ 19.50 ಲಕ್ಷ ಅನುದಾನ ಬಿಡುಗಡೆಗೊಂಡಿರುತ್ತದೆ. ಮಂಡೆಕೋಲು ಗ್ರಾಮದ ದೇವರಗುಂಡ - ಬೆಟ್ಟಕಲ್ಲು ರಸ್ತೆ ಮರು ಡಾಮರೀಕರಣಕ್ಕೆ 6.50 ಲಕ್ಷ, ಬೆಳ್ಳಿಪ್ಪಾಡಿ ದೇವರಗುಂಡ ರುದ್ರಚಾಮುಂಡಿ ದೈವಸ್ಥಾನದ ರಸ್ತೆ ಅಭಿವೃದ್ಧಿಗೆ 5 ಲಕ್ಷ, ಮುಖ್ಯರಸ್ತೆಯಿಂದ ದೇವರಗುಂಡ ಪೆಲತ್ತಡ್ಕ...

ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಬಲಿದಾನ ದಿವಸ್ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ದ ವತಿಯಿಂದ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಬಲಿದಾನ ದಿವಸ್ ಕಾರ್ಯಕ್ರಮ ನಡೆಸಲಾಯಿತು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಮಾತನಾಡಿ "ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಆ ದಿನಗಳನ್ನು ಯುವಕರು ಸ್ಮರಿಸಿಕೊಂಡು ನಡೆಯಬೇಕು" ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ...

ಪೈಚಾರ್ : ಸಿಟಿ ಕ್ಲಿನಿಕ್ ಶುಭಾರಂಭ

ಪೈಚಾರಿನ ಬಿ.ಎಂ.ಕಾಂಪ್ಲೆಕ್ಸ್ ನ ಮೆಡ್‌ಸಿಟಿ ಮೆಡಿಕಲ್ ಮೇಲ್ಬಾಗದಲ್ಲಿ ಸಿಟಿ ಕ್ಲಿನಿಕ್ ಜೂ. 23 ರಂದು ಶುಭಾರಂಭಗೊಂಡಿತು. ಎ ಓ ಎಲ್ ಇ ಪ್ರಧಾನ ಕಾರ್ಯದರ್ಶಿ ಡಾ| ಕೆ.ವಿ‌. ರೇಣುಕಾ ಪ್ರಸಾದ್ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್, ವೆಂಕಟರಮಣ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ, ಭಾರತೀಯ ವೈದ್ಯಕೀಯ ಸಂಘದ ಸುಳ್ಯ ಶಾಖೆಯ ಡಾ|...

ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸುಳ್ಯದಿಂದ ತೆರಳಲಿರುವ ಟ್ಯಾಬ್ಲೋಗಳಿಗೆ ಸಹಕಾರ ನೀಡುವಂತೆ ಸಚಿವ ಸುನಿಲ್ ಕುಮಾರ್ ಗೆ ಮನವಿ

1837ರಲ್ಲಿ ಸುಳ್ಯದಲ್ಲಿ ಸ್ವಾತಂತ್ರ್ಯದ ಹೋರಾಟದ ಕಿಚ್ಚನ್ನು ಹತ್ತಿಸಿದ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸ್ಮರಣಾರ್ಥ ಕಂಚಿನ ಪುತ್ಥಳಿಯ ಅನಾವರಣ ಸಂದರ್ಭದಲ್ಲಿ ಸುಳ್ಯ ತಾಲೂಕು ಸ್ವಾತಂತ್ರ್ಯ ಹೋರಾಟದ ಮೂಲ ಸ್ಥಳವಾಗಿದ್ದು, ಇದರ ಇತಿಹಾಸವನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಯಪಡಿಸುವುದಕ್ಕೋಸ್ಕರ ಟ್ಯಾಬ್ಲೂವನ್ನು ರಚಿಸಿ ಮೆರವಣಿಗೆಯಲ್ಲಿ ಸಾಗುವುದೆಂದು ತೀರ್ಮಾನಿಸಲಾಗಿದೆ. ಇದಕ್ಕಾಗಿ ತಮ್ಮ ಮೂಲಕ ದ.ಕ.ಜಿಲ್ಲೆಯ ಆಡಳಿತ ಹಾಗೂ ವಿವಿಧ ಇಲಾಖೆಗಳ...

ಸುಳ್ಯ : ಇಂಧನ ಸಚಿವ ಸುನಿಲ್ ಕುಮಾರ್ ರಿಂದ ಸರಕಾರಿ ಸವಲತ್ತು ವಿತರಣೆ ಹಾಗೂ ಪ್ರಗತಿ ಪರಿಶೀಲನಾ ಸಭೆ

ತಾಲೂಕು ಆಡಳಿತದ ವತಿಯಿಂದ ಸರಕಾರಿ ಸವಲತ್ತು ವಿತರಣೆ ಕಾರ್ಯಕ್ರಮ ಹಾಗೂ ಪ್ರಗತಿ ಪರಿಶೀಲನೆ ಸಭೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು . ಸವಲತ್ತು ವಿತರಣೆ ಕಾರ್ಯಕ್ರಮವನ್ನು ಇಂಧನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಉದ್ಘಾಟಿಸಿ ಸರಕಾರಿ ಸವಲತ್ತು ಮತ್ತು ಯೋಜನೆಗಳ ಬಗ್ಗೆ ಮಾತನಾಡಿ ಮಾಹಿತಿ ಕೊರತೆ ಇದ್ದರೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಮತ್ತು...

ಎನ್ನೆಂಸಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು ಹಾಗೂ ಕಾಲೇಜಿನ ಪಠ್ಯೇತರ ಚಟುವಟಿಕಾ ಘಟಕಗಳಾದ ಎನ್ ಎಸ್ ಎಸ್, ಎನ್ ಸಿ ಸಿ, ಯುವ ರೆಡ್ ಕ್ರಾಸ್, ರೋವರ್ಸ್ - ರೇಂಜರ್ಸ್ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕಾಲೇಜಿನಲ್ಲಿ ಹಮ್ನಿಕೊಳ್ಳಲಾಯಿತು. ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ.ಪ್ರಮೋದ್ ಪಿ ಎ ಮುಖ್ಯ ಅತಿಥಿಯಾಗಿ...

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಯೋಗ ದಿನಾಚರಣೆ

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ. 21ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರಾದ ಶ್ರೀ ರಾಧಾಕೃಷ್ಣ ಬೊಳ್ಳೂರು ಅವರು ವಹಿಸಿ, ಜೀವನದಲ್ಲಿ ಆರೋಗ್ಯಯುತವಾದ ಸದೃಢ ಶರೀರವನ್ನು ಇಟ್ಟುಕೊಳ್ಳಬೇಕಾದರೆ ಕನಿಷ್ಠ ಯೋಗಾಭ್ಯಾಸವನ್ನಾದರೂ ಅಳವಡಿಸಿಕೊಳ್ಳಬೇಕು ಹಾಗೂ ಅದನ್ನು ವಿದ್ಯಾರ್ಥಿ ಜೀವನದಲ್ಲೇ ರೂಢಿಸಿಕೊಳ್ಳಬೇಕು ಎಂದು ನುಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಯೋಗೇನ ಚಿತ್ತೈಸ್ಯ ಯೋಗ ಕೇಂದ್ರದ ಯೋಗಶಿಕ್ಷಕಿ...

ಸುಬ್ರಹ್ಮಣ್ಯ : ಎಸ್ ಎಸ್ ಪಿ ಯು ಕಾಲೇಜಿಗೆ 91 ಶೇ. ಫಲಿತಾಂಶ – 591 ಅಂಕ ಗಳಿಸಿ ರಾಜ್ಯಕ್ಕೆ 6ನೇ ಸ್ಥಾನ ಪಡೆದ ಸ್ವಾತಿ ಜಿ ಆರ್

(ವರದಿ : ಅನನ್ಯ ಸುಬ್ರಹ್ಮಣ್ಯ) ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತಕ್ಕೊಳಪಟ್ಟ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ೨೦೨೧-೨೨ನೇ ಸಾಲಿನ ಪಿ.ಯು.ಸಿ. ಪರೀಕ್ಷೆಗೆ ಪರೀಕ್ಷೆಗೆ ಹಾಜರಾದ ಒಟ್ಟು ೩೨೯ ವಿದ್ಯಾರ್ಥಿಗಳಲ್ಲಿ ೩೦೧ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಇವರಲ್ಲಿ ೭೧ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ೧೮೬ ಮಕ್ಕಳು ಪ್ರಥಮ ಶ್ರೇಣಿಯಲ್ಲಿ,೩೭ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ ೧೩ ವಿದ್ಯಾರ್ಥಿಗಳು...

ಜೂ.22 : ಜಯನಗರದಲ್ಲಿ ನೂತನವಾಗಿ ಅಭಿವೃದ್ಧಿಗೊಂಡ ರುದ್ರಭೂಮಿ ಹಸ್ತಾಂತರ

ಸುಳ್ಯ ರೋಟರಿ ಕ್ಲಬ್ ವತಿಯಿಂದ ಜಯನಗರದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ರುದ್ರಭೂಮಿಯ ಬಗ್ಗೆ ಕ್ಲಬ್ ಅಧ್ಯಕ್ಷ ಪ್ರಭಾಕರ ನಾಯರ್ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ರೊಟರಿ ಕ್ಲಬ್ ಸುಳ್ಯ 2021-22ರ ಅವಧಿಯ ಜಿಲ್ಲಾ ಯೋಜನೆಯಂತೆ ಸುಳ್ಯ ನಗರ ಪಂಚಾಯತ್ ಅಧೀನದಲ್ಲಿರುವ ಜಯನಗರದಲ್ಲಿ ನೂತನವಾಗಿ ಅಭಿವೃದ್ಧಿಗೊಂಡಿರುವ ಸಾರ್ವಜನಿಕ ರುದ್ರಭೂಮಿಯನ್ನು ಜೂ.22 ರಂದು ಶಾಸಕರು ಮತ್ತು ಸಚಿವರಾದ ಎಸ್....

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ನನ್ನನ್ನು ಉಚ್ಛಾಟಿಸುವ ಅಧಿಕಾರ ಇಲ್ಲ – ಜಿ.ಕೆ.ಹಮೀದ್

ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಕಾಂಗ್ರೆಸ್ ನಿಂದ ಸಂಪಾಜೆ ಗ್ರಾ.ಪಂ‌.ಅಧ್ಯಕ್ಷ ಜಿ.ಕೆ.ಹಮೀದ್ ರನ್ನು ಉಚ್ಚಾಟಿಸಲಾಗಿತ್ತು.‌ ಈ ಬಗ್ಗೆ ಅಮರ ಸುದ್ದಿಗೆ ಪ್ರತಿಕ್ರಿಯಿಸಿದ್ದು "ನನ್ನನ್ನು ಗ್ರಾಮ ಮಟ್ಟದ ಕಾಂಗ್ರೆಸ್ ನಿಂದ ಉಚ್ಛಾಟನೆ ಮಾಡಿರುವುದು ಮಾಧ್ಯಮದಿಂದ ತಿಳಿಯಿತು. ಆದರೆ ಇದುವರೆಗೆ ಯಾವುದೇ ನೋಟಿಸ್ ಸಿಕ್ಕಿಲ್ಲ. ಈಗ ತಾಲೂಕು ಕಾಂಗ್ರೆಸ್ ನಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ಅವರು...

ಸಂಪಾಜೆ : ಜಿ.ಕೆ. ಹಮೀದ್ ಕಾಂಗ್ರೆಸ್‌ನಿಂದ ಉಚ್ಚಾಟನೆ

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಜಿ.ಕೆ. ಹಮೀದ್ ರವರನ್ನು ಮುಂದಿನ 6 ವರ್ಷಗಳ ಅವಧಿಗೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್...

ಕಾಯರ್ತೋಡಿ :- ಶೌರ್ಯ ವಿಪತ್ತು ನಿರ್ವಹಣಾ ಘಟಕಕ್ಕೆ ಜೀವರಕ್ಷಣಾ ಕೌಶಲ್ಯ ತರಬೇತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು, ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ, ಉಷಾ ಫೈರ್ ಸೇಫ್ಟಿ ಪ್ರೈವೇಟ್ ಲಿಮಿಟೆಡ್ ಇವುಗಳ ಸಹಭಾಗಿತ್ವದಲ್ಲಿ ಜೂ.17 ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ಸುಳ್ಯ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಮತ್ತು ಸ್ವಯಂ ಸೇವಕರಿಗೆ ಜೀವರಕ್ಷಣಾ ಕೌಶಲ್ಯ ತರಬೇತಿ...

ಸುಬ್ರಹ್ಮಣ್ಯ : ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿದ ಆಹಾರ ಪದಾರ್ಥ ಬಿಡುಗಡೆ

ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸ್ವಸಹಾಯ ಸಂಘಗಳು ರಹದಾರಿಯಾಗಿದೆ.ಗುಣ ಮಟ್ಟದ ಆರ್ಥಿಕ ಸೃಷ್ಠಿಯ ಮೂಲಕ ಬದುಕು ಕಟ್ಟಿಕೊಳ್ಳಲು ಸ್ವ-ಉದ್ಯೋಗವು ಅಡಿಗಲ್ಲಾಗಿದೆ.ಆರ್ಥಿಕ ಚಟುವಟಿಕೆಗಳನ್ನು ಮಹಿಳೆಯರು ಹಮ್ಮಿಕೊಳ್ಳವುದರ ಮೂಲಕ ಜೀವನದಲ್ಲಿ ಸದೃಢರಾಗಲು ಸ್ವಸಹಾಯ ಸಂಘಗಳು ಬುನಾದಿಯನ್ನು ಒದಗಿಸುತ್ತದೆ.ಗ್ರಾಮ ಪಂಚಾಯತ್‌ನ ಸಂಜೀವಿನಿ ಸ್ವಸಾಯ ಸಂಘದ ೨೨ ಮಂದಿ ಸದಸ್ಯೆಯರು ಆಹಾರ ಪದಾರ್ಥಗಳನ್ನು ತಯಾರಿಸುವ ತರಬೇತಿ ಪಡೆದು ಆಹಾರ ತಯಾರಿಸಿ ಅವುಗಳನ್ನು ಮಾರಾಟ...

ಕನಸಿಗೊಂದಿಷ್ಟು ಬಣ್ಣ ಕವನ ಸಂಕಲನ ಬಿಡುಗಡೆ

ಕನಸಿಗೊಂದಿಷ್ಟು ಬಣ್ಣ ಕವನ ಸಂಕಲನ ಬಿಡುಗಡೆ ಜೂ.10 ರಂದು ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆಯಿತು. ಕವನ ಸಂಕಲನವನ್ನು ಕವಿ ನಾರಾಯಣ ನೀರಬಿದಿರೆ ಬಿಡುಗಡೆಗೊಳಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ.ಆರ್. ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಬ್ಬಾರ್ ಸಂಪಾಜೆ ಅವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಮಿತಿಯ...

ಡಾ.ಕೇನಾಜೆ ಬರೆದ “ನಾವು ಕೂಗುವ ಕೂಗು” ಆತ್ಮಕಥೆಗಳ ಗ್ರಂಥ ಬಿಡುಗಡೆ

ಸಾಹಿತಿ, ಜಾನಪದ ಸಂಶೋಧಕ ಡಾ.ಸುಂದರ ಕೇನಾಜೆಯವರು ಇತರ ಲೇಖಕರೊಂದಿಗೆ ಸೇರಿ ರಚಿಸಿದ ಮಂಟೇಸ್ವಾಮಿ ಪರಂಪರೆಯ ನೀಲಗಾರರ ಆತ್ಮಕಥೆಗಳ ಗ್ರಂಥ "ನಾವು ಕೂಗುವ ಕೂಗು" ಜೂ 15 ರಂದು ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಚಾಮರಾಜನಗರ ಇಲ್ಲಿ ಬಿಡುಗಡೆಗೊಂಡಿತು.      ಕೇಂದ್ರದ ಶ್ರೀ ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಅಧ್ಯಯನ ಪೀಠದ ಆಶ್ರಯದಲ್ಲಿ ನಡೆದ ಈ ಬಿಡುಗಡೆ ಕಾರ್ಯಕ್ರಮದಲ್ಲಿ ಸುತ್ತೂರು...

ರಾಜ್ಯಮಟ್ಟದ ಛಾಯಸಾಧಕ ಪ್ರಶಸ್ತಿಗೆ ಆಯ್ಕೆಯಾದ ಸ್ಟುಡಿಯೋ ಗೋಪಾಲ್

ಸುಳ್ಯ ವಲಯದ ಎಸ್ ಕೆ ಪಿ ಯ ಸ್ಥಾಪಕಾಧ್ಯಕ್ಷರು, ಎಸ್ ಕೆ ಪಿ ಮಾಜಿ ಜಿಲ್ಲಾಧ್ಯಕ್ಷರು, ಸುಳ್ಯದ ಹಿರಿಯ ಛಾಯಾಗ್ರಾಹಕ, ಸುಳ್ಯ ಗೋಪಾಲ್ ಸ್ಟುಡಿಯೋ ಮಾಲಕ ಗೋಪಾಲ್ ಸುಳ್ಯ ರವರಿ ಕೆ ಪಿ ಎ ರಾಜ್ಯ ಮಟ್ಟದ ಛಾಯಾ ಸಾಧಕ ರಾಜ್ಯ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಸುಳ್ಯ :- ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ರೆಡ್ ಕ್ರಾಸ್ ಸಮಿತಿ ವತಿಯಿಂದ ಸನ್ಮಾನ

ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಜೂ.14 ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಇದರ ವತಿಯಿಂದ ಸುಳ್ಯ ವರ್ತಕರ ಸಂಘದ ಸಭಾಭವನದಲ್ಲಿ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ರಕ್ತದಾನ ವಾಟ್ಸಾಪ್ ಗುಂಪಿನ ಅಡ್ಮಿನ್ ಗಳನ್ನು, ಸುಳ್ಯ ಯುವ ರೆಡ್ ಕ್ರಾಸ್ ಗಳನ್ನು, ರಕ್ತದಾನಿಗಳನ್ನು ಹಾಗೂ ಪ್ರೋತ್ಸಾಹಕರನ್ನು ಸನ್ಮಾನಿಸಲಾಯಿತು. ಕೆ.ವಿ.ಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ...

ಭೀಮರಾವ್ ವಾಷ್ಠರ್ ರಿಗೆ ಸರ್ವಜ್ಞ ಸಂಜೀವಿನಿ ರಾಜ್ಯ ಪ್ರಶಸ್ತಿ ಪ್ರದಾನ

ಸುಳ್ಯದ ಖ್ಯಾತ ಜ್ಯೋತಿಷಿ ಮತ್ತು ಸಾಹಿತಿಗಳಾದ ಎಚ್ .ಭೀಮರಾವ್ ವಾಷ್ಠರ್ ರವರಿಗೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬೇಡರ ಕಾರಲಕುಂಟಿಯ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ನಡೆದ ಸರ್ವಧರ್ಮದ ಸಮ್ಮೇಳನದಲ್ಲಿ ಇವರ ಸಾಧನೆ ಪರಿಗಣಿಸಿ 2022 ನೇ ಸಾಲಿನ ಸರ್ವಜ್ಞ ಸಂಜೀವಿನಿ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಪ್ರಶಸ್ತಿ ಪ್ರದಾನವನ್ನು ಪದ್ಮಶ್ರೀ ಪ್ರಶಸ್ತಿ ವಿಜೇತೆ ಮಾತಾ ಮಂಜಮ್ಮ...

ಬೆಳ್ಳಾರೆ : ಸಚಿವರಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟನೆ

ಸೇವಾ ಭಾರತಿ ಬೆಳ್ಳಾರೆ, ಗ್ರಾಮ ವಿಕಾಸ ಸಮಿತಿ ಬೆಳ್ಳಾರೆ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿ.ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಮಂಗಳೂರು ಮತ್ತು ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರಿಂದ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯುವ...

ಬೆಂಗಳೂರಿನ ಜ್ಞಾನ ಮಂದಾರ ಟ್ರಸ್ಟ್ ವತಿಯಿಂದ ಪ್ರತಿಭೋತ್ಸವ – ಪ್ರಶಸ್ತಿ ಪ್ರಧಾನ ಸಮಾರಂಭ – ಸಾಧಕರನ್ನು ಗುರುತಿಸಿ, ಯುವ ಪ್ರತಿಭೆಗಳನ್ನು ಬೆಳಗುತ್ತಿರುವುದು ಜ್ಞಾನ ಮಂದಾರದ ಮಹತ್ತರ ಸಾಧನೆ : ನ್ಯಾಯಾಧೀಶ ಸೋಮಶೇಖರ್ ಎ.

ಕಲೆ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. ಜ್ಞಾನ ಮಂದಿರ ಸಂಸ್ಥೆ ಕಳೆದ 25 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಪ್ರತಿಭೆಗಳನ್ನು ಪ್ರೋತ್ಸಾಹ ನೀಡುತ್ತಾ ಬಂದಿದೆ. ಸಮಾಜದಲ್ಲಿ ಧಾರ್ಮಿಕ ಗೊಂದಲಗಳು ಕಾಣಿಸುತ್ತಿರುವ ಸಮಯದಲ್ಲಿ ಎಲ್ಲ ಧರ್ಮದವರನ್ನು ಯಾವುದೇ ಬೇಧವಿಲ್ಲದೇ ಗುರುತಿಸಿ ಗೌರವಿಸುತ್ತಿರುವುದು ಅಭಿನಂದನೀಯ. ಧರ್ಮ, ಪ್ರಾಂತೀಯ ಪ್ರತ್ಯೇಕವಾದ ಬೇಡ. ನಾವೆಲ್ಲರೂ ಕನ್ನಡಿಗರು. ಎಲ್ಲರೂ ಒಂದು ಎಂಬ...

ನಿವೃತ್ತ ಯೋಧ ದೇರಣ್ಣ ಗೌಡ ಸಹಸ್ರ ಚಂದ್ರ ದರ್ಶನ ಕಾರ್ಯಕ್ರಮ – ಸಮಾಜದ ಋಣ ತೀರಿಸಲು ಸಾಧ್ಯವಿಲ್ಲ: ಕಜಂಪಾಡಿ ಸುಬ್ರಹ್ಮಣ್ಯ ಭಟ್

ನಮ್ಮ ಬದುಕು ರೂಪಿಸಲು ಈ ಸಮಾಜ ಅನೇಕ ಕೊಡುಗೆಗಳನ್ನು ನೀಡಿದೆ. ಈ ಸಮಾಜದ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆದರೂ ಕಿಂಚಿತ್ತಾದರೂ ಋಣ ತೀರಿಸಬೇಕೆಂದು ಪ್ರಯತ್ನ ನಡೆಸುವ ಅನೇಕರು ನಮ್ಮ ಮುಂದೆ ಇದ್ದಾರೆ. ಅವರು ನಮಗೆ ಆದರ್ಶ ಪ್ರಾಯರು ಎಂದು ಎಂದು ಹಿಂದೂ ಸಂಘಟನೆಯ ಮುಂದಾಳು ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು. ಅವರು ಶುಕ್ರವಾರ ಅಡ್ಕಾರು ಶ್ರೀ...

ಧರ್ಮ ಸಂಘರ್ಷ ಮುಂದುವರಿದರೆ ಜನರ ಬದುಕು ಸುಧಾರಣೆ ಅಸಾಧ್ಯ : ಅಣ್ಣಾ ವಿನಯಚಂದ್ರ

ಧರ್ಮ ಸಂಘರ್ಷ ಮುಂದುವರಿದರೆ ಈ ಜನರ ಬದುಕು ಸುಧಾರಣೆ ಅಸಾಧ್ಯ. ಈ ಬಗ್ಗೆ ಯೋಚನೆ ಆರಂಭವಾಗಬೇಕಿದೆ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ, ಗಾಂಧಿವಿಚಾರ ವೇದಿಕೆ ಗೌರವಾಧ್ಯಕ್ಷ ಅಣ್ಣಾ ವಿನಯಚಂದ್ರ ಹೇಳಿದರು. ಅವರು ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಐವತ್ತೊಕ್ಲು ಎಣ್ಮೂರು ರಹ್ಮಾನಿಯಾ ಕೇಂದ್ರ ಜುಮ್ಮಾ ಮಸ್ಜಿದ್‌ ನ ಸಫಾ ಅಡಿಟೋರಿಯಂನಲ್ಲಿ ಶನಿವಾರ...

ಅರೆಭಾಷೆ ಅಕಾಡೆಮಿಯ ದೇಯೋದ್ದೇಶ ಕಡೆಗಣಿಸಿರುವ ಅಧ್ಯಕ್ಷರನ್ನು ವಜಾ ಮಾಡುವಂತೆ ಸಾಹಿತಿ ಎ.ಕೆ.ಹಿಮಕರ ಒತ್ತಾಯ

ಅರೆಭಾಷೆ ಅಕಾಡೆಮಿ ಸ್ಥಾಪನೆಯಾದಾಗ ಯಾವ ದೇಯೋದ್ದೇಶ ಇತ್ತೋ ಅದನ್ನು ಕಡೆಗಣಿಸಿರುವ ಅಧ್ಯಕ್ಷರನ್ನು ವಜಾ ಮಾಡುವಂತೆ ಎ.ಕೆ.ಹಿಮಕರ ಒತ್ತಾಯಿಸಿದರು. ಅವರು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ಆರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಸ್ಥಾಪನೆಯಾಗಿ ದಶಮಾನೋತ್ಸವದ ಮೊದಲೇ ಆಕಾಡೆಮಿಯು ಅಧೋಗತಿಗೆ ತಲುಪಿರುವುದು ದುರಂತ. ಈ ದುಸ್ಥಿತಿಗೆ ತಲುಪಲು ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸಹಸದಸ್ಯ ಡಾ| ವಿಶ್ವನಾಥ...

ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷರಾಗಿ ಬಾಲಗೋಪಾಲ ಸೇರ್ಕಜೆ‌ ಆಯ್ಕೆ

ಸುಳ್ಯ ಸಿ ಎ ಬ್ಯಾಂಕ್ ಅಧ್ಯಕ್ಷರಾಗಿ ಎಂ.ಬಾಲಗೋಪಾಲ ಸೇರ್ಕಜೆ ಆಯ್ಕೆಯಾಗಿದ್ದಾರೆ.‌ ಸಿಎ ಬ್ಯಾಂಕ್ ಅಧ್ಯಕ್ಷರಾಗಿದ್ದ ಹರೀಶ್ ಬೂಡುಪನ್ನೆ ರಾಜಿನಾಮೆ ನೀಡಿದ ಕಾರಣ ತೆರವಾದ ಸ್ಥಾನಕ್ಕೆ ಇಂದು ಬಾಲಗೋಪಾಲ ಸೇರ್ಕಜೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರಾದ ದಾಮೋದರ ಮಂಚಿ ಸೂಚಿಸಿ, ಅಬ್ದುಲ್ಲ ಕುಂಞಿ ನೇಲ್ಯಡ್ಕ ಅನುಮೋದಿಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟ ಅಧಿಕಾರಿ ಶೋಭಾ...

ಅರಂತೋಡು – ಎಲಿಮಲೆ ರಸ್ತೆಯ ಅಭಿವೃದ್ಧಿಗೆ ಆಗ್ರಹ
ಬೇಡಿಕೆ ಈಡೇರದಿದ್ದರೇ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ ಗ್ರಾಮಸ್ಥರು

ಅರಂತೋಡು - ಎಲಿಮಲೆ ರಸ್ತೆಯ ಅಭಿವೃದ್ಧಿಗೆ ವಿಳಂಬ ಮಾಡುತ್ತಿರುವ ಆಡಳಿತವನ್ನು ಎಚ್ಚರಿಸುವ ಸಲುವಾಗಿ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿ ಪೋಸ್ಟರ್ ಅನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಾಲೂಕಿನಲ್ಲಿ ಅತೀ ಅಗತ್ಯ ಆಗಲೇಬೇಕಾದ ಕೆಲಸಗಳ ಪಟ್ಟಿಯಲ್ಲಿರುವ ಈ ಪಿಡಬ್ಲ್ಯೂಡಿ ರಸ್ತೆ ಜನಪ್ರತಿನಿಧಿಗಳ ಉದಾಸಿನದಿಂದ ಅಭಿವೃದ್ಧಿಯಾಗದೇ ಜನತೆ ಸಂಕಷ್ಟ ಪಡುವಂತಾಗಿದೆ. ಈ ರಸ್ತೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಭಕ್ತಾಧಿಗಳು ಸೇರಿದಂತೆ...

ಸುಳ್ಯ : ಗುಂಡಿನ ದಾಳಿ ಪ್ರಕರಣ ಮೂವರು ಆರೋಪಿಗಳ ಬಂಧನ – ಗೆಳೆಯನೇ ಪ್ರಮುಖ ಆರೋಪಿ

ಸುಳ್ಯದಲ್ಲಿ ಜೂ.5 ರಂದು ರಾತ್ರಿ ಸ್ಕಾರ್ಪಿಯೋ ವಾಹನದಲ್ಲಿ ಬಂದ ತಂಡವೊಂದು ಸುಳ್ಯ ಜಯನಗರದ ಮಹಮ್ಮದ್ ಶಾಹಿ ಎಂಬವರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣವನ್ನು ಭೇಧಿಸಿರುವ ಸುಳ್ಯ ಪೊಲೀಸರು ಮೂವರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಳಗಿ ಕೊಲೆ ಪ್ರಕರಣದ ಆರೋಪದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಕುಶಾಲನಗರದ ಕೆ ಜಯನ್ (38), ಮಡಿಕೇರಿಯ ವಿನೋದ್ (34) ಹೆಚ್.ಎಸ್...

ಸುಳ್ಯ : ಪ್ರಥಮ ದರ್ಜೆ ಕಾಲೇಜಿನಲ್ಲಿ ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯಿಂದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕಾರ‍್ಯಾಗಾರ

ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆ ಮತ್ತು ಸ.ಪ್ರ.ದ. ಕಾಲೇಜು ಆಂತರಿಕ ಗುಣಮಟ್ಟ ಭರವಸಾ ಕೋಶ ವತಿಯಿಂದ ““MATHS SHORT CUT TRICKS & TIPS FOR COMPETITIVE EXAMS” ” ಎಂಬ ವಿಷಯದ ಬಗ್ಗೆ ತರಬೇತಿ ಕಾರ‍್ಯಾಗಾರ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ....

ಐದು ವರ್ಷಗಳ ಸಾಧನೆ ತೃಪ್ತಿ ತಂದಿದೆ – ಎಪಿಎಂಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು

ಎಪಿಎಂಸಿ ಅಧ್ಯಕ್ಷರಾಗಿ ಐದು ವರ್ಷಗಳ ಸಾಧನೆ ತೃಪ್ತಿ ತಂದಿದೆ. ಸರಕಾರ ನಿರೀಕ್ಷೆಗಿಂತ ಹೆಚ್ಚಿನ ಸಾಧನೆ ಮಾಡಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಹೇಳಿದರು. ಎಪಿಎಂಸಿ ಅಧಿಕಾರ ಅವಧಿ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೂನ್ 8 ರಂದು ಎಪಿಎಂಸಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.ಐದು ವರ್ಷದಲ್ಲಿ ಮಾಡಿದಂತ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಸುಳ್ಯದ...

ಕೆ.ವಿ.ಜಿ. ಶಿಕ್ಷಣ ಸಂಸ್ಥೆಗಳ ಸಿಇಓ ಹಾಗೂ ಸಲಹೆಗಾರರಾಗಿ ಡಾ| ಉಜ್ವಲ್‌ ಊರುಬೈಲು

ಅಕಾಡೆಮಿ ಆಫ್ ಲಿಬರಲ್‌ ಜ್ಯುಕೇಶನ್ (ರಿ) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಯವರು, ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್‌ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್‌ ಊರುಬೈಲುರವರನ್ನು ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಸಲಹೆಗಾರರನ್ನಾಗಿ ನೇಮಕ ಮಾಡಿರುತ್ತಾರೆ. ಇವರು ಕೆ.ವಿ.ಜಿ. ಡೆಂಟಲ್‌ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ, ಕೆ.ವಿ.ಜಿ...

ರೈತ ಮುಖಂಡರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲು ತಾ.ರೈತ ಸಂಘ ಒತ್ತಾಯ

ಭಾರತೀಯ ಕಿಶಾನ್ ಯೂನಿಯನ್‌ ಮುಖಂಡ ರಾಕೇಶ್ ಟಿಕಾಯಿತ್ ಹಲ್ಲೆ ನಡೆಸಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಸುಳ್ಯದ ರೈತ ಮುಖಂಡರು ಜೂ.7ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.ತಾಲೂಕು ರೈತ ಸಂಘದ ಅಧ್ಯಕ್ಷ ಲೋಲಾಜಾಕ್ಷ ಭೂತಕಲ್ಲು ಮಾತನಾಡಿ, ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್‌ ರವರು ಮೇ. 30 ರಂದು ಮಾಧ್ಯಮದೊಂದಿಗೆ ಬೆಂಗಳೂರು ಗಾಂಧಿಭವನದಲ್ಲಿ ಸಮಾನ ಮನಸ್ಕರ...

ಆಮ್ ಆದ್ಮಿ ಪಕ್ಷಕ್ಕೆ ಅಶೋಕ್ ಎಡಮಲೆ ರಾಜೀನಾಮೆ

ಆಮ್ ಆದ್ಮಿ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರ ಸಂಚಾಲಕ ಹಾಗೂ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿರುವ ಅಶೋಕ್ ಎಡಮಲೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಹುದ್ದೆಗಳಿಗೆ ಹಾಗು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆಯನ್ನು ರಾಜ್ಯ ಸಂಚಾಲಕರಿಗೆ ಸಲ್ಲಿಸಿದ್ದಾರೆ ಆದರೆ ರಾಜಿನಾಮೆ ಅಂಗೀಕಾರ ಆಗಿಲ್ಲ ಎಂದು ತಿಳಿದುಬಂದಿದೆ. ರಾಜೀನಾಮೆ ನೀಡಿರುವುದು...

ಸುಳ್ಯ : ಗುಂಡು ಹಾರಿಸಿ ಯುವಕನ ಕೊಲೆಯತ್ನ – ಅಪರಿಚಿತ ತಂಡದಿಂದ ದಾಳಿ – ಅಪಾಯದಿಂದ ಪಾರಾದ ಯುವಕ

ಗುಂಡಿನ ಸದ್ದು ಸುಳ್ಯವನ್ನು ಮತ್ತೊಮ್ಮೆ ಬೆಚ್ಚಿ ಬೀಳಿಸಿದೆ. ಜೂ. 5 ರಂದು ರಾತ್ರಿ ಅಪರಿಚಿತ ತಂಡವೊಂದು ಯುವಕ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ದಾಳಿಗೆ ಒಳಗಾದ ಯುವಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಆತನ ಕಾರಿಗೂ ಗುಂಡೇಟು ತಗುಲಿದೆ. ಜಯನಗರ ನಿವಾಸಿ ಮಹಮ್ಮದ್ ಸಾಯಿ ಗುಂಡಿನ ದಾಳಿಗೆ ಒಳಗಾದವರು.ಸುಳ್ಯದ ಜ್ಯೋತಿ ಸರ್ಕಲ್‌ ಸಮೀಪ...

ಇಂದು ವಿಶ್ವ ಪರಿಸರ ದಿನ ;ಪ್ರಕೃತಿಯೊಂದಿಗೆ ಸಾಮರಸ್ಯಕ್ಕಾಗಿ ಇರುವುದು ಒಂದೇ ಒಂದು ಭೂಮಿ

ಜೂನ್ 5 ವಿಶ್ವ ಪರಿಸರ ದಿನ ಮನುಷ್ಯನ ಉಸಿರಾಗಿರುವ ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯು ಪ್ರತೀ ವರ್ಷ ಒಂದೊಂದು ಧ್ಯೇಯವಾಕ್ಯವನ್ನು ಇಟ್ಟುಕೊಂಡು 1974 ರಿಂದ ಪರಿಸರ ದಿನವನ್ನು ಆಚರಿಸುತ್ತಿದೆ. ಮೊದಲ ಬಾರಿಗೆ ಸಮುದ್ರ ಮಾಲಿನ್ಯ, ಮಾನವ ಜನಸಂಖ್ಯೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗುವ ಪರಿಸರ ಸಮಸ್ಯೆ, ವನ್ಯಜೀವಿ ಅಪರಾಧದ...

ಕುಕ್ಕೆ ಸುಬ್ರಮಣ್ಯದಲ್ಲಿ ಇಂದು ಜನ ಸಾಗರ : ಆಶ್ಲೇಷ ನಕ್ಷತ್ರ ಮತ್ತು ವಾರಂತ್ಯದ ಹಿನ್ನೆಲೆಯಲ್ಲಿ ಫುಲ್ ರಶ್

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಭಕ್ತಜನರ ಸಾಗರವೇ ಹರಿದುಬಂದಿದ್ದು ದೇವಸ್ಥಾನ ಫುಲ್ ರಶ್ ಉಂಟಾಗಿದೆ. ಆಶ್ಲೇಷ ನಕ್ಷತ್ರ, ಷಷ್ಠಿ ಹಾಗೂ ದೇವರ ಹೊರಗಿನ ಉತ್ಸವ ಇಂದಿಗೆ ಕೊನೆಗೊಳ್ಳಲಿದ್ದು ಜತೆಗೆ ವಾರಂತ್ಯವಾಗಿರುವುದರಿಂದ ಮಮೂಲಿಗಿಂತ ಹೆಚ್ಚಿನ ಭಕ್ತಾಧಿಗಳು ಸೇವೆ ಸಲ್ಲಿಸಲು ಆಗಮಿಸಿದ್ದಾರೆ.

ಕೊಲ್ಲಮೊಗ್ರು ಹರಿಹರ ಸೊಸೈಟಿ ಅಧ್ಯಕ್ಷರಾಗಿ ಹರ್ಷಕುಮಾರ ದೇವಜನ ಆಯ್ಕೆ

ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಮಾಜಿ ನಿರ್ದೇಶಕ, ಮಾಜಿ ಅಧ್ಯಕ್ಷ, ಹರ್ಷಕುಮಾರ ದೇವಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿನೂಪ್ ಮಲ್ಲಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಬಳಿಕ ತೆರವಾದ ಸ್ಥಾನಕ್ಕೆ ಜೂ.4ರಂದು ಅಧ್ಯಕ್ಷರ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಣಿಕಂಠ ಕೊಳಗೆ, ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ವಿನೂಪ್ ಮಲ್ಲಾರ, ನಿರ್ದೇಶಕರುಗಳಾದ...

ವಿಶ್ವ ಬೈಸಿಕಲ್ ದಿನಾಚರಣೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಆಶ್ರಯದಲ್ಲಿ ವಿಶ್ವ ಬೈಸಿಕಲ್ ದಿನಾಚರಣೆಯನ್ನು ದಿನಾಂಕ 03-06-2022ರಂದು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರುದ್ರಕುಮಾರ್ ಎಂ ಎಂ ಕಾರ್ಯಕ್ರಮದ ವಿಶೇಷತೆ ಕುರಿತು ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಲೆಫ್ಟಿನೆಂಟ್ ಸೀತಾರಾಮ ಎಂ ಡಿ ಜಾಥಾಕ್ಕೆ ಚಾಲನೆಯನ್ನು ನೀಡಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ...

ರಾಜ್ಯಮಟ್ಟದ ಜಾವೆಲಿನ್ ಎಸೆತದಲ್ಲಿ ಇಂಜಿನಿಯರ್ ಮಣಿಕಂಠನ್ ಪ್ರಥಮ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಶ್ರಯದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮೇ.30 ರಿಂದ ಜೂ.1 ರ ವರೆಗೆ ಜರುಗಿದ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದ ಜಾವೆಲಿನ್ ಎಸೆತದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರ್ ಮಣಿಕಂಠನ್ ರವರು ಪ್ರಥಮ ಸ್ಥಾನ...

ಸುಳ್ಯ ಟಿ.ಎ.ಪಿ.ಸಿ.ಎಂ.ಎಸ್. ನಿರ್ದೇಶಕಿಯಾಗಿ ಚಂಚಲಾಕ್ಷಿ ಸನತ್ ಮುಳುಗಾಡು ಆಯ್ಕೆ

ಸುಳ್ಯ ಟಿ.ಎ.ಪಿ.ಸಿ.ಎಂ.ಎಸ್. ನಿರ್ದೇಶಕರಾಗಿ ಶ್ರೀಮತಿ ಚಂಚಲಾಕ್ಷಿ ಸನತ್ ಮುಳುಗಾಡು ನೇಮಕಗೊಂಡಿದ್ದಾರೆ. ಟಿ.ಎ.ಪಿ.ಸಿ.ಎಂ.ಎಸ್ ಆಡಳಿತ ಮಂಡಳಿ ಸಭೆಯಲ್ಲಿ ಇವರನ್ನು ನೇಮಕ ಮಾಡಲಾಯಿತು. ಸಮಿತಿಯ ನಿರ್ದೇಶಕರಾಗಿದ್ದ ಮರ್ಕಂಜದ ಶ್ರೀಮತಿ ಅಮ್ಮಣಿ ಯವರು ಇತ್ತೀಚೆಗೆ ನಿಧನರಾಗಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಚಂಚಲಾಕ್ಷಿ ಯವರನ್ನು ಆಯ್ಕೆ ಮಾಡಲಾಗಿದೆ.

ಕೊಲ್ಲಮೊಗ್ರ : ಕೈಹಿಡಿದೆಳೆದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಮಹಿಳೆ – ಆರೋಪಿ ಪೋಲಿಸ್ ವಶ

ಹೋಟೆಲ್ ನಲ್ಲಿದ್ದಾಗ ತನ್ನ ಕೈ ಹಿಡಿದು ಎಳೆದಿದ್ದಾರೆಂದು ಮಹಿಳೆಯೊಬ್ಬರು ಪೋಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಿದ ಘಟನೆ ಕೊಲ್ಲಮೊಗ್ರದಿಂದ ವರದಿಯಾಗಿದೆ.ಕೈ ಹಿಡಿದೆಳೆದು ಮನೆಗೆ ಕರೆದು ಕಪಾಳಮೋಕ್ಷ ಮಾಡಿಸಿಕೊಂಡ ಆರೋಪಿ ಕೊಲ್ಲಮೊಗ್ರ ನಿವಾಸಿ ಮಹಮ್ಮದ್ ನನ್ನು ಸುಬ್ರಹ್ಮಣ್ಯ ಪೋಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಇಂಟರ್ ಗ್ರೂಪ್ ಫೈರಿಂಗ್ ಕಾಂಪಿಟೇಷನ್ ಗೆ ಪ್ರತೀಕ್ಷಾ ಡಿ.ಎಸ್.ಆಯ್ಕೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿನಿ ಪ್ರತೀಕ್ಷಾ.ಡಿ.ಎಸ್ ಇವರು ಮಡಿಕೇರಿ 19ಕೆಎಆರ್ ಬೆಟಾಲಿಯನ್ ನಿಂದ ಬೆಂಗಳೂರುನಲ್ಲಿ ನಡೆಯುವ ಇಂಟರ್ ಗ್ರೂಪ್ ಫೈರಿಂಗ್ ಕಾಂಪಿಟೇಷನ್ ನಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿರುತ್ತಾರೆ. ಇವರಿಗೆ ಕಾಲೇಜಿನ ಲೆಪ್ಟಿನೆಂಟ್ ಸೀತಾರಾಮ.ಎಂ.ಡಿ ಇವರು ತರಬೇತಿ ನೀಡಿರುತ್ತಾರೆ. ಇವರು ಎನ್.ಎಂ.ಸಿ ಪದವಿ ಕಾಲೇಜಿನ ದ್ವಿತೀಯ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ. ಗುತ್ತಿಗಾರು ಗ್ರಾಮದ ವಳಲಂಬೆ ಗೋಳಿಯಡ್ಕ...

ಪ್ರಕೃತಿಯಲ್ಲೂ ಪತ್ತನಾಜೆಯ ಪ್ರಭಾವ

ತುಳುವರ ಆಚರಣೆ ಎಂದರೆ ಅದು ವೈಜ್ಞಾನಿಕ, ಪ್ರಾಕೃತಿಕ. ಪರಿಸರವನ್ನು ಬಿಟ್ಟು ಮಾಡುವ ತುಳುವರ ಯಾವ ಆಚರಣೆಯು ಬಹುಶಃ ಇಲ್ಲ. ‘ಪತ್ತನಾಜೆಗ್ ಪತ್ತ್ ಪನಿ ಬರ್ಸ’ (ಪತ್ತನಾಜೆಯ ದಿನ ಹತ್ತು ಹನಿಯಾದರೂ ಮಳೆ) ಎಂದು ನನ್ನ ಅಜ್ಜಿ ಬಾಲ್ಯದಲ್ಲಿ ನನಗೆ ಹೇಳುತ್ತಿದ್ದರು. ಇದು ಈಗಲೂ ಕಿವಿಗೆ ಕೇಳುತ್ತದೆ ಮತ್ತು ಇದು ಸತ್ಯವೂ ಹೌದು. ಬೇಸಿಗೆಯ ತಾಪದಿಂದ ಬೇಸತ್ತ...

ಬೆಳ್ಳಾರೆ ಪಬ್ಲಿಕ್ ಸ್ಕೂಲ್ ನ ಸಾತ್ವಿಕ್ ಹೆಚ್.ಎಸ್. ರಾಜ್ಯಕ್ಕೆ ಪ್ರಥಮ- ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕ

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಸಾತ್ವಿಕ್ ಹೆಚ್.ಎಸ್. ಈ ಬಾರಿಯ ಎಸ್ .ಎಸ್.ಎಲ್.ಸಿ. ಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.

ದಯವಿಟ್ಟು ನಮ್ಮ ರಸ್ತೆ ಸರಿ ಮಾಡಿ ಕೊಡಿ : ಸುಳ್ಯ – ಕೊಡಿಯಾಲಬೈಲ್ ರಸ್ತೆಯ ಬಗ್ಗೆ ಅಳಲು ತೋಡಿಕೊಂಡ ಜನತೆ

ಸುಳ್ಯ - ಕೊಡಿಯಾಲಬೈಲ್ ರಸ್ತೆಯು ಕಂಬಳದ ಗದ್ದೆಯಂತಾಗಿದ್ದು, ಸಂಚಾರ ದುಸ್ತರವಾಗಿದೆ. ಸೇತುವೆಯ ಮೇಲೆ ಮಳೆನೀರು ನಿಂತು ಹೊಳೆಯಂತಾಗಿದೆ. ಕೆಲ ವರ್ಷಗಳಿಂದ ಈ ರಸ್ತೆ ಸಂಪೂರ್ಣ ದುರಸ್ತಿ ಕಾಣದೇ ಕಂಬಳದ ಗದ್ದೆಯಂತಾಗಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಬೋರ್ಡ್ ಹಾಕಿ "ದಯವಿಟ್ಟು ನಮ್ಮ ರಸ್ತೆ ಸರಿ ಮಾಡಿ ಕೊಡಿ" ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸರಕಾರಿ ಪ್ರಥಮ ದರ್ಜೆ...

ಸಹಾಯಕ ನಿಬಂಧಕರಾದ ತ್ರಿವೇಣಿಯವರು ವೆಂಕಟರಮಣ ಸೊಸೈಟಿಗೆ ಭೇಟಿ

ಸಹಕಾರ ಸಂಘಗಳ ಪುತ್ತೂರು ಉಪವಿಭಾಗದ ನೂತನ ಸಹಾಯಕ ನಿಬಂಧಕರಾದ ಶ್ರೀಮತಿ ತ್ರಿವೇಣಿಯವರು ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗೆ ಇಂದು ಪ್ರಥಮ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ನಿಬಂಧಕರನ್ನು ಸಂಸ್ಥೆಯ ಅಧ್ಯಕ್ಷರಾದ ಪಿ.ಸಿ ಜಯರಾಮರವರು ಗೌರವಿಸಿದರು. ಈ ಸಂದರ್ಭದಲ್ಲಿ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾದ ಕೆ.ಟಿ ವಿಶ್ವನಾಥ್, ಜನರಲ್ ಮ್ಯಾನೇಜರ್ ಚಂದ್ರಶೇಖರ.ಎಂ, ಸುಳ್ಯ ಶಾಖಾ ವ್ಯವಸ್ಥಾಪಕರಾದ...

ಸುಳ್ಯ : ಬಿಜೆಪಿ ರೈತ ಮೋರ್ಚಾದ ವತಿಯಿಂದ ಕೃಷಿ ವಿಚಾರ ಸಂಕಿರಣ

ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ಸುಳ್ಯ ಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವುಗಳ ಸಹಯೋಗದೊಂದಿಗೆ ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆದ ಕೇಂದ್ರ ಸರಕಾರದ ಬೆಳೆ ವಿಮೆ ಮತ್ತು ಕಿಸಾನ್ ಸಮ್ಮಾನ್ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ಇಂದು ನಡೆಯಿತು. ಇದರ ಉದ್ಘಾಟನೆಯನ್ನು...

ಬೇಂಗಮಲೆ : ಕ್ಷೀರ ಭಾಗ್ಯ ಯೋಜನೆಯ ಪ್ಯಾಕೆಟ್ ಎಸೆದಿರುವುದು ಪತ್ತೆ ; ಉಚಿತವಾಗಿ ನೀಡುವುದು ತಪ್ಪೇ? ಕಳಪೆಯಾಗಿದೆಯೇ? ಜನರ ಪ್ರಶ್ನೆ

ಬೇಂಗಮಲೆಯ ಪರಿಸರವನ್ನು ಸ್ವಚ್ಛವಾಗಿರಿಸಲು ಐವರ್ನಾಡು ಗ್ರಾಮ ಪಂಚಾಯತ್ ಸತತ ಪ್ರಯತ್ನ ಮಾಡುತ್ತಿದ್ದರೂ ಕೆಲವರ ಮಾತ್ರ ಅನಾಗರಿಕತೆಯನ್ನು ಬಿಡುತ್ತಿಲ್ಲ. ಸರಕಾರದ ಕ್ಷೀರ ಭಾಗ್ಯ ಯೋಜನೆಯಡಿ ಉಚಿತವಾಗಿ ವಿತರಣೆಯಾಗಿದ್ದ ಹಾಲಿನ ಪುಡಿಯ ಪ್ಯಾಕೇಟನ್ನು ಬೇಂಗಮಲೆಯಲ್ಲಿ ಎಸೆದಿರಿವುದನ್ನು ಪಿಡಿಓ ಶ್ಯಾಮ್ ಪ್ರಸಾದ್ ಪರಿಶೀಲನೆಗೆ ತೆರಳಿದಾಗ ಕಂಡುಬಂದಿದೆ.ಸರಕಾರ ಉಚಿವಾಗಿ ನೀಡುವುದು ತಪ್ಪೇ, ಅಥವ ಕಳಪೆ ಆಹಾರ ನೀಡುತ್ತಿದೆಯೇ ಎಂಬ ಸಂಶಯ ಕೂಡ...

ಬೇಂಗಮಲೆಯಲ್ಲಿ ತ್ಯಾಜ್ಯ ಎಸೆದವರಿಗೆ ರೂ.8000 ದಂಡ

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆದ ಬಳ್ಪ ಗ್ರಾಮದ ಕುಂಜತ್ತಾಡಿ ನಿವಾಸಿಗಳಿಗೆ ರೂ 8000.00 ದಂಡ ವಿಧಿಸಿದ ಘಟನೆ ಮೇ.13 ರಂದು ನಡೆದಿದೆ. ಬೇಂಗಮಲೆ ಪರಿಸರದಲ್ಲಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಎಸೆದು ಹೋಗಿದ್ದಾರೆ ಎಂಬ ಮಾಹಿತಿ ಪಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ ಆರ್ ರವರು ಮೇ.13 ರಂದು...

ಕಲ್ಲುಗುಂಡಿಯಲ್ಲಿ ಈ ವರ್ಷದಿಂದ ಫಾತಿಮಾ ಮಹಿಳಾ ಶರೀಅತ್ ಕಾಲೇಜು ಆರಂಭ

ಪಿ.ಯು.ಸಿ ಕೋರ್ಸ್ ಜೊತೆಗೆ ಧಾರ್ಮಿಕ, ನೈತಿಕ ಮತ್ತು ಕೌಟುಂಬಿಕ ವಿಷಯಗಳನ್ನು ಒಳಪಡಿಸಿದ ಪಾಳಿಲಾ '' ಬಿರುದು ನೀಡುವ ಶರೀಅತ್ ಕಾಲೇಜು ಕಲ್ಲುಗುಂಡಿ ಜುಮಾ ಮಸೀದಿಯನ್ನು ಕೇಂದ್ರೀಕರಿಸಿ ಈ ಬಾರಿಯ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿರುವುದರ ಕುರಿತು ಮೇ.7 ರಂದು ಪತ್ರಿಕಾ ಗೋಷ್ಠಿ ನಡೆಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ತಾಜಾ ಮಹಾಮ್ಮದ್ ಮಾತಾಡಿ, ಶಿಕ್ಷಣ ರಂಗದಲ್ಲಿ ಮುಸ್ಲಿಂ ಮಹಿಳೆಯರಿಗೆ ಹೊಸ...

ಐವರ್ನಾಡಿನಲ್ಲಿ ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿ ಅನಾವರಣ ; ಸಾಮಾಜಿಕ ಪರಿವರ್ತನೆ ತಂದ ದಿ.ಬಾಲಕೃಷ್ಣ ಗೌಡರ ಮಾರ್ಗದರ್ಶದಂತೆ ಯುವ ಜನತೆ ನಡೆಯಬೇಕಿದೆ – ಡಿ.ವಿ.ಸದಾನಂದ ಗೌಡ

ಸಮಾಜ ಕಟ್ಟಿದವರು, ಸಮಾಜಕ್ಕೆ ಬೆಳಕಾದವರನ್ನು ಸಮಾಜ ಎಂದೂ ನೆನಪಿಸುತ್ತದೆ. ಅದರಂತೆ ಆದರ್ಶ ಪುರುಷರ ಪುತ್ಥಳಿ ನಿರ್ಮಾಣವಾಗಿದೆ. ಆದರ್ಶ ಬದುಕಿನ ಮೂಲಕ ಸಮಾಜಕ್ಕೆ ಬೆಳಕಾಗಿದ್ದ, ಹೊಸ ತಲೆಮಾರಿಗೆ ಪ್ರೇರಣೆಯಾದ ದಿ. ಎನ್.ಎಂ.ಬಾಲಕೃಷ್ಣ ಗೌಡ ಅವರು ಸದಾ ಸ್ಮರಣೀಯರು ಇವರ ಮಾರ್ಗದರ್ಶನದಂತೆ ಯುವ ಜನತೆ ನಡೆಯಬೇಕಿದೆ ಎಂದು ಮಾಜಿ ಮುಖ್ಯಮಂತ್ರಿಮಾಜಿ ಕೇಂದ್ರ ಸಚಿವ, ಸಂಸದ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.ಐವರ್ನಾಡಿನ...

ಬೆಳ್ಳಾರೆ : ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯ ವಾರ್ಷಿಕೋತ್ಸವ

ಬೆಳ್ಳಾರೆಯ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯ3ನೇ ವರ್ಷದ ವಾರ್ಷಿಕೋತ್ಸವಮೇ. 7ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಾಂಗಣದಲ್ಲಿ ನಡೆಯಿತು. ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಉದಯ ಕೆ.ಯವರು ದೀಪ ಪ್ರಜ್ವಲನೆಗೊಳಿಸಿದರು. ನಂತರ ಶ್ರೀ ಸತ್ಯನಾರಾಯಣ ಪೂಜೆ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಟುಕುಕ್ಕೆ ಭಜನಾ...

ಗಾಂಧಿನಗರ : ವಿವಾಹಿತ ಯುವತಿ ನೇಣು ಬಿಗಿದು ಆತ್ಮಹತ್ಯೆ

ವಿವಾಹಿತ ಯುವತುಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ಗಾಂಧಿನಗರದಲ್ಲಿರುವ ಬಾಡಿಗೆ ಮನೆಯಲ್ಲಿ ವರದಿಯಾಗಿದೆ. ಸುಳ್ಯ ಗಾಂಧಿನಗರ ಕೆರೆಮೂಲೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಮೀನ ಎಂಬವರ ಪುತ್ರಿ ಆಯೀಶಾ ಎಂಬವರು ಆತ್ಮಹತ್ಯೆ ಮಾಡಿಕೊಂಡ ಯುವತಿ.ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದ ಈಕೆಯನ್ನು ನೋಡಿದ ಮನೆಯವರು ಕೂಡಲೇ ಕೆಳಗಿಳಿಸಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಆದರೆ...

ರಂಗ ನಿರ್ದೇಶಕ ಜೀವನ್ ರಾಂ ಅವರಿಗೆ ಆರ್ಯಭಟ ಪ್ರಶಸ್ತಿ – ಮೇ.25 ರಂದು ಬೆಂಗಳೂರಿನಲ್ಲಿ ಪ್ರದಾನ

ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದ, ಕರ್ನಾಟಕ ಯಕ್ಷ ರಂಗಾಯಣ ನಿರ್ದೇಶಕ ಜೀವನ್ ರಾಂ ಸುಳ್ಯ ಇವರಿಗೆ 2021-22ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಲಭಿಸಿದೆ. ಜೀವನ ರಾಂ ಅವರು ರಂಗಭೂಮಿಯ ವಿವಿಧ ಪ್ರಕಾರಗಳಲ್ಲಿ ಕಳೆದ 25 ವರ್ಷಗಳಿಂದ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಕಲಾ ವೇದಿಕೆಯು ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ....

ಗುತ್ತಿಗಾರು : ಶತಾಯು ಆಯುರ್ವೇದ ಕ್ಲಿನಿಕ್ ಶುಭಾರಂಭ ; ವೃತ್ತಿಯಲ್ಲಿ ಪ್ರಾಮಾಣಿಕತೆ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು- ಡಾ| ಕೆ.ವಿ.ಚಿದಾನಂದ

ಗುತ್ತಿಗಾರಿನ ಮುತ್ತಪ್ಪ ನಗರದ ಬಿಂದುಶ್ರೀ ಸಂಕೀರ್ಣದಲ್ಲಿ ಮೇ.6 ರಂದು ಡಾ.ನಿಶಾಂತ್ ಆರ್ನೋಜಿ ಮಾಲಿಕತ್ವದ ಶತಾಯು ಆಯುರ್ವೇದ ಕ್ಲಿನಿಕ್ ಶುಭಾರಂಭಗೊಂಡಿತು. ಎ.ಓ.ಎಲ್.ಇ.ಸುಳ್ಯ ಇದರ ಅಧ್ಯಕ್ಷ ಡಾ ಕೆ.ವಿ.ಚಿದಾನಂದ ರವರು ಕ್ಲಿನಿಕ್ ಉದ್ಘಾಟಿಸಿ ಮಾತನಾಡಿ ವೃತ್ತಿಯಲ್ಲಿ ಪ್ರಾಮಾಣಿಕತೆ ಜತೆಗೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಕೃಷಿಕ, ಸುಳ್ಯ ಕ.ಸಾ.ಪ.ಮಾಜಿ ಅಧ್ಯಕ್ಷ ಎ.ಕೆ.ಹಿಮಕರ ಅಧ್ಯಕ್ಷತೆ ವಹಿಸಿದ್ದರು. ಕೆ.ವಿ.ಜಿ.ಆಯುರ್ವೇದ ಆಸ್ಪತ್ರೆ ಸುಳ್ಯ...

ಸುಳ್ಯ : ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಸಂಪಾಜೆ ಸುಳ್ಯ ಇವರ ಆಶ್ರಯದಲ್ಲಿ ಮೇ.5 ರಂದು ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಕೊಡಗು ಕೆನರಾ ಬಂಡಾಯ 1837 ಕೃತಿ ಲೋಕಾರ್ಪಣೆ ಸದಸ್ಯತ್ವ ಅಭಿಯಾನಕ್ಕೆ ಚಾಲನೆ, ನೂತನ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮ ಸುಳ್ಯದ ಕನ್ನಡ ಭವನ ಅಂಬೆಟಡ್ಕದಲ್ಲಿ...

ಶುಭ ವಿವಾಹ : ಹಿತೇಶ್-ಚೈತ್ರಾ

ಕಲ್ಮಕಾರು ಗ್ರಾಮದ ಕೋನಡ್ಕ ಮನೆ ಶ್ರೀಮತಿ ಕಮಲಾಕ್ಷಿ ಮತ್ತು ಶ್ರೀ ಗಿರಿಯಪ್ಪ ಗೌಡರ ಪುತ್ರ ಹಿತೇಶ್ ರವರ ವಿವಾಹವು ನಾಲ್ಕೂರು ಗ್ರಾಮದ ಕೊಲ್ಯಮನೆ ಶ್ರೀಮತಿ ಮೀನಾಕ್ಷಿ ಮತ್ತು ಶ್ರೀ ತಿರುಮಲೇಶ್ವರ ಗೌಡರ ಪುತ್ರಿ ಚೈತ್ರಾ ರವರೊಂದಿಗೆ ಮೇ.04 ರಂದು ಕೊಲ್ಲಮೊಗ್ರು ಶ್ರೀ ಮಯೂರ ಕಲಾಮಂದಿರದಲ್ಲಿ ನಡೆಯಿತು. ವರದಿ :- ಉಲ್ಲಾಸ್ ಕಜ್ಜೋಡಿ

ಬೊಳುಬೈಲು : ನವಚೇತನ ಯುವಕ ಮಂಡಲದ ಪದಗ್ರಹಣ – ಅಧ್ಯಕ್ಷ ಶಶಿಪ್ರಸಾದ್ ಕಾಟೂರು, ಕಾರ್ಯದರ್ಶಿ ನಿತಿನ್ ಅರ್ಭಡ್ಕ

ನವ ಚೇತನ ಯುವಕ ಮಂಡಲ ಬೊಳುಬೈಲು ಇದರ ವಾರ್ಷಿಕ ಮಹಾಸಭೆ ಮತ್ತು 2022-23ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮೇ.3 ರಂದು ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ಸುಧೀರ್ ನೆಕ್ರಾಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಯಾನಂದ ಕೇರ್ಪಳ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು....

ಪೆರಾಜೆಯಲ್ಲಿ ಈಜು ತರಬೇತಿ ಶಿಬಿರ ಉದ್ಘಾಟನೆ

ಪೆರಾಜೆಯ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘ ಇದರ ಆಶ್ರಯದಲ್ಲಿ ಪೆರಾಜೆಯ ಪಯಸ್ವಿನಿ ಸೇತುವೆ ಬಳಿ ಈಜು ತರಬೇತಿ ಶಿಬಿರದ ಉದ್ಘಾಟನೆ ನಡೆಯಿತು. ಶಿಬಿರವನ್ನು ಪೆರಾಜೆ ಶ್ರೀ ಶಾಸ್ತಾವು ದೇವಳದ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ ಉದ್ವಾಟಿಸಿದರು. ಈ ಸಂದರ್ಭದಲ್ಲಿ ಸಂಘಟಕರಾದ ಪೆರಾಜೆ ಅಯ್ಯಪ್ಪ ದಿಪೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಪೆರುಮುಂಡ, ನಿರ್ದೇಶಕ ರಾದ ಯುವಾನಂದ ಪೆರಂಗಜೆ...

ಸುಳ್ಯ : ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಮನುದೇವ ಪರಮಲೆ

ಸುಳ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಚೇತನ್ ನಾವೂರು ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಯುವ ಮೋರ್ಚಾ ಉಪಾಧ್ಯಕ್ಷ ರಾಗಿದ್ದ ಮನುದೇವ್ ಪರಮಲೆ ಅವರಿಗೆ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ನಾಗಪಟ್ಟಣ ಸೇತುವೆ ದುರಸ್ತಿ ಕಾರ್ಯ ಆರಂಭ – ಪಂಚಾಯತ್ ಸದಸ್ಯರ ಮನವಿಗೆ ಸ್ಪಂದಿಸಿದ ಇಲಾಖೆ

ಆಲೆಟ್ಟಿ ಗ್ರಾಮದ ನಾಗಪಟ್ಟಣ ಸೇತುವೆ ಕಾಮಗಾರಿ ತುರ್ತಾಗಿ ದುರಸ್ತಿ ಪಡಿಸುವಂತೆ ಆಗ್ರಹಿಸಿ ಪಂಚಾಯತ್ ಸದಸ್ಯ ಧರ್ಮಪಾಲ ಕೊಯಿಂಗಾಜೆ ಯವರ ನೇತೃತ್ವದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರಿಗೆ ಕೆಲ ದಿನಗಳ ಹಿಂದೆ ಮನವಿ ಸಲ್ಲಿಸಿದ್ದರು. ಇಲಾಖೆಯ ಅಭಿಯಂತರರಾದ ಲೋಕೇಶ್ ಮತ್ತು ಪರಮೇಶ್ವರ ರವರು ಎ.29 ರಂದು ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ಕಾಮಗಾರಿ ಕುರಿತು ಪರಿಶೀಲನೆ ನಡೆಸಿ...

ಆಲೆಟ್ಟಿ ಸದಾಶಿವ ದೇವಳದಲ್ಲಿ ಯಕ್ಷಗಾನ ಸೇವೆಯಾಟ : ಶ್ರೀ ದೇವಿ ಮಹಾತ್ಮೆಯನ್ನು ಕಣ್ತುಂಬಿಕೊಂಡ ಜನ

ಆಲೆಟ್ಟಿ ಗ್ರಾಮದ ಬಾಳೆಬಲ್ಪು ಭವಾನಿಶಂಕರ ರವರ ಸೇವೆಯಾಟ ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ವಠಾರದಲ್ಲಿ ಪ್ರಥಮ ಸೇವೆಯಾಟವಾಗಿ ಎ.27.ರಂದು ನಡೆಯಿತು ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶವತಾರ ಯಕ್ಷಗಾನ ಮಂಡಳಿಯ ಕಲಾವಿದರ ಕೂಡುವಿಕೆಯಿಂದ ಶ್ರೀ ದೇವಿ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನವನ್ನು ನಡೆಸಲಾಯಿತು. ರಾತ್ರಿ ಗಂಟೆ 8.30 ರಿಂದ ಚೌಕಿ ಪೂಜೆಯು ನಡೆದು ಪ್ರಸಾದ...

ಸಂಪಾಜೆ : ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ ಭೇಟಿ

ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ ರವರು ಸಂಪಾಜೆ ಗ್ರಾಮದ ರಾಜರಾಂಪುರ ವಿದ್ಯುತ್ ಸಬ್ ಸ್ಟೇಷನ್ ಜಾಗ ಪರಿಶೀಲನೆ ಮಾಡಿ ಶೀಘ್ರದಲ್ಲಿ ಸ್ಥಳಕ್ಕೆ ಬೇಲಿ ಹಾಕಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಗ್ರಾಮದ ಹಳೆಯದಾದ ತಂತಿಗಳ ಬದಲಾವಣೆ, ವಿದ್ಯುತ್ ಲೈನ್ ಗೆ ತಾಗಿರುವ ಮರದ ಕೊಂಬೆ ತೆರವುಗೊಳಿಸಿ, ಗ್ರಾಮಕ್ಕೆ ತಡೆ ರಹಿತ ವಿದ್ಯುತ್ ವ್ಯವಸ್ಥೆಗೆ ಟ್ರಾನ್ಸ್ ಫಾರ್ಮರ್...

ಏನೆಕಲ್‌ನಲ್ಲಿ ಮೇ.1ರಿಂದ ರಾಜ್ಯಮಟ್ಟದ ಬೇಸಿಗೆ ಶಿಬಿರ

ಏನೆಕಲ್ಲಿನಲ್ಲಿ ‘ಕಲಾಮಾಯೆ’ ವತಿಯಿಂದ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ "ಪ್ರೀತಿಯಿಂದ"ಮೇ.1ರಿಂದ 7ರವರೆಗೆ ಏನೆಕಲ್‌ನ ಬಾಲಾಡಿ ಆದಿಶಕ್ತಿ ಭಜನಾ ಮಂದಿರದಲ್ಲಿ ನಡೆಯಲಿದೆ. ಕಲಾವಿದ, ಕಲಾ ಸಂಘಟಕ, ಅರೆಭಾಷೆ ಚಲನಚಿತ್ರ "ಕೇಸ್ ಪುಸ್ಕ" ಖ್ಯಾತಿಯ ನಿರ್ದೇಶಕ ಸುಧೀರ್ ಏನೆಕಲ್ ನಿರ್ದೇಶನದಲ್ಲಿ ನಡೆಯುವ ಶಿಬಿರದಲ್ಲಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.ಸುಬ್ರಮಣ್ಯ, ಏನೆಕಲ್,ಬಳ್ಪಸೇರಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಒಳಗೊಂಡಂತೆ ಸುಳ್ಯ ಹಾಗು...

ಅರಂತೋಡು : ಹೊಳೆಯ ನೀರಿನಲ್ಲಿ ಮುಳುಗಿ ಬಾಲಕ ಸಾವು

ಮಂಗಳೂರಿನ ಮನ್ವಿತ್(12 ವರ್ಷ) ಎಂಬಾತಅರಂತೋಡು ಗ್ರಾಮದ ಕುಕ್ಕುಂಬಳ ಹೊಳೆಯಲ್ಲಿ ಸ್ನಾನಮಾಡಲೆಂದು ಹೋದ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಸಂಜೆ ವರದಿಯಾಗಿದೆ. ಅರಂತೋಡಿನ ದಾಮೋದರ ಶೆಟ್ಟಿಯವರ ಪುತ್ರಿಯನ್ನುಮಂಗಳೂರಿಗೆ ವಿವಾಹ ಮಾಡಿಕೊಡಲಾಗಿದ್ದು, ಅವರ ಮಗ ಮನ್ವಿತ್ ಅಜ್ಜನ ಮನೆಗೆ ಬಂದ ಸಂದರ್ಭ ಹಂಸಕುಕ್ಕುಂಬಳರವರ ಮನೆ ಸಮೀಪ ಸ್ನಾನ ಮಾಡಲೆಂದು ನೀರಿಗಿಳಿದ ಬಾಲಕ ನೀರಿನಲ್ಲಿ ಮುಳುಗಿದನೆಂದು ತಿಳಿದುಬಂದಿದೆ.ಶರತ್...

ಕುಕ್ಕನ್ನೂರು ಶ್ರೀ ಕಿನ್ನಿಮಾಣಿ- ಪೂಮಾಣಿ ದೈವಸ್ಥಾನದಲ್ಲಿ ಗೊನೆ ಮುಹೂರ್ತ

ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ -ಪೂಮಾಣಿ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವುಮೇ.2ರಿಂದ ಮೇ.6ರವರೆಗೆ ನಡೆಯಲಿದ್ದು, ಆ ಪ್ರಯುಕ್ತ ಜಾತ್ರೋತ್ಸವಕ್ಕೆ ಎ.26ರಂದು ಮುಹೂರ್ತದ ಗೊನೆ ಕಡಿಯಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಗೌಡ ನಡುಬೆಟ್ಟು, ಪ್ರಧಾನ ಅರ್ಚಕ ಸುಭಾಷ್ ರೈ ಕುಕ್ಕಂದೂರು, ವೆಂಕಟ್ರಮಣ ಭಟ್ ಬೊಮ್ಮೆಟ್ಟಿ, ನಯನ ಸುತ್ತುಕೋಟೆ, ಗಂಗಾಧರ ಗೌಡ ಮಾರಡ್ಕ,ರಾಧಾಕೃಷ್ಣ ದೋಳ್ತಿಲ,...

ಕೊಲ್ಲಮೊಗ್ರು-ಹರಿಹರ ಸೊಸೈಟಿಯ ಕೊಲ್ಲಮೊಗ್ರು ಶಾಖೆಯ ನೂತನ ಗೋದಾಮು ಕಟ್ಟಡ ಉದ್ಘಾಟನೆ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೊಲ್ಲಮೊಗ್ರು ಶಾಖೆಯ ನೂತನ ಗೋದಾಮು ಕಟ್ಟಡ ಉದ್ಘಾಟನಾ ಸಮಾರಂಭವು ಎ.25 ರಂದು ನಡೆಯಿತು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ನೂತನ ಗೋದಾಮು ಕಟ್ಟಡವನ್ನು ಉದ್ಘಾಟಿಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಸುಕನ್ಯಾ ನಾಮಫಲಕ ಅನಾವರಣ ಮಾಡಿದರು....

ಸುಳ್ಯ: ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟಕ್ಕೆ ಭರದ ಸಿದ್ಧತೆ – ಸುಸಜ್ಜಿತ ಗ್ಯಾಲರಿಯಲ್ಲಿ ವೀಕ್ಷಿಸಲು ಅವಕಾಶ

ಸುಳ್ಯದಲ್ಲಿ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟ ಮೇ.4 ರಿಂದ ಆರಂಭಗೊಂಡು ಮೇ.8ರವರೆಗೆ ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ. ಸುಮಾರು 13 ವರ್ಷಗಳ ಬಳಿಕ ಈ ಪಂದ್ಯಾವಳಿ ನಡೆಯುತ್ತಿದೆ. ಈಗಾಗಲೇ ಮೈದಾನ ಸಜ್ಜುಗೊಂಡಿದ್ದು ಗ್ಯಾಲರಿ ಕೆಲಸ ನಡೆಯುತ್ತಿದೆ. ಪುರುಷರ 6 ಹಾಗೂ ಮಹಿಳೆಯರ 4 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದೆ. ಸುಸಜ್ಜಿತವಾದ ಬೃಹತ್ ಗ್ಯಾಲರಿ ನಿರ್ಮಾಣಗೊಳ್ಳುತ್ತಿದೆ...

ಪ್ರತಿಯೊಬ್ಬರ ಹೃದಯದಲ್ಲಿ ಧರ್ಮದ ಪ್ರತಿಷ್ಟಾಪನೆ ಆಗಬೇಕಿದೆ: ನಳಿನಿ ಆಚಾರ್ಯ

ಮರಕತ ಶ್ರೀ ದುರ್ಗಾಪರಮೇಶ್ವರಿ ಪ್ರತಿಷ್ಠಾ ವಾರ್ಷಿಕೋತ್ಸವ ಸಂಪನ್ನ ಪ್ರತಿಯೊಬ್ಬರ ಹೃದಯದಲ್ಲಿ ಧರ್ಮದ ಪ್ರತಿಷ್ಠಾಪನೆ ಆಗಬೇಕಾಗಿದೆ. ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಧಾರ್ಮಿಕ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಸುಳ್ಯದ ರೋಟರಿ ಆಂಗ್ಲಮಾಧ್ಯಮ ಶಾಲಾ ಶಿಕ್ಷಕಿ ನಳಿನಾಕ್ಷಿ ಆಚಾರ್ಯ ಅವರು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಿಯ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಏ. 23 ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ...

ಕಂದಡ್ಕದಲ್ಲಿ ಸೇತುವೆಗೆ ಗುದ್ದಿ ಗಂಭೀರ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಮೃತ್ಯು

ಎ. ೭ ರಂದು ಸುಳ್ಯದಿಂದ ಮಡಪ್ಪಾಡಿ ಕಡೆಗೆ ತನ್ನ ಬೈಕ್ ನಲ್ಲಿ ತೆರಳುತ್ತಿದ್ದ ಯುವಕ ಕಂದಡ್ಕ ಸೇತುವೆಗೆ ಬೈಕ್ ಡಿಕ್ಕಿಯಾಗಿ ಕೈ ಮತ್ತು ತಲೆಗೆ ಗಂಭೀರ ಗಾಯಗೊಂಡು ಎ.೨೪ ರಂದು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿರುವುದಾಗಿ ತಿಳಿದು ಬಂದಿದೆ .ಮೃತಪಟ್ಟ ಯುವಕನನ್ನು ಪೆರಾಜೆ ಗ್ರಾಮದ ನಿಡ್ಯಮಲೆ ಜಯರಾಮ ಎಂಬವರ ಪುತ್ರ ಸಿನಾತ್ (೨೫)...

ದೈವಾರಾಧನೆಯಲ್ಲಿ ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆ ಸಾಕಾರ : ಎಡನೀರು ಶ್ರೀ – ಕುಕ್ಕುಜಡ್ಕ ವಿಷ್ಣುಮೂರ್ತಿ, ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಪುನಃ ಪ್ರತಿಷ್ಠಾ ಕಲಶಾಭಿಷೇಕ

ಕುಕ್ಕುಜಡ್ಕ: ಎಲ್ಲರೂ ಒಟ್ಟಾಗಿ ಸೇರಿ ಮಾಡುವ ದೈವಾರಾಧನೆಯಲ್ಲಿ ‘ವಸುದೈವ ಕುಟುಂಬಕಂ’ ಎಂಬ ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ. ಇದರಿಂದ ಹಿಂದೂ ಧರ್ಮದ ಉನ್ನತಿ ಸಾಧ್ಯ ಎಂದು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ವಿಷ್ಣುನಗರ ಶ್ರೀವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಕಲಶಾಭಿಷೇಕ ಕಾರ್ಯಕ್ರಮದ ಅಂಗವಾಗಿ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಾಗಿ ಗಿರೀಶ್ ನಂದನ್

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ ವರ್ಗಾವಣೆಗೆ ಆದೇಶವಾಗಿದೆ. ಅವರು ಬೆಳಗಾವಿ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿ ಪುತ್ತೂರಿನ ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರಿಗೆ ಆದೇಶವಾಗಿದೆ ಎಂದು ತಿಳಿದು ಬಂದಿದೆ.

ಡಿಕೆಶಿ ನಿಂದನೆ ಪ್ರಕರಣ : ಸುಳ್ಯ ನ್ಯಾಯಾಲಯ ನೀಡಿದ ತೀರ್ಪಿಗೆ ತಡೆಯಾಜ್ಞೆ

ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ನಿಂದನೆ ಮಾಡಿದ ಪ್ರಕರಣದಲ್ಲಿ ಬೆಳ್ಳಾರೆಯ ಸಾಯಿ ಗಿರಿಧರ ರೈ ಅವರಿಗೆ ಸುಳ್ಯ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆ ತೀರ್ಪಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಸರಕಾರಿ ಅಧಿಕಾರಿಗಳು, ಸಾರ್ವಜನಿಕ ಸೇವೆಯಲ್ಲಿರುವವರನ್ನು ಪ್ರಶ್ನೆ ಮಾಡುವುದು ಅಪರಾಧವಲ್ಲ ಎಂಬ ಕಕ್ಷಿದಾರರ ಪರ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ...

ಜೆಡಿಎಸ್ ಬಲವರ್ಧನೆಗೆ ಚಾಲನೆ – ಸುಬ್ರಹ್ಮಣ್ಯಕ್ಕೆ ಆಗಮಿಸಿದ ಜನತಾ ಜಲಧಾರೆ ರಥಕ್ಕೆ ಮುಖಂಡರಿಂದ ಸ್ವಾಗತ

ಜನತಾದಳ ಜಾತ್ಯತೀತ ಪಕ್ಷದ ಜನತಾ ಜಲಧಾರೆ ರಥವು ರಾಜ್ಯದಾದ್ಯಂತ ಸಂಚರಿಸುತ್ತಿದ್ದು. ಸುಬ್ರಹ್ಮಣ್ಯಕ್ಕೆ ಎಪ್ರಿಲ್ 21ರಂದು ಜನತಾ ಜಲಧಾರೆ ರಥವು ಆಗಮಿಸಿದ್ದು ಸುಬ್ರಹ್ಮಣ್ಯದ ಕುಮಾರಧಾರದಲ್ಲಿ ನೀರು ಸಂಗ್ರಹಿಸಿ ಪೂಜೆ ಸಲ್ಲಿಸಿ ಕಲಶಕ್ಕೆ ಹಾಕಲಾಯಿತು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಜನತಾದಳದ ಅಧ್ಯಕ್ಷರಾದ ಜಾಕೆ ಮಾಧವ ಗೌಡ ದ.ಕ. ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಅಕ್ಷತ್ ಸುವರ್ಣ ಜಿಲ್ಲಾ...

ದಸರಾ ಕಾವ್ಯ ಪ್ರಶಸ್ತಿಗೆ ಭಾಜನರಾದ ಲೀಲಾಕುಮಾರಿ ತೊಡಿಕಾನ

ಅಖಿಲ ಭಾರತೀಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಿಷತ್ ಮತ್ತು ಪ್ರಗತಿಶೀಲ ಪ್ರಕಾಶನವು ಮೈಸೂರು ದಸರಾದ ಅಂಗವಾಗಿ ನಡೆಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಲೀಲಾಕುಮಾರಿ ತೊಡಿಕಾನರ ಕವನವು ಅತ್ಯುತ್ತಮ ಕವನವೆಂದು ಆಯ್ಕೆಯಾಗಿದ್ದು, ದಸರಾ ಕಾವ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಎ. ೧೭ರಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 'ದಸರ ಕಾವ್ಯ ಪ್ರಶಸ್ತಿ' ನೀಡಿ ಗೌರವಿಸಲಾಯಿತು.ನಂತರ ನಡೆದ ಕವಿಗೋಷ್ಟಿಯಲ್ಲಿ ವಿಜೇತ...

ರಂಗಮನೆ ಚಿಣ್ಣರಮೇಳಕ್ಕೆ ಸಂಭ್ರಮದ ತೆರೆ -ವೇದಿಕೆಯೇರಿದ 300 ಮಕ್ಕಳಿಂದ ಸಾಂಸ್ಕೃತಿಕ ವೈಭವ

    ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ನಡೆದ ಚಿಣ್ಣರಮೇಳ 2022  ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರವು ಮಕ್ಕಳ ಸಾಂಸ್ಕೃತಿಕ ಸಂಭ್ರಮದೊಂದಿಗೆ ತೆರೆ ಕಂಡಿತು.   ಸಮಾರೋಪ ಭಾಷಣ ಮಾಡಿದ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಬಿ.ವಿ.ಸೂರ್ಯನಾರಾಯಣ ಇವರು ಮಾತಾನಾಡಿ" ಮಕ್ಕಳ ಶೈಕ್ಷಣಿಕ, ಮಾನಸಿಕ ಮತ್ತು ಬೌದ್ಧಿಕ  ಬೆಳವಣಿಗೆಯಲ್ಲಿ ಇಂತಹ ಬೇಸಿಗೆ ಶಿಬಿರಗಳು ಬಹುಮುಖ್ಯ...

ಕರೆಂಟ್ ಇಲ್ಲ ಎಂದು ಇಂಧನ ಸಚಿವರಿಗೆ ಬೈದ ಪ್ರಕರಣದ ತೀರ್ಪು ಪ್ರಕಟ : ಡಿಕೆಶಿ ಗೆ ಫೋನ್ ಮಾಡಿದ್ದ ಬೆಳ್ಳಾರೆಯ ಗಿರಿಧರ ರೈಗೆ ಜೈಲು ಶಿಕ್ಷೆ

ವಿದ್ಯುತ್ ಸಚಿವರಾಗಿದ್ದ ಡಿ. ಕೆ. ಶಿವಕುಮಾರ್ ಅವರಿಗೆ ಫೋನಾಯಿಸಿ ಬೈದು ನಿಂದಿಸಿದ್ದಾರೆಂಬ ಕಾರಣಕ್ಕಾಗಿ ಕೇಸಿಗೊಳಗಾಗಿದ್ದ ಬೆಳ್ಳಾರೆಯ ಸಾಯಿ ಗಿರಿಧರ್ ರೈಯವರಿಗೆ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ. ಸುಳ್ಯದ ಅನಿಯಮಿತ ವಿದ್ಯುತ್ ಕಡಿತದ ಪರಿಸ್ಥಿತಿಯಿಂದ ರೋಷಗೊಂಡಿದ್ದ ಬೆಳ್ಳಾರೆಯ ವಿದ್ಯುತ್ ಬಳಕೆದಾರ ಸಾಯಿ ಗಿರಿಧರ ರೈಯವರು 2016 ಫೆಬ್ರವರಿ 28 ರಂದು ಆಗಿನ ವಿದ್ಯುತ್...

ಸವಣೂರು : ಅಮರ ಸಂಘಟನಾ ಸಮಿತಿ ವತಿಯಿಂದ ಮನೆ ಹಸ್ತಾಂತರ

ಅಮರ ಸಂಘಟನಾ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಕಡಬ ತಾಲೂಕಿನ ಸವಣೂರು ಸಮೀಪದ ಮಾಂತೂರು ಶ್ರೀಮತಿ ಶ್ಯಾಮಲರಿಗೆ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಪಂಚಾಯತ್ ನಿವೇಶನದಲ್ಲಿ ನೂತನವಾಗಿ ೨.೫೩ಲಕ್ಷ ದಲ್ಲಿ ನಿರ್ಮಿಸಿದ ಅಮರ ಜ್ಯೋತಿ ಮನೆಯ ಹಸ್ತಾಂತರ ಕಾರ್ಯಕ್ರಮ ಎ. ೧೦ರಂದು ನಡೆಯಿತು. ಗಣಪತಿ ಹವನದ ಮೂಲಕ ಪ್ರಾರಂಭವಾದ ಕಾರ್ಯಕ್ರಮವನ್ನು ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್...

ತಂತ್ರಜ್ಞಾನ ಅಳವಡಿಕೆ ಹಾಗೂ ಉತ್ತಮ ಕಾರ್ಯತತ್ಪರತೆಯಿಂದ ಸಂಪಾಜೆ ಸೊಸೈಟಿ ಒಂದು ಮಾದರಿ ಸಂಸ್ಥೆ : ಕೆ.ಜಿ.ಬೋಪಯ್ಯ.

ಸಂಪೂರ್ಣ ಡಿಜಿಟಲೀಕರಣದಂತ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ, ಸದಸ್ಯರಿಗೆ ಗುಣಮಟ್ಟದ ಸೇವೆ, ಸಾಮಾಜಿಕ ಸ್ಪಂದನೆಯಲ್ಲಿ ಸಂಪಾಜೆ ಸೊಸೈಟಿ ಮುಂಚೂಣಿಯಲ್ಲಿದ್ದು, ಇದು ನಮ್ಮ ಜಿಲ್ಲೆಗೆ ಮಾದರಿ ಸಂಸ್ಥೆಯಾಗಿದೆ ಎಂದು ಮಾಜಿ ವಿಧಾನಸಭಾದ್ಯಕ್ಷ ,ಶಾಸಕ ಕೆ.ಜಿ.ಬೋಪಯ್ಯ ಶ್ಲಾಘಿಸಿದರು. ಅವರು ಇಂದು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೂ 1.76 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ನೂತನ ಗೋದಾಮು...

ಬೆಳ್ಳಾರೆ : ಸ್ವಾತಂತ್ರ್ಯ ಅಮರ ಕ್ರಾಂತಿಯ ನೆನಪು ಉಪನ್ಯಾಸ ಕಾರ್ಯಕ್ರಮ

ಗ್ರಾಮ ಪಂಚಾಯತ್ ಬೆಳ್ಳಾರೆ, ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಹಕಾರದೊಂದಿಗೆ ಸ್ವಾತಂತ್ರ್ಯ ಅಮರ ಕ್ರಾಂತಿಯ ನೆನಪು ಉಪನ್ಯಾಸ ಕಾರ್ಯಕ್ರಮ ಏ. 12 ರಂದು ಬೆಳ್ಳಾರೆಯ ಕೆಪಿಎಸ್ ಸಭಾಂಗಣದಲ್ಲಿ ನಡೆಯಿತು. ‌ಡಾ.ಪ್ರಭಾಕರ ಶಿಶಿಲ ರವರು ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು. ಬಂಗ್ಲೆಗುಡ್ಡೆಗೆ ತೆರಳಿ ಸ್ವಚ್ಚತೆ ಕಾರ್ಯಕಮ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ...

ಹಳೆಗೇಟು : ಶ್ರೀ ಕೇಶವ ಕೃಪಾ ವೇದ, ಯೋಗ, ಕಲಾ ಶಿಬಿರ ಉದ್ಘಾಟನೆ

ಸುಳ್ಯದ ಹಳೆಗೇಟಿನಲ್ಲಿ ವೇದಮೂರ್ತಿ ನಾಗರಾಜ್ ಭಟ್ ಸಾರಥ್ಯದ ಶ್ರೀ ಕೇಶವ ಕೃಪಾ ವೇದ,ಯೋಗ ಮತ್ತು ಕಲಾ ಪ್ರತಿಷ್ಠಾನ ವತಿಯಿಂದ ನಡೆಯುತ್ತಿರುವ ವೇದ,ಯೋಗ ಮತ್ತು ಕಲಾ ಶಿಬಿರದ ಉದ್ಘಾಟನಾ ಸಮಾರಂಭ ಇಂದು ಕೇಶವ‌ ಕಿರಣ ಛಾತ್ರಾ ನಿವಾಸದಲ್ಲಿ ನಡೆಯಿತು. ಶಿಬಿರವನ್ನ ಮೈಸೂರಿನ ಖ್ಯಾತ ನರರೋಗ ತಜ್ಞ ಮತ್ತು ಕೇಶವ ಕೃಪಾದ ಹಿರಿಯ ವಿದ್ಯಾರ್ಥಿ ಡಾ. ಶಾಸ್ತಾರ ಪನೆಯಾಲ...

ಸುಟ್ಟತ್ ಮಲೆ : ಅಕ್ರಮ ಹರಳುಕಲ್ಲು ಗಣಿಕಾರಿಕೆ ಸ್ಥಳಕ್ಕೆ ಪಶ್ಚಿಮ ಘಟ್ಟಗಳ ಕಾರ್ಯ ಪಡೆ ಅಧ್ಯಕ್ಷರ ಭೇಟಿ

ಸುಬ್ರಹ್ಮಣ್ಯ ಸಮೀಪದ ಸುಟ್ಟತ್ ಮಲೆ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಹರಳು ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಪಶ್ಚಿಮ ಘಟ್ಟಗಳ ಕಾರ್ಯ ಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಭೇಟಿ ನೀಡಿ ಪರಿಶೀಲಿಸಿದರು. ಸುಟ್ಟತ್ ಮಲೆ ಮತ್ತಿತರ ಕೆಲ ಕಡೆ ಹರಳುಕಲ್ಲು ಅಗೆತಮತ್ತು ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ...

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಧನಂಜಯ ಅಡ್ಪಂಗಾಯ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ 40 ಉಪಾಧ್ಯಕ್ಷರು ಮತ್ತು 109 ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ ಎಂದು ಎಐಸಿಸಿ ಜನರಲ್ ಸೆಕ್ರೆಟರಿಕೆ.ಸಿ.ವೇಣುಗೋಪಾಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌ ಸುಳ್ಯದಿಂದ ಧನಂಜಯ ಅಡ್ಪಂಗಾಯ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.ಧನಂಜಯ ಅಡ್ಪಂಗಾಯ ರವರು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾಗಿ,...

ಏಪ್ರಿಲ್ 22 ರಿಂದ 26 ರವರೆಗೆ ಕುಕ್ಕುಜಡ್ಕ ಶ್ರೀ ವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಬಲ್ಲಾಳರು ಆರಾಧನೆ ಮಾಡಿಕೊಂಡು ಬರುತ್ತಿದ್ದ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕುಕ್ಕುಜಡ್ಕದ ಶ್ರೀ ವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು ಸುಮಾರು 1 ವರೆ ಕೋಟಿಗೂ ಮಿಕ್ಕಿದ ಖರ್ಚಿನಲ್ಲಿ ಸಂಪೂರ್ಣ ಕೆಲಸ ಕಾರ್ಯ ನಡೆದು ಏ. 22 ರಿಂದ ಪ್ರಾರಂಭವಾಗಿ ಏ. 26 ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿದೆ ಬ್ರಹ್ಮಕಲಶೋತ್ಸವ...

ಕಲ್ಲುಗುಂಡಿ : ಅಪಘಾತದಲ್ಲಿ ಭೀಮಗುಳಿ ಕುಟುಂಬದ ನಾಲ್ವರು ದುರ್ಮರಣ ಪ್ರಕರಣ – ಏಳು ವರ್ಷದ ಬಳಿಕ ಟಿಪ್ಪರ್ ಚಾಲಕ ಮತ್ತು ಮಾಲಕನಿಗೆ ಎರಡು ವರ್ಷ ಜೈಲು ಶಿಕ್ಷೆ

ಕಲ್ಲುಗುಂಡಿ ಸಮೀಪದ ಕಡೆಪಾಲ ಎಂಬಲ್ಲಿ ಏಳು ವರ್ಷಗಳ ಹಿಂದೆ ನಡೆದ ಕಾರು ಮತ್ತು ಟಿಪ್ಪರ್ ಅಪಘಾತ ಪ್ರಕರಣದಲ್ಲಿ ಪಂಜ ಭೀಮಗುಳಿ ಕುಟುಂಬದ ಒಂದೇ ಮನೆಯ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿ ಟಿಪ್ಪರ್ ಚಾಲಕ ಹಾಗೂ ಮಾಲಕರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ. ತೀರ್ಪು...

ಐ ಆರ್ ಸಿ ಎಂ ಡಿ ಶಿಕ್ಷಣ ಸಂಸ್ಥೆಯ ಮೂರನೇ ಶಾಖೆ ಸುಳ್ಯದಲ್ಲಿ ಶುಭಾರಂಭ

ಪುತ್ತೂರಿನಲ್ಲಿ ಕಾರ್‍ಯಾಚರಿಸುತ್ತಿರುವ ಐ ಆರ್ ಸಿ ಎಂ ಡಿ ಶಿಕ್ಷಣ ಸಂಸ್ಥೆಯ ಮೂರನೇ ಶಾಖೆ ಸುಳ್ಯದ ಶ್ರೀರಾಮಪೇಟೆ ಸಾಯಿ ರಾಮ್ ಕಾಂಪ್ಲೆಕ್ಸ್ ನಲ್ಲಿ ಇಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಗಣೇಶ್ ಮತ್ತು ಫುಲ್ಲಾ ಗಣೇಶ್‌ರವರ ಪುತ್ರಿ ಕುಮಾರಿ ತನಯ ದೀಪ ಬೆಳಗಿಸಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ...

ಸಂತೋಷ್ ಕೊಡಂಕೇರಿ ನಿರ್ದೇಶನದ ಚಲನಚಿತ್ರಕ್ಕೆ ಒಲಿದ ಇಂಡಿಯಾ ಬುಕ್ ಆಫ್ ರೆಕಾರ್ಡ್

ಸಂತೋಷ್ ಕೊಡಂಕೇರಿ ನಿರ್ದೇಶನದ "ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ" ಚಲನಚಿತ್ರಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿದೆ. ಈ ಚಿತ್ರದಲ್ಲಿ ಲೇಖಕ, ರಂಗಕರ್ಮಿ ಯೋಗೇಶ್ ಮಾಸ್ಟರ್ 24 ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂತೋಷ್ ಕೊಡಂಕೇರಿಯವರು ಸುಳ್ಯ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಪ್ರಸ್ತುತ ನಗರ ಪಂಚಾಯತ್ ಸದಸ್ಯರಾಗಿರುವ ಬಾಲಕೃಷ್ಣ ಭಟ್ ಕೊಡಂಕೇರಿಯವರ...

ಯೋಗಾಸನದಲ್ಲಿ ದಾಖಲೆ ನಿರ್ಮಿಸಿದ ಮೋನಿಷ್ ತಂಟೆಪ್ಪಾಡಿ

ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಮೋನಿಷ್ ತಂಟೆಪ್ಪಾಡಿ ಸಾಧನೆ ಮೆರೆದಿದ್ದಾರೆ.‌ ಬದ್ದ ಪದ್ಮಾಸನ ದಲ್ಲಿ 1ಗಂಟೆ 02 ನಿಮಿಷ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾರೆ. ಕಳೆದ ಏಳು ತಿಂಗಳಿಂದ ಯೋಗಾಭ್ಯಾಸವನ್ನು ನಿರಂತರ ಯೋಗ ಕೇಂದ್ರ ಸುಳ್ಯ ಇದರ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಯೋಗ...

ಏ.2 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಧಾರ್ಮಿಕ ದಿನಾಚರಣೆ ಮತ್ತು ಯುಗಾದಿ ಆಚರಣೆ

ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏ.2 ರಂದು ರಾಜ್ಯ ಧಾರ್ಮಿಕ ದಿನಾಚರಣೆ ಮತ್ತು ಯುಗಾದಿ ಆಚರಣೆ ನೆರವೇರಲಿದೆ. ಈ ಪ್ರಯುಕ್ತ ಮುಂಜಾನೆ 6 ಗಂಟೆಯಿಂದ ಶ್ರೀ ವಿದ್ಯಾಸಾಗರ ಭಜನಾ ಸಂಗಮ ಮತ್ತಿತರ ಸ್ವಯಂಸೇವಕ ತಂಡದವರಿದ ಶ್ರೀ ದೇವಳದ ಧರ್ಮಸಮ್ಮೇಳನ ಮಂಟಪದಲ್ಲಿ ಅಹಃಪೂರ್ಣ ಭಜನಾ ಕಾರ್ಯಕ್ರಮ ನೆರವೇರಲಿದೆ. ರಾಜ್ಯದ ಅಭಿವೃದ್ಧಿಗಾಗಿ ಪ್ರಾರ್ಥನೆ:ಯುಗಾದಿಯ...

ಅರಂತೋಡು : ಗ್ರಾಮ ಪಂಚಾಯತ್ ಘನತ್ಯಾಜ್ಯ ನಿರ್ವಹಣಾ ತಂಡಕ್ಕೆ ಜಿಲ್ಲಾ ಪ್ರಶಸ್ತಿ

ಅರಂತೋಡು ಗ್ರಾಮ ಪಂಚಾಯತ್ ಘನತ್ಯಾಜ್ಯ ನಿರ್ವಹಣೆಯನ್ನು ಮಾಡುತ್ತಿರುವ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಸಂಘದ ಮಹಿಳಾ ತಂಡವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಮಹಿಳಾ ಘನತ್ಯಾಜ್ಯ ನಿರ್ವಹಣಾ ತಂಡವಾಗಿರುತ್ತದೆ. ಏ.3 ರಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ರವರು ಮಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಿದ್ದಾರೆ. ಘನ...

ಕೆ.ವಿ.ಜಿ ಆಯುರ್ವೇದ ಕಾಲೇಜಿಗೆ ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಚಿನ್ನದ ಪದಕ

ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ, ಇವರು ನಡೆಸಿದ ಆಯುರ್ವೇದ ಪದವಿ ಪರೀಕ್ಷೆಯಲ್ಲಿ ಸುಳ್ಯದ ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಡಾ. ಮೇಘನ ಸಿ., ವಿಶ್ವವಿದ್ಯಾಲಯದ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾಳೆ.ವಿದ್ಯಾರ್ಥಿನಿಯನ್ನು, ಎ.ಒ.ಎಲ್.ಇ(ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿಗಳಾದ ಅರ್ಕಿಟೆಕ್ಟ್. ಅಕ್ಷಯ್ ಕೆ.ಸಿ., ಕಾರ್ಯದರ್ಶಿಗಳಾದ...

ತಿರುಪತಿ ತೆರಳುವವರಿಗೆ ಸುವರ್ಣಾವಕಾಶ – ಇಂದಿನಿಂದ ರಾಜಹಂಸ ಬಸ್ ಸೇವೆ ಆರಂಭ

ಕೆ.ಎಸ್.ಆರ್.ಟಿ.ಸಿ. ಪುತ್ತೂರು ವಿಭಾಗ ಧರ್ಮಸ್ಥಳ ಘಟಕದ ವತಿಯಿಂದ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯದಿಂದ ತಿರುಪತಿಗೆ ಬೆಂಗಳೂರು ಮಾರ್ಗವಾಗಿ ನೂತನ ರಾಜಹಂಸ ಸಾರಿಗೆ ಬಸ್ ಸಂಚಾರ ಆರಂಭವಾಯಿತು. ಸಚಿವರಾದ ಎಸ್.ಅಂಗಾರರವರು ಇಂದು ಚಾಲನೆ ನೀಡಿದರು. ಈ ಬಸ್ ಪ್ರತಿದಿನ ರಾತ್ರಿ 9.00 ಗಂಟೆಗೆ ಕುಕ್ಕೇ ಸುಬ್ರಹ್ಮಣ್ಯದಿಂದ ಹೊರಟು ಬೆಳಿಗ್ಗೆ 10.30 ಕ್ಕೆ ತಿರುಪತಿ ಗೆ ತಲುಪಲಿದೆ....

ಬಳ್ಪ : ಭೋಗಾಯನ ಕೆರೆ ಅಭಿವೃದ್ಧಿ ಕಾಮಗಾರಿ ವೇಳೆ ಹಿಟಾಚಿ ಪಲ್ಟಿ

ಬಳ್ಪ ಆದರ್ಶ ಗ್ರಾಮದ ಭೋಗಾಯನ ಕೆರೆ ಅಭಿವೃದ್ಧಿ ಕಾಮಗಾರಿ ಭರದಿಂದ ನಡೆಯುತ್ತಿದ್ದು ಈ ವೇಳೆ ಹಿಟಾಚಿ ಕೆರೆಯೊಳಗೆ ಮಗುಚಿ ಬಿದ್ದ ಘಟನೆ ಇಂದು ನಡೆದಿದೆ. ಕಾಮಗಾರಿ ಆರಂಭವಾದ ಬಳಿಕ ಎರಡನೇ ಬಾರಿಗೆ ಹಿಟಾಚಿ ಪಲ್ಟಿಯಾಗಿದೆ.

ಎ.12 ರಿಂದ ಕೇಶವ ಕೃಪಾದಲ್ಲಿ ಅಂತರ್ ರಾಜ್ಯ ವೇದ ಯೋಗ ಮತ್ತು ಕಲಾ ಶಿಬಿರ

ಹಳೆಗೇಟಿನಲ್ಲಿರುವ ಶ್ರೀ ಕೇಶವಕೃಪಾದಲ್ಲಿ 22 ನೇ ವರ್ಷದ ಅಂತರ್ ರಾಜ್ಯ ಮಟ್ಟದ ವೇದ, ಯೋಗ,ಕಲಾ ಶಿಬಿರ ಎ. 12 ರಿಂದ ಮೇ.30 ರವರೆಗೆ ನಡೆಯಲಿದೆ ಎಂದು ಸಂಚಾಲಕ ವೇದಮೂರ್ತಿ ಅಭಿರಾಮ್ ಭಟ್ ಹೇಳಿದರು.ಅವರು ಮಾ.26 ರಂದು ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿ, ಶಿಬಿರದಲ್ಲಿ ಉಚಿತವಾಗಿ ವೇದ ಯೋಗ ಹಾಗೂ ಕಲಾ ಶಿಕ್ಷಣದೊಂದಿಗೆ ಅಶನ, ವಸನ, ಪಠ್ಯ,...

ಸುಳ್ಯ: ಮೇ.4 ರಿಂದ 8 ವರೆಗೆ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟ – ಮೈದಾನ ನಿರ್ಮಾಣಕ್ಕೆ ಭೂಮಿ ಪೂಜೆ

ಸುಳ್ಯದಲ್ಲಿ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟಮೇ.4 ರಿಂದ 8 ರ ವರೆಗೆ ನಡೆಯಲಿದೆ. ಇದರ ಪೂರ್ವ ಸಿದ್ಧತೆಯಾಗಿ ಮಾ.26 ರಂದು ಬೆಳಗ್ಗೆ ವಾಲಿಬಾಲ್ ಪಂದ್ಯಾಟದ ಮೈದಾನ ನಿರ್ಮಾಣಕ್ಕೆ ಪುರೋಹಿತ ನಾಗರಾಜ ಭಟ್ ರವರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ವಾಲಿಬಾಲ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ದೊಡ್ಡಣ್ಣ ಬರೆಮೇಲು, ರಾಷ್ಟ್ರೀಯ ವಾಲಿಬಾಲ್ ಆಯೋಜನಾ ಸಮಿತಿ ಅಧ್ಯಕ್ಷ...

ವಕೀಲರ ಸಂಘದ ಚುನಾವಣೆ : ಅಧ್ಯಕ್ಷರಾಗಿ ನಾರಾಯಣ ಕೆ – ಕಾರ್ಯದರ್ಶಿಯಾಗಿ ವಿನಯಕುಮಾರ್ ಮುಳುಗಾಡು ಆಯ್ಕೆ

Vinayakumar Mulugadu ಸುಳ್ಯ ತಾಲೂಕು ವಕೀಲರ ಸಂಘದ ಚುನಾವಣೆ ಮಾ.೨೫ ರಂದು ವಕೀಲ ಸಂಘದ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆಗೆ ನಾರಾಯಣ ಕೆ ಮತ್ತು ಹರಿ ಕುಕ್ಕುಡೇಲು ನಡುವೆ ಸ್ಪರ್ದೆ ಏರ್ಪಟ್ಟು ನೇರ ಹಣಾಹಣಿಯಲ್ಲಿ ಅಂತಿಮವಾಗಿ ನಾರಾಯಣ ಕೆ ಒಂದು ಮತದ ಅಂತರದಿಂದ ವಿಜೇತರಾಗಿ ಆಯ್ಕೆಯಾದರು. ನಾರಾಯಣರು 50 ಮತ ಪಡೆದರೆ ಹರಿ 49 ಮತ ಪಡೆದು...

ಪಾಲಡ್ಕ : ಬೈಕ್ ಮತ್ತು ರಿಕ್ಷಾ ಅಪಘಾತ -ಪರಾರಿಯಾಗಲೆತ್ನಿಸಿದ ಆರೋಪಿ ಸೆರೆ

ಪಾಲಡ್ಕದಲ್ಲಿ ರಸ್ತೆ ಬದಿ ನಿಂತಿದ್ದ ಬೈಕ್ ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಿಕ್ಷಾ ಪಲ್ಟಿಯಾಗಿಸಿ ಅಲ್ಲಿಯೂ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಕಾರು ಚಾಲಕನನ್ನು ಕಾರು ಸಮೇತ ಸೆರೆ ಹಿಡಿದ ಘಟನೆ ಮಾ.25 ರ ಸಂಜೆ ವರದಿಯಾಗಿದೆ. ಪೋಲಿಸರು ಆರೋಪಿಯನ್ನು ಸೆರೆ ಹಿಡಿದು ವಿಚಾರಣೆ ನಡೆಸಲಾಗಿ ಕಾರು ಚಾಲಕ ಪೆರಾಜೆ...

ಟಾಟಾ ಐ.ಪಿ.ಎಲ್ 2022 ರ ಕ್ರ್ಯೂ ಮೆಂಬರ್ ಆಗಿ ಹರ್ಷಿತ್ ಪಡ್ರೆ ನೇಮಕ

ಮಾ.26 ರಿಂದ ಪ್ರಾರಂಭವಾಗಲಿರುವ ಟಾಟಾ ಐ.ಪಿ.ಎಲ್ ಸೀಸನ್ 15 ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಗಲಿದ್ದು, ಇದರ ಕ್ರ್ಯೂ ಮೆಂಬರ್ ಆಗಿ ಟಿ.ವಿ ನಿರೂಪಕ ಹಾಗೂ ಪತ್ರಕರ್ತರಾದ ಹರ್ಷಿತ್ ಪಡ್ರೆ ಅವರು ಸ್ಟಾರ್ ಸ್ಪೋರ್ಟ್ಸ್ ಗೆ ನೇಮಕಗೊಂಡಿದ್ದಾರೆ.ಈ ಬಾರಿಯ ಐ.ಪಿ.ಎಲ್ ನ ಎಲ್ಲಾ ಪಂದ್ಯಗಳು ಪುಣೆ ಹಾಗೂ ಮುಂಬೈ ನಲ್ಲಿ ನಡೆಯಲಿದ್ದು, ಹರ್ಷಿತ್ ಪಡ್ರೆ ಅವರು ಮುಂಬೈ...

ಐಕೋನಿಕ್ ಆಫ್ ಇಂಡಿಯಾ ಅವಾರ್ಡ್ ರಾಷ್ಟ್ರ ಪ್ರಶಸ್ತಿಗೆ ಮಿತ್ರದೇವ ಮಡಪ್ಪಾಡಿ ಆಯ್ಕೆ

ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ (ಐ) ಇಂಡಿಯಾ ಸಂಘಟನೆಯವರು ನೀಡುವ 2022 ನೇ ಸಾಲಿನ ಐಕೋನಿಕ್ ಆಫ್ ಇಂಡಿಯಾ ಅವಾರ್ಡ್ ರಾಷ್ಟ್ರ ಪ್ರಶಸ್ತಿಗೆ ಮಡಪ್ಪಾಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ ಅವರು ಆಯ್ಕೆ ಆಗಿದ್ದಾರೆ . ಮಂಗಳೂರಿನ ಬೊಕ್ಕಪಟ್ಟಣದ ಅಬ್ಬಕ್ಕ ನೌಕೆಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಹಾರ ನೌಕೆ ಸಾಂಸ್ಕೃತಿಕ ಸೌರಭ ಸಮಾರಂಭದಲ್ಲಿ ವಿಶೇಷ ಗಣ್ಯರ...

ಕುಂಬಳಚೇರಿಯಲ್ಲಿ ಬೈಕ್ ಜೀಪು ಅಪಘಾತ : ಓರ್ವ ಸಾವು – ಇನ್ನೋರ್ವ ಗಂಭೀರ

ಪೆರಾಜೆಯ ಕುಂಬಳಚೇರಿ ಎಂಬಲ್ಲಿ ಬೈಕ್ ಹಾಗೂ ಜೀಪು ಮಧ್ಯೆ ಅಪಘಾತ ನಡೆದು ಬೈಕ್ ನಲ್ಲಿದ್ದ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಹಾಗೂ ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ.ಪೆರಾಜೆಯ ಆರ್.ಡಿ. ವೆಂಕಪ್ಪ ರವರ ಪುತ್ರ ದರ್ಶನ್ ಮತ್ತು ಪೆರಾಜೆಯ ಲೋಕನಾಥ ಕುಂದಲ್ಪಾಡಿ ಅವರ ಪುತ್ರ ವಿಶ್ವದೀಪ್ ಸುಳ್ಯದ ಸೈಂಟ್ ಜೋಸೆಫ್ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿಗಳಾಗಿದ್ದು...

ಅರಂತೋಡು : ಸೊಸೈಟಿ ವತಿಯಿಂದ ರಬ್ಬರ್ ಹಾಗೂ ಗೇರು ಬೀಜ ಖರೀದಿ ಆರಂಭ

ಅರಂತೋಡು-ತೊಡಿಕಾನ ಪ್ರಾಕೃ.ಪ.ಸ.ಸಂಘ ನಿಯಮಿತದ ವತಿಯಿಂದ ಬೆಳ್ತಂಗಡಿ ರಬ್ಬರ್ ಬೆಳೆಗಾರರ ಮತ್ತು ಮಾರಾಟಗಾರರ ಸಹಕಾರ ಸಂಘ ನಿ. ಉಜಿರೆ ಇದರ ಸಹಭಾಗಿತ್ವದಲ್ಲಿ ರಬ್ಬರ್ ಖರೀದಿ ಕೇಂದ್ರ ಹಾಗೂ ಗಣೇಶ್ ಕ್ಯಾಶ್ಯೂಸ್ ಅಡ್ಕಾರ್ ಸಹಕಾರದೊಂದಿಗೆ ಗೇರು ಬೀಜ ಖರೀದಿ ಕೇಂದ್ರ ಮಾ.23 ರಂದು ಶುಭಾರಂಭಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಭಾರತೀಯ ಜನತಾ ಪಾರ್ಟಿ...

ಚೊಕ್ಕಾಡಿ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ರಚನೆ : ಅಧ್ಯಕ್ಷರಾಗಿ ಕೇಶವ ಕರ್ಮಾಜೆ – ಉಪಾಧ್ಯಕ್ಷರಾಗಿ ಪ್ರವೀಣ್ ಎಸ್ ರಾವ್ ಅವಿರೋಧ ಆಯ್ಕೆ

Praveen S. Rao ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕುಕ್ಕುಜಡ್ಕ ಇದರ ಆಡಳಿತ ಮಂಡಳಿಗೆ ಮಾ.7ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು 11 ಸ್ಥಾನಗಳಲ್ಲಿ ಹಾಗು ಬಿಜೆಪಿ ಬಂಡಾಯ ಸ್ವಾಭಿಮಾನಿ ಬಳಗ 2 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಇಂದು ಅಧ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮಾಜಿ ಉಪಾಧ್ಯಕ್ಷ...

ರಾಜ್ಯದ 224 ಕ್ಷೇತ್ರಗಳಿಗೆ ಆಪ್ ಸ್ಪರ್ಧೆ- ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ- ಹಲವಾರು ಮಂದಿ ಪಕ್ಷ ಸೇರ್ಪಡೆ

ಮುಂದಿನ ರಾಜ್ಯ ವಿಧಾನ ಸಭೆ‌ ಚುನಾವಣೆಯಲ್ಲಿ 224 ಸ್ಥಾನಗಳಲ್ಲಿಯೂ ಆಮ್ ಆದ್ಮಿ ಪಾರ್ಟಿ ಸ್ಪರ್ಧೆ ನಡೆಸಲಿದ್ದು ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಆಪ್ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದ್ದಾರೆ. ಸುಳ್ಯಕ್ಕೆ ಆಗಮಿಸಿದ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ‌ ಮಾತನಾಡಿದರು. ಮುಂದಿನ ಮೂರು ತಿಂಗಳಲ್ಲಿ ರಾಜ್ಯ ಪ್ರವಾಸ ಮಾಡಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಆಯ್ಕೆ...

ಹಾಲೆಮಜಲು : ಮ್ಯಾಟ್ ತಯಾರಿಕೆ ಬಗ್ಗೆ ತರಬೇತಿ ಕಾರ್ಯಕ್ರಮ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ)ಸುಳ್ಯ ತಾಲ್ಲೂಕಿನ ಗುತ್ತಿಗಾರು ವಲಯದ ಮೆಟ್ಟಿನಡ್ಕ ಒಕ್ಕೂಟದ ದುರ್ಗಾಪರಮೇಶ್ವರಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ 2 ದಿನಗಳ ಸೃಜನಶೀಲ ತರಬೇತಿ ಕಾರ್ಯಕ್ರಮದಡಿಯಲ್ಲಿ ಮ್ಯಾಟ್ ತಯಾರಿಕೆ ಕಾರ್ಯಕ್ರಮ ಮಾ.20 ರಂದು ವೆಂಕಟೇಶ್ವರ ಸಭಾಭವನ ಹಾಲೆಮಜಲಿನಲ್ಲಿ ಆರಂಭಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ...

ತರುಣ ಘಟಕದ ಆಶ್ರಯದಲ್ಲಿ ಗೌಡ ಕಪ್ ಕ್ರೀಡಾಕೂಟ – ಸನ್ಮಾನ ಕಾರ್ಯಕ್ರಮ

ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘ ಹಾಗೂ ತರುಣ ಘಟಕದ ಆಶ್ರಯದಲ್ಲಿ ಎಂ.ಜಿ.ಎಂ ಮೈದಾನದಲ್ಲಿ ಗೌಡ ಕಪ್ ಕ್ರೀಡಾಕೂಟ ನಡೆಯಿತು. ಮೀನುಗಾರಿಕೆ ಬಂದರು‌ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಿದರು. ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ‌ ಕೋಲ್ಚಾರ್ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಗೌಡ ಯುವ ಘಟಕದ ಅಧ್ಯಕ್ಷ ಅಕ್ಷಯ್.ಕೆ.ಸಿ...

ಮುಖ್ಯಮಂತ್ರಿಗಳಿಂದ ಸಹಕಾರ ರತ್ನ ಪ್ರಶಸ್ತಿ ಸ್ವೀಕರಿಸಿದ ಸೀತಾರಾಮ ರೈ ಸವಣೂರು

ಬೆಂಗಳೂರು : ಕೆಂಗೇರಿ ಉಪನಗರದ ಗಣೇಶ ಮೈದಾನದಲ್ಲಿಂದು ನಡೆದ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಹಕಾರಿ ಹಾಗೂ ಸಾಮಾಜಿಕ ಧುರೀಣ, ವಿದ್ಯಾದಾನಿ ಸವಣೂರು ಸೀತಾರಾಮ ರೈ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ.ದೇವೇಗೌಡ, ಗೃಹ‌ಸಚಿವ...

ಮಡಂತ್ಯಾರು : ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 17ನೇ ಶಾಖೆ ಉದ್ಘಾಟನೆ

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ 17ನೇ ಮಡಂತ್ಯಾರು ಶಾಖೆಯು ಮಡಂತ್ಯಾರು ಕಾಲೇಜು ರಸ್ತೆಯಲ್ಲಿರುವ ಜೆ.ಎಂ.ಜೆ ಕಾಂಪ್ಲೆಕ್ಸ್ ನಲ್ಲಿ ಇಂದು ಉದ್ಘಾಟನೆಗೊಂಡಿತು. ಶಾಸಕ ಹರೀಶ್ ಪೂಂಜರವರು ನೂತನ  ಶಾಖೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಪ್ರಥಮ ಠೇವಣಿ ಪತ್ರವನ್ನು ಮಡಂತ್ಯಾರು ಸಿ.ಎ ಬ್ಯಾಂಕ್‌  ಅಧ್ಯಕ್ಷ ಕೆ.ಅರವಿಂದ್ ಜೈನ್ , ಪ್ರಥಮ ಪಾಲು ಪತ್ರ ವಿತರಣೆಯನ್ನು ಶ್ರೀ...

ರಾಷ್ಟ್ರಮಟ್ಟದ ಪ್ರೈಡ್ ಆಫ್ ಇಂಡಿಯಾ ಅವಾರ್ಡ್ ಗೆ ಡಾ ಅನುರಾಧಾ ಕುರುಂಜಿ ಆಯ್ಕೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕರು, ವಲಯ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರು ನವದೆಹಲಿಯ ಅಚೀವರ್ಸ್ ಅಸೋಸಿಯೇಷನ್ ಫಾರ್ ಹೆಲ್ತ್ ಅಂಡ್ ಎಜ್ಯುಕೇಷನ್ ಗ್ರೋತ್ ಸಂಸ್ಥೆಯವರು ಪ್ರತೀವರ್ಷ ಕೊಡಮಾಡುವ ಪ್ರೈಡ್ ಆಫ್ ಇಂಡಿಯಾ ಅವಾರ್ಡ್ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ 2022 ನೇ ಸಾಲಿನ‌ ಈ...

ಗುತ್ತಿಗಾರು : ಪ್ರಸಾದ್ ರೆಸ್ಟೋರೆಂಟ್ & ಲಾಡ್ಜಿಂಗ್ ಶುಭಾರಂಭ – ಸಚಿವ ಎಸ್. ಅಂಗಾರರಿಂದ ಉದ್ಘಾಟನೆ

ಗುತ್ತಿಗಾರಿನ ಹೃದಯಭಾಗದಲ್ಲಿರುವ ದೇವಿಪ್ರಸಾದ್ ಚಿಕ್ಮುಳಿ ಮಾಲಕತ್ವದ ದೇವಿಸಿಟಿ ಕಾಂಪ್ಲೆಕ್ಸ್ ನಲ್ಲಿ ಪ್ರಸಾದ್ ರೆಸ್ಟೋರೆಂಟ್ ಮತ್ತು ಲಾಡ್ಜಿಂಗ್ ಮಾ.20 ರಂದು ಶುಭಾರಂಭಗೊಂಡಿತು. ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಸಚಿವರಾದ ಎಸ್.ಅಂಗಾರ ದೀಪ ಬೆಳಗಿಸಿ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ.ಕೆ.ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಗುತ್ತಿಗಾರು ಸಹಕಾರಿ ಸಂಘದ ಅಧ್ಯಕ್ಷರಾದ...

ಹರಿಹರ ಪಲ್ಲತ್ತಡ್ಕ : ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ಹರಿಹರ ಪಲ್ಲತ್ತಡ್ಕ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಮಾ.19 ರಂದು 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ರಾಮಚಂದ್ರ ಕಜ್ಜೋಡಿ, ಕೃಪಾ.ಪಿ.ಎಸ್, ಮೇದಪ್ಪ.ಎ, ವೆಂಕಟೇಶ್ ನಾಯಕ್, ವನಿತಾ.ಜಿ, ವೀಣಾ.ಕೆ, ರಶ್ಮಿ ಕಜ್ಜೋಡಿ, ಜಯಶ್ರೀ, ಸೌಮ್ಯ.ಕೆ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.8ನೇ ತರಗತಿಯ ವಿದ್ಯಾರ್ಥಿ ಭುವನೇಶ್ವರ ಸ್ವಾಗತಿಸಿ ಧನ್ಯವಾದ...

ಖ್ಯಾತ ವಾಸ್ತು ತಜ್ಞ ಮಹೇಶ್ ಮುನಿಯಂಗಳರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

ಸುಬ್ರಹ್ಮಣ್ಯದ ಖ್ಯಾತ ವಾಸ್ತು ತಜ್ಞ, ಸಾವಿರಾರು ದೇವಸ್ಥಾನಗಳ ವಾಸ್ತು ಶಿಲ್ಪಿ ಮಹೇಶ ಮುನಿಯಂಗಳ ಅವರಿಗೆ ಮಾ.19 ರಂದು ತಮಿಳುನಾಡಿನ ಹೊಸೋರು ನಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಚೆನ್ನೈನ ಏಶಿಯನ್ ವೇದಿಕ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ಕೊಡಮಾಡಿದೆ. ಮಹೇಶ್ ಮುನಿಯಂಗಳ ಅವರು ಬಿಳಿನೆಲೆ ಗ್ರಾಮದ ಕೈಕಂಬದ ಗೋಪಾಲಿಯವರು. ಮೂಲತಹ ಕಾಸರಗೋಡು ಕಾನತ್ತೂರಿನ...

ಹಿರಿಯ ರಾಜಕೀಯ ನೇತಾರ ದುರ್ಗಾದಾಸ್ ಮಲ್ಲಾರ ನಿಧನ

ತಾಲೂಕು ಬೋರ್ಡ್ ಮಾಜಿ ಸದಸ್ಯ, ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯ, ಮಂಡಲ ಪಂಚಾಯತ್ ಮಾಜಿ ಸದಸ್ಯ, ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಹರಿಹರ ಪಲ್ಲತ್ತಡ್ಕ ಮದ್ಯಮುಕ್ತ ಹೋರಾಟ ಸಮಿತಿ ಅಧ್ಯಕ್ಷರಾದ ದುರ್ಗಾದಾಸ್ ಮಲ್ಲಾರ ಅವರು ಮಾ.18 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯಕ್ಕೆ ಒಳಗಾದ ಅವರನ್ನು...

ಎನ್ನೆಂಸಿ: ಗ್ಲೋಬಲ್ ರಿಸೈಕ್ಲಿಂಗ್ ಡೇ ಆಚರಣೆ – ವಸ್ತುಗಳ ಮರುಬಳಕೆಯ ಮೂಲಕ ತ್ಯಾಜ್ಯದ ನಿವಾರಣೆ ಹಾಗೂ ಸಂಪನ್ಮೂಲದ ಉಳಿಕೆ : ಬಾಲಕೃಷ್ಣ ಬೊಳ್ಳೂರು

ವಸ್ತುಗಳ ಬಳಕೆಯಿಂದ ಉಂಟಾಗುವ ತ್ಯಾಜ್ಯಗಳು ಸಮಸ್ಯೆಯಾಗಿ ಪರಿಣಮಿಸುತ್ತವೆ, ಅದರ ಮರುಬಳಕೆಯಿಂದ ತ್ಯಾಜ್ಯದ ನಿವಾರಣೆಯ ಜೊತೆಗೆ ಸಂಪನ್ಮೂಲದ ಉಳಿಕೆಯಾಗುತ್ತದೆ.ಯಾವುದೇ ವಸ್ತುಗಳ ಬಳಕೆ ಮಾಡುವ ಸಂದರ್ಭದಲ್ಲಿ ಅದರ ತ್ಯಾಜ್ಯವನ್ನು ಮರು ಬಳಕೆ ಮಾಡುವುದನ್ನು ತಿಳಿದಿರಬೇಕು ಎಂದು ಕೆವಿಜಿ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಬೊಳ್ಳೂರು ಅಭಿಪ್ರಾಯಪಟ್ಟರು.ಅವರು ಮಾರ್ಚ್ 18 ರಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕಾಲೇಜಿನ‌...

ಸಹಕಾರಿ ಧುರೀಣ ಸೀತಾರಾಮ ರೈ ಸವಣೂರು ಅವರಿಗೆ ಸಹಕಾರ ರತ್ನ ಪ್ರಶಸ್ತಿ

ಹಿರಿಯ ಸಹಕಾರಿ ಧುರೀಣ ಹಾಗೂ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಕೆ. ಸೀತಾರಾಮ ರೈ ಸವಣೂರು ಇವರಿಗೆ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿ ಲಭಿಸಿದೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕರು ಈ ವಿಚಾರವನ್ನು ಪ್ರಕಟಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾ.20 ರಂದು ಬೆಂಗಳೂರಿನ ಕೆಂಗೇರಿ ಉಪನಗರದ ಗಣೇಶ...

ಸಂಪಾಜೆ : ಹೊಳೆಗೆ ಉರುಳಿ ಬಿದ್ದ ಬಸ್ – ಹಲವಾರು ಮಂದಿಗೆ ಗಾಯ

ಸಂಪಾಜೆ ಗಡಿಕಲ್ಲು ಬಳಿ ಸರಕಾರಿ ಬಸ್ಸು ರಸ್ತೆಯ ಬದಿಯ ಹೊಳೆಗೆ ಉರುಳಿ ಬಿದ್ದಿದ್ದು ಬಸ್ಸಲ್ಲಿದ್ದ ಹಲವಾರು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ತಂದು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಬಸ್ ನ ಎದುರಿನ ಟಯರ್ ಒಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಮಾ.20: ವೆಂಕಟರಮಣ ಸೊಸೈಟಿಯ 17ನೇ ಮಡಂತ್ಯಾರು ಶಾಖೆ ಉದ್ಘಾಟನೆ

ಬೆಳ್ತಂಗಡಿ: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ 17ನೇ ಮಡಂತ್ಯಾರು ಶಾಖೆಯು ಮಡಂತ್ಯಾರು ಕಾಲೇಜು ರಸ್ತೆಯಲ್ಲಿರುವ ಜೆ.ಎಂ.ಜೆ ಕಾಂಪ್ಲೆಕ್ಸ್ ನಲ್ಲಿ ಮಾ.20ರಂದು ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮರವರು ತಿಳಿಸಿದರು. ಅವರು ಮಾ.16ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 1997ರಲ್ಲಿ ಗೌಡರ ಸೇವಾ ಸಂಘ ಸುಳ್ಯ ಇವರಿಂದ ಪ್ರವರ್ತಿಸಲ್ಪಟ್ಟ ನಮ್ಮ...

ಮಾ.18-19 ರಂದು ಮಾವಿನಕಟ್ಟೆಯಲ್ಲಿ ಒತ್ತೆಕೋಲ ಮಹೋತ್ಸವ

ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ದೈವದ ಒತ್ತೆಕೋಲ ಮಹೋತ್ಸವ ಮಾ.18 ಮತ್ತು 19 ರಂದು ನಡೆಯಲಿದೆ.ಮಾ.18 ರಂದು ಬೆಳಿಗ್ಗೆ ಗಂಟೆ 6 ರಿಂದ ಗಣಪತಿ ಹವನ, 7 ಗಂಟೆಗೆ ಮೇಲೆರಿ ಕಾರ್ಯಕ್ರಮ, 8.30 ಕ್ಕೆ ಅಶ್ವತ್ಥ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಗಂಟೆ 7ಕ್ಕೆ ಭಂಡಾರ ತೆಗೆಯುವುದು, ಮೇಲೇರಿಗೆ ಅಗ್ನಿ ಸ್ಪರ್ಶ, ಸಾರ್ವಜನಿಕ...

ಅರಂತೋಡು : ಹೆಚ್.ಪಿ‌. ಕಂಪೆನಿಯ ಆರ್.ಡಿ. ಪ್ಯೂಯಲ್ ಸ್ಟೇಷನ್ ಲೋಕಾರ್ಪಣೆ

ಮಾಣಿ- ಮೈಸೂರು ಹೆದ್ದಾರಿಯ ಅರಂತೋಡು ಸಮೀಪ ಹರಿಶ್ಚಂದ್ರ ಹೊದ್ದೆಟ್ಟಿ ಹಾಗೂ ಡಾ.ಸವಿತಾ ಸಿ.ಕೆ. ಮಾಲಕತ್ವದ ರಾಮ್ ದೇವಿ ಪ್ಯೂಯಲ್ ಸ್ಟೇಷನ್ ಮಾ. 13ರಂದು ಲೋಕಾರ್ಪಣೆಗೊಂಡಿತು. ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕ ಅಕ್ಷಯ್ ಕೆ.ಸಿ. ಸಂಸ್ಥೆಯನ್ನು ಉದ್ಘಾಟಿಸಿದರು. ಅರಂತೋಡು ಸೊಸೈಟಿ ಮಾಜಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ನಿವೃತ್ತ ಪೊಲೀಸ್ ಅಧಿಕಾರಿ ಕುಸುಮಾಧರ ಕುಂಬ್ಲಾಡಿ ಮತ್ತು...

ಕೊಲ್ಲಮೊಗ್ರ : ಆನೆ ದಾಳಿ, ವಿದ್ಯಾರ್ಥಿಗೆ ಗಂಭೀರ ಗಾಯ

ಕೊಲ್ಲಮೊಗ್ರ ಗ್ರಾಮದ ಇಡ್ನೂರು ಬಳಿ ಆನೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸುಳ್ಯದ ಕಾಲೇಜು ವಿದ್ಯಾರ್ಥಿಯಾಗಿರುವ ಗುರುಪ್ರಸಾದ್ ಕೋನಡ್ಕ ತನ್ನ ಬೈಕ್ ನಲ್ಲಿ ಇಡ್ನೂರು ಬಳಿ ಡೈರಿಗೆ ಹಾಲು ತೆಗೆದುಕೊಂಡು ಬರುವ ಸಮಯದಲ್ಲಿ ಆನೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ. ಅದೇ ದಾರಿಯಲ್ಲಿ ಅಡಿಕೆ ತೆಗೆಯಲು ತೆರಳುತ್ತಿದ್ದ ದೊಡ್ಡಣ್ಣ ಕೊಂದಾಳ...

ಗೂನಡ್ಕ : ಮೀಸಲು ಅರಣ್ಯ ಜಾಗದಲ್ಲಿ ಕಟ್ಟಿದ ಮಸೀದಿ ತೆರವುಗೊಳಿಸಲು ಹಿಂಜಾವೇ ಒತ್ತಾಯ – ವಲಯ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧಾರ

ಸುಳ್ಯ ತಾಲೂಕಿನ ಸಂಪಾಜೆ ಮೀಸಲು ಅರಣ್ಯ ಪ್ರದೇಶವಾದ ಗೂನಡ್ಕ ಎಂಬಲ್ಲಿ ಮೀಸಲು ಅರಣ್ಯದ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡು ಅಕ್ರಮ ಮದರಸ ಮತ್ತು ದಫನಭೂಮಿಯನ್ನು ನಿರ್ಮಿಸಿದ್ದು, ಅದನ್ನು ೧ ತಿಂಗಳ ಒಳಗೆ ತೆರವುಗೊಳಿಸಬೇಕು. ಇಲ್ಲದೇ ಇದ್ದಲ್ಲಿ ಸುಳ್ಯ ವಲಯ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ...

ಕೇಸರಿ ಶಾಲು ಧಾರ್ಮಿಕ ಸಮಾರಂಭಗಳಲ್ಲಿ ಮಾತ್ರವಿರಲಿ, ರಾಜಕೀಯದಲ್ಲಿ ಬೇಡ – ಎನ್ ಜಯಪ್ರಕಾಶ್ ರೈ

ಚೊಕ್ಕಾಡಿ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಕಾವಿ ಬಳಸಿ ಮತ ಕೇಳಿದ್ದ ವಿಚಾರದ ಕುರಿತು ಕಾಂಗ್ರೆಸ್ ಮುಖಂಡ ಜಯಪ್ರಕಾಶ್ ರೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಅವರು ಮಾ.12 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೇಸರಿ ಶಾಲ್ ನ್ನು ಸ್ವಾರ್ಥಕ್ಕೆ ಬಳಸಬೇಡಿ. ಸಹಕಾರಿ ಸಂಘದ ಚುನಾವಣೆಯಲ್ಲಿ ಬಳಸಿದ್ದು ಸರಿಯಲ್ಲ. ಏಕೆಂದರೆ ಕಾವಿ ಮತ್ತು ಭಗವದ್ಗೀತೆ ಇವೆರಡು ಹಿಂದುತ್ವದಲ್ಲಿ ಪವಿತ್ರವಾದದ್ದು ಎಂದರು....

ರಾಜ್ಯ ಮಟ್ಟದ ಕಲಾ ಸಿರಿ ರತ್ನ ಪ್ರಶಸ್ತಿ ಪಡೆದ ಸುಳ್ಯದ ನಾಟ್ಯ ಶಾರದೆ ಶ್ರೇಯಾ ಮೇರ್ಕಜೆ

ಬಾಲ್ಯದಲ್ಲಿಯೇ ನೃತ್ಯದ ಕಡೆಗೆ ಆಸಕ್ತಿಯನ್ನು ಹೊಂದಿದ್ದ ಶ್ರೇಯಾ ಎಮ್ ಜಿ ಮೇರ್ಕಜೆ ಇವರಿಗೆ ಬೆಂಗಳೂರಿನ ಟಿ ದಾಸರಹಳ್ಳಿ ಜನಸ್ಪಂದನ ಟ್ರಸ್ಟ್ ವತಿಯಿಂದ ಕಲಾ ಸಿರಿ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ 5ನೇ ವರ್ಷದ ಟ್ರಸ್ಟಿನ ವಾರ್ಷಿಕೋತ್ಸವದ ಪ್ರಯುಕ್ತ ಸಾಂಕೃತಿಕ ಸಂಗೀತ,ನೃತ್ಯ,ನಟನೆ ,ಯೋಗ ಭರತನಾಟ್ಯ ಇವರ ಎಲ್ಲ ಟ್ಯಾಲೆಂಟ್‌ ಗಳನ್ನ ಗುರುತಿಸಿ...

ರಾಜ್ಯಮಟ್ಟದ ಪ್ರಶಸ್ತಿ ಗೆದ್ದ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ – ಕರ್ನಾಟಕ ಸ್ಟೇಟ್ ಜುವೆಲ್ಲರ್ಸ್ ಫೆಡರೇಶನ್ ನಿಂದ ಬೆಸ್ಟ್ ಜ್ಯುವೆಲ್ಲರಿ ರಿಟೈಲ್ ಸ್ಟೋರ್’ ಪ್ರಶಸ್ತಿ

ಪುತ್ತೂರು : ಚಿನ್ನಾಭರಣಗಳ ವ್ಯವಹಾರದಲ್ಲಿ ಗ್ರಾಹಕರ ವಿಶ್ವಾಸ ಮತ್ತು ಪ್ರೀತಿಗೆ ಪಾತ್ರವಾಗಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಮುಡಿಗೆ ಇನ್ನೊಂದು ಪ್ರಶಸ್ತಿ ಕಿರೀಟ ಮುಡಿಗೇರಿದೆ. ಕರ್ನಾಟಕ ಸ್ಟೇಟ್ ಜ್ಯುವೆಲ್ಲರ್ಸ್ ಫೆಡರೇಶನ್ (ಕೆ.ಜೆ.ಎಫ್.) ಕೊಡಮಾಡುವ ‘ಬೆಸ್ಟ್ ಜ್ಯುವೆಲ್ಲರಿ ರಿಟೈಲ್ ಸ್ಟೋರ್, ಕರ್ನಾಟಕ ಪ್ರಶಸ್ತಿಗೆ ಪಾತ್ರವಾಗಿದ್ದು, ಮಲ್ಟಿಪಲ್ ಸ್ಟೋರ್ ವಿಭಾಗದಲ್ಲಿ ರಾಜ್ಯದ ಬೆಸ್ಟ್ ಜ್ಯುವೆಲ್ಲರಿ ಎಂಬ ಹೆಗ್ಗಳಿಕೆಗೆ ಜಿ ಎಲ್...

ಕೋಳಿ ಸಾಕಾಣಿಕೆದಾರರಿಗೆ ಸಿಹಿ ಸುದ್ದಿ – ಬೇಸಿಗೆಯಲ್ಲಿ ಕೋಳಿಗಳು ಸಾಯುವುದನ್ನು ತಡೆಗಟ್ಟಲು ಬಳಸಿ ಫಿನಿಶರ್ ಟಾನಿಕ್

ಕುಕ್ಕುಟೋದ್ಯಮಕ್ಕೆ ಹೆಚ್ಚು ಜನ ಆಸಕ್ತಿ ವಹಿಸುತ್ತಿರುವುದು ಕಾಣಸಿಗುತ್ತಿದೆ. ಈ ಬೇಸಿಗೆಯ ಸಂದರ್ಭದಲ್ಲಿ ಕೋಳಿ ಜಾಗರುಕತೆ ವಹಿಸಬೇಕಾಗಿದೆ. ಅದಕ್ಕೆಂದೆ ಬೆಳೆಗಾರರಿಗೆ ಸಿಹಿ ಸುದ್ದಿಯೊಂದು ಕೇಳಿ ಬಂದಿದೆ. ಫಾರಂ ಗಳಲ್ಲಿ ಅಧಿಕ ಉಷ್ಣಾಂಶದಿಂದಾಗಿ ಕೋಳಿ ಹಾಗೂ ಮರಿ ಕೋಳಿಗಳು ಸಾವನ್ನಪ್ಪುವುದರಿಂದ ಈ ಸಮಯ ಸಾಕಾಣಿಕೆ ಮಾಡಲು ಹಿಂಜರಿಯುತ್ತಾರೆ. ಇದನ್ನು ಮನಗಂಡು ದಕ್ಷಿಣ ಭಾರತದ ಹೆಸರಾಂತ ಕೋಳಿ ಔಷಧಿ ಮಾರಾಟ...

ಕಡಬ : ಹಳೆನೆರೆಂಕಿ ದೇವಸ್ಥಾನದಲ್ಲಿ ಭಜನೆ ಹಾಡುವ ಮೂಲಕ ಸರಳತೆಗೆ ಸಾಕ್ಷಿಯಾದ ಸಚಿವ ಅಂಗಾರ

ಕಡಬದ ಹಳೆನೆರೆಂಕಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರಿಗೆ ನೂತನ ಪ್ರಾಕಾರ ಹಾಗೂ ಚಂದ್ರಮಂಡಲ ಸಮರ್ಪಣೆ ಹಾಗೂ ವರ್ಷಾವಧಿ ಉತ್ಸವಗಳು ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಸಚಿವರಾದ ಎಸ್.ಅಂಗಾರರವರು ಭೇಟಿ ನೀಡಿದರು.‌ ಆ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮದಲ್ಲಿ ಸಚಿವರೇ ಭಜಕರ ಜೊತೆಗೆ ಕುಳಿತು ಭಜನೆಯನ್ನು ಹಾಡಿದರು. ಆ ಮೂಲಕ ಊರವರ ಮೆಚ್ಚುಗೆಗೆ ಪಾತ್ರರಾದರು.

ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆ: ಆಸ್ಪತ್ರೆಯ ಶವಾಗಾರ ಅಭಿವೃದ್ಧಿ, ಶೀತಲೀಕರಣ ಘಟಕ ಸ್ಥಾಪನೆಗೆ ಬೇಡಿಕೆ ಸಲ್ಲಿಸಲು ನಿರ್ಧಾರ

ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆ ಮಾ.6 ರಂದು ಆಸ್ಪತ್ರೆಯಲ್ಲಿ ನಡೆಯಿತು. ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ನಡೆದ‌ ಸಭೆಯಲ್ಲಿ ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿ ಬಗ್ಗೆ ವಿಸ್ತೃತವಾದ ಚರ್ಚೆ ನಡೆಸಲಾಯಿತು. ಆಸ್ಪತ್ರೆಯ ಶವಾಗಾರ ಅಭಿವೃದ್ಧಿ ಪಡಿಸಲು ಮತ್ತು ಶವಾಗಾರದಲ್ಲಿ ಶೀತಲೀಕರಣ ಘಟಕ ಸ್ಥಾಪನೆ ಮಾಡಲು...

ಐವರ್ನಾಡು : ಪಾಲೆಪ್ಪಾಡಿ ಡಾಮರೀಕರಣ ಕಾಮಗಾರಿಗೆ ಗುದ್ದಲಿಪೂಜೆ – ಕಾಂಕ್ರೀಟ್ ರಸ್ತೆ ಉದ್ಘಾಟನೆ

ಪಾಲೆಪ್ಪಾಡಿ ಐವರ್ನಾಡು ರಸ್ತೆಯಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ಡಾಮರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ 30 ಲಕ್ಷದಲ್ಲಿ ಕಾಂಕ್ರೀಟಿಕರಣಗೊಂಡ ರಸ್ತೆಯ ಉದ್ಘಾಟನೆ ಕಾರ್ಯಕ್ರಮ ಮಾ.6 ರಂದು ನಡೆಯಿತು. ಬಂದರು,ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷ ಎಸ್. ಎನ್. ಮನ್ಮಥ,...

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷರಾಗಿ ಡಾ. ಕೆ.ವಿ. ಚಿದಾನಂದ ಪುನರಾಯ್ಕೆ – ನೂತನ ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷಯ್ ಕೆ.ಸಿ.

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ 2020-21 ರ ಸಾಲಿನ ವಾರ್ಷಿಕ ಮಹಾಸಭೆಯು ಮಾ.4 ರಂದು ಕೆ.ವಿ.ಜಿ.ಮೆಡಿಕಲ್ ಕಾಲೇಜಿನಲ್ಲಿರುವ ಅಕಾಡೆಮಿ ಪ್ರಧಾನ ಕಾರ್ಯಾಲಯದಲ್ಲಿ ನಡೆಯಿತು. ಅಕಾಡೆಮಿ ಅಧ್ಯಕ್ಷ ಡಾ. ಕೆ. ವಿ. ಚಿದಾನಂದರವರು ಸಭೆಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ 2020-21ರ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿ ಸಭೆಯ ಅನುಮೋದನೆ...

ಕಲ್ಲುಗುಂಡಿ: ಜುಡನ್ ಗ್ರೂಪ್ಸ್ ಶುಭಾರಂಭ – ಗಾರ್ಮೆಂಟ್ಸ್, ಗೋಲ್ಡನ್ ಕೀ ಕನ್ಸ್ಟ್ರಕ್ಷನ್ ಹಾಗೂ ಯೂನಿವರ್ಸಲ್ ಮಾರ್ಕೆಟಿಂಗ್‌ ಹಾಗೂ ಎಸ್.ಬಿ.ಜೆ ಸ್ಲಿಪ್ಪರ್ ಪ್ರೊಡಕ್ಷನ್‌ ಉದ್ಘಾಟನೆ

ಕಲ್ಲುಗುಂಡಿಯಲ್ಲಿ ಜುಡನ್ ಗ್ರೂಪ್ಸ್ ನವರ ಗಾರ್ಮೆಂಟ್ಸ್, ಗೋಲ್ಡನ್ ಕೀ ಕನ್ಸ್ಟ್ರಕ್ಷನ್ ಹಾಗೂ ಯೂನಿವಸರ್ಲ್ ಮಾರ್ಕೆಟಿಂಗ್‌ ಹಾಗೂ ಎಸ್.ಬಿ.ಜೆ ಸ್ಲಿಪ್ಪರ್ ಪ್ರೊಡಕ್ಷನ್‌ ಉದ್ಘಾಟನಾ ಸಮಾರಂಭವು ಮಾ.3ರಂದು ನಡೆಯಿತು. ಜುಡನ್ ಗಾರ್ಮೇಂಟ್ಸ್, ಗೋಲ್ಡನ್ ಕೀ ಕನ್ಟ್ರಕ್ಷನ್ ಹಾಗೂ ಯೂನಿವರ್ಸಲ್ ಮಾರ್ಕೆಟಿಂಗ್‌ನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಲಾರೆನ್ಸ್ ಮುಕುಝಿರವರು ರಿಬ್ಬನ್ ಕಟ್ಟಿಂಗ್ ಮೂಲಕ ಶುಭಾರಂಭಗೊಳಿಸಿದರು. ಹಾಗೂ ಎಸ್.ಬಿ.ಜೆ ಸ್ಲಿಪ್ಪರ್ ಪ್ರೊಡಕ್ಷನ್‌ನನ್ನು...

ಐವರ್ನಾಡು : ಕಟ್ಟಿಂಗ್ ಮೆಷಿನ್ ತಾಗಿ ಕಾರ್ಮಿಕ ಮೃತ್ಯು

ಕಟ್ಟಿಂಗ್ ಮೆಷಿನ್ ತಾಗಿ ಗಂಭೀರ ಗಾಯಗೊಂಡು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಇಂದು ಐವರ್ನಾಡಿನಿಂದ ವರದಿಯಾಗಿದೆ. ಐವರ್ನಾಡು ನಾಟಿಕೇರಿ ನಿವಾಸಿ ದಯಾನಂದ (36) ಮೃತಪಟ್ಟ ದುರ್ದೈವಿ. ಕಟ್ಟಿಂಗ್ ಮೆಷಿನ್ ತೊಡೆಯ ಭಾಗಕ್ಕೆ ತಾಗಿ ಗಂಭೀರ ಗಾಯಗೊಂಡ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಕ್ತಸ್ರಾವದಿಂದ ಮೃತಪಟ್ಟರೆಂದು ತಿಳಿದುಬಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸವಿನ್ ಚಾಂತಾಳರಿಗೆ ಡಾಕ್ಟರೇಟ್

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಯಲ್ಲಿ ಉಪನ್ಯಾಸಕನಾಗಿರುವ ಸವಿನ್ ಸಿ. ಜಿ. ಯವರು ಮಂಡಿಸಿದ ಸಂಶೋಧನಾ ಪ್ರಬಂಧ ‘ Evaluation of hepatoprotecive activity of tuber extract of plant Actinoscitpus grossus (L. F.) Goetgh & D. A Simpson in wistar albino rats’ ಎಂಬ ವಿಷಯಕ್ಕೆ ಪ್ರತಿಷ್ಠಿತ...

ಸುಬ್ರಹ್ಮಣ್ಯ : ಭಾರತೀಯ ಸಂಸ್ಕಾರ ಸಿಂಧು ಕಾರ್ಯಕ್ರಮದ ಪೂರ್ವಭಾವಿ ಸಭೆ

ಸುಬ್ರಹ್ಮಣ್ಯದ ಪದವಿಪೂರ್ವ ಕಾಲೇಜಿನಲ್ಲಿ ಮಾ.05 ಮತ್ತು 06 ರಂದು ಭಾರತೀಯ ಸಂಸ್ಕಾರ ಸಿಂಧು ಕಾರ್ಯಕ್ರಮ ನಡೆಯಲಿದ್ದು, ಪೂರ್ವಭಾವಿ ಸಭೆ ಫೆ.27 ರಂದು ಸುಬ್ರಹ್ಮಣ್ಯದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಭಾರತೀಯ ಸಂಸ್ಕಾರ ಸಿಂಧು ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ, ಭಾರತೀಯ ಸಂಸ್ಕಾರ ಸಿಂಧು ಸಂಯೋಜಕಿ ಹರಿಣಿ ಪುತ್ತೂರಾಯ, ಭಾರತೀಯ ಸಂಸ್ಕಾರ ಸಿಂಧು ಶಿಬಿರದ ಸಂಪರ್ಕ ಪ್ರಮುಖ್ ಶ್ರೀಮತಿ ಸುಭಾಷಿಣಿ...

ಮಹಶೀರ್ ಮತ್ಸ್ಯ ರೈತ ಉತ್ಪಾದಕ ಕಂಪೆನಿ ನೂತನ ಆಡಳಿತ ಮಂಡಳಿ ರಚನೆ : ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ- ಉಪಾಧ್ಯಕ್ಷ ಸುರೇಶ್ ಕಣೆಮರಡ್ಕ

ಕರ್ನಾಟಕ ಸರಕಾರದ ಮೀನುಗಾರಿಕಾ ಇಲಾಖೆಯ ನೇತೃತ್ವದಲ್ಲಿ ಫೆ. 11 ರಂದು ಮೀನುಗಾರಿಕಾ ಸಚಿವರಾದ ಎಸ್. ಅಂಗಾರರವರ ಸುಳ್ಯದ ಕಛೇರಿಯಲ್ಲಿ ನಡೆದ ಸಭೆಯಲ್ಲಿ "ಮಹಶೀರ್ ಮತ್ಸ್ಯ ರೈತ ಉತ್ಪಾದಕ ಕಂಪೆನಿ ಲಿಮಿಟೆಡ್” ಇದರ ನೂತನ ಆಡಳಿತ ಮಂಡಳಿಯ ರಚನೆ ನಡೆಯಿತು. ಅಧ್ಯಕ್ಷ,ಉಪಾಧ್ಯಕ್ಷ ಹಾಗೂ ನಿರ್ದೇಶಕರುಗಳಾಗಿ 11 ಜನರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹೇಶ್‌ ಕುಮಾರ್‌ ಮೇನಾಲ, ಉಪಾಧ್ಯಕ್ಷರಾಗಿ...

ರೈತರ ಪಹಣಿ ಪತ್ರಗಳಲ್ಲಿ ಬೆಳೆಗಳ ವಿವರ ದಾಖಲೀಕರಣವಾಗದೇ ರೈತರಿಗೆ ತೊಂದರೆ – ಶೀಘ್ರ ಸರಿಪಡಿಸುವಂತೆ ಕಂದಾಯ ಸಚಿವರಿಗೆ ಎ.ಪಿ.ಎಂ.ಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಮನವಿ

ರೈತರ ಪಹಣಿ ಪತ್ರಗಳಲ್ಲಿ ಬೆಳೆಗಳ ವಿವರ ದಾಖಲೀಕರಣವಾಗದೇ ರೈತರಿಗೆ ತೊಂದರೆ ಆಗಿದ್ದು ಶೀಘ್ರ ಸರಿಪಡಿಸುವಂತೆ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಎ.ಪಿ.ಎಂ.ಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಮನವಿ ಸಲ್ಲಿಸಿದ್ದಾರೆ.‌ಮಡಪ್ಪಾಡಿ ಗ್ರಾಮದಲ್ಲಿ ಸುಮಾರು 650 ಜನಕ್ಕಿಂತಲೂ ಹೆಚ್ಚು ಪಹಣಿ ಖಾತೆಗಳನ್ನು ಹೊಂದಿ ಸುಮಾರು 1500 ರಷ್ಟು ಪಹಣಿ ಪತ್ರಗಳಿರುತ್ತವೆ. ಇದೀಗ ಬೆಳೆ ಸಮೀಕ್ಷೆ ಆ್ಯಪ್‌ಗಳ ಮುಖಾಂತರ...

ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಈಶ್ವರಪ್ಪ ಅಧಿಕಾರದಿಂದ ಕೆಳಗಿಳಿಯಲಿ- ಪಿ.ಸಿ ಜಯರಾಮ್

ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಗ್ರಾಮಿಣ ಅಭಿವೃದ್ಧಿ ಸಚಿವ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಫೆ. 21 ರಂದು ಬೆಳಗ್ಗೆ 10 ಗಂಟೆಗೆ ಖಾಸಗಿ ಬಸ್ ನಿಲ್ದಾಣದ ಬಳಿ ಕಾಂಗ್ರೆಸ್ ಪಕ್ಷದ ಧ್ವಜ ಹಾಗೂ ರಾಷ್ಟ್ರ ಧ್ವಜ ಹಿಡಿದು ಪ್ರತಿಭಟನೆಯನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಮಾಡಲಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಪಕ್ಷದ...

ಮಡಪ್ಪಾಡಿ : ಎಳುವೆ ಸೇತುವೆ ಕಾಮಗಾರಿಗೆ ಸಚಿವರಿಂದ ಗುದ್ದಲಿಪೂಜೆ

ಮಳೆಗಾಲದಲ್ಲಿ ದ್ವೀಪದಂತಾಗುತ್ತಿದ್ದ ಮಡಪ್ಪಾಡಿ ಗ್ರಾಮದ ಎಳುವೆ ಭಾಗದ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ಸೇತುವೆ ನಿರ್ಮಾಣ ಕಾಮಗಾರಿಗೆ ಸಚಿವ ಎಸ್ ಅಂಗಾರ ಫೆ.17 ರಂದು ಚಾಲನೆ ನೀಡಿದರು. ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಕಡ್ಯ ಹೊಳೆಗೆ ಎಳುವೆ ಬಳಿ ಸೇತುವೆ ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಸುಳ್ಯ ಬಿಜೆಪಿ ಮಂಡಲ...

ಆಲೆಟ್ಟಿ : ಆನೆ ದಾಳಿಗೆ ಕೃಷಿ ಹಾನಿ – ಅಪಾರ ನಷ್ಟ

ಆಲೆಟ್ಟಿ ಗ್ರಾಮದ ಗುತ್ತಿನಡ್ಕ ಸುಬ್ರಾಯ ಭಟ್ ಎಂಬವರ ತೋಟಕ್ಕೆ ಫೆ.17 ರಂದು ರಾತ್ರಿ ಕಾಡಾನೆ ದಾಳಿ ಮಾಡಿದ್ದು ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಅಡಿಕೆ, ತೆಂಗು ಹಾಗೂ ಬಾಳೆ ಗಿಡಗಳಿಗೆ ಅಪಾರ ಹಾನಿಯಾಗಿದೆ.

ಕಳಂಜ : ಕುಕ್ಕರ್ ಸ್ಪೋಟ – ಎತ್ತರಕ್ಕೆ ಚಿಮ್ಮಿದ ಕುಕ್ಕರ್ ಮುಚ್ಚಳ- ಅಪಾಯದಿಂದ ಪಾರಾದ ಗೃಹಿಣಿ

ಕುಕ್ಕರ್ ಸ್ಪೋಟಗೊಂಡು ಗೃಹಿಣಿಯೊಬ್ಬರು ಅಪಾಯದಿಂದ ಪಾರಾದ ಘಟನೆ ಫೆ. 17ರಂದು ಕಳಂಜ ಗ್ರಾಮದಲ್ಲಿ ನಡೆದಿದೆ. ಕಳಂಜ ಗ್ರಾಮದ ಕಿಲಂಗೋಡಿಯ ವಾಸುದೇವ ಆಚಾರ್ಯರ ಮನೆಯಲ್ಲಿ ಕುಕ್ಕರ್ ಸ್ಪೋಟಗೊಂಡಿರುವುದಾಗಿದೆ. ಶ್ರೀಮತಿ ಸುಮಾ ವಿ. ಆಚಾರ್ಯರು ಅಪಾಯದಿಂದ ಪಾರಾದ ಗೃಹಿಣಿ. ಬೆಳಗ್ಗಿನ ಉಪಹಾರಕ್ಕೆ ಕುಕ್ಕರ್ ನಲ್ಲಿ ಪಲಾವ್ ಇಟ್ಟಿದ್ದರು. ಕುಕ್ಕರ್ ನಲ್ಲಿ ಒಂದು ವಿಷಲ್ ಆಗುವಷ್ಟು ಹೊತ್ತಿಗೆ ಹೊರಗಿನಿಂದ ಯಾರೋ...

ಸುಳ್ಯ : ನ.ಪಂ.ನಾಮನಿರ್ದೇಶನ ಸದಸ್ಯರಾಗಿ ಬೂಡು ರಾಧಾಕೃಷ್ಣ ರೈ, ರೋಹಿತ್ ಕೊಯಿಂಗೋಡಿ, ಯತೀಶ್ ಬೀರಮಂಗಲ ನೇಮಕ

ಸುಳ್ಯ ನಗರ ಪಂಚಾಯತ್‌ಗೆ 3 ಮಂದಿ ನಾಮನಿರ್ದೇಶನ ಸದಸ್ಯರನ್ನು ನೇಮಕ ಮಾಡಿ ಸರಕಾರ ಆದೇಶ ನೀಡಿದೆ. ಬೂಡು ರಾಧಾಕೃಷ್ಣ ರೈ, ರೋಹಿತ್ ಕೊಯಿಂಗೋಡಿ, ಯತೀಶ್ ಬೀರಮಂಗಲ ಅವರನ್ನು ನಗರ ಪಂಚಾಯತ್ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಕಳೆದ ನಗರ ಪಂಚಾಯತ್ ಚುನಾವಣೆಯಲ್ಲಿ ಬೂಡು ರಾಧಾಕೃಷ್ಣ ರೈ, ರೋಹಿತ್ ಕೊಯಿಂಗೋಡಿ ಮತ್ತು ಯತೀಶ್ ಬೀರಮಂಗಲ ಅವರು ಸ್ಪರ್ಧಿಸಿದ್ದರು.

ಸುಳ್ಯ : ಅಡಿಕೆ ಖರೀದಿಸಿ ಚೆಕ್ ನೀಡಿ ವಂಚಿಸಿದ ಆರೋಪಿಗೆ ಶಿಕ್ಷೆ

ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಆರೋಪಿಗೆ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯ ಶಿಕ್ಷೆ ನೀಡಿ ಆದೇಶಿಸಿದೆ. ದುಗಲಡ್ಕ ನಿವಾಸಿ ಸುಳ್ಯದ ಮರದ ವ್ಯಾಪಾರಿ ಮಹಮ್ಮದ್ ಅಶ್ರಫ್ ಎಂಬವರು ದಿನಾಂಕ 01/01/2019 ರಂದು ನೆಲ್ಲೂರು ಕೆಮ್ರಾಜೆ ಗ್ರಾಮದ ಜಬಳೆ ಸೋಮಶೇಖರ್‌ ನಾಯಕ್ ಎಂಬವರ ಮನೆಗೆ ಪಿಕಪ್ ವಾಹನದಲ್ಲಿ ಧಾವಿಸಿ, ಸುಲಿದು...

ಬಸ್ ನಿಲ್ದಾಣದಲ್ಲಿ ಮುರಿದು ಬಿದ್ದಿದ್ದ ಚಯರ್ ದುರಸ್ತಿ

ಸುಳ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಹಾಕಿರುವ ಹಲವು ಚಯರ್ ಗಳು ಮುರಿದು ಬಿದ್ದು ಕಬ್ಬಿಣದ ರಾಡ್ ಮಾತ್ರ ಉಳಿದುಕೊಂಡಿತ್ತು. ಇದರಿಂದ ಪ್ರಯಾಣಿಕರು ಸಂಕಟ ಅನುಭವಿಸುತ್ತಿರುವ ಬಗ್ಗೆ ಅಮರ ಸುದ್ದಿ ವೆಬ್ಸೈಟ್ ನಲ್ಲಿ ಫೆ. 14 ರಂದು ವರದಿ ಪ್ರಕಟಿಸಿ ಅಧಿಕಾರಿಗಳನ್ನು ಎಚ್ಚರಿಸಿತ್ತು.ವಾರದೊಳಗೆ ಸರಿಪಡಿಸುವ ಭರವಸೆ ನೀಡಿದ್ದ ಅಧಿಕಾರಿಗಳು ಫೆ.17 ರಂದು ಚಯರ್ ದುರಸ್ತಿ...

ಸುಬ್ರಹ್ಮಣ್ಯ : ವೆಂಕಟರಮಣ ಸೊಸೈಟಿಯ ಶಾಖೆ ಕಾರ್ಯಾರಂಭ – ಡಾ.ರೇಣುಕಾಪ್ರಸಾದ್ ಕೆ.ವಿ. ದೀಪ ಬೆಳಗಿಸಿ ಉದ್ಘಾಟನೆ

(ಚಿತ್ರ : ಶಾಂತಾಲ ಸುಬ್ರಹ್ಮಣ್ಯ) ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸುಬ್ರಹ್ಮಣ್ಯ ಶಾಖೆಯ ಉದ್ಘಾಟನೆಯು ಫೆ. 17 ರಂದು ಶ್ರೀಕೃಪಾ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾರಂಭಗೊಂಡಿತು. ಶಾಖೆಯ ಉದ್ಘಾಟನೆಯನ್ನು ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಇದರ ಉಪಾಧ್ಯಕ್ಷರು ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್...

ಸುಳ್ಯಕ್ಕೆ ಕಾಲಿರಿಸಿದ ಹಿಜಾಬ್ ಗಲಾಟೆ – ಪ್ರವೇಶ ನಿರಾಕರಿಸಿದ ಶಾಲಾ ಆಡಳಿತ – ಪೊಲೀಸರ ಆಗಮನ

ಹಿಜಾಬ್ ಗಲಾಟೆ ಸುಳ್ಯಕ್ಕೂ ಕಾಲಿರಿಸಿದ್ದು, ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೆಲವರು ಹಿಜಾಬ್ ಧರಿಸಿ ಬಂದ ಘಟನೆ ಇಂದು ನಡೆದಿದೆ. ಹಿಜಬ್ ಧರಿಸಿದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಆವರಣದಲ್ಲಿ ವಿದ್ಯಾರ್ಥಿಗಳು ಸೇರಿದ್ದಾರೆ.‌ ಸ್ಥಳಕ್ಕೆ ಪೋಲೀಸರು ಆಗಮಿಸಿದ್ದು ಬಂದೋಬಸ್ತ್ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.

ಫೆ.17ರಂದು ಸುಬ್ರಹ್ಮಣ್ಯದಲ್ಲಿ ವೆಂಕಟರಮಣ ಸೊಸೈಟಿಯ 16ನೇ ಶಾಖೆ ಉದ್ಘಾಟನೆ

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸುಬ್ರಹ್ಮಣ್ಯ ಶಾಖೆಯ ಉದ್ಘಾಟನೆಯು ಫೆ. 17 ರಂದು ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷ ಪಿ. ಸಿ. ಜಯರಾಮ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುಬ್ರಹ್ಮಣ್ಯ ಶ್ರೀಕೃಪಾ ಕಾಂಪ್ಲೆಕ್ಸ್ ನಲ್ಲಿ ಸಂಘದ 16ನೇ ಶಾಖೆಯು ಕಾರ್ಯಾರಂಭ ಮಾಡಲಿದೆ. ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘ ಪ್ರವರ್ತಿಸಲ್ಪಟ್ಟಿರುವ ಸಂಘವು 1997ರಲ್ಲಿ...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭೇಟಿ – ತುಲಾಭಾರ ಸೇವೆ ಸಲ್ಲಿಸಿದ ದಂಪತಿ

(ಚಿತ್ರ : ಶಾಂತಲಾ ಸುಬ್ರಹ್ಮಣ್ಯ) ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಸಭೆ ಸದಸ್ಯರಾಗಿರುವ ಹೆಚ್‌ ಡಿ ದೇವೇಗೌಡ ಅವರು ಫೆ.12 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ತುಲಾಭಾರ ಸೇವೆಯನ್ನು ನೆರವೇರಿಸಿ, ದೇವರ ದರ್ಶನ ಪಡೆದರು. ಪತ್ನಿ ಚೆನ್ನಮ್ಮ ಅವರೊಂದಿಗೆ ಆಗಮಿಸಿದ ದೇವೇಗೌಡರನ್ನು ದೇಗುಲದ ವತಿಯಿಂದ ಸ್ವಾಗತಿಸಲಾಯಿತು. ಬಳಿಕ ದೇಗುಲದ ಗೋಪುರ ಬಳಿ...

ಫೆ. 20 ರಂದು ಸಾಹಿತ್ಯ ಪರಿಷತ್ತಿನ ಪದಗ್ರಹಣ ಸಮಾರಂಭ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭದ ಕುರಿತು ಫೆ.12 ರಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ಅವರು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ ಫೆ.20 ರಂದು ಸುಳ್ಯದ...

ಅಡ್ತಲೆ : ಸಚಿವ ಎಸ್. ಅಂಗಾರರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಅರಂತೋಡು ಗ್ರಾಮ ಪಂಚಾಯತ್ ನ ಅಡ್ತಲೆ ವಾರ್ಡ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಅಂಗಾರರವರು ಫೆ.5 ರಂದು ಚಾಲನೆ ನೀಡಿದರು. ರೂಪಾಯಿ 20.00 ಲಕ್ಷ ಅನುದಾನದ ಪಿಂಡಿಮನೆ - ಅರಮನೆಗಯ ರಸ್ತೆಯ ಕಾಂಕ್ರಿಟೀಕರಣ, ರೂಪಾಯಿ 22.50 ಲಕ್ಷ ಅನುದಾನದಲ್ಲಿ ಪಿಂಡಿಮನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿಂಡಿ ಆಣೆಕಟ್ಟು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ರೂಪಾಯಿ 7.00 ಲಕ್ಷ ಅನುದಾನದಲ್ಲಿ...

ನಾಲ್ಕೂರು : ಸಚಿವ ಅಂಗಾರರಿಂದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ರವರು ಫೆ.04 ರಂದು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಅಣೆಕಟ್ಟು ನಿರ್ಮಾಣ, ಮರಕತ - ಉಜಿರಡ್ಕ ರಸ್ತೆ ಕಾಂಕ್ರೀಟೀಕರಣ, ನಡುಗಲ್ಲು - ಕಲ್ಲಾಜೆ ರಸ್ತೆ ಕಾಂಕ್ರೀಟೀಕರಣ, ನಡುಗಲ್ಲು - ಚಾರ್ಮತ - ಉತ್ರಂಬೆ ಭಾಗದ ರಸ್ತೆ ಕಾಂಕ್ರೀಟೀಕರಣ, ಹಾಲೆಮಜಲು - ಕುಳ್ಳಂಪಾಡಿ - ಚಾರ್ಮತ...

ಒಂದೇ ಬಾಳೆಗೊನೆಯಲ್ಲಿ ಎರಡು ಪೂಂಬೆ ಸೃಷ್ಟಿ

ಒಂದೇ ಬಾಳೆಗೊನೆಯಲ್ಲಿ ಎರಡು ಪೂಂಬೆ ಸೃಷ್ಟಿಯಾದ ಅಪರೂಪದ ಪ್ರಕೃತಿ ವಿಸ್ಮಯ ದೇವಚಳ್ಳ ಗ್ರಾಮದ ದೇವದಲ್ಲಿ ಕಾಣಸಿಕ್ಕಿದೆ. ದೇವ ಮನೆ ರಾಮಣ್ಣ ಗೌಡರ ತೋಟದಲ್ಲಿರುವ ಗಾಳಿ ಬಾಳೆಗೊನೆಯಲ್ಲಿ ಎರಡು ಪೂಂಬೆ ಬಿಟ್ಟಿದೆ. ಪ್ರಕೃತಿಗೆ ಯಾರು ಸಾಟಿ ಇಲ್ಲ ಎಂಬುದಕ್ಕೆ ಈ ವಿಸ್ಮಯವೇ ಸಾಕಲ್ಲವೇ?

ಮನೆಯಿಲ್ಲದೇ ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾದ ಸುಳ್ಯದ ಅಮರ ಸಂಘಟನಾ ಸಮಿತಿ

ಅಮರ ಸಂಘಟನಾ ಸಮಿತಿ ಸುಳ್ಯ ತಾಲೂಕು ಇದರ ವತಿಯಿಂದ ಅನಾರೋಗ್ಯದಿಂದ ಗಂಡನನ್ನು ಕಳೆದುಕೊಂಡು ಮನೆಯೂ ಇಲ್ಲದೇ ಚಿಕ್ಕ ಮಕ್ಕಳ ಜೊತೆ ಜೀವನ ನಡೆಸುತ್ತಿರುವ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ. ಒಂದು ಹೆಜ್ಜೆ ಉತ್ತಮ ಸಮಾಜಕ್ಕಾಗಿ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಮರ ಸಂಘಟನಾ ಸಮಿತಿ ಸುಳ್ಯ ತಾಲೂಕು ಇದರ ನೇತೃತ್ವದಲ್ಲಿ ಕಡಬ ತಾಲೂಕು ಪುಣ್ಚಪ್ಪಾಡಿ ಗ್ರಾಮ ಪಂಚಾಯತ್...

ಇಂದಿನಿಂದ ಕುಕ್ಕೆಸುಬ್ರಹ್ಮಣ್ಯದಲ್ಲಿ ಸೇವೆಗಳು ಪುನರಾರಂಭ

ದ.ಕ.ಜಿಲ್ಲಾಧಿಕಾರಿಗಳ ಆದೇಶದಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲಾ ಪೂಜೆ,ಹಾಗೂ ಸೇವೆಗಳಿಗೆ ಅನುಮತಿ ನೀಡಿದೆ. ಭಕ್ತಾದಿಗಳು ಕೋವಿಡ್ ನಿಯಮ ಪಾಲನೆಯೊಂದಿಗೆ ದೇವರ ಸೇವೆಗಳಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಚಿವ ಅಂಗಾರರಿಂದ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಲೋಕಾರ್ಪಣೆ : ಕುದ್ರೆಮುಖ ಕಬ್ಬಿಣದ ಅದಿರು ಉತ್ಪಾದಕ ಕಂಪೆನಿಯ ಕೊಡುಗೆ

ಕುದ್ರೆಮುಖ ಕಬ್ಬಿಣದ ಅದಿರು ಉತ್ಪಾದಕ ಕಂಪೆನಿಯ ಸಾಮಾಜಿಕ ಕಾರ್ಯಕ್ರಮದಡಿ ಸುಮಾರು 45 ಲಕ್ಷ ರೂ ವೆಚ್ಚದಲ್ಲಿ ಸುಳ್ಯ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಹೊಸತಾಗಿ ನಿರ್ಮಾಣಗೊಂಡ ಆಮ್ಲಜನಕ ಘಟಕದ ಉದ್ಘಾಟನೆ ಜ.30ರಂದು ನಡೆಯಿತು. ಘಟಕವನ್ನು ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಪ್ರಾಮುಖ್ಯತೆ ಏನು ಎಂಬುದು ತಿಳಿಯಿತು....

ಫೆ.08 – ಫೆ 10: ಐವರ್ನಾಡು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಫೆ.08 ರಿಂದ ಫೆ.10 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಫೆ 02 ರಂದು ಗೊನೆ ಕಡೆಯುವ ಕಾರ್ಯಕ್ರಮ ನಡೆಯಲಿದೆ. ಫೆ 08 ರಂದು ಬೆಳಿಗ್ಗೆ 8.30 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆದು 10...

ಮಾವಿನಕಟ್ಟೆ : ಆರೋಗ್ಯ ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿಯಾಗಿ ಕು. ಮೋನಿಷಾ

ದೇವಚಳ್ಳ ಗ್ರಾಮದ ಮಾವಿನಕಟ್ಟೆ ಆರೋಗ್ಯ ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿಯಾಗಿ ಕು.ಮೋನಿಷಾ ಜಿ.ಎಸ್. ರವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಶನಿವಾರ ಮಧ್ಯಾಹ್ನ ನಂತರ ಮತ್ತು ರಜಾದಿನ ಹೊರತುಪಡಿಸಿ ಲಭ್ಯವಿರುತ್ತಾರೆ.ಇವರು ನಾಲ್ಕೂರು ಗ್ರಾಮದ ಗುಡ್ಡೆಮನೆ ಗೋಪಾಲ ಗೌಡ ಮತ್ತು ತೇಜಸ್ವಿನಿ ದಂಪತಿಗಳ ಪುತ್ರಿ.

ಶಕ್ತಿ ಕೇಂದ್ರಗಳ ಅಭಿವೃದ್ಧಿಯಿಂದ ಧರ್ಮ ರಕ್ಷಣೆ : ರವೀಶ ತಂತ್ರಿ

ಧರ್ಮ ಉಳಿಯಬೇಕಾದರೆ ಶಕ್ತಿ ಕೇಂದ್ರಗಳು ಅಭಿವೃದ್ಧಿ ಆಗಬೇಕು. ಶಕ್ತಿ ಕೇಂದ್ರಗಳ ಆಭಿವೃದ್ಧಿಯಿಂದ ಧರ್ಮ ರಕ್ಷಣೆ ಸಾಧ್ಯ. ಅದಕ್ಕಾಗಿ ಸಮಾಜ ಒಗ್ಗಟ್ಟಾಗಿ ಇರಬೇಕು ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಹೇಳಿದರು. ಮಂಡೆಕೋಲು ಪೆರಜದ ಶ್ರೀ ವನ ಶಾಸ್ತಾರ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ದೈವಿಕ ಚೈತನ್ಯ ಒಂದು...

ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಸೇವೆಗೊಲಿದ ರಾಜ್ಯ ಪ್ರಶಸ್ತಿ

ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ 2022 ನೇ ಸಾಲಿನ ಯುವಸೇವೆ ಹಾಗೂ ಕ್ರೀಡಾಕ್ಷೇತ್ರದ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಗೆ ಆಯ್ಕೆಯಾಗಿದೆ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕೊಡಮಾಡುವ ರಾಜ್ಯ ಪ್ರಶಸ್ತಿಯಾಗಿದ್ದು, ಯುವಸೇವೆ ಮತ್ತು ಕ್ರೀಡೆ ಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ದಲ್ಲಿ ಸಾಂಘಿಕ ಪ್ರಶಸ್ತಿ ಗೆ ಎರಡೇ ಸಂಸ್ಥೆಗಳು ಆಯ್ಕೆ ಆಗಿವೆ....

ಸುಬ್ರಹ್ಮಣ್ಯ : ಮಠದ ವತಿಯಿಂದ ಅಂಬ್ಯುಲೆನ್ಸ್ ಲೋಕಾರ್ಪಣೆ

ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ನೀಡಿರುವ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಅಂಬ್ಯುಲೆನ್ಸನ್ನು ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಠದ ದಿವಾನರಾದ ಸುದರ್ಶನ ಜೋಯಿಸ್, ಪ್ರಮುಖರಾದ ಕಿಶೋರ್ ಅರಂಪಾಡಿ, ಯಜ್ಞೇಶ್ ಆಚಾರ್, ರವಿಕಕ್ಕೆಪದವು, ದಿನೇಶ್ , ಹರೀಶ್ ಇಂಜಾಡಿ, ಲೋಲಾಕ್ಷ ಕೈಕಂಬ,...

ಪೆರುವಾಜೆ : ಹೂವಿನ ಅಲಂಕಾರದಿಂದ ಕಂಗೊಳಿಸಿದ ದೇವಸ್ಥಾನ – ಪ್ರತಿ ವರ್ಷ ಅಲಂಕಾರ ಸೇವೆ ಅರ್ಪಿಸುತ್ತಿರುವ ಉಮೇಶ್‌

ಇತಿಹಾಸ ಪ್ರಸಿದ್ಧ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ಜಾತ್ರೋತ್ಸವದಲ್ಲಿ ಸಂದರ್ಭ ಹೂವಿನ ರಾಶಿಯನ್ನು ಮೇಲೆ ಹೊದ್ದು ಭಕ್ತ ಸಮೂಹದ ಗಮನ ಸೆಳೆಯುತ್ತಿದೆ. ಗರ್ಭಗುಡಿ, ಗಣಪತಿ ಗುಡಿ, ಒಳಾಂಗಣ, ಹೊರಾಂಗಣ ಗೋಡೆಗಳು, ಛಾವಣಿ ಹೀಗೆ ದೇವಾಲಯದ ಎಲ್ಲ ಭಾಗಗಳೂ ಬಣ್ಣ- ಬಣ್ಣದ, ಬಗೆ-ಬಗೆ ಹೂವುಗಳು ನಳನಳಿಸುತ್ತಿವೆ. ಮಂಗಳೂರಿನಲ್ಲಿ ಹೂವಿನ ಉದ್ಯಮ ನಡೆಸುತ್ತಿರುವ ಕ್ಷೇತ್ರದ ಭಕ್ತರೊಬ್ಬರು ಹಲವು ವರ್ಷದಿಂದ...

ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ ಚಂದ್ರ ಕೋಲ್ಚಾರ್ ಪುನರಾಯ್ಕೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿ ಹೊಂದಿರುವ ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಚಂದ್ರ ಕೋಲ್ಚಾರ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜ.16ರಂದು ಸಂಘದ ಸಭಾಂಗಣದಲ್ಲಿ ನಡೆದ ನಿರ್ದೇಶಕರ...

ವಿಜ್ರಂಭಣೆಯಿಂದ ನಡೆದ ಹಲ್ಗುಜಿ ದೈವಸ್ಥಾನ ಪ್ರತಿಷ್ಠೆ- ನೇಮೋತ್ಸವ

ನಾಲ್ಕೂರು ಗ್ರಾಮದ ಕಲ್ಲಾಜೆ ಹಲ್ಗುಜಿಯಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಶಿರಾಡಿ ದೈವ ಮತ್ತು ಅಗ್ನಿ ಗುಳಿಗ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ ಜ.15 ರಂದು ಹಾಗೂ ಜ.16 ರಂದು ದೈವಗಳ ನೇಮೋತ್ಸವ ನಡೆಯಿತು. ಬ್ರಹ್ಮರ್ಷಿ ಶ್ರೀ ವೇದಮೂರ್ತಿ ನೀಲೇಶ್ವರ ದಾಮೋದರ ತಂತ್ರಿ, ದೈವಜ್ಞರಾದ ಶಶಿಧರನ್ ಮಾಂಗಾಡ್ ಮತ್ತು ಕೆ.ರಾಜೇಶ್ ಎರಿಯ ಹಾಗೂ ವಾಸ್ತು ಶಿಲ್ಪಿ...

ಸಾಂಸ್ಕೃತಿಕ ರಂಗಕ್ಕೆ ರಂಗಮನೆಯ ಕೊಡುಗೆ ಅಪಾರ : ಕಲಾವತಿ ವೆಂಕಟಕೃಷ್ಣಯ್ಯ

'ಯಕ್ಷಗಾನ,ರಂಗಭೂಮಿ,ನೃತ್ಯ,ಸಂಗೀತ,ಜಾದೂ,ಮಕ್ಕಳ ಶಿಬಿರ,ಚಿತ್ರಕಲೆ ಹೀಗೆ ಪ್ರತಿಯೊಂದು ಕಲೆಗೂ ವೇದಿಕೆ ನೀಡುತ್ತಿರುವ ರಂಗಮನೆಯು ಸಾಂಸ್ಕೃತಿಕವಾಗಿ ಬಹಳ ದೊಡ್ಡ ಕೊಡುಗೆ ನೀಡಿದ ಸಂಸ್ಥೆಯಾಗಿದೆ. ನಮ್ಮೆಲ್ಲರ ಸಹಕಾರ ಈ ಸಂಸ್ಥೆಗೆ ಬಹು ಮುಖ್ಯವಾಗಿದೆ ಎಂದು ಹಿರಿಯ ಕಲಾ ಪೋಷಕಿ ಶ್ರೀಮತಿ ಕಲಾವತಿ ವೆಂಕಟಕೃಷ್ಣಯ್ಯ ಹೇಳಿದರು.ಅವರು ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಿದ ಶಾಸ್ತ್ರೀಯ ಸಂಗೀತೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.      ಮಹಾಬಲ-...

ಕೃಷಿಕರು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು : ಕೆ.ಜಿ.ಬೋಪಯ್ಯ

ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಂಸ್ಥೆಯ ನೂತನ ಅತ್ಯಾಧುನಿಕ ಮಣ್ಣು ಪರೀಕ್ಷಾ ಘಟಕವನ್ನು ಜ.14 ರಂದು ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯರವರು ಪ್ರಸಕ್ತ ನಮ್ಮ ಕೃಷಿಕರು ತಮ್ಮ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮಣ್ಣು ಪರೀಕ್ಷೆ ಮಾಡಿ ಪೂರಕ ಸಾವಯವ ಗೊಬ್ಬರ ಬಳಕೆಯಂತಹ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಸಲಹೆ...

ಗುತ್ತಿಗಾರು : ಅಂಬ್ಯುಲೆನ್ಸ್ ಸೇವೆ ಲೋಕಾರ್ಪಣೆ

ಸಾರ್ವಜನಿಕರ ತುರ್ತು ಉಪಯೋಗಕ್ಕಾಗಿ ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಂದ ದೇಣಿಗೆಯ ಮೂಲಕ ನಿಧಿ ಸಂಗ್ರಹಿಸಿ ಖರೀದಿಸಿದ ಆಂಬ್ಯುಲೆನ್ಸ್ ಯೋಜನೆ ಜ. 14 ರಂದು ಲೋಕಾರ್ಪಣೆ ಗೊಂಡಿತು. ಸುಳ್ಯ ಮೆಸ್ಕಾಂ ಎ ಇ ಇ ಹರೀಶ್ ನಾಯ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ...

ನಗರ ಪಂಚಾಯತ್‌ಗೆ ಡಿಸಿ ಧಿಡೀರ್ ಭೇಟಿ : ಕಡತಗಳ ರಾಶಿ ಕಂಡು ಅಧಿಕಾರಿ ಹಾಗೂ ಸಿಬ್ಬಂದಿಗಳ ಚಳಿ ಬಿಡಿಸಿದ ಜಿಲ್ಲಾಧಿಕಾರಿ

ಸುಳ್ಯ ನಗರ ಪಂಚಾಯತ್ ಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಟೇಬಲ್ ಗಳಲ್ಲಿ ಕಡತಗಳ ರಾಶಿ ಕಂಡು ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಜ.14 ರಂದು ನಡೆದಿದೆ. ನಗರ ಪಂಚಾಯತ್ ಕಚೇರಿಯ ಅವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ನಗರ ಪಂಚಾಯತ್ ಮುಖ್ಯಾಧಿಕಾರಿ, ಇಂಜಿನಿಯರ್, ಆರೋಗ್ಯಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿ...

ಇಂದು ಗುತ್ತಿಗಾರಿನಲ್ಲಿ ಅಂಬ್ಯುಲೆನ್ಸ್ ಸೇವೆ ಲೋಕಾರ್ಪಣೆ – ಜೀವ ಉಳಿಸಲು ಉದ್ಘಾಟನೆಗೆ ಕಾಯದೇ ಸೇವೆ ಆರಂಭಿಸಿದ ಅಂಬ್ಯುಲೆನ್ಸ್

ಗುತ್ತಿಗಾರಿನ ಬಹುದಿನಗಳ ಬೇಡಿಕೆಯಾಗಿದ್ದ ಅಂಬ್ಯುಲೆನ್ಸ್ ಸೇವೆ ಜ.14 ಲೋಕಾರ್ಪಣೆಗೊಳ್ಳಲಿದೆ. ಈ ಮಹತ್ಕಾರ್ಯಕ್ಕೆ ನೂರಾರು ಜನ ದೇಣಿಗೆ ನೀಡಿ ಬೆಂಬಲಿಸಿದ್ದಾರೆ. ಇಲ್ಲಿ ಪ್ರಮುಖವಾಗಿ ಗುತ್ತಿಗಾರಿನಲ್ಲಿ ಅಟೋ ಚಾಲಕರಾಗಿ ದುಡಿಯುತ್ತಿರುವ ಚಂದ್ರಶೇಖರ ಕಡೋಡಿಯವರ ಸಾಧನೆ ಇದೆ. ಸಾರ್ವಜನಿಕ ಸಭೆ ಕರೆದು ಗುತ್ತಿಗಾರಿನಲ್ಲಿ ಅಮರತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಹುಟ್ಟು ಹಾಕಿ ಆ ಮೂಲಕ ದೇಣಿಗೆ ಮುಖಾಂತರ ಬೃಹತ್ ಮೊತ್ತ...

ಉಬರಡ್ಕ : ಡಿಜಿಟಲ್ ಗ್ರಂಥಾಲಯ ಹಾಗೂ ಪುಸ್ತಕ ಗೂಡು ಉದ್ಘಾಟನೆ

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಹಾಗೂ ಪುಸ್ತಕ ಗೂಡು ಉದ್ಘಾಟನಾ ಸಮಾರಂಭ ಜ. 13ರಂದು ನಡೆಯಿತು. ಡಿಜಿಟಲ್ ಮತ್ತು ಮಾಹಿತಿ ಕೇಂದ್ರದ ಮತ್ತು ಪುಸ್ತಕ ಗೂಡು ಉದ್ಘಾಟನೆಯನ್ನು ಗ್ರಾ.ಪಂ.ಅಧ್ಯಕ್ಷೆ ಚಿತ್ರಾಕುಮಾರಿ ನೆರವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ...

ಸಚಿವ ಅಂಗಾರರಿಂದ ಕೊಲ್ಲಮೊಗ್ರು – ಮಾವಿನಕಟ್ಟೆ ಸಂಪರ್ಕ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರರವರು ಕೊಲ್ಲಮೊಗ್ರು - ಕಟ್ಟ -ಮಾವಿನಕಟ್ಟೆ ಸಂಪರ್ಕ ರಸ್ತೆಯನ್ನು ವಿಶೇಷ ಅನುದಾನ ತರಿಸಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅಡಿಯಲ್ಲಿ 5.25 ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಂಕ್ರೀಟೀಕರಣದ ಮೂಲಕ ಈ ಭಾಗದ ಜನರ ಬಹುವರ್ಷದ ಬೇಡಿಕೆಗೆ ಸ್ಪಂದಿಸಿ ಜ.12 ರಂದು ಕಟ್ಟ ಗೋವಿಂದನಗರದಲ್ಲಿ ಗುದ್ದಲಿ ಪೂಜೆ...

ಜ.13-16 : ಹಲ್ಗುಜಿ ಶಿರಾಡಿ ದೈವಸ್ಥಾನದ ಪುನರ್ ಪ್ರತಿಷ್ಠೆ- ನೇಮೋತ್ಸವ

ನಾಲ್ಕೂರು ಗ್ರಾಮದ ಕಲ್ಲಾಜೆ ಹಲ್ಗುಜಿ ಶ್ರೀ ಶಿರಾಡಿ ದೈವ ಮತ್ತು ಅಗ್ನಿ ಗುಳಿಗ ಮತ್ತು ಪರಿವಾರ ದೈವಗಳ ದೇವಸ್ಥಾನದ ಜೀರ್ಣೋದ್ಧಾರಗೊಂಡು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿ ನಿಂತಿದೆ. ಜ.15 ನೇ ಶನಿವಾರ ದಿವಾ ಗಂಟೆ 10-31ರ ಮೀನ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ಶಿರಾಡಿ ದೈವ ಪುನರ್ ಪ್ರತಿಷ್ಠ ಕಲಾಶಾಭಿಷೇಕ ಪರಿವಾರ ದೈವಗಳ ಹಾಗೂ ದೈವಗಳ ನೇಮೋತ್ಸವವು...

ಕರ್ನಾಟಕ ಚೇತನ ಪ್ರಶಸ್ತಿ ಪಡೆದ ಕನ್ನಿಕಾ ಅಂಬೆಕಲ್ಲು

ಜ್ಞಾನಮಂದಾರ ಅಕಾಡೆಮಿ ಬೆಂಗಳೂರು, ಇಂಚರ ಸಾಂಸ್ಕೃತಿಕ ಸಂಸ್ಥೆ ಮಂಜೇಶ್ವರ ಆಶ್ರಯದಲ್ಲಿ ಸಂಸ್ಥಾಪಕ ದಿನಾಚರಣೆ 2022ರ ಅಂಗವಾಗಿ ಕರ್ನಾಟಕ ಚೇತನ ಪುರಸ್ಕಾರಕ್ಕೆ ಶಿಕ್ಷಣ ಮತ್ತು ಸಾಂಸ್ಕೃತಿಕ ಕೇಂದ್ರ ಸುಳ್ಯದ ಕನ್ನಿಕಾ ಡಿ ಅಂಬೆಕಲ್ಲು ಇವರು ಆಯ್ಕೆಯಾಗಿದ್ದಾರೆ. ಈಕೆ ಸುಳ್ಯದ ಯುವ ನ್ಯಾಯವಾದಿ‌ ಹಾಗೂ ನೋಟರಿ ದಿನೇಶ್ ಅಂಬೆಕಲ್ಲು ಮತ್ತು ಶಿಕ್ಷಕಿ ಪೂರ್ಣಿಮಾ ಮಡಪ್ಪಾಡಿ ಇವರ ಪುತ್ರಿ. ಜೂನ್...

ಗುತ್ತಿಗಾರು : ಅಕ್ರಮ ಸಕ್ರಮ ಸಮಿತಿ ಸಭೆ- ಮಾಸಾಶನ ಪಲಾನುಭವಿಗಳಿಗೆ ಸಚಿವರಿಂದ ಆದೇಶ ಪತ್ರ ವಿತರಣೆ

ಸುಳ್ಯ ತಾಲೂಕು ಅಕ್ರಮ-ಸಕ್ರಮ ಸಮಿತಿ ಸಭೆ ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿ ಮಾಸಾಶನ ಮಂಜೂರಾತಿಗೊಂಡ ಫಲಾನುಭವಿಗಳಿಗೆ ಆದೇಶ ಪತ್ರವನ್ನು ಸಚಿವರು ವಿತರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕು.ಅನಿತಾಲಕ್ಷ್ಮೀ, ಅಕ್ರಮ- ಸಕ್ರಮ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸದಸ್ಯರಾದ ಬಾಳಪ್ಪ ಕಳಂಜ, ಗುಣವತಿ ಕೊಲ್ಲಂತಡ್ಕ ಉಪಸ್ಥಿತರಿದ್ದರು.

ಸೇವಾಜೆ-ಮಡಪ್ಪಾಡಿ ರಸ್ತೆ 1.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ – ಸಚಿವ ಅಂಗಾರರಿಂದ ಗುದ್ದಲಿಪೂಜೆ

ಲೋಕೋಪಯೋಗಿ ರಸ್ತೆಯಾಗಿ ಮೇಲ್ದರ್ಜೆಗೊಂಡು ರೂ. 1.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಸೇವಾಜೆ - ಮಡಪ್ಪಾಡಿ ರಸ್ತೆಗೆ ಸಚಿವರಾದ ಎಸ್.ಅಂಗಾರ ರವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಡಪ್ಪಾಡಿ ಗ್ರಾ.ಪಂ.ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಸುಳ್ಯ ಮಂಡಲ ಬಿ.ಜೆ.ಪಿ. ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ದ.ಕ.ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ವೆಂಕಟ್ ವಳಲಂಬೆ ,...

ದ.ಕ. ಜಿಲ್ಲಾ ತೆಂಗು ರೈತ ಉತ್ಪಾದಕರ ಸಂಸ್ಥೆಯ ವೆಬ್ಸೈಟ್ ಬಿಡುಗಡೆ

ನೆಟ್ಟಣದ ಕಿದು ಐಸಿಎಆರ್ ಸಿಪಿಸಿಆರ್ ಐ ತೆಂಗು ಸಂಶೋಧನಾ ಕೇಂದ್ರದ 50ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ದ.ಕ.ಜಿಲ್ಲಾ ತೆಂಗು ಉತ್ಪಾದಕರ ಸಂಸ್ಥೆಯ ವೆಬ್ಸೈಟ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ವಿಟ್ಲದಲ್ಲಿ ಕೇಂದ್ರ ಕಛೇರಿ ಹೊಂದಿರುವ ದ.ಕ. ಜಿಲ್ಲೆ ಯಲ್ಲಿ ತೆಂಗು ಕೃಷಿಕರಿಗೆಂದೇ ಹುಟ್ಟಿಕೊಂಡ ದ.ಕ. ಜಿಲ್ಲಾ ತೆಂಗು ರೈತ ಉತ್ಪಾದಕರ ಸಂಸ್ಥೆ ಯ ಅಧಿಕೃತ...

ಏನೆಕಲ್ : ಹಾಡು ಬಾ ಕನಸು ಆನ್ಲೈನ್ ಭಾವಗೀತೆ ಸ್ಪರ್ಧೆಯ ಪ್ರಶಸ್ತಿ ವಿತರಣೆ

ಕಲಾಮಾಯೆ (ರಿ) ಏನೆಕಲ್ ಸಾರಥ್ಯದಲ್ಲಿ. ಸೋಲಾರ್ ಪಾಯಿಂಟ್ ನಿಂತಿಕಲ್ ಮತ್ತು ಬ್ಲಾಕ್ ವಿಂಡ್ ಸೋಲಾರ್ ಬೆಳ್ತಂಗಡಿ ಪ್ರಾಯೋಜಕತ್ವದ. ಅಮರ ಸುಳ್ಯ ಸುದ್ದಿ ಸಹಯೋಗದಲ್ಲಿ ನಡೆದ ಹಾಡು ಬಾ ಕನಸು ಆನ್ಲೈನ್ ಭಾವಗೀತೆ ಸ್ಪರ್ಧೆಯಲ್ಲಿ ವಿಜೇತ ರದವರಿಗೆ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.ಪವಿತ್ರ.ಆರ್. ಸುಬ್ರಮಣ್ಯ (ಸೀನಿಯರ್ ಟಿವಿ ಸ್ಟಾರ್ ಆಫ್ ಹಾಡು ಬಾ ಕನಸು )ಜೂನಿಯರ್...

ಜ.11 ರಂದು ಸೇವಾಜೆ ಮಡಪ್ಪಾಡಿ ರಸ್ತೆಗೆ ಗುದ್ದಲಿ ಪೂಜೆ- ಪತ್ರಕರ್ತರ ಗ್ರಾಮ ವಾಸ್ತವ್ಯದ ಫಲಶ್ರುತಿ

ಮಡಪ್ಪಾಡಿ ಗ್ರಾಮವನ್ನು ಸಂಪರ್ಕಿಸುವ ಸೇವಾಜೆ- ಮಡಪ್ಪಾಡಿ ರಸ್ತೆ ಅಭಿವೃದ್ಧಿಗೆ ಕಾಲ ಕೂಡಿಬಂದಿದ್ದು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಜ‌.11ರಂದು ಗುದ್ದಲಿಪೂಜೆ ನೆರವೇರಿಸಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಗ್ರಾಮ ವಾಸ್ತವ್ಯ ಮಾಡಿದುದರ ಪಲಶ್ರುತಿಯಾಗಿ ಈ ರಸ್ತೆ ಅಭಿವೃದ್ಧಿ ಕಾಣಲಿದೆ. ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಮಡಪ್ಪಾಡಿ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿ...

ಬಳ್ಪ : ಕೊರಗಜ್ಜ ನೇಮೋತ್ಸವ – ಅವಮಾನ ಮಾಡುವವರಿಗೆ ಶಿಕ್ಷೆ ನೀಡುವಂತೆ ಸಾಮೂಹಿಕ ಪ್ರಾರ್ಥನೆ

https://youtu.be/wO3jrdDtgNM ಕಡಬ ತಾಲೂಕು ಬಳ್ಪ ಗ್ರಾಮದ ನೀರಜರಿ ಎಂಬಲ್ಲಿ ಕೊರಗಜ್ಜ ದೈವದ ನೇಮೋತ್ಸವ ಸಂದರ್ಭದಲ್ಲಿ ಮೊನ್ನೆ ವಿಟ್ಲದಲ್ಲಿ ನಡೆದ ಘಟನೆ ಬಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ದೈವದ ನುಡಿ ಪಡೆಯಲಾಯಿತು. ಈ ಸಂದರ್ಭದಲ್ಲಿ ಶ್ರೀ ವೆಂಕಟ್ ದಂಬೆಕೋಡಿ, ಬಜರಂಗದಳದ ತಾಲೂಕು ಸಂಯೋಜಕರಾದ ಸಂದೀಪ್ ವಳಲಂಬೆ, ಹಿಂದು ಜಾಗರಣ ವೇದಿಕೆ ಗುತ್ತಿಗಾರು ವಲಯ ಅಧ್ಯಕ್ಷ ವರ್ಷಿತ್ ಕಡ್ತಲ್...

ಕೇಶದಾನ ಮಾಡುವ ಮೂಲಕ ಸಂತೃಪ್ತಿ ಕಂಡ ಮಹೇಶ್ ಪೇರಾಲು

ಕ್ಯಾನ್ಸರ್ ರೋಗಿಗಳಿಗೆ ತಾನು ಎರಡು ವರ್ಷಗಳಿಂದ ಪ್ರೀತಿಯಿಂದ ಬೆಳೆಸಿದ ತಲೆಕೂದಲನ್ನು ದಾನ ಮಾಡುವ ಮೂಲಕ ಮಂಡೆಕೋಲು ಗ್ರಾಮದ ಮಹೇಶ್ ಪೇರಾಲು ನೋವಿನಲ್ಲಿರುವ ಕ್ಯಾನ್ಸರ್ ಪೀಡಿತರಿಗೆ ಚೈತನ್ಯ ತುಂಬಿದ್ದಾರೆ. ಪುತ್ತೂರಿನ ಮುಳಿಯ ಫೌಂಡೇಷನ್ ಮುಖಾಂತರ ಸ್ವ ಇಚ್ಛೆಯಿಂದ ಕೇಶದಾನ ಮಾಡಿದ್ದಾರೆ. ಜ.7ರಂದು ಕೇಶದಾನ ಮಾಡಿರುವ ಇವರಿಗೆ ಮುಳಿಯ ಫೌಂಡೇಶನ್ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಇವರು...

ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ – ಹೂ ವ್ಯಾಪಾರಿಯ ಪುತ್ರಿ ದೀಕ್ಷಾ ಎಲಿಮಲೆ ಸಾಧನೆ

ಹೂ ವ್ಯಾಪಾರಿಯ ಪುತ್ರಿ ದೀಕ್ಷಾ ಎಲಿಮಲೆ ಇವರು ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಮಾಡಿದ್ದಾಳೆ. ಭುನಮನಸನದಲ್ಲಿ 1ಗಂಟೆ 10 ಸೆಂಕೆಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾಳೆ. ಕಳೆದ 8 ತಿಂಗಳಿಂದ ಯೋಗಾಭ್ಯಾಸವನ್ನು ಆನ್ಲೈನ್ ಮೂಲಕ ನಿರಂತರ ಯೋಗ ಕೇಂದ್ರ ಸುಳ್ಯ ಇದರ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ...

ಪೆರಾಜೆಯ ವ್ಯಕ್ತಿ ಆನೆ ದಾಳಿಗೆ ಬಲಿ

ಕೊಡಗಿನ ಮದೆ ಗ್ರಾಮದ ಬೆಟ್ಟತ್ತೂರು ಭಾಗದಲ್ಲಿ ತೋಟದ ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತರನ್ನು ಪೆರಾಜೆಯ ಶಿವಪ್ರಸಾದ್ ಎಂದು ಗುರುತಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ : ಇಂಧನ ಸಚಿವ ಸುನಿಲ್ ಕುಮಾರ್ ಭೇಟಿ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜ.02 ರಂದು ಇಂಧನ ಸಚಿವ ಸುನಿಲ್ ಕುಮಾರ್ ಆಗಮಿಸಿ ಇಂದು(ಜ.03) ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಆಶ್ಲೇಷ ಬಲಿ ಪೂಜೆ ನೆರವೇರಿಸಿದರು.ನಂತರ ಇಂದು(ಜ.03) ಸುಬ್ರಹ್ಮಣ್ಯದಲ್ಲಿ ಭೂಗತ ಕೇಬಲ್ ಮತ್ತು 8 ಮೆಗಾ ವೋಲ್ಟ್ ಪರಿವರ್ತಕ, 11 ಕೆ.ವಿ ಫೀಡರ್ ಉದ್ಘಾಟನಾ ಮಾಡಿದರು. ನಂತರ ಸುಬ್ರಹ್ಮಣ್ಯದ ವಲ್ಲೀಶ...

ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ಮುತ್ಲಾಜೆ ಅವರಿಗೆ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ

ಸರಕಾರಿ ಮಾದರಿ ಶಾಲೆ ಗುತ್ತಿಗಾರು ಇಲ್ಲಿನ ದೈಹಿಕ ಶಿಕ್ಷಕರಾದ ದಯಾನಂದ ಮುತ್ಲಾಜೆ ಅವರು ಡಿ. 31 ರಂದು ನಿವೃತ್ತರಾದರು. ಇವರಿಗೆ ಪ್ರಾ.ಶಾಲಾ ಶಿಕ್ಷಕರ ಸಂಘ ಸುಳ್ಯ ಇವರ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀಧರ್ ಗೌಡ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಅತ್ಯಾಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಶಾಲಪ್ಪ ತುಂಬತ್ತಾಜೆ, ಉಪಾಧ್ಯಕ್ಷ ಕುಶಾಲಪ್ಪ...

ಕುಕ್ಕೆ : ಜವುಳಿ ಖಾತೆ ಸಚಿವ ಶಂಕರ ಪಾಟೀಲ ಭೇಟಿ – ಉಡುಪಿಯಲ್ಲಿ ಜವುಳಿ ಪಾರ್ಕ್ ಆರಂಭಿಸಲು ಚಿಂತನೆ

ಉಡುಪಿಯಲ್ಲಿ ಬೃಹತ್ ಜವುಳಿ ಪಾರ್ಕ್ ಅನ್ನು ನಿರ್ಮಾಣ ಮಾಡಲಾಗುವುದು. ಇಲ್ಲಿ ಬಾರೀ ಪ್ರಮಾಣದಲ್ಲಿ ಜವುಳಿ ಉದ್ದಿಮೆಯನ್ನು ಆರಂಭಿಸಲಾಗುವುದು. ಸುಮಾರು 20 ಎಕರೆ ಪ್ರದೇಶದಲ್ಲಿ ಶೀಘ್ರ ಜವುಳಿ ಪಾರ್ಕ್ ನಿರ್ಮಾಣಗೊಳ್ಳಲಿದೆ. ಈ ಮೂಲಕ ಸಹಸ್ರಾರು ಜನರಿಗೆ ಉದ್ಯೋಗವಕಾಶ ದೊರಯಲಿದೆ. ಜವುಳಿ ಪಾರ್ಕ್ ಮಾಡಲು ಬೇಕಾದ ಯೋಜನೆಗಳನ್ನು ಸಿದ್ದಪಡಿಸಲಾಗಿದ್ದು ಸರಕಾರ ಮಟ್ಟದಲ್ಲಿ ಆಗಬೇಕಾದ ನಿಯಮಗಳನ್ನು ಶೀಘ್ರ ರೂಪಿಸಿ ಶೀಘ್ರ...

ಐವರ್ನಾಡಿನಲ್ಲಿ ಕ್ಯಾಂಪ್ಕೋ ಸಂಸ್ಥೆಯ ಶಾಖೆ ತೆರೆದರೆ ರೈತರಿಗೆ ಪ್ರಯೋಜನ -ಎಸ್.ಎನ್.ಮನ್ಮಥ

ರೈತರಿಗೆ ಪ್ರಯೋಜನವಾಗುವ ರೀತಿಯಲ್ಲಿ ಕ್ಯಾಂಪ್ಕೋ ಸಂಸ್ಥೆಯ ಶಾಖೆಯನ್ನು ತೆರೆಯುವ ಬಗ್ಗೆ ಕೃಷಿಕರ ಸಭೆಯನ್ನು ಜ.1 ರಂದು ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ "ರೈತರು ಹಾಗೂ ಅಡಿಕೆ ಬೆಳೆಗಾರರ ಪರವಾಗಿ ಇರುವ ಕ್ಯಾಂಪ್ಕೋ ಸಂಸ್ಥೆಯ ಶಾಖೆಯನ್ನು ತೆರೆದರೆ ಇಲ್ಲಿಯ ಕೃಷಿಕರಿಗೆ ಪ್ರಯೋಜನವಾಗುತ್ತದೆ. ಈಗಾಗಲೇ ನಾವು...

ಒಂದು ತಿಂಗಳೊಳಗೆ ಪಾಲೆಪ್ಪಾಡಿ ರಸ್ತೆ ಕಾಂಕ್ರೀಟೀಕರಣಕ್ಕೆ ಭರವಸೆ – ಹರೀಶ್ ಕಂಜಿಪಿಲಿ ; ಹೋರಾಟ ಸಮಿತಿಯ ಅಧ್ಯಕ್ಷ ಡಾ.ಬಾಲಸುಬ್ರಹ್ಮಣ್ಯ ಭಟ್ ರಿಂದ ಪ್ರತಿಭಟನೆ ಹಿಂತೆಗೆತ

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ರಸ್ತೆ ಕಾಂಕ್ರೀಟೀಕರಣಕ್ಕೆ ಸಚಿವರ ವಿಶೇಷ ಅನುದಾನದಿಂದ ರೂ.30 ಲಕ್ಷ ಅನುದಾನ ಮಂಜೂರಾಗಿದ್ದು ಗುದ್ದಲಿ ಪೂಜೆಯು ಜ.1ರಂದು ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಶುಭಹಾರೈಸಿದರು. ಜ.3 ರಂದು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಲು ರಸ್ತೆ ಹೋರಾಟ ಸಮಿತಿ ವತಿಯಿಂದ ಸಿದ್ಧತೆ ನಡೆಸಿತ್ತು. ಆದರೆ...

ಕಂದಡ್ಕ : ಬೈಹುಲ್ಲು ಸಾಗಾಟದ ಲಾರಿ ಬೆಂಕಿಗೆ ಆಹುತಿ

ಕಂದಡ್ಕ ಸಮೀಪ ಬೈಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿ ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ಕಳೆದ ರಾತ್ರಿ ನಡೆದಿದೆ. 4 ಗಂಟೆ ಸುಮಾರಿಗೆ ಹೆಚ್ ಟಿ ವಿದ್ಯುತ್ ಲೈನ್ ಗೆ ಡಿಕ್ಕಿಯಾಗಿ ಲಾರಿಗೆ ಬೆಂಕಿ ತಗುಲಿದೆ. ಚಾಲಕ ಅಪಾಯದಿಂದ ಪಾರಾಗಿದ್ದು, ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.

ಜಯನಗರ : ಸ್ಮಶಾನ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡ ರೋಟರಿ ಕ್ಲಬ್ ಸುಳ್ಯ- ಸುಸಜ್ಜಿತ ಸ್ಮಶಾನ ರಚಿಸಿ ನಗರಾಡಳಿತಕ್ಕೆ ಹಸ್ತಾಂತರ : ಪ್ರಭಾಕರ ನಾಯರ್

ಶೋಚನೀಯ ಸ್ಥಿತಿಯಲ್ಲಿರುವ ಜಯನಗರದ ಸ್ಮಶಾನವನ್ನು ರೋಟರಿ ಕ್ಲಬ್ ವತಿಯಿಂದ ಅಭಿವೃದ್ಧಿ ಮಾಡಲು ನಿರ್ಧರಿಸಿದ್ದೇವೆ. ಈಗಾಗಲೇ ಆ ನಿಟ್ಟಿನಲ್ಲಿ ಕೆಲಸ ಸಾಗುತ್ತಿದ್ದು ರುದ್ರಭೂಮಿ ಛಾವಣಿ ಕೆಲಸ, ಸಿಲಿಕಾನ್ ಛೇಂಬರ್ ಅಳವಡಿಕೆ, ಶೌಚಾಲಯ, ಸ್ನಾನಗೃಹ, ಶಿವನ ಮೂರ್ತಿ ಹಾಗೂ ಪಾರ್ಕ್ ನಿರ್ಮಾಣ ಮಾಡಲು ನೀಲನಕ್ಷೆ ತಯಾರಿಸಿ ಕಾರ್ಯ ಆರಂಭಿಸಲಾಗಿದೆ ಎಂದು ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷ ಪ್ರಭಾಕರ ನಾಯರ್...

ನಾವೂರು : ನಗರ ಪಂಚಾಯತ್ ನಿರ್ಲಕ್ಷ್ಯದಿಂದ ಆಸ್ಪತ್ರೆ ಸೇರಿದ ಕಾಲೊನಿ ನಿವಾಸಿ

ಸುಳ್ಯ ನಗರದ ಗಾಂಧಿನಗರ ನಾವೂರು ಕಾಲೋನಿಗೆ ಚರಂಡಿ ವ್ಯವಸ್ಥೆ ಇದ್ದು ಕೆಲವು ದಿನಗಳಿಂದ ಕಾಲುದಾರಿಯ ಸ್ಲಾಬ್ ಮುರಿದು ಬಿದ್ದಿತ್ತು. ಡಿ.25ರ ರಾತ್ರಿ ಈ ದಾರಿಯಲ್ಲಿ ನಡೆದು ಬರುತ್ತಿದ್ದ ವ್ಯಕ್ತಿ ಮುರಿದ ಹೊದಿಕೆಯ ಮೇಲೆ ಕಾಲಿರಿಸಿದ್ದರಿಂದ ಬಿದ್ದು ಕಾಲಿಗೆ ಗಾಯವಾಗಿ ಆಸ್ಪತ್ರೆಗೆ ಸೇರಿದ್ದಾರೆ. ಈ ಘಟನೆಗೆ ಸುಳ್ಯ ನಗರ ಪಂಚಾಯತ್ ನಿರ್ಲಕ್ಷ್ಯವೇ ಕಾರಣವೆಂದ ನಿವಾಸಿಗಳು, ಆದಷ್ಟು ಬೇಗ...

ಮೂಡಬಿದ್ರೆಯ ಕೋಟಿ-ಚೆನ್ನಯ ಕಂಬಳದಲ್ಲಿ “ಪಡುಮಲೆ ದೇಯಿ ಬೈದ್ಯೆತಿ ಆಯುರ್ವೇದಿಕ್ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟ

ಬೆಳ್ಳಾರೆಯ ಹೆಸರಾಂತ ನಾಟಿ ವೈದ್ಯರಾಗಿರುವ ಅಶೋಕ್ ಕೊಡಚಾದ್ರಿಯವರಿಂದ ತಯಾರಿಸಲ್ಪಡುವ “ಪಡುಮಲೆ ದೇಯಿ ಬೈದೈತಿ” ಸಂಜೀವಿನಿ ನೋವಿನ ತೈಲ ಹಾಗೂ ಇತರ ಆಯುರ್ವೇದಿಕ್ ಉತ್ಪನಗಳ ವಿಶೇಷ ಪ್ರಚಾರ ಮತ್ತು ಮಾರಾಟವು ಮೂಡಬಿದಿರೆಯ ಜೋಡುಕರೆ ಕಂಬಳದಲ್ಲಿ ಯಶಸ್ವಿಯಾಗಿ ನಡೆಯಿತು. ಪಡುಮಲೆಯಲ್ಲಿ ಸುವರ್ಣ ಕೇದಗೆ ಯಾನೆ ದೇಯಿ ಬೈದಿತಿ ಹುಟ್ಟಿ ಬೆಳೆದ ಕೂವೆ ತೋಟದ ಮನೆಯ ಸ್ತಬ್ದ ಚಿತ್ರಣವು ನೋಡುಗರ...

ಪುಸ್ತಕ ಜ್ಞಾನಕ್ಕಿಂತ ಮಸ್ತಕ ಜ್ಞಾನ ಶ್ರೇಷ್ಠ ಎಂಬುದಕ್ಕೆ ಡಾ.ಕೆ.ವಿ.ಜಿ. ಸ್ಫೂರ್ತಿ- ಡಾ.ಪುತ್ತೂರಾಯ

ಸುಳ್ಯ: ಬಡತನ ಕೆವಿಜಿ ಅವರನ್ನು ಬಲಿಷ್ಠವನ್ನಾಗಿ ಮಾಡಿತು ಹಾಗಾಗಿ ಸುಳ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಯಿತು. ಎಲ್ಲರೂ ಕೆವಿಜಿ ಅವರಂತೆ ಪರೋಪಕಾರ ಮಾಡುವ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ರಾಜಿವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದ ವಿಶ್ರಾಂತ ನಿರ್ದೇಶಕ ಡಾ.ಪುತ್ತೂರಾಯ ಅವರು ಹೇಳಿದರು. ಡಿ.೨೬ ರಂದು ಕೆವಿಜಿ ಕಾನೂನು ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಕೆವಿಜಿ ಸುಳ್ಯ ಹಬ್ಬದ...

ಸುಳ್ಯ : ದಿನೇಶ್ ಅಡ್ಕಾರ್ ಅವರಿಂದ ಚೆನ್ನಕೇಶವ ದೇವಸ್ಥಾನಕ್ಕೆ ವಾಟರ್ ಪ್ಯೂರಿಫಯರ್ ಕೊಡುಗೆ

ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಸುಳ್ಯದ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನ ಮಾಲಕರಾದ ದಿನೇಶ್ ಅಡ್ಕಾರ್ ಅವರು ಡಿ.25 ರಂದು ಸುಮಾರು 45,000 ರೂಪಾಯಿ ಮೊತ್ತದ ವಾಟರ್ ಕೂಲರ್ ಹಾಗೂ ವಾಟರ್ ಫ್ಯೂರಿಪಯರ್ ಅನ್ನು ಕೊಡುಗೆಯಾಗಿ ನೀಡಿದರು.ಈ ಸಂದರ್ಭದಲ್ಲಿ ಶ್ರೀ ದೇವಳದ ಅನುವಂಶಿಕ ಮೊಕ್ತೇಸರ ಡಾ| ಹರ ಪ್ರಸಾದ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ|...

ಪತ್ರಕರ್ತ ಬಾಲಕೃಷ್ಣ ಭೀಮಗುಳಿಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ರಾಜ್ಯದ ಕಾರ್ಯನಿರತ ಪತ್ರಕರ್ತರ ಸಂಘವು ಸಾಧಕ ಪತ್ರಕರ್ತರಿಗೆ ಕೊಡಮಾಡುವ 2020-21ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಬಾರಿಯ ಪ್ರಶಸ್ತಿಗೆ ಹರಿಹರ ಪಲ್ಲತ್ತಡ್ಕದವರಾಗಿದ್ದು, ಕಾರ್ಕಳ ತಾಲೂಕಿನ ಉದಯವಾಣಿ ಪತ್ರಿಕೆ ವರದಿಗಾರರಾಗಿರುವ ಬಾಲಕೃಷ್ಣ ಭೀಮಗುಳಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅರಣ್ಯ ಕುರಿತ ಅತ್ಯುತ್ತಮ ವರದಿಗೆ ಕೊಡಲ್ಪಡುವ ಪ್ರತಿಷ್ಠಿತ ಆರ್. ಎಲ್. ವಾಸುದೇವರಾವ್ ಪ್ರಶಸ್ತಿಗೆ ಇವರು ಆಯ್ಕೆಯಾಗಿದ್ದಾರೆ. ಸುಬ್ರಹ್ಮಣ್ಯ...

ಜ.17: ಬಳ್ಪ ಉಳ್ಳಾಕುಲು ಮತ್ತು ಶಿರಾಡಿ ರಾಜನ್ ದೈವಗಳ ಪುನರ್‌ಪ್ರತಿಷ್ಠೆ

ಬಳ್ಪ ಮತ್ತು ಕೇನ್ಯ ಗ್ರಾಮ ದೈವ ಶ್ರೀ ಉಳ್ಳಾಕುಲು ಮತ್ತುಶ್ರೀ ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳಪುನರ್‌ಪ್ರತಿಷ್ಠಾ ಮಹೋತ್ಸವ 2022 ಜನವರಿ 17 ಸೋಮವಾರದಂದು ಪೂರ್ವಾಹ್ನ 08-45ರ ಮೀನ ಲಗೃದ ಶುಭ ಮುಹೂರ್ತದಲ್ಲಿಕೆಮ್ಮಿಂಜೆ ವೇದಮೂರ್ತಿ ಬ್ರಹ್ಮಶ್ರೀ ತಂತ್ರಿ ಸುಬ್ರಹ್ಮಣ್ಯ ಬಳ್ಳುಕರಾಯರನೇತೃತ್ವದಲ್ಲಿ ವಿವಿಧ ತಾಂತ್ರಿಕ ವೈದಿಕ ವಿಧಿವಿಧಾನಗಳೊಂದಿಗೆ ಜರಗಲಿದೆ. ಜನವರಿ 16 ರಿಂದ ಆರಂಭಗೊಂಡು ಜ....

ಜ.3 ರಂದು ವರ್ತಕ ಸಮುದಾಯ ಭವನ ಲೋಕಾರ್ಪಣೆ

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ವರ್ತಕ ಸಮುದಾಯ ಭವನದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ವರ್ತಕ ಸಮುದಾಯ ಭವನದಲ್ಲಿ ನಡೆಯಿತು.ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ವರ್ತಕರ ಸಂಘದ ಅಧ್ಯಕ್ಷ ಸುಧಾಕರ...

ಐವರ್ನಾಡು : ಅಶ್ವಿನ್ ರೆಡಿಮೆಡ್ಸ್ ಮತ್ತು ಫ್ಯಾನ್ಸಿ ಮಳಿಗೆ ಶುಭಾರಂಭ

ಐವರ್ನಾಡಿನ ಡಿವಿಜಿ ಕಾಂಪ್ಲೆಕ್ಸ್ ನಲ್ಲಿ ಅಶ್ವಿನ್ ರೆಡಿಮೆಡ್ಸ್ ಮತ್ತು ಫ್ಯಾನ್ಸಿ ಮಳಿಗೆಯು ಡಿ.23ರಂದು ಐವರ್ನಾಡಿನಲ್ಲಿ ಶುಭಾರಂಭಗೊಂಡಿತು.ಪರೋಹಿತ ವಿಶ್ವೇಶ್ವರಯ್ಯ ಬಾಳಿಲ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ| ಬಾಲಸುಬ್ರಹ್ಮಣ್ಯ ಭಟ್, ಧರ್ಮಪಾಲ ಆಚಾರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ನಮ್ಮಲ್ಲಿ ರೆಡಿಮೆಡ್ಸ್ ಬಟ್ಟೆಗಳು,ಫ್ಯಾನ್ಸಿ ಐಟಂಗಳು ಮಕ್ಕಳ ಆಟಿಕೆಗಳು,ಮಕ್ಕಳ ಪುಸ್ತಕಗಳು ಹಾಗೂ ಇನ್ನಿತರ ವಸ್ತುಗಳು ದೊರೆಯುತ್ತದೆ ಎಂದು ಮಾಲಕರಾದ ಶ್ವೇತಾ...

ಚಂದ್ರಶೇಖರ ಪೇರಾಲು ಅವರದ್ದು ಮಾದರಿ ವ್ಯಕ್ತಿತ್ವ- ಡಾ.ಕೆ.ವಿ ಚಿದಾನಂದ

ಚಂದ್ರಶೇಖರ ಪೇರಾಲು ಅವರು ಸುಳ್ಯದ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಅಪಾರವಾಗಿದೆ. ಎಲ್ಲಾ‌ಶಿಕ್ಷಕರಿಗೂ ಇವರು ಮಾದರಿಯಾಗಿದ್ದಾರೆ. ಇವರ ನಿವೃತ್ತ ಜೀವನ ಉತ್ತಮವಾಗಿರಲಿ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಅವರು ಅಭಿಪ್ರಾಯಪಟ್ಟರು. ಡಿ.18 ರಂದು ಸುಳ್ಯದ ಗಿರಿದರ್ಶಿನಿ ಸಭಾಭವನದಲದಲ್ಲಿ ಚಂದ್ರಶೇಖರ ಪೇರಾಲು ಅಭಿನಂಧನಾ ಕಾರ್ಯಕ್ರಮದಲ್ಲಿ ಪೇರಾಲು ದಂಪತಿಗಳನ್ನು ಸಮ್ಮಾನಿಸಿ ಅವರು...

ಯುವ ಬಂಟರ ಸಂಘದ ವತಿಯಿಂದ ಬಂಟರ ಸಭಾಭವನಕ್ಕೆ ದೇಣಿಗೆ

ಸುಳ್ಯ ತಾಲ್ಲೂಕು ಬಂಟರ ಯಾನೆ ನಾಡವರ ಸಂಘದ ಸಭೆಯು ಬಂಟ್ಸ್ ಹಾಸ್ಟೆಲಿನ ಸಭಾಂಗಣದಲ್ಲಿ ಡಿ. 18ರಂದು ತಾಲ್ಲೂಕು ಅಧ್ಯಕ್ಷರಾದ ಎನ್. ಜಯಪ್ರಕಾಶ್ ರೈ ಅಧ್ಯಕ್ಷತೆಯಲ್ಲಿ ನಡೆಯಿತು. ಕೇನ್ಯ ರವೀಂದ್ರನಾಥ ರೈ ಸುಭಾಶ್ಚಂದ್ರ ರೈ ತೋಟ ,ಗಂಗಾಧರ ರೈ, ಪ್ರೀತಮ್ ರೈ ಹಾಗೂ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಸಭೆ‌ನಡೆಯಿತು. ಜನವರಿಯಲ್ಲಿ ನಡೆಯುವ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಈ...

ಜ.13 ರಿಂದ ಜ.16 : ನಾಲ್ಕೂರು ಹಲ್ಗುಜಿ ಯಲ್ಲಿ ದೈವಸ್ಥಾನ ಪುನರ್ ಪ್ರತಿಷ್ಠೆ, ಕಲಶಾಭಿಷೇಕ – ಆಮಂತ್ರಣ ಪತ್ರಿಕೆ ಬಿಡುಗಡೆ

ನಾಲ್ಕೂರು ಗ್ರಾಮದ ಹಲ್ಗುಜಿಯಲ್ಲಿ ಜ.13 ರಿಂದ ಜ.16 ರ ತನಕ ಶ್ರೀ ಶಿರಾಡಿ ದೈವ ಮತ್ತು ಅಗ್ನಿ ಗುಳಿಗ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ನಡೆಯಲಿದ್ದು ಇಂದು ದೈವಸ್ಥಾನದ ಬಳಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.ದೈವಸ್ಥಾನದ ವಾಸ್ತುಶಿಲ್ಪಿ ವೆಂಕಟರಮಣ ಆಚಾರ್ಯ ಮರ್ಕಂಜ ಅವರು ಪುನರ್ ಪ್ರತಿಷ್ಠೆ, ಕಲಶಾಭಿಷೇಕದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು....

ಸುಳ್ಯ :- ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಅಕ್ಕಿ ಹಾಗೂ ತರಕಾರಿ ಹಸ್ತಾಂತರ

ಸುಳ್ಯ ತಾಲೂಕಿನ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಡಿ.12 ರಿಂದ ಡಿ.26 ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಭಕ್ತರಿಗೆ ನಿರಂತರ ಅನ್ನದಾನ ಇರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಚೆನ್ನಕೇಶವ ದೇವಸ್ಥಾನಕ್ಕೆ 40 ಕ್ವಿಂಟಾಲ್ ಅಕ್ಕಿ ಹಾಗೂ ತರಕಾರಿಗಳನ್ನು ಡಿ.18 ರಂದು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ಹರಪ್ರಸಾದ್...

ಸುಳ್ಯ ಹಬ್ಬದ ಆಮಂತ್ರಣ ಬಿಡುಗಡೆ – ಡಿ.25, 26ರಂದು ದಶ ಸಂಭ್ರಮ

ಡಾ. ಕುರುಂಜಿ ವೆಂಕಟ್ರಮಣ ಗೌಡರ 93 ನೇ ಜಯಂತ್ಯೋತ್ಸವದ ಕೆವಿಜಿ ಸುಳ್ಯ ಹಬ್ಬ ದಶಮಾನೋತ್ಸವ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಕೆವಿಜಿ ಸುಳ್ಯಹಬ್ಬ ಕಚೇರಿಯಲ್ಲಿ ಡಿ.16 ರಂದು ನಡೆಯಿತು.ಡಿ.25 ಹಾಗೂ 26 ರಂದು ಸುಳ್ಯದ ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಲಿದೆ.ಈ ಸಂದರ್ಭ ಕೆವಿಜಿ ಸುಳ್ಯ ಹಬ್ಬದ ಆಚರಣೆ ಸಮಿತಿ ಅಧ್ಯಕ್ಷ ಪಿ.ಸಿ ಜಯರಾಮ, ಸ್ಥಾಪಕಾಧ್ಯಕ್ಷ...

ಡಿ.16,17 ರಂದು ಬ್ಯಾಂಕ್ ನೌಕರರ ಮುಷ್ಕರ – ಕ್ಯಾಶ್ ಮುಗಿಯುವ ತನಕ ಇರಲಿದೆ ಎಟಿಎಂ ಸೇವೆ

ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸುವ ಸರಕಾರದ ಯೋಜನೆ ಖಂಡಿಸಿ ಎಲ್ಲಾ ಬ್ಯಾಂಕ್ ನೌಕರರು ಡಿ.16 ಮತ್ತು 17 ರಂದು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಎಟಿಎಂ ಗಳಲ್ಲಿ ಕ್ಯಾಶ್ ಮುಗಿಯುವ ತನಕ ಇರಲಿದೆ ಎಂದು ತಿಳಿದುಬಂದಿದೆ. ಆದರೂ ಸಾರ್ವಜನಿಕರು ಮನೆಯಿಂದ ಹೊರಡುವಾಗಲೇ ತುರ್ತು ಅವಶ್ಯಕತೆಗೆ ಬೇಕಾದ ಹಣದ ಜತೆಗೆ ಹೊರಡುವುದು ಒಳಿತು.

ಸುಬ್ರಹ್ಮಣ್ಯ-ಐನೆಕಿದು ಸೊಸೈಟಿಗೆ ಜಿಲ್ಲಾ ಬ್ಯಾಂಕ್ ನಿಂದ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ

ಡಿ.14 ರಂದು ಮಂಗಳೂರಿನಲ್ಲಿ ನಡೆದ ಡಿ.ಸಿ.ಸಿ ಬ್ಯಾಂಕ್ ಮಹಾಸಭೆಯಲ್ಲಿ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಡಿ.ಸಿ.ಸಿ ಬ್ಯಾಂಕ್ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಗೌರವಿಸಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅದ್ಯಕ್ಷ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು.ಸುಬ್ರಹ್ಮಣ್ಯ-ಐನೆಕಿದು ಪ್ರಾ.ಕೃ.ಪ.ಸ ಸಂಘದ ಅದ್ಯಕ್ಷ ಜಯಪ್ರಕಾಶ್ ಕೂಜುಗೋಡು ಹಾಗೂ ಮುಖ್ಯ...

ಮಡಪ್ಪಾಡಿ ಸೊಸೈಟಿಗೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ

ಮಂಗಳೂರಿನಲ್ಲಿ ಡಿ.14 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಳ ವಾರ್ಷಿಕ ಮಹಾಸಭೆಯಲ್ಲಿ ಮಡಪ್ಪಾಡಿ ಕೃಷಿ ಪತ್ತಿನ ಸಹಕಾರ ಸಂಘವು 2020-21 ನೇ ಸಾಲಿನ ವ್ಯಾವಹಾರದಲ್ಲಿನ ಗಣನೀಯ ಸೇವೆಯನ್ನು ಗುರುತಿಸಿ ಉತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ಗಳಿಸಿದೆ.ಹಾಗೂ ಸಹಕಾರಿ ಸಂಘ ಅಧ್ಯಕ್ಷರಾದ ಪಿ.ಸಿ.ಜಯರಾಮ್ ಇವರು ಸಂಘದ ಅಧ್ಯಕ್ಷರಾಗಿ ಸತತ 25ನೇ ಬಾರಿ...

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ – ರೇಣುಕಾ ಪ್ರಸಾದ್ ಭರ್ಜರಿ ಗೆಲುವು

ರಾಜ್ಯ ಒಕ್ಕಲಿಗರ ಸಂಘದ ಮತ ಎಣಿಕೆ ಮುಗಿದಿದ್ದು ಡಾ. ರೇಣುಕಾಪ್ರಸಾದ್ಕೆ.ವಿ. 3295 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಸಮೀಪದಪ್ರತಿಸ್ಪರ್ಧಿ ಸಹೋದರ ಡಾ. ಕೆ.ವಿ. ಚಿದಾನಂದರು 1741 ಮತ ಪಡೆದು ಪರಾಭವಗೊಂಡರು. ಹೇಮಾನಂದ ಹಲ್ದಡ್ಕರಿಗೆ 346 ಮತ ದೊರೆತಿದೆ.

ಸುಳ್ಯ ಸಿಎ ಬ್ಯಾಂಕ್ ಗೆ ಡಿಸಿಸಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

ಮಂಗಳೂರಿನಲ್ಲಿ ನಡೆದ ಡಿಸಿಸಿ ಬ್ಯಾಂಕ್ ಮಹಾಸಭೆಯಲ್ಲಿಸುಳ್ಯದ ಸಿ.ಎ. ಬ್ಯಾಂಕ್ ಗೆ ಡಿಸಿಸಿ ಬ್ಯಾಂಕ್ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಗೌರವಿಸಿದೆ. ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ ಹಾಗೂಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸೂರ್ತಿಲಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ವೆಂಕಟ್ರಮಣ ಮುಳ್ಯ, ನಿರ್ದೇಶಕರಾದ ದಾಮೋದರ ಮಂಚಿ, ನವೀನ್ ಕುದ್ಪಾಜೆ, ವಾಸುದೇವ ನಾಯಕ್, ಶೀನಪ್ಪ ಬಯಂಬು, ಶ್ರೀಮತಿ ಸುಮತಿ...

ನೆಲ್ಲೂರು ಕೆಮ್ರಾಜೆ ಸೊಸೈಟಿಗೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ

ಡಿಸಿಸಿ ಬ್ಯಾಂಕ್ ವತಿಯಿಂದ ನೀಡುವ 2020-21ನೇ ಸಾಲಿನ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಡಿ.14 ರಂದು ನಡೆದ ಡಿಸಿಸಿ ಬ್ಯಾಂಕ್ ಮಹಾಸಭೆಯಲ್ಲಿ ಲಭಿಸಿದೆ. ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರ ವಿಷ್ಣು ಭಟ್ ಮೂಲೆತೋಟ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗನ್ನಾಥ ಶೆಟ್ಟಿ ಯು ಪಡೆದುಕೊಂಡರು. ನಿರ್ದೇಶಕರಾದ ಉಮೇಶ ಪ್ರಭು,...

ಸಂಪಾಜೆ ಪ್ರಾ.ಕೃ.ಪ.ಸ.ಸಂಘಕ್ಕೆ ಜಿಲ್ಲಾ ಕೇಂದ್ರ ಬ್ಯಾಂಕ್ ಪ್ರಶಸ್ತಿ

ದ. ಕ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ 2020-21 ಸಾಲಿನ ಸಮಗ್ರ ಕಾರ್ಯಚಟುವಟಿಕೆಗೆ ಜಿಲ್ಲಾ ಬ್ಯಾಂಕ್ ಪ್ರಶಸ್ತಿಯನ್ನು ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ ಎನ್ ರಾಜೇಂದ್ರ ಕುಮಾರ್ ರವರಿಂದ ಇಂದು ಮಂಗಳೂರಿನ ಜಿಲ್ಲಾ ಬ್ಯಾಂಕಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಮತ್ತು ಸ್ಮರಣಿಕೆಯನ್ನು ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಹಾಗೂ ಮುಖ್ಯ...

ವಿಧಾನ ಪರಿಷತ್ ಗೆ ಶ್ರೀನಿವಾಸ ಪೂಜಾರಿಗೆ 4ನೇ ಬಾರಿಗೆ ಆಯ್ಕೆ- ಪ್ರಥಮ ಹೆಜ್ಜೆ ಇರಿಸಿದ ಮಂಜುನಾಥ ಭಂಡಾರಿ

ರಾಜ್ಯದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಡಿ.10 ರಂದು ನಡೆದ ಚುನಾವಣೆಯ ದ.ಕ ಜಿಲ್ಲೆಯ ದ್ವಿ ಸದಸ್ಯ ಪರಿಷತ್ ಕ್ಷೇತ್ರದ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರು 4ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ಆರಂಭ ಆದಾಗಿನಿಂದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮೊದಲ ಸ್ಥಾನದಲ್ಲಿ ಇದ್ದು, ಕಾಂಗ್ರೆಸ್...

ಎ.ಬಿ.ವಿ.ಪಿ ವತಿಯಿಂದ ಪ್ರತಿಭಟನೆ – ಹಾಸ್ಟೇಲ್ ಹಾಗೂ ಗ್ರಾಮೀಣ ಬಸ್ ವ್ಯವಸ್ಥೆ ಸರಿಪಡಿಸಲು ಒತ್ತಾಯ

ಮಂಗಳೂರು ವಿಶ್ವ ವಿದ್ಯಾಲಯ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಆಗಿರುವ ಸಮಸ್ಯೆಗಳನ್ನು ಪರಿಶೀಲನೆ ಮಾಡಿ ಯೋಗ್ಯವಾದ ಫಲಿತಾಂಶವನ್ನು ಘೋಷಿಸಬೇಕು. ಹಾಗೂ ಶಾಲಾ ಕಾಲೇಜುಗಳು ಆರಂಭವಾಗಿ ವಿದ್ಯಾರ್ಥಿಗಳು ಕಲಿಕೆಯ ಕಡೆಗೆ ಉತ್ಸಾಹದಿಂದ ಗಮನಹರಿಸಿದ್ದು, ಕೋವಿಡ್ ಕಾರಣಕ್ಕೆ ಬದಲಾದ ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗಲು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ, ಹಾಗಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ ಗ್ರಾಮಗಳಿಗೂ...

ಜಾಣಪ್ಪ ಅಜಿಲರಿಗೆ ಸುಬ್ರಹ್ಮಣ್ಯ ಐನೆಕಿದು ಸೊಸೈಟಿ ವತಿಯಿಂದ ಶ್ರದ್ಧಾಂಜಲಿ

ನ.30 ರಂದು ನಿಧನರಾದ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಜಾಣಪ್ಪ ಅಜಿಲರಿಗೆ ಡಿ.13 ರಂದು ಸಂಘದ ಕಛೇರಿಯಲ್ಲಿ ಶ್ರದ್ದಾಂಜಲಿ ಸಭೆ ನಡೆಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು, ಉಪಾಧ್ಯಕ್ಷ ಮಾಧವ, ಹಿರಿಯ ಸಹಕಾರಿಗಳಾದ ಕೇಶವ ಭಟ್, ನಿರ್ದೇಶಕರುಗಳಾದ ಸೊಮಸುಂದರ ಕೂಜುಗೋಡು, ರವೀಂದ್ರ ಕುಮಾರ್ ರುದ್ರಪಾದ, ವೆಂಕಟೇಶ್.ಹೆಚ್.ಎಲ್, ಸುಬ್ರಹ್ಮಣ್ಯ ರಾವ್, ದಾಮೋದರ,...

ಅಡ್ಕಾರು ಕುಟುಂಬದ ಧರ್ಮನಡಾವಳಿ ನೇಮೋತ್ಸವ

ಅಡ್ಕಾರು ಕುಟುಂಬದ ಶ್ರೀ ವಿಷ್ಣುಮೂರ್ತಿ, ಧರ್ಮದೈವ ಶ್ರೀ ರುದ್ರಚಾಮುಂಡಿ, ಶ್ರೀ ಮುನಿಸ್ವಾಮಿ ಮತ್ತು ಪರಿವಾರ ದೈವಗಳ ಧರ್ಮನಡಾವಳಿ ನೇಮೋತ್ಸವವು ಅಡ್ಕಾರು ತರವಾಡು ಮನೆಯಲ್ಲಿ ಡಿ.11 ಮತ್ತು 12 ರಂದು 2 ದಿನಗಳ ಕಾಲ ನಡೆಯಿತು. ಡಿ.11 ರಂದು ಸಂಜೆ 6:30 ಕ್ಕೆ ದೈವಗಳ ಭಂಡಾರ ತೆಗೆದು ನಂತರ ರಾತ್ರಿ 7:00 ಗಂಟೆಯಿಂದ ಶ್ರೀ ವಿಷ್ಣುಮೂರ್ತಿ ದೈವದ...

ನಿಂತಿಕಲ್ಲಿನಲ್ಲಿ ನವಶಕ್ತಿ ಇಲೆಕ್ಟಿಕಲ್ಸ್ ಶುಭಾರಂಭ

ಚೇತನ್ ಕೀಲಾಡಿಯವರ ಮಾಲಕತ್ವದ ನವಶಕ್ತಿ ಇಲೆಕ್ಟಿಕಲ್ಸ್ ಸೇಲ್ಸ್ ಮತ್ತು ಸರ್ವಿಸ್ ಅಂಗಡಿಯು ನಿಂತಿಕಲ್ಲಿನ ಸಾನಿಧ್ಯ ವಾಣಿಜ್ಯ ಸಂಕೀರ್ಣದಲ್ಲಿ ಡಿ.13 ರಂದು ಶುಭಾರಂಭಗೊಂಡಿತು. ಕಾರ್ಯಕ್ರಮವನ್ನು ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ಹುದೇರಿ ಮತ್ತು ನವಜ್ಯೋತಿ ಇಲೆಕ್ಟಿಕಲ್ಸ್ ನ ಮಾಲಕ ಭಾಸ್ಕರ ಬದಿಕಾನ ದೀಪ ಬೆಳಗಿಸಿ ಉದ್ಘಾಟಿಸಿದರು.ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ...

ಡಾ. ಕೆ ಟಿ ವಿಶ್ವನಾಥ್ ರವರಿಗೆ ಮಿತ್ರ ಯುವಕ ಮಂಡಲ (ರಿ) ಕೊಯಿಕುಳಿ ಹಾಗು ಕುರಲ್ ತುಳು ಕೂಟ ದುಗ್ಗಲಡ್ಕ ವತಿಯಿಂದ ಅಭಿನಂದನೆ

ಮಿತ್ರ ಯುವಕ ಮಂಡಲ (ರಿ) ಕೊಯಿಕುಳಿ ಹಾಗೂ ಕುರಲ್ ತುಳು ಕೂಟ ದುಗ್ಗಲಡ್ಕದ ಸಂಚಾಲಕರಾದ ಶ್ರೀ ಕೆ ಟಿ ವಿಶ್ವನಾಥ್ ರವರಿಗೆ ಸಾಂಸ್ಕೃತಿಕ ಸಂಘಟನೆಗಾಗಿ ವೇದಿಕ್ ಕಲ್ವರಲ್ ರಿಸರ್ಚ್ ಯೂನಿವರ್ಸಿಟಿಯಿಂದ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿ ದೊರೆತ ಹಿನ್ನೆಲೆಯಲ್ಲಿ ಮಿತ್ರ ಯುವಕ ಮಂಡಲದ ಸಾಮಾನ್ಯ ಸಭೆಯಲ್ಲಿ ಅಭಿನಂದಿಸಲಾಯಿತು. ಹಿರಿಯ ಸದಸ್ಯರಾದ ಶ್ರೀ ಕೃಷ್ಣ ಸ್ವಾಮಿ ಕಂಡಡ್ಕ,...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಿಚ್ಚ ಸುದೀಪ್ ಭೇಟಿ

ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸ್ಯಾಂಡಲ್ ವುಡ್ ಸ್ಟಾರ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಕುಟುಂಬ ಸಮೇತರಾಗಿ ಭೇಟಿ ನೀಡಿ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು.ನಂತರ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷ ಬಲಿ ಪೂಜೆ ಹಾಗೂ ನಾಗಪ್ರತಿಷ್ಠೆ ನೆರವೇರಿಸಿದರು. ಬಳಿಕ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಭೇಟಿ ಮಾಡಿ ಆಶೀರ್ವಾದ...

ನಡುಗಲ್ಲು : ಹಗಲಿನ ವೇಳೆಯಲ್ಲಿ ರಸ್ತೆ ಬದಿ ಕಾಣಿಸಿಕೊಂಡ ಕಾಡಾನೆ

ನಡುಗಲ್ಲು ಸಮೀಪದ ಅಂಜೇರಿಯ ಬಸ್ ತಂಗುದಾಣದ ಬಳಿ ಕಾಡಾನೆಯೊಂದು ಕಾಡಿನಿಂದ ರಸ್ತೆ ದಾಟಿದ ಘಟನೆ ಡಿ.10 ರ ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ.ಸುಬ್ರಹ್ಮಣ್ಯ ಗುತ್ತಿಗಾರು ಮುಖ್ಯ ರಸ್ತೆಯ ನಡುಗಲ್ಲು ಸಮೀಪದ ಅಂಜೇರಿ ಬಸ್ ತಂಗುದಾಣದ ಬಳಿ ಕಾಡಾನೆಯೊಂದು ಕಾಡಿನಿಂದ ಇಳಿದು ರಸ್ತೆ ದಾಟಿ ಕೆಳಭಾಗದ ತೋಟಕ್ಕೆ ತೆರಳಿದೆ.ಇದೇ ಸಂದರ್ಭದಲ್ಲಿ ವಾಹನಗಳು ರಸ್ತೆ ದಾಟುತ್ತಿದ್ದರೂ...

ಸುಬ್ರಹ್ಮಣ್ಯ : ದೇವರ ನೌಕಾ ವಿಹಾರ, ಅವಭೃತೋತ್ಸವ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.09 ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಂಪಾಷಷ್ಠಿ ಮಹಾರಥೋತ್ಸವ ನೆರವೇರಿತು. ಈ ಮೂಲಕ ಚಂಪಾಷಷ್ಠಿ ಮಹಾರಥೋತ್ಸವ ಸಂಪನ್ನವಾಯಿತು. ಡಿ.08 ರಂದು ರಾತ್ರಿ ಪಂಚಮಿ ರಥೋತ್ಸವ ನೆರವೇರಿತು.ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರೆಯ ಪ್ರಯುಕ್ತ ಡಿ.8 ರಂದು ಪಂಚಮಿ ರಥೋತ್ಸವ ನೆರವೇರಿತು. ಶ್ರೀ ದೇಗುಲದ ಅರ್ಚಕ ವೇದಮೂರ್ತಿ ರಾಜೇಶ್ ನಡ್ಯಂತಿಲ್ಲಾಯ ವೈದಿಕ ವಿಧಿ-ವಿಧಾನಗಳನ್ನು...

ಐವರ್ನಾಡು: ಗ್ರಾ.ಪಂ.ನ ಎಲ್ಲಾ ಸದಸ್ಯರಿಂದ ಮತದಾನ

ಜಾಲ್ಸೂರು ಮಹಾಶಕ್ತಿ ಕೇಂದ್ರದ ಐವರ್ನಾಡು ಗ್ರಾಮ ಪಂಚಾಯತ್ ನ ಭಾರತೀಯ ಜನತಾ ಪಾರ್ಟಿ ಬೆಂವಲಿತ 12 ಸದಸ್ಯರುಗಳು ಎಸ್.ಎನ್ ಮನ್ಮಥರ ನೇತೃತ್ವದಲ್ಲಿ ಬಂದು ವಿಧಾನ ಪರಿಷತ್ ನ ಚುನಾವಣೆ ಗೆ ಮತ ಚಲಾವಣೆ ಮಾಡಿದರು.

ನಿವೃತ್ತ ಅಂಚೆ ಪಾಲಕ ನಂದರಾಜ್ ಸಂಕೇಶ್ ರವರಿಗೆ ಮಹಾತ್ಮ ಜ್ಯೋತಿಬಾ ಪುಲೆ ರಾಷ್ಟ್ರೀಯ ಪ್ರಶಸ್ತಿ

ಹಿರಿಯ ದಲಿತಪರ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ, ಕಾಂಗ್ರೆಸ್ ನಾಯಕ, ಉತ್ತಮ ಚಿಂತಕರು, ಮಾರ್ಗದರ್ಶಕರು, ಸಾಹಿತಿ, ನಾಟಕರಂಗ ಹಾಗೂ ಸಿನಿಮಾರಂಗದಲ್ಲೂ ಹೆಸರು ಮಾಡಿರುವ ನಿವೃತ್ತ ಅಂಚೆಪಾಲಕರಾದ ನಂದರಾಜ್ ಸಂಕೇಶ್ ರವರು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ನೀಡಲಾಗುವ ಮಹಾತ್ಮ ಜ್ಯೋತಿಬಾ ಪುಲೆ ರಾಷ್ಟ್ರೀಯ ಪ್ರಶಸ್ತಿ 2021 ಕ್ಕೆ ಆಯ್ಕೆಯಾಗಿದ್ದು, ಡಿ.11 ರಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ...

ಸುಬ್ರಹ್ಮಣ್ಯದಲ್ಲಿ ಯುವ ತೇಜಸ್ಸು ವತಿಯಿಂದ ಅಂಬ್ಯುಲೆನ್ಸ್ ಲೋಕಾರ್ಪಣೆ

ಸಮಾಜ ಸೇವೆಯ ಉದ್ದೇಶವಿಟ್ಟುಕೊಂಡು ಹುಟ್ಟಿಕೊಂಡ ಯುವ ತೇಜಸ್ಸು ವತಿಯಿಂದ ಸುಬ್ರಹ್ಮಣ್ಯದಲ್ಲಿ ಅಂಬ್ಯುಲೆನ್ಸ್ ಸೇವೆ ಡಿ.9 ರಂದು ಲೋಕಾರ್ಪಣೆಗೊಳ್ಳಲಿದೆ. ಯುವ ತೇಜಸ್ಸು ಬಳಗ ನೂರಾರು ಜನರ ನೋವಿಗೆ ಸ್ಪಂದಿಸಿ ಅನಾರೋಗ್ಯಕ್ಕೊಳಗಾದವರ ಚಿಕಿತ್ಸೆಗೆ ನೆರವಾಗುವ ಮೂಲಕ ಸಮಾಜ ಸೇವೆ ಮಾಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಅಂಬ್ಯುಲೆನ್ಸ್ ಖರೀದಿಗೆ ಬೇಕಾದ ಧನ ಸಹಾಯ ಸಂಗ್ರಹವಾಗಲು ಜನತೆ...

ಕರ್ಲಪ್ಪಾಡಿ: ಶ್ರೀ ಶಾಸ್ತ್ರಾವೇಶ್ವರ ದೇವಸ್ಥಾನದಲ್ಲಿ ಗೊನೆ ಮುಹೂರ್ತ

ಶ್ರೀ ಶಾಸ್ತ್ರಾವೇಶ್ವರ ದೇವಸ್ಥಾನ ಕರ್ಲಪ್ಪಾಡಿ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ ಗೊನೆ ಕಡಿಯುವ ಕಾರ್ಯಕ್ರಮವು ಡಿ. 8 ರಂದು ಮುಂಜಾನೆ ಪೂಜೆಯ ಬಳಿಕ ನಡೆಯಿತು. ಈ ಸಂದರ್ಭ ದೇವಳದ ಆಡಳಿತಾಧಿಕಾರಿ ಶರತ್ ಕುಮಾರ್ ಎಸ್, ಉತ್ಸವ ಸಮಿತಿ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮೇನಾಲ , ಕಾರ್ಯದರ್ಶಿ ರೂಪಾನಂದ ಕರ್ಲಪ್ಪಾಡಿ , ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ...

ಮರ್ಕಂಜ : ರೈತರ ಸಮಸ್ಯೆಗಳ ಬಗ್ಗೆ ವಿಚಾರ ಸಂಕಿರಣ ಹಾಗೂ ರೈತ ಸಂಘದ ಗ್ರಾಮ ಘಟಕದ ಪುನರ್ ರಚನೆ

ಕರ್ನಾಟಕ ರಾಜ್ಯ ರೈತಸಂಘ ಸುಳ್ಯ ತಾಲೂಕು ಘಟಕದ ವತಿಯಿಂದ ವಾರಕ್ಕೊಂದು ಗ್ರಾಮಭೇಟಿ ಅಭಿಯಾನದ ಮುಂದುವರೆದ ಭಾಗವಾಗಿ ಮರ್ಕಂಜ ಗ್ರಾಮವನ್ನು ಡಿ.5 ರಂದು ಭೇಟಿ ಮಾಡಲಾಯಿತು. ಮರ್ಕಂಜ ಗ್ರಾಮದಲ್ಲಿ ಅಡಿಕೆ ಎಲೆ ಹಳದಿರೋಗ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರದ ಆಯ ಜಿಲ್ಲೆಯ ಇತರ ಸಮಸ್ಯೆಗಳ ಬಗ್ಗೆ ವಿಚಾರ ಸಂಕೀರ್ಣ ಹಾಗೂ ಗ್ರಾಮ ಘಟಕದ ಪುನರ್ ರಚನೆಯ ಸಭೆಯು...

ಒಡಿಯೂರು ಶ್ರೀ ಗುರುವಂದನೆ, ಸಾಮೂಹಿಕ ಶ್ರೀ ಸತ್ಯದತ್ತ ವೃತ ಪೂಜಾ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ

ಒಡಿಯೂರು ಶ್ರೀಗಳ ಷಷ್ಟಬ್ಧ ಸಂಭ್ರಮ ಸಮಿತಿ, ಜೈ ಗುರುದೇವಾ ಸೇವಾ ಬಳಗ ಸುಳ್ಯ ಮತ್ತು ಒಡಿಯೂರು ಗ್ರಾಮ ವಿಕಾಸ ಯೋಜನೆ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯದತ್ತ ವೃತ ಪೂಜೆ, ಭಜನೆ ಕಾರ್ಯಕ್ರಮ, ಶ್ರೀ ಗುರುವಂದನೆ ಮತ್ತು ಸಮಾರೋಪ ಸಮಾರಂಭ ಡಿ.೨೦ರಂದು ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಲಿರುವುದು.ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು...

ಸುಳ್ಯ : ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆ – ಕೋಟ ಶ್ರೀನಿವಾಸ ಪೂಜಾರಿ ಭೇಟಿ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವತಿಯಿಂದ ನಡೆದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯು ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಡಿ. 7 ರಂದು ನಡೆಯಿತು. ಈ ಸಂದರ್ಭದಲ್ಲಿ ಸಚಿವ ಎಸ್. ಅಂಗಾರ ವಿಧಾನ ಪರಿಷತ್ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ,ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ವಿಧಾನ ಪರಿಷತ್ ಸದಸ್ಯ ಪ್ರತಾಪ್...

ಸುಳ್ಯ : ಶ್ರೀ ಚೆನ್ನಕೇಶವ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಬಿಡುಗಡೆ – ಡಿಸೆಂಬರ್ 21ರಿಂದ 26ರ ವರೆಗೆ ಕಾರ್ಯಕ್ರಮ

ಶ್ರೀ ಚೆನ್ನಕೇಶವ ದೇವಸ್ಥಾನದ ನೂತನ ಗುಡಿಯಲ್ಲಿ ಶ್ರೀ ದುರ್ಗಾದೇವಿ ಪ್ರತಿಷ್ಠೆ ಮತ್ತು ಶ್ರೀ ಚೆನ್ನಕೇಶವ ದೇವರಿಗೆ ಬ್ರಹ್ಮಕಲಶಾಭಿಶೇಕದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಡಿ. 6 ರಂದು ದೇವಳದ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ ಹಾಗೂ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ.ಕೆ.ವಿ ಚಿದಾನಂದ ಅವರು ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ...

ಗುತ್ತಿಗಾರು : ಜೆ.ಜೆ ಫಿನ್ ಕಾರ್ಪ್ ನ ಇನ್ಸುರೆನ್ಸ್ ಸೊಲ್ಯೂಷನ್ ನೂತನ ಕಛೇರಿ ಶುಭಾರಂಭ

ಜೆ.ಜೆ. ಫಿನ್ ಕಾರ್ಪ್ ನ ಇನ್ಸುರೆನ್ಸ್ ಸೊಲ್ಯೂಷನ್ ನೂತನ ಕಛೇರಿಯು ಡಿ.2 ರಂದು ಗುತ್ತಿಗಾರಿನ ಎಸ್ ಎಮ್ ಎಸ್ ಜಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ಉದ್ಘಾಟನೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ನೆರವೇರಿಸಿದರು. ಗುತ್ತಿಗಾರು ಗ್ರಾ.ಪಂ ಸದಸ್ಯರು,ಕಾಂಪ್ಲೆಕ್ಸ್ ಮಾಲಕರಾದ ವೆಂಕಟ್ ವಳಲಂಬೆ ಮೊದಲ ಪಾಲಿಸಿ ಹಸ್ತಾಂತರಿಸಿ ಶುಭ...

ತೊಡಿಕಾನ : ಶ್ರೀ ಮಲ್ಲಿಕಾರ್ಜುನ‌ ದೇವಸ್ಥಾನಕ್ಕೆ ಸಚಿವ ಎಸ್.ಅಂಗಾರ ಭೇಟಿ

ಸಚಿವ ಅಂಗಾರ ಅವರು ತೊಡಿಕಾನ ಶ್ರೀ ಮಲ್ಲಿಕಾರ್ಜುನ‌ ದೇವಳಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸಮಿತಿ ಖಜಾಂಜಿ ಶಿವಾನಂದ ಕುಕ್ಕುಂಬಳ, ಅರಂತೋಡು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕರುಣಾಕರ ಹಾಸ್ಪಾರೆ ವ್ಯಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್, ಸದಸ್ಯರಾದ ಉಮಾಶಂಕರ, ಪ್ರಕಾಶ್ ಪಾನತ್ತಿಲ, ಅರಂತೋಡು ಸೊಸೈಟಿ...

ಕಲಾ ಪ್ರೇಮಿಗಳ ಮನಗೆದ್ದ ಮಾತಿನ ಮಲ್ಲಿ ಮನ್ವಿತಾ

ಮುದ್ದು ಮುದ್ದು ಮಾತಿನಲ್ಲೆ ಆಕರ್ಷಿಸುತ್ತಾ ,ತನ್ನ ಪ್ರತಿಭೆಯ ಮೂಲಕ ಸುಳ್ಯ ತಾಲೂಕಿಗೆ ಹೆಮ್ಮೆಯ ಗರಿಯಾಗುವ ಕನಸ ಹೊತ್ತು ಹೊರಟಿರುವ ಪುಟ್ಟ ಬಾಲೆಯ ಸಾಧನೆಯಿದು. ಒಂದು ಕಲ್ಲು ಸುಂದರ ಶಿಲೆಯಾಗಿ ರೂಪುಗೊಳ್ಳಬೇಕಾದರೆ ಶಿಲ್ಪಿಯ ಏಟುಗಳನ್ನು ಸಹಿಸಿಕೊಳ್ಳಲೇಬೇಕು. ಅಂತೆಯೇ ಪ್ರತಿಯೊಂದು ವ್ಯಕ್ತಿಯ ಪ್ರತಿಭೆಯೂ ಜಗದ ಮುಂದೆ ಅನಾವರಣಗೊಳ್ಳಬೇಕಾದರೆ ಬಂದ ಸೋಲುಗಳನ್ನು ಎದುರಿಸಿ ಮುನ್ನಡೆದರೆ ಮಾತ್ರ ಸಾಧ್ಯ.ನೃತ್ಯ, ಸಂಗೀತ, ಚಿತ್ರ...

ಕೆ.ಟಿ.ವಿಶ್ವನಾಥರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ

ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ರಿಗೆ ಸಾಂಸ್ಕೃತಿಕ ಸಂಘಟನೆಗಾಗಿ ಏಷಿಯಾ ವೇದಿಕ್ ಕಲ್ಚುರಲ್ ರಿಸರ್ಚ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಕಾರ್ಯಕ್ರಮ ಹೊಸೂರ್ ನಲ್ಲಿ ಪದವಿ ಪ್ರಧಾನ ಕಾರ್ಯಕ್ರಮ ನಡೆಯಿತು.ಸಾಂಸ್ಕ್ರತಿಕ ಮತ್ತು ಕ್ರೀಡಾ ಸಂಘಟನೆಯಲ್ಲಿ ತೊಡಗಿಕೊಂಡಿರುವ ಕೆ.ಟಿ.ವಿಶ್ವನಾಥ ರವರು ಕರ್ನಾಟಕ ಜಾನಪದ ಪರಿಷತ್ ಸುಳ್ಯ ತಾಲೂಕು...

ಅಗರ್ ವುಡ್ ಕೃಷಿ ವಿಚಾರ ಸಂಕಿರಣ – ಕಡಿಮೆ ವೆಚ್ಚ- ಹೆಚ್ಚು ಆದಾಯ: ಧರ್ಮೇಂದ್ರ ಕುಮಾರ್

ಸುಳ್ಯ: ಮುಖ್ಯ ಕೃಷಿಯ ನಡುವೆ ಉಪಬೆಳೆಯಾಗಿ ಅತೀ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ಅಗರ್ ವುಡ್ ನಿಂದ ಹೆಚ್ಚು ಆದಾಯ ಗಳಿಸಲು ಸಾಧ್ಯ. ಆದರೆ ಕೃಷಿಕರು ಈ ಬಗ್ಗೆ ಒಂದಷ್ಟು ತಾಂತ್ರಿಕ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಶೃಂಗೇರಿಯ ವನದುರ್ಗಿ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಧರ್ಮೇಂದ್ರ ಕುಮಾರ್ ಹೆಗಡೆ ಹೇಳಿದರು.ಅವರು ಭಾನುವಾರ ಸುಳ್ಯ ತಾಲೂಕಿನ ಮೇನಾಲದಲ್ಲಿ ಕಿರಣ್ ರೈಯವರ...

ಕುಕ್ಕೆ ಸುಬ್ರಹ್ಮಣ್ಯ : ಚಂಪಾಷಷ್ಠಿ, ಲಕ್ಷ ದೀಪೋತ್ಸವದ ಪೂರ್ವಭಾವಿ ಸಭೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಛೇರಿ ಸಭಾಂಗಣದಲ್ಲಿ ನ.25 ರ ಗುರುವಾರದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಅವರ ಅಧ್ಯಕ್ಷತೆಯಲ್ಲಿ ಚಂಪಾಷಷ್ಠಿ ಹಾಗೂ ಲಕ್ಷ ದೀಪೋತ್ಸವದ ಪೂರ್ವಭಾವಿ ಸಭೆ ನಡೆಯಿತು.ಲಕ್ಷ ದೀಪೋತ್ಸವವನ್ನು ಸಂಘ-ಸಂಸ್ಥೆಗಳ ಸಹಕಾರದಲ್ಲಿ ನಡೆಸಲಾಗುವುದು. ಲಕ್ಷ ದೀಪ ಹಚ್ಚುವ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದ್ದು, ದೇವಳದ...

ಕೆ.ಟಿ.ವಿಶ್ವನಾಥರಿಗೆ ಗೌರವ ಡಾಕ್ಟರೇಟ್

ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ರಿಗೆ ಸಾಂಸ್ಕೃತಿಕ ಸಂಘಟನೆಗಾಗಿ ಏಷಿಯಾ ವೇದಿಕ್ ಕಲ್ಚುರಲ್ ರಿಸರ್ಚ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ದೊರೆತಿದೆ.ಸಾಂಸ್ಕ್ರತಿಕ ಮತ್ತು ಕ್ರೀಡಾ ಸಂಘಟನೆಯಲ್ಲಿ ತೊಡಗಿಕೊಂಡಿರುವ ಕೆ.ಟಿ.ವಿಶ್ವನಾಥರವರು ಕರ್ನಾಟಕ ಜಾನಪದ ಪರಿಷತ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾಗಿ,ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯಾಗಿ,ಎನ್ಬೆಂಸಿ...

ಒಕ್ಕಲಿಗ ಸಮುದಾಯದ ಬೇಡಿಕೆ ಹಾಗೂ ಸಮುದಾಯದ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆ- ಡಾ‌.ಕೆ.ವಿ ಚಿದಾನಂದ

ನಮ್ಮ ಊರಿನ ಹಾಗೂ ಒಕ್ಕಲಿಗ ಸಮುದಾಯದ ಅಭಿವೃದ್ಧಿಗಾಗಿ ಈ ಬಾರಿಯ ಒಕ್ಕಲಿಗ ಸಮುದಾಯದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನಾನು ಈ ಭಾಗದಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸುವವರೆಗೂ ಇಲ್ಲಿನ ಸಮುದಾಯ ಬಾಂಧವರಿಗೆ ಇಂಥದೊಂದು ಚುನಾವಣೆಯಿದೆ ಎಂಬ ಮಾಹಿತಿಯೇ ಇರಲಿಲ್ಲ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷ ಡಾ.ಕೆ.ವಿ ಚಿದಾನಂದ ಅವರು ಹೇಳಿದರು‌. ಸುಳ್ಯದಲ್ಲಿ ನ.೨೬ ರಂದು...

ಸುಬ್ರಹ್ಮಣ್ಯ :-ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರಿಗೆ ಸನ್ಮಾನ – ರವಿ ಕಕ್ಕೆಪದವು ಕುರಿತ “ಬೆಂಕಿಯಲ್ಲಿ ಅರಳಿದ ಹೂವು” ಕೃತಿ ಬಿಡುಗಡೆ

ಸಮಾಜ ಸೇವಕ, ರಾಷ್ಟ್ರ ಪ್ರಶಸ್ತಿ ವಿಜೇತ ರವಿ ಕಕ್ಕೆಪದವು ಅವರ ಕುರಿತು ಡಾ| ರಾಜೇಶ್ವರಿ ಗೌತಮ್ ರವರು ಬರೆದ "ಬೆಂಕಿಯಲ್ಲಿ ಅರಳಿದ ಹೂವು" ಕೃತಿ ಬಿಡುಗಡೆ ಹಾಗೂ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರಿಗೆ ಅಭಿನಂದನಾ ಸಮಾರಂಭವು ನ.24 ರ ಬುಧವಾರದಂದು ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯಿತು.ಜೇಸಿಐ ಸುಬ್ರಹ್ಮಣ್ಯ ಕುಕ್ಕೇಶ್ರೀ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಜೇಸಿಐ...

ಬಳ್ಪ : ಚಲಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿ ಸಂಪೂರ್ಣ ಆಹುತಿ

ಬಳ್ಪದ ಪಾದೆ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಂಡುಬಂದು ಸಂಪೂರ್ಣ ಸುಟ್ಟು ಹೋದ ಘಟನೆ ಇಂದು ಸಂಜೆ ನಡೆದಿದೆ. ಪಂಜದ ಕೇಶವ ಆಚಾರಿ ಎಂಬವರು ತಮ್ಮ ಕಾರಿನಲ್ಲಿ ( KA19- P7242) ಏನೆಕಲ್ಲು ಕಡೆಯಿಂದ ಕೆಲಸ ಮುಗಿಸಿ ಬರುತ್ತಿರುವಾಗ ಪಾದೆ ಬಳಿ ಹೊಗೆ ಕಾಣಿಸಿಕೊಂಡಿದೆ. ಬೋನೆಟ್ ತೆರೆಯುವಷ್ಟರಲ್ಲಿ ಬೆಂಕಿ ಹತ್ತಿಕೊಂಡು ಕಾರು ಸಂಪೂರ್ಣ ಹೊತ್ತಿ...

ಡಿ.1 ರಿಂದ 15 ರವರೆಗೆ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ – ಡಿ.9 ರಂದು ಬ್ರಹ್ಮರಥೋತ್ಸವ

ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ವೈಭವಕ್ಕೆ ದಿನಗಣನೆ ಆರಂಭವಾಗಿದೆ. ಡಿ.1ರಂದು ಕೊಪ್ಪರಿಗೆ ಏರುವ ಮೂಲಕ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರಾ ಮಹೋತ್ಸವ ಆರಂಭವಾದರೆ, ಡಿ.15 ಕೊಪ್ಪರಿಗೆ ಇಳಿಸುವುದರ ಮೂಲಕ ಜಾತ್ರಾ ಉತ್ಸವ ಸಮಾಪನಗೊಳ್ಳಲಿದೆ.ಡಿ.9ರಂದು ಚಂಪಾಷಷ್ಠಿಯ ವೈಭವದ ಬ್ರಹ್ಮ ರಥೋತ್ಸವ ಕ್ಷೇತ್ರದಲ್ಲಿ ಜರುಗಲಿದೆ. ಉದ್ಯಮಿ ದಿ.ಮುತ್ತಪ್ಪ ರೈ ಸೇವಾ ರೂಪದಲ್ಲಿ ನೀಡಿದ ಬ್ರಹ್ಮರಥದಲ್ಲಿ...

ದ.ಕ.ವಿಧಾನ ಪರಿಷತ್ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ

ದಕ್ಷಿಣ ಕನ್ನಡ ಕ್ಷೇತ್ರದ ವಿಧಾನ ಪರಿಷತ್ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆಯಾಗಿದ್ದು ಇಂದು ಅವರು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಸುನಿಲ್ ಕುಮಾರ್, ಎಸ್. ಅಂಗಾರ, ಬಿಜೆಪಿ ಜಿಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಉಡುಪಿ‌ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಿಬ್ಬಂದಿಗಳಾಗಿ ಸ್ಥಳೀಯರನ್ನೇ ನೇಮಕ ಮಾಡಲು ಪರಶುರಾಮ ಚಿಲ್ತಡ್ಕ ಒತ್ತಾಯ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಸಿಬ್ಬಂದಿಗಳಾಗಿ ಹೊರಗಿನ ಜನರನ್ನು ನೇಮಕ ಮಾಡುತ್ತಿದ್ದು ಅದರಿಂದ ಸ್ಥಳೀಯ ವಿದ್ಯಾವಂತರು ನಿರುದ್ಯೋಗಕ್ಕೆ ಒಳಗಾಗಿದ್ದಾರೆ. ಇದನ್ನು ಸರಿಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಪರಶುರಾಮ ಚಿಲ್ತಡ್ಕ ಒತ್ತಾಯಿಸಿದ್ದಾರೆ.ಅವರು ನ.20ರಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ದೇವಸ್ಥಾನದ ವಿವಿಧ ಹುದ್ದೆಗಳಿಗೆ ಸ್ಥಳಿಯರು ಅರ್ಜಿ ಹಾಕಿದ್ದರೂ ನೇಮಕಾತಿ ಮಾತ್ರ ಹೊರಗಿನ ಜನರಿಗೆ ಆಗುತ್ತಿದ್ದು ಇಲ್ಲಿಯವರಿಗೆ ತೊಂದರೆಯಾಗುತ್ತಿದೆ. ಸರ್ಪ ಸಂಸ್ಕಾರಕ್ಕೆ...

ಕುಕ್ಕೆ ಸುಬ್ರಹ್ಮಣ್ಯ : ಜಾತ್ರಾ ಪ್ರಯುಕ್ತ ರಥಗಳಿಗೆ ಗೂಟ ಪೂಜೆ ಕಾರ್ಯಕ್ರಮ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಟಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಎಳೆಯುವ ರಥಗಳಿಗೆ ಗೂಟ ಪೂಜಾ ಮಹೂರ್ತ ನ.19ರ ಶುಕ್ರವಾರದಂದು ನೆರವೇರಿತು. ಶ್ರೀ ದೇಗುಲದಲ್ಲಿ ಪೂಜೆ ನೆರವೇರಿದ ಬಳಿಕ ಜಾತ್ರಾ ಸಮಯದಲ್ಲಿ ಎಳೆಯುವ ಬ್ರಹ್ಮರಥ ಮತ್ತು ಪಂಚಮಿ ರಥಗಳನ್ನು ನಿರ್ಮಿಸಲು ಕಾರ್ತಿಕ ಹುಣ್ಣಿಮೆಯ ದಿನವಾದ ಶುಕ್ರವಾರ ಗೂಟ ಪೂಜಾ ಮಹೂರ್ತವನ್ನು ವಿವಿಧ ವೈದಿಕ...

ಕುಲ್ಕುಂದ :- ಬಸವನಮೂಲೆ ಬಸವೇಶ್ವರ ದೇವಸ್ಥಾನದಲ್ಲಿ ಗೋಪೂಜೆ

ಇತಿಹಾಸ ಪ್ರಸಿದ್ಧ ಕುಲ್ಕುಂದ ಜಾನುವಾರು ಜಾತ್ರೆ ಪ್ರಯುಕ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಐತಿಹಾಸಿಕ ಕುಲ್ಕುಂದದ ಬಸವನಮೂಲೆಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗೋಪೂಜೆ ನಡೆಯಿತು. ಕಾರ್ತಿಕ ಹುಣ್ಣಿಮೆಯ ದಿನವಾದ ನ.19ರ ಶುಕ್ರವಾರದಂದು ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಗೋವುಗಳಿಗೆ ಪುಷ್ಪಾಲಂಕಾರ ಮಾಡಿ ಕರೆತರಲಾಯಿತು. ಬಳಿಕ ಈ ಮೊದಲು ಶ್ರೀ ಬಸವೇಶ್ವರ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ...

ಅಮರ ಸುದ್ದಿ ದೀಪಾವಳಿ ವಿಶೇಷಾಂಕ ಮುದ್ದು ಕಂದ ಸ್ಪರ್ಧೆಯ ಬಹುಮಾನ ದೀಕ್ಷಾ ಟ್ರೇಡರ್ಸ್ ನಲ್ಲಿ ವಿತರಣೆ

ಅಮರ ಸುಳ್ಯ ಸುದ್ದಿ ವಾರಪತ್ರಿಕೆ 5 ನೇ ಬಾರಿಗೆ ಹೊರತಂದ ದೀಪಾವಳಿ ವಿಶೇಷಾಂಕದಲ್ಲಿ ಮುದ್ದು ಕಂದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ನಿಧೀಶ್ ಕುದ್ಪಾಜೆಗೆ ದೀಕ್ಷಾ ಡ್ರೇಡರ್ಸ್ ಮಾಲಕರಾದ ಮಾಧವ ರಾವ್ ಕೆ. ಬಹುಮಾನ ವಿತರಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಪೋಷಕರಾದ ಶ್ರೀಮತಿ ಮಮತಾ ಬ್ರಿಜೇಶ್, ಬ್ರಿಜೇಶ್ ಕುದ್ಪಾಜೆ ಹಾಗೂ ಪತ್ರಿಕಾ...

ಅಮರ ಸುದ್ದಿ ದೀಪಾವಳಿ ವಿಶೇಷಾಂಕ ಮುದ್ದು ಕಂದ ಸ್ಪರ್ಧೆಯ ವಿಜೇತರಿಗೆ ಕುಂಕುಂ ಫ್ಯಾಷನ್ ನಲ್ಲಿ ಬಹುಮಾನ ವಿತರಣೆ

ಅಮರ ಸುಳ್ಯ ಸುದ್ದಿ ವಾರಪತ್ರಿಕೆ 5 ನೇ ಬಾರಿಗೆ ಹೊರತಂದ ದೀಪಾವಳಿ ವಿಶೇಷಾಂಕದಲ್ಲಿ ಮುದ್ದು ಕಂದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅದ್ವಿಕ್ ಗೆ ಕುಂಕಂ ಫ್ಯಾಷನ್ ಮಾಲಕರಾದ ಭೀಮಾ ಪಟೇಲ್ ಹಾಗೂ ಧನು ಪಟೇಲ್ ನ.17ರಂದು ಬಹುಮಾನ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪೋಷಕರಾದ ಶ್ರೀಮತಿ ಹವ್ಯಾ, ವಿಜಯಕುಮಾರ್ ಪಾಲಾರ್ ಗುಂಡ್ಯ,...

ಡಿ.12 ರಂದು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ – ಡಾ. ರೇಣುಕಾಪ್ರಸಾದ್ ಕೆ.ವಿ. ನಾಮಪತ್ರ ಸಲ್ಲಿಕೆ

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಗೆ ದ.ಕ. ಜಿಲ್ಲೆ, ಕಾಸರಗೋಡು ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳನ್ನೊಳಗೊಂಡ ಮತ ಕ್ಷೇತ್ರದಿಂದ ಸ್ಪರ್ಧಿಸಲು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಹಾಲಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ. ರೇಣುಕಾ ಪ್ರಸಾದ್ ಕೆ.ವಿ. ನ.16ರಂದು ನಾಮಪತ್ರ ಸಲ್ಲಿಸಿದ್ದಾರೆ. ಸಹಕಾರ ಸಂಘಗಳ ಉಪ...

ಹರಿಹರ ಪಲ್ಲತಡ್ಕ :ಶಾಲೆಯಲ್ಲಿ ಇಂದು ಸಹ ಶೂನ್ಯ ಹಾಜರಾತಿ

ಹರಿಹರ ಪಲ್ಲತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಪಾಠ ಪ್ರವಚನ ಸರಿಯಾಗಿ ನಡೆಸುತ್ತಿಲ್ಲ, ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುತ್ತಿಲ್ಲ ಎಂದು ಆರೋಪಿಸಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದೆ ತಾವೇ ಶಾಲೆಗೆ ಬಂದು ಪ್ರತಿಭಟನೆ ನಡೆಸಿದ ಘಟನೆ ನಿನ್ನೆ(ನ.16) ನಡೆದಿದ್ದು, ಇಂದು(ನ.17) ವಿದ್ಯಾರ್ಥಿಗಳು ಶಾಲೆಗೆ ಬಾರದೆ ಶೂನ್ಯ ಹಾಜರಾತಿ ಆಗಿದೆ. ನಿನ್ನೆ ದಿನ ಕ್ಷೇತ್ರ ಶಿಕ್ಷಣಾಧಿಕಾರಿ...

ನ.18 ರಂದು ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ಡಾ.ಕೆ.ವಿ.ಚಿದಾನಂದ ನಾಮಪತ್ರ ಸಲ್ಲಿಕೆ

ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ದಕ್ಷಿಣ ಕನ್ನಡ, ಉಡುಪಿ, ಹಾಗೂ ಕಾಸರಗೋಡು ಜಿಲ್ಲೆಯ ನಿರ್ದೇಶಕ ಸ್ಥಾನಕ್ಕೆ ನ.18 ರಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಡಿಸೆಂಬರ್ 12ರಂದು ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಪುತ್ತೂರು ಸಹಾಯ ಆಯುಕ್ತರಾದ ಯತೀಶ್ ಉಳ್ಳಾಲ್ ಅವರ ಅದ್ಯಕ್ಷತೆಯಲ್ಲಿ ನ.15 ರಂದು ನಡೆಯಿತು.ಈ ಸಂದರ್ಭದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಡಾ| ನಿಂಗಯ್ಯ ಹಾಗೂ ವ್ಯವಸ್ಥಾಪನಾ ಸಮಿತಿಯ...

ರೈತ ಉತ್ಪಾದಕ ಸಂಸ್ಥೆಯಿಂದ ರೈತರ ಆದಾಯ ಹೆಚ್ಚಳ – ಲ.ವೀರಪ್ಪ ಗೌಡ ಕಣ್ಕಲ್

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ರೈತ ಉತ್ಪಾದಕ ಸಂಸ್ಥೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ಸೇವಾ ಸದನದಲ್ಲಿ ಏರ್ಪಡಿಸಿದ್ದು, ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ಲಯನ್ ವೀರಪ್ಪ ಗೌಡ ಕಣ್ಕಲ್ ಅವರು ಮಾಹಿತಿ ನೀಡಿದರು.ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಿ ಆ ಮೂಲಕ ಕೃಷಿಯನ್ನು ಉದ್ಯಮವನ್ನಾಗಿಸಿ ಕೃಷಿಕರ ಆದಾಯವನ್ನು ಹೆಚ್ಚಿಸುವುದರಿಂದ ಸುಳ್ಯದಲ್ಲಿ...

ವೆಂಕಟರಮಣ ಸೊಸೈಟಿ 453 ಕೋ.ರೂ ವ್ಯವಹಾರ: 1.09 ಕೋಟಿ ಲಾಭ – ಸದಸ್ಯರಿಗೆ 15 % ಡಿವಿಡೆಂಟ್- ಪಿಸಿ ಜಯರಾಮ ಘೋಷಣೆ

ಸುಳ್ಯ: ಈ ಪ್ರಸಕ್ತ ಸಾಲಿನ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ವಾರ್ಷಿಕ 453 ಕೋಟಿ ವ್ಯವಹಾರ ನಡೆಸಿ 1.09 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ 15 ಡಿವಿಡೆಂಡ್ ನೀಡಲಾಗುವುದು. ಶೀಘ್ರದಲ್ಲೇ ಸುಬ್ರಹ್ಮಣ್ಯ ಮತ್ತು ಮಡಂತ್ಯಾರುನಲ್ಲಿ ಶಾಖೆ ಆರಂಭಿಸಲಾಗುವುದು ಎಂದು ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ ಅವರು ಹೇಳಿದರು.ಅವರು ಗೌಡ ಸಮುದಾಯ ಭವನದಲ್ಲಿ ವಾರ್ಷಿಕ...

ಪಂಜ : ಪ್ರಕೃತಿ ಡಿಜಿಟಲ್ ಸ್ಟುಡಿಯೋ ಶುಭಾರಂಭ

ಗುತ್ತಿಗಾರಿನಲ್ಲಿ ಕಳೆದ 27 ವರ್ಷಗಳಿಂದ ಕಾರ್ಯಚರಿಸುತ್ತಿರುವ ಪ್ರಕೃತಿ ಡಿಜಿಟಲ್ ಸ್ಟುಡಿಯೋ & ವಿಡಿಯೋ ಇದರ ಸಹ ಸಂಸ್ಥೆ ಪಂಜದ ವಾಣಿಶ್ರೀ ಕಾಂಪ್ಲೆಕ್ಸ್ ನಲ್ಲಿ ನ.12 ರಂದು ಗಣಹೋಮದೊಂದಿಗೆ ಶುಭಾರಂಭಗೊಂಡಿತು. ಮಾಜಿ ಮಂಡಲ ಪ್ರಧಾನರಾದ ಮುಳಿಯ ತಿಮ್ಮಪ್ಪಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಕೃತಿ ಸ್ಟುಡಿಯೋ ಮಾಲಕರಾದ ಶಿವರಾಮ್ ದೇವ ಹಾಗೂ ಶ್ರೀಮತಿ ಯಶೋಧ ಶಿವರಾಮ್...

ಮರಕತ ದೇವಸ್ಥಾನಕ್ಕೆ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಭೇಟಿ

ಮರಕತ ದೇವಸ್ಥಾನಕ್ಕೆ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಇಂದು ಭೇಟಿ ನೀಡಿ ದೇವರ ದರ್ಶನ ಪಡೆದರು. ಅವರ ಜನ್ಮ ದಿನದ ಅಂಗವಾಗಿ ದೇವರ ದರ್ಶನ ಪಡೆದು ನದಿಯಲ್ಲಿರುವ ದೇವರ ಮೀನಿಗೆ ಆಹಾರವನ್ನು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮುಳಿಯ ಕೇಶವ ಭಟ್, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ನಡುಗಲ್ಲು, ಚಾಮಯ್ಯ ಚೆಮ್ನೂರು....

ಪೈಲಾರು : ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ಹಸ್ತ ಚಾಚಿ ದೀಪಾವಳಿ ಆಚರಿಸಿದ ಟ್ರಸ್ಟ್ ಫಂಡ್

ಅಮರ ಮುಡ್ನೂರು ಗ್ರಾಮದ ಪೈಲಾರ್ ನಿವಾಸಿ ದಿನೇಶ್ ಆಚಾರಿ ಕುಟುಂಬ ಅನಾರೋಗ್ಯದಿಂದ ಸಂಕಷ್ಟದಲ್ಲಿದ್ದು ಅವರಿಗೆ ಸಹಾಯ ಹಸ್ತ ಚಾಚುವ ಮೂಲಕ ಟ್ರಸ್ಟ್ ಫಂಡ್ ದೀಪಾವಳಿ ಆಚರಿಸಿದೆ. ದುಡಿದು ತನ್ನ ಕಾಲಮೇಲೆ ನಿಂತು ಜೀವನ ಸಾಗಿಸುತ್ತಿದ್ದ ದಿನೇಶ್ ಆಚಾರಿಯವರು ಕೆಲ ಸಮಯದಿಂದ ಪಾರ್ಶ್ವವಾಯು ನಿಂದ ಬಳಲುತ್ತಿದ್ದಾರೆ. ಪತ್ನಿ ಮೀನಾಕ್ಷಿ ಅವರು ಕೂಡ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮಗ...

ಕಲಾಮಾಯೆ ಸಾರಥ್ಯದಲ್ಲಿ ‘ಗೂಡೆ ಉಕ್ಕುಡಲಿ’ ಅರೆಭಾಷೆ ಕಿರುಚಿತ್ರ ಬಿಡುಗಡೆ

ಕಲಾಮಾಯೆ ಸಂಸ್ಥೆಯಿಂದ ಹೊರತರಲಾದ ‘ಗೂಡೆ ಉಕ್ಕುಡಲಿ’ ಅರೆಭಾಷೆ ಕಿರುಚಿತ್ರ ಇಂದು ಬಿಡುಗಡೆಗೊಂಡಿತು. ಸುಳ್ಯ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ ಹಾಗೂ ಅಮರ ಸುದ್ದಿ ಪತ್ರಿಕೆಯ ಸಂಪಾದಕ ಮುರಳೀಧರ ಅಡ್ಡನಪಾರೆ ಬಿಡುಗಡೆಗೊಳಿಸಿದರು.ಚಿದಾನಂದ ಪರಪ್ಪ ಅವರ ಕಥೆ, ಚಿತ್ರ ಕಥೆ, ನಿರ್ದೇಶನವಿರುವ ಈ ಕಿರುಚಿತ್ರಕ್ಕೆ ಕಲಾಮಾಯೆಯ ಸುಧೀರ್ ಏನೆಕಲ್ ಸಂಭಾಷಣೆ,...

ದುಷ್ಟತನದ ಮೇಲೆ ಒಳ್ಳೆಯತನದ ವಿಜಯವನ್ನು , ಕತ್ತಲಿನ ಮೇಲೆ ಬೆಳಕಿನ ವಿಜಯವನ್ನು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸಾಧಿಸುವುದೇ ದೀಪಾವಳಿ

ಬಂದೇ ಬಿಟ್ಟಿತು ದೀಪಾವಳಿ.ಯಾವುದೋ ಮೂಲೆಯಲ್ಲಿ ಗಂಟುಸೇರಿದ್ದ ಹಣತೆಗಳು ಹೊರಬರಲಾರಂಭಿಸಿವೆ. ದೇಶದಲ್ಲೆಡೆ ದೀಪಾವಳಿ ಸಂಭ್ರಮ ಕಳೆ ಹೆಚ್ಚಿದೆ.ಅಂತರಂಗದಲ್ಲಿರುವ ಕತ್ತಲೆಯನ್ನು ಓಡಿಸಿ , ಬೆಳಕಿನ ದೀಪವ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ದಿವ್ಯ ಜ್ಯೋತಿಯ ಹಬ್ಬವೇ ದೀಪಾವಳಿ. ದುಷ್ಟತನದ ಮೇಲೆ ಒಳ್ಳೆಯತನದ ವಿಜಯವನ್ನು , ಕತ್ತಲಿನ ಮೇಲೆ ಬೆಳಕಿನ ವಿಜಯವನ್ನು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು...

ಜಯಾನಂದ ಸಂಪಾಜೆಗೆ ಜಿಲ್ಲಾ ರಾಜೋತ್ಸವ ಪ್ರಶಸ್ತಿ

ಅರಂತೋಡು: ಯಕ್ಷಗಾನ ಕ್ಷೇತ್ರದಲ್ಲಿ ಅನುಪಮ ಸಾಧನೆ ಗೈದ ಹಿನ್ನೆಲೆಯಲ್ಲಿ ಜಯಾನಂದ ಸಂಪಾಜೆ ಸೇರಿದಂತೆ ಒಟ್ಟಾರೆ 58 ಮಂದಿ ಸಾಧಕರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಾಗಿದ್ದಾರೆ. ರಾಜ್ಯೋತ್ಸವದ ದಿನದಂದು ಇವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಬಹು ವರ್ಷದ ಯಕ್ಷಗಾನದ ಅನುಭವ ಹೊಂದಿರುವ ಜಯಾನಂದ ಅವರು ಹಲವು ಪ್ರಸಂಗಗಳಲ್ಲಿ ತನ್ನದೇ ಆದ ವಿಶಿಷ್ಟ...

ಪತ್ರಕರ್ತರ ಸಮುದಾಯ ಭವನದ ಕಾಮಗಾರಿಗೆ ಡಾ.ಕೆ.ವಿ.ಚಿದಾನಂದರಿಂದ ಚಾಲನೆ

ಸುಳ್ಯ ತಾಲೂಕು ಪಂಚಾಯತ್ ವತಿಯಿಂದ ಅಂಬೆಟಡ್ಕದಲ್ಲಿ ನೀಡಿರುವ 5 ಸೆಂಟ್ಸ್ ಜಾಗದಲ್ಲಿ ನಿರ್ಮಾಣವಾಗಲಿರುವ ಪತ್ರಕರ್ತರ ಸಮುದಾಯ ಭವನ ‘ಪ್ರೆಸ್ ಕ್ಲಬ್ ‘ ಕಟ್ಟಡದ ಕಾಮಗಾರಿ ಇಂದು ಚಾಲನೆ ನೀಡಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ದೀಪ ಬೆಳಗಿಸಿ, ಅಡಿಪಾಯಕ್ಕೆ ಶಿಲೆ ಇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಎಲ್ಲರ ಸಹಕಾರದಲ್ಲಿ ಪತ್ರಕರ್ತರ...

ಗುತ್ತಿಗಾರು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ – ಸದಸ್ಯರಿಗೆ 6% ಡಿವಿಡೆಂಟ್ ಘೋಷಣೆ

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಯವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನದಲ್ಲಿ ಇಂದು ನಡೆಯಿತು. ಸಂಘವು ವಾರ್ಷಿಕ 1.18 ಕೋಟಿ ಲಾಭಾಂಶ ಹೊಂದಿದ್ದು ಸದಸ್ಯರಿಗೆ ಶೇ 6 ಡಿವಿಡೆಂಟ್ ವಿತರಣೆಗೆ ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷರು ಹೇಳಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕಿಶೋರ್ ಕುಮಾರ್ ಅಂಬೆಕಲ್ಲು, ನಿರ್ದೇಶಕರುಗಳಾದ...

ಮೂಲಭೂತ ಸೌಕರ್ಯಕ್ಕೆ ಗ್ರಾಮಸ್ಥರ ಒಕ್ಕೊರಲ‌ ಒತ್ತಾಯ – ಡಿ.ಸಿ ಗ್ರಾಮ ವಾಸ್ತವ್ಯದ ಬಳಿಕ ಗ್ರಾಮಸ್ಥರ ಸಮಸ್ಯೆಗಳಿಗೆ ಸಿಗುವುದೇ ಸ್ಪಂದನೆ ?

ಅಮರ ಮುಡ್ನೂರು ಗ್ರಾಮದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ಬಳಿ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್, ಬೋರ್ ವೇಲ್ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.ಜಿಲ್ಲಾಧಿಕಾರಿ ಅವರ ಗ್ರಾಮ ವಾಸ್ತವ್ಯದ ಸಂದರ್ಭ ಅಹವಾಲು ಸ್ವೀಕರಿಸಿದ ಸಂದರ್ಭ ಜನರು ಡಿ.ಸಿ ಅವರನ್ನು ಆಗ್ರಹಿಸಿದರು.ಕೆಲ ಸಮಸ್ಯೆಗಳು ಇನ್ನೂ ಪರಿಹಾರವಾಗದಕ್ಕೆ ತಾಲೂಕು ಅಧಿಕಾರಿಗಳನ್ನು ಡಿಸಿ ಅವರು...

ಸುಬ್ರಹ್ಮಣ್ಯ : ಕಡವೆ ಗುದ್ದಿ ಹವ್ಯಾಸಿ ಭಾಗವತ ರಾಮಚಂದ್ರ ಅರ್ಬಿತ್ತಾಯ ಮೃತ್ಯು

ಸುಮಾರು 16 ವರ್ಷಗಳಿಂದ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ನ ಆಶ್ರಯದಲ್ಲಿರುವ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಹೆಡ್ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದ ರಾಮಚಂದ್ರ ಅರ್ಬಿತ್ತಾಯರು ಇಂದು ಬೆಳಿಗ್ಗೆ 5:45 ರ ಸುಮಾರಿಗೆ ತಮ್ಮ ಸಹೋದರ ರವಿ ಅರ್ಬಿತ್ತಾಯರೊಂದಿಗೆ ಕುಲ್ಕುಂದದ ಸೋಮಶೇಖರ್ ಎಂಬವವರ ಮನೆಗೆ ಬ್ಯಾಡ್ಮಿಂಟನ್ ಆಟವಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಅವರು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ...

ಸುಬ್ರಹ್ಮಣ್ಯ : ಕಡವೆ ಗುದ್ದಿ ಹವ್ಯಾಸಿ ಭಾಗವತ ರಾಮಚಂದ್ರ ಅರ್ಬಿತ್ತಾಯ ವಿಧಿವಶ

ಸುಮಾರು 16 ವರ್ಷಗಳಿಂದ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ನ ಆಶ್ರಯದಲ್ಲಿರುವ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಹೆಡ್ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದ ರಾಮಚಂದ್ರ ಅರ್ಬಿತ್ತಾಯರು ಇಂದು ಬೆಳಿಗ್ಗೆ ತಮ್ಮ ಸಹೋದರ ರವಿ ಅರ್ಬಿತ್ತಾಯರೊಂದಿಗೆ ಕುಲ್ಕುಂದದ ಸೋಮಶೇಖರ್ ಎಂಬವವರ ಮನೆಗೆ ಬ್ಯಾಡ್ಮಿಂಟನ್ ಆಟವಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಅವರು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಹತ್ತಿರದ ಗುಡ್ಡದಿಂದ ಕಡವೆ...

ಕುಕ್ಕೆ ಸುಬ್ರಹ್ಮಣ್ಯ : ಸ್ವಚ್ಚ ಮಂದಿರ ಸೇವಾ ಅಭಿಯಾನ – ಏಕಾದಶಿಗೆ ನೆರವೇರುವ ಶಾಶ್ವತ ಸೇವೆ – ಸ್ವಚ್ಚತೆಗೆ ಭಕ್ತರಿಗೆ ಅವಕಾಶ – ಏಕಾದಶಿ ಸ್ವಚ್ಚ ಸೇವಾ ದಿವಸ್

ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯ ತಾಣಮತ್ತು ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಿಂದ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡಲು ಆಡಳಿತ ಮಂಡಳಿಯು ಸ್ವಚ್ಚ ಮಂದಿರ ಸೇವಾ ಅಭಿಯಾನವನ್ನು ಆರಂಭಿಸಿದೆ. ಪ್ರತಿ ಏಕಾದಶಿಯಂದು ಕ್ಷೇತ್ರಾದ್ಯಂತ ಏಕಕಾಲದಲ್ಲಿ ಸ್ವಚ್ಚತಾ ಕಾರ್ಯ ನಡೆಸುವ ಈ ಯೋಜನೆಯು ಕ್ಷೇತ್ರ ಸ್ವಚ್ಚತೆ ಸೇರಿದಂತೆ ಕ್ಷೇತ್ರಕ್ಕೆ ಬರುವ...

ಜಿ.ಎಲ್ ಆಚಾರ್ಯ ಜ್ಯುವೆಲರ್ಸ್ ನಲ್ಲಿ ಪ್ರಾಚಿ ಆ್ಯಂಟಿಕ್ ಕಲೆಕ್ಷನ್ ಬಿಡುಗಡೆ

ಜಿ.ಎಲ್ ಆಚಾರ್ಯ ಜ್ಯುವೆಲರ್ಸ್ ಪುತ್ತೂರು ಮಳಿಗೆಯಲ್ಲಿ "ಪ್ರಾಚಿ ಆ್ಯಂಟಿಕ್ ಕಲೆಕ್ಷನ್" ಪಾರಂಪರಿಕ ವಿನ್ಯಾಸದ ಚಿನ್ನಾಭರಣಗಳ ಸಂಗ್ರಹವನ್ನು ಅ.08 ರಂದು ಬಿಡುಗಡೆ ಮಾಡಲಾಯಿತು. ನೂತನ "ಪ್ರಾಚಿ ಆ್ಯಂಟಿಕ್ ಕಲೆಕ್ಷನ್ " ವಿಭಾಗವನ್ನು ಪುತ್ತೂರಿನ ಖ್ಯಾತ ವೈದ್ಯ ದಂಪತಿ ಡಾ.ಚಂದ್ರಶೇಖರ ರಾವ್ ಮತ್ತು ಡಾ.ಪೂರ್ಣಾ.ಸಿ. ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅತಿಥಿಗಳನ್ನು ವೇದಾ ಲಕ್ಷ್ಮೀಕಾಂತ್ ಹಾಗೂ ಮೇಘ ಸುಧನ್ವ...

ನಿಂತಿಕಲ್ಲು : ಮಯೂರ ಗೋಲ್ಡ್ ಫ್ಯಾಲೇಸ್ ಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್

ಇಂದು ಸುಳ್ಯಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ . ಶಿವಕುಮಾರ್ ಅವರು ಬಳಿಕ ಕುಕ್ಕೆ ಸುಬ್ರಹ್ಮಣ್ಯ ಹೋಗಿ ನಂತರ ನಿಂತಿಕಲ್ಲಿನ ಎಂ.ಮಾಧವ ಗೌಡ ಕಾಮಧೇನು ಅವರ ಧರ್ಮಶ್ರೀ ಆರ್ಕೇಡ್ ನಲ್ಲಿರುವ ಮಯೂರ ಗೋಲ್ಡ್ ಫ್ಯಾಲೇಸ್ ಗೆ ಭೇಟಿ ನೀಡಿದರು. ಉದ್ಯಮಿ ಹಾಗೂ ಕಾಮಧೇನು ಗ್ರೂಪ್ಸ್ ಮಾಲಕ ಎಂ.ಮಾಧವ ಗೌಡ , ಮಯೂರ ಗೋಲ್ಡ್ ಮಾಲಕ ದೀಕ್ಷಿತ್...

ಮಡಪ್ಪಾಡಿ : ಗೆಲ್ಲು ಕಡಿಯುತ್ತಿದ್ದ ವೇಳೆ ಮರದಲ್ಲಿದ್ದ ಬಳ್ಳಿ ಸಿಲುಕಿ ಮೃತ್ಯು

ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಮರದಲ್ಲಿ ಇದ್ದ ಬಳ್ಳಿಯೊಂದು ಸಿಲುಕಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಕೇವಳದಲ್ಲಿ ನಡೆದಿದೆ. ಕೇವಳ ಹೂವಪ್ಪ ಗೌಡರವರು ಮಧ್ಯಾಹ್ನ ವೇಳೆ ತನ್ನ ಮನೆಯ ಎದುರಿನ ಸಣ್ಣ ಗಾತ್ರದ ಮರದ ಗೆಲ್ಲು ಕಡಿಯಲು ಹತ್ತಿದ್ದರು. ಗೆಲ್ಲು ಬೀಳುವ ಸಂದರ್ಭದಲ್ಲಿ ಮರದಲ್ಲಿದ್ದ ಹಬ್ಬಿದ್ದ ಬಳ್ಳಿಗೆ ಅವರು ಆಕಸ್ಮಿಕವಾಗಿ ಸಿಲುಕಿದರೆನ್ನಲಾಗಿದೆ....

ಗುತ್ತಿಗಾರು : ಗಾಂಧಿಜಯಂತಿ ಅಂಗವಾಗಿ ಬಿಜೆಪಿ ನೇತೃತ್ವದಲ್ಲಿ ನದಿಗಳ ಸ್ವಚ್ಚತೆ

ಗಾಂಧಿಜಯಂತಿ ಅಂಗವಾಗಿ ಬಿಜೆಪಿ ಗುತ್ತಿಗಾರು ಗ್ರಾಮ ಸಮಿತಿ ನೇತೃತ್ವದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿ ಹರಿಯುವ ಶಂಖತೀರ್ಥ ನದಿಯ ಸ್ವಚ್ಚತಾ ಕಾರ್ಯಕ್ರಮ ಇಂದು ನಡೆಯಿತು. ದೇವಳದ ಸುತ್ತ ಹರಿಯುವ ನದಿಯಲ್ಲಿ ಬೆಳೆದ ಕಾಡು ಗಿಡಗಳು ಹಾಗೂ ತ್ಯಾಜ್ಯ ಪ್ಲಾಸ್ಟಿಕ್ ಮತ್ತು ಹುಲ್ಲು ಗಳನ್ನು ಕಡಿದು ಸ್ವಚ್ಛ ಗೊಳಿಸಲಾಯಿತು.ಈ ಸ್ವಚ್ಚತಾ ಕಾರ್ಯದಲ್ಲಿ ವಳಲಂಬೆ ದೇವಸ್ಥಾನದ...

ಐವರ್ನಾಡು : ಮಕ್ಕಳ ಮಾನಸಿಕ, ದೈಹಿಕ ಭದ್ರತೆ ಹಾಗೂ ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಾಗಾರ

ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇಲ್ಲಿ ಮಕ್ಕಳ ಮಾನಸಿಕ ಹಾಗೂ ದೈಹಿಕ ಭದ್ರತೆ ಹಾಗೂ ಸುರಕ್ಷತೆಯ ಬಗ್ಗೆ ಮಾಹಿತಿ ಸೆ.29ರಂದು ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರದಲ್ಲಿ ಮಾಹಿತಿಯನ್ನು ಸ್ಥಳೀಯ ವೈದ್ಯರಾದ ಕುಮಾರಿ ಪ್ರಿಯಾಂಕ ನಾಟಿಕೇರಿ ಅವರು ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ಮಹಮದ್ ಇಸಾಕ್ ಅವರು ಮತ್ತು ಆಂಗ್ಲ ಭಾಷಾ ಉಪನ್ಯಾಸಕರಾದ ಶ್ರೀಯುತ ಚಾರ್ಲ್ಸ್ ಅವರು...

ಐವರ್ನಾಡು : ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ – ದತ್ತಿ ನಿಧಿ ಹಾಗೂ ಪುಸ್ತಕ ವಿತರಣೆ, ವೈದ್ಯಕೀಯ ಸಲಕರಣೆ ಖರೀದಿಗೆ ನೆರವು

ಐವರ್ನಾಡು ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇವುಗಳ ಆಶ್ರಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ, ದತ್ತಿ ನಿಧಿ ಹಾಗೂ ಪಠ್ಯ ಪೂರಕ ಅಭ್ಯಾಸ ಪುಸ್ತಕ ವಿತರಣೆ, 9ನೇ ತರಗತಿ ವಿದ್ಯಾರ್ಥಿನಿಗೆ ವೈದ್ಯಕೀಯ ಶ್ರವಣ ಸಾಧನ...

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತೆ ಶ್ವೇತಾರಿಗೆ ಸನ್ಮಾನ

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತೆ ಶ್ವೇತಾ ಅವರಿಗೆ ಸಾರ್ವಜನಿಕ ಸನ್ಮಾನ ಸೆ.25 ರಂದು ಊರವರು ಹಾಗೂ ಎಸ್ ಡಿ ಎಂ ಸಿ ವತಿಯಿಂದ ಅಭಿನಂದಿಸಲಾಯಿತು. ದೇವಚಳ್ಳ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುಲೋಚನಾ ದೇವ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ಎಸ್ ಪಿ, ದೇವಚಳ್ಳ ಗ್ರಾ.ಪಂ ಉಪಾಧ್ಯಕ್ಷೆ ರಾಜೇಶ್ವರಿ ಮಣಿಕಂಠ ಮಾವಿನಕಟ್ಟೆ ಸದಸ್ಯರಾದ...

ಗುತ್ತಿಗಾರು : ರಾಜ್ಯಮಟ್ಟದ ಪ್ರತಿಭೆ ಅನನ್ಯ ಳಿಗೆ ಗೌಡರ ಯುವ ಸೇವಾ ಸಂಘದಿಂದ ಗೌರವಾರ್ಪಣೆ

ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಗುತ್ತಿಗಾರು ಗ್ರಾಮ ಸಮಿತಿ ವತಿಯಿಂದ ಎಸ್‌ ಎಸ್ ಎಲ್ ಸಿ ಯ ಪರೀಕ್ಷೆಯಲ್ಲಿ 625/625 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ನಮ್ಮ ಊರಿಗೆ ಕೀರ್ತಿ ತಂದ ಮಣಿಯಾನಮನೆ ವೇದಾವತಿ ದುರ್ಗೆಶ್ ರವರ ಸುಪುತ್ರಿ ಅನನ್ಯ ರವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಊರಿನ ಹಿರಿಯರಾದ...

ಅರೆಭಾಷೆ ಸಂಸ್ಕೃತಿ ಶಿಬಿರ ಸಮಾಪನ : ಆಚಾರ ವಿಚಾರಗಳಲ್ಲಿ ಯುವಜನಾಂಗ ಸಕ್ರಿಯವಾಗಿ ಪಾಲ್ಗೊಳ್ಳಬೇಕು – ಕಜೆಗದ್ದೆ

ಮದುವೆ, ತೊಟ್ಟಿಲು ಶಾಸ್ತ್ರ ಮುಂತಾದ ಗೌಡ ಸಮುದಾಯದ ಶುಭ ಕಾರ್ಯಗಳ ಸಂದರ್ಭಗಳಲ್ಲಿ ಹಾಡುವ ಶೋಬಾನೆ ಹಾಡುಗಳು ಮಹಿಳೆಯರ ನಾಲಗೆಯ ತುದಿಯಲ್ಲೇ ಇರಬೇಕು. ದೈವಾರಾಧನೆ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಕೈಗೊಳ್ಳುವ ಆಚರಣೆಗಳಲ್ಲಿ ಯುವಜನಾಂಗವೂ ಸಕ್ರೀಯವಾಗಿ ಪಾಲ್ಗೊಂಡರೆ ಸಮುದಾಯದ ಸಂಸ್ಕೃತಿ ಆಚಾರ ವಿಚಾರಗಳು ನಶಿಸದೆ ಉಳಿಯುವಂತಾಗುತ್ತದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ...

ಸುಳ್ಯ : ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ 105ನೇ ಜನ್ಮದಿನಾಚರಣೆ

ರಾಷ್ಟ್ರೀಯವಾದಿ ಚಿಂತಕ, ಭಾರತೀಯ ಜನಸಂಘದ ಸಂಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರವರ 105ನೇ ಜನ್ಮ ಜಯಂತಿ ಆಚರಣೆ ಇಂದು ಸುಳ್ಯ ದ ಬಿ.ಜೆ.ಪಿ ಕಛೇರಿಯಲ್ಲಿ ನಡೆಯಿತು. ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ವಹಿಸಿದ್ದರು. ನಗರ ಪಂಚಾಯತ್...

ಕೋಲ್ಚಾರಿನಲ್ಲಿ ಕೋಮು ಸೌಹಾರ್ದತೆ ಕೆಡಿಸುವ ಹುನ್ನಾರ ನಡೆಯುತ್ತಿದೆ – ದಿನೇಶ್ ಕಣಕ್ಕೂರು

ಕೋಲ್ಚಾರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಸುದರ್ಶನ ಪಾತಿಕಲ್ಲು ಅವರು ಒಂದು ನಿರ್ದಿಷ್ಟ ಸಮುದಾಯದ ಹುಡುಗರನ್ನು ತಾಲಿಬಾನ್ ಗಳು ಎಂದು ಕರೆದಿಲ್ಲ. ತಮ್ಮ ಸ್ವಂತ ವಸ್ತುಗಳನ್ನು ಹಾಳು ಮಾಡುವುದು ತಾಲಿಬಾನ್ ಗಳ ಸಂಸ್ಕೃತಿ ಎಂದು ಬುದ್ದಿಮಾತು ಹೇಳಿದ್ದಾರೆ ಅಷ್ಟೇ. ಆದರೆ ಕೆಲವರು ಕೋಮು ಸೌಹಾರ್ದತೆ ಕೆಡಿಸಲು ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ ಪ್ರತ್ಯಕ್ಷದರ್ಶಿ...

ಮರ್ಕಂಜ: ನೆಟ್ವರ್ಕ್ ಸಮಸ್ಯೆ ಕುರಿತು ಪ್ರಧಾನಿ ಮೋದಿ ಗಮನ ಸೆಳೆಯಲು ಇಮೇಲ್ ಅಭಿಯಾನ

ಮರ್ಕಂಜ ಗ್ರಾಮದಲ್ಲಿ ಬಹುದಿನಗಳಿಂದ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಅದರ ಗಂಭೀರತೆಯನ್ನು ಮೋದಿ ಅವರಿಗೆ ಅರ್ಥೈಸಲು SEND EMAIL TO PM ಎಂಬ ಪತ್ರ ಚಳುವಳಿಕಾರ್ಯಕ್ರಮ ಹಮ್ಮಿಕೊಳ್ಳಲು ಮರ್ಕಂಜದ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಗ್ರಾಮದ ಪ್ರತಿ ಮನೆಯನ್ನು ಸಂಪರ್ಕಿಸಿ ಇಮೇಲ್ ಐಡಿ ಹೊಂದಿದವರನ್ನು ಗುರುತಿಸಿ ಚಳುವಳಿಯಲ್ಲಿ ಭಾಗವಹಿಸಲು ತೀರ್ಮಾನಿಸಿದ್ದಾರೆ. ಸೆ.22 ರಂದು ಸಂಜೆ 5 ಗಂಟೆಗೆ ರೆಂಜಾಳ‌ ವಿನಾಯಕ...

ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಬಗ್ಗೆ ಡಿ ವಿ ಸ್ಪಷ್ಟನೆ- ಸೈಬರ್ ಕ್ರೈಂ ಪೊಲೀಸರಿಗೆ ದೂರು – ತೇಜೋವಧೆ ಮಾಡಲ ವಿಡಿಯೋ ಸೃಷ್ಟಿ – ಡಿ ವಿ ಸದಾನಂದ ಗೌಡ ಹೇಳಿಕೆ

ಕೇಂದ್ರದ ಮಾಜಿ ಸಚಿವ ಡಿ. ವಿ ಸದಾನಂದ ಗೌಡ ಅವರದೆಂದು ಹೇಳಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು ಈ ಬಗ್ಗೆ ಸದಾನಂದ ಗೌಡ ಅವರು ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ‘ನನ್ನ ವಿರುದ್ಧ ಫ್ಯಾಬ್ರಿಕೇಟಡ್, ಫೇಕ್, ಮಿಶ್ರಿತ ವಿಡಿಯೋ ಒಂದನ್ನು ಮಾಡಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ....

ಮಿತ್ರ ಮಂಡಲ ನಾಗತೀರ್ಥ ನೂತನ ಪದಾಧಿಕಾರಿಗಳ ಪದಗ್ರಹಣ – ಅಧ್ಯಕ್ಷ ನಿತಿನ್ ಕುಮಾರ್, ಕಾರ್ಯದರ್ಶಿ ನವೀನ್,ಖಜಾಂಜಿ ಯತೀಶ್

ಮಿತ್ರ ಮಂಡಲ ನಾಗತೀರ್ಥ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸೆ. 18 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಪಾರ್ವತಿ ಸಭಾ ಭವನದಲ್ಲಿ ನಡೆಯಿತು.ನೂತನ ಅಧ್ಯಕ್ಷರಾಗಿ ನಿತಿನ್ ಕುಮಾರ್ ನಾಗತೀರ್ಥ ಕಾರ್ಯದರ್ಶಿಯಾಗಿ ನವೀನ್ ನಾಗತೀರ್ಥ, ಕೋಶಾಧಿಕಾರಿಯಾಗಿ ಯತೀಶ್ ನಾಗತೀರ್ಥ, ಕ್ರೀಡಾ ಕಾರ್ಯದರ್ಶಿ ಹರ್ಷಿತ್ ಸಂಪ ಆಯ್ಕೆಯಾಗಿದ್ದರು.ನೂತನ ಪದಾಧಿಕಾರಿಗಳಿಗೆ ಯುವ ಜನ ಸಂಯುಕ್ತ ಮಂಡಳಿ...

ಯು.ಸಂ.ಮಂಡಳಿ ಮಹಾಸಭೆ – ಅಧ್ಯಕ್ಷ ದಯಾನಂದ ಕೇರ್ಪಳ, ಕಾರ್ಯದರ್ಶಿ ಸತೀಶ್ ಮೂಕಮಲೆ

ಯುವಜನ ಸಂಯುಕ್ತ ಮಂಡಳಿಯ 2020-21 ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.18ರಂದು ಮಂಡಳಿ ಅಧ್ಯಕ್ಷ ಅನಿಲ್ ಪೂಜಾರಿಮನೆ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ದಿಲೀಪ್ ಬಾಬ್ಲುಬೆಟ್ಟು, ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ವೆಂಕಟ್ರಮಣ ಕೆ.ಎಸ್. ಉಪಸ್ಥಿತರಿದ್ದರು. ಕೊರೊನಾ ವಾರಿಯರ್ ಆಗಿ ಪಾರದರ್ಶಕ ಸೇವೆಗಾಗಿ ಮಂಡಳಿಯ ಪೂರ್ವಾಧ್ಯಕ್ಷ ಶೈಲೇಶ್ ಅಂಬೆಕಲ್ಲು ರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ...

ದೇವಚಳ್ಳ ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ

ರಾಜ್ಯ ಪ್ರಶಸ್ತಿಗೆ ಭಾಜನವಾಗಿರುವ ದೇವಚಳ್ಳ ಗ್ರಂಥಾಲಯವು ಇಂದು ಡಿಜಿಟಲ್ ಗ್ರಂಥಾಲಯವಾಗಿ ನವೀಕೃತಗೊಂಡು ಉದ್ಘಾಟನೆಗೊಂಡಿತು.ಶಿಕ್ಷಣ ಇಲಾಖೆಯ ಮಹತ್ವದ ಪರಿಕಲ್ಪನೆಯಡಿ ಕೇವಲ ಹದಿನೈದು ದಿನಗಳಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಸಾರ್ವಜನಿಕ ಗ್ರಂಥಾಲಯವು ಅತ್ಯಂತ ಸುವ್ಯವಸ್ತಿತವಾಗಿ ಡಿಜಿಟಲ್ ಗ್ರಂಥಾಲಯವಾಗಿ ಮಾರ್ಪಟ್ಟಿದೆ. ಅತ್ಯಾಕರ್ಷಕ ಗೋಡೆ ಬರಹ, ಸುಂದರ ಚಿತ್ರಗಳು, 10,000 ಕ್ಕೂ ಮಿಕ್ಕಿದ ಪುಸ್ತಕಗಳು ಸುಸಜ್ಜಿತ ವಾಚನಾಲಯಗಳಿಂದ ಕೂಡಿರುವ ಗ್ರಂಥಾಲಯಕ್ಕೆ ಇಂದು...

ಮೋದಿ ಹುಟ್ಟುಹಬ್ಬದ ಅಂಗವಾಗಿ ಮಂಡಲ ಸಮಿತಿ ವತಿಯಿಂದ ವಿಶೇಷ ಪೂಜೆ

ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಯವರ ನೇತೃತ್ವದಲ್ಲಿ ಪಕ್ಷದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಜಿಲ್ಲಾ ಬಿಜೆಪಿ ಸದಸ್ಯರಾದ ವೆಂಕಟ್ ದಂಬೆಕೋಡಿ, ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ,...

ಮೋದಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿ ಕಲ್ಕುಡ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸುಳ್ಯ ಗಾಂಧಿನಗರ ಕಲ್ಕುಡ ದೈವಸ್ಥಾನದಲ್ಲಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಪಕ್ಷದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಮೋದಿಯವರಿಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬರಬೇಕು ಎಂದು ಪ್ರಾರ್ಥಿಸಲಾಯಿತು. ಧರ್ಮದರ್ಶಿ ಉಮೇಶ್ ವಾಗ್ಲೆ ಪ್ರಾರ್ಥನೆ ನೆರೆವೇರಿಸಿದರು. ಈ ಸಂದರ್ಭದಲ್ಲಿ ಕಲ್ಕುಡ ದೈವಸ್ಥಾನದ ಸಮಿತಿಯ ಸದಸ್ಯರು ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಮೊಕ್ತೇಸರರಾದ ಪಿ.ಕೆ ಉಮೇಶ್,...

ವಳಲಂಬೆ : ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ

ಪ್ರಧಾನಿ ನರೇಂದ್ರ ಮೋದಿಯವರ 71 ನೇ ಹುಟ್ಟುಹಬ್ಬದ ಅಂಗವಾಗಿ ವಳಲಂಬೆ ಶ್ರೀ ಶಂಖಪಾಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಪ್ರಮುಖರಾದ ಬಿ.ಕೆ.ಬೆಳ್ಯಪ್ಪ ಗೌಡ, ಎ.ವಿ.ತೀರ್ಧರಾಮ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ವೆಂಕಟ್ ವಳಲಂಬೆ, ಅರ್ಚಕರಾದ ಪರಮೇಶ್ವರ ಭಟ್, ಮಹಾಬಲೇಶ್ವರ ಭಟ್ ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.(ಚಿತ್ರ :...

ನರೆಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಕಾಯರ್ತೋಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಇಂದು ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮ ದಿನದ ಆಚರಣೆಯ ಅಂಗವಾಗಿ ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಪಕ್ಷದ ವತಿಯಿಂದ ನೆರೆವೇರಿಸಲಾಯಿತು. ಈ ಸಂದರ್ಭದಲ್ಲಿ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಮೂಕ್ತೇಸರಾದ ಪಿ.ಕೆ.ಉಮೇಶ್ ದೇವರಿಗೆ ಪ್ರಾರ್ಥನೆ ಸಲ್ಲಿಸಿ ,ಕಾಯರ್ತೋಡಿ ದೇವಸ್ಥಾನದ ಪ್ರಧಾನ ಅರ್ಚಕರಾದ ನೀಲಕಂಠ ವಿಶೇಷ ಪೂಜೆ ನೆರೆವೇರಿಸಿದರು, ವಿಜಯ ದೇಗೊಂಡಿ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ – ನವಾನ್ನ ಪ್ರಸಾದ

ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸೋಮವಾರ ಹೊಸ್ತಾರೋಗಣೆ (ನವಾನ್ನ ಪ್ರಸಾದ) ಮತ್ತು ಕದಿರು ಕಟ್ಟುವ ಕಾರ್ಯವು ವಿವಿಧ ವೈಧಿಕ ವಿದಿ ವಿಧಾನಗಳೊಂದಿಗೆ ನೆರವೇರಿತು. ಈ ನಿಮಿತ್ತ ಪ್ರಾತಃಕಾಲ ಪಂಚಾಮೃಮಹಾಭಿಷೇಕವನ್ನು ಶ್ರೀ ದೇವರ ಮೂಲ ವಿಗ್ರಹಕ್ಕೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ನೆರವೇರಿಸಿದರು. ವರ್ಷದಲ್ಲಿ ಹೊಸ್ತಾರೋಗಣೆಯ ಒಂದು ದಿನ...

ಅಕ್ರಮಗಳನ್ನು ಸಕ್ರಮ ಮಾಡುವುದೇ ನ.ಪಂ.ಸದಸ್ಯ ಉಮ್ಮರ್ ಅವರ ಉದ್ಯೋಗ : ಬಿಜೆಪಿ ಆರೋಪ

ನ.ಪಂ.ಸದಸ್ಯ ಉಮ್ಮರ್ ಅವರು ನಗರದಲ್ಲಿನ ಫುಟ್ಪಾತ್ ನ ತಡೆಬೇಲಿಯನ್ನು ತಮ್ಮ ಪ್ರಭಾವ ಬಳಸಿ ತೆಗೆದಿದ್ದಾರೆ ಹಾಗೂ ಹಲವು ಅನಧಿಕೃತ - ಅಕ್ರಮ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ನಗರ ಮಹಾಶಕ್ತಿಕೇಂದ್ರ ಗಂಭೀರ ಆರೋಪ ಹೊರಿಸಿದೆ. ಅಕ್ರಮವನ್ನು ಸಕ್ರಮ ಮಾಡುವ ಉದ್ಯೋಗವನ್ನೇ ಮಾಡುತ್ತಿರುವ ಉಮ್ಮರ್ ಅವರ ಮೇಲೆ ನ.ಪಂ. ಅವರು ಸೂಕ್ತ ಕ್ರಮ ಕೈಗೊಳ್ಳಬೇಕು...

ಯಾರದ್ದೋ ಸಾಧನೆಗೆ ತೃಪ್ತಿ ಪಡಬೇಡಿ ತಾವೇ ಸಾಧನೆ ಮಾಡಿ- ಸಚಿವ ಎಸ್. ಅಂಗಾರ

ಯಾರದ್ದೋ ಸಾಧನೆಗೆ ತೃಪ್ತಿ ಪಡಬೇಡಿ ಸ್ವತಃ ತಾವೇ ಸಾಧನೆ ಮಾಡಿ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಹೇಳಿದರು.ಅವರು ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಹಾಗೂ ಎಸ್ ಡಬ್ಲ್ಯೂ ಎಪ್ ಯೋಜನೆಯ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮದ ಅಡಿಯಲ್ಲಿ ಬರುವ ಕಲಿಕ ಚಟುವಟಿಕೆಗಳ ಕಂಪ್ಯೂಟರ್...

ಬೆಳ್ಳಾರೆ ಜೇಸಿಐ ಮತ್ತು ಕ್ಷಯ ಚಿಕಿತ್ಸಾ ಘಟಕದ ವತಿಯಿಂದ ಸಚಿವ ಅಂಗಾರರ ಭೇಟಿ

ಜೆಸಿಐ ಬೆಳ್ಳಾರೆ ಮತ್ತು ಕ್ಷಯ ಚಿಕಿತ್ಸಾ ಘಟಕ ಆರೋಗ್ಯ ಇಲಾಖೆ ಸುಳ್ಯ ನೇತೃತ್ವದಲ್ಲಿ ಕ್ಷಯ ಮುಕ್ತ ಭಾರತದ ಅಂಗವಾಗಿ ಬಿಡುಗಡೆಗೊಳ್ಳಲಿರುವ ಕಿರುಚಿತ್ರ "ಹೆಜ್ಜೆ ಬದಲಾದಾಗ " ಇದರ ಭಿತ್ತಿಪತ್ರವನ್ನು ಕರ್ನಾಟಕ ಸರಕಾರದ ಸಚಿವರಾದ ಎಸ್ ಅಂಗಾರ ಸರ್ ರವರಿಗೆ ಅವರ ನಿವಾಸದಲ್ಲಿ ನೀಡಲಾಯಿತು .ಈ ಸಂದರ್ಭದಲ್ಲಿ ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ...

ಸಂಪಾಜೆ : ಸೊಸೈಟಿ ಮಹಾಸಭೆ – ಶೇ.12 ಡಿವಿಡೆಂಡ್ ಘೋಷಣೆ

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 100 ನೇ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಸಮನ್ವಯ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಯವರ ಅಧ್ಯಕ್ಷತೆಯಲ್ಲಿ ದಿ.07-09-2021 ರಂದು ನಡೆಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ರವರು ಲೆಕ್ಕಪತ್ರಗಳನ್ನು ಮಂಡಿಸಿದರು. ಸಂಘ ವರದಿ ಸಾಲಿನಲ್ಲಿ ಸದಸ್ಯತನ, ಪಾಲು ಬಂಡವಾಳ, ಧನ ವಿನಿಯೋಗ, ಠೇವಣಿಗಳು, ವ್ಯವಹಾರ...

ಅಡಿಕೆ ತೋಟದಲ್ಲಿ ಅಡಿಕೆ ಸುಳಿ ಕೊಳೆರೋಗ ಪತ್ತೆ : ಸಿ.ಪಿ.ಸಿ.ಆರ್‌.ಐ ವಿಜ್ಞಾನಿಗಳ ತಂಡ ಭೇಟಿ

ಕಡಬ ತಾಲೂಕಿನ ಪೆರಾಬೆ ಗ್ರಾಮ ಇಡಾಳದ ಅಡಿಕೆ ಬೆಳೆಗಾರ ಸುರೇಶ ಅವರ ತೋಟದಲ್ಲಿ ಮಹಾಳಿ (ಕಾಯಿ ಕೊಳೆರೋಗ), ಚೆಂಡೆ ಕೊಳೆರೋಗ ಮತ್ತು ಸುಳಿ ಕೊಳೆರೋಗ ಪತ್ತೆಯಾಗಿದ್ದು ಸಿ.ಪಿ.ಸಿ.ಆರ್.ಐ ವಿಟ್ಲದ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಮಾರ್ಗಗಳನ್ನು ಸೂಚಿಸಿದರು. ಕಡಬ ತಾಲೂಕಿನ ಪೆರಾಬೆ ಗ್ರಾಮ ಇಡಾಳದ ಅಡಿಕೆ ಬೆಳೆಗಾರ ಸುರೇಶ ಅವರ...

ಗುತ್ತಿಗಾರು : ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯಡಿ ಸಹಾಯಧನದ ಚೆಕ್ ಹಸ್ತಾಂತರ

ಕ್ಯಾಂಪ್ಕೋ ಸಂಸ್ಥೆ ಮಂಗಳೂರು ಇದರ ವತಿಯಿಂದ "ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ" ಎಂಬ ಯೋಜನೆಯಡಿಯಲ್ಲಿ ಸಂಸ್ಥೆಯ ಸದಸ್ಯರಿಗೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮವು ಸೆ. 06 ರಂದು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು. ಕ್ಯಾಂಪ್ಕೋ ಸದಸ್ಯರಾದ ಬಾಲಕೃಷ್ಣ.ಡಿ ಮತ್ತು ಪ್ರಕಾಶ ಎಮ್.ಆರ್. ಇವರ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಗಾಗಿ ಕ್ಯಾಂಪ್ಕೋ...

ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೊ ಚಿತ್ತ ಯೋಜನೆಯಡಿ ಚಿಕಿತ್ಸೆಗೆ ಸಹಾಯಧನ

ಸುಳ್ಯ: ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೊದ ಚಿತ್ತ ಯೋಜನೆಯಡಿಯಲ್ಲಿ ಕ್ಯಾಂಪ್ಕೋದ ಸಕ್ರೀಯ ಸದಸ್ಯರಾದ ಮಡಿಕೇರಿ ತಾಲೂಕು ಚೆಂಬು ಗ್ರಾಮದ ನಿವಾಸಿಯಾದ ಎನ್ ವಿ ಕೃಷ್ಣಪ್ಪ ರವರಿಗೆ ಆಂಜಿಯೋಪ್ಲ್ಯಾಸ್ಟಿ ಯ ವೈದ್ಯಕೀಯ ಸಹಾಯಧನವಾಗಿ ರೂ 50,000ದ ಚೆಕ್ ನ್ನು ಸಂಸ್ಥೆಯ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ಸೆ. 06 ರಂದು ಸುಳ್ಯ ಶಾಖೆಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಪುತ್ತೂರು ವಲಯ...

ಅಮೃತ್ ಗ್ರಾಮ ಪಂಚಾಯತ್ ಯೋಜನೆಯಡಿ ಆಯ್ಕೆಯಾದ ಮಂಡೆಕೋಲು ಅರಂತೋಡು ಮತ್ತು ಮರ್ಕಂಜ ಗ್ರಾ.ಪಂ.ಗೆ 25 ಲಕ್ಷ ಅನುದಾನ – ಸಚಿವ ಅಂಗಾರ

ಅಮೃತ್ ಯೋಜನೆಯಡಿ ಆಯ್ಕೆ ಮಾಡಲಾದ ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು, ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಆಯಾ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಮೇಲುಸ್ತುವಾರಿ ವಹಿಸಬೇಕು ಎಂದು ಸಚಿವ ಎಸ್.ಅಂಗಾರ ಸೂಚಿಸಿದರು. ಅಮೃತ್ ಗ್ರಾಮ ಪಂಚಾಯತ್ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಗ್ರಾಮ ಪಂಚಾಯತ್‍ಗೆ 25 ಲಕ್ಷ...

ಡಾ.ರಶ್ಮಿ ಕೆ.ಎಂ. ಅವರಿಗೆ ಪಿಎಚ್‌ಡಿ ಪದವಿ

low power testing using scan chain masking and re-ordering for diagnosis of multiple chain failures ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದ ಡಾ.ರಶ್ಮಿ ಕೆಎಂ ಅವರಿಗೆ ವಿಟಿಯು ಬೆಳಗಾಂ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜ್ ಪ್ರಾಧ್ಯಾಪಕ ಡಾ.ಕೆ.ಎನ್.ಮುರಳೀಧರ ಅವರು ಮಾರ್ಗದರ್ಶನ ನೀಡಿದ್ದಾರೆ.ಚೆಂಬು ಗ್ರಾಮದ ಮಾಗಧಾರ...

ಸರಸ್ವತಿ ಕಾಮತ್ ಮೇಲೆ ಹಲ್ಲೆ ಪ್ರಕರಣ- ಹರೀಶ್ ಕಂಜಿಪಿಲಿ ಮತ್ತು ತಂಡಕ್ಕೆ ಶಿಕ್ಷೆ ನಿಗದಿಪಡಿಸಿ ಆದೇಶ

ಸುಳ್ಯ: 2014 ರ ಲೋಕಸಭಾ ಚುನಾವಣೆಯ ಸಂದರ್ಭ ಹರೀಶ್ ಕಂಜಿಪಿಲಿ ಮತ್ತು ತಂಡದವರು  ಅಂದಿನ ಜಿ.ಪಂ. ಚುನಾವಣೆಗೆ ಸ್ಪರ್ಧಿಸಿದ್ದ ಸರಸ್ವತಿ ಕಾಮತ್ ಅವರ ಮೇಲೆ ಮಾಡಿದ್ದಾರೆನ್ನಲಾದ  ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.೬ ರಂದು ಸುಳ್ಯ ನ್ಯಾಯಾಲಯದಲ್ಲಿ ತೀರ್ಪು ಹೊರಬಂದಿದ್ದು ಹರೀಶ್ ಕಂಜಿಪಿಲಿ ಮತ್ತವರ ತಂಡಕ್ಕೆ ಶಿಕ್ಷೆ ನಿಗದಿಯಾಗಿದೆ. ಘಟನೆಯ ಹಿನ್ನಲೆ: 2014 ರ ಲೋಕಸಭಾ  ಚುನಾವಣೆಯ ಸಂದರ್ಭ ...

ಅವಘಡಕ್ಕೆ ಸಾಕ್ಷಿಯಾಗುವಂತಿದೆ ಚಾಮಡ್ಕ ಫಾಲ್ಸ್

ಅಮರ ಮುಡ್ನೂರು ಗ್ರಾಮದ ಚಾಮಡ್ಕ ಫಾಲ್ಸ್ ಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು ಇದೀಗ ಅಲ್ಲಿ ಅಪಾಯದ ಸ್ಥಿತಿಯಲ್ಲಿ ಮೋಜು ಮಸ್ತಿ ಮಾಡುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ನೀರಿನ ಹರಿವಿನಿಂದಾಗಿ ಕಲ್ಲುಗಳ ಪಾಚಿಕಟ್ಟಿದ್ದು ಹೆಚ್ಚಿನ ಯುವಕ - ಯುವತಿಯರು ಇತ್ತೀಚಿಗೆ ಈ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಮೋಜಿಗೆ ಬಿದ್ದು ಪಾಚಿಗಟ್ಟಿದ ಕಲ್ಲುಗಳ ಮೇಲೆ ಓಡಾಡುತ್ತಿದ್ದಾರೆ.ಪ್ರವಾಸಿಗರಿಗೆ...

ಐವರ್ನಾಡು ಸೊಸೈಟಿ ವತಿಯಿಂದ ಹಣ್ಣಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ

ಐವರ್ನಾಡು ಕೃಷಿಪತ್ತಿನ ಸಹಕಾರಿ ಸಂಘದ ವತಿಯಿಂದ ಹಣ್ಣಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಹಣ್ಣಿನ ಗಿಡಗಳ ಮಾಹಿತಿ ಕಾರ್ಯಕ್ರಮ ಇಂದು ಸೊಸೈಟಿ ಆವರಣದಲ್ಲಿ ನಡೆಯಿತು. ದಯಾಪ್ರಸಾದ್ ಜಿಮುಳ್ಳು ಅವರು ಹಣ್ಣಿನ ಗಿಡಗಳ ಕುರಿತು ಮಾಹಿ ತಿ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ 600 ಕ್ಕೆ 600 ಅಂಕ ಪಡೆದ ನಾಟಿಕೇರಿ ವಸಂತಕುಮಾರ ಮತ್ತು ಮೀನಾಕ್ಷಿ...

ಮಕ್ಕಳಿಂದಲೇ ನಡೆಸಲ್ಪಡುವ ಚಿರಾಯು ಸ್ಟುಡೆಂಟ್ಸ್ ಕ್ಲಬ್‌ನ ಎರಡನೇ ಘಟಕ ಉದ್ಘಾಟನೆ : ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಿ – ವಿನುತಾ ಪಾತಿಕಲ್ಲು

ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸಲು ಮಕ್ಕಳಿಂದಲೇ ಪ್ರಾರಂಭಗೊಂಡ ಚಿರಾಯು ಸ್ಟುಡೆಂಟ್ಸ್ ಕ್ಲಬ್‌ನ ಎರಡನೇ ಘಟಕ ಇದೀಗ ಪ್ರಾರಂಭಗೊಂಡಿದೆ. ಮಂಡೆಕೋಲಿನ ಕಣೆಮರಡ್ಕದಲ್ಲಿ ಪ್ರಾರಂಭಗೊಂಡ ಚಿರಾಯು ಸ್ಟುಡೆಂಟ್ಸ್ ಕ್ಲಬ್ ನ ಎರಡನೇ ಘಟಕದ ಉದ್ಘಾಟನೆಯನ್ನು ಮಂಡೆಕೋಲು ಗ್ರಾ.ಪಂ ಅಧ್ಯಕ್ಷೆ ವಿನುತಾ ಪಾತಿಕಲ್ಲು ಸೆ.5 ರಂದು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಆರಂಭದ ಹಂತದಲ್ಲೇ ಮಕ್ಕಳ ಪ್ರತಿಭೆ...

ಮರ್ಕಂಜದ ಚಿತ್ರಕಲಾ ಶಿಕ್ಷಕ ಕೆಂಚವೀರಪ್ಪರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ

ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸುಳ್ಯ ಮೂವರಿಗೆ ಲಭಿಸಿದ್ದು ಇಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮರ್ಕಂಜದ ಚಿತ್ರಕಲಾ ಶಿಕ್ಷಕ ಕೆಂಚವೀರಪ್ಪರಿಗೆ ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಿದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕಿನ ವಿವಿಧ ನಿವೃತ್ತ ಶಿಕ್ಷಕರಿಗೆ ಸನ್ಮಾನ

ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕಿನಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಬೆಳ್ಳಾರೆ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಗೌರವಿಸಲಾಯಿತು‌.ನಿವೃತ್ತ ಶಿಕ್ಷಕರಾದ ಕಲ್ಮಕಾರು ಶಾಲೆಯ...

ಸಚಿವ ಅಂಗಾರರಿಂದ ಶ್ವೇತಾ ವೇಣುಗೋಪಾಲರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ

ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸುಳ್ಯ ಮೂವರಿಗೆ ಲಭಿಸಿದ್ದು ಇಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಚ್ರಪ್ಪಾಡಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶ್ವೇತಾ ವೇಣುಗೋಪಾಲ್ ರಿಗೆ ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಿದರು.

ಬ್ರಿಟೀಷ್ ಮಾನಸಿಕತೆಯ ಶಿಕ್ಷಣ ವ್ಯವಸ್ಥೆಯಿಂದ ನೂತನ ಶಿಕ್ಷಣ ಪದ್ದತಿಯೆಡೆಗೆ ಹೆಜ್ಜೆ – ಮುಂದಿನ ಪೀಳಿಗೆಗೆ ಇದು ಅವಶ್ಯಕ ವಿನಯ್ ಕುಮಾರ್ ಕಂದಡ್ಕ

ಬ್ರಿಟೀಷ್ ಮಾನಸಿಕತೆಯ ಶಿಕ್ಷಣ ಈ ಮೊದಲಿತ್ತು. ಆದರೆ ಈ ಬಾರಿಯಿಂದ ನೂತನ ಶಿಕ್ಷಣ ಪದ್ದತಿ ಜಾರಿಯಾಗುತ್ತಿದೆ. ಹೊಸ ಶಿಕ್ಷಣ ಪದ್ದತಿಯಿಂದ ನಮ್ಮದೇ ಇತಿಹಾಸ, ವಾಸ್ತವ ಸಂಗತಿಗಳನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ. ಎಂದು ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರು ಹೇಳಿದರು. ಬೆಳ್ಳಾರೆ ಪಬ್ಲಿಕ್ ಸ್ಲೂಲ್ ನಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು...

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ – ಸುನಂದಾ ಜಿ ಯವರಿಗೆ ಸಚಿವ ಅಂಗಾರರಿಂದ ಪ್ರಶಸ್ತಿ ಪ್ರಧಾನ

ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸುಳ್ಯ ಮೂವರಿಗೆ ಲಭಿಸಿದ್ದು ಇಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೇರಾಲು ಶಾಲಾ ಶಿಕ್ಷಕಿ ಸುನಂದ ಜಿ ಯವರಿಗೆ ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಿದರು.

ಮಕ್ಕಳೊಂದಿಗಿರುವ ಪ್ರತಿದಿನವೂ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯೇ

ಕಳೆದೆರಡು ವರ್ಷಗಳಿಂದೀಚೆಗೆ ಶೈಕ್ಷಣಿಕ ಕ್ಷೇತ್ರದಮೇಲೆ ಮಿಡತೆಯಹಿಂಡಿನಂತೆ ಕೊರೋನ ವೈರಸ್ ದಾಳಿ ನಡೆಸಿದೆ ಬರಿಯ ಶಿಕ್ಷಣ ಕ್ಷೇತ್ರ ಮಾತ್ರವಲ್ಲದೇ ಪ್ರತಿಯೊಂದು ಕ್ಷೇತ್ರದಮೇಲೆ ಪರಿಣಾಮ ಬೀರಿದೆ ಶಾಲೆಗೆ ಮಕ್ಕಳುಬಾರದೆ ಎರಡು ವರ್ಷಗಳೇ ಕಳೆಯಿತು ದೇಶದ ಭವಿಷ್ಯ ತರಗತಿಯ ನಾಲ್ಕು ಗೋಡೆಯ ಮಧ್ಯೆ ನಿರ್ಮಾಣವಾಗುತ್ತದೆ ಎಂದು ಹೇಳಲಾಗಿತ್ತು ಆದರೆ ಶಾಲಾ ಕಾಲೇಜು ಪುನರಾರಂಭ ಆಗುವ ಯಾವ ಸ್ಪಷ್ಟತೆಯು ಕಾಣುತ್ತಿಲ್ಲ ಭವಿಷ್ಯದ...

ಶಮನಗೊಂಡ ಬಿಜೆಪಿ ಭಿನ್ನಮತ : ಮುಂದಿನ ಚುನಾವಣೆಯ ಸಂಘಟನೆಗೆ ಒತ್ತು- ಸುದರ್ಶನ ಮೂಡಬಿದಿರೆ ; ಒಗ್ಗಟ್ಟಿನ ಮಂತ್ರ ಜಪಿಸಿದ ಎಸ್.ಎನ್. ಮನ್ಮಥ

ಸಂಘಟನೆ ಬೆಳೆದಂತೆ, ಕಾರ್ಯಕರ್ತರ ಪಡೆ ವಿಸ್ತಾರವಾದಂತೆ ನಾಯಕತ್ವ ವಹಿಸುವವರು ಹೆಚ್ಚಾಗುತ್ತಾರೆ. ಇದರಿಂದ ಸಹಜವಾಗಿ ಸಣ್ಣ ಪುಟ್ಟ ಮನಸ್ತಾಪಗಳು ಬರುತ್ತವೆ. ಕಳೆದ ಎರಡು ವರ್ಷಗಳಿಂದ ಬಿಜೆಪಿಯಲ್ಲಿನ ಭಿನ್ನಮತವನ್ನು ಪಕ್ಷದ ಪ್ರಮುಖರ ಸಮ್ಮುಖದಲ್ಲಿ ೪ ಗೋಡೆಗಳ ಮಧ್ಯೆ ಇತ್ಯರ್ಥಪಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಹೇಳಿದರು.ಸುಳ್ಯ ಬಿ.ಜೆ.ಪಿ. ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿಯ...

ಕೇಸರಿ ಎಂಬುದು ತ್ಯಾಗದ ಪ್ರತೀಕ – ಕೇಸರಿ ಶಾಲು ಹಾಕಿಕೊಂಡದ್ದನ್ನು ಸಮರ್ಥಿಸಿಕೊಂಡ ಸಚಿವ ಎಸ್.ಅಂಗಾರ

ಭಾರತದ ಧ್ವಜ ದಲ್ಲಿ ಕೇಸರಿ ಬಿಳಿ ಹಸಿರು ಬಣ್ಣದಲ್ಲಿ ಕೇಸರಿ ತ್ಯಾಗದ, ಬಿಳಿ ಶಾಂತಿ ಹಾಗೂ ಹಸಿರು ಬಣ್ಣ ಸಮೃದ್ಧಿಯ ಬಗ್ಗೆ ಅರ್ಥವನ್ನು ಸೂಚಿಸುತ್ತದೆ. ಶಾಂತಿ ಮತ್ತು ಸಮೃದ್ಧಿ ಇರಬೇಕಾದರೆ ತ್ಯಾಗ ಅನಿವಾರ್ಯ. ಹಾಗಾಗಿ ನಾನು ತ್ಯಾಗದ ಬಣ್ಣವನ್ನು ಸೂಚಿಸುವ ಕೇಸರಿ ಬಣ್ಣದ ಶಾಲು ಹಾಕಿಕೊಳ್ಳುತ್ತೇನೆ ಎಂದು ಸಚಿವ ಎಸ್.ಅಂಗಾರ ಅವರು ಹೇಳಿದರು. ಇತ್ತೀಚಿಗೆ ಅಂಗಾರ...

ಕೆವಿಜಿ ಆಯರ್ವೇದ ಕಾಲೇಜಿನಲ್ಲಿ ಮೀನುಕೃಷಿ ಕಾರ್ಯಗಾರ – ಸ್ಥಳೀಯ ಮಟ್ಟದ ಮೀನುಗಾರಿಕೆ ಅಭಿವೃದ್ಧಿಗೆ ಕ್ರಮ – ಅಂಗಾರ

ನಮ್ಮ ಸ್ಥಳೀಯ ತೋಟಗಳಲ್ಲಿ ಅನೇಕ ಕೆರೆಗಳಿವೆ. ಅವುಗಳಲ್ಲಿ ಹೇಗೆ ವೈಜ್ಞಾನಿಕವಾಗಿ ಮೀನುಕೃಷಿ ಮಾಡಬಹುದು ಎಂಬುದರ ಕುರಿತು ಯೋಜನೆ ರೂಪಿಸಬೇಕಿದೆ ಎಂದು ಸಚಿವ ಎಸ್ .ಅಂಗಾರ ಅವರು ಹೇಳಿದರು. ಕೆವಿಜಿ ಆಯುರ್ವೇದ ಫಾರ್ಮಾ ಮತ್ತು ಸಂಶೋಧನಾ ಘಟಕದಲ್ಲಿ ನಡೆದ ಮೀನು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದ.ಕ , ಉಡುಪಿ ಭಾಗಗಳ ಮೀನುಗಾರಿಕೆ...

ಅಚ್ರಪ್ಪಾಡಿ ಶಾಲೆಯ ಶ್ವೇತಾ, ಪೇರಾಲಿನ ಸುನಂದ, ಮರ್ಕಂಜದ ಕೆಂಚವೀರಪ್ಪರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Swetha Kenchaveerappa 2021 ನೇ ಸಾಲಿನ ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಸುಳ್ಯ ಮೂವರು ಭಾಜನರಾಗಿದ್ದಾರೆ. ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅಚ್ರಪ್ಪಾಡಿ ಕಿ.ಪ್ರಾ.ಶಾಲೆಯ ಶ್ವೇತಾ ಕೆ., ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪೇರಾಲು ಶಾಲೆಯ ಸುನಂದ, ಪ್ರೌಢಶಾಲಾ ವಿಭಾಗದಲ್ಲಿ ಮರ್ಕಂಜದ ಚಿತ್ರಕಲಾ ಶಿಕ್ಷಕ ಕೆಂಚವೀರಪ್ಪ ರವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಅಚ್ರಪ್ಪಾಡಿ ಶಾಲೆಗೆ ಮುಖ್ಯ ಶಿಕ್ಷಕಿಯ ಸಹೋದರರಿಂದ ಟಿವಿ ಹಾಗೂ ಇನ್ವರ್ಟರ್ ಕೊಡುಗೆ

ಕರೋನದಿಂದ ಇಡೀ ದೇಶ ಹಾಗೂ ಜಗತ್ತಿನ ಎಲ್ಲ ಭಾಗಗಳಲ್ಲಿ ಜನರ ಎಲ್ಲಾ ಚಟುವಟಿಕೆಗಳು, ವಿದ್ಯಾರ್ಥಿಗಳ ಕಲಿಕೆಗಳು ಬೌದ್ಧಿಕ ತರಗತಿಗಳು ನಡೆಯದೇ ಆನ್ಲೈನ್ ಶಿಕ್ಷಣಕ್ಕೆ ಸರ್ಕಾರಗಳು ಹೆಚ್ಚಿನ ಒತ್ತು ನೀಡುತ್ತಿರುವ ಈ ಸಂದರ್ಭದಲ್ಲಿ 1 ರಿಂದ ದ್ವಿತೀಯ ಪಿಯುಸಿ ತನಕದ ವಿದ್ಯಾರ್ಥಿಗಳಿಗೆ ಚಂದನ ವಾಹಿನಿಯಲ್ಲಿ ಪ್ರತಿದಿನ ಸಂವೇದ ತರಗತಿಗಳು ನಡೆಯುತ್ತಿವೆ. ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಅಭಾವದಿಂದ...

ದೇಶದಲ್ಲಿ ತಾಲಿಬಾನಿ ಮಾನಸಿಕತೆಯ ವ್ಯಕ್ತಿಗಳ ಬಗ್ಗೆ ಎಚ್ಚರ ವಹಿಸುವುದೊಳಿತು – ಜಗದೀಶ್ ಕಾರಂತ

ಅಫ್ಘಾನಿಸ್ತಾನದ ತಾಲಿಬಾನಿಗಳ ಮಾನಸಿಕತೆಯ ವ್ಯಕ್ತಿಗಳು ಭಾರತದಲ್ಲೂ ಇದ್ದು ಹಿಂದೂ ಸಮುದಾಯ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಅದೇ ಮಾನಸಿಕತೆಯ ವ್ಯಕ್ತಿಗಳು ಹಿಂದೂಗಳನ್ನು ಶೋಷಣೆ ಮಾಡುವ ಸನ್ನಿವೇಶಗಳೂ ಎದುರಾಗಬಹುದು ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದ್ದಾರೆ. ತಾಲೂಕಿನ ಮಂಡೆಕೋಲು ಗ್ರಾಮದ ಮೈಲೆಟ್ಟಿಪಾರೆ ಎಂಬಲ್ಲಿ ಗೌರಿ ಎಂಬ ಬಡ ದಲಿತ ಮಹಿಳೆಗೆ ವೇದಿಕೆಯ...

ಸ್ವಾರ್ಥಕ್ಕಾಗಿ ಸಮಾಜಕ್ಕೆ ಕೇಡು ಬಯಸಿ, ಗುತ್ತಿಗಾರಿನ ಸ್ವಾಭಿಮಾನಕ್ಕೆ ಧಕ್ಕೆ ತರುವವರ ವಿರುದ್ಧ ಒಗ್ಗಟ್ಟಾಗಿ ಹೋರಾಟಕ್ಕೆ ಸಿದ್ಧ : ಭರತ್ ಮುಂಡೋಡಿ

ವೈಯಕ್ತಿಕ ದ್ವೇಷವನ್ನಿಟ್ಟುಕೊಂಡು ತನ್ನ ಸ್ವಾರ್ಥಕ್ಕಾಗಿ ಸಮಾಜಕ್ಕೆ ಊರಿಗೆ ಕೇಡು ಬಯಸುವವರಿಂದ ಗುತ್ತಿಗಾರಿನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಒಗ್ಗಟ್ಟಾಗಿ ಈ ಮೊದಲು ಹೋರಾಟ ನಡೆಸಿದ್ದೇವೆ. ಇನ್ನೂ ಅಂತಹ ಸಂದರ್ಭ ಬಂದಾಗ ರಾಜಕೀಯ ರಹಿತ ಹೋರಾಟಕ್ಕೆ ಸಿದ್ಧ ಎಂದು ಮಾಜಿ ಜಿ.ಪಂ.ಸದಸ್ಯ ಭರತ್ ಮುಂಡೋಡಿ ಹೇಳಿದರು.ಅವರು ಇಂದು ಗುತ್ತಿಗಾರಿನಲ್ಲಿ ನಡೆದ ನಾಗರಿಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಗುತ್ತಿಗಾರು ಗ್ರಾಮವನ್ನು...

ಸಚಿವ ಎಸ್. ಅಂಗಾರರಿಂದ ಮೇದಿನಡ್ಕದಲ್ಲಿ ನೂತನ ಅಂಗನವಾಡಿ ಉದ್ಘಾಟನೆ

ದೇಶದ ಏಳಿಗೆಗೆ ಜನರ ಸಹಕಾರ ಅಗತ್ಯವಾಗಿದೆ. ಅವಶ್ಯಕವಾಗಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸರಕಾರದ ಗಮನಕ್ಕೆ ತರಬೇಕು. ಆಗ ಅದನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಕುರಿತು ಕ್ರಮ ಕೈಗೊಳ್ಳಲಾಗುವುದು. ಅಭಿವೃದ್ಧಿಯನ್ನು ಹೇಗೆ ಮಾಡಬೇಕು ಎಂಬುದರ ಸ್ಪಷ್ಟ ಅರಿವು ನಮಗಿದೆ ಎಂದು ಸಚಿವ ಎಸ್.ಅಂಗಾರ ಅವರು ಹೇಳಿದರು.ಅಜ್ಜಾವರದ ಮೇದಿನಡ್ಕದಲ್ಲಿ ಆ. 29 ರಂದು ನೂತನ ಅಂಗನವಾಡಿ ಯನ್ನು...

ವಿಶ್ವಾಸವಿಲ್ಲದ ವ್ಯವಸ್ಥೆಯ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುತ್ತಾರೆ. ಪ್ರತಿಯೊಬ್ಬರೂ ತಮ್ಮ ತಮ್ಮ ಕಾರ್ಯಕ್ಷೇತ್ರಕ್ಕೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು- ಸಚಿವ ಎಸ್.ಅಂಗಾರ

ಮಾದಕ ದ್ರವ್ಯ ಜಾಲ ಹಾಗೂ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇಂಥ ಕೃತ್ಯಗಳನ್ನು ನಾವು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ . ಇದನ್ನು ತಡೆಗಟ್ಟಲು ಸಂಬಂಧಪಟ್ಟ ಇಲಾಖೆ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಚಿವ ಎಸ್ ಅಂಗಾರ ಅವರು ಹೇಳಿದರು. ಸುಳ್ಯದ ಯುವಜನ ಸಂಯುಕ್ತಮಂಡಳಿಯ ಸಭಾಂಗಣದಲ್ಲಿ ನಡೆದ ನೂತನ ಗೃಹರಕ್ಷಕ ದಳದ ಕಚೇರಿಯ...

ಸುಬ್ರಹ್ಮಣ್ಯದ ಜನಾನುರಾಗಿ ವೈದ್ಯ ಬಿ.ಕೆ.ಭಟ್ ನಿಧನ

ಸುಬ್ರಹ್ಮಣ್ಯದ ನಿಟ್ಟೆ ಆಸ್ಪತ್ರೆಯಲ್ಲಿ ಕಳೆದ 30 ವರ್ಷಗಳಿಂದ ಪ್ರಖ್ಯಾತ ವೈದ್ಯ ಬಿ.ಕೆ.ಭಟ್ ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಸುಬ್ರಹ್ಮಣ್ಯದಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದ ಇವರು ಭಾಗದ ಜನರಿಗೆ ಉತ್ತಮ ಚಿಕಿತ್ಸೆ ನೀಡಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ , ಪುತ್ರ, ಸೊಸೆ ಹಾಗೂ ಮೊಮ್ಮಗಳನ್ನು ಅಗಲಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ದಶ ವರ್ಷ ಸಂಭ್ರಮ – ಸಚಿವ ಅಂಗಾರರಿಂದ ಉದ್ಘಾಟನೆ ಅರೆಭಾಷೆ ಅಕಾಡೆಮಿಯ ವೆಬ್ ಸೈಟ್ ಗೆ ಚಾಲನೆ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಂಡು ಹತ್ತು ವರ್ಷ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಅಕಾಡೆಮಿಯ ವತಿಯಿಂದ ದಶ ವರ್ಷ ಸಂಭ್ರಮದ ಉದ್ಘಾಟನಾ ಸಮಾರಂಭವು ಮಡಿಕೇರಿಯ ಕೊಡಗು ಗೌಡ ಸಮಾಜದಲ್ಲಿ ಆ.27ರಂದು ನಡೆಯಿತು.ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಚಿವ ಎಸ್. ಅಂಗಾರರು ದೀಪ ಬೆಳಗಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ...

ಸುಬ್ರಹ್ಮಣ್ಯ : ಭಾರತೀಯ ಸೇನೆಯಲ್ಲಿನ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಐಕ್ಯೂ ಎಸಿ ಘಟಕ ಮತ್ತು ಹೆಚ್ ಆರ್ & ಪ್ಲೇಸ್ ಮೆಂಟ್ ಘಟಕ ಇದರ ಸಹಯೋಗದೊಂದಿಗೆ ಆ. 25 ರಂದು ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶಗಳು‌ ಎಂಬ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋವಿಂದ ಎನ್ ಎಸ್ ಇವರು ವಹಿಸಿ, ಸೇನೆ ಉದ್ಯೋಗವನ್ನು...

ಬಿಜೆಪಿ ಮಹಿಳಾ ಮೋರ್ಚಾದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಸನ್ಮಾನ

ಸುಳ್ಯ ಬಿಜೆಪಿ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಯವರಿಗೆ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ, ಕಾರ್ಯದಶಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನೂತನ ಬಾರ್ ತೆರೆಯಬಾರದೆಂದು ಹರ್ಷಿತ್ ಅವರು ಅಕ್ರಮ ಗಣಿಗಾರಿಕೆ ಹಣೆಪಟ್ಟಿ ಕಟ್ಟಿ ನಮ್ಮನ್ನು ಮಣಿಸಲು ಯತ್ನಿಸುತ್ತಿದ್ದಾರೆ – ದೇವಿಪ್ರಸಾದ್ ಚಿಕ್ಮುಳಿ

ನಾವು ನಮ್ಮ ಕಟ್ಟಡದಲ್ಲಿ ಬಾರ್ ತೆರೆದರೆ ತಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅಕ್ರಮ ಗಣಿಗಾರಿಕೆ ಎಂಬ ಹಣೆಪಟ್ಟಿ ನೀಡಿ ಹರ್ಷಿತ್ ಕೊರಂಬಟ ಮತ್ತು ನಿವೃತ್ತ ಪಿಡ್ಲ್ಯೂಡಿ ಇಂಜಿನಿಯರ್ ಗಿರೀಶ್ ಕೊರಂಬಟ ಎಂಬವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಸಾಮಾಜಿಕ ಕಾರ್ಯಕರ್ತ ಎಂದು ಬಿಂಬಿಸಿಕೊಂಡಿರುವ ಅಡ್ಕಾರು ವಿನೋಬನಗರದ ಭೋಜಪ್ಪ ನಾಯ್ಕ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ದೇವಿಪ್ರಸಾದ್...

ತಾಳೆ ಬೆಳೆಗಾರರ ಸಂಘದ ವತಿಯಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ – ರೈತರಿಗೆ ಬೆಂಬಲ ಬೆಲೆ ಹಾಗೂ ಕೃಷಿಗೆ ವಿಸ್ತರಣೆಗೆ ಪ್ರೋತ್ಸಾಹ ನೀಡಲು ಒತ್ತಾಯ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆಯವರು ಸುಳ್ಯಕ್ಕೆ ಬಂದಿದ್ದ ಸಂದರ್ಭದಲ್ಲಿ ತಾಳೆ ಬೆಳೆಗಾರರ ಸಮಸ್ಯೆಗಳ ಪರಿಹಾರದ ಬಗ್ಗೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು. ಅಂತರ ರಾಷ್ಟ್ರೀಯ ಪಾಮ್ ಎಣ್ಣೆ ದರ ಆಧರಿಸಿ ಎಣ್ಣೆ ಹಾಗೂ ತಾಳೆ ಹಣ್ಣಿನ ಖರೀದಿ ದರ ನಿರ್ಧರಿಸಲಾಗುತ್ತದೆ.ಆ ಬೆಲೆ ಇಲ್ಲಿನ ಉತ್ಪಾದಕ ವೆಚ್ಚದ ಅನ್ವಯ ಲಾಭದಾಯಕವಾಗುವುದಿಲ್ಲ...

ಅಡಿಕೆ ಹಳದಿರೋಗದ ಪರಿಹಾರಕ್ಕೆ ವಿಶೇಷ ಅನುದಾನಕ್ಕೆ ಬದ್ದ- ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂಬುದನ್ನೂ ಸಾಬೀತುಪಡಿಸಲು ಸೂಕ್ತ ಕ್ರಮದ ಭರವಸೆ – ಶೋಭಾ ಕರಂದ್ಲಾಜೆ

ಯುಪಿಎ ಅವಧಿಯಲ್ಲಿ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಅಂಶದ ಕುರಿತ ಅರ್ಜಿ ಸದ್ಯ ಸುಪ್ರಿಂ ಕೋರ್ಟ್ ನಲ್ಲಿದೆ. ಅಡಿಕೆ ಎಂಬುದು ರಾಸಾಯನಿಕ ಬೆರೆಸದಿದ್ದರೆ ಹಾನಿಕಾರಕವಲ್ಲ. ಅದು ರೋಗ ನಿರೋಧಕ ಶಕ್ತಿ ಹೊಂದಿರುವ ಒಂದು ಉತ್ಪನ್ನ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಇದನ್ನು ಸುಪ್ರಿಂ ಕೋರ್ಟ್ ನಲ್ಲಿ ಸಾಬೀತು ಪಡಿಸಿ ಅಡಿಕೆ ಬೆಳೆಗಾರರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ...

ನ.ಪಂ.ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಲಂಚ ಪಡೆಯುತ್ತಾರೆಂದು ಜಾಲತಾಣದಲ್ಲಿ ಆರೋಪ – ಕರ್ಪ್ಯೂ ಅವಧಿ ಮೀರಿ ವ್ಯಾಪಾರ ನಡೆಸಿದವರಿಗೆ ದಂಡ ಹಾಕಿದ್ದೇವೆ ಎಂ.ಆರ್.ಸ್ವಾಮಿ ಸ್ಪಷ್ಟನೆ

ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ. ಆರ್ ಸ್ವಾಮಿಯವರು ಕೋವಿಡ್ ನಿಯಮದ ನೆಪದಲ್ಲಿ ದಂಧೆ ಮಾಡುತ್ತಿದ್ದಾರೆ. ಇವರ ಫೈನ್ ಕೇವಲ ಬಡ ವ್ಯಾಪಾರಿಗಳ ಮೇಲೆ, ಲಂಚ ಪಡೆದು ಅಕ್ರಮವೆಸಗುತ್ತಿದ್ದಾರೆ ಎಂದು ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದ ಬರಹ ಮಾನ್ಯ ಸುಳ್ಯದ ಶಾಸಕರಾದ ನಮ್ಮ ಹೆಮ್ಮೆಯ ಸಚಿವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ....

ಸ್ನೇಹ ಶಾಲೆಯಲ್ಲಿ ಸಾಧಕರಿಗೆ ಸನ್ಮಾನ

ಸ್ನೇಹ ಶಾಲೆಯಲ್ಲಿ ಎಸ್.ಎಸ್. ಎಲ್.ಸಿ. ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆ.16 ರಂದು ನಡೆಯಿತು. 10ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ 14 ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಶಾಲು ಹೊದಿಸಿ ಪುಸ್ತಕಗಳನ್ನು ನೀಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ತುಷಾರ್ ಡಿ.ಕೆ, ಶಿವಶರಣ ಹೊಳ್ಳ ಎನ್,...

ಸ್ವತಂತ್ರ ಭಾರತದ ಎಪ್ಪತ್ತೈದು ವರ್ಷಗಳ ಸಾಧನೆ ಶ್ಲಾಘನೀಯ : ಡಾ. ಕೆ ವಿ ಚಿದಾನಂದ

ಭಾರತ ಸ್ವತಂತ್ರಗೊಂಡು ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಈ ದಿನದಲ್ಲಿ ಭಾರತದ ಇದುವರೆಗಿನ ಸಾಧನೆ ಅಪಾರ. ಶೈಕ್ಷಣಿಕ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ರಕ್ಷಣಾ ಕ್ಷೇತ್ರ, ವೈಜ್ಞಾನಿಕ ಕ್ಷೇತ್ರ ಹೀಗೆ ಭಾರತವು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಮುಂದಿನ ದಿನಗಳಲ್ಲಿ ಯುವಜನತೆ ಇನ್ನಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ದೇಶವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು...

ಎನ್ನೆಂಸಿ: ರಕ್ತದಾನ ಶಿಬಿರದ ಮೂಲಕ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಆಚರಣೆ

ರಕ್ತದಾನ ಜೀವ ಉಳಿಸುವುದರ ಜೊತೆಗೆ ರಕ್ತದಾನಿಗಳ ಆರೋಗ್ಯವನ್ನು ಕಾಪಾಡುತ್ತದೆ. ಆ ನಿಟ್ಟಿನಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಆಚರಣೆಯ ಈ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ಯುವ ರೆಡ್ ಕ್ರಾಸ್ ಘಟಕದ ಕಾರ್ಯ ಅವಿಸ್ಮರಣೀಯವಾಗಿದೆಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ನ ಅಧ್ಯಕ್ಷರಾದ ಡಾ. ಕೆ. ವಿ ಚಿದಾನಂದ ಅವರು ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ...

ಅಮರ ಸ್ವಾತಂತ್ರ್ಯ ಹೋರಾಟದ ಸ್ಮಾರಕ ನಿರ್ಮಿಸಲು ಕಟಿಬದ್ಧ: ಸಚಿವ ಅಂಗಾರ

ಭಾರತ ಸ್ವಾತಂತ್ರ್ಯ ಪಡೆಯುವುದಕ್ಕೆ ಅದೆಷ್ಟೋ ಹಿಂದೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಈ ಜಿಲ್ಲೆಗೆ 13 ದಿನಗಳ ಸ್ವಾತಂತ್ರ್ಯದ ಸವಿಯನ್ನು ನೀಡಿದ ಕೀರ್ತಿ ನಮ್ಮ ಸುಳ್ಯದ ಹಿರಿಯರಿಗೆ ಸಲ್ಲುತ್ತದೆ ಎನ್ನುವುದು ನಮಗೆ ಹೆಮ್ಮೆಯ ವಿಚಾರ. ಅವರ ತ್ಯಾಗ, ಬಲಿದಾನಗಳನ್ನು ಶಾಶ್ವತವಾಗಿ ನೆನಪಿಸುವುದಕ್ಕಾಗಿ ಬೆಳ್ಳಾರೆಯಲ್ಲಿ ಮತ್ತು ಉಬರಡ್ಕದ ಕೆದಂಬಾಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಸ್ಮಾರಕಗಳನ್ನು ನಿರ್ಮಿಸಲು ಕಟಿಬದ್ಧನಾಗಿದ್ದೇನೆ...

ನಾಗರ ಪಂಚಮಿ

ಚಾಂದ್ರಮಾನದ ಐದನೆಯ ತಿಂಗಳೇ ಶ್ರಾವಣ . ಈ ತಿಂಗಳಿನ ಆರಂಭದ ಹಬ್ಬವೇ ನಾಗರ ಪಂಚಮಿ. ನಮ್ಮ ನಾಡಿಗೆ ದೊಡ್ಡ ಹಬ್ಬ . ಪುರಾಣಗಳಲ್ಲಿಯೂ ಉಲ್ಲೇಖಿತವಾದ ನಮ್ಮ ಈ ಪರಶುರಾಮ ಸೃಷ್ಟಿಯ ವಿಶೇಷ ಹಬ್ಬವಿದು ಎನ್ನುವುದರಲ್ಲಿಯೇ ತುಂಬಾ ಔಚಿತ್ಯವಿದೆ.ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು...

ಕೇಂದ್ರದ ಎಲ್ಲಾ ಯೋಜನೆಗಳೂ ಸಾಮಾನ್ಯರಿಗೆ ತಲುಪುತ್ತಿವೆ- ಹರೀಶ್ ಕಂಜಿಪಿಲಿ

ಸುಳ್ಯ: ಕೇಂದ್ರದ ಎಲ್ಲಾ ಯೋಜನೆಗಳು ಇಂದು ಜನಸಾಮಾನ್ಯರಿಗೆ ತಲುಪುತ್ತಿದೆ‌. ಕೇಂದ್ರದ ಎಲ್ಲಾ ಯೋಜನೆಗಳ ಸರಿಯಾದ ಮಾಹಿತಿಯನ್ನು ಕಾರ್ಯಕರ್ತರು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದರು. ಸುಳ್ಯ ಸಿ.ಎ ಬ್ಯಾಂಕ್ ಹಾಲ್ ನಲ್ಲಿ ನಡೆದ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಪಂಚಾಯತ್...

ವಿದ್ಯುತ್ ಖಾಸಗೀಕರಣಗೊಳಿಸಿದರೆ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನಿಂದ ಜನಾಂದೋಲನ- ಪಿಸಿ ಜಯರಾಮ

ಇಂದಿರಾಗಾಂಧಿ ಅವರು ರಾಷ್ಟ್ರೀಕರಣಗೊಳಿಸಿದ ಹೆಚ್ಚಿನ ಸಂಸ್ಥೆಗಳನ್ನು ಈಗಿನ ಮೋದಿ ಸರಕಾರ ಖಾಸಗೀಕರಣಗೊಳಿಸಿ ಜನಸಾಮಾನ್ಯರನ್ನು ಬೀದಿಗೆ ಬರುವಂತೆ ಮಾಡಿದ್ದಾರೆ. ಈಗ ವಿದ್ಯುತ್ ಅನ್ನು ಕೂಡ ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಹೊರಟಿದೆ. ಇದು ಖಂಡನೀಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ ಅವರು ಹೇಳಿದರು. ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಇಂದು ಮಾತನಾಡಿದರು.ಕೃಷಿ ಮಾಡಲು ಈಗ...

ಟವರ್ ನಿರ್ಮಾಣವಾದರೂ ಕಾರ್ಯಾರಂಭ ಮಾಡದಿರುವ ಬಗ್ಗೆ ಊರವರಿಂದ ಉಪವಾಸ ಸತ್ಯಾಗ್ರಹ- ಸಚಿವರಿಂದ ಸಮಸ್ಯೆ ಪರಿಹಾರದ ಭರವಸೆ

ಮಿತ್ತಮಜಲಿನಲ್ಲಿ ಬಿ.ಎಸ್.ಎನ್.ಎಲ್.ಟವರ್ ನಿರ್ಮಾಣವಾಗಿದ್ದರೂ ಕಾರ್ಯಾರಂಭ ಮಾಡಿರಲಿಲ್ಲ. ಇದರಿಂದ ಬೇಸತ್ತ ಸ್ಥಳಿಯರು ಸರಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸಿ ಬಳಿಕ ಸಚಿವರ ಭರವಸೆ ಮೇರೆಗೆ ಪ್ರತಿಭಟನೆ ಹಿಂತೆಗೆದುಕೊಂಡರು. ಮಿತ್ತಮಜಲುವಿನಲ್ಲಿ ಕಳೆದ ಎರಡೂವರೆ ವರ್ಷಗಳ ಹಿಂದೆ ಬಿ.ಎಸ್.ಎನ್.ಎಲ್.ಟವರ್ ನಿರ್ಮಾಣಗೊಂಡಿದ್ದರೂ ಅದಕ್ಕೆ ವಿದ್ಯುತ್ ಸಂಪರ್ಕ ಹಾಗೂ ನೆಟ್ ವರ್ಕ್ ಕನೆಕ್ಷನ್ ನೀಡಿರಲಿಲ್ಲ. ಇದರಿಂದಾಗಿ ಇಲ್ಲಿನ ಬಹುಸಂಖ್ಯಾತ ಬಿಎಸ್ ಎನ್ ಎಲ್...

ಎಸ್‌ಎಸ್‌ಎಲ್‌ಸಿ ಸಾಧಕಿಯರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿಯಿಂದ ಸನ್ಮಾನ

2020-21 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ರಲ್ಲಿ 625 ಅಂಕಗಳಿಸಿ ಸಾಧನೆ ಮಾಡಿದ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಾದ ಅನನ್ಯಾ ಎಂ.ಡಿ ಮತ್ತು ವೆನಿಸ್ಸಾ ಶರಿನಾ ಡಿಸೋಜಾ ಅವರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ದೇವಳದ ಆಡಳಿತ ಕಛೇರಿಯ...

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆಗೆ ನಮ್ಮದೊಂದು ಸಲಾಂ :: ಐಎಎಸ್ ಅಧಿಕಾರಿಯಾಗುವೆ: ಅನನ್ಯಾ :: ವೈದ್ಯೆಯಾಗುವ ಹಂಬಲ ನನ್ನದು : ವೆನಿಸ್ಸಾ ಶರಿನಾ

ಕಡಬ ತಾಲೂಕಿನ ರಾಜ್ಯದ ಪ್ರಸಿದ್ಧ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಾದ ಅನನ್ಯಾ ಎಂ.ಡಿ ಮತ್ತು ವೆನಿಸ್ಸಾ ಶರಿನಾ ಡಿಸೋಜಾ ೨೦೨೦-೨೧ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.ಈ ಮೂಲಕ ಗ್ರಾಮೀಣ ಪ್ರದೇಶ ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಈ...

ಕುಮಾರಸ್ವಾಮಿ ವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ – 625 ಅಂಕ ಪಡೆದ ಅನನ್ಯ ಎಂ ಡಿ ಹಾಗೂ ವೆನಿಸ್ಸಾ ಶೆರಿನಾ ಡಿಸೋಜಾ

ಎಸ್‌ ಎಸ್‌ ಎಲ್‌ ಸಿ ಫಲಿತಾಂಶ ಪ್ರಕಟವಾಗಿದ್ದು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು 625 ರಲ್ಲಿ 625 ಅಂಕ ಪಡೆದಿದ್ದಾರೆ. ಅನನ್ಯ ಎಂ ಡಿ ಹಾಗೂ ವೆನಿಸ್ಸಾ ಶೆರಿನಾ ಡಿಸೋಜಾ ಅವರು 625 ಅಂಕ ಪಡೆದ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.ಅನನ್ಯ ಇವಳು ಗುತ್ತಿಗಾರು ಗ್ರಾಮದ ಮಣಿಯಾನ ಮನೆ ದುರ್ಗೇಶ್ ಹಾಗೂ ವೇದಾವತಿ ದಂಪತಿಗಳ ಪುತ್ರಿ.

ನೆಲ್ಲೂರು ಕೆಮ್ರಾಜೆ: ಕೆರೆಗೆ ಬಿದ್ದು ತಾಯಿ- ಮಗು ಮೃತ್ಯು

ನೆಲ್ಲೂರು ಕೆಮ್ರಾಜೆ ಯ ಮಾಪಲಕಜೆಯಲ್ಲಿ ಕೆರೆಗೆ ಬಿದ್ದು ತಾಯಿ ಹಾಗೂ ಮಗು ಮೃತಪಟ್ಟ ಘಟನೆ ನಡೆದಿದೆ.ತೋಟದಲ್ಲಿನ ಕೆರೆಯ ಬಳಿ ಮಗು ಕಾಲುಜಾರಿ ಬಿದ್ದಾಗ ಅದನ್ನು ರಕ್ಷಿಸಲು ಸಂಗೀತಾ ಅವರು ಕೆರೆಗೆ ಹಾರಿದ್ದಾರೆ. ಆದರೆ ಈಜು ಭಾರದ ಅವರು ಮಗುವನ್ನು ರಕ್ಷಿಸಲೂ ಆಗದೆ ಇತ್ತ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲಾಗದೇ ಮೃತಪಟ್ಟಿದ್ದಾರೆ. ಸಂಗಿತಾ ಹಾಗೂ ಮಗುವಿನ ಮೃತದೇಹ ಮೇಲೆತ್ತಲಾಗಿದ್ದು...

ಬಂದರು ಮತ್ತು ಮೀನುಗಾರಿಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮ : ಸಚಿವ ಎಸ್.ಅಂಗಾರ ಭರವಸೆ

ಬಂದರು ಮತ್ತು ಮೀನುಗಾರಿಕೆ ಸೇರಿದಂತೆ ಒಳನಾಡು ಜಲ ಸಾರಿಗೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಯಾವುದೇ ಖಾತೆ ನೀಡಿದರೂ ಅದನ್ನು ನಿಭಾಯಿಸಲು ಸಿದ್ಧನಿದ್ದೆ. ನನಗೆ ಈ ಹಿಂದೆ ನಿರ್ವಹಿಸಿದ್ದ ಖಾತೆ ದೊರಕಿರುವುದರಿಂದ ಸಂತಸವಾಗಿದೆ. ಈ ಹಿಂದೆ ಇದೇ ಖಾತೆಯನ್ನು ನಿರ್ವಹಣೆ ಮಾಡಿದ್ದುದರಿಂದ ಪ್ರಗತಿ ಕಾರ್ಯಕ್ಕೆ ಅನುಕೂಲಕರವಾಗಿದೆ. ಅಲ್ಲದೆ ಈ ಹಿಂದಿನ ಯೋಜನೆಗಳನ್ನು ಮುಂದುರೆಸಲು ಇದು...

ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ – ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಮಡಿಲಿಗೆ ಇಂದು ಮೊದಲ ಚಿನ್ನದ ಪದಕ ಬಂದಿದೆ. ಜಾವೆಲಿಂಗ್ ಥ್ರೋನಲ್ಲಿ ನೀರಜ್ ಚೋಪ್ರಾ ಬಂಗಾರದ ಪದಕ ಮುಡಿಗೇರಿಸಿದ್ದಾರೆ. ಈ ಒಲಿಂಪಿಕ್ಸ್ ನಲ್ಲಿ ಭಾರತದ ಮಡಿಲಿಗೆ 7 ಪದಕ ಇದುವರೆಗೆ ಬಂದಿದೆ.

ಸಿಸಿ ಕ್ಯಾಮರಾ ಅಳವಡಿಕೆಯ ವಿಚಾರದ ಚರ್ಚೆ ವೇಳೆ ಸಭಾತ್ಯಾಗದ ಹೈಡ್ರಾಮ – ನ.ಪಂ.ಸಾಮಾನ್ಯ ಸಭೆ

ಸುಳ್ಯ ನಗರ ಪಂಚಾಯತ್ ನಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ವಿಚಾರದಲ್ಲಿ ತೀವ್ರ ಚರ್ಚೆ ನಡೆದು ಕೆಲ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೋಗುವ ಪ್ರಯತ್ನ ಗದ್ದಲ ಗಲಾಟೆ ಆದ ಬಳಿಕ ವಾಪಾಸು ಸಭೆಯಲ್ಲಿ ಭಾಗವಹಿಸಿದ ಹೈಡ್ರಾಮ ನಡೆಯಿತು. ನ.ಪಂ. ನಲ್ಲಿ ಆಗಸ್ಟ್ 7 ರಂದು ವಿಶೇಷ ಸಭೆಯನ್ನು ಕರೆಯಲಾಗಿತ್ತು.ನಗರದಲ್ಲಿನ ಕೊಳೆಗೇರಿ ನಿರ್ವಹಣೆ, ಕುಡಿಯುವ ನೀರು, ಒಳಚರಂಡಿ ನಿರ್ವಹಣೆ...

ಕೊರೊನಾ ಮೂರನೇ ಅಲೆ ಬಂತು : ನಾವು ಎಚ್ಚೆತ್ತುಕೊಳ್ಳೋದು ಯಾವಾಗ

*✒️ಸುದೀಪ್ ರಾಜ್ ಸುಳ್ಯ*ಕೊರೊನಾ ಮತ್ತೆ ಜಾಸ್ತಿಯಾಗ್ತಾ ಇದೆ. ಮೊದಲನೇ ಅಲೆ ಬಂದಾಗಲಾದರೂ ಅದು ಹೊಸ ರೋಗ. ಇಂಥ ರೋಗವಿದೆ ಎಂಬ ಊಹೆಯನ್ನೂ ನಾವ್ಯಾರೂ ಮಾಡುವಂತಿರಲಿಲ್ಲ .ಲಾಕ್ ಡೌನ್ ಅನಿವಾರ್ಯವಾಯ್ತು. ಮಾರುಕಟ್ಟೆ ಮಲಗಿತು, ಸಿನಿಮಾ, ಪ್ರವಾಸ, ವಿದೇಶಿಯಾತ್ರೆ, ಐಟಿ ಉದ್ಯಮ ಸೇರಿದಂತೆ ಎಲ್ಲವೂ ೪ ತಿಂಗಳ ಕಾಲ  ನಿಂತುಹೋಯಿತು.  ಇದರಿಂದಾಗಿ ದೇಶದ ಬೊಕ್ಕಸವೂ ಬರಿದಾಯಿತು. ಜೂನ್ 2020...

ಪೆರಾಜೆ : ಲಯನ್ಸ್ ಮತ್ತು ಚಿರಂತನ ಕ್ಲಿನಿಕ್ ವತಿಯಿಂದ ಉಚಿತ ಆರೋಗ್ಯ ಶಿಬಿರ

ಸುಳ್ಯ: ಲಯನ್ಸ್ ಕ್ಲಬ್ ಸುಳ್ಯ ಮತ್ತು ಚಿರಂತನ ಕ್ಲಿನಿಕ್ ಪೆರಾಜೆ ಇವರ ಜಂಟಿ ಆಶ್ರಯದಲ್ಲಿ ಇಮಾಮಿ ಲಿಮಿಟೆಡ್‌ರವರ ಪ್ರಾಯೋಜಕತ್ವದೊಂದಿಗೆ ಉಚಿತ ರಕ್ತದೊತ್ತಡ, ಮಧುಮೇಹ ಮತ್ತು ಮೂಳೆ ಖನಿಜಾಂಶ ಸಾಂದ್ರತೆಯ ತಪಾಸಣಾ ಶಿಬಿರವು ಪೆರಾಜೆಯ ಚಿರಂತನ ಕ್ಲಿನಿಕ್‌ನಲ್ಲಿ ನಡೆಯಿತು. ಈ ಉಚಿತ ಆರೋಗ್ಯ ಶಿಬಿರವನ್ನು ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಆನಂದ ಪೂಜಾರಿಯವರು ಉದ್ಘಾಟಿಸಿ ಶುಭ ಹಾರೈಸಿದರು....

ಮೂರನೇ ಅಲೆ ಭೀತಿ : ರಾಜ್ಯದಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ- ನೈಟ್ ಕರ್ಫ್ಯೂ ಜಾರಿ

ರಾಜ್ಯದ ಗಡಿಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಮತ್ತು ರಾಜ್ಯಾದ್ಯಂತ ನೈಟ್ ಕರ್ಫ್ಯೂ ಸೇರಿದಂತೆ ಹೊಸ ಮಾರ್ಗಸೂಚಿಗಳನ್ನು ರಾಜ್ಯಸರಕಾರ ಹೊರಡಿಸಿದೆ.ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮಸೀದಿ, ಮಂದಿರ, ಚರ್ಚ್ ಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನೈಟ್ ಕರ್ಫ್ಯೂ : ರಾತ್ರಿ 9 ಗಂಟೆಯಿಂದ ಬೆಳಗ್ಗೆ 5...

ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷರಾಗಿ ವಿಠಲದಾಸ್ ಆಯ್ಕೆ

ಕಾಂಗ್ರೆಸ್ ಹಿಂದುಳಿದ ವರ್ಗಗಳ ಸುಳ್ಯ ತಾಲೂಕು ಘಟಕ ಅಧ್ಯಕ್ಷರಾಗಿ ಬೆಳ್ಳಾರೆಯ ಉದ್ಯಮಿ ಆಯ್ಕೆಗೊಂಡಿದ್ದಾರೆ .ವಿಠಲದಾಸ್ ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ನೂತನ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಸುಳ್ಯದಲ್ಲಿ ಅದ್ದೂರಿ ಸ್ವಾಗತ – ಕಾರ್ಯಕರ್ತರಿಂದ ಅಭಿನಂದನೆ

ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಸುಳ್ಯದ ಬಿಜೆಪಿ ಕಚೇರಿ ಮುಂಭಾಗದಲ್ಲಿ ಸ್ವಾಗತಿಸಿ ಅಭಿನಂಧನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚ ಅಧ್ಯಕ್ಷ ರಾಧಕೃಷ್ಣ ಬೊಳ್ಳೂರು, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ನ.ಪಂ.ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಪಕ್ಷದ ಪ್ರಮುಖರಾದ ಮಹೇಶ್ ರೈ...

ಕಲ್ಲುಗುಂಡಿ : ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಗೆ ಕಾರ್ಯಕರ್ತರಿಂದ ಅಭಿನಂದನೆ

ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಯವರಿಗೆ ಕಲ್ಲುಗುಂಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದರು. ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎಸ್.ಪಿ.ಲೋಕನಾಥ್, ಎಸ್.ಸಿ.ಮೋರ್ಚಾ ಕಾರ್ಯದರ್ಶಿ ವಿಜಯ ಆಲಡ್ಕ, ಗ್ರಾಮ ಪಂಚಾಯತ್ ಸದಸ್ಯೆ ರಜನಿ ಶರತ್, ಬಿಜೆಪಿ ಕಾರ್ಯಕರ್ತರಾದ ಕೇಶವ ಬಂಗ್ಲೆಗುಡ್ಡೆ, ರವಿ ಮಾಮ ಸವಿನ್, ರವಿ ಭಟ್ ಕಲ್ಲುಗುಂಡಿಯ ಆಟೋ ಚಾಲಕರು...

ಸುಳ್ಯದ ವಿವಿಧ ಯೋಜನೆಗಳಿಗೆ ವಿಶೇಷ ಅನುದಾನ ತರಿಸಲು ಪ್ರಯತ್ನ – ಹರೀಶ್ ಕಂಜಿಪಿಲಿ

ವಿದ್ಯುತ್ ಸಬ್ ಸ್ಟೇಷನ್ , ತಾಲೂಕು ಕ್ರೀಡಾಂಗಣ, ಕುಡಿಯುವ ನೀರು, ಕಸವಿಲೇವಾರಿ , ಅಂಬೇಡ್ಕರ್ ಭವನ ಹಾಗೂ ಮಹಾಯೋಜನೆ ಕುರಿತು ವಿಶೇಷ ಪ್ಯಾಕೇಜ್ ಅನ್ನು ತರಿಸಲು ಸಚಿವರ ಮುಖೇನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದರು.ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಈ ಬಾರಿ ಕೊರೊನಾ...

ಸುಭೋದ್ ಶೆಟ್ಟಿ ಯಾವುದೇ ಅಕ್ರಮ ಜಾಗ ಕಬಳಿಸಿಲ್ಲ- ಹರೀಶ್ ಕಂಜಿಪಿಲಿ

ಸುಭೋದ್ ಶೆಟ್ಟಿ ಮೇನಾಲ ಹಾಗೂ ಅವರ ಸಹೋದರರು ಯಾವುದೇ ಅಕ್ರಮ ಆಸ್ತಿಗಳಿಸಿ ಉದ್ಯಮ ಮಾಡುತ್ತಿಲ್ಲ. ಅವರ ಕುಟುಂಬ ಪಟ್ಟಾ ಜಾಗದಲ್ಲೇ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಸುಬೋದ್ ಶೆಟ್ಟಿ ಅವರ ಮೇಲೆ ವೃಥಾ ಆರೋಪ ಹೊರಿಸಲಾಗುತ್ತಿದೆ ಎಂದುಸುಬೋದ್ ಶೆಟ್ಟಿ ಸಹೋದರರು...

ಯಾವ ಖಾತೆ ನೀಡಿದರೂ ಸಮರ್ಥವಾಗಿ ನಿರ್ವಹಿಸುವೆ – ಕುಕ್ಕೆ ಕ್ಷೇತ್ರದಲ್ಲಿ ಸ್ವಾಗತ ಸ್ವೀಕರಿಸಿದ ಬಳಿಕ ನೂತನ ಸಚಿವ ಎಸ್.ಅಂಗಾರ ಅಭಿಮತ

ಸುಬ್ರಹ್ಮಣ್ಯ: ಎರಡನೇ ಬಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಪ್ರಥಮವಾಗಿ ಕುಕ್ಕೆಸುಬ್ರಹ್ಮಣ್ಯಕ್ಕೆ ಆಗಮಿಸಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಅಂಗಾರ ಅವರನ್ನು ಕುಕ್ಕೆ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕ್ಷೇತ್ರಕ್ಕೆ ಆಗಮಿಸಿದ ಸಚಿವರು ಆರಂಭದಲ್ಲಿ ಗೋಪುರದ ಬಳಿಯಿಂದಲೇ ಶ್ರೀ ದೇವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ನಂತರ ಶ್ರೀ ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ...

ಸಚಿವ ಅಂಗಾರರಿಗೆ ದ.ಕ.ಜಿಲ್ಲಾ ಉಸ್ತುವಾರಿ – ಕೊಡಗಿಗೆ ಕೋಟ, ಉಡುಪಿಗೆ ಸುನಿಲ್

ರಾಜ್ಯದ ನೂತನ ಸಚಿವರಾಗಿ ಎರಡನೇ ಬಾರಿ ಇಂದು ಪ್ರಮಾಣವಚನ ಸ್ವೀಕರಿಸಿದ ಸುಳ್ಯ ಶಾಸಕರಾದ ಎಸ್.ಅಂಗಾರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ತಕ್ಷಣದಿಂದ ಜಾರಿ ಬರುವಂತೆ ನೇಮಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಕೋಟಿ ಶ್ರೀನಿವಾಸ ಪೂಜಾರಿ ಅವರಿಗೆ ಕೊಡಗು ಹಾಗೂ ಸುನಿಲ್ ಕುಮಾರ್ ಅವರನ್ನು ಉಡುಪಿ...

ಸುಳ್ಯದ ಅಂಗಾರ ಸೇರಿದಂತೆ ಕರಾವಳಿಯ ಮೂವರಿಗೆ ಸಚಿವ ಸ್ಥಾನ

ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದ ರಚನೆಯಾಗಲಿದ್ದು ಮಧ್ಯಾಹ್ನ 2 ಗಂಟೆಗೆ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದೆ. ಸುಳ್ಯದ ಮಾಜಿ ಸಚಿವ ಎಸ್. ಅಂಗಾರ ಮತ್ತೊಮ್ಮೆ ಸಚಿವರಾಗುವುದು ಖಚಿತವಾಗಿದೆ. ಸಿಎಂ ಬೊಮ್ಮಾಯಿ ಯವರು ಅಂಗಾರರಿಗೆ ಕರೆ ಮಾಡಿ ಬೆಂಗಳೂರಿಗೆ ಬರಲು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಕರಾವಳಿಯ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಪೂಜಾರಿ ಹಾಗೂ...

ಚೊಕ್ಕಾಡಿ ಎಜುಕೇಷನ್ ಸೊಸೈಟಿ ಪುನರ್ ರಚನೆ -ಅಧ್ಯಕ್ಷರಾಗಿ ಎಸ್. ಅಂಗಾರ, ಸಂಚಾಲಕರಾಗಿ ರಾಧಾಕೃಷ್ಣ ಬೊಳ್ಳೂರು ಆಯ್ಕೆ

ಚೊಕ್ಕಾಡಿ ಪ್ರೌಢಶಾಲೆ ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಚೊಕ್ಕಾಡಿ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಳಿಯನ್ನು ಪುನರ್ ರಚಿಸಲಾಗಿದೆ. ನೂತನ ಅಧ್ಯಕ್ಷರಾಗಿ ಸಚಿವರೂ ಆಗಿರುವ ಶಾಸಕ ಎಸ್. ಅಂಗಾರ ಹಾಗೂ ಸಂಚಾಲಕರಾಗಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಬೊಳ್ಳೂರು ಆಯ್ಕೆಯಾಗಿದ್ದಾರೆ. ಜುಲೈ 27 ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಪುನರ್ ರಚನೆ...

ಗುತ್ತಿಗಾರು : ಲೋಕಾರ್ಪಣೆಗೆ ಸಿದ್ದವಾದ ವಿದ್ಯುತ್ ಸಬ್ ಸ್ಟೇಷನ್

ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ 33/11 ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು ಶೀಘ್ರ ಕಾರ್ಯಾರಂಭಗೊಳ್ಳಲಿದೆ. ಇದರಿಂದ ಈ ಭಾಗದ ಕೃಷಿಕರ,ವರ್ತಕರ, ಕಿರು ಇಂಡಸ್ಟ್ರಿಗಳ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ನಾಳೆಯಿಂದ ಕುಕ್ಕೆ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಸೇವೆಗಳು, ಅನ್ನಸಂತರ್ಪಣೆ ಆರಂಭ – ಜುಲೈ 29ರಿಂದ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇವೆಗೆ ಅವಕಾಶ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಳೆಯಿಂದ ಸಾಂಪ್ರದಾಯಿಕ ಸೇವೆಗಳು ಆರಂಭಗೊಳ್ಳಲಿದೆ. ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕವು ಜು.29(ಗುರುವಾರ) ರಿಂದ ಪ್ರಾರಂಭಗೊಳ್ಳಲಿದೆ. ಸರಕಾರದ ಕೋವಿಡ್ ಮಾರ್ಗಸೂಚಿಗೆ ಅನುಗುಣವಾಗಿ ಶ್ರೀ ದೇವಳದಲ್ಲಿ ಸೇವೆಗಳನ್ನು ನೆರವೇರಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 6.30ರಿಂದ ಮಧ್ಯಾಹ್ನ 1.30ರ ತನಕ ಬಳಿಕ ಮಧ್ಯಾಹ್ನ 3.30ರಿಂದ ರಾತ್ರಿ 8.30...

ಕೊಲ್ಲಮೊಗ್ರ ಆರೋಗ್ಯ ಕೇಂದ್ರ ಸಿಬ್ಬಂದಿ ಕಾರ್ಯಕ್ಕೆ ಆರೋಗ್ಯ ಸಚಿವರಿಂದ ಮೆಚ್ಚುಗೆ

ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ ಕರ್ತವ್ಯವನ್ನು ಗುರುತಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮೂಲಕ ಮೆಚ್ಚುಗೆ ಸಲ್ಲಿಸಿದ್ದಾರೆ. ಕೋವಿಡ್ ಪರೀಕ್ಷೆಗೆ ಗಂಟಲ ದ್ರವ ಸಂಗ್ರಹಿಸಲು ಕೊಲ್ಲಮೊಗ್ರು ಆರೋಗ್ಯ ಕೇಂದ್ರದ ಲ್ಯಾಬ್ ಸಿಬ್ಬಂದಿ ನವ್ಯಾ, ಎಎನ್‌ಎಂ ಚಂದ್ರಾವತಿ, ಆಶಾ ಕಾರ್ಯಕರ್ತೆ ಯಶೋದಾ, ಹೇಮಾವತಿಯಾವರು ಪಿಪಿಇ ಕಿಟ್ ಧರಿಸಿ ಬಿದಿರಿನ...

ಕುತೂಹಲಕ್ಕೆ ಬಿತ್ತು ತೆರೆ : ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆಗೆ ತೀರ್ಮಾನ

ಕೆಲವು ತಿಂಗಳುಗಳಿಂದ ನಡೆದ ನಡೆದ ನಾಯಕತ್ವ ಬದಲಾವಣೆ ಚರ್ಚೆಗೆ ಕೊನೆಗೂ ತೆರೆ ಬಿದ್ದಿದೆ. ಬಿ.ಎಸ್. ಯಡಿಯೂರಪ್ಪ ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಘೋಷಣೆ ಮಾಡಿ ಬಿಜೆಪಿಯಲ್ಲಿ ಹೊಸ ಶಕೆಗೆ ನಾಂದಿ ಹಾಡಿದ್ದಾರೆ. ಕಣ್ಣೀರಿಡುತ್ತಲೇ ರಾಜೀನಾಮೆ ಸಲ್ಲಿಸುವ ಇರಾದೆ ವ್ಯಕ್ತಪಡಿಸಿದರು. ಇದುವರೆಗೂ ಅವಕಾಶ ಮಾಡಿ ಹೈಕಮಾಂಡ್...

47 ವರ್ಷಗಳಿಂದ ಕತ್ತಲೆಯಲ್ಲಿದ್ದ ಕುಟುಂಬಕ್ಕೆ ಬೆಳಕು ನೀಡಿದ ಸೆಲ್ಕೋ ಸಂಸ್ಥೆ – ಇದು ಅಮರ ಸುದ್ದಿ ವರದಿಯ ಫಲಶ್ರುತಿ

ಬಳ್ಪ ಗ್ರಾಮ ದೇಶದಲ್ಲೆ ಗುರುತಿಸಿದ ಆದರ್ಶ ಗ್ರಾಮ. ಹೆಸರಿನಂತ ಗ್ರಾಮವಾಗದೇ ಕುಗ್ರಾಮವಾಗಿ ಉಳಿದಿದೆ. ಸಭೆ ಸಮಾರಂಭಗಳಿಗೆ ಸೀಮಿತವಾಯಿತೆ ಹೊರತು ಬಳ್ಪ ಗ್ರಾಮ ಆದರ್ಶ ಗ್ರಾಮವಾಗಿ ಕಾಣಲು ಸಾಧ್ಯವಾಗಿಲ್ಲ. ಸಾಧ್ಯವಾಗಲೂ ಇನ್ನೆಷ್ಟೂ ವರ್ಷ ಬೇಕೋ ?ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸಿಗದೇ ಕತ್ತಲೆಯಲ್ಲಿದ್ದ ಮನೆಯ ಬಗ್ಗೆ ಅಮರ ಸುದ್ದಿ ಪತ್ರಿಕೆಯಲ್ಲಿ "47 ವರ್ಷಗಳಿಂದ ಕತ್ತಲೆಯಲ್ಲಿ ಬದುಕುತ್ತಿರುವ ಶೋಚನೀಯ ಬದುಕು"...

ಕೆ.ವಿ.ಜಿ ಅಮರಜ್ಯೋತಿ ಕಾಲೇಜಿಗೆ ಶೇ100 ಫಲಿತಾಂಶ – ಐವರು ವಿದ್ಯಾರ್ಥಿಗಳಿಗೆ 600 ರಲ್ಲಿ 600 ಅಂಕ

ಕೆ.ವಿ.ಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿಗೆ ಶೇ100 ಪಲಿತಾಂಶ ಬಂದಿದ್ದು ವಿಜ್ಞಾನ ವಿಭಾಗದಲ್ಲಿ ಕೆ ಅನುಷ ಪ್ರಭು, ಎಂ ಅರ್ ಶೃತಿ, ಶಿವಕೃಷ್ಣ, ಅನನ್ಯ ಲಕ್ಷ್ಮಿ ಎನ್, ಆಯಿಶತ್ ಹಾಶಿರ 600ರಲ್ಲಿ 600 ಅಂಕ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ 52 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜಾರಾಗಿದ್ದು ಅದರಲ್ಲಿ 36 ಡಿಸ್ಟಿಂಕ್ಷನ್ ಮತ್ತು ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ...

ಲೀಲಾಕುಮಾರಿ ತೊಡಿಕಾನ ನಿರ್ದೇಶನದ ಪ್ರೇಮಯಾನ ಆಲ್ಬಂ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆ

ಇಬ್ಬನಿ ಕ್ರಿಯೇಷನ್ ಯುಟ್ಯೂಬ್ ಚಾನೆಲ್ ನಲ್ಲಿ "ಪ್ರೇಮಯಾನ" ಆಲ್ಬಂ ಹಾಡು ಇಂದು ಬಿಡುಗಡೆಯಾಗಿದೆ. ಲೀಲಾಕುಮಾರಿ ತೊಡಿಕಾನರವರ ಸಾಹಿತ್ಯವನ್ನು ಮಹಾಲಿಂಗ ಮೈಸೂರುರವರು ಹಾಡಿದ್ದಾರೆ‌. ಸುಳ್ಯದ ಪ್ರತಿಭೆಗಳಾದ ಶರತ್ ಮಾಸ್ತಿ ಮತ್ತು ಸಾಯಿಶೃತಿ ನಟಿಸಿದ್ದಾರೆ.ಹಾಡನ್ನು ಕೇಳಲು ಈ ಕೆಳಗಿನ ಲಿಂಕ್ ಬಳಸಿ.https://youtu.be/JNfyOzLZZM0 https://youtu.be/JNfyOzLZZM0

ಕುಕ್ಕೆಯನ್ನು ಮತ್ತಷ್ಟು ಹಸಿರಾಗಿಸುವ ಬೃಹತ್ ವನ ಸಂವರ್ಧನಾ ಕಾರ್ಯಕ್ರಮ – 2000 ಗಿಡ ನೆಡುವ ಮೂಲಕ ಹಸಿರು ಕುಕ್ಕೆ ಯೋಜನೆಗೆ ಚಾಲನೆ

ಕುಮಾರಧಾರ ತಪ್ಪಲಿನ ನಿತ್ಯ ಹರಿದ್ವರ್ಣ ಕಾಡುಗಳ ನಡುವಣ ಇರುವ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಮತ್ತಷ್ಟು ಹಸಿರುಮಯವಾಗಿಸಲು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಹಮ್ಮಿಕೊಂಡಿದ್ದ ಬೃಹತ್ ವನ ಸಂವರ್ಧನಾ ಕಾರ್ಯಕ್ರಮವು ಮಂಗಳವಾರ ಸಂಪನ್ನವಾಯಿತು. ಏಕಕಾಲದಲ್ಲಿ ೧೪ ಕಡೆ ವಿವಿಧ ಜಾತಿಯ ಸಸ್ಯಗಳನ್ನು ೧೪ ಗಣ್ಯರು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋವಿಡ್-೧೯ ಮಾರ್ಗಸೂಚಿಗೆ ಅನುಗುಣವಾಗಿ ಅಗಾಧ...

ಕುಕ್ಕೆ ಕ್ಷೇತ್ರದಲ್ಲಿ ರೂ.3೦೦ ಕೋಟಿ ವೆಚ್ಚದಲ್ಲಿ 3ನೇ ಹಂತದ ಅಭಿವೃದ್ಧಿ ಕಾಮಗಾರಿ – ಮಾಸ್ಟರ್ ಪ್ಲಾನ್ ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸುಮಾರು ರೂ ೩೦೦ ಕೋಟಿ ವೆಚ್ಚದಲ್ಲಿ ಮೂರನೇ ಹಂತದ ಮಾಸ್ಟರ್ ಪ್ಲಾನ್ ಕಾಮಗಾರಿಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವ ಯೋಜನೆಗಳ ಬಗ್ಗೆ ಸಭೆಯಲ್ಲಿ ವರದಿ ಸಿದ್ಧಪಡಿಸಿ ಚರ್ಚಿಸಲಾಯಿತು. ಅಭಿವೃದ್ಧಿ ಕೆಲಸಗಳು ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಚಿವ ಎಸ್.ಅಂಗಾರ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ...

ಸುಳ್ಯದ ಕ್ರೀಡಾ ಸಾಧಕಿ ಗೀತಾ ಕಂದಡ್ಕ ದಾವಣಗೆರೆ ವಿ.ವಿ. ಸಿಂಡಿಕೇಟ್ ಸದಸ್ಯರಾಗಿ ನೇಮಕ

ಕಿರಿಯ ವಯಸ್ಸಿನಲ್ಲೇ ಕ್ರೀಡಾ ಕ್ಷೇತ್ರದಲ್ಲಿ ಮತ್ತು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ದಾವಣಗೆರೆ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಮೈಸೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕಿ, ಸುಳ್ಯದ ಗೀತಾ ಕಂದಡ್ಕ ಅವರನ್ನು ವಿ.ವಿ. ಕುಲಪತಿಗಳೂ ಆಗಿರುವ ರಾಜ್ಯಪಾಲರು ಮುಂದಿನ ಮೂರು ವರ್ಷಗಳ ಅವಧಿಗೆ ಈ ನೇಮಕ ಮಾಡಿದ್ದಾರೆ. ಕಾಲೇಜು ಜೀವನದಲ್ಲಿಯೇ...

ಗುತ್ತಿಗಾರು : ವಿಶ್ವ ಜನಸಂಖ್ಯಾ ದಿನಾಚರಣೆ

ಗುತ್ತಿಗಾರು ಪ್ರಾ.ಆರೋಗ್ಯ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಇಂದು ನಡೆಯಿತು. ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಚೈತ್ರಭಾನು, ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು, ಉಪಸ್ಥಿತರಿದ್ದರು.

ಡಿವಿಗೆ ಕೋಕ್ – ಶೋಭಗೆ ಲಕ್ : ಕೇಂದ್ರ ಸಚಿವೆಯಾಗಲಿದ್ದಾರೆ ಶೋಭ ಕರಂದ್ಲಾಜೆ

ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದ ಡಿ.ವಿ.ಸದಾನಂದ ಗೌಡ ರಾಜೀನಾಮೆ‌ ನೀಡಿದ್ದು ಶೋಭ ಕರಂದ್ಲಾಜೆಯವರಿಗೆ ಕೇಂದ್ರ ಸಚಿವ ಸ್ಥಾನ ದೊರೆಯಲಿದೆ. ನರೇಂದ್ರ ಮೋದಿ‌ ನೇತೃತ್ವದ ಸಚಿವ ಸಂಪುಟ ಪುನರ್ ರಚನೆ ಹಿನ್ನೆಲೆಯಲ್ಲಿ ಕೆಲವು ಹೊಸಮುಖಗಳಿಗೆ ಮಣೆ ಹಾಕಲಾಗಿದೆ. ಸಚಿವ ಸಂಪುಟದಿಂದ ಕೈ ಬಿಡುವವರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚನೆ ಬಂದ ಹಿನ್ನೆಲೆಯಲ್ಲಿ ಸದಾನಂದ ಗೌಡರವರು‌ ಸಚಿವ ಸಂಪುಟ...

ಅರಂತೋಡು : ರಿಕ್ಷಾ ನಿಲ್ದಾಣಕ್ಕೆ ಗುದ್ದಲಿಪೂಜೆ

ಅರಂತೋಡು ರಿಕ್ಷಾ ನಿಲ್ದಾಣ ನಿರ್ಮಾಣಕ್ಕೆ ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಾಕ್ಷಿ ದೇರಾಜೆ, ಗ್ರಾ.ಪಂ. ಸದಸ್ಯರು, ವಾಹನ ಮಾಲಕ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

ಕುಕ್ಕೆ: ದೇವರ ದರ್ಶನಕ್ಕೆ ಮಾತ್ರ ಅವಕಾಶ – ಹರಿಕೆ ಸೇವೆಗಳಿಲ್ಲ – ಮಂಗಳಾರತಿಗೆ ಅವಕಾಶ

ಲಾಕ್ ಡೌನ್ ಹಿನ್ನೆಲೆಯಲ್ಲಿ ಏ.೨೧ರಿಂದ  ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರ ಆಗಮನವನ್ನು ನಿರ್ಬಂಧಿಸಲಾಗಿತ್ತು. ಆದರೆ ಇದೀಗ ಕೋವಿಡ್-೧೯ ಇಳಿಮುಖಗೊಂಡಿರುವುದರಿಂದ ಸರಕಾರದ ಮಾರ್ಗಸೂಚಿ ಪ್ರಕಾರ ಶ್ರೀ ದೇವಳಕ್ಕೆ ಭಕ್ತರ ಪ್ರವೇಶಕ್ಕೆ ಸೋಮವಾರದಿಂದ ಅವಕಾಶ ಲಭ್ಯವಾಗಿದೆ. ಕ್ಷೇತ್ರದಲ್ಲಿ ಶ್ರೀ ದೇವರ ದರುಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ...

ನಾಲ್ಕೂರು : ಅಕ್ರಮ ಮದ್ಯ ಸಾಗಾಟ – ಇನ್ನೋವಾ ವಾಹನ ಸಹಿತ ನಾಲ್ವರ ಬಂಧನ

ಅಕ್ರಮ ಮದ್ಯ ಸಾಗಾಟ ಜಾಲ ಭೇದಿಸಿದ ಸುಬ್ರಹ್ಮಣ್ಯ ಪೋಲಿಸರು ಇನ್ನೋವಾ ವಾಹನದಲ್ಲಿದ್ದ ಅಕ್ರಮ ಮದ್ಯ ಸಹಿತ ನಾಲ್ವರನ್ನು ಬಂಧಿಸಿದ ಘಟನೆ ಜು.2 ರಂದು ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಸುಬ್ರಹ್ಮಣ್ಯ ಪೋಲಿಸರು ನಾಲ್ಕೂರು ಗ್ರಾಮದ ಮಲ್ಲಾರ ಎಂಬಲ್ಲಿ ಇನ್ನೋವಾ ಕಾರ್ ನಲ್ಲಿ ಸಾಗಿಸುತ್ತಿದ್ದ 9 ಬಾಕ್ಸ್ ಮದ್ಯ ವಶಕ್ಕೆ ಪಡೆದಿದ್ದು, ವಾಹನ ಸಹಿತ...

ಪಾಠದಲ್ಲಿ ಹೇಳದ ! ಇತಿಹಾಸ ಮರೆಯದ ”ಜಗತ್ತಿನ ಸರ್ವ ಶ್ರೇಷ್ಠ ವೀರ ಪುರುಷ ”

ಭಾಷೆ ಪ್ರಾಂತ್ಯಗಳಿಗೆ ಸೀಮಿತಮಾಡಿ ಎನ್ನಡ ಎಕ್ಕಡಗಳ ಮಧ್ಯೆ ಮಾತೃ ಭಾಷೆ ಕನ್ನಡವನ್ನೇ ಮರೆಯುತ್ತಿರುವ ನಮಗೆ ನಮ್ಮ ಭಾಷಪ್ರಾಂತ್ಯಕ್ಕೆ ಸೇರದ ಸರ್ವ ಶ್ರೇಷ್ಠ ವೀರ ಪುರುಷನ ಬಗ್ಗೆ ಗೊತ್ತಿರಲು ಹೇಗೆ ಸಾಧ್ಯ? ಪರಕೀಯ ಆಕ್ರಮಣಕಾರರನ್ನು ವೈಭವಿಕರಿಸಿ ಅಶೋಕನಿಗಿಂತ ಅಕ್ಬರ್ ದಿ ಗ್ರೇಟ್ ಮತ್ತೆ ಉಳಿದವರು ದಾರಿ ತಪ್ಪಿದ ದೇಶ ಭಕ್ತರು ಎಂದು ಹೇಳುವ ಪಠ್ಯಪುಸ್ತಕ ದಲ್ಲಿರುವ ಹಾಗೇಯೇ...

ಸಂಪಾಜೆ : ಭೂ ಪರಿವರ್ತನೆ ಸಮಸ್ಯೆ ಶೀಘ್ರ ನಿವಾರಿಸುವಂತೆ ಒತ್ತಾಯಿಸಿ ಧರಣಿಗೆ ಪಂಚಾಯತ್ ನಿರ್ಧಾರ : ಜಿ.ಕೆ.ಹಮೀದ್

ಭೂ ಪರಿವರ್ತನೆ ಆಗದೆ ಗ್ರಾಮದಲ್ಲಿ ಬಡವರಿಗೆ ಸಮಸ್ಯೆ ಆಗುತಿದೆ. ಇದರ ಪರಿಹಾರಕ್ಕಾಗಿ ಗ್ರಾಮ ಪಂಚಾಯತ್ ನ 14 ಮಂದಿ ಸದಸ್ಯರು ತಾಲೂಕು ಕಚೇರಿ, ತಾ.ಪಂ ಎದುರಿನಲ್ಲಿ ಗ್ರಾ.ಪಂ. ಸದಸ್ಯರು ಧರಣಿ ನಡೆಸಲು ಸಂಪಾಜೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಗ್ರಾ.ಪಂ.ಆಧ್ಯಕ್ಷ ಜಿ.ಕೆ.ಹಮೀದ್ ತಿಳಿಸಿದ್ದಾರೆ.ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಪಾಜೆ ಗ್ರಾಮದ ಹಲವು ಸರ್ವೆ...

ಎಸ್ ಸಿಡಿಸಿಸಿ ಬ್ಯಾಂಕ್ ವತಿಯಿಂದ ಕಾರ್ಯನಿರತ ಪತ್ರಕರ್ತರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಆಹಾರಧಾನ್ಯಗಳ ಕಿಟ್ ವಿತರಣಾ ಕಾರ್ಯಕ್ರಮ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಕಿಟ್ ವಿತರಿಸಿ‌ ಮಾತನಾಡಿ ಕೊರೋನಾ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ನೀಡುವ ಈ...

ದೇವಚಳ್ಳ : ಡೆಂಗ್ಯೂ ಜ್ವರಕ್ಕೆ ಯುವಕ ಬಲಿ

ದೇವಚಳ್ಳ ಗ್ರಾಮದ ದೇವ ಕನ್ನಡಕಜೆ ಚಿನ್ನಪ್ಪ ಹಾಗೂ ಪ್ರೇಮರವರ ಏಕೈಕ ಪುತ್ರ ಶಶಿಕುಮಾರ್ (27) ಡೆಂಗ್ಯೂ ಜ್ವರಕ್ಕೆ ಬಲಿಯಾದ ಘಟನೆ ಇಂದು ನಡೆದಿದೆ.ಕಳೆದ 5 ದಿನಗಳ ಹಿಂದೆ ಡೆಂಗ್ಯೂ ಜ್ವರ ಕಾಣಿಸಿಕೊಂಡು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಗೆ ತೆರಳಿದ್ದರು. ಅಲ್ಲಿ ಜ್ವರ ಉಲ್ಬಣಿಸಿ ಇಂದು ನಿಧನರಾದರೆಂದು ತಿಳಿದುಬಂದಿದೆ.ಇವರು ಸುಬ್ರಹ್ಮಣ್ಯ...

ಜೂ 14 – 21 ಸುಳ್ಯ ತಾಲೂಕಿನ 5 ಗ್ರಾ.ಪಂ. ಲಾಕ್ ಡೌನ್ ಗೆ ಜಿಲ್ಲಾಧಿಕಾರಿ ಆದೇಶ

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 50 ಕ್ಕಿಂತ ಹೆಚ್ಚು ಸಕ್ರೀಯ ಪ್ರಕರಣಗಳಿರುವ ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ನೂರು, ಕೊಲ್ಲಮೊಗ್ರ, ಗುತ್ತಿಗಾರು ಹಾಗೂ ಅರಂತೋಡನ್ನು ಜೂ 14 ರಿಂದ 21 ರವರೆಗೆ ಲಾಕ್ ಡೌನ್ ಮಾಡಿ ದ.ಕ.ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಜೂ. 14 ಬೆಳಿಗ್ಗೆ 9 ರಿಂದ ಜೂ 21 ಬೆಳಿಗ್ಗೆ 9 ರವರೆಗೆ ಲಾಕ್ ಡೌನ್ ಆಗಲಿದೆ....

ಕೊಕ್ಕೋ ರೈತರಿಗಿಂದು ಆಶಾದಾಯಕ ಬೆಳೆ – ಕೃಷಿ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ : ಗದಾಧರ ಮಲ್ಲಾರ

https://youtu.be/TWfQYgfsIvs ಅತೀ ಹೆಚ್ಚು ಕೊಕ್ಕೋ ಬೆಳೆ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಸುಳ್ಯವೂ ಒಂದು. ರೈತರ ಪಾಲಿಗಿಂದು ಒಂದು ಆಶಾದಾಯಕ ಬೆಳೆಯಾಗಿ ನಿರಂತರ ಆದಾಯ ಒದಗಿಸುತ್ತಿದೆ. ಕೊಕ್ಕೋ ಕೃಷಿ ಮೊದಲು ಪ್ರಾರಂಭಿಸಿದವರಲ್ಲಿ ಕೀಲಾರ್ ಗೋಪಾಲಕೃಷ್ಣಯ್ಯ, ಕುರುಂಜಿ ವಿಶ್ವನಾಥ ಗೌಡ, ಎಂ.ಎಂ.ಗಿರಿ ಮಲ್ಲಾರ, ಎಂ.ಎಚ್.ಗೌಡ ಮಲ್ಲಾರ, ಮುಂಡಾಜೆ ಹೂವಪ್ಪ ಮೊದಲಿಗರಾಗಿ ಕಾಣುತ್ತಾರೆ. 1964 ರಲ್ಲಿ ದಿ.ಗಿರಿ ಮಲ್ಲಾರ ಕೃಷಿ ಪ್ರಾರಂಭಿಸಿದಾಗ...

ಪಂಜದ ಮೊರಾರ್ಜಿ ವಸತಿ ಶಾಲೆಯಲ್ಲಿ ನಿರ್ಮಿತವಾದ ಕೋವಿಡ್ ಕೇರ್ ಸೆಂಟರ್ ಸಚಿವ ಎಸ್.ಅಂಗಾರರಿಂದ ಉದ್ಘಾಟನೆ – “ಕೋವಿಡ್ ಕೇರ್ ಸೆಂಟರ್‌ ಗ್ರಾಮೀಣ ಜನರ ಆರೋಗ್ಯ ವೃದ್ಧಿಗೆ ಪೂರಕ”

ಪಂಜದ ಮೊರಾರ್ಜಿ ವಸತಿ ಶಾಲೆಯಲ್ಲಿ ನಿರ್ಮಿತವಾದ ಸುವ್ಯವಸ್ಥಿತವಾದ ಕೋವಿಡ್ ಕೇರ್ ಸೆಂಟರ್‌ನಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಭಾಗ್ಯ ಸಮೃದ್ಧಿಗೆ ಪೂರಕವಾಗಿದೆ.ಇಲ್ಲಿ ಸೋಂಕಿತರಿಗೆ ಬೇಕಾದ ಸಕಲ ವ್ಯವಸ್ಥೆಯನ್ನು ಸರಕಾರದಿಂದ ಮಾಡಲಾಗಿದೆ.ಅಲ್ಲದೆ ಆಮ್ಲಜನಕ ಕನ್ಸಲೇಟರ್ ಅನ್ನು ಒದಗಿಸಿದ್ದೇವೆ. ಕಾಲಕಾಲಕ್ಕೆ ಬೇಕಾದ ಪೌಷ್ಠಿಕ ಆಹಾರವನ್ನು ವ್ಯವಸ್ಥಿತವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ವರೂ ಆರೋಗ್ಯ ರಕ್ಷಣೆಗೆ ಕರ ಜೋಡಿಸಬೇಕು. ನಮ್ಮೊಳಗೆ ಉಂಟಾಗುವ...

ಸಾಲಕ್ಕೆ ಜಾಮೀನು ಹಾಕುವ ಮುನ್ನ ಆಲೋಚಿಸಿ – ಜಾಮೀನುದಾರರೂ ಸಾಲಕ್ಕೆ ಜವಾಬ್ದಾರರು – ಸುಪ್ರೀಂ ಕೋರ್ಟ್

ಸಾಲ ಪಡೆದು ವಂಚನೆ ನಡೆಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಲಕ್ಕೆ ಜಾಮೀನು ಹಾಕಿದವರಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ದಿವಾಳಿತನ ಸಂಹಿತೆ (ಐಬಿಸಿ) ಅಡಿಯಲ್ಲಿ ಸಾಲ ಪಡೆದವರು ಅದನ್ನು ತೀರಿಸಲು ವಿಫಲರಾದರೆ ವೈಯಕ್ತಿಕ ಜಾಮೀನುದಾರರ ವಿರುದ್ಧ ಕ್ರಮ ಜರುಗಿಸಲು ಬ್ಯಾಂಕುಗಳಿಗೆ ಅನುಮತಿ ನೀಡಿದೆ. ಕಾರ್ಪೋರೇಟ್ ಸಾಲಗಾರರಿಗೆ ಇಲ್ಲವೇ ಕಂಪೆನಿಗಳಿಗೆ ನೀಡಲಾದ ಸಾಲಕ್ಕೆ ಜಾಮೀನು...

ಮತ್ತೆ 14 ದಿನ ಲಾಕ್‌ಡೌನ್ : ಜೂನ್ 7 ರವರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೋಲೀಸರಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಕೋವಿಡ್ ಸೋಂಕನ್ನು ಸಂಪೂರ್ಣ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮತ್ತೆ 14 ದಿನಗಳ ಲಾಕ್‌ಡೌನ್ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಘೋಷಣೆ ಮಾಡಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ. ಈ ಬಾರಿಯ ಲಾಕ್‌ಡೌನ್‌ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಈ ಬಗ್ಗೆ ಪೊಲೀಸ್ ಇಲಾಖೆಗೂ ಸೂಚನೆ ನೀಡಿದ್ದೇವೆ....

ಅರೆಬಾಸೆ ಪದ್ಯ ಕವನಗಳ ಗಮ್ಮತ್ – ಆನ್ಲೈನ್ ಸ್ಪರ್ಧಾ ಕಾರ್ಯಕ್ರಮ

ಗುತ್ತಿಗಾರಿನ ಕಿರಣ ರಂಗ ಅಧ್ಯಯನ ಸಂಸ್ಥೆ ಮತ್ತು ಕಲಾಮಾಯೆ ಏನೆಕಲ್ಲು ಪ್ರಸ್ತುತ ಪಡಿಸುವ ಅರೆಬಾಸೆ ಪದ್ಯ ಕವನಗಳ ಗಮ್ಮತ್ ಆನ್ಲೈನ್ ನಲ್ಲಿ ನಡೆಯಲಿದೆ. ಕವಿಗಳಿಗೆ, ಕವನ ವಾಚಕರಿಗೆ ಉಚಿತ ಅವಕಾಶವಿರುವ ಈ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರೆಬಾಸೆ ಘನತೆ ಗೌರವ ಹೆಚ್ಚಿಸುವಂತೆ ಹಾಗೂ ಅತೀ ಹೆಚ್ಚು ವ್ಹೀವ್ಸ್ ಪಡೆದವರಿಗೆ ಕಿರಣ ಗೌರವ ಸನ್ಮಾನ ನೀಡಿ ಗೌರವಿಸಲಾಗುವುದು...

ತಮಿಳುನಾಡಿನಲ್ಲಿ ಅರಳುತ್ತಿರುವ ತುಳುನಾಡಿನ ವಯೋಲಿನ್ ಪ್ರತಿಭೆ – ಸುಳ್ಯದ ರಾಜೇಶ್ ಕುಂಭಕೋಡು

ಹಿತ್ತಲ ಗಿಡ ಮದ್ದಲ್ಲ ಅನ್ನುವ ಗಾದೆ ಮಾತೊಂದಿದೆ‌. ತನ್ನೂರಿನಲ್ಲಿ ಗುರುತಿಸಲ್ಪಡದೇ ದೂರದ ಚೆನ್ನೈ ಮಹಾನಗರದಲ್ಲಿ ಕುಳಿತು ಸಂಗೀತ ಕ್ಷೇತ್ರದಲ್ಲಿ ಅಪರೂಪದ ಸಾಧನೆಗೈಯುತ್ತಿರುವ ವಯೋಲಿನ್ ವಾದಕ ರಾಜೇಶ್ ಕುಂಭಕೋಡು ಅವರು ಈ ಮಾತಿಗೆ ಜೀವಂತ ಸಾಕ್ಷಿ ಎಂದರೆ ತಪ್ಪಾಗಲಾರದು‌. ವಯೋಲಿನ್ ಕಲಿಯುವ ಏಕೈಕ ಗುರಿಯೊಂದಿಗೆ ಬರಿಗೈಯಲ್ಲಿ ಚೆನ್ನೈ ಗೆ ತೆರಳಿದ ಇವರನ್ನು ಸಂಗೀತ ಮಾತೆ ಕೈ ಹಿಡಿದು...

ಸುಬ್ರಹ್ಮಣ್ಯ : ಅರಣ್ಯಾಧಿಕಾರಿಗಳಿಂದ ಯುವಕನಿಗೆ ಹಲ್ಲೆ ಆರೋಪ – ನಡೆಯಲಾಗದ ಸ್ಥಿತಿ ತಲುಪಿದ ಯುವಕ – ಅರಣ್ಯಾಧಿಕಾರಿಗಳಿಂದ ನಿರಾಕರಣೆ

ಅಕ್ರಮ ಹರಳು ಕಲ್ಲು ಅಗೆತಕ್ಕೆ ಸಂಬಂಧಿಸಿ ವಿಚಾರಣೆಗಾಗಿಕೊಲ್ಲಮೊಗ್ರು ಗ್ರಾಮದ ಇಬ್ಬರು ವ್ಯಕ್ತಿಗಳನ್ನು ಸುಬ್ರಹ್ಮಣ್ಯದ ಅರಣ್ಯಾಧಿಕಾರಿಗಳು ಕರೆದೊಯ್ದು ಓರ್ವ ಯುವಕನಿಗೆ ತೀವ್ರ ಹಲ್ಲೆ ನಡೆಸಿದ್ದರೆಂಬ ಆರೋಪ ಕೇಳಿಬಂದಿದ್ದು, ಆ ಯುವಕ ನಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಆದರೆ ಈ ಹಲ್ಲೆ ಆರೋಪವನ್ನು ಅರಣ್ಯಾಧಿಕಾರಿಗಳು ನಿರಾಕರಿಸಿದ್ದಾರೆ.ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯಕೊಲ್ಲಮೊಗ್ರು ಗ್ರಾಮದ ಮೋಹನ ಕೊಳಗೆ ಎಂಬವರನ್ನು ಏ.27 ರಂದು ಅರಣ್ಯಾಧಿಕಾರಿಗಳು ಕೊಲ್ಲಮೊಗ್ರದಿಂದ...

ಒಂದು ಸುಂದರವಾದ ದಿನ ಪ್ರಕೃತಿಯ ಮಡಿಲಲ್ಲಿ…..

ಸೂರ್ಯನು ತನ್ನ ಹೊಂಗಿರಣಗಳನ್ನು ಚಾಚಿಕೊಂಡು ಪೂರ್ವ ದಿಕ್ಕಿನಲ್ಲಿ ಹುಟ್ಟಿ ಬರುತ್ತಿರುವುದನ್ನು ನೋಡುವುದೇ ಕಣ್ಣಿಗೆ ತಂಪು. ಹಕ್ಕಿಗಳ ಚಿಲಿಪಿಲಿ ನಾದವು ಕಿವಿಗೆ ಇಂಪು ನೀಡುತ್ತಿದೆ. ಪ್ರಕೃತಿಯು ರಮಣೀಯ ಸೌಂದರ್ಯ ರಾಶಿಯನ್ನು ಹೊದ್ದು ಮಲಗಿದೆ. ಈ ಪ್ರಕೃತಿ ಸೌಂದರ್ಯವನ್ನು ನೋಡಲು ನಮ್ಮ ಕಣ್ಣುಗಳು ಎಷ್ಟು ಪುಣ್ಯ ಮಾಡಿದ್ದವು ಎಂದೆನಿಸುತ್ತದೆ. ಈ ಪ್ರಕೃತಿಯ ಸೌಂದರ್ಯವನ್ನು ನೋಡುತ್ತಾ ನಮ್ಮ ಮನಸ್ಸಿನಲ್ಲಿರುವ ನೂರಾರು...

ಸಾಧನೆಯ ಶಿಖರದಲ್ಲಿ ನಿಂತು ಹಿಂದಿರುಗಿ ನೋಡಿದಾಗ…..!

ಒಂದು ಊರಿನಲ್ಲಿ ಇಬ್ಬರು ಗಂಡ-ಹೆಂಡತಿ ಇದ್ದರು. ಆ ಗಂಡ-ಹೆಂಡತಿಗೆ ಒಬ್ಬ ಮಗ ಇದ್ದ. ಅವರದು ತುಂಬಾ ಬಡ ಕುಟುಂಬ. ಬಡ ಕುಟುಂಬವಾದರೂ ಪ್ರೀತಿ-ಕಾಳಜಿಗೆ ಏನೂ ಕಡಿಮೆ ಇರಲಿಲ್ಲ. ಅವರ ಕುಟುಂಬ-ಪರಿವಾರದವರಿಗೆ ಈ ಹುಡುಗನೆಂದರೆ ಅಚ್ಚು-ಮೆಚ್ಚು. ಅಂದಹಾಗೆ ಈ ಹುಡುಗನ ಹೆಸರು ರಾಮು ಅಂತ. ರಾಮು ತುಂಬಾ ಬುದ್ದಿವಂತ ಹುಡುಗ. ಆತನಿಗೆ ತಾನು ಜೀವನದಲ್ಲಿ ಏನಾದರೂ ಸಾಧಿಸಬೇಕು...

ಫೇಸ್ ಬುಕ್ ಬಳಕೆದಾರರೇ ಎಚ್ಚರ : ನಕಲಿ ಖಾತೆ ತೆರೆದು ವಂಚಿಸುವ ಜಾಲ ಸಕ್ರೀಯ

ಫೇಸ್ ಬುಕ್ ನಕಲಿ ಖಾತೆ ತೆರೆದು ವಂಚಿಸುವ ಜಾಲವೊಂದು ಸಕ್ರೀಯವಾಗಿದ್ದು ಸುಳ್ಯದಲ್ಲಿ ಹಲವರ ಹೆಸರಿನಲ್ಲಿ ವಂಚನೆ ನಡೆಸಿದ ಘಟನೆ ವರದಿಯಾಗಿದೆ.ಫೇಸ್ ಬುಕ್ ನಕಲಿ ಖಾತೆ ತೆರೆದು ಅವರದೇ ಫೋಟೋ ಡಿಪಿ ಹಾಕಿ, ಇತರರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಎಕ್ಸೆಪ್ಟ್ ಮಾಡಿದವರಿಗೆ ಫೇಸ್‌ಬುಕ್‌ ಮೆಸೆಂಜರ್ ನಲ್ಲಿ ಮೆಸೇಜ್ ಮಾಡಲು ಆರಂಭಿಸುತ್ತಾರೆ. ಬಳಿಕ ನಾನು ಸಂಕಷ್ಟದಲ್ಲಿದ್ದೇನೆ ನನಗೆ ತುರ್ತಾಗಿ...

ನಮ್ಮ ಜೀವ ನಾವೇ ಕಾಪಾಡಿಕೊಳ್ಳಬೇಕಿದೆ

ಕೊರೋನ ಒಂದು ಭೀಕರ ಸಾಂಕ್ರಾಮಿಕ ಕಾಯಿಲೆ. ಇದು ನಮ್ಮ ದೇಶವನ್ನು ಬೆಚ್ಚಿ ಬೀಳಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹಾಗೆಯೇ ಮರಣದ ಸಂಖ್ಯೆಯೂ ಏರುತ್ತಲೇ ಹೋಗುತ್ತಿದೆ.ಸರ್ಕಾರ ಅದೇಷ್ಟೋ ಮಂಜಾಗ್ರತಾ ಕ್ರಮ ಕೈಗೊಂಡರೂ ಜನರು ಅದನ್ನು ಪಾಲನೆ ಮಾಡುವಲ್ಲಿ ಎಡವುತ್ತಿದ್ದಾರೆ.ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡುವಿಕೆ.. ಮುಂತಾದವನ್ನು ಜನ ಮಾಡುತ್ತಿಲ್ಲ, ಇತ್ತ ಒಬ್ಬರ ನಿರ್ಲಕ್ಷ್ಯ ದಿಂದಾಗಿ ಮನೆಮಂದಿ,...

ಹಣಕ್ಕಾಗಿ ಹೆಣವಾಗಿಸಬೇಡಿ -ಕೊರೊನದ ಹೆಸರಲ್ಲಿ ಮಾನವೀಯತೆಯನ್ನು ಸುಡಬೇಡಿ

ಕೊರೋನಾ ಎರಡನೇ ಅಲೆ…ಮತ್ತೆ ಬುಗಿಲೆದ್ದಿದೆ. ಜನರ ಆರ್ತನಾದನ ಮುಗಿಲು ಮುಟ್ಟಿದರೂ ಕೇಳೋರಿಲ್ಲ ಎಂಬ ಪರಿಸ್ಥಿತಿ ಎದುರಾಗಿದೆ. ಇನ್ನೇನು ಎಲ್ಲವು ಸರಿಯಾಗಿ ನಡೀತಿದೆ ಅನ್ನೋವಾಗ್ಲೆ ಮತ್ತೆ ಒಕ್ಕರಿಸಿಕೊಂಡಿರುವ ಈ ಮಹಾಮಾರಿಯ ಬಗ್ಗೆ ಏನು ಹೇಳೋದು..? ದಿನೇದಿನೇ ಸಾವಿನ ಸಂಖ್ಯೆಯೂ ಹೆಚ್ಚಾಗ್ತಿದೆ. ಪರಿಹಾರ…? ಕಾರಣ…? ಹೀಗೇ ಇದಕ್ಕೆ ಸಂಬಂಧಿಸಿದಂತೆ ಪ್ರತಿಯೊಂದನ್ನು ಹುಡುಕುತ್ತಾ ಹೋದಂತೆ ಪ್ರಶ್ನೆಗಳೇ ಹೆಚ್ಚಾಗಿ ಕಾಣಿಸ್ತಿವೆ ಹೊರತು....

ಸ್ತ್ರೀ ಎಂದರೆ ಸಾಕೇ……

ಜಾಗತಿಕ ಜಗತ್ತಿನಲ್ಲಿ ಸ್ತ್ರೀ ಮೇಲೆ ನಡೆಯುತ್ತಿರುವ ಹತ್ತಾರು ರೀತಿಯ ಶೋಷಣೆಗಳ ನಡುವೆ ಒಂದು ದಿನ ಮಹಿಳಾ ದಿನಾಚರಣೆ ಪ್ರಸ್ತುತವೂ ತಿಳಿಯುತಿಲ್ಲ ."ಯತ್ರಾ ನರಾಸ್ತು ಪುಜಂತೆ ರಾಮಂತೆ ತತ್ವ ದೇವತಾ ,ಅಂದ್ರೆ ಮಹಿಳೆಯರನ್ನು ಎಲ್ಲಿ ನಾವು ಆರಾಧಿಸುತ್ತೇವೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಸ್ತ್ರೀಯರನ್ನು ಶಕ್ತಿ ಸ್ವರೂಪಿಣಿಯಾಗಿ ಆರಾಧಿಸಿದ ದೇಶ ನಮ್ಮದು.ಸ್ತ್ರೀ ಯನ್ನು ಮೂರು ದೃಷ್ಟಿಯಿಂದ ನೊಡುತ್ತೇವೆ.ಕತ್ರಥ್ವ ,ನೇತ್ರಥ್ವ...

ನಮ್ಮ ರಾಷ್ಟ್ರೀಯ ಕ್ರೀಡೆ ಬಗ್ಗೆ ನಿಮಗೆಷ್ಟು ಗೊತ್ತು.

ಭಾರತವು ಹಾಕಿಯನ್ನು ನಮ್ಮ ದೇಶದ ರಾಷ್ಟ್ರೀಯ ಕ್ರೀಡೆಯಾಗಿ ಮಣೆ ಹಾಕಿದೆ. ಹಾಕಿಯಲ್ಲಿ ಭಾರತ ವಿಜಯವೇದಿಕೆಯನ್ನು ಬಹುಬಾರಿ ಅಲಂಕರಿಸಿದೆ. ನಮ್ಮ ದೇಶವು ಎಂಟು ಬಂಗಾರದ ಪದಕಗಳನ್ನು ಪಡೆದು ಒಲಂಪಿಕ್ಸ್ ದಾಖಲೆ ಸ್ಥಾಪಿಸಿದೆ. ಭಾರತದ ಹಾಕಿ ಅಟಕ್ಕೆ 1928-56, ರ ಅವಧಿಯು ಸುವರ್ಣಯುಗ. ಅದು ಸತತ ಆರು ಸುವರ್ಣ ಪದಕಗಳನ್ನು ಒಲಂಪಿಕ್ ಕ್ರೀಡೆಗಳಲ್ಲಿ ಪಡೆಯಿತು. ತಂಡವು 1975 ವಿಶ್ವ...

ಚುನಾವಣೆ ಹಿನ್ನಲೆಯಲ್ಲಿ ಡೆಪಾಸಿಟ್ ಇರಿಸಿದ ಕೋವಿ ರೈತರಿಗೆ ಷರತ್ತಿನೊಂದಿಗೆ ನೀಡಲು ಆದೇಶ.

ಸುಳ್ಯ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಕೃಷಿಕರ ಉಪಯೋಗಕ್ಕೆ ನೀಡಿದ್ದ ಮತ್ತು ಆತ್ಮ ರಕ್ಷಣೆಗೆ ನೀಡಲಾದ ಗನ್ ಗಳನ್ನು ಡೆಪಾಸಿಟ್ ಇಡಲು ಆದೇಶಿಸಿದ್ದರು ಅಲ್ಲದೇ ಕೆಲವು ಕಡೆಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ಮನಗಂಡು ಜಿಲ್ಲಾಧಿಕಾರಿಗಳು ಇಂದು ಠೇವನಿ ಇರಿಸಲಾದ ಕೋವಿ ಮತ್ತು ಗನ್ ಗಳನ್ನು ಮರಳಿ ರೈತರಿಗೆ ನೀಡಲು ಷರತ್ತಿನೊಂದಿಗೆ ಆದೇಶಿಸಿದ್ದಾರೆ ಆದೇಶದಲ್ಲಿ ಏನಿದೆ ಷರತ್ತುಗಳು...

ಬೊಳುಬೈಲ್ ಬಳಿ ಕಾರು ಬೈಕ್ ಅಪಘಾತ ಪ್ರಕರಣ ಮಹಿಳೆಯನ್ನು ಮಂಗಳೂರಿಗೆ ವರ್ಗಾವಣೆ ಸಾಧ್ಯತೆ.

ಸುಳ್ಯ: ಸುಳ್ಯ ನಗರಸ ಬೋಳುಬೈಲ್ ಬಳಿಯಲ್ಲಿ ನಡೆದ ಕಾರು ಮತ್ತು ಬೈಕ್ ಅಪಘಾತದಲ್ಲಿ ಗಾಯಗೊಂಡವರನ್ನು ವಿಟ್ಲ ಮೂಲದ ಬಾಯರ್ ಎಂಬಲ್ಲಿಯ ಗುರು ಮತ್ತು ಶಶಿಕಲಾ ಎಂದು ಗುರುತಿಸಲಾಗಿದ್ದು ಗಾಯಗೊಂಡ ಮಹಿಳೆ ಶಶಿಕಲಾರಿಗೆ ತಲೆಗೆ ಗಾಯಗಳಾಗಿರುವ ಹಿನ್ನಲೆಯಲ್ಲಿ ಮಂಗಳೂರಿಗೆ ವರ್ಗಾವಣೆ ಸಾಧ್ಯೆಗಳಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ಬೊಳುಬೈಲ್ ಅಪಘಾತ ಪ್ರಕರಣ ಮಹಿಳೆಯನ್ನು ಮಂಗಳೂರಿಗೆ ವರ್ಗಾವಣೆ ಸಾಧ್ಯತೆ

ಸುಳ್ಯ: ಸುಳ್ಯ ನಗರದ ಬೋಳುಬೈಲ್ ಬಳಿಯಲ್ಲಿ ನಡೆದ ಕಾರು ಮತ್ತು ಬೈಕ್ ಅಪಘಾತದಲ್ಲಿ ಗಾಯಗೊಂಡವರನ್ನು ವಿಟ್ಲ ಮೂಲದ ಬಾಯರ್ ಎಂಬಲ್ಲಿಯ ಗುರು ಮತ್ತು ಶಶಿಕಲಾ ಎಂದು ಗುರುತಿಸಲಾಗಿದ್ದು ಗಾಯಗೊಂಡ ಮಹಿಳೆ ಶಶಿಕಲಾರಿಗೆ ತಲೆಗೆ ಗಾಯಗಳಾಗಿರುವ ಹಿನ್ನಲೆಯಲ್ಲಿ ಮಂಗಳೂರಿಗೆ ವರ್ಗಾವಣೆ ಸಾಧ್ಯೆಗಳಿದೆ ಎಂದು ತಿಳಿದು ಬಂದಿದೆ.

ಕುಕ್ಕೆಸುಬ್ರಹ್ಮಣ್ಯನ ಕೃಪಾಶೀರ್ವಾದ ವಿದ್ಯಾಸಂಪತ್ತಿನ ಔನತ್ಯಕ್ಕೆ ಅಡಿಗಲ್ಲು –  ರಾಜ್ಯಕ್ಕೆ 5ನೇ ಸ್ಥಾನ ಪಡೆದ ದುರ್ಗಾಲಕ್ಷ್ಮೀ  ಅವರನ್ನು ಸನ್ಮಾನಿಸಿ ಮಾತನಾಡಿದ ಸೋಮಶೇಖರ ನಾಯಕ್

  ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ವಿದ್ಯಾಸಂಸ್ಥೆಯಲ್ಲಿ ಅಧ್ಯಾಯನ ಮಾಡಿ ರಾಜ್ಯಕ್ಕೆ 5ನೇ ಸ್ಥಾನ ಪಡೆದಿರುವುದು ಶ್ಲಾಘನೀಯ. 5 ದಶಕಗಳಿಗೂ ಅಧಿಕ ಸಮಯದಿಂದ ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶ್ರೀ ದೇವಳದ ವಿದ್ಯಾಸಂಸ್ಥೆಯಲ್ಲಿ ಅಧ್ಯಾಯನ ಮಾಡುವುದು ಭಾಗ್ಯ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕೃಪಾಶೀರ್ವಾದವೇ ವಿದ್ಯಾಸಂಪತ್ತಿನ ಔನತ್ಯಕ್ಕೆ ಅಡಿಗಲ್ಲು.ದೇವರ ಸಂಸ್ಥೆಯಲ್ಲಿ ಶ್ರೀದೇವರ...

ಮಂಡೆಕೋಲು ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಭೇಟಿ, ಪ್ರಸಾದ ಸ್ವೀಕಾರ

ಸುಳ್ಯ: ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಶುಭವಸರದಲ್ಲಿರುವ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಸೋಮವಾರ ಭೇಟಿ ನೀಡಿದರು. ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಪಡೆದು ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ಅನ್ನಪ್ರಸಾದ ಸ್ವೀಕರಿಸಿ ತೆರಳಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ...

ಬೊಳುಬೈಲ್ ಬಳಿ ಕಾರ್ ಬೈಕ್ ಡಿಕ್ಕಿ , ದಂಪತಿಗಳು ಗಂಭೀರ ಗಾಯ.

ಸುಳ್ಯ ಬೊಳುಬೈಲ್ ಕಬ್ಬು ಜ್ಯೂಸ್ ಅಂಗಡಿ ಬಳಿಯಲ್ಲಿ ಇದೀಗ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿದ್ದ ದಂಪತಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಇದೀಗ ವರದಿಯಾಗಿದ್ದು ದಂಪತಿಗಳ ವಿವರ ಇನ್ನಷ್ಟೆ ಬರಬೇಕಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.ಗಂಭೀರವಾಗಿ ಗಾಯಗೊಂಡವರನ್ನು ಶಿವ ಆ್ಯಂಬುಲೆನ್ಸ್ ಮಾಲಕರಾದ ಶಿವರವರು ಕೆವಿಜಿ ಆಸ್ಪತ್ರೆಗೆ ಸಾಗಿಸಿರುವುದಾಗಿ ತಿಳಿದು ಬಂದಿದೆ.

ನಾಳೆ (ಎ.30) ರಂದು ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ

ಎ.30 ನೇ ಮಂಗಳವಾರದಂದು 33ಕೆವಿ ಬೆಳ್ಳಾರೆ-ಗುತ್ತಿಗಾರು ಮಾರ್ಗದಲ್ಲಿ ಹಾಗೂ ಗುತ್ತಿಗಾರು ಮತ್ತು ಸುಬ್ರಹ್ಮಣ್ಯ 33/11 ಕೆವಿ ವಿದ್ಯುತ್ ಉಪಕೇಂದ್ರಗಳಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಪೂರ್ವಾಹ್ನ 10:00 ಗಂಟೆಯಿಂದ ಸಾಯಂಕಾಲ 5:00 ಗಂಟೆಯವರೆಗೆ 33ಕೆವಿ ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು.ಆದ್ದರಿಂದ ಗುತ್ತಿಗಾರು ಉಪಕೇಂದ್ರದಿಂದ ಹೊರಡುವ ಗುತ್ತಿಗಾರು ಮತ್ತು ಕೂತ್ಕುಂಜ 11ಕೆವಿ ಫೀಧರ್‌ಗಳಲ್ಲಿ ಮತ್ತು ಸುಬ್ರಹ್ಮಣ್ಯ ಉಪಕೇಂದ್ರದಿಂದ...

ಸುಬ್ರಹ್ಮಣ್ಯದಲ್ಲಿ ಮಯೂರ ಕನ್ಸ್ಟ್ರಕ್ಷನ್ ಆಗೋ ಕನ್ಸಲ್ಟೆನ್ಸಿ ಉದ್ಘಾಟನೆ

ಸುಬ್ರಹ್ಮಣ್ಯದಲ್ಲಿ ಮಯೂರ ಕನ್ಸ್ಟ್ರಕ್ಷನ್ ಆಗೋ ಕನ್ಸಲ್ಟೆನ್ಸಿ ಉದ್ಘಾಟನೆ. ಸುಬ್ರಹ್ಮಣ್ಯದ ಕಾಶಿ ಕಟ್ಟೆ ಬಳಿ ಇರುವ ಮೋಂಟಿ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಇಂದು ಆದಿತ್ಯವಾರ ಅಭಿಷೇಕ್ ನಡು ತೋಟ ಅವರ ಮಾಲಕತ್ವದ ಮಯೂರ ಕನ್ಸಲ್ಟೆನ್ಸಿ ಹಾಗೂ ಕನ್ಸ್ಟ್ರಕ್ಷನ್ಸ್ ಕಚೇರಿ ಶುಭ ಆರಂಭಗೊಂಡಿತು. ನಡು ತೋಟ ಕುಟುಂಬದ ಹಿರಿಯರು ನಿವೃತ್ತ ಉಪನ್ಯಾಸಕರಾದ ನೀಲಪ್ಪಗೌಡ ನಡುತೋಟ ಟೇಪ್ ಕತ್ತರಿಸುವುದರ...

ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಘಟಕದ ಅಧ್ಯಕ್ಷರಾಗಿ ಡಾ| ರವಿ ಕಕ್ಕೆಪದವು, ಕಾರ್ಯದರ್ಶಿಯಾಗಿ ಮೋನಪ್ಪ.ಡಿ, ಕೋಶಾಧಿಕಾರಿಯಾಗಿ ಪ್ರಕಾಶ್ ಕಟ್ಟೆಮನೆ ಆಯ್ಕೆ

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ ಲೀಜನ್ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ| ರವಿ ಕಕ್ಕೆಪದವು ಅವರು ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ.ಡಿ, ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಾದ ಪ್ರಕಾಶ್ ಕಟ್ಟೆಮನೆ ಇವರು ಆಯ್ಕೆಯಾಗಿರುತ್ತಾರೆ. ಲೀಜನ್ ನಿಕಟಪೂರ್ವ ಹಾಗೂ ಸ್ಥಾಪಕಾಧ್ಯಕ್ಷರಾಗಿ ಸೀನಿಯರ್...

ಆದಿ ಸುಬ್ರಹ್ಮಣ್ಯ ಯಾಗ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

ಸುಬ್ರಹ್ಮಣ್ಯ ಏ.28: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಿ ಸುಬ್ರಹ್ಮಣ್ಯ ಯಾಗ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಉಚಿತವಾಗಿ ಬೆಂಗಳೂರಿನ ದಾನಿಗಳಾದ ವೈ ಎಂ ಆರ್ ಎಸ್ ಟ್ರಾನ್ಸ್ಪೋರ್ಟ್ ಚಂದಾಪುರ ಕಂಪೆನಿಯ ಮಾಲಕರಾದ ರಾಜ ಅವರು ಸುಬ್ರಹ್ಮಣ್ಯ ರೋಟರಿ ಕ್ಲಬ್ ಮೂಲಕ ಭಾನುವಾರ ಶ್ರೀದೇವಳಕ್ಕೆ ಹಸ್ತಾಂತರಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ...
Loading posts...

All posts loaded

No more posts

error: Content is protected !!