ಸುಬ್ರಹ್ಮಣ್ಯ: ನಾಗಾರಾಧನೆಯ ಪ್ರಸಿದ್ಧ ಪುಣ್ಯ ತಾಣ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ದೀಪಾವಳಿ ಅಮವಾಸ್ಯೆಯ ಶುಭದಿನವಾದ ಆದಿತ್ಯವಾರ ಬಲೀಂದ್ರ(ದೀಪಾಲೆ) ಮರವನ್ನು ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಏರಿಸಲಾಯಿತು.
ಆರಂಭದಲ್ಲಿ ದೀಪಾಲೆ ಮರವನ್ನು ತಂದು ಶ್ರೀ ದೇವಳದ ಮುಂಭಾಗದಲ್ಲಿ ಇರಿಸಲಾಯಿತು. ಬಳಿಕ ಅದಕ್ಕೆ ಪುಣ್ಯ ತೀರ್ಥ ಸಿಂಪಡಿಸಿ ಪ್ರಸಾದ ಹಚ್ಚಲಾಯಿತು. ನಂತರ ಮರವನ್ನು ಶ್ರೀ ದೇವಳದ ಗರ್ಭಗುಡಿಯ ಮುಂಭಾಗಲ್ಲಿ ಏರಿಸಲಾಯಿತು. ರಾತ್ರಿ ಅವಲಕ್ಕಿ ಪಲ್ಲಪೂಜೆ ನಡೆದ ಬಳಿಕ ಬಲೀಂದ್ರ ಕಂಬಕ್ಕೆ ಪೂಜೆ ನಡೆಯಿತು.ಬಳಿಕ ಪ್ರಸಾದ ವಿತರಣೆ ನೆರವೇರಿತು.
- Thursday
- May 16th, 2024