Ad Widget

ನ.16 : ಮಂಗಳೂರಿನಲ್ಲಿ ತೆಂಗು ರೈತ ಉತ್ಪಾದಕರ ಸಂಸ್ಥೆಯ ಪ್ರಾದೇಶಿಕ ಕಛೇರಿ ಉದ್ಘಾಟನೆ ಹಾಗೂ ತೆಂಗು ಉತ್ಪನ್ನಗಳ ಬಿಡುಗಡೆ

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಪ್ರಾದೇಶಿಕ ಕಛೇರಿ ಉದ್ಘಾಟನೆ ಮತ್ತು ತೆಂಗು ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮ ನ.16 ರಂದು ಮಂಗಳೂರಿನ ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಬಳಿ ನಡೆಯಲಿದೆ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಡಾ ಧರ್ಮಪಾಲನಾಥ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸುವರು. ಸ್ಪೀಕರ್ ಯು. ಟಿ. ಖಾದರ್ ಕಚೇರಿಯ ಉದ್ಘಾಟನೆಯನ್ನು ನೆರವೇರಿಸುವರು. ಅತಿಥಿಗಳಾಗಿ ಶಾಸಕರಾದ ಡಿ ವೇದವ್ಯಾಸ ಕಾಮತ್, ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಐ.ಸಿ.ಎ.ಆರ್ -ಸಿ.ಪಿ.ಸಿ.ಆರ್.ಐ, ಕಾಸರಗೋಡು ಇದರ ನಿರ್ದೇಶಕರಾದ ಡಾ ಹಬ್ಬಾರ್ ಕೆ ಬಿ, ತೋಟಗಾರಿಕಾ ಇಲಾಖೆಯ ಹೆಚ್.ಆರ್.ನಾಯ್ಕ, ಕೃಷಿ ಇಲಾಖೆಯ ಕೆಂಪೇ ಗೌಡ ಹೆಚ್, ಕೇಶವ ಮರೋಳಿ, ಸಂಗೀತಾ ಎಸ್ ಕರ್ತಾ, ಡಾ. ರಮೇಶ್, ರವಿಕಿರಣ್ ಪುಣಚ, ಜೀವನ್ ಭಾಗವಹಿಸಲಿದ್ದಾರೆ ಎಂದು ದಕ್ಷಿಣ ಕನ್ಬಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್.ಕೆ. ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!