Ad Widget

ಪೈಲಾರು : ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ಹಸ್ತ ಚಾಚಿ ದೀಪಾವಳಿ ಆಚರಿಸಿದ ಟ್ರಸ್ಟ್ ಫಂಡ್

ಅಮರ ಮುಡ್ನೂರು ಗ್ರಾಮದ ಪೈಲಾರ್ ನಿವಾಸಿ ದಿನೇಶ್ ಆಚಾರಿ ಕುಟುಂಬ ಅನಾರೋಗ್ಯದಿಂದ ಸಂಕಷ್ಟದಲ್ಲಿದ್ದು ಅವರಿಗೆ ಸಹಾಯ ಹಸ್ತ ಚಾಚುವ ಮೂಲಕ ಟ್ರಸ್ಟ್ ಫಂಡ್ ದೀಪಾವಳಿ ಆಚರಿಸಿದೆ.

ದುಡಿದು ತನ್ನ ಕಾಲಮೇಲೆ ನಿಂತು ಜೀವನ ಸಾಗಿಸುತ್ತಿದ್ದ ದಿನೇಶ್ ಆಚಾರಿಯವರು ಕೆಲ ಸಮಯದಿಂದ ಪಾರ್ಶ್ವವಾಯು ನಿಂದ ಬಳಲುತ್ತಿದ್ದಾರೆ. ಪತ್ನಿ ಮೀನಾಕ್ಷಿ ಅವರು ಕೂಡ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮಗ ಕಿಶನ್ ನ ದುಡಿಮೆಯಿಂದ ಮಾತ್ರ ಬದುಕು ಸಾಗಿಸಲು ಕಷ್ಟವಾಗಿದೆ. ಇವರ ಸಂಕಷ್ಟ ಅರಿತ ಟ್ರಸ್ಟ್ ನ ಸದಸ್ಯರು ದೀಪಾವಳಿ ಸಂದರ್ಭದಲ್ಲಿ ನೆರವಿಗೆ ಧಾವಿಸಿ ಆಹಾರದ ಕಿಟ್, ಮಿಕ್ಸಿ ಹಾಗೂ ಚಿಕಿತ್ಸೆಗಾಗಿ ರೂ.16 ಸಾವಿರ ನೀಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಫಂಡ್ ನ ಅಧ್ಯಕ್ಷರಾದ ಚಿದಾನಂದ, ಮತ್ತು ಸದಸ್ಯರಾದ ಮೋಹನ್ ಕೆ ಪಿ, ನವೀನ್ ಕೆ ಪಿ, ಪವನ್, ನವೀನ್,ಪ್ರಮೋದ್, ಹರೀಶ್,ಯತಿನ್ ಉಪಸ್ಥಿತರಿದ್ದರು.

ಇವರಿಗೆ ಇನ್ನೂ ನೆರವಿನ ಅಗತ್ಯವಿದೆ. ಸಹಾಯ ನೀಡಲಿಚ್ಚಿಸುವವರು ಇವರನ್ನು ಸಂಪರ್ಕಿಸಿ
ಮೊ : 8970820369
Acc No : 70690100001905
Name : ಮೀನಾಕ್ಷಿ
IFSC : BARBOVJKJDK 574012303

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!