Ad Widget

ನರೆಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಕಾಯರ್ತೋಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಇಂದು ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮ ದಿನದ ಆಚರಣೆಯ ಅಂಗವಾಗಿ ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಪಕ್ಷದ ವತಿಯಿಂದ ನೆರೆವೇರಿಸಲಾಯಿತು. ಈ ಸಂದರ್ಭದಲ್ಲಿ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಮೂಕ್ತೇಸರಾದ ಪಿ.ಕೆ.ಉಮೇಶ್ ದೇವರಿಗೆ ಪ್ರಾರ್ಥನೆ ಸಲ್ಲಿಸಿ ,ಕಾಯರ್ತೋಡಿ ದೇವಸ್ಥಾನದ ಪ್ರಧಾನ ಅರ್ಚಕರಾದ ನೀಲಕಂಠ ವಿಶೇಷ ಪೂಜೆ ನೆರೆವೇರಿಸಿದರು, ವಿಜಯ ದೇಗೊಂಡಿ ಅಧ್ಯಕ್ಷ ಬಿಜೆಪಿ ವಾರ್ಡು ಕಾಯರ್ತೋಡಿ, ಬಿಜೆಪಿ ವಾರ್ಡ್ ಸಮಿತಿಯ ಕಾರ್ಯದರ್ಶಿ ದೀಪಕ್ , ಸಿ .ಎ. ಬ್ಯಾಂಕ್ ನ ನಿರ್ದೇಶರಾದ ನವೀನ್ ಕುದ್ಪಾಜೆ, ಕಾಯರ್ತೋಡಿ ಮಹಾವಿಷ್ಟು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ನಾರಾಯಣ ಕಾಯರ್ತೋಡಿ, ಚಂದ್ರಶೇಖರ್ ಅಡ್ಪಾಂಗಯ, ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಚಿದಾನಂದ ಕಾಯರ್ತೋಡಿ, ಸುಳ್ಯ ಬಿಜೆಪಿ ಮಂಡಲ ಸೋಷಿಯಲ್ ಮೀಡಿಯಾ ಇದರ ಸಹ ಸಂಚಾಲಕರಾದ ಸುಪ್ರೀತ್ ಮೋಂಟಡ್ಕ, ಮಿಥುನ್ ಕಾಯರ್ತೋಡಿ, ಹಿಂದೂ ಜಾಗರಣ ವೇದಿಕೆಯ ಉಪಾಧ್ಯಕ್ಷ ಪ್ರಶಾಂತ್ ಕಾಯರ್ತೋಡಿ, ದೇವಸ್ಥಾನದ ಸಿಬ್ಬಂದಿ ದೇವಿಪ್ರಸಾದ್ ಕುದ್ಪಾಜೆ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!