ಕಲ್ಲುಗುಂಡಿಯಲ್ಲಿ ಜುಡನ್ ಗ್ರೂಪ್ಸ್ ನವರ ಗಾರ್ಮೆಂಟ್ಸ್, ಗೋಲ್ಡನ್ ಕೀ ಕನ್ಸ್ಟ್ರಕ್ಷನ್ ಹಾಗೂ ಯೂನಿವಸರ್ಲ್ ಮಾರ್ಕೆಟಿಂಗ್ ಹಾಗೂ ಎಸ್.ಬಿ.ಜೆ ಸ್ಲಿಪ್ಪರ್ ಪ್ರೊಡಕ್ಷನ್ ಉದ್ಘಾಟನಾ ಸಮಾರಂಭವು ಮಾ.3ರಂದು ನಡೆಯಿತು. ಜುಡನ್ ಗಾರ್ಮೇಂಟ್ಸ್, ಗೋಲ್ಡನ್ ಕೀ ಕನ್ಟ್ರಕ್ಷನ್ ಹಾಗೂ ಯೂನಿವರ್ಸಲ್ ಮಾರ್ಕೆಟಿಂಗ್ನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಲಾರೆನ್ಸ್ ಮುಕುಝಿರವರು ರಿಬ್ಬನ್ ಕಟ್ಟಿಂಗ್ ಮೂಲಕ ಶುಭಾರಂಭಗೊಳಿಸಿದರು. ಹಾಗೂ ಎಸ್.ಬಿ.ಜೆ ಸ್ಲಿಪ್ಪರ್ ಪ್ರೊಡಕ್ಷನ್ನನ್ನು ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ| ರೇಣುಕಾಪ್ರಸಾದ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿಯ ಧರ್ಮಪ್ರಾಂತ್ಯದ ಬಿಷಪ್ ಲಾರೆನ್ಸ್ ಮುಕುಝಿ ವಹಿಸಿದ್ದರು. ವೇದಿಕೆಗೆ ಅತಿಥಿಗಳನ್ನು ಶಾಲಾ ಮಕ್ಕಳು ಸ್ವಾಗತ ನೃತ್ಯದ ಮೂಲಕ ಬರಮಾಡಿಕೊಂಡರು. ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿರವರು ಜುಡೆನ್ ಗ್ರೂಪ್ ಸಂಸ್ಥೆಯಿಂದ ಉದ್ಯೋಗ ಅವಕಾಶ ಕಲ್ಪಿಸಿ ಕೊಟ್ಟು ಜನರಿಗೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಸಂಪಾಜೆ ಚರ್ಚ್ ನ ಧರ್ಮಗುರು ರೆ| ಫಾ. ಪೀಟರ್ ಪದರಂಚೀರ, ಕಲ್ಲುಗುಂಡಿ ಚರ್ಚ್ ನ ಧರ್ಮಗುರು ರೆ| ಫಾ. ಫೌಲ್ ಕ್ರಾಸ್ಟಾ, ದ.ಕ ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಸುಳ್ಯ ತಾಲೂಕು ಪಂಚಾಯತ್ನ ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಸಂಪಾಜೆಯ ವಿ.ಎಸ್.ಎಸ್.ಎನ್ ಬ್ಯಾಂಕ್ನ ಅಧ್ಯಕ್ಷ ಹಾಗೂ ಸಂಪಾಜೆಯ ಗ್ರಾ.ಪಂ ಸದಸ್ಯ ಸೋಮಶೇಖರ್ ಕೊಯಿಂಗಾಜೆ, ಕಲ್ಲುಗುಂಡಿ ವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷ ಶ್ರೀಧರ್ ಮಾದೇಪಾಲ್, ಕಲ್ಲುಗುಂಡಿ ಜುಮ್ಮಾ ಮಜ್ಜಿದ್ ಅಧ್ಯಕ್ಷ ಹೆಚ್.ಎ. ಅಬ್ಬಾಸ್ , ಸಂಪಾಜೆ ಗ್ರಾಮ ಪಂಚಾಯತ್ನ ಉಪಾಧ್ಯಕ್ಷೆ ಲೆಸ್ಸಿ ಮೊನಾಲಿಸಾ, ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು.ಬಿ.ಚಕ್ರಪಾಣಿ, ಸುಳ್ಯದ ಸಿಐಟಿಯುನ ಅಧ್ಯಕ್ಷ ಕೆ.ಪಿ.ಜಾನಿ, ಜುಡೆನ್ ಗ್ರೂಪ್ ಕಲ್ಲುಗುಂಡಿಯ ಮಾಲಕ ಅರುಣ್ ಟಿ.ಜೆ ಮತ್ತು ಜೇಮ್ಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಲ್ಲ ಗಣ್ಯರಿಗೆ ಜುಡನ್ ಗ್ರೂಪ್ನ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬೆಳ್ತಂಗಡಿಯ ಧರ್ಮಪ್ರಾಂತ್ಯದ ಬಿಷಪ್ ಲಾರೆನ್ಸ್ ಮುಕುಝಿಯವರನ್ನು ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ| ರೇಣುಕಾಪ್ರಸಾದ್ ಶಾಲು ಹೊದಿಸಿ ಸನ್ಮಾನಿಸಿದರು. ಕಾರ್ಯಕ್ರಮವನ್ನು ಮಾಥ್ಯೂ ಮುಕುಝಿ ಸ್ವಾಗತಿಸಿ, ಶಶಿಕಲಾ ವಂದಿಸಿದರು. ಲೂಕಾಸ್ರವರು ನಿರೂಪಿಸಿದರು.