Ad Widget

ಪೈಚಾರ್ : ಸಿಟಿ ಕ್ಲಿನಿಕ್ ಶುಭಾರಂಭ

ಪೈಚಾರಿನ ಬಿ.ಎಂ.ಕಾಂಪ್ಲೆಕ್ಸ್ ನ ಮೆಡ್‌ಸಿಟಿ ಮೆಡಿಕಲ್ ಮೇಲ್ಬಾಗದಲ್ಲಿ ಸಿಟಿ ಕ್ಲಿನಿಕ್ ಜೂ. 23 ರಂದು ಶುಭಾರಂಭಗೊಂಡಿತು.

ಎ ಓ ಎಲ್ ಇ ಪ್ರಧಾನ ಕಾರ್ಯದರ್ಶಿ ಡಾ| ಕೆ.ವಿ‌. ರೇಣುಕಾ ಪ್ರಸಾದ್ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್, ವೆಂಕಟರಮಣ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ, ಭಾರತೀಯ ವೈದ್ಯಕೀಯ ಸಂಘದ ಸುಳ್ಯ ಶಾಖೆಯ ಡಾ| ವೀಣಾ, ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪ್ರಭಾಕರ, ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು, ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ, ಗ್ರಾ.ಪಂ.ಸದಸ್ಯ ಮುಜೀಬ್ ಪೈಚಾರ್, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಬಶೀರ್ ಆರ್.ಬಿ. ಪೈಚಾರ್, ಗುತ್ತಿಗಾರು ರಬ್ಬರ್ ಸೊಸೈಟಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಡಾ.ಗೋಪಾಲಕೃಷ್ಣ ಎನ್.ನಾಯಕ್, ಮೆಡ್ ಸಿಟಿ ಮೆಡಿಕಲ್ ಮಾಲಕ ದುರ್ಗದಾಸ್ ಕಡ್ಲಾರು, ಶ್ರೀಮತಿ ಪವಿತ್ರಾಕ್ಷಿ ಕೆ.ಸಿ. ಉಪಸ್ಥಿತರಿದ್ದರು. ಸೋಮಶೇಖರ್ ನೇರಳ ಸ್ವಾಗತಿಸಿ, ನಿರೂಪಿಸಿದರು. ದುರ್ಗಾದಾಸ್ ಕಡ್ಲಾರು ವಂದಿಸಿದರು.
ಇಲ್ಲಿ ಪ್ರತಿದಿನ ಸಂಜೆ 5.30 ರಿಂದ ರಾತ್ರಿ ಗಂಟೆ 8.00 ರವರೆಗೆ ಡಾ.ಗೋಪಾಲಕೃಷ್ಣ ಎನ್.ನಾಯಕ್ ಹಾಗೂ ಪ್ರತಿ ಆದಿತ್ಯವಾರ ಅಪರಾಹ್ನ 2.30 ರಿಂದ 4.30 ರ ವರೆಗೆ ಕಣಚ್ಚೂರು ಆಸ್ಪತ್ರೆಯ ಪ್ರಖ್ಯಾತ ವೈದ್ಯ ಡಾ. ನರಸಿಂಹ ಶಾಸ್ತ್ರಿ ಜಿ. ಯವರು ಸೇವೆ ನೀಡಲಿದ್ದಾರೆ. ಕೆ.ಎಂ.ಸಿ.ಆಸ್ಪತ್ರೆ ಮಂಗಳೂರು ಇವರ ವತಿಯಿಂದ ಇಸಿಜಿ ಸೌಲಭ್ಯ ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!