Ad Widget

ಚೊಕ್ಕಾಡಿ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ರಚನೆ : ಅಧ್ಯಕ್ಷರಾಗಿ ಕೇಶವ ಕರ್ಮಾಜೆ – ಉಪಾಧ್ಯಕ್ಷರಾಗಿ ಪ್ರವೀಣ್ ಎಸ್ ರಾವ್ ಅವಿರೋಧ ಆಯ್ಕೆ

Praveen S. Rao

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕುಕ್ಕುಜಡ್ಕ ಇದರ ಆಡಳಿತ ಮಂಡಳಿಗೆ ಮಾ.7ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು 11 ಸ್ಥಾನಗಳಲ್ಲಿ ಹಾಗು ಬಿಜೆಪಿ ಬಂಡಾಯ ಸ್ವಾಭಿಮಾನಿ ಬಳಗ 2 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಇಂದು ಅಧ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮಾಜಿ ಉಪಾಧ್ಯಕ್ಷ ಕೇಶವ ಕರ್ಮಾಜೆ ಅಧ್ಯಕ್ಷರಾಗಿ ಹಾಗೂ ಮಾಜಿ ನಿರ್ದೇಶಕ ಪ್ರವೀಣ್ ಎಸ್.ರಾವ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ರಾಧಾಕೃಷ್ಣ ಬೊಳ್ಳೂರು, ಅರುಣಕುಮಾರ್ ನಾಯರ್ ಕಲ್ಲು, ನಿರಂಜನ ಕಾನಡ್ಕ, ಉಮೇಶ್ ಚಿಲ್ಪಾರು, ಕುಮಾರ ಬೆಳ್ಚಪ್ಪಾಡ, ರಾಘವೇಂದ್ರ ಪಿ.ಕೆ., ರಘುರಾಮ, ಕೃಷ್ಣನಾಯ್ಕ, ಎಂ ಡಿ ವೀಣಾ, ಲತೇಶ್ವರಿ ಎಂ.ಎಸ್. ಅರುಣ ಕುಮಾರ ಮುಂಡಾಜೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ಕುಮಾರ್ ಪಿ. ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!