Ad Widget

ಚುನಾವಣೆ ಹಿನ್ನಲೆಯಲ್ಲಿ ಡೆಪಾಸಿಟ್ ಇರಿಸಿದ ಕೋವಿ ರೈತರಿಗೆ ಷರತ್ತಿನೊಂದಿಗೆ ನೀಡಲು ಆದೇಶ.

ಸುಳ್ಯ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಕೃಷಿಕರ ಉಪಯೋಗಕ್ಕೆ ನೀಡಿದ್ದ ಮತ್ತು ಆತ್ಮ ರಕ್ಷಣೆಗೆ ನೀಡಲಾದ ಗನ್ ಗಳನ್ನು ಡೆಪಾಸಿಟ್ ಇಡಲು ಆದೇಶಿಸಿದ್ದರು ಅಲ್ಲದೇ ಕೆಲವು ಕಡೆಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ಮನಗಂಡು ಜಿಲ್ಲಾಧಿಕಾರಿಗಳು ಇಂದು ಠೇವನಿ ಇರಿಸಲಾದ ಕೋವಿ ಮತ್ತು ಗನ್ ಗಳನ್ನು ಮರಳಿ ರೈತರಿಗೆ ನೀಡಲು ಷರತ್ತಿನೊಂದಿಗೆ ಆದೇಶಿಸಿದ್ದಾರೆ ಆದೇಶದಲ್ಲಿ ಏನಿದೆ ಷರತ್ತುಗಳು...

ಬೊಳುಬೈಲ್ ಬಳಿ ಕಾರು ಬೈಕ್ ಅಪಘಾತ ಪ್ರಕರಣ ಮಹಿಳೆಯನ್ನು ಮಂಗಳೂರಿಗೆ ವರ್ಗಾವಣೆ ಸಾಧ್ಯತೆ.

ಸುಳ್ಯ: ಸುಳ್ಯ ನಗರಸ ಬೋಳುಬೈಲ್ ಬಳಿಯಲ್ಲಿ ನಡೆದ ಕಾರು ಮತ್ತು ಬೈಕ್ ಅಪಘಾತದಲ್ಲಿ ಗಾಯಗೊಂಡವರನ್ನು ವಿಟ್ಲ ಮೂಲದ ಬಾಯರ್ ಎಂಬಲ್ಲಿಯ ಗುರು ಮತ್ತು ಶಶಿಕಲಾ ಎಂದು ಗುರುತಿಸಲಾಗಿದ್ದು ಗಾಯಗೊಂಡ ಮಹಿಳೆ ಶಶಿಕಲಾರಿಗೆ ತಲೆಗೆ ಗಾಯಗಳಾಗಿರುವ ಹಿನ್ನಲೆಯಲ್ಲಿ ಮಂಗಳೂರಿಗೆ ವರ್ಗಾವಣೆ ಸಾಧ್ಯೆಗಳಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.
Ad Widget

ಬೊಳುಬೈಲ್ ಅಪಘಾತ ಪ್ರಕರಣ ಮಹಿಳೆಯನ್ನು ಮಂಗಳೂರಿಗೆ ವರ್ಗಾವಣೆ ಸಾಧ್ಯತೆ

ಸುಳ್ಯ: ಸುಳ್ಯ ನಗರದ ಬೋಳುಬೈಲ್ ಬಳಿಯಲ್ಲಿ ನಡೆದ ಕಾರು ಮತ್ತು ಬೈಕ್ ಅಪಘಾತದಲ್ಲಿ ಗಾಯಗೊಂಡವರನ್ನು ವಿಟ್ಲ ಮೂಲದ ಬಾಯರ್ ಎಂಬಲ್ಲಿಯ ಗುರು ಮತ್ತು ಶಶಿಕಲಾ ಎಂದು ಗುರುತಿಸಲಾಗಿದ್ದು ಗಾಯಗೊಂಡ ಮಹಿಳೆ ಶಶಿಕಲಾರಿಗೆ ತಲೆಗೆ ಗಾಯಗಳಾಗಿರುವ ಹಿನ್ನಲೆಯಲ್ಲಿ ಮಂಗಳೂರಿಗೆ ವರ್ಗಾವಣೆ ಸಾಧ್ಯೆಗಳಿದೆ ಎಂದು ತಿಳಿದು ಬಂದಿದೆ.

ಕುಕ್ಕೆಸುಬ್ರಹ್ಮಣ್ಯನ ಕೃಪಾಶೀರ್ವಾದ ವಿದ್ಯಾಸಂಪತ್ತಿನ ಔನತ್ಯಕ್ಕೆ ಅಡಿಗಲ್ಲು –  ರಾಜ್ಯಕ್ಕೆ 5ನೇ ಸ್ಥಾನ ಪಡೆದ ದುರ್ಗಾಲಕ್ಷ್ಮೀ  ಅವರನ್ನು ಸನ್ಮಾನಿಸಿ ಮಾತನಾಡಿದ ಸೋಮಶೇಖರ ನಾಯಕ್

  ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ವಿದ್ಯಾಸಂಸ್ಥೆಯಲ್ಲಿ ಅಧ್ಯಾಯನ ಮಾಡಿ ರಾಜ್ಯಕ್ಕೆ 5ನೇ ಸ್ಥಾನ ಪಡೆದಿರುವುದು ಶ್ಲಾಘನೀಯ. 5 ದಶಕಗಳಿಗೂ ಅಧಿಕ ಸಮಯದಿಂದ ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶ್ರೀ ದೇವಳದ ವಿದ್ಯಾಸಂಸ್ಥೆಯಲ್ಲಿ ಅಧ್ಯಾಯನ ಮಾಡುವುದು ಭಾಗ್ಯ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕೃಪಾಶೀರ್ವಾದವೇ ವಿದ್ಯಾಸಂಪತ್ತಿನ ಔನತ್ಯಕ್ಕೆ ಅಡಿಗಲ್ಲು.ದೇವರ ಸಂಸ್ಥೆಯಲ್ಲಿ ಶ್ರೀದೇವರ...

ಮಂಡೆಕೋಲು ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಭೇಟಿ, ಪ್ರಸಾದ ಸ್ವೀಕಾರ

ಸುಳ್ಯ: ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಶುಭವಸರದಲ್ಲಿರುವ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಸೋಮವಾರ ಭೇಟಿ ನೀಡಿದರು. ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಪಡೆದು ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ಅನ್ನಪ್ರಸಾದ ಸ್ವೀಕರಿಸಿ ತೆರಳಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ...

ಬೊಳುಬೈಲ್ ಬಳಿ ಕಾರ್ ಬೈಕ್ ಡಿಕ್ಕಿ , ದಂಪತಿಗಳು ಗಂಭೀರ ಗಾಯ.

ಸುಳ್ಯ ಬೊಳುಬೈಲ್ ಕಬ್ಬು ಜ್ಯೂಸ್ ಅಂಗಡಿ ಬಳಿಯಲ್ಲಿ ಇದೀಗ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿದ್ದ ದಂಪತಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಇದೀಗ ವರದಿಯಾಗಿದ್ದು ದಂಪತಿಗಳ ವಿವರ ಇನ್ನಷ್ಟೆ ಬರಬೇಕಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.ಗಂಭೀರವಾಗಿ ಗಾಯಗೊಂಡವರನ್ನು ಶಿವ ಆ್ಯಂಬುಲೆನ್ಸ್ ಮಾಲಕರಾದ ಶಿವರವರು ಕೆವಿಜಿ ಆಸ್ಪತ್ರೆಗೆ ಸಾಗಿಸಿರುವುದಾಗಿ ತಿಳಿದು ಬಂದಿದೆ.

ನಾಳೆ (ಎ.30) ರಂದು ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ

ಎ.30 ನೇ ಮಂಗಳವಾರದಂದು 33ಕೆವಿ ಬೆಳ್ಳಾರೆ-ಗುತ್ತಿಗಾರು ಮಾರ್ಗದಲ್ಲಿ ಹಾಗೂ ಗುತ್ತಿಗಾರು ಮತ್ತು ಸುಬ್ರಹ್ಮಣ್ಯ 33/11 ಕೆವಿ ವಿದ್ಯುತ್ ಉಪಕೇಂದ್ರಗಳಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಪೂರ್ವಾಹ್ನ 10:00 ಗಂಟೆಯಿಂದ ಸಾಯಂಕಾಲ 5:00 ಗಂಟೆಯವರೆಗೆ 33ಕೆವಿ ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು.ಆದ್ದರಿಂದ ಗುತ್ತಿಗಾರು ಉಪಕೇಂದ್ರದಿಂದ ಹೊರಡುವ ಗುತ್ತಿಗಾರು ಮತ್ತು ಕೂತ್ಕುಂಜ 11ಕೆವಿ ಫೀಧರ್‌ಗಳಲ್ಲಿ ಮತ್ತು ಸುಬ್ರಹ್ಮಣ್ಯ ಉಪಕೇಂದ್ರದಿಂದ...

ಸುಬ್ರಹ್ಮಣ್ಯದಲ್ಲಿ ಮಯೂರ ಕನ್ಸ್ಟ್ರಕ್ಷನ್ ಆಗೋ ಕನ್ಸಲ್ಟೆನ್ಸಿ ಉದ್ಘಾಟನೆ

ಸುಬ್ರಹ್ಮಣ್ಯದಲ್ಲಿ ಮಯೂರ ಕನ್ಸ್ಟ್ರಕ್ಷನ್ ಆಗೋ ಕನ್ಸಲ್ಟೆನ್ಸಿ ಉದ್ಘಾಟನೆ. ಸುಬ್ರಹ್ಮಣ್ಯದ ಕಾಶಿ ಕಟ್ಟೆ ಬಳಿ ಇರುವ ಮೋಂಟಿ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಇಂದು ಆದಿತ್ಯವಾರ ಅಭಿಷೇಕ್ ನಡು ತೋಟ ಅವರ ಮಾಲಕತ್ವದ ಮಯೂರ ಕನ್ಸಲ್ಟೆನ್ಸಿ ಹಾಗೂ ಕನ್ಸ್ಟ್ರಕ್ಷನ್ಸ್ ಕಚೇರಿ ಶುಭ ಆರಂಭಗೊಂಡಿತು. ನಡು ತೋಟ ಕುಟುಂಬದ ಹಿರಿಯರು ನಿವೃತ್ತ ಉಪನ್ಯಾಸಕರಾದ ನೀಲಪ್ಪಗೌಡ ನಡುತೋಟ ಟೇಪ್ ಕತ್ತರಿಸುವುದರ...

ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಘಟಕದ ಅಧ್ಯಕ್ಷರಾಗಿ ಡಾ| ರವಿ ಕಕ್ಕೆಪದವು, ಕಾರ್ಯದರ್ಶಿಯಾಗಿ ಮೋನಪ್ಪ.ಡಿ, ಕೋಶಾಧಿಕಾರಿಯಾಗಿ ಪ್ರಕಾಶ್ ಕಟ್ಟೆಮನೆ ಆಯ್ಕೆ

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ ಲೀಜನ್ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ| ರವಿ ಕಕ್ಕೆಪದವು ಅವರು ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ.ಡಿ, ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಾದ ಪ್ರಕಾಶ್ ಕಟ್ಟೆಮನೆ ಇವರು ಆಯ್ಕೆಯಾಗಿರುತ್ತಾರೆ. ಲೀಜನ್ ನಿಕಟಪೂರ್ವ ಹಾಗೂ ಸ್ಥಾಪಕಾಧ್ಯಕ್ಷರಾಗಿ ಸೀನಿಯರ್...

ಆದಿ ಸುಬ್ರಹ್ಮಣ್ಯ ಯಾಗ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

ಸುಬ್ರಹ್ಮಣ್ಯ ಏ.28: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಿ ಸುಬ್ರಹ್ಮಣ್ಯ ಯಾಗ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಉಚಿತವಾಗಿ ಬೆಂಗಳೂರಿನ ದಾನಿಗಳಾದ ವೈ ಎಂ ಆರ್ ಎಸ್ ಟ್ರಾನ್ಸ್ಪೋರ್ಟ್ ಚಂದಾಪುರ ಕಂಪೆನಿಯ ಮಾಲಕರಾದ ರಾಜ ಅವರು ಸುಬ್ರಹ್ಮಣ್ಯ ರೋಟರಿ ಕ್ಲಬ್ ಮೂಲಕ ಭಾನುವಾರ ಶ್ರೀದೇವಳಕ್ಕೆ ಹಸ್ತಾಂತರಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ...
Loading posts...

All posts loaded

No more posts

error: Content is protected !!