Ad Widget

ಅರಂತೋಡು : ಹೆಚ್.ಪಿ‌. ಕಂಪೆನಿಯ ಆರ್.ಡಿ. ಪ್ಯೂಯಲ್ ಸ್ಟೇಷನ್ ಲೋಕಾರ್ಪಣೆ

ಮಾಣಿ- ಮೈಸೂರು ಹೆದ್ದಾರಿಯ ಅರಂತೋಡು ಸಮೀಪ ಹರಿಶ್ಚಂದ್ರ ಹೊದ್ದೆಟ್ಟಿ ಹಾಗೂ ಡಾ.ಸವಿತಾ ಸಿ.ಕೆ. ಮಾಲಕತ್ವದ ರಾಮ್ ದೇವಿ ಪ್ಯೂಯಲ್ ಸ್ಟೇಷನ್ ಮಾ. 13ರಂದು ಲೋಕಾರ್ಪಣೆಗೊಂಡಿತು.


ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕ ಅಕ್ಷಯ್ ಕೆ.ಸಿ. ಸಂಸ್ಥೆಯನ್ನು ಉದ್ಘಾಟಿಸಿದರು. ಅರಂತೋಡು ಸೊಸೈಟಿ ಮಾಜಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ನಿವೃತ್ತ ಪೊಲೀಸ್ ಅಧಿಕಾರಿ ಕುಸುಮಾಧರ ಕುಂಬ್ಲಾಡಿ ಮತ್ತು ಸಂಸ್ಥೆಯ ಮಾಲಕರಾದ ಹರಿಶ್ಚಂದ್ರ ಹೊದ್ದೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ರವರು ಹರಿಶ್ಚಂದ್ರ ಹೊದ್ದೆಟ್ಟಿ ಮತ್ತು ಡಾ. ಸವಿತಾ ಸಿ.ಕೆ.ಯವರನ್ನು ಗೌರವಿಸಿದರು. ಕುಸುಮಾಧರ ಕೆ.ಪಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು ನಿವೃತ್ತ ಶಿಕ್ಷಕ ದಾಮೋದರ ಮಾಸ್ತರ್ ಬೈಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಪುನೀತ್ ರಾಘವೇಂದ್ರ ವಂದಿಸಿದರು. ಇಲ್ಲಿ ಹೆಚ್.ಪಿ.ಕಂಪೆನಿಯ ಪೆಟ್ರೋಲಿಯಂ ಉತ್ಪನ್ನಗಳು ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!