Ad Widget

ಯಾವ ಖಾತೆ ನೀಡಿದರೂ ಸಮರ್ಥವಾಗಿ ನಿರ್ವಹಿಸುವೆ – ಕುಕ್ಕೆ ಕ್ಷೇತ್ರದಲ್ಲಿ ಸ್ವಾಗತ ಸ್ವೀಕರಿಸಿದ ಬಳಿಕ ನೂತನ ಸಚಿವ ಎಸ್.ಅಂಗಾರ ಅಭಿಮತ


ಸುಬ್ರಹ್ಮಣ್ಯ: ಎರಡನೇ ಬಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಪ್ರಥಮವಾಗಿ ಕುಕ್ಕೆಸುಬ್ರಹ್ಮಣ್ಯಕ್ಕೆ ಆಗಮಿಸಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಅಂಗಾರ ಅವರನ್ನು ಕುಕ್ಕೆ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕ್ಷೇತ್ರಕ್ಕೆ ಆಗಮಿಸಿದ ಸಚಿವರು ಆರಂಭದಲ್ಲಿ ಗೋಪುರದ ಬಳಿಯಿಂದಲೇ ಶ್ರೀ ದೇವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ನಂತರ ಶ್ರೀ ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಸಚಿವರಿಗೆ ಹಾರ ಹಾಕಿ ಶಾಲು ಹೊದಿಸಿ ಶ್ರೀ ದೇವರ ಪ್ರಸಾದ  ನೀಡಿದರು.ಬಳಿಕ ಗ್ರಾ.ಪಂ.ಸದಸ್ಯರು ಮತ್ತು  ಮುಖಂಡರು ಸಚಿವರನ್ನು ಅಭಿನಂದಿಸಿದರು.  
ಈ ಸಂದರ್ಭ ಶ್ರೀ ದೇವಳದ ಎಇಒ ಪುಷ್ಪಲತಾ ರಾವ್, ಪ್ರಮುಖರಾದ ಹರೀಶ್ ಕಂಜಿಪಿಲಿ, ದಿನೇಶ್ ಸಂಪ್ಯಾಡಿ, ರಾಜೇಶ್ ಎನ್.ಎಸ್, ಚಿದಾನಂದ ಕಂದಡ್ಕ, ವೆಂಕಟೇಶ್ ಎಚ್.ಎಲ್, ಅಚ್ಚುತ್ತ ಗೌಡ,ವೆಂಕಟೇಶ್ ಎಚ್.ಎಲ್, ಭಾರತಿ ದಿನೇಶ್, ಗಿರಿಧರ್ ಸ್ಕಂಧ, ಶಿವರಾಮ ನೆಕ್ರಾಜೆ, ದಿವ್ಯಾಯಶೋಧಕೃಷ್ಣ ಸೇರಿದಂತೆ ಪ್ರಮುಖರು ಹಾಗೂ  ಶ್ರೀ ದೇವಳದ ಸಿಬ್ಬಂಧಿಗಳು ಉಪಸ್ಥಿತರಿದ್ದರು.
  ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಣೆ: ಸಚಿವ ಎಸ್.ಅಂಗಾರ
 ಪಕ್ಷದ ಮತ್ತು ಸಂಘಟನೆಯ ಹಿರಿಯರು ಎರಡನೇ ಬಾರಿಗೆ ನನಗೆ ಅವಕಾಶ ಮಾಡಿಕೊಟ್ಟಿರುತ್ತಾರೆ.ಅವರು ಕೊಟ್ಟಿರುವ ಗುರುತರ ಜವಾಬ್ದಾರಿಯನ್ನು ಹಿರಿಯರ ಅಪೇಕ್ಷೆಗೆ ತಕ್ಕಂತೆ ನಿರ್ವಹಿಸುತ್ತೇನೆ.ಪ್ರಾಮಾಣಿಕವಾಗಿ ಮತ್ತು ಶಕ್ತಿ ಮೀರಿ ಸೇವೆ ನೆರವೇರಿಸಿ ನನಗೆ ನೀಡಿರುವ ಅವಕಾಶವನ್ನು ಸದುಪಯೋಗಪಡಿಸುತ್ತೇನೆ. ಹಿರಿಯರು ನನ್ನ ಮೇಲೆ ಇರಿಸಿರುವ ವಿಶ್ವಾಸ ಮತ್ತು ಪ್ರೀತಿಗೆ ತಕ್ಕುದಾಗಿ ಕರ್ತವ್ಯ ನಿರ್ವಹಿಸುತ್ತೇನೆ.ಇಡೀ ರಾಜ್ಯದಲ್ಲಿ ನನಗೆ ದೊರಕುವ ಇಲಾಖೆಗೆ ಸಂಬಂಧಿಸಿದ ಮತ್ತು ಪಕ್ಷಕ್ಕೆ ಸಂಬಂಧಿಸಿದ ಕಾರ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತೇನೆ.ರಾಜ್ಯದ ಜನತೆಯ ಅಭಿವೃದ್ಧಿಗೆ ಪೂರಕವಾಗಿ ಶ್ರಮವಹಿಸಿ ದುಡಿಯುತ್ತೇನೆ ಎಂದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!