Ad Widget

ಉಬರಡ್ಕ: ಕುತ್ತಮೊಟ್ಟೆಯಲ್ಲಿ ಬೈ ಹುಲ್ಲು ಸಾಗಾಟದ ಪಿಕಪ್ ಗೆ ಬೆಂಕಿ.

ಉಬರಡ್ಕ: ಉಬರಡ್ಕ ಕುತ್ತಮೊಟ್ಟೆ ಸೂರ್ಯ ಮನೆ ಎಂಬಲ್ಲಿ ಬೈ ಹುಲ್ಲು ಸಾಗಾಟದ ಪಿಕಪ್ ಗೆ ಬೆಂಕಿ ತಗುಲಿದ ಘಟನೆ ಇದೀಗ ವರದಿಯಾಗಿದೆ . ಘಟನೆ ನಡೆದ ಸ್ಥಳಕ್ಕೆ ಇದೀಗ ಅಗ್ನಿಶಾಮಕ ದಳವು ತೆರಳಿದ್ದು ಪಿಕಪ್ ಗೆ ಹೊತ್ತಿದ ಬೆಂಕಿಯನ್ನು ನಂದಿಸಲಾಗಿದೆ , ಯಾವ ರೀತಿಯಲ್ಲಿ ಬೆಂಕಿ ಹೊತ್ತಿಕೊಂಡಿತು ಎಂಬುವುದರ ಮಾಹಿತಿ ಇನ್ನಷ್ಟೆ ಬರಬೇಕಿದ್ದು ಈ ಕುರಿತ...

ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂಪನ್ನವೈಭವದಿಂದ ಜರುಗಿದ ಮಹಾವಿಷ್ಣುಮೂರ್ತಿ ದೈವದ ನಡಾವಳಿ.

ಸುಳ್ಯ: ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶನಿವಾರ ನಡೆದ ವೈಭವದ ಮಹಾವಿಷ್ಣುಮೂರ್ತಿ ದೈವದ ನಡಾವಳಿಯೊಂದಿಗೆ ಮೂರು ದಿನಗಳ ಜಾತ್ರೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು. ಜಾತ್ರೋತ್ಸವದ ಕೊನೆಯ ದಿನವಾದ ಶನಿವಾರ ದೇಗುಲದ ಬಡಗು ದಿಕ್ಕಿನಲ್ಲಿರುವ ವಿಷ್ಣುಮೂರ್ತಿ ದೈವದ ಕಟ್ಟೆಯ ಸನಿಹ ಶ್ರೀ ವಿಷ್ಣುಮೂರ್ತಿ ದೈವದ ನಡಾವಳಿ ನಡೆಯಿತು. ಈ ವೇಳೆ ಅಸಂಖ್ಯಾತ ಭಕ್ತಾದಿಗಳು ಹಾಜರಿದ್ದು ದೈವದ ಪ್ರಸಾದ ಸ್ವೀಕರಿಸಿದರು....
Ad Widget

ಎನ್ನೆಂಸಿ; ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿಜ್ಞಾನ ಉತ್ಸವದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ.

ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಜೀವ ವಿಜ್ಞಾನ ಪದವಿ ವಿಭಾಗದ ವಿದ್ಯಾರ್ಥಿಗಳು ಮೇ 03 ಶುಕ್ರವಾರದಂದು ಮಂಗಳೂರು ವಿಶ್ವವಿದ್ಯಾನಿಲಯದ ಜೀವ ರಸಾಯನ ಶಾಸ್ತ್ರ ಸ್ನಾತಕೋತ್ತರ ವಿಭಾಗ ಆಯೋಜಿಸಿದ "ವರ್ಟೆಕ್ಸ್ 6.0" ರಾಷ್ಟ್ರ ಮಟ್ಟದ ಅಂತರ ಕಾಲೇಜು ವಿಜ್ಞಾನ ಉತ್ಸವದಲ್ಲಿ ಭಾಗವಹಿಸಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರು. ಕಾಲೇಜಿನ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ರಸಾಯನ ಶಾಸ್ತ್ರ...

ಸಂಪಾಜೆ – ಕಲ್ಲುಗುಂಡಿ ಗಾಳಿ ಮಳೆಗೆ  ವಿವಿಧೆಡೆ ಹಾನಿ

ನಿನ್ನೆ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗುರುಳಿದ ಘಟನೆ ಸಂಪಾಜೆ - ಕಲ್ಲುಗುಂಡಿ ಸೇರಿದಂತೆ ವಿವಿಧೆಡೆಗಳಲ್ಲಿ ಹಾನಿ ಸಂಭವಿಸಿದೆ.ಚಟ್ಟೆಕಲ್ಲು ಎಂಬಲ್ಲಿ ಹಸೈನಾರ್ ಎಂಬವರ ರಬ್ಬರ್ ಶೀಟ್ ಶೇಖರಣಾ ಘಟಕಕ್ಕೆ ಮರಬಿದ್ದು, ಹಾನಿಯಾಗಿದೆ.ದಂಡಕಜೆ ಹಾಗೂ ಚಟ್ಟೆಕಲ್ಲು ಬಳಿ ಮಳೆ ನೀರು ರಸ್ತೆಗೆ ಹರಿದು ಹೂಳು ತುಂಬಿಕೊಂಡ ಘಟನೆಯೂ ನಡೆದಿದೆ. ಅಲ್ಲದೆ...

ನಿರಂತರವಾಗಿ ಮಾಧ್ಯಮಗಳ ವರದಿ ಬಳಿಕ ಎಚ್ಚೆತ್ತ ನಗರ ಪಂಚಾಯತ್. ಕಟ್ಟೆ ಬಳಿಯಲ್ಲಿ ಕಾಮಗಾರಿ ಆರಂಭ.

ಸುಳ್ಯ: ಸುಳ್ಯ ನಗರದ ಹೆಬ್ಬಾಗಿಲು ಸುಳ್ಯ ಮಾಣಿ ಮೈಸೂರು ರಸ್ತೆಯ ಚೆನ್ನಕೇಶವ ದೇವರು ರಥಬೀದಿಗೆ ಆಗಮಿಸಿದ ಸಂದರ್ಭದಲ್ಲಿ ಕುಳಿತುಕೊಳ್ಳುವ ಕಟ್ಟೆಯ ಬಳಿಯಲ್ಲಿ ನಿರಂತರವಾಗಿ ನೀರು ಹೊರ ಬರುತ್ತಿದ್ದು ವಾಹನ ಸವಾರರಿಗೆ ಕಿರಿ ಉಂಟಾಗುತ್ತಿತ್ತು ಇದನ್ನು ಸುಳ್ಯ ಸೇರಿದಂತೆ ರಾಜ್ಯದ ಎಲ್ಲಾ ಮಾಧ್ಯಮಗಳು ವರದಿ ಮಾಡಿದ್ದು ಇದೀಗ ಎಲ್ಲಾ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೆ ತುರ್ತಾಗಿ ಕಾಮಗಾರಿ...

ಉಬರಡ್ಕ : ಸಹಕಾರಿ ಸಂಘದ ನೂತನ ಸಿರಿ ಸಹಕಾರ ಸೌಧ ಲೋಕಾರ್ಪಣೆ

ಉಬರಡ್ಕ ಮಿತ್ತೂರು ಪ್ರಾ.ಕೃ. ಪ.ಸ.ಸಂಘದ ನೂತನ ಕಟ್ಟಡ ಸಿರಿ ಸಹಕಾರ ಸೌಧ ಇಂದು ಲೋಕಾರ್ಪಣೆಗೊಂಡಿತು. ಶಾಸಕಿ ಭಾಗೀರಥಿ ಮುರುಳ್ಯ ಲೋಕಾರ್ಪಣೆಗೊಳಿಸಿದರು. ಗೋದಾಮು ಕಟ್ಟಡವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಭದ್ರತಾ ಕೊಠಡಿಯನ್ನು ಮಾಜಿ ಸಚಿವ ಎಸ್.ಅಂಗಾರ  ಉದ್ಘಾಟಿಸಿದರು.ಕಾರ್ಯಕ್ರಮವನ್ನು ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ವಹಿಸಿದ್ದರು. ಈ ಸಂದರ್ಭದಲ್ಲಿ  ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ...

ಸುಳ್ಯದ ಶ್ರೀ ರಾಮ ವೆಜೀಟೇಬಲ್ಸ್ ಮುಂಭಾಗ ಕಾರು-ರಿಕ್ಷಾ-ಬೈಕ್ ನಡುವೆ ಪರಸ್ಪರ ಡಿಕ್ಕಿ, ಬೈಕ್ ಸವಾರನ ಕಾಲಿಗೆ ಗಾಯ

ಸುಳ್ಯ: ಶ್ರೀರಾಮ ವೆಜಿಟೇಬಲ್ಸ್ ಮುಂಭಾಗದಲ್ಲಿ  ಕಾರು ರಿಕ್ಷಾ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರನ ಕಾಲಿನ ಬೆರಳುಗಳಿಗೆ ಗಾಯಗಳಾದ ಘಟನೆ ವರದಿಯಾಗಿದೆ.ಕಲ್ಲುಮುಟ್ಟು ನಿವಾಸಿ ದಿಲೀಪ್ ಎಂಬಾತ ಸುಳ್ಯ ಕಡೆಗೆ ಬರುತ್ತಿದ್ದ ಸಂದರ್ಭ ವಿರುದ್ಧ ದಿಕ್ಕಿನಿಂದ ಬಂದ ಕಾರು ಮತ್ತು ರಿಕ್ಷಾ ಪರಸ್ಪರ ಡಿಕ್ಕಿ ಹೊಡೆಯಿತು.ಪರಿಣಾಮ ಬೈಕ್‌ ಸವಾರನ ಕಾಲಿನ ಮೂರು ಬೆರಳುಗಳು ತುಂಡಾಗಿದ್ದುಗಾಯಾಳುವನ್ನು...

ಸುಳ್ಯಕ್ಕೆ  ಗಗನ ಕುಸುಮವಾಗಲಿದೆಯಾ 110 ಕೆ.ವಿ – 2025 ನವೆಂಬರ್‌ಗೆ ಪೂರ್ಣಗೊಳ್ಳುವುದೇ ಕಾಮಗಾರಿ ?

ಸುಳ್ಯ: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 110 ಕೆ.ವಿ  ಕಾಮಗಾರಿ ಆರಂಭಗೊAಡಿದ್ದು ಇದೀಗ ಮತ್ತೆ ಅಡೆ ತಡೆಗಳು ವಿಘ್ನಗಳು ಎದುರಾಗಿವೆ.ಸುಳ್ಯದ 110 ಕೆ.ವಿ.ಯು ಕೆ.ಪಿ.ಟಿ.ಸಿ.ಎಲ್. ಮೂಲಕ  ಕೆಲಸ ಪ್ರಾರಂಭಿಸಿ ಈ ಯೋಜನೆಗೆ  ವಿದ್ಯುತ್ ತಂತಿಗಳು ಹಾದು ಹೋಗಲು ಸುಮಾರು 89 ಟವರುಗಳ ನಿರ್ಮಾಣವಾಗಬೇಕಿದೆ. ಆದರೆ ಇದೀಗ  87ಟವರ್‌ಗಳ ನಿರ್ಮಾಣಕ್ಕೆ ತೆರಳಿದಾಗ ಅಡೆತಡೆಗಳು ಉಂಟಾಗಿದ್ದು ಕೇವಲ 2ಟವರ್‌ಗಳ...

ಗುತ್ತಿಗಾರು : ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ

ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಗುತ್ತಿಗಾರು ಗ್ರಾಮ ಪಂಚಾಯತ್, ಅರಿವು ಕೇಂದ್ರ, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಇವುಗಳ ಆಶ್ರಯದಲ್ಲಿ ಮೇ.02 ರಿಂದ 16 ರವರೆಗೆ...

ಗುತ್ತಿಗಾರು: ಕಿರಣ ರಂಗ ಅಧ್ಯಯನ ಸಂಸ್ಥೆಯಿಂದ ಮಣಿಯಾನ ಪುರುಷೋತ್ತಮ ರವರಿಗೆ ಗೌರವ     

  ನಿವೃತ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿರುವ ಮಣಿಯಾನ ಪುರುಷೋತ್ತಮ ರವರನ್ನು ಗುತ್ತಿಗಾರಿನ ಕಿರಣ ರಂಗ ಅಧ್ಯಯನ ಸಂಸ್ಥೆಯಿಂದ ಮೇ 2ರಂದು ಸನ್ಮಾನಿಸಿ ಗೌರವಿಸಲಾಯಿತು.                        ಗುತ್ತಿಗಾರಿನಲ್ಲಿ ನಡೆಯುತ್ತಿರುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿರುವ ಧನಪತಿಯವರು ಗೌರವಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರಾ ಮೂಕಮಲೆ ಅಧ್ಯಕ್ಷತೆ ವಹಿಸಿದರು                  ಕಿರಣ ಸಂಸ್ಥೆ ಅಧ್ಯಕ್ಷ ಯೋಗೀಶ ಹೊಸೋಳಿಕೆ...
Loading posts...

All posts loaded

No more posts

error: Content is protected !!