Ad Widget

ಗುತ್ತಿಗಾರು :- ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗೆ ಕೆ.ಪಿ.ಸಿ.ಸಿ ಸದಸ್ಯ ನಂದಕುಮಾರ್ ಅವರಿಂದ ದೇಣಿಗೆ ಹಸ್ತಾಂತರ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗೆ ಜು.12 ರಂದು ಮಡಿಕೇರಿ ನಗರ ಸಭಾ ಮಾಜಿ ಅಧ್ಯಕ್ಷರು ಹಾಗೂ ಕೆ.ಪಿ.ಸಿ.ಸಿ ಸದಸ್ಯರಾದ ನಂದಕುಮಾರ್ ಅವರು ದೇಣಿಗೆಯನ್ನು ಹಸ್ತಾಂತರ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಅಂಬುಲೆನ್ಸ್ ಸೇವೆ ಮತ್ತು ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಇತರೆ ಕಾರ್ಯಕ್ರಮಗಳು ಹಾಗೂ ಮುಂದೆ ನಡೆಯಲಿರುವ ಕಾರ್ಯಕ್ರಮಗಳ ಬಗ್ಗೆ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ ಜಯರಾಮ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಭರತ್ ಮುಂಡೋಡಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪಿ.ಎಸ್ ಗಂಗಾಧರ್, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸನತ್ ಮುಳುಗಾಡು, ಬಿ.ಯಂ.ಎಸ್ ರಿಕ್ಷಾ ಯೂನಿಯನ್ ಅಧ್ಯಕ್ಷ ಧರ್ಮಪಾಲ ಪಂಜಿಪಳ್ಳ, ನಾಗೇಶ್ ಪಾರೆಪ್ಪಾಡಿ, ದಾಮೋದರ ದೇವರಗುಂಡ, ಪರಮೇಶ್ವರ ಚಣಿಲ, ವೆಂಕಟ್ ಪೆರ್ನಾಜೆ, ನವೀನ್ ಕಾಯರ, ಬಾಲಕೃಷ್ಣ ಸ್ಟುಡಿಯೋ, ಹರಿಪ್ರಸಾದ್ ಕಡವೆಪಳ್ಳ, ರವಿ ಪೈಕ, ಚಿದಾನಂದ ಕಮಿಲ, ರಂಜಿತ್ ಪೈಕ, ಸುನೀಲ್ ಅಮೆ ಮನೆ, ಪರಮೇಶ್ವರ ಕೆಂಬಾರೆ, ಕೃಷ್ಣ ಗುತ್ತಿಗಾರು, ಗಂಗಾಧರ ಅಡ್ಡನಪಾರೆ, ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರಶೇಖರ ಕಡೋಡಿ, ಸದಸ್ಯರಾದ ಮೋಹನ್ ದಾಸ್ ಶಿರಾಜೆ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!