Ad Widget

ಪಾಲಡ್ಕ : ಬಸ್ ಬೈಕ್ ಅಪಘಾತ – ಗಂಭೀರ ಗಾಯಗೊಂಡಿದ್ದ ಶಿಕ್ಷಕ ಮೃತ್ಯು

ಸುಳ್ಯ : ಪೆರಾಜೆ ಬಳಿಯ ಪಾಲಡ್ಕ ಎಂಬಲ್ಲಿ ಗೂನಡ್ಕ ಮಾರುತಿ ಶಾಲಾ ಶಿಕ್ಷಕರಾದ ಪದ್ಮನಾಭ ಕಿರ್ಲಾಯ ಎಂಬುವವರು ಖಾಸಗಿ ಬಸ್ ನ ಹಿಂಬದಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು.‌ ಆದರೆ ಇದೀಗ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅರಂತೋಡು ಗ್ರಾಮದ ಕಿರ್ಲಾಯದವರಾಗಿದ್ದು ಪ್ರಸ್ತುತ ಮೇನಾಲದಲ್ಲಿ ಜಾಗ ಖರೀದಿಸಿ ನೆಲೆಸಿದ್ದರು. ಈ ಹಿಂದೆ ಕೆ.ವಿ.ಜಿ ಹೈಸ್ಕೂಲ್ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಸಿ.ಎ.ಬ್ಯಾಂಕ್ ಸುಳ್ಯದ ಉದ್ಯೋಗಿ ಚಂದ್ರಿಕಾ ಹಾಗೂ ಓರ್ವ ಪುತ್ರಿ ಕು. ಮನ್ವಿತಾ ಅವರನ್ನು ಅಗಲಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!