Ad Widget

ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವರ ದರ್ಶನ ಬಲಿ – ಕಣ್ತುಂಬಿಕೊಂಡ ಭಕ್ತರು

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದಲ್ಲಿ ಕಾಲವಧಿ ಉತ್ಸವವು ಡಿ.15 ರಂದು ತಂತ್ರಿವರ್ಯರ ಆಗಮನದೊಂದಿಗೆ ಆರಂಭಗೊಂಡು, ರಾತ್ರಿ ಶುದ್ಧಿ ಕಲಶ. ಡಿ. 16 ರಂದು ಶ್ರೀ ಗಣಪತಿ ಹವನ, ಉಗ್ರಾಣ ತುಂಬಿಸುವುದು, ಬಿಂಬ ಶುದ್ಧಿ, ಕಲಶ ಪೂಜೆ, ಕಲಶಾಭಿಷೇಕ ನಾಗ ದೇವರಿಗೆ ಮತ್ತು ರಕ್ತೇಶ್ವರಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಸಂಜೆ ಭಜನಾ ಕಾರ್ಯಕ್ರಮ,ರಾತ್ರಿ ಜಾದೂ ಪ್ರದರ್ಶನ, ರಾತ್ರಿ 8 ರಿಂದ ಶ್ರೀ ದೇವರ ಭೂತಬಲಿ, ನೃತ್ಯೋತ್ಸವ, ಪ್ರಸಾದ ವಿತರಣೆ ನಡೆಯಿತು.
ಡಿ.17 ರಂದು ಶ್ರೀ ಗಣಪತಿ ಹವನ, ನವಕ ಕಳಶಾಭಿಷೇಕ, ಪೂರ್ವಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಬಳಿಕ ಧಾರ್ಮಿಕ ಸಭೆ ನಡೆಯಿತು
ಅಡ್ಪಂಗಾಯ ಶ್ರೀ ದುರ್ಗಾಪರಮೇಶ್ವರಿ ಭಂಡಾರದ ವತಿಯಿಂದ ಧನು ಪೂಜೆ ನಡೆದು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಶ್ರೀ ವಿಷ್ಣುಮೂರ್ತಿ ದೈವಕ್ಕೆ ಕೂಡುವುದು ( ತೊಡಙಲ್) ಡಿ. 18 ರಂದು ಬೆಳಗ್ಗೆ ವಿಷ್ಣುಮೂರ್ತಿ ದೈವ ನಡಾವಳಿ, ಪ್ರಸಾದ ವಿತರಣೆ ಜರಗುವುದು. ಡಿ. 19 ರಂದು ಮಲೆದೈವಗಳಿಗೆ ಅಗೆಲು ಸೇವೆ ( ಮಂಜ ) ನಡೆಯಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!