ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯಕ್ಕೆ ಶೇ. 100 ಫಲಿತಾಂಶ ಬಂದಿದ್ದು, ಮಹತಿ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದು, ದ.ಕ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದ್ದಾರೆ. ಇವರು ಬಳ್ಪ ಗ್ರಾಮದ ಎಡೋಣಿ ವಿಶ್ವೇಶ್ವರ ಬಿ ಹಾಗೂ ಪುಷ್ಪವತಿ ಯು ದಂಪತಿಗಳ ಪುತ್ರಿ. ಸಮಾಜ ವಿಜ್ಞಾನ, ಇಂಗ್ಲೀಷ್, ಗಣಿತ, ಸಂಸ್ಕ್ರತ ವಿಷಯದಲ್ಲಿ 100 ಅಂಕ, ಕನ್ನಡದಲ್ಲಿ 125 ವಿಜ್ಞಾನದಲ್ಲಿ 98 ಅಂಕ ಪಡೆದಿದ್ದಾರೆ. ಇದೇ ಶಾಲೆಯ ಅಭಿಜ್ಞಾ ಅವರು 622 ಅಂಕ ಪಡೆದು ದ.ಕ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
- Thursday
- May 16th, 2024