ಪ್ರಸಿದ್ಧ ಕ್ಷೇತ್ರವಾಗಿರುವ ಕಾಸರಗೋಡು ಕುಂಬಳೆ ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಮಾ1 ರಿಂದ ಕಳಿಯಾಟ ಮಹೋತ್ಸವ ಆರಂಭಗೊಂಡಿದ್ದು ಮಾ.7 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಸುಳ್ಯದಿಂದ ಇಂದು ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣೆ ನಡೆಯಲಿದ್ದು ಮೆರವಣಿಗೆ ಮುಖಾಂತರ ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ , ಕಿರಣ್ ಬಿಳಿಯಾರು , ಬಾಲಚಂದ್ರ ಅಡ್ಕಾರ್ , ಪ್ರದೀಪ್ ಪೆರಾಜೆ , ಶಂಕರ ಮಾಸ್ತರ್ , ಪ್ರೀತಂ ಬೆಂಗಳೂರು , ಸುರೇಶ್ ಕರ್ಲಪ್ಪಾಡಿ , ವಿಜಯ ಎರ್ಮೆಟ್ಟಿ , ಚಂದ್ರಶೇಖರ ಪನ್ನೆ ಸೇರಿದಂತೆ ಪ್ರಮುಖರು ಮತ್ತು ಸಂಘದ ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.
ನೇರ ಪ್ರಸಾರ : ಕಳಿಯಾಟ ಮಹೋತ್ಸವದ ಪ್ರತಿದಿನದ ನೇರ ಪ್ರಸಾರ ಅಮರ ಸುದ್ದಿ ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಬಹುದು.