Ad Widget

ದೇವಚಳ್ಳ ಗ್ರಾ.ಪಂ.ಅಧ್ಯಕ್ಷರಾಗಿ ಆಯ್ಕೆಯಾದ ಶೈಲೇಶ್ ಅಂಬೆಕಲ್ಲು ಅವರಿಗೆ ಯುವಜನ ಸಂಯುಕ್ತ ಮಂಡಳಿ ವತಿಯಿಂದ ಸನ್ಮಾನ ಕಾರ್ಯಕ್ರಮ

ಸುಳ್ಯ : ಯುವಜನ ಸಂಯುಕ್ತ ಮಂಡಳಿ ವತಿಯಿಂದ ಪೂರ್ವಾಧ್ಯಕ್ಷ ಶೈಲೇಶ್ ಅಂಬೆಕಲ್ಲು ಅವರಿಗೆ ಸನ್ಮಾನ ಕಾರ್ಯಕ್ರಮ ನ.4 ರಂದು ಮಂಡಳಿಯ ಸಭಾಭವನದಲ್ಲಿ ನಡೆಯಲಿದೆ.

ದ.ಕ. ಜಿಲ್ಲೆಯ ಯುವಜನ ಒಕ್ಕೂಟದ ಸ್ಥಾಪಕಾಧ್ಯಕ್ಷರಾಗಿದ್ದು, 25 ವರ್ಷಗಳಿಂದ ಯುವಜನ ಕ್ಷೇತ್ರದಲ್ಲಿ ಪಾರದರ್ಶಕವಾಗಿ ಸೇವೆ ಸಲ್ಲಿಸಿರುವ ಶೈಲೇಶ್ ಅಂಬೆಕಲ್ಲುರವರು ಇದೀಗ
ದೇವಚಳ್ಳ ಗ್ರಾಮ ಪಂಚಾಯತ್‌ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅಭಿನಂದನಾ ಕಾರ್ಯಕ್ರಮ ನ. 04 ರಂದು ಶನಿವಾರ ಅಪರಾಹ್ನ 12.00 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು.ಸಂ.ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ಎ. ಎಂ. ವಹಿಸಲಿದ್ದಾರೆ. ಯು.ಸಂ.ಮಂಡಳಿಯ ಪೂರ್ವಾಧ್ಯಕ್ಷ ಹಮೀದ್ ಇಡ್ನೂರು ಅಭಿನಂದಿಸಲಿದ್ದಾರೆ. ಯು.ಸಂ.ಮಂಡಳಿಯ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಅಭಿನಂದನಾ ಮಾತುಗಳನ್ನಾಡಲಿದ್ದಾರೆ.

ಗೌರವ ಉಪಸ್ಥಿತರಾಗಿ ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಪೂರ್ವಾಧ್ಯಕ್ಷರಾದ ಮನಮೋಹನ ಪುತ್ತಿಲ, ಪಿ.ಎಸ್. ಗಂಗಾಧರ, ಕೆ.ಟಿ. ವಿಶ್ವನಾಥ ಆಗಮಿಸಲಿದ್ದಾರೆ ಎಂದು ಯುವಜನ ಸಂಯುಕ್ತ ಮಂಡಳಿಯ ಕಾರ್ಯದರ್ಶಿ ಗುರುರಾಜ್ ಅಜ್ಜಾವರ ಹಾಗೂ ಖಜಾಂಜಿ ದಯಾನಂದ ಪಾತಿಕಲ್ಲು ತಿಳಿಸಿದ್ದಾರೆ.

ಶೈಲೇಶ್ ಅಂಬೆಕಲ್ಲು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!