Ad Widget

ಕನಸಿಗೊಂದಿಷ್ಟು ಬಣ್ಣ ಕವನ ಸಂಕಲನ ಬಿಡುಗಡೆ

ಕನಸಿಗೊಂದಿಷ್ಟು ಬಣ್ಣ ಕವನ ಸಂಕಲನ ಬಿಡುಗಡೆ ಜೂ.10 ರಂದು ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆಯಿತು. ಕವನ ಸಂಕಲನವನ್ನು ಕವಿ ನಾರಾಯಣ ನೀರಬಿದಿರೆ ಬಿಡುಗಡೆಗೊಳಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ.ಆರ್. ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಬ್ಬಾರ್ ಸಂಪಾಜೆ ಅವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕ ರಾದ ಪುಷ್ಪರಾಜ್ ಸ್ವಾಗತಿಸಿ, ಡಾ. ರಾಶಿ ಎಂ ಆರ್ ವಂದಿಸಿದರು. ರಾಮಕೃಷ್ಣ ಕೆ. ಎಸ್ ಕಾರ್ಯಕ್ರಮ ನಿರೂಪಿಸಿದರು.

ಈ ಕವನ ಸಂಕಲನದಲ್ಲಿ ಸಿಂಚನ ಎಂ., ಪ್ರಜ್ಞಾ ಸಿ.ಎಂ., ಧನುಶ್ ಕೆ., ಶ್ರೀನಿಧಿ ಕೆ.ಎಸ್., ಪಲ್ಲವಿ ಕೆ., ಪ್ರಜ್ವಲ್ ಎಸ್.ಪಿ., ಸಚಿನ್ ಎಸ್.ಎಸ್., ಜಯಶ್ರೀ ಎಂ.ಎಚ್., ಸಂಧ್ಯಾ ಬಿ.ರಾವ್, ಕಿಶೋರ್ ಕುಮಾರ್ ಬಿ.ಸಿ., ಹರ್ಷಿತ್ ಅರ್ಭಡ್ಕ, ನಿತಿನ್ ಎಂ.ಜಿ., ಹೇಮಂತ್ ದೊಡ್ಡೇರಿ, ವಿಜೇತ್ ಸುವರ್ಣ ಕೆ.ವಿ. ಅವರು ಕವನ ಬರೆದಿದ್ದಾರೆ. ಸಹಾಯಕ ಪ್ರಾಧ್ಯಾಪಕ ಪುಷ್ಪರಾಜ್ ಕೆ. ಮಾರ್ಗದರ್ಶನ ಮಾಡಿರುತ್ತಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!