Ad Widget

ಬಾಲಕನ ಚಿಕಿತ್ಸೆಗೆ ನೆರವಾಗುವಿರಾ

ಸುಳ್ಯ ಕಾಂತಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಗಣೇಶ ಮತ್ತು ಜ್ಯೋತಿ ದಂಪತಿಗಳ ಎರಡನೇ ಪುತ್ರನಾಗಿರುವ ತಶ್ವಿತ್ ಎಂಬ ೧೧ ವರ್ಷದ ಬಾಲಕ ಎಲ್ಲಾ ಮಕ್ಕಳಂತೆ ಒಡಾಡಿಕೊಂಡು ಆರೋಗ್ಯವಾಗಿದ್ದ ಹುಡುಗ. ಸುಳ್ಯದ ರೋಟರಿ ಪ್ರಾಥಮಿಕ ಶಾಲೆಯಲ್ಲಿ 6 ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಹುಷಾರಾಗಿದ್ದ ಬಾಲಕ ಕಳೆದ 2 ತಿಂಗಳ ಹಿಂದೆ ಹಠಾತ್ ಆಗಿ ಆರೋಗ್ಯ ಕಳೆದು ಮಲಗಿದಲ್ಲೆ ಇರುವಂತಾಗಿದೆ. ಹಲವು ಕಡೆ ಚಿಕಿತ್ಸೆ ನೀಡಿದ್ದರೂ ಯಾವುದೇ ಪಲಕಾರಿಯಾಗಿಲ್ಲ. ಇದೀಗ ವೈದ್ಯರು ಬಯಾಪ್ಸಿ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆ ಕರೆದೊಯ್ಯಬೇಕು ಎಂದು ಸಲಹೆ ಮಾಡಿದ್ದಾರೆ. 8 ರಿಂದ 10 ಲಕ್ಷ ಖರ್ಚು ತಗಲಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇಷ್ಟೆಲ್ಲಾ ಕರ್ಚು ಭರಿಸಲು ಕುಟುಂಬ ಬಡತನದಿಂದಿದ್ದಾರೆ. ಗಣೇಶ ಸುಳ್ಯ ಕೆವಿಜಿ ಸೂಪರ್ ಮಾರ್ಕೇಟ್ ನಲ್ಲಿ ಸೇಲ್ಸ್ ಮ್ಯಾನ್ ಕೆಲಸ ಮಾಡುತ್ತಿದ್ದು, ಅವರ ಪತ್ನಿ ಕೂಡ ವೆರಿಕೋಸ್ ಕಾಯಿಲೆಯಿಂದ ಬಳಲುತ್ತಿದ್ದು ಮನೆ ಬಾಡಿಗೆ, ಖರ್ಚು ವೆಚ್ಚ ಸರಿತೂಗಿಸುವದರಲ್ಲೆ ಅವರ ಗಳಿಕೆ ಸಾಲುತ್ತದೆ. ಹೀಗಾಗಿ ಬಾಲಕನ ಚಿಕಿತ್ಸೆಗೆ ಸಹೃದಯಿಗಳ ಸಹಾಯ ನಿರೀಕ್ಷೆಯಲ್ಲಿದ್ದಾರೆ.

ಸಹಾಯ ಮಾಡಲಿಚ್ಚಿಸುವವರು, ಗಣೇಶ್: 8951527688
Gpay : 9740953575
ಬ್ಯಾಂಕ್ ಕೆನರಾ ಬ್ಯಾಂಕ್ ಸುಳ್ಯ ಖಾತೆ
05212200031739
CNRB0008518
ಅವರ ಖಾತೆಗೆ ಹಣ ಸಂದಾಯ ಮಾಡುವುದರ ಮೂಲಕ ನೆರವಾಗೋಣ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!