ಮಾನವೀಯತೆ ಮೆರೆದ ಶಿವ ಹಾಲಿಡೇಸ್ ಹಾಗೂ ಶ್ರೀ ದುರ್ಗಾ ಕಾರ್ ವಾಷ್ ಸಿಬ್ಬಂದಿ

ವಾಹನದಲ್ಲಿ ಸಿಕ್ಕಿದ  ರೂ‌. 12,000 ನಗದು ಹಾಗೂ ಅಮೂಲ್ಯ ದಾಖಲಾತಿಗಳನ್ನು ಪ್ರಾಮಾಣಿಕವಾಗಿ ಮರಳಿಸುವ ಮೂಲಕ ಸುಳ್ಯದ ಶಿವ ಹಾಲಿಡೇಸ್ ಹಾಗೂ ಶ್ರೀ ದುರ್ಗಾ ಕಾರ್ ವಾಷ್ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ. ಜು.20ರಂದು ತಿರುಪತಿ ದರ್ಶನ ಮುಗಿಸಿ ಹಿಂದಿರುಗಿದ ಶಿವ ಹಾಲಿಡೇಸ್‌ನ ವಾಹನವನ್ನು ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶ್ರೀ ದುರ್ಗಾ ಕಾರ್ ವಾಷ್‌ನಲ್ಲಿ ಸ್ವಚ್ಛಗೊಳಿಸಲು...

ಪೂಜಾ ಬೋರ್ಕರ್ ಗೆ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸನ್ನಿಧಾನ ಅಡ್ಪಂಗಾಯ ಇವರ ವತಿಯಿಂದ ಸನ್ಮಾನ

ಸುಳ್ಯ ಕಸಬಾ ಬೆಟ್ಟಂಪಾಡಿ ನಿವಾಸಿ ಚಿತ್ರಕಲಾವಿದೆ ಪೂಜಾ ಬೋರ್ಕರ್ ರವರಿಗೆ ಜು. 19ರಂದು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸನ್ನಿಧಾನ ಅಡ್ಪಂಗಾಯದಲ್ಲಿ ಶ್ರೀ ಶಿವಪ್ರಕಾಶ್ ಗುರುಸ್ವಾಮಿ ಯವರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಈಗಾಗಲೇ "IBR Achiever" ಪಟ್ಟಿಯನ್ನು ಹಾಗೂ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆಯನ್ನು ನಿರ್ಮಿಸಿರುವ ಇವರು ಬೆಟ್ಟಂಪಾಡಿ ದಿ| ರಮೇಶ್...
Ad Widget

ಬೆಳ್ಳಾರೆ : ಕಾಂಗ್ರೆಸ್ ಗ್ರಾಮ ಸಮಿತಿ ಪೂರ್ವ ಭಾವಿ ಸಭೆ

ಬೆಳ್ಳಾರೆ ಗ್ರಾಮ ಸಮಿತಿಯ ಪೂರ್ವ ಭಾವಿ ಸಭೆಯು ಬೆಳ್ಳಾರೆ ಗ್ರಾ.ಪಂ ಮಾಜಿ ಅಧ್ಯಕ್ಷ ಎನ್.ಎಸ್.ಡಿ ವಿಠಲ್ ದಾಸ್‌ ರವರ ಸ್ವಗೃಹದ ಆವರಣದಲ್ಲಿ ಜು 18ರಂದು ನಡೆಯಿತು. ಈ ಸಭೆಯಲ್ಲಿ ಮುಖ್ಯವಾಗಿ ಎಸ್.ಐ.ಆರ್ ಮತ್ತು ಮುಂದಿನ ಗ್ರಾಮ ಪಂಚಾಯತ್ ಚುನಾವಣೆ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಎಸ್.ಐ.ಆರ್ ಬಗ್ಗೆ ನಡೆಯುತ್ತಿರುವ ಬೆಳವಣಿಗೆ ಮತ್ತು ಆಗುತ್ತಿರುವ ಲೋಪ ದೋಷಗಳ ಬಗ್ಗೆಯೂ...

ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಹಾಗೂ ಕುಮಾರಸ್ವಾಮಿ ವಿದ್ಯಾಲಯದ ಸಹಯೋಗದಲ್ಲಿ ಸಾಮಾನ್ಯ ಜ್ಞಾನ ಪರೀಕ್ಷೆ ಯಶಸ್ವಿ

ಸುಬ್ರಹ್ಮಣ್ಯ, ಜುಲೈ 19 : ಪೊಲೀಸ್ ಇಲಾಖೆಗೆ ಸೇರಲು ಆಸಕ್ತಿ ಹೊಂದಿರುವ ಯುವಜನರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಹಾಗೂ ಕುಮಾರಸ್ವಾಮಿ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಲಾದ ಸಾಮಾನ್ಯ ಜ್ಞಾನ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಉದ್ಘಾಟಿಸಿ ಮಾತನಾಡಿ, “ಪೊಲೀಸ್...

ಇಂದಿನ(ಜುಲೈ 20) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 20 ಜುಲೈ 2026ವಾರ : ಸೋಮವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜುಲೈ 20) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...

ನೀಟ್ ಪರೀಕ್ಷಾ ಅಕ್ರಮ ಮತ್ತು ರಾಮ ಮಂದಿರ ಕಾಣಿಕೆ ಹಣ ದುರ್ಬಳಕೆ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹ: ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ

ಸುಳ್ಯ: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳು ಹಾಗೂ ಅಯೋಧ್ಯೆ ಶ್ರೀರಾಮ ಮಂದಿರದ ಕಾಣಿಕೆ ಹುಂಡಿ ಹಣ ದುರ್ಬಳಕೆ ಪ್ರಕರಣಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಭವಿಷ್ಯ ಮತ್ತು ದೇಶದ ಜನರ ಧಾರ್ಮಿಕ ನಂಬಿಕೆಗಳೊಂದಿಗೆ ಚೆಲ್ಲಾಟ ನಡೆಸುವುದನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿದೆ. ಜು.17ರಂದು ಸುಳ್ಯದ ಪತ್ರಿಕಾಭವನದಲ್ಲಿ ನಡೆದ...

ಮರ್ಕಂಜದಲ್ಲಿ ರೋಟರಿ ಪಿಯುಸಿ ಕಾಲೇಜಿನ ವಿದ್ಯಾರ್ಥಿಗಳಿಗೆ 7ನೇ ವರ್ಷದ ‘ಕಂಡಡೂಂಜಿ ದಿನ’ ಆಚರಣೆ

ಸುಳ್ಯ, ಜುಲೈ 19: ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು, ಸುಳ್ಯ, ಅಮರ ಸಂಘಟನಾ ಸಮಿತಿ (ರಿ) ಸುಳ್ಯ ಹಾಗೂ ನಾಗ ಸಾನಿಧ್ಯ–ಗುಳಿಗ ಸಾನಿಧ್ಯ, ಪನಿವಾರ ಮರ್ಕಂಜ ಇವರ ಸಂಯುಕ್ತ ಆಶ್ರಯದಲ್ಲಿ 7ನೇ ವರ್ಷದ 'ಕಂಡಡೂಂಜಿ ದಿನ' ಕಾರ್ಯಕ್ರಮವನ್ನು ಜು. 19ರಂದು ಮರ್ಕಂಜದ ಪನ್ನೆಬೈಲು ಗದ್ದೆಯಲ್ಲಿ ರೋಟರಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ವೈಭವದಿಂದ ಆಯೋಜಿಸಲಾಯಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು...

“ಜಾಕಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ನಲ್ಲಿ ಗೌರಿತಾ ಕೆ.ಜಿ ದಾಖಲೆ

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಜಾಕಿ ಬುಕ್ ಆಫ್ ರೆಕಾರ್ಡ್ ಆಯೋಜಿಸಿದ್ದ “ಯೋಗ ಸವಾಲುಗಳು ಎಲೈಟ್ ಚಾಂಪಿಯನ್‌ಶಿಪ್” ನಲ್ಲಿ ಗೌರಿತಾ ಕೆ.ಜಿ ಯಶಸ್ವಿ ಯಾಗಿದ್ದಾಳೆ. ಈ ಸ್ಪರ್ಧೆಯಲ್ಲಿ ವೃಕ್ಷಾಸನದಲ್ಲಿ ಹನ್ನೆರೆಡು ನಿಮಿಷಗಳ ಕಾಲ ಇರುವಂತೆ ನಿಯಮವಿದ್ದು, ಈಕೆ 16ನಿಮಿಷ 51ಸೆಕೆಂಡುಗಳ ಕಾಲ ಇರುವ ಮೂಲಕ ಜಾಕಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು...

ಬೆಳ್ಳಾರೆ-ಪಳ್ಳಿಮಜಲು ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಮತ್ತು ವಿಷಯ ಮಂಡನೆ

ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಅಬೂಬಖರ್ ಸ್ವಿದ್ದೀಖ್(ರ.ಅ)ಜುಮುಅ: ಮಸೀದಿಯಲ್ಲಿ ಪ್ರವಾದಿ ಪೈಗಂಬರ್(ಸ್ವ.ಅ)ರವರ ಮೇಲೆ ಪ್ರತಿ ಆದಿತ್ಯವಾರ ಅಸ್ತಮಿಸಿದ ಸೋಮವಾರ ರಾತ್ರಿ ನಡೆಸುವ ಸ್ವಲಾತ್ ಮಜ್ಲಿಸಿನ ಮಾಸಿಕ ಸ್ವಲಾತ್ ಮಜ್ಲಿಸ್ ಜು 19ರಂದು ಮಗ್ರಿಬ್(ಮುಸ್ಸಂಜೆ) ನಮಾಝಿನ ನಂತರ 7-30ಕ್ಕೆ ನಡೆಯಿತು. ಈ ಮಸೀದಿಯ ಖತೀಬ್ ಮುಹಮ್ಮದ್ ಸವಾದ್ ಮದನಿ ಹಾಗೂ ಇಲ್ಲಿನ ಮದರಸ ಅಧ್ಯಾಪಕ ಹಬೀಬುರ್ರಹ್ಮಾನ್ ಹಿಮಮಿ ಸ್ವಲಾತ್...

ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ಜು. 22ರಿಂದ ಆಟಿ ಸೇಲ್

ಪುತ್ತೂರು: ಪ್ರಸಿದ್ದ ಚಿನ್ನಾಭರಣ ಮಳಿಗೆಯಾದ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಜುಲೈ 22 ರಿಂದ ವಿಶೇಷ ಆಟಿ ಸೇಲ್ ಆರಂಭವಾಗಲಿದೆ. ಪುತ್ತೂರು, ಸುಳ್ಯ, ಮೂಡಬಿದ್ರೆ, ಹಾಸನ ಮತ್ತು ಕುಶಾಲನಗರ ಶಾಖೆಗಳಲ್ಲಿ ಈ ಸೇಲ್ ನಡೆಯಲಿದೆ. ಈ ವಿಶೇಷ ಸೇಲ್ ಅಂಗವಾಗಿ ಚಿನ್ನದ ಆಭರಣಗಳ ವಿ.ಎ (VA) ಶುಲ್ಕದ ಮೇಲೆ ಪ್ರತೀ ಗ್ರಾಂಗೆ ರೂ.500/- ವರೆಗೆ ರಿಯಾಯಿತಿ,ಬೆಳ್ಳಿಯ ಆಭರಣಗಳ...
Loading posts...

All posts loaded

No more posts

error: Content is protected !!