Ad Widget

ಏನೆಕಲ್‌ನಲ್ಲಿ ಮೇ.1ರಿಂದ ರಾಜ್ಯಮಟ್ಟದ ಬೇಸಿಗೆ ಶಿಬಿರ

ಏನೆಕಲ್ಲಿನಲ್ಲಿ ‘ಕಲಾಮಾಯೆ’ ವತಿಯಿಂದ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ “ಪ್ರೀತಿಯಿಂದ”
ಮೇ.1ರಿಂದ 7ರವರೆಗೆ ಏನೆಕಲ್‌ನ ಬಾಲಾಡಿ ಆದಿಶಕ್ತಿ ಭಜನಾ ಮಂದಿರದಲ್ಲಿ ನಡೆಯಲಿದೆ. ಕಲಾವಿದ, ಕಲಾ ಸಂಘಟಕ, ಅರೆಭಾಷೆ ಚಲನಚಿತ್ರ “ಕೇಸ್ ಪುಸ್ಕ” ಖ್ಯಾತಿಯ ನಿರ್ದೇಶಕ ಸುಧೀರ್ ಏನೆಕಲ್ ನಿರ್ದೇಶನದಲ್ಲಿ ನಡೆಯುವ ಶಿಬಿರದಲ್ಲಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಸುಬ್ರಮಣ್ಯ, ಏನೆಕಲ್,ಬಳ್ಪ
ಸೇರಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಒಳಗೊಂಡಂತೆ ಸುಳ್ಯ ಹಾಗು ಕಡಬ ತಾಲೂಕಿನ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಹತ್ತು ಹಲವು ಶೈಕ್ಷಣಿಕ, ಸಾಂಸ್ಕೃತಿಕ ಮನೋರಂಜನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ರಾಜ್ಯದ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ವಿಚಾರಗಳೊಂದಿಗೆ ಮಕ್ಕಳ ಬೌದ್ಧಿಕ ಬೆಳವಣಿಗೆಗಾಗಿ ಅತ್ಯುತ್ತಮ ನಿರ್ದೇಶನ ನೀಡಲಾಗುವುದು.
ದಿನಾಂಕ ಮೇ 01 ರಿಂದ ಮೇ 07ರವರೆಗೆ ಬೆಳಿಗ್ಗೆ 9:30 ರಿಂದ ಸಂಜೆ 04 ರ ವರೆಗೆ ನಡೆಯುವ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಮದ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಶಿಬಿರದ ಪ್ರವೇಶ ಶುಲ್ಕ ರೂ 1,000/ ಮಾತ್ರ (ಏಳು ದಿನಕ್ಕೆ) ಇರಲಿದೆ.
ನೋಂದಾವಣೆಗಾಗಿ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು: 9686714517, 9019170432 ಎಂದು
ಕಲಾ ಮಾಯೆ ಸಂಸ್ಥೆಯ ನಿರ್ದೇಶಕ ಸುಧೀರ್ ಏನೆಕಲ್ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!