Ad Widget

ಕುಕ್ಕುಜಡ್ಕ : ಅಮರ ಸಂಘಟನಾ ಸಮಿತಿ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಅಮರಮುಡ್ನೂರು ಅಕ್ಟೋಬರ್ 28ರಂದು ಚೊಕ್ಕಾಡಿ ಪ್ರೌಡ ಶಾಲೆ ,ಕುಕ್ಕುಜಡ್ಕದಲ್ಲಿ ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ಆಶ್ರಯದಲ್ಲಿ ದಿ|ಮುರಾರಿ ಕಡಪಳ ಮತ್ತು ದಿ| ನವೀನ್ ಸಂಕೇಶ ಸ್ಮರಣಾರ್ಥ  ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಮತ್ತು ಪೈಲಾರು ಪ್ರಿಮೀಯರ್ ಸಂಘಟನಾ ಸಮಿತಿ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರ್ಷಿತ್ ಜಿ ಜೆ ವ್ಯವಸ್ಥಾಪಕರು ಪೈಲಾರು ಪ್ರಿಮೀಯರ್ ಲೀಗ್ ಸಂಘಟನಾ ಸಮಿತಿ ಇವರು ವಹಿಸಿದ್ದರು , ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಮೇಡಿಕಲ್ ಅಫಿಸರ್ ಡಾ. ರಾಮಚಂದ್ರ ಭಟ್ , ಚೊಕ್ಕಾಡಿ ಎಜ್ಯುಕೇಶನ್ ಇದರ ಸಂಚಾಲಕರಾದ ರಾಧಾಕೃಷ್ಣ ಬೊಳ್ಳೂರು ,ಅಮರ ಸಂಘಟನಾ ಸಮಿತಿ (ರಿ.)ಸುಳ್ಯ ಅಧ್ಯಕ್ಷರಾದ ಪ್ರವೀಣ್ ಕುಲಾಲ್ , ದಿ| ಮುರಾರಿ ಕಡಪಳರವರ ಪತ್ನಿ ವಾರೀಜ ಕಡಪಳ , ದಿ| ನವೀನ್ ಸಂಕೇಶರ ಸಹೋದರಿ ಕವಿತಾ ಸಂಕೇಶ  ಉಪಸ್ಥಿತರಿದ್ದರು.  ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಭಾಗವಹಿಸಿದರು. ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!