Ad Widget

ರಂಗನಿರ್ದೇಶಕ ಜೀವನ್ ರಾಂ ಅವರಿಗೆ ಜಂಗಮಶೆಟ್ಟಿ ರಂಗಪ್ರಶಸ್ತಿ ಪ್ರದಾನ

ರಂಗ ಸಂಗಮ ಕಲಾವೇದಿಕೆ, ಕಲಬುರಗಿ ಸಂಸ್ಥೆಯು ಕೊಡಮಾಡುವ 9 ನೇ ವರ್ಷದ ರಾಜ್ಯಮಟ್ಟದ ಎಸ್.ಬಿ.ಜಂಗಮ ಶೆಟ್ಟಿ ರಂಗಪ್ರಶಸ್ತಿಯನ್ನು ಹಿರಿಯ ರಂಗಕರ್ಮಿ ಜೀವನ್ ರಾಂ ಸುಳ್ಯರಿಗೆ
ಕಲಬುರಗಿಯ ವಿಶ್ವೇಶ್ವರ ಸಭಾಭವನದಲ್ಲಿ ಪ್ರದಾನ ಮಾಡಲಾಯಿತು.
ಇದೇ ಮೊದಲಬಾರಿಗೆ ಕೊಡುವ  ಶ್ರೀಮತಿ ಸುಭದ್ರಾದೇವಿ ಜಂಗಮಶೆಟ್ಟಿ ರಂಗಪ್ರಶಸ್ತಿಯನ್ನು ಹಿರಿಯ ರಂಗಕಾಲವಿದೆ ಶ್ರೀಮತಿ ಶೈಲಜಾ ದುಧನೀರರಿಗೆ ನೀಡಲಾಯಿತು.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತರಾದ ತುಮಕೂರಿನ ಡಾ.ಲಕ್ಮಣದಾಸ ಇವರು ಪ್ರಶಸ್ತಿ ಪ್ರದಾನ ಮಾಡಿದರು.
ಶ್ರೀ ಶರಣಬಸಪ್ಪ ಸಂಸ್ಥಾನದ ಪೂಜ್ಯ ಶ್ರೀ ಲಿಂಗರಾಜಪ್ಪ ಅಪ್ಪ ಅಧ್ಯಕ್ಷತೆ ವಹಿಸಿದ್ದರು. ಗುಲ್ಬರ್ಗ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ,ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎಲ್.ಶೇಖ್ ಮಾಸ್ತರ್,ನಾಟಕಕಾರ ಮಹಾಂತೇಶ್ ನವಲಕಾರ್,ಹಿರಿಯ ಪತ್ರಕರ್ತ  ಮಹಿಪಾಲ ರೆಡ್ಡಿ ಮುನ್ನೂರ್,ರಂಗಕರ್ಮಿ ಎಚ್.ಎಸ್.ಬಸವ ಪ್ರಭು,ರಂಗ ಸಂಗಮ ಕಲಾವೇದಿಕೆ ಅಧ್ಯಕ್ಷೆ ಶ್ರೀಮತಿ ಶಿವಗೀತಾ ಬಸವಪ್ರಭು,ಪ್ರಧಾನ ಕಾರ್ಯದರ್ಶಿ ಡಾ| ಸುಜಾತಾ ಜಂಗಮಶೆಟ್ಡಿ ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!