Ad Widget

ಮೇನಾಲ : ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮಹೋತ್ಸವ ನಡೆಸುವ ಬಗ್ಗೆ ಪ್ರಶ್ನೆ ಚಿಂತನೆ

ಅಜ್ಜಾವರ ಗ್ರಾಮದ ಮೇನಾಲ ಕುಟುಂಬಸ್ಥರು ಆರಾಧನೆ ನಡೆಸಿಕೊಂಡು ಬರುತ್ತಿರುವ ಶ್ರೀ ವಯನಾಟ್ ಕುಲವನ್ ದೇವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವ ಹಿನ್ನಲೆಯಲ್ಲಿ ದೇವರಿಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪಶ್ನಾ ಚಿಂತನೆಗೆ ಚಾಲನೆ ನೀಡಲಾಯಿತು.

ಮೇನಾಲದಲ್ಲಿ 2024ರ ಮಾರ್ಚ್ ತಿಂಗಳ ದಿನಾಂಕ 5, 6, 7ರಲ್ಲಿ ದೈವಕಟ್ಟು ಮಹೋತ್ಸವ ನಡೆಸುವ ಬಗ್ಗೆ ಮತ್ತು ಉತ್ಸವಕ್ಕೆ ಬೇಕಾದ ಸಮಿತಿಗಳ ರಚಿಸುವ ಬಗ್ಗೆ ಪ್ರಶ್ನೆ ಚಿಂತನೆಯನ್ನು ಕುತ್ತಿಕೋಲು ಶ್ರೀ ತಂಬೂರಾಟಿ ಭಗವತಿ ಕ್ಷೇತ್ರದ ಸ್ಥಾನಿಕರ ಮಾರ್ಗದರ್ಶನದಲ್ಲಿ ಜ್ಯೋತಿಷಿ ಪಂಕಜಾಕ್ಷ ಕುತ್ತಿಕೋಲು ಇವರಿಂದ ನಡೆಯುತ್ತಿದ್ದು ಇದರ ಮೇಲುಸ್ತುವಾರಿಯನ್ನು ಕುಟುಂಬದ ಹಿರಿಯರಾದ ಗುಡ್ಡಪ್ಪ ರೈ ಮೇನಾಲ ಹಾಗೂ ಕುಟುಂಬಸ್ಥರು ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಊರಿನ ಭಕ್ತಾಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!