Ad Widget

ಕಾಂಚೋಡು ಮಂಜುನಾಥ ದೇವರು ಮತ್ತು ಅಣ್ಣಪ್ಪ ಸ್ವಾಮಿಯಲ್ಲಿ ಸೌಜನ್ಯ ಸಾವಿಗೆ ನ್ಯಾಯ ಒದಗಿಸಲು ಪ್ರಾರ್ಥನೆ

ಐತಿಹಾಸಿಕ ಹಿನ್ನೆಲೆಯುಳ್ಳ ಕಾಂಚೋಡು ಮಂಜುನಾಥ ದೇವರಲ್ಲಿ ಸೌಜನ್ಯ ಸಾವಿಗೆ ನ್ಯಾಯ ಒದಗಿಸುವ ಸಲುವಾಗಿ ಸೌಜನ್ಯ ಕುಟುಂಬ , ಮಹೇಶ್ ತಿಮರೋಡಿ , ದೇವಾಲಯದ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಪ್ರಾರ್ಥನೆ ಮಾಡಲಾಗಿದೆ. ಕಾಂಚೋಡು ಮಂಜುನಾಥ ದೇವಾಲಯಕ್ಕೆ ಪುರಾತನ ಹಿನ್ನೆಲೆಯಿದ್ದು , ಇಲ್ಲಿಯೂ ಧರ್ಮಸ್ಥಳ ದೇವಾಲಯದ ರೀತಿಯಲ್ಲೆ ದೇವರನ್ನು ದೈವಗಳ‌ ಆರಾಧನೆ ನಡೆಯುತ್ತಿದ್ದು, ಇಲ್ಲಿ ಕೂಡ ಅಣ್ಣಪ್ಪ ಸ್ವಾಮಿಯ ಬೆಟ್ಟ , ಕಲ್ಲೆರಿತ್ತಾಯ ಮಾಡ , ಹಾಗೂ ಇನ್ನಿತರ ದೈವಗಳ ಸಾನಿಧ್ಯವನ್ನು ಕಾಣಬಹುದಾಗಿದೆ. ಇಲ್ಲಿಯ ಪ್ರಾರ್ಥನೆ ಫಲ ನೀಡುವ ಭರವಸೆಯನ್ನು ಭಕ್ತರು ನಂಬಿದ್ದು , ಕಾಂಚೋಡು ಮಂಜುನಾಥ ದೇವರು ಅಣ್ಣಪ್ಪ ಸ್ವಾಮಿ ಕೈ ಬಿಡಲಾರ ಎಂಬ ನಂಬಿಕೆಯಿಂದ ಭಕ್ತಿಯಿಂದ ಪ್ರಾರ್ಥಿಸಲಾಗಿದೆ.
ಈ ಸಂದರ್ಭದಲ್ಲಿ ಸೌಜನ್ಯ ಪರ ಅವಿರತವಾಗಿ ಹೋರಾಟ ಮಾಡುತ್ತಿರುವ ಮಹೇಶ್ ತಿಮರೋಡಿ , ಸೌಜನ್ಯ ತಾಯಿ ಕುಸುಮಾವತಿ , ಕಲ್ಮಡ್ಕ ಗ್ರಾಮ ಪಂಚಾಯತಿ ಸದಸ್ಯ ಹರೀಶ್ ಮಾಳಪ್ಪಮಕ್ಕಿ , ಯುವ ಹವ್ಯಾಸಿ ಬರಹಗಾರರು ಭಾಸ್ಕರ ಗೌಡ ಜೋಗಿಬೆಟ್ಟು, ವಿಶ್ವನಾಥ ಜೋಗಿಬೆಟ್ಟು, ಕುಂಞಣ್ಣ ರೈ, ಭವಾನಿ ಕಾಯರ, ಅನಿಲ್ ಪಾಜಪ್ಪಳ್ಳ ಪರಶುರಾಮ ಇಂದ್ರಾಜೆ , ಜನಾರ್ಧನ ಕೊಳೆಂಜಿಕೋಡಿ , ಗಣೇಶ ಜೋಗಿಬೆಟ್ಟು, ಕೇಶವ ಕೊಳೆಂಜಿಕೋಡಿ ಹಾಗು ನೂರಾರು ಭಕ್ತಾದಿಗಳು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!