Ad Widget

ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ ಚಂದ್ರ ಕೋಲ್ಚಾರ್ ಪುನರಾಯ್ಕೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿ ಹೊಂದಿರುವ ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಚಂದ್ರ ಕೋಲ್ಚಾರ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜ.16ರಂದು ಸಂಘದ ಸಭಾಂಗಣದಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಚಂದ್ರ ಕೋಲ್ಚಾರ್ ರವರನ್ನು ಜನಾರ್ದನ ಚೂಂತಾರ್ ಸೂಚಸಿ, ಗೋವಿಂದ ಭಟ್ ಅನುಮೋದಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ರಾಜಾರಾಮ ಕೋಲ್ಪೆಗುತ್ತುರವರನ್ನು ಪಾಂಡುರಂಗ ಹೆಗ್ಡೆ ಸೂಚಿಸಿ, ಪುಟ್ಟಣ್ಣ ಗೌಡ ಅನುಮೋದಿಸಿದರು.

ನಿರ್ದೇಶಕರಾದ ಸರಸ್ವತಿ, ಹರೀಶ್ ಕೊಡ್ಲಾ, ಪುರುಷೋತ್ತಮ ಭಟ್, ಶಿವಾನಂದ, ಇಂದಿರಾ ಕುಂದಾಪುರ, ಶ್ರೀಶ ಕೊಡವೂರು, ಶಂಕರ‌ ಪಿ., ಸುಂದರ ಗೌಡ, ಜಿ.ಪಿ ಶ್ಯಾಮ ಭಟ್, ಸುಶೀಲ, ಮನಮೋಹನ ಅರಂಬ್ಯ ಹಾಗೂ ತನಿಯಪ್ಪ ಉಪಸ್ಥಿತರಿದ್ದರು. ಸಹಕಾರ ಅಭಿವೃದ್ಧಿ ಶಿವಲಿಂಗಯ್ಯ ಚುನಾವಣಾಧಿಕಾರಿಯಾಗಿದ್ದರು. ಆಡಳಿತ ನಿರ್ದೇಶಕ ತಿಮ್ಮಯ್ಯ ಪಿಂಡಿಮನೆ ಹಾಗೂ ಸಿಬಂದಿಗಳು ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!