Ad Widget

ಗುತ್ತಿಗಾರು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ – ಸದಸ್ಯರಿಗೆ 6% ಡಿವಿಡೆಂಟ್ ಘೋಷಣೆ

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಯವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನದಲ್ಲಿ ಇಂದು ನಡೆಯಿತು.

ಸಂಘವು ವಾರ್ಷಿಕ 1.18 ಕೋಟಿ ಲಾಭಾಂಶ ಹೊಂದಿದ್ದು ಸದಸ್ಯರಿಗೆ ಶೇ 6 ಡಿವಿಡೆಂಟ್ ವಿತರಣೆಗೆ ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷರು ಹೇಳಿದರು.


ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕಿಶೋರ್ ಕುಮಾರ್ ಅಂಬೆಕಲ್ಲು, ನಿರ್ದೇಶಕರುಗಳಾದ ಬಿ.ಕೆ.ಬೆಳ್ಯಪ್ಪ ಗೌಡ, ತೀರ್ಥರಾಮ ಎ.ವಿ., ಮುಳಿಯ ಕೇಶವ ಭಟ್, ಶ್ರೀಮತಿ ಮಂಜುಳಾ, ರವಿಪ್ರಕಾಶ್ ಬಿ.ವಿ., ಕೃಷ್ಣಯ್ಯ ಮೂಲೆತೋಟ, ಜಯಪ್ರಕಾಶ್ ಎ.ಆರ್., ನವೀನ್ ಬಾಳುಗೋಡು, ಚಂದ್ರಾವತಿ ಎಂ., ಕುಂಞ , ಆನಂದ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಎ.ಕೆ. ವರದಿ ವಾಚಿಸಿದರು. ಕಿಶೋರ್ ಪೈಕ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!