Ad Widget

ಗುತ್ತಿಗಾರು : ಶತಾಯು ಆಯುರ್ವೇದ ಕ್ಲಿನಿಕ್ ಶುಭಾರಂಭ ; ವೃತ್ತಿಯಲ್ಲಿ ಪ್ರಾಮಾಣಿಕತೆ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು- ಡಾ| ಕೆ.ವಿ.ಚಿದಾನಂದ

ಗುತ್ತಿಗಾರಿನ ಮುತ್ತಪ್ಪ ನಗರದ ಬಿಂದುಶ್ರೀ ಸಂಕೀರ್ಣದಲ್ಲಿ ಮೇ.6 ರಂದು ಡಾ.ನಿಶಾಂತ್ ಆರ್ನೋಜಿ ಮಾಲಿಕತ್ವದ ಶತಾಯು ಆಯುರ್ವೇದ ಕ್ಲಿನಿಕ್ ಶುಭಾರಂಭಗೊಂಡಿತು. ಎ.ಓ.ಎಲ್.ಇ.ಸುಳ್ಯ ಇದರ ಅಧ್ಯಕ್ಷ ಡಾ ಕೆ.ವಿ.ಚಿದಾನಂದ ರವರು ಕ್ಲಿನಿಕ್ ಉದ್ಘಾಟಿಸಿ ಮಾತನಾಡಿ ವೃತ್ತಿಯಲ್ಲಿ ಪ್ರಾಮಾಣಿಕತೆ ಜತೆಗೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಕೃಷಿಕ, ಸುಳ್ಯ ಕ.ಸಾ.ಪ.ಮಾಜಿ ಅಧ್ಯಕ್ಷ ಎ.ಕೆ.ಹಿಮಕರ ಅಧ್ಯಕ್ಷತೆ ವಹಿಸಿದ್ದರು. ಕೆ.ವಿ.ಜಿ.ಆಯುರ್ವೇದ ಆಸ್ಪತ್ರೆ ಸುಳ್ಯ ಇದರ ಪ್ರಾಂಶುಪಾಲ ಡಾ ಲೀಲಾಧರ ಡಿ.ವಿ., ತಾಲೂಕು ಆರೋಗ್ಯಾಕಾರಿ ಡಾ. ನಂದಕುಮಾರ್ ಗುತ್ತಿಗಾರು, ಗ್ರಾ.ಪಂ ಅಧ್ಯಕ್ಷೆ ರೇವತಿ ಆಚಳ್ಳಿ, ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಪ್ರಾ.ಕೃ.ಪ. ಸ.ಸಂಘ ಗುತ್ತಿಗಾರು ಇದರ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಬಿಂದುಶ್ರೀ ಸಂಕೀರ್ಣ ಇದರ ಮಾಲಕ ಕೆ.ಬಾಲಕೃಷ್ಣ ಗೌಡ ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!