ಶ್ರೀಮತಿ ಕೆ.ವಿ ಹರಿಣಿ ಕಲ್ಕಳ ನಿಧನ

ಸುಳ್ಯದ ಕಾಯರ್ತೋಡಿ ಕಲ್ಕಳ ಮನೆ ಕೆ.ವಿ ವೆಂಕಟ್ರಮಣ ಗೌಡರ ಧರ್ಮಪತ್ನಿ ಶ್ರೀಮತಿ ಹರಿಣಿ.ಕೆ.ವಿ ರವರು ಅಲ್ಪಕಾಲದ ಅಸೌಖ್ಯದಿಂದ ಏ.16ರಂದು ನಿಧನರಾದರು. ಮೃತರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರ ಕೆ.ವಿ ಮೋಹನ್, ಪುತ್ರಿ ಶ್ರೀಮತಿ ಬೀನಾ, ಅಳಿಯ ಕೆ. ನಾಗಪ್ಪ ಗೌಡ ಮಂಗಳೂರು, ಸೊಸೆ ಶ್ರೀಮತಿ ಪ್ರತಿಮಾ ಮೋಹನ್ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ...

ಅಪ್ಪಯ್ಯ ಸೂಂತೋಡು ನಿಧನ

ಉಬರಡ್ಕ ಮಿತ್ತೂರು ಗ್ರಾಮದ ಸೂಂತೋಡು ನಿವಾಸಿ ಅಪ್ಪಯ್ಯ ಸೂಂತೋಡು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ ಸುಮಾರು 55 ವರ್ಷ ವಯಸ್ಸಾಗಿತ್ತು ಮೃತರು ಪತ್ನಿ ಉಬರಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು, ಪುತ್ರಿಯರಾದ ಅನನ್ಯ ಹಾಗೂ ಅನ್ವಿತಾರನ್ನು ಅಗಲಿದ್ದಾರೆ.
Ad Widget

ಮಹಾಲಿಂಗ ಗೌಡ ಚೆಮ್ನೂರು ನಿಧನ

ನಾಲ್ಕೂರು ಗ್ರಾಮದ ಹಾಲೆಮಜಲು ಚೆಮ್ನೂರು ಮನೆ ಮಹಾಲಿಂಗ ಗೌಡ ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಏ.16 ರಂದು ನಿಧನರಾದರು.‌ ಮೃತರು ಪತ್ನಿ ಗುತ್ತಿಗಾರು ಗ್ರಾ.ಪಂ ಮಾಜಿ ಅಧ್ಯಕ್ಷೆ ರವಿಕಲಾ ಚೆಮ್ನೂರು, ಪುತ್ರ ಆಶಿಕ್, ಪುತ್ರಿ ಶ್ರೀಮತಿ ಆಶಿತಾ ಸೇರಿದಂತೆ ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಮುತ್ತಮ್ಮ ಕುಂಬಳಚೇರಿ ನಿಧನ

ಪೆರಾಜೆ ಗ್ರಾಮದ ಕುಂಬಳಚೇರಿ ದಿವಂಗತ ದೊಡ್ಡಯ್ಯ ಅವರ ಪತ್ನಿ(ಕುಂಬಳಚೇರಿ ಲಿಂಗಪ್ಪ ಅವರ ತಾಯಿ) ಮುತ್ತಮ್ಮ ಅವರು ಇಂದು ನಿಧನರಾಗಿದ್ದಾರೆ. ಕುಂಬಳಚೇರಿ ಮತ್ತಮ್ಮ ಅವರ ಅಂತ್ಯಕ್ರಿಯೆ ಇಂದು ರಾತ್ರಿ 8:00 ಗಂಟೆಗೆ ಮೃತರ ಸ್ವಗೃಹದಲ್ಲಿ ನಡೆಯಲಿದೆ.

ಅಡ್ತಲೆ ಕುಟುಂಬದ ಹಿರಿಯರಾದ ಕೃಷ್ಣಪ್ಪ ಗೌಡ ಅಡ್ತಲೆ ನಿಧನ

ಅರಂತೋಡು ಗ್ರಾಮದ ಅಡ್ತಲೆ ಕುಟುಂಬದ ಹಿರಿಯರಾದ ಕೃಷ್ಣಪ್ಪ ಗೌಡ ಅಡ್ತಲೆ(ದರ್ಖಾಸ್) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಏ.05) ನಿಧನರಾದರು. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು.ಮೃತರು ಐವರು ಹೆಣ್ಣುಮಕ್ಕಳು, ಅಳಿಯಂದಿರು, ಸಹೋದರರು, ಸಹೋದರಿಯರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಅಂತಿಮ ಕಾರ್ಯವನ್ನು ನಾಳೆ(ಏ.06) ಬೆಳಿಗ್ಗೆ 10:00 ಗಂಟೆಯ ಒಳಗಾಗಿ ನಡೆಸಲಾಗುವುದೆಂದು ಮೃತರ ಮನೆಯವರು ತಿಳಿಸಿದ್ದಾರೆ.

ಚೆಂಬು : ಗೌರಮ್ಮ ಚೌಟಾಜೆ ನಿಧ‌ನ

ಚೆಂಬು ಗ್ರಾಮದ ಆನೆಹಳ್ಳ ಚೌಟಾಜೆ ದಿ|ರಾಮಣ್ಣ ಗೌಡ ಇವರ ಧರ್ಮಪತ್ನಿ ಶ್ರೀಮತಿ ಗೌರಮ್ಮ ಚೌಟಾಜೆ ಅಲ್ಪಕಾಲದ ಅಸೌಖ್ಯದಿಂದ ಇಂದು(ಏ.05) ನಿಧನರಾದರು. ಮೃತರ ಅಂತಿಮ ಸಂಸ್ಕಾರವನ್ನು ಏ.06 ಸೋಮವಾರದಂದು ಪೂರ್ವಾಹ್ನ 10:00 ಗಂಟೆಗೆ ನಡೆಯಲಿದೆ.ಮೃತರು ಪುತ್ರರಾದ ಕುಶಾಲಪ್ಪ ಚೌಟಾಜೆ, ತಿರುಮಲೇಶ್ವರ ಚೌಟಾಜೆ, ಶೇಷಪ್ಪ ಚೌಟಾಜೆ, ಅಕ್ವಾ ಸೊಲ್ಯೂಷನ್ ನ ಜಯರಾಮ ಚೌಟಾಜೆ ಹಾಗೂ ಪುತ್ರಿಯರಾದ ವಾರಿಜ, ನಿರ್ಮಲಾಕ್ಷಿ,...

ನಿಧನ : ಪಿ.ಎಸ್ ರಾಜನ್ ತಳೂರು

ದೇವಚಳ್ಳ ಗ್ರಾಮದ ತಳೂರು ಶ್ರೀಧರನ್ ಎಂಬುವವರ ಪುತ್ರ ಪಿ.ಎಸ್ ರಾಜನ್ ರವರು ತೀವ್ರ ಅನಾರೋಗ್ಯದಿಂದ ಇಂದು(ಮಾ.23) ನಿಧನರಾದರು. ಮೃತರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಅವಿವಾಹಿತರಾಗಿದ್ದು, ಸಹೋದರಿಯರೊಂದಿಗೆ ವಾಸಿಸುತ್ತಿದ್ದರು.

ಕಲ್ಲಡ್ಕದ ಯುವಕ ಗೂನಡ್ಕದಲ್ಲಿ ಆತ್ಮಹತ್ಯೆ

ಕಲ್ಲಡ್ಕದ ಯುವಕನೋರ್ವ ಗೂನಡ್ಕದ ಕೊಠಡಿಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿ ತಿಲಕರಾಜ್ (29) ಎಂದು ಗುರುತಿಸಲಾಗಿದೆ.ತಿಲಕರಾಜ್ ಅವರು ಮಾ.20 ರಂದು ಸಂಜೆ ಕಲ್ಲಡ್ಕದಿಂದ ಮಡಿಕೇರಿಗೆ ತೆರಳುವುದಾಗಿ ಹೇಳಿ ತಮ್ಮ ಕಾರಿನಲ್ಲಿ ಮನೆಯಿಂದ ಹೊರಟಿದ್ದರು. ಮಾರ್ಗಮಧ್ಯೆ ಗೂನಡ್ಕದಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದು ತಂಗಿದ್ದರು. ಮಾ.21...

ನಿಧನ : ಬಂದ್ಯಡ್ಕ ಲಿಂಗಪ್ಪ ಗೌಡ

ದೇಲಂಪಾಡಿ ಗ್ರಾಮದ ಬಂದ್ಯಡ್ಕ ದಿ.ಹೊನ್ನಪ್ಪ ಗೌಡರ ಪುತ್ರ ಲಿಂಗಪ್ಪ ಗೌಡ ರವರು ಮಾ.19ರಂದು ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ 58 ವರ್ಷ ವಯಸ್ಸಾಗಿತ್ತು.ಮೃತರು ತಾಯಿ ಸೇಸಮ್ಮ, ಪತ್ನಿ ಭಾರತಿ, ಪುತ್ರಿಯರಾದ ಕು.ಭೂಮಿಕಾ, ಕು.ಪೂರ್ವಿಕಾ, ಪುತ್ರ ಹಾರ್ಧಿಕ್ ಹಾಗೂ ನಾಲ್ವರು ಸಹೋದರಿಯರು ಸೇರಿದಂತೆ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

ಕೊಲ್ಲಮೊಗ್ರು : ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

ಕೊಲ್ಲಮೊಗ್ರು ಗ್ರಾಮದ ಶಿರೂರು ಬಳಿಯ ಬೊಳಿಯಾನ ಮನೆಯ ಮಹಿಳೆಯೋರ್ವರ ಮೈಮೇಲೆ ಬೆಂಕಿ ತಗಲಿ ಗಾಯಗೊಂಡಿದ್ದು, 10 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.ಬೊಳಿಯಾನ ಮನೆ ದಿ.ಚಿನ್ನಪ್ಪ ಗೌಡ ಅವರ ಪತ್ನಿ ತಿಲಕ ಮಾ.10ರಂದು ಅಡುಗೆ ಮನೆಯಲ್ಲಿ ಬೆಳಿಗ್ಗೆ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸೀರೆಗೆ ಬೆಂಕಿ ಹಿಡಿದು ತಿಲಕರವರ...
Loading posts...

All posts loaded

No more posts

error: Content is protected !!