ಮೈಸೂರಿನಲ್ಲಿ ಬೈಕ್ ಅಪಘಾತ – ಕಾಂತಮಂಗಲದ ಯುವಕ ಮೃತ್ಯು

ಮೈಸೂರಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಅಜ್ಜಾವರ ಕಾಂತಮಂಗಲ ಯುವಕ ನಿಕೇಶ್ ಮೃತಪಟ್ಟ ಘಟನೆ ಜು.26 ನಡೆದಿದೆ. ಜು.24ರಂದು ಮೈಸೂರಿನಲ್ಲಿ ಬೈಕ್ ಅಪಘಾತಕ್ಕೊಳಗಾಗಿದ್ದು ಗಂಭೀರ ಗಾಯಗೊಂಡ ನಿಕೇಶ್ ರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಮುಂಜಾನೆ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ನಿಕೇಶ್ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು ಮನೆಗೆ ಬರುತ್ತಿರುವ ವೇಳೆ ಈ ಘಟನೆ ನಡೆದಿದೆ. ಮೃತರು ತಂದೆ ಜಗದೀಶ್,...

ಸಹಕಾರಿ ಧುರೀಣ ಚೆಂಬು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಮಾಜ ಸೇವಕ ಆದಂ ಕುಂಞ ಸಂಟ್ಯಾರ್ ಹೃದಯಾಘಾತದಿಂದ ನಿಧನ

ಚೆಂಬು ಗ್ರಾಮ ಪಂಚಾಯತ್ ಮತ್ತು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಜನಪ್ರೀಯ ಸಮಾಜಸೇವಕರಾದ ಆದಂ ಕುಂಞ ಸಂಟ್ಯಾರ್ ರವರು ಇದೀಗ ಹೃದಯಾಘಾತದಿಂದ ನಿಧನರಾದರೆಂದು ತಿಳಿದುಬಂದಿದೆ. ಮೃತರಿಗೆ 60 ವರ್ಷ ವಯಸ್ಸಾಗಿತ್ತು. ಇಂದು(ಜು.25) ಸಂಪಾಜೆ ಪಯಸ್ವಿನಿ ಸಹಕಾರಿ ಬ್ಯಾಂಕ್ ಮಹಾಸಭೆ ನಡೆಯುತ್ತಿತ್ತು. ಆದಂ ರವರು ಮಹಾಸಭೆಯಲ್ಲಿ ಸಕ್ರೀಯವಾಗಿ ಭಾಗವಹಿಸಿ...
Ad Widget

ಸಾಹಿತಿ ಎ.ಕೆ. ಹಿಮಕರರಿಗೆ ಮಾತೃ ವಿಯೋಗ

ಗುತ್ತಿಗಾರು ಗ್ರಾಮದ ದಿ. ಆರ್ನೋಜಿ ಕೃಷ್ಣಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಅಕ್ಕಯ್ಯರವರು ಅಸೌಖ್ಯದಿಂದ ಜು. 21 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಸಾಹಿತಿ ಎ.ಕೆ. ಹಿಮಕರ, ಪ್ರಗತಿಪರ ಕೃಷಿಕರಾದ ರಾಘವ, ಗೋಪಾಲಕೃಷ್ಣ, ಪುತ್ರಿಯರಾದ ತಾರಾವತಿ, ಭವಾನಿ, ಹೇಮಾವತಿ, ಸೊಸೆ, ಅಳಿಯಂದಿರು,ಮೊಮ್ಮಕ್ಕಳನ್ನು, ಮರಿಮಕ್ಕಳನ್ನು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ....

ಕೇಪಣ್ಣ ಗೌಡ ಪರಿವಾರ ನಿಧನ

ಆಲೆಟ್ಟಿ ಗ್ರಾಮದ ಪರಿವಾರ ಕುಟುಂಬದ ಹಿರಿಯರಾದ ಕೇಪಣ್ಣ ಗೌಡ ಸ್ವಗೃಹದಲ್ಲಿ ಜು.16 ರಂದು ನಿಧನರಾದರು. ಮೃತರು ಪತ್ನಿ ಮೋಹಿನಿ ಪುತ್ರ ಪುರುಷೋತ್ತಮ, ಪುತ್ರಿ ಶೀಲಾ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ದ. ಕ. ಜಿಲ್ಲಾ ಟೈಲರ್ ಯೂನಿಯನ್ ಮಾಜಿ ಪ್ರಧಾನ ಕಾರ್ಯದರ್ಶಿ ಲಿಗೋದರ ಆಚಾರ್ಯ ನಿಧನ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಟೈಲರ್ ಯೂನಿಯನ್ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಲಿಗೋದರ ಆಚಾರ್ಯ ಅವರು ಇಂದು ನಿಧನರಾದರು. ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಜಯಂತಿ, ಪುತ್ರಿ ಅರ್ಚನಾ, ಪುತ್ರ ಅಭಿಷೇಕ್ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಾಳೆ ಬೆಳಗ್ಗೆ...

ನಿಧನ : ಚಂದ್ರಶೇಖರ ನೂಚಿಲ

ಸುಬ್ರಹ್ಮಣ್ಯ ಮಹಿಳಾ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ವಾರಿಜಾಕ್ಷಿ ರವರ ಪತಿ ಚಂದ್ರಶೇಖರ ನೂಚಿಲ ರವರು ಇಂದು(ಜು.13) ನಿಧನರಾಗಿದ್ದು, ಮೃತರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿಧನ : ಹಿರಿಯ ವೈದ್ಯ ಡಾ. ಸುಬ್ರಹ್ಮಣ್ಯ ಭಟ್ ಕೋಣೆತೋಟ – ನಾಳೆ ಬೆಳಿಗ್ಗೆ ಅಂತ್ಯಸಂಸ್ಕಾರ

ಕೊಡಗು-ಸಂಪಾಜೆಯ ಹಿರಿಯ ವೈದ್ಯರಾದ ಡಾ. ಸುಬ್ರಹ್ಮಣ್ಯ ಭಟ್ ಕೋಣೆತೋಟ ರವರು ಅಲ್ಪಕಾಲದ ಅಸೌಖ್ಯದಿಂದ(ವಯೋಸಹಜ) ಜು.11 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ದೇವಿ, ಶುಭಾ, ಸೊಸೆ ರೇಷ್ಮಾ, ಮೊಮ್ಮಗ ಶಾಂತನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ನಾಳೆ(ಜು.12) ಬೆಳಿಗ್ಗೆ ಅಂದಾಜು 10:00 ಗಂಟೆ ಸುಮಾರಿಗೆ ಸ್ವಗೃಹದಲ್ಲಿ ನೆರವೇರಲಿದೆ...

ಹಿರಿಯ ಯಕ್ಷಗಾನ ಕಲಾವಿದ ಗೋಪಾಲಕೃಷ್ಣ ಭಟ್ ಮಲೆಯಾಳ ಇನ್ನಿಲ್ಲ

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಮಲೆಯಾಳ ನಿವಾಸಿ ಗೋಪಾಲಕೃಷ್ಣ ಭಟ್ ಮಲೆಯಾಳ(93) ಶನಿವಾರ ಸ್ವಗೃಹದಲ್ಲಿ ನಿಧನರಾದರು.  ಪ್ರಗತಿಪರ ಕೃಷಿಕರಾಗಿಯೂ, ಹವ್ಯಾಸಿ ಯಕ್ಷಗಾನ ವೇಷ ಧಾರಿಯೂ, ಯಕ್ಷ ಗುರುಗಳಾಗಿಯೂ ಪ್ರಸಿದ್ಧಿ ಹೊಂದಿದ್ದರು. ಯಕ್ಷಗುರುಗಳಾದ ಇವರು ಪುತ್ತೂರು, ಸುಳ್ಯ ತಾಲೂಕಿನ ಅನೇಕ ಶಾಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ತರಬೇತಿ ನೀಡಿ ಮಕ್ಕಳು ಯಕ್ಷ ರಂಗಸ್ಥಳದಲ್ಲಿ ಮಿಂಚುವಂತೆ ಮಾಡಿದವರು....

ಐವರ್ನಾಡು: ಅಪಘಾತದ ಗಾಯಾಳು ಚಿಕಿತ್ಸೆ ಫಲಿಸದೇ ಮೃತ್ಯು

ಐವರ್ನಾಡಿನಲ್ಲಿ ಜೀಪು ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಜು. 8ರಂದು ನಡೆದಿದೆ. ಐವರ್ನಾಡಿನ ಪರ್ಲಿಕಜೆಯಲ್ಲಿ ಜು. 7ರಂದು ರಾತ್ರಿ ಜೀಪು ಬೈಕ್‌ ಡಿಕ್ಕಿಯಾಗಿ ಬೈಕ್ ಸವಾರ ಐವರ್ನಾಡು ಕೃಷಿ ಕಾಲನಿ ನಿವಾಸಿ ಚಂದ್ರಶೇಖರ (28) ಎಂಬವರು ಗಾಯಗೊಂಡಿದ್ದರು. ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು....

ಪಂಚಭೂತಗಳಲ್ಲಿ ಲೀನವಾದ ತೂಗುಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್‌ – ಸರ್ಕಾರದ ಗೌರವದೊಂದಿಗೆ ವಿದಾಯ – ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸೇರಿದಂತೆ ಸಾವಿರಾರು ಅಭಿಮಾನಿಗಳಿಂದ ಅಂತಿಮ ದರ್ಶನ

ತೂಗುಸೇತುವೆಗಳ ನಿರ್ಮಿಸುವ ಗ್ರಾಮೀಣ ಜನರ ಬದುಕಿಗೆ ನೆರವಾಗಿ "ಬ್ರಿಡ್ಜ್ ಮ್ಯಾನ್" ಎಂದೇ ಪ್ರಸಿದ್ಧಿಯಾಗಿ ಭಾರತ ಸರ್ಕಾರಿಂದ ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು. ಜನಪ್ರತಿನಿಧಿ ಹಾಗೂ ಅಧಿಕಾರಿಗಳು, ಗಣ್ಯರು, ಅಭಿಮಾನಿಗಳು ಸೇರಿದಂತೆ ಸಾವಿರಾರು ಜನ ಅಂತಿಮ ದರ್ಶನ ಪಡೆದರು. ಅರಂಬೂರಿನ ಅವರ ನಿವಾಸದಲ್ಲಿ ಅಂತಿಮ ವಿಧಿ...
Loading posts...

All posts loaded

No more posts

error: Content is protected !!