Ad Widget

ದುಗ್ಗಲಡ್ಕ ಕೊಡಿಯಾಬೈಲ್ ರಸ್ತೆ ಅಭಿವೃದ್ಧಿಗೆ ರೂ.50 ಲಕ್ಷ ಮಂಜೂರು – ಸಚಿವ ಅಂಗಾರ

ವಿಪರೀತ ಮಳೆಯಿಂದಾಗಿ ತೀರಾ ಹಾನಿಗೊಳಗಾದ ದುಗ್ಗಲಡ್ಕ ನೀರಬಿದಿರೆ ಕೊಡಿಯಾಲಬೈಲು ಜಟ್ಟಿಪಳ್ಳ ರಸ್ತೆಗೆ ಸಚಿವ ಎಸ್ ಅಂಗಾರ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನ ಪಂ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಳೆಯಿಂದಾಗಿ ಹದಗೆಟ್ಟಿರುವ ರಸ್ತೆ ಪರಿಸ್ಥಿತಿ ವಿವರಿಸಿದರು. ಈಗಾಗಲೇ ಈ ರಸ್ತೆಗೆ 50ಲಕ್ಷ ಮಂಜೂರಾಗಿದ್ದು ಆಯ್ದ ಸ್ಥಳಗಳಲ್ಲಿ ಕಾಂಕ್ರೀಟಿಕರಣ ನಡೆಸುವಂತೆ ಹಾಗೂ ಈ ರಸ್ತೆಗೆ ಇನ್ನಷ್ಟು ಅನುದಾನ ಒದಗಿಸುವುದಾಗಿ ಸಚಿವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ರಸ್ತೆಯ ಬದಿಯಲ್ಲಿ ಅತಿಕ್ರಮಣ ಮಾಡುವವರಿಗೆ ಹಾಗೂ ಜೆಸಿಬಿ ಮೂಲಕ ಬರೆ ನಿರ್ಮಿಸಿ ರಸ್ತೆಗೆ ಹಾನಿ ಉಂಟುಮಾಡುವವರಿಗೆ ನೋಟಿಸು ನೀಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಸಚಿವರು ಸೂಚಿಸಿದರು. ಈ ಸಂದರ್ಭದಲ್ಲಿ ನ ಪಂ ಸದಸ್ಯೆ ಶಶಿಕಲಾ ನೀರಬಿದಿರೆ, ಮಾಜಿ ನ ಪಂ ಅಧ್ಯಕ್ಷೆ ಶೀಲಾವತಿ, ಸ್ಥಳೀಯರಾದ ದಿನೇಶ್ ಮಣಿಯಣಿ, ಧನಂಜಯ, ಮಣಿಕಂಠ, ಶಿವನ್ ಕಂದಡ್ಕ, ಶ್ರೀರಂಗ, ಯತೀಶ, ಜಾಕಿ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!