Ad Widget

ಗುತ್ತಿಗಾರು : ರಾಘವೇಂದ್ರ ಬೇಕರಿ ಮಾಲಕರಿಂದ ವಿನೂತನ ಕಾರ್ಯಕ್ರಮ – ಹೊಸ ವರ್ಷದ ಮುನ್ನ ದಿನದ ವ್ಯಾಪಾರದ ಲಾಭವನ್ನು ಸಮಾಜಕ್ಕೆ ಹಸ್ತಾಂತರ

ಕಳೆದ ಹಲವಾರು ವರ್ಷದಿಂದ ತಮ್ಮ ಕಠಿಣ ಪರಿಶ್ರಮದ ಪರಿಣಾಮ ತಾಲೂಕಿನ ವಿವಿಧ ಕಡೆಗಳಲ್ಲಿ ತಮ್ಮ ಬೇಕರಿ ಮತ್ತು ಉಪಹಾರ ವ್ಯವಸ್ಥೆಯನ್ನು ಶುಚಿ ರುಚಿಯಾಗಿ ನೀಡುವುದರ ಜತೆಗೆ ಸಮಾಜಮುಖಿ ಕಾರ್ಯಕ್ರಮಗಳಿಗೆ ಕೊಡುಗೆ ನೀಡುವದರೊಂದಿಗೆ ಹಾಗೂ ಒಂದಷ್ಟು ಮಂದಿಗೆ ತಮ್ಮಿಂದ ಉದ್ಯೋಗ ದೊರಕುವಂತೆ ಮಾಡಿದ ಮಾಲಕರಾದ ಅನಿಲ್ ರವರು, ಕಳೆದ ಸಲ ಹೊಸ ವರ್ಷದ ಮುನ್ನದಿನದ ಬಿರಿಯಾನಿ ವ್ಯಾಪಾರದ...

ಸಂಪಾಜೆ : ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವದ ಆಮಂತ್ರಣ ಬಿಡುಗಡೆ

ಚೆಡಾವು ಸಂಪಾಜೆ ಸ್ವಾಮಿ ಕೊರಗಜ್ಜ ದೈವದ ಸನ್ನಿಧಿಯಲ್ಲಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಪೆರಾಜೆ ಶಾಸ್ತಾವು ದೇವಸ್ಥಾನದ ಮಾಜಿ ಧರ್ಮದರ್ಶಿಗಳಾದ ಶ್ರೀ ಸುರೇಶ್ ಪೆರುಮುಂಡ ರವರು ಬಿಡುಗಡೆ ಮಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ದೈವಸ್ಥಾನದ ಧರ್ಮದರ್ಶಿಗಳಾದ ಶ್ರೀ ಬಾಬು ಹೆಚ್ ಎಂ, ನೇಮೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಹುದೇರಿ ಶಿವಯ್ಯ (ರವಿ), ಸಮಾಜ...
Ad Widget

ನಾಳೆ (ಜ.02) ಬೆಳ್ಳಾರೆ ಹಾಗೂ ಗುತ್ತಿಗಾರು ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33 ಕೆ.ವಿ ಬೆಳ್ಳಾರೆ ಹಾಗೂ 33ಕೆ.ವಿ ಗುತ್ತಿಗಾರು ವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಫೀಡರುಗಳಲ್ಲಿ ಜ.02 ರಂದು ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ಬೆಳ್ಳಾರೆ ಹಾಗೂ ಗುತ್ತಿಗಾರು ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಸಾಯಂಕಾಲ 06:00 ರ ತನಕ ವಿದ್ಯುತ್ ವ್ಯತ್ಯಯ...

ದಿ| ಸುಧೀರ್ ರೈ ಮೇನಾಲ 1ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ

ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಕರ್ನಾಟಕ ದಕ್ಷಿಣಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ದಿ| ಸುಧೀರ್ ರೈ ಮೇನಾಲ 1ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು. ಸುಧೀರ್ ರೈ ಯವರ ಭಾವಚಿತ್ರಕ್ಕೆ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಗೌರವಾಧ್ಯಕ್ಷರಾದ ಮನೋಹರ ಪಲ್ಲತ್ತಡ್ಕ ರವರು ಹಾರಾರ್ಪಣೆ ಮಾಡಿದರು ವಿಷ್ಣು ಯುವಕ ಮಂಡಲದ ಅಧ್ಯಕ್ಷರಾದ ರಂಜಿತ್ ರೈ ಮೇನಾಲ...

ಕವನ : ಮಕ್ಕಳನ್ನು ಇತರರಿಗೆ ಹೋಲಿಸದಿರಿ…

ಅವರಂತೆ ಇಲ್ಲ, ಇವರಂತೆ ಇಲ್ಲ ಎಂದು ಮಕ್ಕಳನ್ನು ಇತರರಿಗೆ ಹೋಲಿಸದಿರಿ, ಪ್ರತೀ ಮಗುವಿನಲ್ಲೂ ಏನಾದರೂ ಒಂದು ಪ್ರತಿಭೆ ಇದ್ದೇ ಇರುತ್ತದೆ ಎನ್ನುವುದನ್ನು ಮರೆಯದಿರಿ…ಇಲ್ಲಿ ದಡ್ಡರು, ಬುದ್ದಿವಂತರು ಎನ್ನುವ ಬೇಧ-ಭಾವವಿಲ್ಲ, ಅವರಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ಸಿಕ್ಕರೆ ಇಲ್ಲಿ ಸಮಾನರೇ ಎಲ್ಲಾ…ಇಲ್ಲಿ ಚೆನ್ನಾಗಿ ಓದಲು ಬರುವವರು ಮಾತ್ರ ಬುದ್ಧಿವಂತರಲ್ಲ, ಚೆನ್ನಾಗಿ ಓಡಲು ಬರುವವರು ಕೂಡ ಬುದ್ಧಿವಂತರೇ, ಅವರಲ್ಲಿರುವ ಪ್ರತಿಭೆಯನ್ನು...

ಅಡ್ತಲೆ : ಬಾಕಿ ಉಳಿದಿರುವ ರಸ್ತೆ ಅಭಿವೃದ್ಧಿಗೆ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಶಾಸಕರಿಗೆ ಮನವಿ

ಅಗಲೀಕರಣ ಗೊಂಡ ಅರಂತೋಡು ಅಡ್ತಲೆ ರಸ್ತೆಯ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬ, ಮರಗಳನ್ನು ತೆಗೆಯಲು, ಬಾಕಿ ಉಳಿದಿರುವ ಎರಡನೇ ಕೋಟ್ ಡಾಮರೀಕರಣ ಹಾಗೂ ಪಿಂಡಿಮನೆಯಿಂದ ಅಡ್ತಲೆ ತನಕ ಅಗಲೀಕರಣ ಗೊಳ್ಳಲು ಬಾಕಿ ಇರುವ ರಸ್ತೆಯನ್ನು ಅತೀ ಶೀಘ್ರದಲ್ಲಿ ಸೂಕ್ತ ಅನುದಾನ ಒದಗಿಸಿಕೊಡಲು ಶಾಸಕರಾದ ಭಾಗೀರಥಿ ಮುರುಳ್ಯ ಅವರಿಗೆ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಮನವಿ ಮಾಡಲಾಯಿತು....

ಸುಳ್ಯ : ಬಸ್ ಚಾಲಕರ ಪ್ರತಿಭಟನೆ – ಬಿಕೋ ಎನ್ನುತ್ತಿರುವ ಸುಳ್ಯ ಬಸ್ ನಿಲ್ದಾಣ

ಗುತ್ತಿಗೆ ಆಧಾರದಲ್ಲಿ ಕೆ.ಎಸ್.ಆರ್.ಟಿ.ಸಿ. ಗೆ ನೇಮಕಗೊಂಡ ಚಾಲಕರಿಗೆ ಜನವರಿ 1 ರಿಂದ ಕೆಲಸ ನಿಲ್ಲಿಸುವಂತೆ ಮೆಸೇಜ್ ಬಂದಿರುವುದರಿಂದ ಚಾಲಕರು ಕರ್ತವ್ಯಕ್ಕೆ ಹಾಜರಾಗದೇ ಸುಳ್ಯ ಡಿಪೋದ ಎದುರು ಪ್ರತಿಭಟನೆ ನಡೆಸಿದ ಘಟನೆ ಹಾಗೂ ಬಸ್ ಇಲ್ಲದೇ ಪ್ರಯಾಣಿಕರ ಪರದಾಡಿದ ಘಟನೆ ಇಂದು ನಡೆದಿದೆ. ಸುಳ್ಯದಲ್ಲಿ ಕೆಲವೇ ಬಸ್ ಗಳಲ್ಲಿ ಸರಕಾರಿ ನೌಕರರಿದ್ದು ಅವರು ಚಾಲಕರಾಗಿರುವ ಲೈನ್ ಗಳಲ್ಲಿ...

ಗುತ್ತಿಗಾರು : ಅಮರ ಚಾರಿಟೇಬಲ್ ಟ್ರಸ್ಟ್ ಕಾರ್ಯ ಯೋಜನೆಗೆ ಉಡುಪಿ ನಗರಸಭಾ ಇಂಜಿನಿಯರ್ ದಿವಾಕರ ಕೊಂಬೆಟ್ಟು ಶ್ಲಾಘನೆ

ಗ್ರಾಮೀಣ ಪ್ರದೇಶವಾದ ಗುತ್ತಿಗಾರಿನಲ್ಲಿ ದಾನಿಗಳ ಸಹಕಾರದೊಂದಿಗೆ ಸೇವೆ ಸಲ್ಲಿಸುತ್ತಿರುವ ಆಂಬುಲೆನ್ಸ್ ಸೇವೆ, ಯೋಗ ತರಬೇತಿ ಕೇಂದ್ರ, ರಕ್ತದಾನ ಪೂರೈಕೆ ಶಿಬಿರ ಆಯೋಜನೆ ಮತ್ತು ವಿವಿಧ ಸೇವಾ ಯೋಜನೆ ಬಗ್ಗೆ ತಿಳಿದು ಉಡುಪಿ ನಗರ ಸಭಾ ಇಂಜಿನಿಯರ್ ದಿವಾಕರ ಕೊಂಬೆಟ್ಟು ಅವರು ಶ್ಲಾಘಿಸಿದ್ದು ಆಂಬುಲೆನ್ಸ್ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲಾ ದಾನಿಗಳಿಗೂ ಕೃತಜ್ಞತೆ ತಿಳಿಸಿದರು. ಈ...

ಕಿರ್ಲಾಯ : ವಿಜೃಂಭಣೆಯಿಂದ ನಡೆದ ಪೂಜಾರಿಮನೆ ಕುಟುಂಬದ ಧರ್ಮದೈವ ಪ್ರತಿಷ್ಠೆ ಮತ್ತು ಧರ್ಮ ನಡಾವಳಿ

ಅರಂತೋಡು ಗ್ರಾಮದ ಕಿರ್ಲಾಯ ಪೂಜಾರಿಮನೆ ತರವಾಡು ಕುಟುಂಬದ ದೇವಸ್ಥಾನದಲ್ಲಿ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಉಪದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ಧರ್ಮ ನಡಾವಳಿ ಡಿ.27 ರಿಂದ ಡಿ.29 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದೊಂದಿಗೆ, ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಸುಮಾರು 1500 ಸಾವಿರಕ್ಕೂ ಮಿಕ್ಕಿ ಜನ ಆಗಮಿಸಿ...

ಕಲ್ಲುಗುಂಡಿ : ಅಮ್ಮನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕ್ಯಾಲೆಂಡರ್ ಬಿಡುಗಡೆ

ಶ್ರೀ ಅಮ್ಮನ್ ಕ್ರಡಿಟ್ ಕೊ-ಓೕಪರೇಟಿವ್ ಸೊಸೈಟಿ ಕಲ್ಲುಗುಂಡಿ ಇದರ ವತಿಯಿಂದ 2024 ನೇ ವಷ೯ದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವು ಸಂಘದ ಕಛೇರಿಯಲ್ಲಿ ನಡೆಯಿತು. ಈ ಕಾಯ೯ಕ್ರಮಕ್ಕೆ ಸೊಸೈಟಿಯ ಷೇರುದಾರರು ಮುಖ್ಯ ಅಥಿತಿಗಳಾಗಿ ಆಗಮಿಸಿ ಹೊಸ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಈ ಕಾಯ೯ಕ್ರಮದಲ್ಲಿ ಅತಿಥಿಗಳಾಗಿ ಹಾಜಿ ಅಬ್ಬಾಸ್ ನ್ಯಾಷನಲ್ ಸ್ಟೋರ್, ಕಿಶೋರ್ ಕುಮಾರ್ ಸ್ಪಾಟ್ ಕಂಪ್ಯೂಟರ್, ಸುನಿಲ್ ಕುಮಾರ್...
Loading posts...

All posts loaded

No more posts

error: Content is protected !!