Ad Widget

ಜ.22: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠೆ – ಗುತ್ತಿಗಾರಿನಲ್ಲಿ ಭಜನಾ ಕಾರ್ಯಕ್ರಮ

ಅಯೋದ್ಯೆಯಲ್ಲಿ ಜ.22 ರಂದು ಶ್ರೀರಾಮನ ಮೂರ್ತಿಗೆ ಪ್ರಾಣಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ಗುತ್ತಿಗಾರಿನ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 9.30ರಿಂದ ಮದ್ಯಾಹ್ನ 1.00ರ ಭಜನೆ, ಕುಣಿತ ಭಜನೆ ನಡೆಯಲಿದೆ ಎಂದು ಶ್ರೀ ಕೃಷ್ಣಾಭಜನಾ ಮಂದಿರದ ಅಧ್ಯಕ್ಷರು ತಿಳಿಸಿದ್ದಾರೆ.

ಸುಳ್ಯದ ಕಾಂಗ್ರೆಸ್ಸಿಗರದು ನೈಜ ರಾಮ ಭಕ್ತಿಯ ಅನಾವರಣವೋ ಅಲ್ಲ ಹಿಂದುತ್ವದ ಅನಿವಾರ್ಯತೆಯೋ : ಸುಳ್ಯ ಮಂಡಲ ಬಿಜೆಪಿ ಪ್ರಶ್ನೆ

ಕಾಂಗ್ರೆಸ್ಸಿನ ಹೈಕಮಾಂಡ್ ರಾಮಮಂದಿರದ ಉದ್ಘಾಟನೆಗೆ ಹೋಗುವುದಿಲ್ಲವೆಂದು ಈಗಾಗಲೇ ಘೋಷಿಸಿದ್ದರೂ ಸುಳ್ಯದ ಕಾಂಗ್ರೆಸ್ ನಾಯಕರು ರಾಮಮಂದಿರದ ಉದ್ಘಾಟನೆಯ ದಿವಸ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ದೇವಸ್ಥಾನಗಳಲ್ಲಿ ಸೇರಿ ಪೂಜೆ ಹಾಗೂ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬೇಕೆಂದು ಸುಳ್ಯದ ಕಾಂಗ್ರೆಸಿಗರು ಕರೆ ನೀಡಿರುವುದು ಅಭಿನಂದನೀಯ ಎಂದು ಸುಳ್ಯ ಬಿಜೆಪಿ ಪ್ರತಿಕ್ರಿಯೆಸಿದೆಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರು ಹಿಂದಿನಿಂದಲೂ ರಾಮನ ಅಸ್ತಿತ್ವವನ್ನು ಪ್ರಶ್ನೆ ಮಾಡುತ್ತ ರಾಮನ ವಿರುದ್ಧವಾಗಿ,...
Ad Widget

ಪೆರುವಾಜೆ : ಜ.16 ರಂದು ಹಸಿರು ಹೊರೆಕಾಣಿಕೆಯ ಅದ್ದೂರಿ ಮೆರವಣಿಗೆ – ಚೆಂಡೆ ವಾದನದೊಂದಿಗೆ ಮೂರುವರೆ ಕಿ.ಮೀ. ದೂರದಿಂದ ಮೆರವಣಿಗೆ

ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಜ.16 ರಂದು ಬೆಳ್ಳಾರೆಯಿಂದ ಪೆರುವಾಜೆ ಶ್ರೀ ಕ್ಷೇತ್ರದ ತನಕ ನಡೆಯಲಿರುವ ಹಸುರು ಹೊರೆಕಾಣಿಕೆ ಮೆರವಣಿಗೆಯು ವೈಭವದಿಂದ ನಡೆಯಲಿದ್ದು ಕ್ಷೇತ್ರದ ಭಕ್ತವೃಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ...

ತೊಡಿಕಾನ : ಧನು ಪೂಜೆ ಸಂಪನ್ನ

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾದಲ್ಲಿ ಧನು ಪೂಜೆ ಒಂದು ತಿಂಗಳ ಕಾಲ ನಡೆದು ಇಂದು ಸಂಪನ್ನಗೊಂಡಿತು. ನೂರಾರು ಭಕ್ತರು ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ‌ 👉ಶ್ರೀ ಕ್ಷೇತ್ರದಲ್ಲಿ ಮುಂದೆ ನಡೆಯಲಿರುವ ಕಾರ್ಯಕ್ರಮಗಳ ವಿವರ : ಜ.18ನೇ ಗುರುವಾರ ದಂದು ಚಾಕಟೆಡಿಗೆ ಗೊನೆ ಕಡಿಯುವುದು, ಜ. 25ನೇ ಗುರುವಾರದಂದು ಚಾಕಟೆಡಿ ನೇಮ, ಜ. 26ನೇ...

ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ

ಭಾರತೀಯ ವಾಯುಪಡೆಗೆ ಅಗ್ನಿವೀರರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಐಎಎಫ್ ಅಗ್ನಿವೀರ್ ವಾಯು ನೇಮಕಾತಿ 2024 ನೋಂದಣಿಯು ಜನವರಿ 17ರಂದು ಪ್ರಾರಂಭವಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಹತೆ, ವಯಸ್ಸಿನ ಮಿತಿ, ನೇಮಕಾತಿ ವಿವರಗಳು, ಅರ್ಜಿಶುಲ್ಕ, ಪೋಸ್ಟ್‌ಗಳ ಸಂಖ್ಯೆ ಮತ್ತು ಇತರ ವಿವರಗಳನ್ನು ಅಧಿಕೃತ ವೈಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. 2024 ಫೆಬ್ರವರಿ 6ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿಗಳನ್ನು...

ಚೊಕ್ಕಾಡಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರಂಭ- ಸನ್ಮಾನ, ಬಹುಮಾನ ವಿತರಣೆ

ಜ.13 ರಂದು ಅಮರಮುಡ್ನೂರಿನ ಚೊಕ್ಕಾಡಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಎರಡನೇಯ ದಿನದ ಸಭಾ ಸಮಾರಂಭವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮಾಜಿ ಸಚಿವ ಎಸ್.ಅಂಗಾರ ರವರು ವಹಿಸಿದ್ದರು. ವೇದಿಕೆಯ ಮುಖ್ಯ ಅಭ್ಯಾಗತರಾಗಿ ಮಂಗಳೂರು ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ರವರು ಮಾತನಾಡಿ ” ದೇಶದಲ್ಲಿ ಶಿಕ್ಷಣಕಾಶಿ ಎಂಬ ಬಿರುದು ಪಡೆದ...

ದೇವ : ಉಳ್ಳಾಕುಲು ಮತ್ತು ಸಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರಮದಾನ – ಜ.20 ರಿಂದ 22 ರವರೆಗೆ ವಾರ್ಷಿಕ ನೇಮೋತ್ಸವ

ಶ್ರೀ ಉಳ್ಳಾಕುಲು ಮತ್ತು ಮಲೆ ದೈವಗಳ ದೈವಸ್ಥಾನ ದೇವ ಇದರ ವಾರ್ಷಿಕ ಜಾತ್ರೋತ್ಸವ ಜ.20 ರಿಂದ 22 ರವರೆಗೆ ನಡೆಯಲಿದೆ. ಆ ಪ್ರಯುಕ್ತ ದೈವಸ್ಥಾನದ ವಠಾರದಲ್ಲಿ  ಶ್ರಮದಾನ ನಡೆಯಿತು.  ದೇವ ಗೆಳೆಯರ ಬಳಗದ ಸದಸ್ಯರು ಹಾಗೂ ಊರವರು ಶ್ರಮದಾನದಲ್ಲಿ ಭಾಗವಹಿಸಿದ್ದರು.

ನೀವು ಉದ್ಯೋಗ ಹುಡುಕುತ್ತಿದ್ದೀರಾ – ಇಲ್ಲಿದೆ ಸುವರ್ಣಾವಕಾಶ

ನೀವು ಉದ್ಯೋಗ ಹುಡುಕುತ್ತಿದ್ದೀರಾ, ಪಾರ್ಟ್ ಟೈಮ್ ಹಾಗೂ ಫುಲ್ ಟೈಮ್ ಜಾಬ್ ಮಾಡಲು ನಾವು ನಿಮಗೆ ಸುವರ್ಣಾವಕಾಶ ಒದಗಿಸುತ್ತಿದ್ದೇವೆ.ಅಮರ ಸುಳ್ಯ ಸುದ್ದಿ ವಾರಪತ್ರಿಕೆ, ಅಮರ ಸುದ್ದಿ ವೆಬ್ಸೈಟ್ ಹಾಗೂ ಯೂಟ್ಯೂಬ್ ಲೈವ್ ವಾಹಿನಿಯಲ್ಲಿ ಫೀಲ್ಡ್ ವರ್ಕ್ ಮಾಡಲು ಆಸಕ್ತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ನಿಮ್ಮೂರಿನಲ್ಲಿಯೇ ಇದ್ದು ಕಾರ್ಯನಿರ್ವಹಿಸಬಹುದು. ಆಸಕ್ತರು ನಿಮ್ಮ ಬಯೋಡೇಟಾ ಕಳುಹಿಸಿ...

ಖೇಲೋ ಇಂಡಿಯಾ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾದ ಬೆಳ್ಳಾರೆ ಕೆಪಿಎಸ್ ನ ವಿದ್ಯಾರ್ಥಿಗಳಿಗೆ ಅಭಿನಂದನೆ

ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ ಕಬಡ್ಡಿ ತಂಡವನ್ನು ಪ್ರತಿನಿಧಿಸಿರುವ ಬೆಳ್ಳಾರೆ ಕೆಪಿಎಸ್‌ ವಿದ್ಯಾರ್ಥಿಗಳಾದ ಕಿಶನ್ ದ್ರಾವಿಡ್ ಹಾಗೂ ಹೇಮಂತ ಕೆ. ವಿ, ದೈಹಿಕ ಶಿಕ್ಷಣ ಶಿಕ್ಷಕಿ ಹಾಗೂ ಕ್ರೀಡಾಧಿಕಾರಿಯಾದ ಶ್ರೀಮತಿ ಪುಷ್ಪಾವತಿ ಇವರನ್ನು ಪಡ್ಡಿನಂಗಡಿ ನಾಗರಿಕರು ಸ್ವಾಗತಿಸಿ ಅಭಿನಂದಿಸಲಾಯಿತು. ಇವರು ಮುಂದೆ ಇವರು ಖೇಲೋ ಇಂಡಿಯಾ...

ಪಂಜ : ಧನು ಪೂಜೆ ಸಂಪನ್ನ- ಪಂಬೆತ್ತಾಡಿ ಪಂಚಶ್ರೀ ಭಜನಾ ತಂಡದಿಂದ ಭಜನೆ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾದಲ್ಲಿ ಧನು ಪೂಜೆಯ ಕೊನೆಯ ದಿನವಾದ ಇಂದು ಮುಂಜಾನೆ ಗಂಟೆ 4 ರಿಂದ 5-30 ರ ವರೆಗೆ ಪಂಬೆತ್ತಾಡಿ ಪಂಚಶ್ರೀ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರಗಿತು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
Loading posts...

All posts loaded

No more posts

error: Content is protected !!