Ad Widget

ಸುಳ್ಯದಲ್ಲಿ ಹೆಚ್ಚುತ್ತಿರುವ ಕಳ್ಳತನ , ಬ್ಯಾನರ್ ಹರಿತ ಪ್ರಕರಣ ಕುರಿತಾಗಿ ಬ್ಲಾಕ್ ಕಾಂಗ್ರೆಸ್ ನಿಯೋಗ ಇನ್ಸ್ಪೆಕ್ಟರ್ ಭೇಟಿ ಮಾತುಕತೆ.

ಸುಳ್ಯದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು ಮತ್ತು ಅಲ್ಲಲ್ಲಿ ಬ್ಯಾನರ್ ಹರಿದ ಪ್ರಕರಣಗಳು ಕಂಡು ಬರುತ್ತಿದ್ದು ಪೋಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಬ್ಲಾಕ್ ಕಾಂಗ್ರೆಸ್ ನಾಯಕರು ತೀವ್ರ ಬೇಸರ ವ್ಯಕ್ತ ಪಡಿಸಿದರಲ್ಲದೆ ಕಾಂಗ್ರೆಸ್ ನಿಯೋಗವು ಇನ್ಸ್ಪೆಕ್ಟರ್ ಕಛೇರಿಗೆ ತೆರಳಿ ಸುಳ್ಯದ ಕೆಲ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ತನಿಖೆ ಪೂರ್ಣಗೊಳಿಸಿ ನೈಜ ಆರೋಪಿಗಳನ್ನು ಸಮಾಜಕ್ಕೆ ತಿಳಿಸಬೇಕು ಅಲ್ಲದೆ...

ಮೇನಾಲದಲ್ಲಿ ಸ್ಕೂಟಿ ಮತ್ತು ಕಾರು ನಡುವೆ ಅಪಘಾತ ಆಸ್ಪತ್ರೆಗೆ ದಾಖಲು .

ಸುಳ್ಯ ಅಜ್ಜಾವರ ಮೇನಾಲದಲ್ಲಿ ಇದೀಗ ಕಾರು ಮತ್ತು ಸ್ಕೂಟರ್ ಮಧ್ಯೆ ಅಪಘಾತವಾಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ . ಸ್ಕೂಟರ್ ಅಪಘಾತದ ರಭಸಕ್ಕೆ ರಸ್ತೆಯ ಪಕ್ಕದಲ್ಲಿರುವ ರಾಜೇಶ್ ಪಣಿಕ್ಕಾರ್ ರವರ ಮನೆಯ ಅಂಗಳಕ್ಕೆ ಬಿದ್ದಿದೆ ಎಂದು ಹೇಳಲಾಗುತ್ತಿದ್ದು ಗಾಯಗೊಂಡವರನ್ನು ಶಶಿಧರ ಶಿರ್ವಾಜೆಯವರ ಪತ್ನಿ ಮತ್ತು ಮಗಳು ಎಂದು ತಿಳಿದುಬಂದಿದೆ ಇದೀಗ ಗಾಯಳುಗಳನ್ನು ಸ್ಥಳೀಯರು ಸರಕಾರಿ ಆಸ್ಪತ್ರೆಗೆ...
Ad Widget

ನೈತಿಕ ಪೋಲೀಸ್ ಗಿರಿ ಆರೋಪ – ಯುವಕನಿಂದ ಪೋಲೀಸ್ ದೂರು

ಸುಳ್ಯ ಜಾತ್ರೆಗೆ ಆಗಮಿಸಿದ್ದ ಸುಳ್ಯದ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದಿರುವ ಬಗ್ಗೆ ತಿಳಿದು ಬಂದಿದೆ. ಸುಳ್ಯದ ಗುತ್ತಿಗಾರಿನ ಯುವಕ ತನ್ನ ಸಹಪಾಠಿಗಳೊಂದಿಗೆ ಜ.೧೨.ರಂದು ಸುಳ್ಯ ಜಾತ್ರೋತ್ಸವ ನಡೆಯವ ಜಾಗದಲ್ಲಿ ತಿಂಡಿ ತಿನ್ನುತ್ತಾ ಅನ್ಯ ಕೋಮಿನ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ ಎಂಬ ಕಾರಣಕ್ಕೆ ಕೆಲ ಯುವಕರ ತಂಡ ಹಲ್ಲೆ ನಡೆಸಿದ್ದು ವಿನಾಕಾರಣ ತನ್ನ ಮೇಲೆ...

ಬಾಕಿಲ : ಕಾರು – ಬೈಕ್ ಡಿಕ್ಕಿ , ಸವಾರನಿಗೆ ಗಾಯ

ಗುತ್ತಿಗಾರಿನ ಬಾಕಿಲ ಬಳಿ ಓಮಿನಿ ಕಾರು ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಇಂದು ನಡೆದಿದೆ. ಹಾಲೆಮಜಲಿನ ಶಿವಪ್ರಸಾದ್ ಚಲಾಯಿಸುತ್ತಿದ್ದ ಬೈಕ್ ಗೆ ಕಾರು ಢಿಕ್ಕಿಯಾಗಿದ್ದು ಗಾಯಗೊಂಡ ಸವಾರನ್ನು ಕೆ.ವಿ.ಜಿ‌. ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಜ. 17: ಮಂಡೆಕೋಲು ಪ್ರಾ.ಕೃ.ಪ.ಸ.ಸಂಘದ ಪೇರಾಲು – ಅಂಬ್ರೋಟಿ ನವೀಕೃತ ಶಾಖೆಯ ಉದ್ಘಾಟನೆ

ಸುಳ್ಯ : ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪೇರಾಲು - ಅಂಬ್ರೋಟಿ ಶಾಖೆಯ ಗೋದಾಮು ಕಟ್ಟಡ, ಮಲ್ಟಿ ಸರ್ವಿಸ್ ಸೆಂಟರ್ ಹಾಗೂ ನವೀಕೃತ ಶಾಖೆಯ ಉದ್ಘಾಟನಾ ಸಮಾರಂಭವು ಜ.17ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪೇರಾಲುಗುತ್ತು ರಾಮಕೃಷ್ಣ ರೈ ತಿಳಿಸಿದ್ದಾರೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಎಂ. ಎನ್. ರಾಜೇಂದ್ರ ಕುಮಾರ್...

ರಾಮ ಮಂದಿರ ಪ್ರಾಣಪ್ರತಿಷ್ಟೆ ಮುಜರಾಯಿ ದೇವಾಲಯಗಳಲ್ಲಿ ಪೂಜೆಗೆ ಆದೇಶ ಸ್ವಾಗತಾರ್ಹ – ಬ್ಲಾಕ್ ಕಾಂಗ್ರೆಸ್

ಬ್ಯಾನರ್ ಹರಿದ ಪ್ರಕರಣ ಕಳ್ಳತನ ಪ್ರಕರಣಗಳ ಸತ್ಯ ತಿಳಿಸದ ಪೋಲೀಸರ ಮೇಲೆ ಅಸಮಾಧಾನ, ಉಸ್ತುವಾರಿ ಸಚಿವರಿಗೆ ದೂರು ನೀಡಲು ಬ್ಲಾಕ್ ಕಾಂಗ್ರೆಸ್ ತೀರ್ಮಾನ ಸುಳ್ಯ ತಾಲೂಕಿನ ನಾನ ಭಾಗದಲ್ಲಿ ನಡೆಯತ್ತಿರುವ ಕಳ್ಳತನ ಹಾಗೂ ಇತರೆ ವಿಚಾರಗಳ ಕುರಿತಾಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯು ಇಂದು ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಯನ್...

ಬಳ್ಪ; ಆದರ್ಶ ಗ್ರಾಮ ಬಳ್ಪದ ಗ್ರಾಮೋತ್ಸವ ಕಾರ್ಯಕ್ರಮ

ಜ.೧೨ ರಂದು ಬಳ್ಪ ಶಾಲಾ ಆವರಣದಲ್ಲಿ ಗ್ರಾಮ ವಿಕಾಸ ಪ್ರತಿಷ್ಠಾನ ಬಳ್ಪ-ಕೇನ್ಯ, ಗ್ರಾಮೋತ್ಸವ ಸಮಿತಿ ಆಶ್ರಯದಲ್ಲಿ ನಡೆದ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರ ಸಂಸದರ ಆದರ್ಶ ಗ್ರಾಮ ಬಳ್ಪದ ಗ್ರಾಮೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಮತ್ತು ೮ ಕೋಟಿ ರೂ.ವೆಚ್ಚದ ಆರು ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ವೇದಿಕೆಯನ್ನೂದ್ದೇಶಿಸಿ ನಳಿನ್ ಕುಮಾರ್ ಕಟೀಲ್...

ಬೆಳ್ಳಾರೆ ಕೆ.ಪಿ.ಎಸ್.ವಿದ್ಯಾರ್ಥಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯದಲ್ಲಿ ದ್ವಿತೀಯ ; ಖೇಲೋ ಇಂಡಿಯಾ ಪಂದ್ಯಾಟಕ್ಕೆ ಆಯ್ಕೆ

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟ ತೆಲಂಗಾಣದಲ್ಲಿ ನಡೆಯಿತು. ೧೭ ವರ್ಷದ ಹುಡುಗರ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕ ಕಬಡ್ಡಿ ತಂಡವನ್ನು ಪ್ರತಿನಿಧಿಸಿರುವ ಬೆಳ್ಳಾರೆ ಕೆ.ಪಿ.ಎಸ್. ಸಂಸ್ಥೆಯ ೧೦ ನೇ ತರಗತಿಯ ವಿದ್ಯಾರ್ಥಿಗಳಾದ ಕಿಶನ್ ದ್ರಾವಿಡ್ ಹಾಗೂ ಹೇಮಂತ ಕೆ. ವಿ ಇವರು ಖೇಲೋ ಇಂಡಿಯಾ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಕೆಪಿಎಸ್ ನ ದೈಹಿಕ...

ಶಿಕ್ಷಣವು ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕಾಗಿದೆ- ಕೊಟ ಶ್ರಿನಿವಾಸ ಪೂಜಾರಿ; ಪಠ್ಯ ಪುಸ್ತಕ ರಚನೆಯಲ್ಲಿ ರಾಜಕಾರಣಿಗಳು ಕೈ ಹಾಕಬಾರದು ಎಸ್.ಎಲ್.ಭೋಜೇ

ರಾಜ್ಯದಲ್ಲಿ ಸರಕಾರಿ ಶಾಲೆ, ಅನುದಾನಿತ ಶಾಲೆ ಎಂಬ ತಾರತಮ್ಯ ಬದಲಾಗಬೇಕಾಗಿದೆ. ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸಮಾನವಾದ ರೀತಿಯ ಅನುದಾನ, ಸೌಕರ್ಯ ಹಂಚಿಕೆಯಾಗಬೇಕು. ಇದಕ್ಕಾಗಿ ಸರಕಾರಿ‌ ಮಟ್ಟದಲ್ಲಿ ಪ್ರಯತ್ನ ನಡೆಸಬೇಕಾಗಿದೆ.ಈ ಹಿನ್ನಲೆಯಲ್ಲಿ ಸರಕಾರದ ಹಿಂದಿನಿಂದಲು ಗಮನ ಸೆಳೆಯುತ್ತ ಬಂದಿದ್ದೆನೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮೂರು ದಿನಗಳ ಕಾಲ...

ಸುಳ್ಯ ನಗರ ಯೋಜನಾ ಪ್ರಾಧಿಕಾರದ ಮಹಾಯೋಜನೆ ಪರಿಷ್ಕರಣೆ ಅನುಮೋದನೆ ಬಗ್ಗೆ ಇಲಾಖೆಗಳ ಸಭೆ ಕರೆಯುವಂತೆ ಮನವಿ

ಸುಳ್ಯ ನಗರ ಯೋಜನಾ ಮಹಾಯೋಜನೆಗೆ .ತಾತ್ಕಾಲಿಕ ಅನುಮೋದನೆ ದೊರೆತಿರುತ್ತದೆ. ಈ ಪ್ರಾಧಿಕಾರದಿಂದ ಮಹಾಯೋಜನೆಯಲ್ಲಿ ಪರಿಷ್ಕರಣೆಯೊಂದಿಗೆ ಅನುಮೋದನೆ ನೀಡುವ ಬಗ್ಗೆ ಇಲಾಖಾ ಅಧಿಕಾರಿಗಳ, ಉಸ್ತುವಾರಿ ಸಚಿವರ, ಇಲಾಖಾ ಸಚಿವರ ಸಭೆ ನಡೆಸಿ ಪರಿಹಾರ ಒದಗಿಸಿ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಶಹೀದ್ ಪಾರೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ. ಸುಳ್ಯ ನಗರ ಪಂಚಾಯತ್ ಅಧಿಕಾರಿಗಳು ಸುಳ್ಯದ...
Loading posts...

All posts loaded

No more posts

error: Content is protected !!