Ad Widget

ದ.ಕ ತಮಿಳು ಸೇವಾ ಸಂಘ (ರಿ) ಇದರ , ವಾರ್ಷಿಕ ಮಹಾಸಭೆ… ನೂತನ ಪದಾಧಿಕಾರಿಗಳ ನೇಮಕ



ಸುಳ್ಯ: ದ.ಕ ತಮಿಳು ಸೇವಾ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀಕಾಂತ್ ನಾಗ ಪಟ್ಟಣರವರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ನಡೆಯಿತು. ವಾರ್ಷಿಕ ವರದಿಯನ್ನು ಅಧ್ಯಕ್ಷರಾದ ಶ್ರೀಕಾಂತ್ ಸಭೆಯಲ್ಲಿ ಮಂಡಿಸಿದರು. ಈ ಸಂದರ್ಭದಲ್ಲಿ ಮುಂದಿನ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕ ಮಾಡಲಾಯಿತು, ಅಧ್ಯಕ್ಷರಾಗಿ ಶರತ್ ಕುಮಾರ್ ನಾಗಪಟ್ಟಣ, ಉಪಾಧ್ಯಕ್ಷರಾಗಿ ಶಿವಬಾಲನ್ ಕೊಣಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಕಾರ್ತಿಕ್ ಕೂಟೇಲ್, ಕೋಶಾಧಿಕಾರಿಯಾಗಿ ಗಣೇಶ್ ಕೊಡಿಯಾಲ್ ಬೈಲ್ ನೇಮಕಗೊಂಡರು. ಪ್ರಸ್ತುತ ಸಾಲಿನ ಸಂಘದ ಗೌರವ ಅಧ್ಯಕ್ಷರಾಗಿ ಚಂದ್ರಲಿಂಗಂ ಬೇಂಗಮಲೆ ಯವರನ್ನು ನೇಮಕಗೊಳಿಸಲಾಯಿತು. ಸದರಿ ಸಮಿತಿಯ ಜೊತೆ ಕಾರ್ಯದರ್ಶಿಗಳಾಗಿ ಸಂಜಯ್ ನಾಗಪಟ್ಟಣ, ಪುಷ್ಪರಾಜ್ ನಾಗಪಟ್ಟಣ,ಕಣ್ಣನ್ ಓಟಕಜೆ, ಸತೀಶ್ ಕಲ್ಲುಗುಂಡಿ, ಆನಂದ ಕುಕ್ಕಂದೂರು, ತ್ಯಾಗರಾಜ ಕಡಬ, ಪೂಬಾಲನ್ ಪೆರ್ಲಪಾಂಡಿ, ಸರ್ವಾನುಮತದಿಂದ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರಾದ, ಆರಕ್ಷಕ ಉಪನಿರೀಕ್ಷಕರಾದ ವಿಜಯರಾಜ್, ಪ್ರಾಂಶುಪಾಲರಾದ ಗಣಪತಿ ಪ್ರಸ್ತಾವಿಕ ಮಾತನಾಡಿದರು. ಪೆರುಮಾಳ್ ಐವರ್ನಾಡು ಸ್ವಾಗತಿಸಿ, ದಯಾಳ್ ಬಾರ್ಪಣೆ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾಹಿರಿಯ ಸಮಾಜ ಬಾಂಧವರು, ಮತ್ತು ಯುವಕ ಮಿತ್ರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!