Ad Widget

ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ವಿಶ್ವ ಅವಳಿ ಜವಳಿ ದಿನಾಚರಣೆ

ಬೆಳ್ಳಾರೆಯ ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು ಆರು ಜೋಡಿ ಅವಳಿ ಜವಳಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಸೋಮವಾರ ವಿಶ್ವ ಅವಳಿ ಜವಳಿ ದಿನಾಚರಣೆಯ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ವತಿಯಿಂದ ಅವಳಿ ಜವಳಿ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಪ್ರಶಂಶಿಸಲಾಯಿತು. ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಸುನೈನ ಬಿ ಅವರು...

ನಾಗಪಟ್ಟಣ ಅಂಗನವಾಡಿ ಕೇಂದ್ರದ ಬಳಿ ಕಸ ತ್ಯಾಜ್ಯ ಹಾಕಿರುವ ಬಗ್ಗೆ ಸಾರ್ವಜನಿಕರಿಂದ ಮತ್ತೊಂದು ದೂರು ದಾಖಲು

ನಾಗಪಟ್ಟನದಲ್ಲಿ ಸುಳ್ಯ ನಗರ ಪಂಚಾಯತಿನವರು ಪಯಸ್ವಿನಿ ನದಿ ತೀರದಲ್ಲಿ ಕಸ ತ್ಯಾಜ್ಯ ಹಾಕಿ ಪ್ರಕರಣ ಮಾಸುವ ಮುನ್ನ ಮತ್ತೊಂದು ಪ್ರಕರಣ ಆಲೆಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ನಗಪಟ್ಟನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕೇಂದ್ರ ಇದ್ದು, ಕೇಂದ್ರದ ಹಿಂಭಾಗ ಕಳೆದ ಸುಮಾರು ವರ್ಷಗಳಿಂದ ಸಾರ್ವಜನಿಕರು ಕಸ ತ್ಯಾಜ್ಯ ಹಾಕುತ್ತಿದ್ದು ಇದನ್ನು ತೆಗೆಸುವಂತೆ ಇಂದು...
Ad Widget

ಸೇವಾಜೆ : ಅಯ್ಯಪ್ಪ ವೃತದಾರಿ ಯುವಕ ಸಂಶಯಾಸ್ಪದ ಸಾವು

ಸೇವಾಜೆ ಬಳಿ ಅಯ್ಯಪ್ಪ ವೃತದಾರಿ ತನ್ನ ಆಶ್ರಮದಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಇದೀಗ ವರದಿಯಾಗಿದೆ. ದೇವಚಳ್ಳ ಗ್ರಾಮದ ದೇವ ದಿ.ಹೊನ್ನಪ್ಪ ಎಂಬವರ ಪುತ್ರ ಪದ್ಮನಾಭ (26) ಎಂಬವರೇ ಮೃತ ವ್ಯಕ್ತಿ. ಸೇವಾಜೆ ಬಳಿಯ ಆಶ್ರಮದಲ್ಲಿ ಅಯ್ಯಪ್ಪ ಮಾಲೆ ಧರಿಸಿ ವೃತಚಾರಣೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಮೃತ ಪದ್ಮನಾಭ ಅವರ...

ಮೆಸ್ಕಾಂ ಜಾಗೃತಿದಳ ಧೀಡೀರ್ ಭೇಟಿ , ಗೃಹ ಉಚಿತ ಪಂಪುಸೆಟ್ಟ್ ಗಳ ನೀರು ಬಳಕೆ ಪರಿಶೀಲನೆ

ಸುಳ್ಯ ಜಾಲ್ಸೂರು ಮೆಸ್ಕಾಂ ಉಪವಿಭಾಗಕ್ಕೆ ಸಂಭದಿಸಿದ ಗ್ರಾಮಗಳಲ್ಲಿ ಮನೆ ಮತ್ತು ಕೃಷಿ ಬಳಕೆಯ ಪಂಪುಸೆಟ್ಟ್ ಗಳ ಬಳಕೆ ಕುರಿತಾಗಿ ಜಾಗೃತಿ ದಳವು ಕಾಂತಮಂಗಲದಲ್ಲಿ ಇಂದು ಪರಿಶೀಲನೆ ನಡೆಸಿದರು . ಈ ಸಂದರ್ಭದಲ್ಲಿ ಹಿರಿಯ ಜಾಗೃತದಳದ ಅಧಿಕಾರಿಗಳು ಮತ್ತು ಮೆಸ್ಕಾಂ ಪೋಲಿಸರು ಉಪಸ್ಥಿತರಿದ್ದರು.

ಸುಳ್ಯ‌ ಸಿ.ಎ. ಬ್ಯಾಂಕ್ ಚುನಾವಣೆ; ಸಹಕಾರ ಭಾರತಿ 12 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಸುಳ್ಯ ಸಿ.ಎ. ಬ್ಯಾಂಕ್ ಆಡಳಿತ ಮಂಡಳಿಗೆ ಡಿ.31 ರಂದು‌ ಚುನಾವಣೆ ನಡೆಯಲಿದ್ದು ಸಹಕಾರ ಭಾರತಿಯಿಂದ 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.ಸಾಮಾನ್ಯ ಸಾಲಗಾರರ‌ ಕ್ಷೇತ್ರದಿಂದ ಶಿವರಾಮ ಕೇರ್ಪಳ, ಎನ್.ಎ.ರಾಮಚಂದ್ರ, ಪ್ರಬೋದ್ ಶೆಟ್ಟಿ, ವಿಕ್ರಂ ಅಡ್ಪಂಗಾಯ, ವಾಸುದೇವ ಪುತ್ತಿಲ, ಮಹಿಳಾ‌ ಮೀಸಲು ಕ್ಷೇತ್ರದಿಂದ ನವ್ಯಾ ಚಂದ್ರಶೇಖರ, ಹರೀಣಾಕ್ಷಿ ಬೇಲ್ಯ, ಎ ಮೀಸಲು ಸ್ಥಾನ ದಿಂದ ಹೇಮಂತ್ ಕುಮಾರ್ ಕಂದಡ್ಕ,...

ಬಿಜೆಪಿಗೆ ರಾಜೀನಾಮೆ ಘೋಷಿಸಿದ ರಾಧಾಕೃಷ್ಣ ಬೊಳ್ಳೂರು

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾಗಿರುವ ರಾಧಾಕೃಷ್ಣ ಬೊಳ್ಳೂರು ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿ ನಡೆಸಿದ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ಘೋಷಿಸಿದ್ದಾರೆ.

ವಿಷ್ಣು ಯುವಕ ಮಂಡಲ(ರಿ) ಮೇನಾಲ ವತಿಯಿಂದ ಮೇನಾಲ ಶಾಲೆಯಲ್ಲಿ ಶ್ರಮದಾನ

ವಿಷ್ಣು ಯುವಕ ಮಂಡಲ ವತಿಯಿಂದ ಮೇನಾಲ ಶಾಲೆಯಲ್ಲಿ ಶ್ರಮದಾನ ಮೂಲಕ ಪೈಂಟಿಂಗ್ ಕೆಲಸ ಮಾಡಲಾಯಿತು ವಿಷ್ಣು ಯುವಕ ಮಂಡಲದ ಪದಾಧಿಕಾರಿಗಳು ಸದಸ್ಯರುಗಳು ಭಾಗವಹಿಸಿದರು

ಸುಳ್ಯ ಕ್ರೈಸ್ತ ಅಲ್ಪಸಂಖ್ಯಾತರ ಸಹಕಾರಿ ಸಂಘದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ.ವಿಶ್ವನಾಥರಿಗೆ ಸನ್ಮಾನ- ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ

ಸುಳ್ಯ ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ‌.ವಿಶ್ವನಾಥರಿಗೆ ಸನ್ಮಾನ ಕಾರ್ಯಕ್ರಮ ಡಿ.18ರಂದು ನಡೆಯಿತು.ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಈ ಸನ್ಮಾನವನ್ನು ಸಂಘದ ಅಧ್ಯಕ್ಷರಾದ ಬಿಟ್ಟಿ ಬಿ.ನೆಡುನಿಲಂ ಮತ್ತು ಉಪಾಧ್ಯಕ್ಷರಾದ ಜೋನ್ ವಿಲಿಯಂ ಲಸ್ರಾದೋರವರು ನೆರವೇರಿಸಿದರು‌.ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಕೆ.ಎಂ.ಜಾರ್ಜ್,...

ಸೌಜನ್ಯ ಪರ ಹೋರಾಟಗಾರರ ಮೇಲೆ ಹಲ್ಲೆಗೆ ಯತ್ನ : ಖಂಡನೆ

ಸೌಜನ್ಯ ನ್ಯಾಯಾಕ್ಕಾಗಿ ಹೋರಾಟ ನಡೆಸುತ್ತಿರುವ ಗಿರೀಶ್ ಮಟ್ಟಣ್ಣರವರ ಮೇಲೆ ಧರ್ಮಸ್ಥಳ ಪರಿಸರದಲ್ಲಿ ಹಲ್ಲೆ ಯತ್ನವನ್ನು ಸುಳ್ಯ ಸೌಜನ್ಯ ನ್ಯಾಯ ಪರ ಹೋರಾಟ ಸಮಿತಿ ಸುಳ್ಯ ತಾಲೂಕು ಸಂಯೋಜಕ ಯನ್.ಟಿ. ವಸಂತ್ ಖಂಡಿಸಿದ್ದಾರೆ.ಸೌಜನ್ಯ ಅತ್ಯಾಚಾರ ಕೊಲೆಯಾಗಿ 12 ವರ್ಷ ಕಳೆದರೂ ನಮಗೆ ನ್ಯಾಯ ದೊರಕಲಿಲ್ಲ, ಈ ನಿಟ್ಟಿನಲ್ಲಿ ಮಹೇಶ್ ತಿಮರೋಡಿ ನೇತೃತ್ವದಲ್ಲಿ ಹೋರಾಟಗಳು ನಡೆಯುತ್ತಿದೆ. ಮೊನ್ನೆ ದಿನ...
error: Content is protected !!