Ad Widget

ಅರಂತೋಡು : ಮನೆ ಬೆಂಕಿಗೆ ಆಹುತಿ – ಹೊತ್ತಿ ಉರಿದ ನಿವೃತ್ತ ರೇಂಜರ್ ಹಿರಣ್ಯರವರ ಮನೆ

https://youtu.be/vnEdf69a1zk?si=s5vzKR-4mXlfs3fv ಅರಂತೋಡು ಗ್ರಾಮದ ಎಳ್ಪುಕಜೆ ಉಳುವಾರು ನಿವಾಸಿ ನಿವೃತ್ತ ರೇಂಜರ್ ಹಿರಣ್ಯ ರವರ ಮನೆ ಹಾಗೂ ಕೊಟ್ಟಿಗೆ ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದೇ ಇದ್ದುದರಿಂದ ಜೀವಹಾನಿಯಗಿಲ್ಲ. ಯಾರೋ ಬೆಂಕಿ ಹಾಕಿರುವ ಸಾಧ್ಯತೆಗಳ ಬಗ್ಗೆ ಊರವರು ಮಾತನಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಗುತ್ತಿಗಾರಿನಲ್ಲಿ ಹೋಟೇಲ್ ರಜತ ಹಾಗೂ ರಜತ ಕ್ಯಾಟರಿಂಗ್ ಶುಭಾರಂಭ

ಗುತ್ತಿಗಾರಿನಲ್ಲಿ ಎಸ್.ಎಂ.ಎಸ್.ಜಿ. ಕಾಂಪ್ಲೆಕ್ಸ್ ನಲ್ಲಿ ಹೋಟೇಲ್ ರಜತ ಡಿ.15 ರಂದು ಶುಭಾರಂಭಗೊಂಡಿತು.ಬೆಳಗ್ಗೆ ಶುಭಾರಂಭ ಪ್ರಯುಕ್ತ ಗಣಹವನ ನಡೆಯಿತು. ಈ ಸಂದರ್ಭ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಶ್ರೀಮತಿ ಜಯಮ್ಮ ಬಲ್ನಾಡು, ಉಮೇಶ ಬಲ್ನಾಡು, ಶ್ರೀಮತಿ ಚಂದ್ರಾವತಿ ಕಲ್ಲುಗುಂಡಿ ಮತ್ತಿತರರು ಉಪಸ್ಥಿತರಿದ್ದರು. ಜ್ಯೂಸ್ & ಚಾಟ್ಸ್, ವೆಜ್ & ನಾನ್‌ವೆಜ್, ಚೈನೀಸ್...
Ad Widget

ನಾಳೆ (ಡಿ.18) ಬೆಳಿಗ್ಗೆ 7.33 ಕ್ಕೆ ಕುಕ್ಕೆಸುಬ್ರಹ್ಮಣ್ಯ ಬ್ರಹ್ಮರಥೋತ್ಸವ

ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ಡಿ.18 ರಂದು ಆದಿತ್ಯವಾರ ಬೆಳಿಗ್ಗೆ 7.33 ರ ಧನುರ್ಲಗ್ನ ಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ಜರುಗಲಿದೆ ಎಂದು ತಿಳಿದುಬಂದಿದೆ. ಡಿ.17 ರಂದು ರಾತ್ರಿ ಪಂಚಮಿ ರಥೋತ್ಸವ ನಡೆಯಲಿದೆ.

ಸುಳ್ಯ : ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ವಾರ್ಷಿಕ ಮಹಾಸಭೆಯು ಡಿ.14 ರಂದು ಕೆ.ವಿ.ಜಿ ಆಯುರ್ವೇದ ಮಹಾವಿದ್ಯಾಲಯದಲ್ಲಿರುವ ಸಂಘದ ಕಛೇರಿಯಲ್ಲಿ ನಡೆಯಿತು. ಆಡಳಿತ ಮಂಡಳಿಯ ಸಮಿತಿಯ ಸದಸ್ಯರಾದ ಜಗದೀಶ್ ಎ. ಹೆಚ್. ಇವರು ಪ್ರಾರ್ಥನೆಗೈದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷರಾದ ಡಾ| ಕೆ. ಎ ಚಿದಾನಂದ ಇವರು ಸ್ವಾಗತಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ...

ಪಂಜ : ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಮಿತಿ ರಚನೆ – ಅಧ್ಯಕ್ಷರಾಗಿ ಡಾ. ದೇವಿಪ್ರಸಾದ್ ಕಾನತ್ತೂರು

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಮಿತಿ ಸಭೆಯು ದ.16 ರಂದು ನಡೆಯಿತು. ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಡಾ ದೇವಿ ಪ್ರಸಾದ್ ಕಾನತ್ತೂರ್ ಅವರನ್ನು ಆಯ್ಕೆಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪಂಜ ನಾಡಕಚೇರಿಯ ಉಪ ತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್ ವಹಿಸಿದ್ದರು. ವೇದಿಕೆಯಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ, ಉತ್ಸವ ಸಮಿತಿ ಸದಸ್ಯರಾದ...

ಕುಕ್ಕೆ ದೇವಳಕ್ಕೆ ಕೂಜುಗೋಡು ಕುಟುಂಬಸ್ಥರಿಂದ ಹೊರೆಕಾಣಿಕೆ ಸಮರ್ಪಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ಪ್ರತಿವರ್ಷದಂತೆ ಕೂಜುಗೋಡು ಮನೆತನದವರು ಈ ವರ್ಷ ಕೂಡ ಹೊರೆಕಾಣಿಕೆಯನ್ನು ಕುಟುಂಬಸ್ಥರು ತಂದು ದೇವಳಕ್ಕೆ ಅರ್ಪಿಸಿದ್ದಾರೆ. ಹೊರೆ ಕಾಣಿಕೆ ತರುವ ಸಂದರ್ಭದಲ್ಲಿ ಕೂಜುಗೋಡು ಕುಟುಂಬಸ್ಥರ ಮುಖ್ಯಸ್ಥರಾದ ಕಿಶೋರ್ ಕುಮಾರ್ ಕೂಜುಗೋಡು ,ಸೋಮಸುಂದರ ಕೂಜುಗೋಡು ,ಜಯಪ್ರಕಾಶ್ ಕೂಜುಗೋಡು , ಸತೀಶ ಕೂಜುಗೋಡು ಮತ್ತಿತರರು ಉಪಸ್ಥಿತರಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ...

ಸುಳ್ಯ ರೋಟರಿ ‌ವಿದ್ಯಾಸಂಸ್ಥೆಯಲ್ಲಿ ಕೆ.ವಿ.ಜಿ ಸಾಧನೆ ಮತ್ತು ಸಂಸ್ಮರಣೆ ಕಾರ್ಯಕ್ರಮ

ಡಿಸೆಂಬರ್ 16 ರಂದು ರೋಟರಿ ಪ್ರೌಢಶಾಲೆಯಲ್ಲಿ ಕೆವಿಜಿ ಸುಳ್ಯ ಹಬ್ಬ ಸಮಾಜಸೇವಾ ಸಂಘ ಇದರ ವತಿಯಿಂದ ಕೆ.ವಿ.ಜಿ ಸಾಧನೆ ಸಂಸ್ಮರಣೆ ಕಾರ್ಯಕ್ರಮ ಮತ್ತು ಶಾಲಾ ಗ್ರಂಥಾಲಯಕ್ಕೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.ಸಮಾರಂಭದ ಸಭಾಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷರಾಗಿರುವ ಹಾಗೂ ಕಾರ್ಯಕ್ರಮದ ನಿರ್ದೇಶಕರಾಗಿರುವ ರೋ.ಆನಂದ ಖಂಡಿಗ ವಹಿಸಿದ್ದರು.ಶಾಲಾ ಸಂಚಾಲಕರಾದ ರೋ.ಗಿರಿಜಾ ಶಂಕರ್ ತುದಿಯಡ್ಕ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ...

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಸಮಿತಿ ರಚನೆ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಡಾ ದೇವಿ ಪ್ರಸಾದ್ ಕಾನತ್ತೂರ್ ಆಯ್ಕೆಯಾದರು ಸಭೆಯ ಅಧ್ಯಕ್ಷತೆಯನ್ನು ಪಂಜ ನಾಡಕಚೇರಿಯ ಉಪತಹಸಿಲ್ದಾರ ಚಂದ್ರಕಾಂತರು ಹಾಗೂ ವೇದಿಕೆಯಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕಳ, ಉತ್ಸವ ಸಮಿತಿ ಸದಸ್ಯರಾದ ಬಾಲಕೃಷ್ಣ ಕುದ್ವ, ಕುಶಾಲಪ್ಪ ದೊಡ್ಡಮನೆ, ಮಾಯಲಪ್ಪ ಗೌಡ ಏನ್ ಊರು,...
error: Content is protected !!