Ad Widget

ಕರ್ನಾಟಕ ರಾಜ್ಯ ಫೈಝೀಸ್ OSFOJANA ವತಿಯಿಂದ ರಬೀಹ್ ಕ್ಯಾಂಪೇನ್ ಕಾರ್ಯಕ್ರಮ

ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿ ಚರ್ಯೆ ಪರಿಹಾರ
ಎಂಬ ಧ್ಯೇಯ ವಾಕ್ಯದೊಂದಿಗೆ
ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಜನ್ಮದಿನಾಚರಣೆ ಯ ಅಂಗವಾಗಿ ರಬಿವುಲ್ ಅವ್ವಲ್ ತಿಂಗಳಲ್ಲಿ
ರಾಜ್ಯದ 30 ಸ್ಥಳಗಳಲ್ಲಿ ರಬೀಹ್ ಕ್ಯಾಂಪೇನ್ ಹಮ್ಮಿಕೊಳ್ಳಲಾಗಿದ್ದು ಇದರ ಅಂಗವಾಗಿ
7ನೇ.ದಿನದ ಕಾರ್ಯಕ್ರಮವನ್ನು ಅಕ್ಟೋಬರ್ 25 ರಂದು
ಸುಳ್ಯ ಸುನ್ನೀ ಮಹಲ್ ನಲ್ಲಿ ಮೌಲಿದ್ ಪಾರಾಯಣ ಮತ್ತು ದುವಾ ಮಜ್ಲಿಸ್ ಕಾರ್ಯಕ್ರಮ ಗಳೊಂದಿಗೆ ನಡೆಯಿತು.
ಮುಹಮ್ಮದ್ ಅಶ್ರಫ್ ಮುಸ್ಲಿಯಾರ್ ಇಮಾಮ್ ಕುಂಬರ್ಚೋಡ್ ಮಸ್ಜಿದ್ ದುವಾ ನಡೆಸಿದರು.
ಮೌಲಿದ್ ನೇತೃತ್ವವನ್ನು ಇರ್ಶಾದ್ ಫೈಝಿ ಬೆಳ್ಳಾರೆ ವಸಿದ್ದರು.
ಶಂಸುದ್ದೀನ್ ಫೈಝಿ ಮಾಪಾಳ್ ಖತೀಬ್ ಕಳಂಜ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ತಾಜ್ ಮುಹಮ್ಮದ್ ಸಂಪಾಜೆ ಅಧ್ಯಕ್ಷರು ಸುಳ್ಯ ರೇಂಜ್ ಮದ್ರಸ ಮೆನೇಜ್ ಮೆಂಟ್ ವಹಿಸಿದ್ದರು.
ಮುಖ್ಯ ಫ್ರಭಾಷಣ ಇರ್ಶಾದ್
ಫೈಝಿ ಖತೀಬರು ಕೇಂದ್ರ ಜುಮಾ ಮಸೀದಿ ಪಾಣತ್ತೂರ್ ಮಾತನಾಡಿದರು.
ಮುಖ್ಯ ಅತಿಥಿ ಗಳಾಗಿ
ತಾಜುದ್ದೀನ್ ರಹ್ಮಾನಿ ಅಧ್ಯಕ್ಷರು ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್,
ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಪ್ರಧಾನ ಕಾರ್ಯದರ್ಶಿ ದ.ಕ.ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್,
ಕತ್ತರ್ ಇಬ್ರಾಹೀಂ ಹಾಜಿ ಅಧ್ಯಕ್ಷರು SMF ‌ಸುಳ್ಯ ತಾಲೂಕು,
ಅಬ್ದುಲ್ ಹಮೀದ್ ಹಾಜಿ ಖಜಾಂಜಿ ಸುಳ್ಯ ರೇಂಜ್ ಮದ್ರಸ ಮೆನೇಜ್ ಮೆಂಟ್,ಅಕ್ಬರ್ ಕರಾವಳಿ ಕಾರ್ಯದರ್ಶಿ SKSSF ಸುಳ್ಯ ವಲಯ ಮೊದಲಾದವರು ಉಪಸ್ಥಿತರಿದ್ದರು. ಅಬ್ದುಲ್ ಖಾದರ್ ಫೈಝಿ ಸಾಲ್ಮರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎಸ್ ಕೆ ಎಸ್ ಎಸ್ ಎಫ್ ಸುಳ್ಯ ನಗರ ಅಧ್ಯಕ್ಷ ಆಶಿಕ್ ಸುಳ್ಯ ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!