Ad Widget

ಕಲ್ಲುಗುಂಡಿ ಭಾರಿ ಮಳೆ – ಮನೆಗಳಿಗೆ ನುಗ್ಗಿದ ನೀರು

ಕಲ್ಲುಗುಂಡಿಯಲ್ಲಿ ನಿರಂತರ ಸುರಿದ ಮಳೆಗೆ ಕೂಲಿಶೆಡ್ ಬಳಿ ರಸ್ತೆ ಬದಿಯಲ್ಲಿದ್ದ ನಾಲ್ಕು ಮನೆಗಳಿಗೆ ನೀರು ನುಗ್ಗಿದೆ. ಧಿಡೀರ್ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಸುಬ್ರಹ್ಮಣ್ಯ: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸರ್ಪ ಸಂಸ್ಕಾರ ಕ್ರಿಯಾಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಅ.8ರಂದು ಪತ್ತೆಯಾಗಿದೆ.ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕೃಷ್ಣ ಮಯ್ಯ ಭಟ್ (55 ವ.) ಎಂದು ಗುರುತಿಸಲಾಗಿದೆ.ಪುತ್ತೂರು ತಾಲೂಕಿನ ಉಪ್ಪಿನಂಗಡಿ ನಾಳ ನಿವಾಸಿಯಾಗಿರುವ ಕೃಷ್ಣ ಮಯ್ಯ ಭಟ್ ಕಳೆದ 5 ವರ್ಷಗಳಿಂದ ಸುಬ್ರಹ್ಮಣ್ಯ ದೇವಳದಲ್ಲಿ ಸರ್ಪಸಂಸ್ಕಾರ ಕ್ರಿಯಾ ಕರ್ತನಾಗಿ...
Ad Widget

ಭಾರಿ ಮಳೆ : ಕೊಲ್ಲಮೊಗ್ರ ಸೇತುವೆ ಮೇಲೆ ಉಕ್ಕಿ ಹರಿದಿದ್ದು ಮನೆಗಳಿಗೆ ನುಗ್ಗಿದ ನೀರು

ಕೊಲ್ಲಮೊಗ್ರ, ಕಲ್ಮಕಾರು ಪರಿಸರದಲ್ಲಿ ಇಂದು ವ್ಯಾಪಕ ಮಳೆಯಾಗುತ್ತಿದ್ದು ಕೊಲ್ಲಮೊಗ್ರದ ಸಮೀಪದ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಸಮೀಪದ ಮನೆಗಳಿಗೆ ನೀರು ನುಗ್ಗಿದೆ ಎಂದು ತಿಳಿದುಬಂದಿದೆ. ಸೇತುವೆ ಶಿಥಿಲಗೊಂಡಿದ್ದು ಅಪಾಯದಲ್ಲಿದ್ದು ಇಲಾಖೆ ಈ ಬಗ್ಗೆ ಗಮನ ಹರಿಸಬೇಕಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಬಾರಿಯ ಅತೀ ಹೆಚ್ಚು ಮಳೆ ಇಂದು ಸುರಿದಿದ್ದು ಯಾವುದೇ ಹೆಚ್ಚಿನ ಹಾನಿಯಾಗಿರುವ ವರದಿಯಾಗಿಲ್ಲ.

ಶಾಂತಿನಗರದಲ್ಲಿ ವ್ಯಕ್ತಿಯೊಬ್ಬರ ಕೊಲೆ

ಸುಳ್ಯದ ಶಾಂತಿನಗರದಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆಗೈದ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ. ಈತ ಕೊಡಗಿನಲ್ಲಿ ನಡೆದ ಪ್ರಭಾವಿ ಮುಖಂಡರ ಕೊಲೆ ಪ್ರಕರಣದ ಆರೋಪಿ ಎಂದು ತಿಳಿದುಬಂದಿದೆ. ಕೊಲೆಯಾದ ವ್ಯಕ್ತಿ ಸಂಪತ್ ತಿಳಿದು ಬಂದಿದ್ದು ಈ ಹಿಂದೆ ಬಾಲಚಂದ್ರ ಕಳಗಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಇಂದು 6 ಗಂಟೆಗೆ ಅವರ ನಿವಾಸದಿಂದ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಅಲ್ಲಿಗೆ ಬಂದ...

ಕನಕಮಜಲು ಕೋವಿಡ್ 19 ಪರೀಕ್ಷೆ – 3 ಪಾಸಿಟಿವ್

ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ ಇದರ ವತಿಯಿಂದ ಕೊವಿಡ್ 19 ಪರೀಕ್ಷೆ ಅ.8 ರಂದು ಕನಕಮಜಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಈ ವೇಳೆ 36 ಜನ ಪರೀಕ್ಷೆಗೆ ಒಳಪಟ್ಟಿದ್ದು, ಇದರಲ್ಲಿ 3 ಜನರಿಗೆ ಸೋಂಕು ದೃಢ ಪಟ್ಟಿರುವುದಾಗಿ ಅವರಿಗೆ ಹೋಂ ಕಾರಂಟೈನ್ ನಲ್ಲಿದ್ದು ಚಿಕಿತ್ಸೆ ಪಡೆಯಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
error: Content is protected !!