Ad Widget

ಸುಳ್ಯ ನ.ಪಂ.ಮುಖ್ಯಾಧಿಕಾರಿ ಮತ್ತಡಿ ವರ್ಗಾವಣೆ – ಸುಳ್ಯಕ್ಕೆ ಮತ್ತೆ ಎಂ.ಆರ್.ಸ್ವಾಮಿ

ಸುಳ್ಯ ನಗರ ಪಂಚಾಯತ್ ನಲ್ಲಿ ಕಳೆದ ಎರಡು ವರ್ಷಗಳಿಂದ ಮುಖ್ಯಾಧಿಕಾರಿಯಾಗಿದ್ದ ಮತ್ತಡಿಯವರಿಗೆ ವರ್ಗಾವಣೆ ಆದೇಶವಾಗಿದ್ದು, ಸುಳ್ಯಕ್ಕೆ ಎಂ.ಆರ್.ಸ್ವಾಮಿ ಆಗಮಿಸಲಿದ್ದಾರೆ. ಇವರು ಮೈಸೂರು ಮಹಾನಗರಪಾಲಿಕೆಯ ಸಹಾಯಕ ಕಂದಾಯ ಆಧಿಕಾರಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಎಮ್.ಆರ್. ಸ್ವಾಮಿಯವರು ಸುಳ್ಯ ನಗರ ಪಂಚಾಯತ್ ಮುಖ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು

ಅ.28 – ನ.3 ರವರೆಗೆ ಬೆಳ್ಳಾರೆಯಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ

ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ,ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು,ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ,ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇವುಗಳ ಸಹಯೋಗದೊಂದಿಗೆ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಅ.28 ರಿಂದ ನ 03 ರವರೆಗೆ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್...
Ad Widget

ಸುಳ್ಯ ದಸರಾ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆರೋಗ್ಯ ತಪಾಸಣೆ

ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ಮತ್ತು ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ 49 ನೇ ವರ್ಷದ ದಸರಾ ಕಾರ್ಯಕ್ರಮದಲ್ಲಿ ಅ.21 ರಂದು ಸುಳ್ಯ ದ ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ (ರಿ) ಸುಳ್ಯ ಇದರ ವತಿಯಿಂದ ಕೊರೋನಾ ಜಾಗೃತಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. ಆರೋಗ್ಯ ವಾರಿಯರ್ಸ್...

ಕಲ್ಮಕಾರು : ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಸತ್ಯನಾರಾಯಣ ದೇವರ ಪೂಜೆ

ಕಲ್ಮಕಾರು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಅ.21 ರಂದು ಆರನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂವ ಗಣಪತಿ ಹವನ, ಶ್ರೀ ಸತ್ಯನಾರಾಯಣ ದೇವರ ಪೂಜೆ, ದುರ್ಗಾ ಪೂಜೆ ಹಾಗೂ ವಾಹನ ಪೂಜೆ ಪುರೋಹಿತರಾದ ವೆಂಕಟ್ರಮಣ ಭಟ್ ಬಳ್ಳಕ ಇದರ ನೇತೃತ್ವದಲ್ಲಿ ನಡೆಯಿತು.

ದೇವ : ಚಿದಾನಂದ ಪೇರಳಕಜೆ ಮತ್ತು ತಂಡದಿಂದ ರಸ್ತೆ ಬದಿ ಸ್ವಚ್ಛತೆ

ದೇವಚಳ್ಳ ಗ್ರಾಮದ ದೇವ ರಸ್ತೆಯ ಬದಿಯ ಗಿಡಗಂಟಿ ಹಾಗೂ ಹುಲ್ಲು ಬೆಳೆದು ವಾಹನ ಹಾಗೂ ಪಾದಾಚಾರಿಗಳಿಗೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಇತ್ತೀಚೆಗೆ ಅಪಘಾತಗಳು ಸಂಭವಿಸಿತ್ತು. ಇದನ್ನು ಗಮನಿಸಿದ ಚಿದಾನಂದ ಪೇರಳಕಜೆ ಮತ್ತು ಅವರ ಬಳಗ ಶ್ರಮದಾನ ನಡೆಸಿ ರಸ್ತೆ ಬದಿ ಸ್ವಚ್ಛಗೊಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಡಬ : ಪಂಚಲಿಂಗೇಶ್ವರ ಕೂಲಿಂಗ್ ಸೊಲ್ಯೂಷನ್ ಶುಭಾರಂಭ

ಕಡಬ ಪಂಜ ಮುಖ್ಯರಸ್ತೆಯಲ್ಲಿರುವ ಓಂಕಾರ ಸಂಕೀರ್ಣದಲ್ಲಿ ಪಂಚಲಿಂಗೇಶ್ವರ ಕೂಲಿಂಗ್ ಸೊಲ್ಯೂಷನ್ ಶುಭಾರಂಭಗೊಂಡಿದೆ. ಈ ಸಂದರ್ಭದಲ್ಲಿ ಸರಸ್ವತಿ ವಿದ್ಯಾಸಂಸ್ಥೆಯ ಸಂಚಾಲಕರು, ವಿದ್ಯಾಭಾರತಿ ಕರ್ನಾಟಕ ರಾಜ್ಯದ ನೈತಿಕ ಆಧ್ಯಾತ್ಮಿಕ ಶಿಕ್ಷಣ ಪ್ರಮುಖರು ಆಗಿರುವ ಎಂ. ವೆಂಕಟ್ರಮಣ ರಾವ್, ಗುರುಪ್ರಸಾದ್ ತೋಟ , ಸಂಕೀರ್ಣ ಮಾಲಕರಾದ ಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಇಲ್ಲಿ ಎಲ್ಲಾ ರೀತಿಯ ಎ.ಸಿ, ಎಲ್ಲಾ ಕಂಪನಿ...

ಅರಂತೋಡು : ಜೇನುಕೃಷಿ ತರಬೇತಿ ಕಾರ್ಯಕ್ರಮ

ತೋಟಗಾರಿಕಾ ಇಲಾಖೆ ಸುಳ್ಯ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅರಂತೋಡು ಇದರ ಸಹಯೋಗದೊಂದಿಗೆ ಮಧುವನ ಹಾಗೂ ಜೇನು ಸಾಕಾಣಿಕಾ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಜೇನು ಕೃಷಿ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ ಅರಂತೋಡು ಸಹಕಾರಿ ಸಂಘದ ಸಿರಿಸೌಧ ಸಭಾಭವನದಲ್ಲಿ ಅ.21 ನಡೆಯಿತು.ಕಾರ್ಯಕ್ರಮವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ...

ನೆಟ್ವರ್ಕ್ ಸಮಸ್ಯೆಯಿಂದ ಆನ್ಲೈನ್ ತರಗತಿಗೆ ಅಡಚಣೆ: ಅಧಿಕಾರಿಗಳಿಗೆ ದೂರು ನೀಡಿದ ಕ್ಯಾಂಪಸ್ ಫ್ರಂಟ್

ಶಾಲಾ ಕಾಲೇಜುಗಳ ತರಗತಿಗಳು ಆನ್ಲೈನ್ ಮುಖಾಂತರ ನಡೆಯುತ್ತಿದ್ದು, ಸುಳ್ಯದ ಹಲವು ಗ್ರಾಮೀಣ ಪ್ರದೇಶಗಳಲ್ಲಿ (ಬಾಳುಗೋಡು, ಪೆರುವಾಜೆ) ನೆಟ್ವರ್ಕ್ ಸಮಸ್ಯೆಯಾಗುತ್ತಿದ್ದು, ಇದನ್ನು ಶೀಘ್ರ ಪರಿಹರಿಸುವಂತೆ ಕ್ಯಾಂಪಸ್ ಫ್ರಂಟ್ ಆಫ್ ಸುಳ್ಯ ಏರಿಯಾ ಸಮಿತಿ ನಿಯೋಗವು ತಹಶಿಲ್ದಾರರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಪ್ರತಿಯೊಬ್ಬರೂ ಕಡ್ಡಾಯವಾಗಿ ಆನ್ಲೈನ್ ತರಗತಿಗಳಿಗೆ ಹಾಜರಾಗಬೇಕು. ಇಲ್ಲದಿದ್ದರೆ ಪರೀಕ್ಷಾ ಸಮಯದಲ್ಲಿ...

ಶೈಖುನಾ ಅಬೂಬಕ್ಕರ್ ಉಸ್ತಾದ್ ಆಂಡ್ ನೇರ್ಚೆ

ಶೈಖುನಾ ಅಬೂಬಕ್ಕರ್ ಉಸ್ತಾದ್ ಆಂಡ್ ನೇರ್ಚೆವಿಟ್ಲ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ಇದರ ಸ್ಥಾಪಕ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಪ್ರಥಮ ಆಂಡ್ ನೇರ್ಚೆ ದಾರುನ್ನಜಾತ್ತ್ ಸಂಸ್ಥೆಯಲ್ಲಿ ವಿವಿಧ ಕಾರ್ಯಕ್ರಮದ ಮೂಲಕ ಜರಗಿತು.ಬೆಳಿಗ್ಗೆ 10.30 ಕ್ಕೆ ಧ್ವಜಾರೋಹಣ ದಾರುನ್ನ ಜಾತ್ತ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಹು ಮಹ್ಮೂದುಲ್ ಫೈಝಿ (ವಾಲೆಮುಂಡೋವು) ನಿರ್ವಹಿಸಿದರು. 10.45 ಕ್ಕೆ...

*ಶೈಖುನಾ ಅಬೂಬಕ್ಕರ್* *ಉಸ್ತಾದ್ ಆಂಡ್ ನೇರ್ಚೆ* ವಿಟ್ಲ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ಇದರ ಸ್ಥಾಪಕ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಪ್ರಥಮ ಆಂಡ್ ನೇರ್ಚೆ ದಾರುನ್ನಜಾತ್ತ್ ಸಂಸ್ಥೆಯಲ್ಲಿ ವಿವಿಧ ಕಾರ್ಯಕ್ರಮದ ಮೂಲಕ ಜರಗಿತು. ಬೆಳಿಗ್ಗೆ 10.30 ಕ್ಕೆ ಧ್ವಜಾರೋಹಣ ದಾರುನ್ನ ಜಾತ್ತ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಹು ಮಹ್ಮೂದುಲ್ ಫೈಝಿ (ವಾಲೆಮುಂಡೋವು) ನಿರ್ವಹಿಸಿದರು.10.45...
Loading posts...

All posts loaded

No more posts

error: Content is protected !!