Ad Widget

ಬಡ ಕುಟುಂಬದ ನಿರಾಶ್ರಿತರಿಗೆ ಕಿರುಕುಳ ಆರೋಪ – ಅಂಬೇಡ್ಕರ್ ಹಿತರಕ್ಷಣಾ ವೇದಿಕೆಯಿಂದ ದೂರು

ಅ. 8 ರಂದು ರಾತ್ರಿ ಸುರಿದ ಭಾರಿ ಮಳೆಗೆ ಕಲ್ಲುಮುಟ್ಲು ಪರಿಸರದ ಜಯರಾಮ ನಾಯರ್ ಎಂಬವರ ಮನೆಯ ಮುಂಭಾಗದ ಬರೆ ಕುಸಿತ ಉಂಟಾಗಿ ಮನೆ ಸಂಪೂರ್ಣ ಬೀಳುವ ಪರಿಸ್ಥಿತಿ ಎದುರಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ನಗರ ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡಿದ ಮೇರೆಗೆ ಅ.9ರಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಹಾಗೂ ತಾಲೂಕು ಕಚೇರಿಯ ಅಧಿಕಾರಿಗಳು...

ಯುವ ಇಂಟೆಕ್ ರಾಜ್ಯಾಧ್ಯಕ್ಷ ವರುಣ್ ಗೌಡ ಸುಳ್ಯ ಭೇಟಿ

ಯುವ ಇಂಟೆಕ್ ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ವರುಣ್ ಗೌಡ ಅ14 ರಂದು ಸುಳ್ಯಕ್ಕೆ ಭೇಟಿ ನೀಡಿ ಪಕ್ಷ ಸಂಘಟನೆ, ಕಾರ್ಮಿಕರಿಗೆ ಉದ್ಯೋಗ ನೋಂದಾವಣೆ ಹೀಗೆ ವಿವಿಧ ವಿಚಾರಗಳ ಕುರಿತು ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿದರು. ಸುಳ್ಯ ಕಾಂಗ್ರೆಸ್ ಪಕ್ಷದ ಕಚೇರಿಗೆ ಸಂಘಟನೆಯ ಕಾರ್ಯಕರ್ತರು ಅವರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಇಂಟೆಕ್...
Ad Widget

ಬಿಜೆಪಿ ಜಿಲ್ಲಾ ಹಾಗೂ ತಾಲೂಕು ಸಮಿತಿಗೆ ಸದಸ್ಯರ ಆಯ್ಕೆ

ದ.ಕ.ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಸೋಮನಾಥ ಪೂಜಾರಿ, ಶಾರದಾ ಶೆಟ್ಟಿ ಉಬರಡ್ಕ, ಶೋಭ ನಲ್ಲೂರಾಯ ಸುಬ್ರಹ್ಮಣ್ಯ, ಭಾಗೀರಥಿ ಮುರುಳ್ಯ ಇವರನ್ನು ನೂತನವಾಗಿ ಆಯ್ಕೆ ಮಾಡಲಾಗಿದೆ. ಶಾರದಾ ಶೆಟ್ಟಿ ಶೋಭ ನಲ್ಲೂರಾಯ ಜಿಲ್ಲಾ ರೈತ ಮೋರ್ಚಾ ಸದಸ್ಯರಾಗಿ ಹರಿಪ್ರಸಾದ್ ಪಾನತ್ತಿಲ, ಪ್ರಶಾಂತ್ ಪಾನತ್ತಿಲ ಹಾಗೂ ಸುಳ್ಯ ಮಂಡಲ ಸಮಿತಿ ಸದಸ್ಯರಾಗಿ ಶಶಿಧರ ನಾಯರ್ ರನ್ನು ಆಯ್ಕೆ...

ಕರಿಕ್ಕಳ : ಅ.19ರಂದು ಪ್ರಗತಿ ಎಂಟರ್ ಪ್ರೈಸಸ್ ಶುಭಾರಂಭ

ಕರಿಕ್ಕಳದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಾಯಿಕೃಪಾ ಸಂಕೀರ್ಣದಲ್ಲಿ, ಶ್ರೀ ರಾಮಚಂದ್ರ ಮಡಪ್ಪಾಡಿಯವರ ಮಾಲಕತ್ವದ ಪ್ರಗತಿ ಎಂಟರ್ ಪ್ರೈಸಸ್ ಅ.19ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಯಾವುದೇ ಮಿಶ್ರಣವಿಲ್ಲದ ಪರಿಶುದ್ಧ ಕೊಬ್ಬರಿ ಎಣ್ಣೆ, ಶೇಂಗಾ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ ಮತ್ತು ಇನ್ನೂ ಹಲವಾರು ಎಣ್ಣೆಯನ್ನು ಕ್ಲಪ್ತ ಸಮಯದಲ್ಲಿ ತಯಾರಿಸಲಾಗುವುದೆಂದು ಮಾಲಕರು ತಿಳಿಸಿದ್ದಾರೆ.

ಸ್ಕೌಟ್ ದೇಶಭಕ್ತಿಗೀತೆ ಸ್ಪರ್ಧೆ: ಸುಳ್ಯದ ಮನುಜ ನೇಹಿಗ ರಾಜ್ಯಮಟ್ಟದಲ್ಲಿ ದ್ವಿತೀಯ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಶ್ರಯದಲ್ಲಿ  ನಡೆದ ರಾಜ್ಯಮಟ್ಟದ ವರ್ಚುವಲ್ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ರಾಜ್ಯದ 30 ಸ್ಕೌಟ್ ವಿದ್ಯಾರ್ಥಿಗಳಲ್ಲಿ ಆಳ್ವಾಸ್ ಹಿರಿಯ ಪ್ರಾಥಮಿಕ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ಸುಳ್ಯದ ಮನುಜ ನೇಹಿಗ  ದ್ವಿತೀಯ ಬಹುಮಾನ ಪಡೆದಿರುತ್ತಾನೆ.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾರವರು ಬಹುಮಾನ ವಿತರಣೆ...

ಐವರ್ನಾಡಿನಲ್ಲಿ ಶ್ರೀ ಮಹಾಮ್ಮಾಯಿ ಅಟೋ ವರ್ಕ್ಸ್ ಶುಭಾರಂಭ

ಐವರ್ನಾಡಿನ ಮುಖ್ಯ ರಸ್ತೆ ಸಮೀಪ ವಿನಯಕುಮಾರ್ ಉದ್ದಂಪಾಡಿಯವರ ಮಾಲಕತ್ವದ ಶ್ರೀ ಮಹಾಮ್ಮಾಯಿ ಅಟೋ ವರ್ಕ್ಸ್ ಅ.14 ರಂದು ಶುಭಾರಂಭಗೊಂಡಿತು.ಪುತ್ತಿಲ ಗಿರೀಶ್ ಅಸ್ರಣ್ಣರವರು ಗಣಹೋಮ ನೆರವೇರಿಸಿದರು.ಈ ಸಂದರ್ಭದಲ್ಲಿ ಚೋಮಣ್ಣ ನಾಯ್ಕ ಕನ್ನಕಜೆ, ನೆಕ್ರಪ್ಪಾಡಿ ಕೃಷ್ಣಪ್ಪ ಗೌಡ, ದಿನೇಶ್ ಮಡ್ತಿಲ, ಕೇಶವ ಉದ್ದಂಪಾಡಿ, ಗಣಪಯ್ಯ ಪಾಲೆಪ್ಪಾಡಿ, ಧರ್ಮಾವತಿ, ವಿನಯ ಉದ್ದಂಪಾಡಿ,ಪ್ರವೀಣ ಉದ್ದಂಪಾಡಿ, ಜಗದೀಶ ಉದ್ದಂಪಾಡಿ, ವೆಂಕಪ್ಪ ಅಂಬೆಕಲ್ಲು, ಚಿದಾನಂದ...

ವಳಲಂಬೆ : ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಅಪಾಯದಿಂದ ಪಾರು

ಸುಳ್ಯದಿಂದ ಗುತ್ತಿಗಾರು ಕಡೆಗೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಹೊಡೆದ ಘಟನೆ ವಳಲಂಬೆ ದೇವಸ್ಥಾನದ ಬಳಿ ಇಂದು ನಡೆದಿದೆ.ಅಪಘಾತ ರಭಸಕ್ಕೆ ಹೆಚ್ ಟಿ ವಿದ್ಯುತ್ ಕಂಬ ಮುರಿದಿದೆ. ಸಮೀಪದಲ್ಲಿ ಹೊಳೆಯಿದ್ದು ಕಾರಿನಲ್ಲಿದ್ದ ಕೊಲ್ಲಮೊಗ್ರ ದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗದೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಕಳಂಜ : ಕೋವಿಡ್ ತಪಾಸಣಾ ಶಿಬಿರ

ದ.ಕ. ಜಿಲ್ಲಾ ಪಂಚಾಯತ್ ಆದೇಶದಂತೆ ಆರೋಗ್ಯ ಇಲಾಖೆಯ ಸಹಕಾರದಲ್ಲಿ ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗಾಗಿ ವಿಶೇಷ ಕೋವಿಡ್ ತಪಾಸಣಾ ಶಿಬಿರವನ್ನು ಅ.14 ರಂದು ವಿಷ್ಣುನಗರ ಕಳಂಜದ ಅಕ್ಷರ ಕರಾವಳಿ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಯಿತು. ಶಿಬಿರದಲ್ಲಿ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಪಾಲ್ಗೊಂಡಿದ್ದಾರೆ.

ಕೃಷಿ ಮಾರುಕಟ್ಟೆ

ಕ್ಯಾಂಪ್ಕೋ ನಿಯಮಿತ ಮಂಗಳೂರು ಶಾಖೆ  : ಸುಳ್ಯ (14.10.2020, ಬುಧವಾರ) *ಅಡಿಕೆ ಧಾರಣೆ*ಹೊಸ ಅಡಿಕೆ          235 - 300ಹಳೆ ಅಡಿಕೆ             315 - 380ಡಬಲ್ ಚೋಲ್     315 - 400 ಹೊಸ ಫಠೋರ     175 - 235ಹಳೆ ಫಠೋರ        220 - 315 ಹೊಸ ಉಳ್ಳಿಗಡ್ಡೆ    110 - 175ಹಳೆ ಉಳ್ಳಿಗಡ್ಡೆ       150 - 240 ಹೊಸ...

ಪಂಜ : ವಿಪತ್ತು ನಿರ್ವಹಣಾ ಘಟಕದಿಂದ ಶ್ರಮಸೇವೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕದ ಪಂಜ ವಲಯದ ಯುವಕರ ತಂಡವು ಅ.13 ರಂದು ಕೂತ್ಕುಂಜ ಗ್ರಾಮದ ಬಸ್ತಿಕಾಡು ಎಂಬಲ್ಲಿನ ಕಿಂಡಿ ಅಣೆಕಟ್ಟು ನಡುವೆ ಸಿಲುಕಿದ್ದ ಮರದ ದಿಮ್ಮಿಗಳು ಹಾಗೂ ಕಸವನ್ನು ಶ್ರಮದಾನದ ಮೂಲಕ ತೆಗೆದು ಸ್ವಚ್ಛ ಗೊಳಿಸಿದರು. ಶ್ರಮದಾನದಲ್ಲಿ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ವಿಶ್ವನಾಥ ಸಂಪ, ಆಶಿತ್‌ ಕಲ್ಲಾಜೆ,...
Loading posts...

All posts loaded

No more posts

error: Content is protected !!