Ad Widget

ಸುಳ್ಯ ನಲಿಕೆ ಫ್ರೆಂಡ್ಸ್ ಮತ್ತು ಅಜಿಲ ಸೇವಾ ಸಮಾಜ ಸಂಘದ ವಾರ್ಷಿಕ ಸಭೆ

ಸುಳ್ಯ ನಲಿಕೆ ಫ್ರೆಂಡ್ಸ್ ಮತ್ತು ಅಜಿಲ ಸೇವಾ ಸಮಾಜ ಸಂಘದ ವಾರ್ಷಿಕ ಸಭೆಯು ಅ .24 ರಂದು ಅರಂಬೂರು ಮಾಕಾಂಬಿಕಾ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು . ತಾಲೂಕು ಅಜಿಲ ಸೇವಾ ಸಮಾಜ ಸಂಘದ ಅಧ್ಯಕ್ಷ ಜಯರಾಮ ಬೊಳಿಯಮಜಲು ರವರು ಅಧ್ಯಕ್ಷತೆ ವಹಿಸಿದ್ದರು . ವೇದಿಕೆಯಲ್ಲಿ ನಲಿಕೆ ಫ್ರೆಂಡ್ಸ್ ಅಧ್ಯಕ್ಷ ಶ್ರೀಧರ ಅಜಿಲ ಅಡ್ತಲೆ ,...

ಸುಳ್ಯ ಪೊಲೀಸ್ ಠಾಣೆಯಲ್ಲಿ ನವರಾತ್ರಿಯ ಅಂಗವಾಗಿ ಆಯುಧ ಪೂಜೆ

ಸುಳ್ಯ ಪೊಲೀಸ್ ಠಾಣೆಯಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಆಯುಧ ಪೂಜೆ ಕಾರ್ಯಕ್ರಮ ಇಂದು ನಡೆಯಿತು. ಪುರೋಹಿತ ಬ್ರಹ್ಮಶ್ರೀ ನಾಗರಾಜ ಭಟ್ ಪೂಜಾ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದರು. ಎಸ್ಐ ಹರೀಶ್ ಎಂ ಆರ್, ಕ್ರೈಂ ಎಸ್ಐ ರತನ್ ಕುಮಾರ್, ಪ್ರೊಬೆಷನರಿ ಎಸ್ಐ ಸಂದೀಪ್ ಶೆಟ್ಟಿ, ಎಎಸ್ಐ ಭಾಸ್ಕರ್ ಪ್ರಸಾದ್, ನ್ಯಾಯವಾದಿ ವೆಂಕಪ್ಪ ಗೌಡ, ಕೆವಿಜಿ ಆಯುರ್ವೇದ ಮೆಡಿಕಲ್...
Ad Widget

ಗುತ್ತಿಗಾರು ಮೆಸ್ಕಾಂ ಕಛೇರಿಯಲ್ಲಿ ಆಯುಧಪೂಜೆ

ಗುತ್ತಿಗಾರು ಮೆಸ್ಕಾಂ ಕಛೇರಿಯಲ್ಲಿ ಆಯುಧಪೂಜೆ, ವಾಹನಪೂಜೆ ಅ.23 ರಂದು ನಡೆಯಿತು. ಈ ಸಂದರ್ಭದಲ್ಲಿ ಎಇಇ ಚಿದಾನಂದ ಕೆ., ಜೆ.ಇ. ಲೋಕೇಶ್ ಎಣ್ಣೆಮಜಲು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೇನ್ಯ: ಸ.ಕಿ.ಪ್ರಾ. ಶಾಲೆ ನೇಲ್ಯಡ್ಕದಲ್ಲಿ ಶ್ರಮದಾನ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೇಲ್ಯಡ್ಕದಲ್ಲಿ ಅ. 24 ರಂದು ಶ್ರಮದಾನ ನಡೆಸಲಾಯಿತು.ಈ ಸಂಧರ್ಭದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯ ಗುರುಗಳು , ಪೋಷಕರು ಹಾಗೂ ಹಿಂದೂ ಜಾಗರಣ ವೇದಿಕೆಯ ಸದಸ್ಯರು ಮತ್ತು ಊರವರು ಉಪಸ್ಥಿತರಿದ್ದರು.

ಬೆಳ್ಳಾರೆ : ಪ್ರಣಮ್ಯ ಕಾರ್ ಕೇರ್ ಸಂಸ್ಥೆಯಲ್ಲಿ ಆಯುಧಪೂಜಾ ಕಾರ್ಯಕ್ರಮ

ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಣಮ್ಯ ಕಾರ್ ಕೇರ್ ಸಂಸ್ಥೆಯಲ್ಲಿ ಅ.24 ರಂದು ಆಯುಧಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಶಾಂತಮೂರ್ತಿ ಕಿಲಂಗೋಡಿ ಮತ್ತು ರಮೇಶ್ ಮಠತ್ತಡ್ಕ, ಕಟ್ಟಡ ಮಾಲಕರಾದ ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಭವ್ಯ ನೇರ್ಪು- ಹರೀಶ್ ಪರಮಲೆ

ನಾಲ್ಕೂರು ಗ್ರಾಮದ ನೇರ್ಪು ದಿ.ಶೇಷಪ್ಪ ಗೌಡರ ಪುತ್ರಿ ಭವ್ಯಳ ವಿವಾಹವು ಏನೆಕಲ್ಲು ಗ್ರಾಮದ ಪರಮಲೆ ಚಿನ್ನಪ್ಪ ಗೌಡರ ಪುತ್ರ ಹರೀಶ್ ರೊಂದಿಗೆ ಅ.21 ರಂದು ಏನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ( ಚಿತ್ರ : ಪ್ರಕೃತಿ ಗುತ್ತಿಗಾರು )

ಸುಳ್ಯ ನ್ಯಾಯಾಲಯದಲ್ಲಿ ಆಯುಧಪೂಜೆ

ಸುಳ್ಯ ನ್ಯಾಯಲಯದಲ್ಲಿ ದುರ್ಗಾ ಪೂಜೆ ಹಾಗು ಆಯುಧಪೂಜೆ ಇಂದು ನೆರವೇರಿತು. ಕಂಜರ್ಪಣೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರು ಹಾಗೂ ನ್ಯಾಯವಾದಿ ರಾಮಚಂದ್ರ ಶ್ರೀಪಾದ ಹೆಗಡೆ ಅವರ ನೇತೃತ್ವದಲ್ಲಿ ಪೂಜಾ ವಿಧಿ ನೆರವೇರಿಸಿಲಾಯಿತು. ಈ ಸಂದರ್ಭ ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಎಂ. ಪುರುಷೋತ್ತಮ,ಕಿರಿಯ ನ್ಯಾಯಾಧೀಶರಾದ ಯಶವಂತ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಎಂ ವೆಂಕಪ್ಪ ಗೌಡ...

ಸುಳ್ಯ ತಾಲೂಕು ಕಚೇರಿಯಲ್ಲಿ ನವರಾತ್ರಿ ಪ್ರಯುಕ್ತ ಪೂಜಾ ಕಾರ್ಯಕ್ರಮ

ಸುಳ್ಯ ತಾಲೂಕು ಕಚೇರಿಯಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಪೂಜಾ ಕಾರ್ಯಕ್ರಮಗಳು ನಡೆಯಿತು. ಅರ್ಚಕರಾದ ಕಾಂತಮಂಗಲ ಸದಾನಂದ ಶಾಸ್ತ್ರಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸುಳ್ಯ ತಹಶೀಲ್ದಾರ್ ಅನಂತ ಶಂಕರ್, ಪಂಜ ವಲಯ ಕಂದಾಯ ನಿರೀಕ್ಷಕ ಶಂಕರ್, ಉಪತಹಶೀಲ್ದಾರ್ ಚಂದ್ರಕುಮಾರ್, ಸುಳ್ಯ ವಿಎ ತಿಪ್ಪೇಶ್, ಹಾಗೂ ತಾಲೂಕು ಕಚೇರಿಯ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿವರ್ಗಗಳು ಉಪಸ್ಥಿತರಿದ್ದರು....

ಕಂದಾಯ ಇಲಾಖೆ ಕಚೇರಿಯ ಮುಂಬಾಗದಲ್ಲಿ ಮ್ಯಾನ್ ಹೋಲ್ ತುಂಬಿ ಸೋರುತ್ತಿದೆ ಕೆಸರು ನೀರು – ದುರಸ್ತಿಗೆ ಮುಂದಾಗದ ಅಧಿಕಾರಿಗಳು

ಅಧಿಕಾರಿಗಳ ಕಣ್ಮುಂದೆಯೇ ಸುಳ್ಯ ಕಂದಾಯ ಕಚೇರಿಯ ಮುಂಭಾಗದಲ್ಲಿ ಒಳಚರಂಡಿಯ ಕೆಸರು ನೀರು ಕಳೆದ ಮೂರು ನಾಲ್ಕು ತಿಂಗಳುಗಳಿಂದ ಹೊರಬರುತ್ತಿದ್ದು ಪರಿಸರ ದುರ್ನಾತದಿಂದ ಕೂಡಿದೆ. ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸಂಪೂರ್ಣ ದುರಸ್ತಿ ಮಾಡಿಲ್ಲ. ಒಂದೆರಡು ಬಾರಿ ಅದನ್ನು ತೇಪೆ ಹಚ್ಚುವ ಕೆಲಸವನ್ನು ಮಾಡಿದ್ದಾರೆ. ಅದೇ ರಸ್ತೆಯಲ್ಲಿ ಮೆಸ್ಕಾಂ ಕಚೇರಿ, ಸುಳ್ಯ ತಾಲೂಕು ಕಚೇರಿ, ಮಹಿಳಾ...

ಸುಳ್ಯ ಮೆಸ್ಕಾಂ ನಲ್ಲಿ ಆಯುಧಪೂಜೆ

ಮೆಸ್ಕಾಂ ಕಛೇರಿಯಲ್ಲಿ ಆಯುಧ ಪೂಜೆ, ವಾಹನ ಪೂಜೆ ಕಾರ್ಯಕ್ರಮ ಇಂದು ನಡೆಯಿತು. ಈ ಸಂದರ್ಭದಲ್ಲಿ ಎಇಇ ಹರೀಶ್ ನಾಯ್ಕ್, ಜೆಇ ಸುರೇಶ್ ಭಟ್, ಜೆಇ ಬೋರಯ್ಯ, ಜೆಇ ಅಭಿಷೇಕ್, ಪ್ರಭಾರ ಜೆಇ ಜಯಪ್ರಕಾಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!