Ad Widget

ಅರಂತೋಡಿನಲ್ಲಿ ನಾಳೆ (ಅ.08) ರಂದು ಕೋವಿಡ್-19 ತಪಾಸಣಾ ಶಿಬಿರ

ಜಿಲ್ಲಾಡಳಿತದ ಆದೇಶದ ಪ್ರಕಾರ ಜನರ ಸುರಕ್ಷತೆಯ ದೃಷ್ಟಿಯಿಂದ ಕೋವಿಡ -19 ಉಚಿತ ಪರೀಕ್ಷಾ ಶಿಬಿರಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಅರಂತೋಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಅ. 08 ಗುರುವಾರ, ಪೂರ್ವಾಹ್ನ 10.30 ಕ್ಕೆ ಉಚಿತ ಪರೀಕ್ಷಾ ಶಿಬಿರ ನಡೆಯಲಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವ ನಾಗರಿಕರು ಸದರಿ ಶಿಬಿರದಲ್ಲಿ ಪರೀಕ್ಷೆಗಳನ್ನು ಮಾಡಿಕೊಳ್ಳಬೇಕಾಗಿ ಈ ಮೂಲಕ ಸಾರ್ವಜನಿಕ ಪ್ರಕಟಣೆ...

ಕಲ್ಮಕಾರಿನಲ್ಲಿ ಅ‌.8 ರಂದು ಕೋವಿಡ್-19 ತಪಾಸಣಾ ಶಿಬಿರ

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಕಾರು ಗ್ರಾಮದ ನಿವಾಸಿಗಳಿಗಾಗಿ ವಿಶೇಷ ಕೋವಿಡ್ ತಪಾಸಣಾ ಶಿಬಿರವನ್ನು ಅ.8 ರಂದು ಗುರುವಾರ ಪೂರ್ವಾಹ್ನ 10 ಗಂಟೆಗೆ ಕಲ್ಮಕಾರು ಹಳೆ ಅಂಗನವಾಡಿ ಕೇಂದ್ರದ ಬಳಿ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪರೀಕ್ಷೆ ನಡೆಸಿಕೊಳ್ಳಬಹುದು.🔹ಪರೀಕ್ಷೆ ನಡೆಸಲು ಬರುವವರು ತಮ್ಮ ಮೊಬೈಲ್ ಪೋನ್ ಜೊತೆಗೆ ತರಬೇಕು.🔹 ನೋಂದಾವಣೆಯ ಬಳಿಕ ನಿಮ್ಮ ಮೊಬೈಲ್...
Ad Widget

ಕೆ.ಪಿ.ಸಿ.ಸಿ.ಮಾಧ್ಯಮ ವಕ್ತಾರರಾಗಿ ಶೌವಾದ್ ಗೂನಡ್ಕ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮೀಡಿಯಾ ಪ್ಯಾನಲಿಸ್ಟ್ (ಮಾಧ್ಯಮ ವಕ್ತಾರ) ಆಗಿ ಎನ್.ಎಸ್.ಯು.ಐ. ಮುಖಂಡ ಶೌವಾದ್ ಗೂನಡ್ಕರವರನ್ನು ನೇಮಕಗೊಳಿಸಿ ಕೆ.ಪಿ.ಸಿ.ಸಿ.ಆಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಆದೇಶವನ್ನು ಹೊರಡಿಸಿದ್ದಾರೆ. ಶೌವಾದ್ ಗೂನಡ್ಕರವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಸ್ಥಾನ ಪಡೆದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೌವಾದ್ ಗೂನಡ್ಕರವರ ಸಂಘಟನಾ ಹಾಗೂ ವಾಕ್ ಚಾತುರ್ಯತೆಯನ್ನು...

ಮಾಸ್ಕ್ ಧರಿಸದವರ ಮೇಲೆ ಹಾಕಲಾಗುತ್ತಿದ್ದ ದಂಡ ಪ್ರಮಾಣ ಇಳಿಕೆ ಮಾಡಿ ಸರ್ಕಾರ ಆದೇಶ

ಕೊರೋನಾ ಸೋಂಕು ನಿಯಂತ್ರಿಸುವಲ್ಲಿ, ಮಾರ್ಗಸೂಚಿ ಪಾಲಿಸದವರ ವಿರುದ್ದ ಸರ್ಕಾರ ಘೋಷಿಸಿದ್ದ ದುಬಾರಿ ದಂಡ ವಸೂಲಾತಿ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮಾಸ್ಕ್ ಧರಿಸದವರ ಮೇಲೆ ಹಾಕಲಾಗುತ್ತಿದ್ದ ದಂಡ ಶುಲ್ಕವನ್ನು ಇಳಿಕೆ ಮಾಡಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆದೇಶಿಸಿದ್ದಾರೆ. ಈ ಮುಂಚೆ ಮಾಸ್ಕ್ ಧರಿಸದವರ ವಿರುದ್ಧ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ 1000 ರೂ....

ಐತಪ್ಪ ಕಾಟೂರು ಬಿಳಿಯಾರು ನಿಧನ

ಅರಂತೋಡು ಗ್ರಾಮದ ಬಿಳಿಯಾರು ಕಾಟೂರು ಐತಪ್ಪ ಗೌಡರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರರಾದ ಜನಾರ್ದನ ಕಾಟೂರು, ಗೋಪಾಲಕೃಷ್ಣ ಕಾಟೂರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಶಿಕ್ಷಣಾಧಿಕಾರಿಗಳ ಕಚೇರಿಯ ಅಧೀಕ್ಷಕರಾಗಿ ಶಿವಪ್ರಸಾದ್ ಜಿ.ಎಸ್.ಉಬರಡ್ಕ

ಸುಳ್ಯ ತಾಲೂಕು ಪಂಚಾಯತ್ ನ ಅಕ್ಷರ ದಾಸೋಹ ಕಚೇರಿಯ ಪ್ರಥಮ ದರ್ಜೆ ಸಹಾಯಕರಾಗಿದ್ದ ಶಿವಪ್ರಸಾದ್ ಜಿ.ಎಸ್. ಉಬರಡ್ಕ ರಿಗೆ ಮುಂಭಡ್ತಿ ದೊರೆತಿದ್ದು , ಅವರು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕರಾಗಿ ನೇಮಕಗೊಂಡು , ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಸುಳ್ಯ ಎ.ಪಿ.ಎಂ.ಸಿ ಅವಿರೋಧ ಆಯ್ಕೆ : ಅಧ್ಯಕ್ಷರಾಗಿ ವಿನಯಕುಮಾರ್ ಮುಳುಗಾಡು – ಉಪಾಧ್ಯಕ್ಷರಾಗಿ ನವೀನ್ ಸಾರಕೆರೆ

ಸುಳ್ಯ ಎಪಿಎಂಸಿ ಅಧ್ಯಕ್ಷರಾಗಿ ವಿನಯಕುಮಾರ್ ಮುಳುಗಾಡು ಹಾಗೂ ಉಪಾಧ್ಯಕ್ಷರಾಗಿ ನವೀನ್ ಸಾರಕರೆ ಅವಿರೋಧ ಆಯ್ಕೆ ಯಾಗಿದ್ದಾರೆ. ತಹಶೀಲ್ದಾರ್ ಅನಂತ ಶಂಕರ, ಪ್ರಭಾರ ಉಪತಹಶೀಲ್ದಾರ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. Vinay mulugadu Navin sarakere ಯುವ ನ್ಯಾಯವಾದಿಯಾಗಿರುವ ವಿನಯ ಮುಳುಗಾಡು ಮಡಪ್ಪಾಡಿ ಗ್ರಾ.ಪಂ.ಮಾಜಿ ಸದಸ್ಯರಾಗಿ, ಹಾಗೂ ಪಕ್ಷದಲ್ಲಿ ಯುವಮೋರ್ಚಾ ಮಾಜಿ ಅಧ್ಯಕ್ಷರಾಗಿ, ಪ್ರಸ್ತುತ ಗುತ್ತಿಗಾರು ಶಕ್ತಿ ಕೇಂದ್ರದ...

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(07.10.2020 ಬುಧವಾರ) ಅಡಿಕೆ ಧಾರಣೆಹೊಸ ಅಡಿಕೆ 225 - 275ಹಳೆ ಅಡಿಕೆ 300 - 360ಡಬಲ್ ಚೋಲ್ 300 - 400 ಹೊಸ ಫಠೋರ 175 - 225ಹಳೆ ಫಠೋರ 220 - 305 ಹೊಸ ಉಳ್ಳಿಗಡ್ಡೆ 110 - 175ಹಳೆ ಉಳ್ಳಿಗಡ್ಡೆ 150 - 230 ಹೊಸ ಕರಿಗೋಟು...

ಅ 10. ಗಾಂಧಿನಗರ ಪ್ಲಾಸ್ಮ ದಾನಿಗಳ ರಕ್ತದ ಮಾದರಿ ಸಂಗ್ರಹ ಶಿಬಿರ

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಫ್ರೆಂಡ್ಸ್ ಸರ್ಕಲ್ ಗಾಂಧಿನಗರ ಇದರ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 10ರಂದು ಸುಳ್ಯದ ಗಾಂಧಿನಗರ ಆನ್ಸರ್ ಕಾಂಪ್ಲೆಕ್ಸ್ ನಲ್ಲಿ ಮಂಗಳೂರು ಕೆಎಸ್ ಹೆಗಡೆ ಮೆಡಿಕಲ್ ಅಕಾಡೆಮಿ ಇವರ ಸಹಭಾಗಿತ್ವದಲ್ಲಿ ಪ್ಲಾಸ್ಮ ದಾನಿಗಳ ರಕ್ತದ ಮಾದರಿ ಸಂಗ್ರಹ ಶಿಬಿರ ನಡೆಯಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ಶಿಬಿರ ಬೆಳಿಗ್ಗೆ...
error: Content is protected !!