Ad Widget

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುಳ್ಯ ಡಿವಿಷನ್ ವತಿಯಿಂದ ಕ್ರೀಡಾಕೂಟ

ಪಾಪ್ಯುಲರ್ ಫ್ರಂಟ್ ಸುಳ್ಯ ಡಿವಿಷನ್ ವತಿಯಿಂದ ಏರಿಯಾ ಮೀಟ್  ಕಾರ್ಯಕ್ರಮದ ಅಂಗವಾಗಿ ಬೆಳ್ಳಾರೆ ಉಮಿಕ್ಕಳ ಮೈದಾನ ಹಾಗೂ ಸುಳ್ಯ ನಾವೂರು ,  ಪ್ರದೇಶದಲ್ಲಿ ಕ್ರೀಡಾಕೂಟ  ನಡೆಯಿತು ಕಾರ್ಯಕ್ರಮದಲ್ಲಿ  ಹಗ್ಗಜಗ್ಗಾಟ, ರಿಲೆ, ಓಟ ಮತ್ತಿತರರ ಮನೋರಂಜನಾ ಕ್ರೀಡಾಕೂಟ ಗಳನ್ನು ನಡೆಸಲಾಯಿತು.ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಊರಿನ ಯುವಕರು ಪಾಲ್ಗೊಂಡಿದ್ದರು.ಸುಳ್ಯ ಡಿವಿಝನ್ ಕಾರ್ಯದರ್ಶಿಗಳಾದ ಮೀರಝ್ ಸುಳ್ಯ ಪ್ರಾಸ್ತಾವಿಕವಾಗಿ...

ವಿಹಿಂಪ ಭಜರಂಗದಳ ಮುರೂರು ಸಾಕೇತ ಶಾಖೆಯ ವತಿಯಿಂದ ಶ್ರಮದಾನ

ವಿಹಿಂಪ ಭಜರಂಗದಳ ಮುರೂರು ಸಾಕೇತ ಶಾಖೆಯ ವತಿಯಿಂದ ಶ್ರಮದಾನ ಇಂದು ನಡೆಯಿತು. ಮುರೂರಿನಿಂದ ಪಂಜಿಕಲ್ಲು ವರೆಗೆ ರಸ್ತೆ ಬದಿ ಸ್ವಚ್ಛತಾ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಮುರೂರು ಸಾಕೇತ ಶಾಖೆಯ ಅಧ್ಯಕ್ಷ ಕಮಲಾಕ್ಷ ವಾಗ್ಲೆ ಮುರೂರು, ಕಾರ್ಯದರ್ಶಿ ಪವನ್ ಮುರೂರು, ಸತ್ಸಂಗ ಪ್ರಮುಖ್ ಕಿರಣ್ ಆಚಾರ್ಯ, ಸಂಯೋಜಕ ವಿಶ್ವನಾಥ ಮುರೂರು, ಸಹ ಸಂಯೋಜಕ ಹರಿಪ್ರಸಾದ್ ದೇವರಗುಂಡ,...
Ad Widget

ಸುಳ್ಯ ಪಿ.ಎಲ್.ಡಿ. ಬ್ಯಾಂಕ್ ಸಿಬ್ಬಂದಿ ಗಣೇಶ್ ಕೆ.ಎನ್. ನಿವೃತ್ತಿ

ಸುಳ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ 43 ವರ್ಷಗಳಿಂದ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ಗಣೇಶ್ ಕೆ.ಯನ್.ಯವರು ಸೆ. 30 ರಂದು ನಿವೃತ್ತಿ ಹೊಂದಿದ್ದು, ಅಂದು ಬ್ಯಾಂಕಿನ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಬ್ಯಾಂಕಿನ ಸಭಾ ಭವನದಲ್ಲಿ ನಡೆಯಿತು. ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಬಿಳಿಮಲೆಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪ್ರಭಾಕರ ನಾಯಕ್, ಕೋಶಾಧಿಕಾರಿ...

ವಿಹಿಂಪ ಮುರೂರು ಸಾಕೇತ ಶಾಖೆ ಉದ್ಘಾಟನೆ – ಅಧ್ಯಕ್ಷರಾಗಿ ಕಮಲಾಕ್ಷ ವಾಗ್ಲೆ ಮುರೂರು

ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಮುರೂರು ಸಾಕೇತ ಶಾಖೆಯ ಉದ್ಘಾಟನೆ ಅ.4 ರಂದು ಮುರೂರು ಭಜನಾ ಮಂದಿರದಲ್ಲಿ ನಡೆಯಿತು. ಸಾಕೇತ ಶಾಖೆಯ ಉದ್ಘಾಟನೆಯನ್ನು ಸುಳ್ಯ ತಾಲೂಕು ವಿಹಿಂಪ ಅಧ್ಯಕ್ಷ ಸೋಮಶೇಖರ್ ಪೈಕ ನೆರವೇರಿಸಿದರು. ಈ ಸಂದರ್ಭದಲ್ಲಿ ವಿಹಿಂಪ ತಾಲೂಕು ಸಹ ಕಾರ್ಯದರ್ಶಿ ಭಾನುಪ್ರಕಾಶ್ ದೊಡ್ಡತೋಟ, ಧನುಷ್ ಉಪಸ್ಥಿತರಿದ್ದರು.ಮುರೂರು ಸಾಕೇತ ಶಾಖೆಯ ನೂತನ ಅಧ್ಯಕ್ಷರಾಗಿ ಕಮಲಾಕ್ಷ...

ಚೊಕ್ಕಾಡಿ ಗರುಡ ಯುವಕ ಮಂಡಲದ ವತಿಯಿಂದ ಶ್ರಮದಾನ

ಚೊಕ್ಕಾಡಿ ಗರುಡ ಯುವಕ ಮಂಡಲದ ವತಿಯಿಂದ ಗಾಂಧಿಜಯಂತಿ ಪ್ರಯುಕ್ತ ಶ್ರಮದಾನ ಒ.4 ರಂದು ನಡೆಯಿತು. ಯುವಕ ಮಂಡಲದ ಅಧ್ಯಕ್ಷ ಹರೀಶ್ ನೆಕ್ರಾಜೆ, ಗೌರವಾಧ್ಯಕ್ಷ ಸತೀಶ್ ಪಿಲಿಕಜೆ ಮಾಜಿ ಅಧ್ಯಕ್ಷರುಗಳಾದ ಶ್ರೀಧರ ಕರ್ಮಾಜೆ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಅನಿಲ್ ಪೂಜಾರಿಮನೆ, ನಿತೀನ್ ಪಡ್ಪು , ನಿರ್ದೇಶಕರುಗಳಾದ ದಿನೇಶ್ ಪಡ್ಪು, ಭವಾನಿ ಶಂಕರ ಕರ್ಮಾಜೆ, ಯಶವಂತ ಚೊಕ್ಕಾಡಿ,...

ಬಡತನದಲ್ಲಿರುವ ಮಹಿಳೆಯೊಬ್ಬರ ಆರೋಗ್ಯ ಸಮಸ್ಯೆಗೆ ತುರ್ತು ಚಿಕಿತ್ಸೆಗೆ ನೆರವಾಗುವಿರಾ

ಎಡಮಂಗಲದ ಲೆಕ್ಕಿಸಿರಿಮಜಲಿನ ದಾಮೋದರ ಗೌಡ ಎಂಬುವವರ ಧರ್ಮಪತ್ನಿ ಪೊನ್ನಕ್ಕ ಎಂಬುವವರ ಜೀವನದ ವ್ಯಥೆಯಿದು.ಹಲವು ವರ್ಷದಿಂದ ಇವರ ಅರ್ಧ ಜೀವನ ಆಸ್ಪತ್ರೆಗೆ ಅಲೆದಾಡುವುದರಲ್ಲೇ ಕಳೆದಿದೆ ಒಂದಲ್ಲದಿದ್ದರೆ ಇನ್ನೊಂದು ಕಾಯಿಲೆ ಎಂಬಂತೆ ಇಲಿಜ್ವರ, ಕಿಡ್ನಿ ಸಂಬಂಧಿ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆ ಇದೀಗ ಟಿಬಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪತಿಯ ಜತೆ ಇವರು ಕೂಲಿ ಕೆಲಸ ಮಾಡಿಕೊಂಡು ಅತ್ಯಂತ ಬಡತನದಲ್ಲಿ...

ಅರಂತೋಡು ಬಡ ಕುಟುಂಬಕ್ಕೆ ಯುವ ಬ್ರಿಗೇಡ್ ವತಿಯಿಂದ ಬೆಳಕು ಕಾರ್ಯಕ್ರಮ

ಅರಂತೋಡು ಗ್ರಾಮದ ಗ್ರಾಮ ಬಡ ಕುಟುಂಬ ಕೋಡಂಕೇರಿ ಶಾಲಿನಿ - ಬಾಲಚಂದ್ರ ಪೂಜಾರಿ ಯವರ ಮನೆಗೆ ಯುವ ಬ್ರಿಗೇಡ್ ಸುಳ್ಯದ ವತಿಯಿಂದ ಬೆಳಕು ಕಾರ್ಯಕ್ರಮ ಅ.4 ರಂದು ನಡೆಯಿತು. ಅರಂತೋಡು ಮೆಸ್ಕಾಂ ಶಾಖಾ ಜೆ.ಇ. ಅಭಿಷೇಕ್ ಚಾಲನೆ ನೀಡಿದರು. ಇದರ ದಾನಿಗಳಾಗಿ ದೇವಿಪ್ರಸಾದ್ ಅರಂಬೂರು, ಕಿಶೋರ್ ಕೋಡಂಕೇರಿ, ಮಧುಕಿರಣ್ ಅನ್ನಪೂರ್ಣ ಇವರು ನೆರವು ನೀಡಿದ್ದಾರೆ. ವಿದ್ಯುತ್...

ಶೀಲಾವತಿ ಮರಿಕೇಯಿ ನಿಧನ

ಕೊಡಿಯಾಲ ಗ್ರಾಮದ ಮರಿಕೇಯಿ ಶೇಷಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಶೀಲಾವತಿಯವರು ಅಲ್ಪ ಕಾಲದ ಅಸೌಖ್ಯದಿಂದ ಅ.2 ರಂದು ನಿಧನರಾದರು.ಅವರಿಗೆ 55 ವರ್ಷ ಪ್ರಾಯವಾಗಿತ್ತು.ಮೃತರು ಪತಿ, ಪುತ್ರ ಕವನ್ ಕುಮಾರ್, ಸೊಸೆ ಪ್ರಿಯಾ, ಅತ್ತೆ, ಮೈದುನ ಕೊರಗಪ್ಪ ಗೌಡ, ನಾದಿನಿ ಶ್ರೀಮತಿ ಹರಿಣಾಕ್ಷಿ ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.
error: Content is protected !!