Ad Widget

ಯೋಗ 2020 ಸ್ಪರ್ಧೆಯಲ್ಲಿ ಶರತ್ ಮರ್ಗಿಲಡ್ಕ ರಿಗೆ ಬಹುಮಾನ

ಆವಿಷ್ಕಾರ ಯೋಗ ಮಂಗಳೂರು ಮತ್ತು ಯೋಗ ವಿದ್ಯಾ ಟ್ರಸ್ಟ್, ಮಂಗಳೂರು ಸಹಯೋಗದಲ್ಲಿ ಆಯೋಜಿಸಿರುವ ದಸರಾ ಯೋಗ 2020 ಸ್ಪರ್ಧೆಯಲ್ಲಿ ಯೋಗೇನ ಚಿತ್ತಸ್ಯ ತಂಡ ಸುಳ್ಯ ಇದರ ಸದಸ್ಯ ಶರತ್ ಮರ್ಗಿಲಡ್ಕ ಅವರು 26 ರಿಂದ 35ರ ವಯೋಮಿತಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಇವರ ಯೋಗ ಗುರು ಸಂತೋಷ್ ಮುಂಡಕಜೆಯವರಿಂದ ಮಾರ್ಗದರ್ಶನ ಪಡೆದಿರುತ್ತಾರೆ.

ಸುಳ್ಯ ಸರ್ಕಾರಿ ಆಸ್ಪತ್ರೆ ಯಲ್ಲಿ ವಿಕಲಚೇತನರ ಆರೋಗ್ಯ ತಪಾಸಣಾ ಶಿಬಿರ

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಅ.27 ರಂದು ವಿಕಲಚೇತನರ ಆರೋಗ್ಯ ಶಿಬಿರ ನಡೆಯಿತು. ವಿಕಲಚೇತನ ಇಲಾಖೆಯ ನಗರ ಪಂಚಾಯತ್ ನ ಯು ಆರ್ ಡಬ್ಲ್ಯೂ ಪ್ರವೀಣ್ ನಾಯಕ್ ಸುಳ್ಯ, ತಾಲೂಕು ಪಂಚಾಯತ್ ಎಮ್ ಆರ್ ಡಬ್ಲ್ಯೂ ಚಂದ್ರಶೇಖರ, ಪುಟ್ಟಣ್ಣ ವಿ. ಮತ್ತು ತಾಲೂಕಿನ ಎಲ್ಲಾ ವಿ ಆರ್ ಡಬ್ಲ್ಯೂ ಸದಸ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಲವು...
Ad Widget

ಭಕ್ತಕೋಡಿಯಲ್ಲಿ ಅ.25 ರಂದು ಕಾರುಗಳ ನಡುವೆ ಅಪಘಾತ- ಗಾಯಾಳು ಪಡ್ಪಿನಂಗಡಿಯ ಓಮ್ನಿ ಚಾಲಕ ಇಂದು ಮೃತ್ಯು

ಪುತ್ತೂರು ಕಾಣಿಯೂರು ರಸ್ತೆಯ ಭಕ್ತಕೋಡಿಯಲ್ಲಿ ಅ.25 ರಂದು ಮಾರುತಿ ಓಮ್ನಿ ಮತ್ತು ಸ್ವಿಫ್ಟ್ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಓಮ್ನಿ ಚಾಲಕ ಪಡ್ಪಿನಂಗಡಿ ಸಮೀಪ ಅಡಿಬಾಯಿ ಅಬ್ದುಲ್ ರಹಿಮಾನ್ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಐವತ್ತೊಕ್ಲು ಗ್ರಾಮದ ಅಡಿಬಾಯಿ ರಹಿಮಾನ್ ಅವರು ಮೃತಪಟ್ಟವರು. ಅವರಿಗೆ 39 ವರ್ಷ ವಯಸ್ಸಾಗಿತ್ತು. ಅಬ್ದುಲ್...

ತೊಡಿಕಾನ : ಅಶ್ಲೀಲ ಫೋಟೋ ಶೂಟಿಂಗ್ – ಭಕ್ತರ ಆಕ್ರೋಶ

ತೊಡಿಕಾನ ಕ್ಷೇತ್ರಕ್ಕೆ ಸಂಬಂಧಿಸಿದ ದೇವರಗುಂಡಿ ಬಳಿ ಇತ್ತೀಚೆಗೆ ಕೆಲವರು ಬಂದು ಅಶ್ಲೀಲವಾಗಿ ಫೋಟೋಗಳನ್ನು ತೆಗೆದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ದೇವಸ್ಥಾನಕ್ಕೆ ಸಂಬಂಧಿಸಿದವರ ಜೊತೆಗೆ ಯಾವುದೇ ಅನುಮತಿ ಪಡೆಯದೇ ಆಶ್ಲೀಲ ಚಿತ್ರಗಳನ್ನು ಶೂಟಿಂಗ್ ಮಾಡಿದ್ದಾರೆ. ಧಾರ್ಮಿಕ ಕ್ಷೇತ್ರ ಆಗಿರುವುದರಿಂದ ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭಕ್ತರು ಒತ್ತಾಯಿಸಿದ್ದಾರೆ....

ಜಯಾನಂದ ಸಂಪಾಜೆಯವರಿಗೆ ಯಕ್ಷಪ್ರದೀಪ್ತರತ್ನ ಪ್ರಶಸ್ತಿ

ಪುತ್ತೂರು ಶ್ರೀ ಭಗವತೀ ಯಕ್ಷಗಾನ ಬಳಗ ಇದರ ಆಶ್ರಯದಲ್ಲಿ ಅ.26 ರಂದು ಪುತ್ತೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ನವರಾತ್ರಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಖ್ಯಾತ ಮುಮ್ಮೇಳ ಕಲಾವಿದರಾದ ಜಯಾನಂದ ಸಂಪಾಜೆಯವರಿಗೆ ಯಕ್ಷಪ್ರದೀಪ್ತರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ‌ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಕಾಪು, ಬಿ.ಜಯಕರ ಶೆಟ್ಟಿ...

ಬಿಜೆಪಿ ಪಕ್ಷ ಎಂದರೆ ಭಾರತೀಯ ಜನ ವಿರೋಧಿ ಪಕ್ಷ : ಅಶ್ರಫ್ ಮಾಚಾರ್

ಬಿಜೆಪಿ ಪಕ್ಷ ಎಂದರೆ ಭಾರತೀಯ ಜನ ವಿರೋಧಿ ಪಕ್ಷ : ಅಶ್ರಫ್ ಮಾಚಾರ್ಎಸ್‌ಡಿಪಿಐ ಪಕ್ಷದ ವತಿಯಿಂದ ಜಾಗೋ ಕಿಸಾನ್ ಪಾದಾಯಾತ್ರೆ ಹಾಗೂ ಪ್ರತಿಭಟನಾ ಸಭೆಗಳನ್ನು ದೇಶವ್ಯಾಪ್ತಿ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಸುಳ್ಯ ತಾಲೂಕು ಎಸ್‌ಡಿಪಿಐ ಪಕ್ಷದ ವತಿಯಿಂದ ಕೃಷಿ ಸಂಹಾರ ಬಿಜೆಪಿಯ ಹುನ್ನಾರ, ಕೃಷಿ ವಿನಾಶದ ಅಂಚಿನಿಂದ ದೇಶವನ್ನು ರಕ್ಷಿಸೋಣ, ಎಂಬ ಧ್ಯೇಯದಡಿ ಪ್ರತಿಭಟನಾ ಸಭೆ...

ನೆಲ್ಲಿಕುಮೇರಿ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ನೆಲ್ಲಿಕುಮೇರಿ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದಲ್ಲಿ 8 ನೇ ವರ್ಷದ ನವರಾತ್ರಿ ಉತ್ಸವವು ವೈಧಿಕ, ಧಾರ್ಮಿಕ ಹಾಗೂ ಪ್ರತೀ ದಿನ ವಿವಿಧ ಮಂಡಳಿಯಿಂದ ಭಜನಾ ಸೇವೆ ಕಾರ್ಯಕ್ರಮಗಳೊಂದಿಗೆ ಬಹಳ ವಿಜ್ರಂಭಣೆಯಿಂದ ನೆರವೇರಿತು. ಊರ ಹಾಗೂ ಪರವೂರ ಸಾವಿರಾರು ಭಕ್ತಾಧಿಗಳು ಶ್ರೀದೇವಿಯ ದರ್ಶನ ಪಡೆದರು. ಈ ಸಂದರ್ಭ ಹೊಸ ಭಜನಾ ತಂಡ ರಚಿಸಲಾಯಿತು.
error: Content is protected !!