Ad Widget

ಸಂಪತ್ ಕೊಲೆ ಪ್ರಕರಣ : ಕೋವಿ,ಕಾರು ನೀಡಿದವರಿಗೂ ನ್ಯಾಯಾಂಗ ಬಂಧನ

ಕಳಗಿ ಬಾಲಚಂದ್ರರ ಹತ್ಯೆ ಆರೋಪಿ ಸಂಪತ್ ಕುಮಾರ್ ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಕೊಲೆ ಆರೋಪಿಗಳಿಗೆ ಕೋವಿ ಕೊಟ್ಟ ಇಬ್ಬರು ಹಾಗೂ ಕಾರು ಕೊಟ್ಟ ಒಬ್ಬರನ್ನು ಬಂಧಿಸಿದ ಪೋಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆ ಮೂವರಿಗೂ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಿದೆ.

ಸಂಪತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಲ್ಲುಗುಂಡಿಯ ಮನು, ಬಿಪಿನ್, ಕಾರ್ತಿಕ್, ಮನೋಜ್, ಅಡ್ಕಾರಿನ ಶಿಶಿರ್ ರನ್ನು ಪೋಲೀಸರು ಬಂಧಿಸಿದ್ದರು. ಅವರಲ್ಲಿ ಶಿಶಿರ್ ಒಬ್ಬನಿಗೆ ನಿನ್ನೆ ನ್ಯಾಯಾಂಗ ಬಂಧನ ವಾಗಿತ್ತು. ಉಳಿದ ನಾಲ್ಕು ಮಂದಿಯನ್ನು ವಿಚಾರಣೆಗಾಗಿ ಪೋಲೀಸ್ ಕಸ್ಟಡಿಗೆ ನೀಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆ ಆರೋಪಿಗಳಿಗೆ ಕೋವಿ ನೀಡಿದ ಆರೋಪದಲ್ಲಿ ಸಂಪಾಜೆಯ ರವೀಂದ್ರ, ಮಡಿಕೇರಿಯ ಡಿಂಪಲ್, ಮತ್ತು ಕಾರು ಕೊಟ್ಟ ರಾಜೇಶ್ ರನ್ನು ವಶಕ್ಕೆ ಪಡೆದ ಪೋಲೀಸರು ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮೂವರನ್ನು ಅ.23 ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!