ಸುಳ್ಯ ಸೈಂಟ್ ಬ್ರಿಜಿಡ್ಸ್ ಶಾಲೆಯ ವಿದ್ಯಾರ್ಥಿ ದರ್ಶಿಕ್ ಸಿ.ಎಸ್ ಗೆ ಮೈಸೂರಿನಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ – ಜಪಾನಿನಲ್ಲಿ ನಡೆಯುವ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆ

ಸುಳ್ಳದ ಸೈಂಟ್ ಬ್ರಿಜಿಡ್ಸ್ ಚರ್ಚ್ ಶಾಲೆಯ ವಿದ್ಯಾರ್ಥಿ ದರ್ಶಿಕ್ ಸಿ.ಎಸ್ ಚಳ್ಳoಗಾರುವರು ಮೈಸೂರಿನಲ್ಲಿ ನಡೆದ 29ನೇ ಅಖಿಲ ಭಾರತ ಶಿತಾರ್ಯೋ ಕರಾಟೆ ಡು ಚಾಂಪಿಯನ್‌ಶಿಪ್-2026ರಲ್ಲಿ ಕುಮಿಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದು ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ಗಾಗಿ ಆಯ್ಕೆಯಾಗಿದ್ದಾರೆ. ಇವರು ಆಲೆಟ್ಟಿ ಗ್ರಾಮದ ಚಳ್ಳoಗಾರು ಸುರೇಶ ಮತ್ತು ಗೀತಾ ದಂಪತಿಯ ಪುತ್ರರಾಗಿದ್ದಾರೆ. ಇವರಿಗೆ ಕರಾಟೆ...

ಆಗಸ್ಟ್ 15ರಂದು ಸುಳ್ಯದಲ್ಲಿ ಆಟಿ ಕೂಟ – 2026 ಆಮಂತ್ರಣ ಪತ್ರಿಕೆ ಬಿಡುಗಡೆ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ "ಕಾಫಿಕೃಪಾ" ಕಟ್ಟಡ ರಾಜಸೀಟ್ ರಸ್ತೆ, ಮಡಿಕೇರಿ, ಜೇಸಿಐ ಸುಳ್ಯ ಪಯಸ್ವಿನಿ(ರಿ.) ಸುಳ್ಯ, ಸಂಧ್ಯಾಚೇತನ ಪ್ರವಾಸ ಬಳಗ ಸುಳ್ಯ ಇವರ ಆಶ್ರಯದಲ್ಲಿ "ಆಟಿ ಕೂಟ -2026" ಆಟಿ ತಿಂಗಳ್ ನ ಆಚರಣೆಗ, ಜನಪದ ಪದ್ದತಿನ ನೆಂಪಿಸುವ ಜಂಬರ ಆಗಸ್ಟ್ 15ರಂದು ಸುಳ್ಯದ ಕನ್ನಡ ಭವನದಲ್ಲಿ ವಿವಿಧ ಆಟಿಕೂಟದ ಪಂತಗಳೊಟ್ಟಿಗೆ...
Ad Widget

ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ. ಅನುರಾಧಾ ಕುರುಂಜಿಯವರಿಗೆ ಅರಂಬೂರಿನಲ್ಲಿ ಸನ್ಮಾನ

ಗಡಿನಾಡು ಕಾಸರಗೋಡಿನ ಕನ್ನಡ ಭವನದವರು ಕೊಡಮಾಡಿದ ನಾಡೋಜ ಡಾ. ಕಯ್ಯಾರ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು, ಅರಂಬೂರು ಘಟಕ ಗೌಡ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ಅನುರಾಧಾ ಕುರುಂಜಿಯವರನ್ನು ಅರಂಬೂರಿನಲ್ಲಿ ಸನ್ನಾನಿಸಲಾಯಿತು.  ಅರಂಬೂರು ಘಟಕ ಗೌಡ ಸಮಿತಿಯ ವತಿಯಿಂದ ನಡೆದ ಆಟಿ ಆಚರಣೆಯ ಸಮಾರೋಪ...

ಕುಕ್ಕೆ ಸುಬ್ರಹ್ಮಣ್ಯ : ಬೃಹತ್ ಉಚಿತ ಆರೋಗ್ಯ ಶಿಬಿರ – “ಜನತೆಯ ಆರೋಗ್ಯಕ್ಕೆ ನೀಡುವ ಕೊಡುಗೆಯು ಭಗವಂತನ ಸೇವೆಯಾಗಿದೆ” : ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅಭಿಮತ

ಸುಬ್ರಹ್ಮಣ್ಯ : “ಸಾರ್ವಜನಿಕರ ಆರೋಗ್ಯ ಭಾಗ್ಯಕ್ಕೆ ನೀಡುವ ಉದಾರ ಕೊಡುಗೆಯು ಭಗವಂತನ ಸೇವೆಯಾಗಿದೆ. ಇಂತಹ ಸೇವೆಗಳು ದೇವರಿಗೆ ಪ್ರಿಯವಾಗುತ್ತದೆ. ಆಧುನಿಕ ಯುಗದಲ್ಲಿ ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸುವುದು ಅತ್ಯವಶ್ಯಕ. ಈಗಿನ ಆಹಾರ ವ್ಯವಸ್ಥೆ ಇತ್ಯಾದಿಗಳು ಆರೋಗ್ಯದಲ್ಲಿನ ಏರುಪೇರಿಗೆ ಕಾರಣವಾಗುತ್ತದೆ. ಆದ್ದರಿಂದ ಸರ್ವರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಗ್ರಾಮೀಣ ಭಾಗದಲ್ಲಿ ನಡೆಸಲಾಗುವ ಇಂತಹ...

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಗಿರೀಶ್ ಭಾರದ್ವಾಜ್‌ರಿಗೆ ನುಡಿನಮನ; ರಕ್ಷಾ ಬಂಧನ ಮತ್ತು ಆಟಿ ಕವಿಗೋಷ್ಠಿ

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಇತ್ತೀಚೆಗೆ ನಿಧನರಾದ ತೂಗುಸೇತುವೆಗಳ ಸರದಾರ,ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರಿಗೆ ನುಡಿನಮನ ಹಾಗೂ ರಕ್ಷಾ ಬಂಧನ ಮತ್ತು ಆಟಿ ಕವಿಗೋಷ್ಠಿ  ಆ. 9ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜರುಗಿತು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಸಾನು ಉಬರಡ್ಕ ಅಧ್ಯಕ್ಷತೆ ವಹಿಸಿದ್ದರು. ಉಬರಡ್ಕದ ಅನಂತೇಶ್ವರ ಭಟ್ ಮತ್ತು ಪಂಚವಲ್ಲಿ ತೈಲ...

ಬಳ್ಪ ಮತ್ತು ಏನೇಕಲ್ಲು ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪಂಜ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಳ್ಪ ಮತ್ತು ಏನೆಕಲ್ಲು ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಆ. 9ರಂದು ನಡೆಯಿತು. ಪ್ರಗತಿ ಬಂಧು ಸ್ವಸಹಾಯ ಸಂಘಗಳ...

ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆರ್‌.ಎಂ.ಎಸ್ ಪ್ರೌಢಶಾಲೆ ಸಂಪಾಜೆ ನಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಾನ್ವಿ ಎ.ಜೆ 9ನೇ ಚತುರ್ಥ ಸ್ಥಾನ, ಪ್ರೀತನ್ ವಿನ್ಸ್ ಡಿ'ಸೋಜಾ 9ನೇ ಪಂಚಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.  ಶಾಲಾ ಜೊತೆ ಕಾರ್ಯದರ್ಶಿ ರೆ.ಫಾ. ಆಲ್ವಿನ್...

ಶೇಣಿ : ಅಮರಪಡ್ನೂರು ಗ್ರಾಮದ ಶೇಣಿ ಅಂಗನವಾಡಿ ಬಳಿಯಿದ್ದ ಅಪಾಯಕಾರಿ ಮರ ತೆರವು – ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ತುರ್ತು ಸ್ಪಂದನೆ

ಅಮರ ಪಡ್ನೂರು ಗ್ರಾಮದ ಶೇಣಿ ಅಂಗನವಾಡಿ ಬಳಿಯಲ್ಲಿದ್ದ ಅಪಾಯಕಾರಿ ಮಾವಿನ ಮರವು ಮುರಿದು ಬೀಳುವ ಹಂತದಲ್ಲಿದ್ದು ಮುರಿದು ಬೀಳುತ್ತಿದ್ದರೆ ವಿದ್ಯುತ್ ಲೈನ್ ಗೆ ಬಿದ್ದು ಸುಮಾರು 20 ವಿದ್ಯುತ್ ಕಂಬಗಳು ಮುರಿದು ಬೀಳುವ ಸಂಭವವಿದ್ದ ಕಾರಣ ಸ್ಥಳೀಯ ಶ್ರೀ ಕೃಷ್ಣ ಸೇವಾ ಸಮಿತಿಯ ಪದಾಧಿಕಾರಿಗಳು ಬ್ಲಾಕ್ ಕಾಂಗ್ರೆಸ್ ರಾಧಾಕೃಷ್ಣ ಬೊಳ್ಳೂರುರವರಿಗೆ ತಿಳಿಸಿದ್ದರು. ಕೂಡಲೇ ಸ್ಪಂಧಿಸಿದ ಬ್ಲಾಕ್...

ಪಂಜ : ಸ್ಕೌಟ್ ಗೈಡ್ ವಾರ್ಷಿಕ ಮಹಾಸಭೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ವಾರ್ಷಿಕ ಮಹಾಸಭೆ ಮತ್ತು ಸ್ಕೌಟ್ ಗೈಡ್ ಶಿಕ್ಷಕರ ಮಾಹಿತಿ ಕಾರ್ಯಗಾರವು ಪಂಜ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ.ಕೆ ಅವರ ಅಧ್ಯಕ್ಷತೆಯಲ್ಲಿ 8 ಆಗಸ್ಟ್ 2026 ಶನಿವಾರದಂದು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಸಭಾಂಗಣದಲ್ಲಿ ಜರುಗಿತು. ಜಿಲ್ಲಾ ಗೈಡ್ ಆಯುಕ್ತೆ ವಿಮಲ ರಂಗಯ್ಯ ಅವರು ಮಾತನಾಡಿ,...

ಕೊಲ್ಲಮೊಗ್ರು : ಅದ್ಧೂರಿಯಿಂದ ನಡೆದ “ಆಟಿ ಕೂಟ-2026” – ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ, ಚೈತನ್ಯ ಯುವತಿ ಮಂಡಲ(ರಿ.) ಕೊಲ್ಲಮೊಗ್ರು, ಮಹಾತ್ಮ ಯುವಕ ಮಂಡಲ(ರಿ.) ಕೊಲ್ಲಮೊಗ್ರು ಹಾಗೂ ಕೆವಿಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು ಇವುಗಳ ಸಂಯುಕ್ತ ಆಶ್ರಯದಲ್ಲಿ “ಆಟಿ ಕೂಟ-2026” ಅದ್ಧೂರಿಯಿಂದ ನಡೆಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ಆವರಣದಲ್ಲಿ ನಿರ್ಮಾಣಗೊಂಡ ಗದ್ದೆಯಲ್ಲಿ ಯುವತಿ ಮಂಡಲದ ಸದಸ್ಯರು ನೇಗಿ ನೆಡುವುದರ ಮುಖಾಂತರ ಚಾಲನೆಯನ್ನು ನೀಡಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು...
Loading posts...

All posts loaded

No more posts

error: Content is protected !!