- Wednesday
- August 12th, 2026
21 ವರುಷದ ಹಿಂದಿನ ದಾಖಲೆಯನ್ನು ಹಿಮ್ಮೆಟ್ಟಿ ಹೊಸ ದಾಖಲೆಯನ್ನು ಆಳ್ವಾಸ್ ವಿದ್ಯಾರ್ಥಿನಿ ಭಾನವಿ ಪಿ.ಎಸ್ ಸಾಧನೆಗೈದಿದ್ದಾರೆ. ಆ.11 ಹಾಗೂ 12ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 18ರ ವಯೋಮಿತಿಯ 400ಮೀಟರ್ ಓಟದ ಬಾಲಕ ಬಾಲಕೀಯರ ವಿಭಾಗದಲ್ಲಿ ಸಾಧನೆಗೈದಿರುವ ಇವರು ಪ್ರಥಮ ಸ್ಥಾನ ಪಡೆದು ನೂತನ ಧಾಖಲೆಯೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದಾರೆ. 2005ರ 56.20 ಸೆಕೆಂಡ್ಗಳ ಸಾಧನೆಯನ್ನು...
ಸುಳ್ಯ : ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯು ಗ್ರಂಥಾಲಯ ಕ್ಷೇತ್ರದಲ್ಲಿ ಮಹತ್ವಾಕಾಂಕ್ಷಿ ಹಾಗೂ ಕ್ರಾಂತಿಕಾರಿ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ. ಆಯ್ದ ಪುಸ್ತಕಗಳು ಹಾಗೂ ವಿವಿಧ ನಿಯತಕಾಲಿಕಗಳನ್ನು, ಹಳೆಯ ಪತ್ರಿಕೆಗಳ ಸಹಿತ, ಕ್ಯೂಆರ್ ಕೋಡ್ ಮೂಲಕ ಓದುವ ಮತ್ತು ಡೌನ್ಲೋಡ್ ಮಾಡಿಕೊಳ್ಳುವ ವಿಶಿಷ್ಟ ಯೋಜನೆ ಇದಾಗಿದೆ. ಈ ಯೋಜನೆಯು ಪ್ರಾಯೋಗಿಕವಾಗಿ ರಾಜ್ಯದ ಹತ್ತು ಗ್ರಂಥಾಲಯಗಳಲ್ಲಿ ಅನುಷ್ಠಾನಗೊಳ್ಳಲಿದ್ದು,...
ಕಳಂಜ ವಿದ್ಯಾನಿಕೇತನ ಶಿಶುಮಂದಿರದಲ್ಲಿ ಆ.12ರಂದು “ಆಟಿಡೊಂಜಿ ದಿನ” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಮಾತೃಮಂಡಳಿಯಿಂದ ಆಟಿ ತಿಂಗಳಿನಲ್ಲಿ ಆಡುವ ವಿವಿಧ ಆಟಗಳು ಹಾಗೂ ಖಾದ್ಯಗಳ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಚಿನ್ ಶರ್ಮ ಅಲೆಕ್ಕಾಡಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ರವಿಪ್ರಸಾದ್ ರೈ ಕಳಂಜ, ಸಂಚಾಲಕಿ ಶ್ರೀಮತಿ ಮಾಲಿನಿ ಪ್ರಸಾದ್, ಕಾರ್ಯದರ್ಶಿ ಅಜಯ್...
ಚೆಂಬು ಸಾಹಿತ್ಯ ವೇದಿಕೆಯ ವತಿಯಿಂದ 8ನೇ ವರ್ಷದ ರಾಜ್ಯಮಟ್ಟದ ಎಂ.ಜಿ ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಯು ಇತ್ತೀಚೆಗೆ ನಡೆದಿದ್ದು, ಅರೆಭಾಷೆ ಸಾಹಿತ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದಂತಹ ಎಂ.ಜಿ ಕಾವೇರಮ್ಮ ಅವರ 87ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ನಡೆದ ಈ ಸ್ಪರ್ಧೆಯ ಫಲಿತಾಂಶವು ಇದೀಗ ಪ್ರಕಟಗೊಂಡಿದ್ದು, ಶಿವದೇವಿ ಅವನಿಶ್ಚಂದ್ರ ಅವರು ಬರೆದ “ಸ್ವರ್ಗ ಸೀಮೆ” ಕವನವು ಪ್ರಥಮ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿಂತಿಕಲ್ಲು ವಲಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿಂತಿಕಲ್ಲು ವಲಯ ಇದರ ವತಿಯಿಂದ ಬಾಳಿಲ ವಿದ್ಯಾ ಬೋಧಿನಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜನಜಾಗೃತಿ ವೇದಿಕೆಯ ನಿಂತಿಕಲ್ಲು ವಲಯದ ಕೋ ಅಪ್ ಸದಸ್ಯರಾದ ಕೂಸಪ್ಪ ಗೌಡ ಮುಗಪ್ಪು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ದುಶ್ಚಟ...
ಸಂಸ್ಕೃತಿ - ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕೆಲಸ ಯುವಜನತೆಯಿಂದಾಗಲಿ - ಆರ್ಕಿಟೆಕ್ಟ್ ಅಕ್ಷಯ್ ಕೆ. ಸಿ ಜನಪದ ಸಂಸ್ಕೃತಿ, ಪ್ರಕೃತಿಯೊಂದಿಗಿನ ಸಂಬಂಧ ಅಮೂಲ್ಯ - ಶ್ರೀಮತಿ ಗೀತಾ ಮೋಂಟಡ್ಕ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ಕ್ರಾಸ್ ಘಟಕ ಇವರ ಆಶ್ರಯದಲ್ಲಿ ಕಾಲೇಜಿನ ಐಕ್ಯೂಎಸಿ, ಕನ್ನಡ ವಿಭಾಗ,...
ಅಮರಮುಡ್ನೂರು ಗ್ರಾಮದ ಚೆನ್ನಪರಿ ಸಮೀಪದ ಅಚ್ಚಿಪಳ್ಳದಲ್ಲಿ ಆ.09ರಂದು ಈ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಹಾಗೂ ಧಾರ್ಮಿಕ ಕಾರ್ಯಕ್ರಮವು ಗರುಡ ಯುವಕ ಮಂಡಲ(ರಿ.) ಚೊಕ್ಕಾಡಿ ಮತ್ತು ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇವರ ಜಂಟಿ ಆಶ್ರಯದಲ್ಲಿ, ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ಸಹಯೋಗದೊಂದಿಗೆ ಸಂಭ್ರಮದಿಂದ ನಡೆಯಿತು. ಶ್ರೀಮತಿ ಸ್ವಾತಿ ಪಡ್ಪು ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು....
