- Wednesday
- April 2nd, 2025

ಸುಳ್ಯ ತಾಲೂಕಿನ ಬಾಳಿಲದಲ್ಲಿ ನಿರ್ಮಿಸಿದ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ವಾಲ್ಮೀಕಿ ಆಶ್ರಮ ಶಾಲೆ ಮತ್ತು ವಿದ್ಯಾರ್ಥಿ ನಿಲಯವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಹಾಗೂ ಜಿಲ್ಲಾಡಳಿತ, ತಾಲೂಕು ಆಡಳಿತ, ಸ್ಥಳೀಯಾಡಳಿತಗಳ ಸಹಕಾರದಲ್ಲಿ ಫೆ.10ರಂದು ಕೊಲ್ಲಮೊಗ್ರದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ನಡೆಯಲಿದ್ದು ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮಾಹಿತಿ ಕೈ ಪಿಡಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ...

ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ನೂತನ ಕಚೇರಿ, ಸುಬ್ರಮಣ್ಯದ ವಾಲ್ಮೀಕಿ ಆಶ್ರಮ ಶಾಲೆಯ ಕಟ್ಟಡ ಸೇರಿದಂತೆ ಲೋಕೋಪಯೋಗಿ ಇಲಾಖೆಯಡಿ ಅನುಮೋದನೆಗೊಂಡ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಹಾಗೂ ಪರಿಶಿಷ್ಠ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್...

ಅಯೋಧ್ಯೆ ಶ್ರೀ ರಾಮನ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಮಡಪ್ಪಾಡಿ ಭಜನಾಮಂಡಳಿಯ ವತಿಯಿಂದ 22 ರ ಸಂಜೆ 7.00 ಗಂಟೆಗೆ ಆರತಿ ಬೆಳಗಿ ನಂತರ ವಿದ್ಯಾರ್ಥಿಗಳ ಕುಣಿತ ಭಜನೆ ಹಾಗೂ ವಿಶೇಷ ಕಾರ್ಯಕ್ರಮಗಳು ಈ ದಿನ ನಡೆಯಿತು, ಈ ಕಾರ್ಯಕ್ರಮದಲ್ಲಿ ಶ್ರೀ ರಾಮನ 30 ಅಡಿ ಎತ್ತರದ ರಾಮನ ಕಟೌಟ್ ನಿರ್ಮಿಸಲಾಗಿತ್ತು ಹಾಗೂ ವಿಶೇಷವಾಗಿ 500 ಹಣತೆಯ...

ಬದುಕಿನ ಕಷ್ಟ-ನೋವುಗಳು ಕಲಿಸುತ್ತಲೇ ಇರುತ್ತವೆ ನಮಗೆ ನೂರಾರು ಪಾಠಗಳನ್ನ, ಜೀವನದಲ್ಲಿ ಎಷ್ಟೇ ಪಾಠಗಳನ್ನು ಕಲಿತರೂ ತುತ್ತಿನ ಚೀಲವ ತುಂಬಿಸಲು ನಾವು ಹೋರಾಡಲೇಬೇಕು ಪ್ರತೀದಿನ, ಕೆಲವೊಮ್ಮೆ ಬದುಕಿನ ಕಷ್ಟ-ನೋವುಗಳೇ ತುಂಬಿಸುತ್ತವೆ ಖಾಲಿ ಹೊಟ್ಟೆಯನ್ನ, ಮರೆಸಿ ಹಸಿವನ್ನ...ಪ್ರತೀದಿನ ಅದೆಷ್ಟೇ ಕಷ್ಟಪಟ್ಟು ದುಡಿದರೂ ನಾಳೆಗಳ ಚಿಂತೆ ಕಾಡುತ್ತಲೇ ಇರುವುದು ನಮ್ಮನ್ನ, ಆದರೆ ಇಂದಲ್ಲಾ ನಾಳೆ ನಮಗೂ ಒಳ್ಳೆಯ ದಿನಗಳು ಬರಬಹುದು...

ಜಿಲ್ಲಾ ಜನತ ದರ್ಶನ ಕಾರ್ಯಕ್ರಮವು ಸುಳ್ಯದ ಪುರಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ವಿಶೇಷ ಚೇತನರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಬಂದಾಗ ಸಚಿವರು ನೇರವಾಗಿ ವೇದಿಕೆಯಿಂದ ಕೆಳಗಿಳಿದು ಬಂದು ವಿಶೇಷ ಚೇತನ ವ್ಯಕ್ತಿಯ ಸಮಸ್ಯೆಗಳನ್ನು ನಿಂತುಕೊಂಡೆ ಆಲಿಸಿದರು ಅಲ್ಲದೆ ಅಧಿಕಾರಿಗಳನ್ನು ಕರೆಸಿ ಸ್ಥಳದಲ್ಲಿಯೇ ಪರಿಹರಿಸುವಂತೆ ನಿರ್ದೇಶನ ನೀಡಿದ ಪ್ರಸಂಗವು ಜನತ ಸಂಪರ್ಕ ಸಭೆಯಲ್ಲಿ ನಡೆಯಿತು.

ಸುಳ್ಯದಲ್ಲಿ ಇಂದಿನ ಜಿಲ್ಲಾಮಟ್ಟದ ಜನತ ದರ್ಶನ ಕಾರ್ಯಕ್ರಮದಲ್ಲಿ ಇಷ್ಟೊಂದು ಮನವಿಗಳು ಬರಬಹುದು ಎಂಬ ನಿರೀಕ್ಷೆ ಇರಲಿಲ್ಲ ಮತ್ತು ಹಾಗಿದ್ದರೆ ಇಲ್ಲಿನ ತನಕ ಗೆದ್ದು ಬಂದವರು ಈ ಕ್ಷೇತ್ರದಲ್ಲಿ ಮಾಡಿದ ಸಧನೆಯಾದರು ಏನು ಎಂದು ಪ್ರಶ್ನಿಸಿದರು. ಇಲ್ಲಿನ ಕಂದಾಯ, ಆರೋಗ್ಯ , ಅರಣ್ಯ, ಎಂಜಿನಿಯರ್ ವಿಭಾಗ ಸೇರಿದಂತೆ ಅನೇಕ ಅರ್ಜಿಗಳು ಬಂದಿದ್ದು ಅವುಗಳನ್ನು ಬಗೆಹರಿಸುವ ಕೆಲಸಗಳನ್ನು ಮಾಡುತ್ತೇವೆ...

ಸುಳ್ಯದಲ್ಲಿ ಜಿಲ್ಲಾ ಮಟ್ಟದ ಜನ ಸಂಪರ್ಕ ಸಭೆಯ ಹಿನ್ನಲೆಯಲ್ಲಿ ಸುಳ್ಯಕ್ಕೆ ಆಗಮಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು. ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮತನಾಡುತ್ತಾ ಬ್ಲಾಕ್ ಕಾಂಗ್ರೆಸ್ ಹಾಗೂ ರಾಜ್ಯದ ಪದಾಧಿಕಾರಿಗಳು ಈಗಾಗಲೇ ನಮಗೆ...

ಸುಳ್ಯದಲ್ಲಿ ಇಂದು ನಡೆಯುತ್ತಿರುವ ಜನತಾದರ್ಶನದಲ್ಲಿ 407 ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಉದ್ಘಾಟನೆ ಬಳಿಕ ಅರ್ಜಿಗಳ ಸ್ವೀಕಾರ ಆರಂಭಗೊಂಡಿತು. ಅರ್ಜಿ ನೀಡಿದವರಿಗೆ ಟೋಕನ್ ನೀಡಲಾಗಿದ್ದು, ಕ್ರಮ ಪ್ರಕಾರವಾಗಿ ಕರೆದಂತೆ ಅರ್ಜಿದಾರರು ಬಂದು ಅದರ ವಿವರಣೆ ಪಡೆದು, ಸಂಬಂಧ ಪಟ್ಟ ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಯಿತು. ಮಧ್ಯಾಹ್ನ ಊಟದ ಬಳಿಕವು ಅರ್ಜಿಗಳನ್ನು ನೀಡಲಾಗುತ್ತಿದ್ದು ಇನ್ನು ಸರದಿ ಸಾಲಿನಲ್ಲಿ ನಿಂತು...

(ವರದಿ : ಉಲ್ಲಾಸ್ ಕಜ್ಜೋಡಿ)ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ, ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತ್ತಡ್ಕ, ಸಚಿನ್ ಕ್ರೀಡಾ ಸಂಘ(ರಿ.) ಹರಿಹರ ಪಲ್ಲತ್ತಡ್ಕ, ವಿಶ್ವ ಯುವಕ ಮಂಡಲ ಬಾಳುಗೋಡು, ಸರ್ವೋದಯ ಯುವಕ ಮಂಡಲ ಕಲ್ಮಕಾರು ಇವರ ಸಹಯೋಗದೊಂದಿಗೆ ಜ.21 ಆದಿತ್ಯವಾರದಂದು ಹರಿಹರ ಪಲ್ಲತ್ತಡ್ಕದ ಶ್ರೀ...

All posts loaded
No more posts