- Tuesday
- April 1st, 2025

ಐನೆಕಿದು ಕಡೆಯಿಂದ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಹಾಗೂ ಚಾಲಕ ನನ್ನು ಸುಬ್ರಹ್ಮಣ್ಯ ಅರಣ್ಯ ಇಲಾಖೆಯವರು ವಶಕ್ಕೆ ಪಡೆದ ಘಟನೆ ಅ.25 ರಂದು ನಡೆದಿದೆ. ಕಿರಾಲ್ ಬೋಗಿ ಮತ್ತು ಹೆಬ್ಬಲಸು ಮರದ ಸೈಜುಗಳನ್ನು ಟಿಪ್ಪರ್ ನಲ್ಲಿ ಸಾಗಿಸುತ್ತಿದ್ದಾಗ ಗುತ್ತಿಗಾರು ಸಮೀಪ ಶಾಖಾ ಫಾರೆಸ್ಟರ್ ಮನೋಜ್, ಅರಣ್ಯ ರಕ್ಷಕ ಧನಂಜಯ, ವೀರಭದ್ರಯ್ಯ ಕರಣೀಮಠ, ಅರಣ್ಯ ವೀಕ್ಷಕ...

ಪ್ರಾ.ಕೃ.ಪ.ಸ.ಸಂಘ ಗುತ್ತಿಗಾರು ಇದರ ಸುವರ್ಣ ಸಹಕಾರ ಮಾರ್ಟ್ ದಿನಸಿ ಮಳಿಗೆ ಅ.25ರಂದು ಶುಭಾರಂಭಗೊಂಡಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಸಹಕಾರ ಮಾರ್ಟ್ ನ್ನು ಉದ್ಘಾಟಿಸಿದರು. ಶಾಸಕ ಎಸ್. ಅಂಗಾರ ದೀಪ ಬೆಳಗಿಸಿದರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಸೊಸೈಟಿ ಅದ್ಯಕ್ಷ ವೆಂಕಟ್ ದಂಬೆಕೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗುತ್ತಿಗಾರು ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಭರತ್...

ಕೋವಿಡ್ 19 ಇಡೀ ವಿಶ್ವವನ್ನೇ ತಲ್ಲಣಗೊಳಿಸಿ ಇತ್ತೀಚಿಗೆ ಕೆಲವು ತಿಂಗಳುಗಳಿಂದ ಜನಜೀವನ ಅಲ್ಪಮಟ್ಟಿಗೆ ಸುಧಾರಿಸಿಕೊಂಡು ಸ್ವಲ್ಪಮಟ್ಟಿಗೆ ಚೇತರಿಕೆಯ ದಾಪುಗಾಲು ಇಡುತ್ತಿದೆ. ವ್ಯಾಪಾರ ಕೇಂದ್ರಗಳು , ಕೈಗಾರಿಕಾ ಕೇಂದ್ರಗಳು, ಅಲ್ಪಸ್ವಲ್ಪ ಪ್ರವಾಸೋದ್ಯಮಗಳು ನಿಧಾನವಾಗಿ ಚೇತರಿಸಿಕೊಂಡು ಬರುತ್ತಿದ್ದರೆ, ಇನ್ನೂ ಕೂಡ ತಮ್ಮ ಕೆಲಸ ಕಾರ್ಯಗಳಿಗೆ ಮರಳಲು ಸಾಧ್ಯವಾಗದೆ , ಯಾವುದೇ ಬೆಳವಣಿಗೆಗಳು ಇಲ್ಲದೆ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ...

ಗುತ್ತಿಗಾರು ಗ್ರಾಮದ ಆಚಳ್ಳಿ ಕಾಲನಿ ನಿವಾಸಿ ಚರಂಬು ಅವರ ಪುತ್ರಿ ಜಯಶ್ರೀ (17)ಆತ್ಮಹತ್ಯೆಗೆ ಶರಣಾದ ದುರ್ದೈವಿ. ಅ.25 ರಂದು ಮಧ್ಯಾಹ್ನದ ವೇಳೆ ಮನೆ ಸಮೀಪದ ಗೇರು ಮರಕ್ಕೆ ಬಟ್ಟೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವೇಳೆ ತಂದೆ, ತಾಯಿ ಕೆಲಸಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ. ದೂರದ ಸಂಬಂಧಿಯೊರ್ವನ ಪ್ರೀತಿಸುವುದಕ್ಕೆ ಮನೆಯವರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆತ್ಮಹತ್ಯೆ ಗೈದಿರುವ...

ಕರ್ನಾಟಕ ಸರಕಾರದ 73 ಇಲಾಖೆಗಳ 731ಸೇವೆಗಳನ್ನು ಸಾಮಾಜ್ಯ ಸೇವಾ ಕೇಂದ್ರಗಳ ಮೂಲಕ ಸಾಮಾನ್ಯ ಜನರಿಗೆ ಒದಗಿಸುತ್ತಿರುವ ಸೇವಾಸಿಂಧು ತಂತ್ರಾಂಶವು ಕಳೆದ ಎರಡು ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಎಲ್ಲಾ ಅರ್ಜಿಗಳು ಪಾವತಿಯ ಹಂತ ತಲುಪಿ ಮುಂದಿನ ಕಾರ್ಯಗಳಿಗೆ ಬಾಕಿಯಾಗಿವೆ. ಅದೇ ರೀತಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಸೇವೆಯನ್ನು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಯಾವುದೇ ಮಾಹಿತಿಯನ್ನು ನೀಡದೇ ಏಕಾಏಕಿ...

ಸುಳ್ಯ ಅರಂಬೂರು ಮಹಾಲಕ್ಷ್ಮಿ ವಾಣಿಜ್ಯ ಸಂಕೀರ್ಣದಲ್ಲಿ ತವೀದ್ ಸುಳ್ಯ ರವರ ಮಾಲಕತ್ವದ ತವೀದ್ ಮಚ್ಚೀಸ್ ಮೀನು ಅಂಗಡಿ ಅ.26ರಂದು ಶುಭಾರಂಭಗೊಂಡಿತು. ಮೀನು ವ್ಯಾಪಾರ ಕೇಂದ್ರದಲ್ಲಿ ಸಮುದ್ರದ ವಿವಿಧ ತರಹದ ತಾಜಾ ಮೀನುಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ. ಮಂಗಳೂರಿನ ಮೀನು ಬಂದರಿನಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ನಮ್ಮಲ್ಲಿ ಇದೆಯೆಂದು ಮಾಲಕರು ತಿಳಿಸಿದ್ದಾರೆ. ನೂತನ ಸಂಸ್ಥೆಯನ್ನು...

ಎಲಿಮಲೆ ಪ್ರೌಢ ಶಾಲಾ ಬಳಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಉದ್ಘಾಟನೆ ಇಂದು ನೆರವೇರಿತು. ಊರಿನ ಹಿರಿಯರಾದ ಸುಬ್ರಮಣ್ಯ ಭಟ್ ಚಳ್ಳ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀಮತಿ ನೀಲಮ್ಮ ಮಣಿಯೂರು ರಿಬ್ಬನ್ ಕತ್ತರಿಸಿ ರಸ್ತೆ ಸಂಚಾರಕ್ಕೆ ಚಾಲನೆ ನೀಡಿದರು. ಶೈಲೇಶ್ ಅಂಬೆಕಲ್ಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ಮುಖ್ಯ ಗುರುಗಳಾದ ಚಂದ್ರಶೇಖರ್ ಪೇರಾಲ್, ಡಿ...

ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿ ಚರ್ಯೆ ಪರಿಹಾರಎಂಬ ಧ್ಯೇಯ ವಾಕ್ಯದೊಂದಿಗೆಪ್ರವಾದಿ ಮಹಮ್ಮದ್ ಪೈಗಂಬರ್ ರವರ ಜನ್ಮದಿನಾಚರಣೆ ಯ ಅಂಗವಾಗಿ ರಬಿವುಲ್ ಅವ್ವಲ್ ತಿಂಗಳಲ್ಲಿರಾಜ್ಯದ 30 ಸ್ಥಳಗಳಲ್ಲಿ ರಬೀಹ್ ಕ್ಯಾಂಪೇನ್ ಹಮ್ಮಿಕೊಳ್ಳಲಾಗಿದ್ದು ಇದರ ಅಂಗವಾಗಿ7ನೇ.ದಿನದ ಕಾರ್ಯಕ್ರಮವನ್ನು ಅಕ್ಟೋಬರ್ 25 ರಂದುಸುಳ್ಯ ಸುನ್ನೀ ಮಹಲ್ ನಲ್ಲಿ ಮೌಲಿದ್ ಪಾರಾಯಣ ಮತ್ತು ದುವಾ ಮಜ್ಲಿಸ್ ಕಾರ್ಯಕ್ರಮ ಗಳೊಂದಿಗೆ ನಡೆಯಿತು.ಮುಹಮ್ಮದ್ ಅಶ್ರಫ್ ಮುಸ್ಲಿಯಾರ್...

ಬೆಳ್ಳಾರೆಯ ಮುಖ್ಯ ರಸ್ತೆಯಲ್ಲಿರುವ ಶ್ರೀದೇವಿ ಹೈಟ್ಸ್ ನ 1ನೇ ಮಹಡಿಯಲ್ಲಿ ದೀಕ್ಷಿತ್ ಪೋನಡ್ಕರವರ ಮಾಲಕತ್ವದಲ್ಲಿ ಅಭಿನವ ಡಿಜಿಟಲ್ ಸೇವಾ ಎಂಟರ್ ಪ್ರೈಸಸ್ ಸಂಸ್ಥೆ ಅ.26ರಂದು ಶುಭಾರಂಭಗೊಂಡಿತು. ಬೆಳಗ್ಗೆ 7 ಗಂಟೆಗೆ ಗಣಹೋಮ ನೆರವೇರಿತು.ಬೆಳ್ಳಾರೆ ಆರಕ್ಷಕ ಠಾಣೆಯ ಎಸ್.ಐ. ಆಂಜನೇಯ ರೆಡ್ಡಿ ದೀಪ ಬೆಳಗಿಸಿ ಉದ್ಘಾಟನೆಗೈದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆಯ ಉಮೇಶ್ ಮಣಿಕ್ಕಾರ, ಉದ್ಯಮಿಗಳಾದ...

ಕೊರೊನಾ ಲಾಕ್ಡೌನ್ ನಲ್ಲಿ ಹಲವು ಐಡಿಯಾಗಳು ಹೊರಗೆ ಬಂದಿದ್ದು, ಹಲವು ಪ್ರತಿಭೆಗಳು ಹೊರ ಜಗತ್ತಿಗೆ ಪರಿಚಯವಾಗಿವೆ. ಇದೇ ಹಿನ್ನಲೆಯಲ್ಲಿ ಜನ್ಮ ತಾಳಿದ್ದೇ "ಐಡಿಯಾ ಬಾಸ್ಕೆಟ್' ಎಂಬ ಹವ್ಯಕ ಯೂಟ್ಯೂಬ್ ವಾಹಿನಿ. ಅಳಿಯುತ್ತಿರುವ ಹವ್ಯಕ ಭಾಷೆಯ ಘಮಲನ್ನು ಮತ್ತೆ ಹರಡಿಸಲು ತಯಾರಾದ ಈ ವಾಹಿನಿಯ ಕರ್ತೃ ಡಾ| ಆದಿತ್ಯ ಭಟ್ ಚಣಿಲ.ವೃತ್ತಿಯಲ್ಲಿ ವೈದ್ಯ ವಿದ್ಯಾರ್ಥಿಯಾಗಿರುವ ಆದಿತ್ಯ ಕೊರೊನಾ...

All posts loaded
No more posts